Category Archives: Blog

Your blog category

6+4+2: ಹೀಗಿರಲಿದೆ RCB ಪ್ಲೇಯಿಂಗ್ ಇಲೆವೆನ್ – Kannada News | IPL 2026: RCB Playing XI for PBKS Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಧರ್ಮಶಾಲಾದ ಹೆಚ್​ಪಿಸಿಎ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಅಂದರೆ ಕಳೆದ ಬಾರಿಯಂತೆ ಈ ಸಲ ಕೂಡ 6+2+4 ಸಂಯೋಜನೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಏಕೆಂದರೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಸ್ಟೇಡಿಯಂ ಬ್ಯಾಟರ್‌ಗಳಿಗೆ ಹೆಚ್ಚು ನೆರವಾಗುವ, ಹಾಗೂ ವೇಗದ ಬೌಲರ್‌ಗಳಿಗೆ ಉತ್ತಮ ಬೌನ್ಸ್ ಮತ್ತು ಸ್ವಿಂಗ್ ನೀಡುವ ಪಿಚ್ ಅನ್ನು ಹೊಂದಿದೆ.

  • ವೇಗ ಮತ್ತು ಬೌನ್ಸ್: ಕಪ್ಪು ಮಣ್ಣಿನಿಂದ ಮಾಡಲ್ಪಟ್ಟ ಈ ಪಿಚ್ ಉತ್ತಮ ಬೌನ್ಸ್ ಹೊಂದಿದೆ. ಇಲ್ಲಿ ವೇಗದ ಬೌಲರ್​ಗಳು ಉತ್ತಮ ದಾಳಿ ಸಂಘಟಿಸಬಲ್ಲರು. ಅದೇ ವೇಳೆ ಬ್ಯಾಟರ್​ ಉತ್ತಮ ಟೈಮಿಂಗ್ ಕಾಯ್ದುಕೊಂಡರೆ ಚೆಂಡನ್ನು ಸುಲಭವಾಗಿ ಬೌಂಡರಿಗೂ ಅಟ್ಟಬಹುದು.
  • ಎತ್ತರದ ಪ್ರದೇಶದ ಪ್ರಭಾವ: ಸಮುದ್ರ ಮಟ್ಟದಿಂದ 1,317 ಮೀಟರ್ ಎತ್ತರದಲ್ಲಿರುವ ಕಾರಣ, ಇಲ್ಲಿನ ತೆಳುವಾದ ಗಾಳಿಯು ಚೆಂಡು ವೇಗವಾಗಿ ಹಾರಲು ಸಹಾಯ ಮಾಡುತ್ತದೆ. ಹೀಗಾಗಿ ಇಲ್ಲಿ ಸಿಕ್ಸರ್‌ಗಳು ಹೆಚ್ಚಾಗಿ ಮೂಡಿಬರುತ್ತವೆ.
  • ಸ್ವಿಂಗ್ ಮತ್ತು ಸೀಮ್: ಮೈದಾನದ ಸುತ್ತಲೂ ಬೀಸುವ ತಂಪಾದ ಗಾಳಿಯಿಂದಾಗಿ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಭಾರಿ ಸ್ವಿಂಗ್ ಮತ್ತು ಸೀಮ್ ಮೂವ್‌ಮೆಂಟ್ ಸಿಗುತ್ತದೆ. ಆದರೆ, ಸ್ಪಿನ್ನರ್‌ಗಳಿಗೆ ಇಲ್ಲಿ ಹೆಚ್ಚಿನ ನೆರವು ಸಿಗುವುದಿಲ್ಲ.
  • ಹೈಬ್ರಿಡ್ ತಂತ್ರಜ್ಞಾನ: ಇದು ಭಾರತದಲ್ಲೇ ಮೊದಲ ಬಾರಿಗೆ ‘ಹೈಬ್ರಿಡ್ ಪಿಚ್’ (SISGrass) ಹೊಂದಿದ ಮೈದಾನವಾಗಿದೆ. ಇದು ಪಿಚ್‌ನ ಬೌನ್ಸ್ ಮತ್ತು ಗುಣಮಟ್ಟವನ್ನು ದೀರ್ಘಕಾಲದವರೆಗೆ ಒಂದೇ ರೀತಿ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಈ ಮೇಲೆ ತಿಳಿಸಿದಂತೆ ಈ ಪಿಚ್​ ಸ್ಪಿನ್ನರ್​ಗಿಂತ ವೇಗದ ಬೌಲರ್​ಗಳಿಗೆ ಸಹಕಾರಿ. ಹೀಗಾಗಿ ಆರ್​ಸಿಬಿ ತಂಡವು ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಅದರಂತೆ ಜೋಶ್ ಹೇಝಲ್​ವುಡ್, ಜೇಕಬ್ ಡಫಿ, ಭುವನೇಶ್ವರ್ ಕುಮಾರ್ ಹಾಗೂ ರಾಸಿಖ್ ಸಲಾಂ ದಾರ್ ಕಣಕ್ಕಿಳಿಯಬಹುದು.

ಇನ್ನು ಬ್ಯಾಟರ್​ಗಳಾಗಿ ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಟಿಮ್ ಡೇವಿಡ್ ಹಾಗೂ ಜಿತೇಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಆಲ್​ರೌಂಡರ್​ಗಳಾಗಿ ಕೃನಾಲ್ ಪಾಂಡ್ಯ ಹಾಗೂ ವೆಂಕಟೇಶ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: RCB 38 ವರ್ಷದ ಆಟಗಾರನನ್ನು ಆಯ್ಕೆ ಮಾಡಲು ಇದುವೇ ಕಾರಣ!

ಅಂದರೆ 6 ಬ್ಯಾಟರ್​ಗಳು + 2 ಆಲ್​ರೌಂಡರ್ + 4 ವೇಗದ ಬೌಲರ್​ಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ಅಧಿಕೃತವಾಗಿ ಪ್ಲೇಆಫ್​ಗೇರಲು ಆರ್​ಸಿಬಿ ತಂಡ ಪ್ಲ್ಯಾನ್ ಹಾಕಿಕೊಂಡಿದೆ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

    1. ವಿರಾಟ್ ಕೊಹ್ಕಿ
    2. ಜೇಕಬ್ ಬೆಥೆಲ್
    3. ದೇವದತ್ ಪಡಿಕ್ಕಲ್ (ಇಂಪ್ಯಾಕ್ಟ್ ಪ್ಲೇಯರ್)
    4. ರಜತ್ ಪಾಟಿದಾರ್ (ನಾಯಕ)
    5. ಟಿಮ್ ಡೇವಿಡ್
    6. ಕೃನಾಲ್ ಪಾಂಡ್ಯ
    7. ಜಿತೇಶ್ ಶರ್ಮಾ (ವಿಕೆಟ್ ಕೀಪರ್)
    8. ವೆಂಕಟೇಶ್ ಅಯ್ಯರ್
    9. ಜೋಶ್ ಹೇಝಲ್​ವುಡ್
    10. ಭುವನೇಶ್ವರ್ ಕುಮಾರ್
    11. ರಾಸಿಖ್ ದಾರ್
    12. ಜೇಕಬ್ ಡಫಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಭುವನೇಶ್ವರ್ ಕುಮಾರ್,  ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್, ಯಶ್ ದಯಾಲ್ (ಅಲಭ್ಯ).

Source link

Video: ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ! – Kannada News | Viral CCTV: Lift Slap Sparks Brutal Fight; Who’s At Fault? Social Media Debate

ಲಿಫ್ಟ್ ಬಳಿ ಆಕಸ್ಮಿಕವಾಗಿ ಯುವತಿಯೊಬ್ಬಳಿಗೆ ಯುವಕ ಡಿಕ್ಕಿ ಹೊಡೆದಿದ್ದು, ಆತ ತಕ್ಷಣವೇ ಕ್ಷಮೆ ಕೇಳಿದರೂ ಕೇಳದ ಯುವತಿ ಆತನ ಕೆನ್ನೆಗೆ ಬಾರಿಸಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿಯ ಈ ಹಠಾತ್ ವರ್ತನೆಯಿಂದ ತೀವ್ರ ಕೋಪಗೊಂಡ ಯುವಕ, ನಿಯಂತ್ರಣ ಕಳೆದುಕೊಂಡು ಆಕೆಗೆ ಮನಬಂದಂತೆ ಥಳಿಸಿದ್ದಾನೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಗಳು ಲಿಫ್ಟ್ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಯುವತಿಯ ಆತುರದ ನಿರ್ಧಾರ ಮತ್ತು ಯುವಕನ ಅತಿರೇಕದ ವರ್ತನೆ—ಇವೆರಡರಲ್ಲಿ ಯಾರದ್ದು ತಪ್ಪು ಎಂಬ ಬಗ್ಗೆ ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದು, ಅಂತರ್ಜಾಲದಲ್ಲಿ ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೈಕ್​ಗಳಲ್ಲಿ ಡೀಸೆಲ್ ಇಂಜಿನ್ ಏಕೆ ಇರುವುದಿಲ್ಲ? ಪೆಟ್ರೋಲ್ ಮಾತ್ರ ಬಳಸುವುದರ ರಹಸ್ಯವೇನು? – Kannada News | Why companies not producing Diesel Bike real reason behind Petrol Bikes

ನವದೆಹಲಿ, ಮೇ 16: ನೀವು ಯಾವತ್ತಾದರೂ ಬೈಕ್, ಸ್ಕೂಟಿಗಳಲ್ಲಿ ಏಕೆ ಡೀಸೆಲ್ ಇಂಜಿನ್ ಇರುವುದಿಲ್ಲ? ಏಕೆ ಪೆಟ್ರೋಲ್ ಇಂಜಿನ್ ಮಾತ್ರ ಇರುತ್ತದೆ ಎಂಬುದನ್ನು ಯೋಚಿಸಿದ್ದೀರಾ? ಬೈಕ್‌ಗಳಲ್ಲಿ ಡೀಸೆಲ್ ಬದಲಿಗೆ ಪೆಟ್ರೋಲ್ ಎಂಜಿನ್‌ಗಳನ್ನು ಬಳಸಿದರೆ ಏನಾಗುತ್ತದೆ? ಎಂಬುದರ ವಿವರ ಇಲ್ಲಿದೆ. ಸಾಮಾನ್ಯವಾಗಿ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ಒಂದೇ ರೀತಿ ಕಾರ್ಯನಿರ್ವಹಿಸುವುದಿಲ್ಲ, ಅವು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಪೆಟ್ರೋಲ್ (Petrol) ಎಂಜಿನ್‌ನಲ್ಲಿ ಇಂಧನವನ್ನು ಹೊತ್ತಿಸಲು ಸ್ಪಾರ್ಕ್ ಪ್ಲಗ್ ಅನ್ನು ಬಳಸಲಾಗುತ್ತದೆ. ಆದರೆ ಡೀಸೆಲ್ ಎಂಜಿನ್‌ನಲ್ಲಿ ಇದು ಕೆಲಸ ಮಾಡುವುದಿಲ್ಲ. ಡೀಸೆಲ್ ಎಂಜಿನ್‌ನಲ್ಲಿ, ಗಾಳಿಯು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತದೆ ಮತ್ತು ಅದರಿಂದ ಉತ್ಪತ್ತಿಯಾಗುವ ಶಾಖದೊಂದಿಗೆ ಇಂಧನವನ್ನು ಬರ್ನ್ ಮಾಡಲಾಗುತ್ತದೆ. ಈ ಹೆಚ್ಚಿನ ಒತ್ತಡವನ್ನು ತಡೆದುಕೊಳ್ಳಲು, ಎಂಜಿನ್ ಬ್ಲಾಕ್‌ನಲ್ಲಿ ಬಲವಾದ ಲೋಹವನ್ನು ಬಳಸಲಾಗುತ್ತದೆ. ಅದಕ್ಕಾಗಿಯೇ ಎಂಜಿನ್ ಗಾತ್ರವು ತುಂಬಾ ದೊಡ್ಡದಾಗಿರುತ್ತದೆ. ಆದ್ದರಿಂದ, ಬೈಕ್‌ಗಳಂತಹ ಸಣ್ಣ ವಾಹನಗಳಿಗೆ ಇಷ್ಟು ದೊಡ್ಡ ಮತ್ತು ಭಾರವಾದ ಎಂಜಿನ್ ಅನ್ನು ಹಾಕುವುದು ಕಷ್ಟ. ಅಲ್ಲದೆ, ಸವಾರರು ಈ ಎಂಜಿನ್‌ನ ತೂಕವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಬೈಕ್​ಗಳಲ್ಲಿ ಕೇವಲ ಪೆಟ್ರೋಲ್ ಇಂಜಿನ್ ಹಾಕಲು ಇದು ಮುಖ್ಯ ಕಾರಣ.

ಡೀಸೆಲ್ ಎಂಜಿನ್‌ನಲ್ಲಿ ಇಂಧನವು ಹೆಚ್ಚಿನ ಒತ್ತಡದಲ್ಲಿ ಉರಿಯುತ್ತದೆ. ಈ ಎಂಜಿನ್ ಒಳಗೆ ಅಪಾರ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇದು ಬಹಳಷ್ಟು ಶಬ್ದ ಮತ್ತು ಕಂಪನಗಳನ್ನು ಉಂಟುಮಾಡುತ್ತದೆ. ಇವುಗಳನ್ನು ನಿಭಾಯಿಸಲು, ಕಾರುಗಳು ಅಥವಾ ಲಾರಿಗಳು ದೊಡ್ಡ ಚಾಸಿಸ್ ಮತ್ತು ಕಂಪನ ಅಬ್ಸಾರ್ಬರ್‌ಗಳನ್ನು ಹೊಂದಿರುತ್ತವೆ. ಆದರೆ ಬೈಕ್‌ಗಳಲ್ಲಿ ಬಹಳ ಕಡಿಮೆ ಸ್ಥಳಾವಕಾಶವಿರುವುದರಿಂದ ಆ ಕಂಪನಗಳು ನೇರವಾಗಿ ಸವಾರನಿಗೆ ತಗುಲುವ ಸಾಧ್ಯತೆ ಇರುತ್ತದೆ. ಈ ಪ್ರಕ್ರಿಯೆಯಲ್ಲಿ, ಸವಾರರಿಗೆ ಬೈಕು ಚಲಾಯಿಸುವುದು ಕಷ್ಟಕರವಾಗುತ್ತದೆ.

ಇದನ್ನೂ ಓದಿ: ಗ್ಯಾಸ್ ಟ್ರಬಲ್ ಆಯ್ತು, ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!

ಬೈಕ್‌ಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ಅಳವಡಿಸದಿರಲು ಹಣದ ಹೆಚ್ಚಳವೂ ಒಂದು ಕಾರಣ. ಏಕೆಂದರೆ ಡೀಸೆಲ್ ಎಂಜಿನ್‌ಗೆ ಗಾಳಿಯನ್ನು ಪಂಪ್ ಮಾಡಲು ದುಬಾರಿ ಇಂಧನ ಇಂಜೆಕ್ಟರ್‌ಗಳು ಮತ್ತು ಟರ್ಬೋಚಾರ್ಜರ್‌ಗಳಂತಹ ಸುಧಾರಿತ ತಂತ್ರಜ್ಞಾನದ ಅಗತ್ಯವಿರುತ್ತದೆ. ಇವು ಲಭ್ಯವಿಲ್ಲದಿದ್ದರೆ, ಬೈಕ್ ತಯಾರಿಸುವ ವೆಚ್ಚ ತೀವ್ರವಾಗಿ ಹೆಚ್ಚಾಗುತ್ತದೆ. ಅಲ್ಲದೆ, ಡೀಸೆಲ್ ಎಂಜಿನ್‌ಗಳು ಕಡಿಮೆ ಆರ್‌ಪಿಎಂನಲ್ಲಿ ಕಾರ್ಯನಿರ್ವಹಿಸುತ್ತವೆ. ಇದರರ್ಥ ಅವು ಹೆಚ್ಚಿನ ತೂಕವನ್ನು ಹೊತ್ತುಕೊಳ್ಳದೆ ತ್ವರಿತ ವೇಗವನ್ನು ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ಬೈಕ್ ಸವಾರರಿಗೆ ತ್ವರಿತ ಪಿಕಪ್ ಮತ್ತು ವೇಗದ ಅಗತ್ಯ ಇರುವುದರಿಂದ ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರ ಬಳಸಲಾಗುತ್ತದೆ.

ಇದೆಲ್ಲದರ ನಡುವೆಯೂ ಬೈಕ್‌ಗಳಿಗೂ ಡೀಸೆಲ್ ಎಂಜಿನ್‌ಗಳನ್ನು ಅಳವಡಿಸುವ ಪ್ರಯತ್ನಗಳು ನಡೆದಿವೆ. ಪ್ರಸಿದ್ಧ ಬೈಕ್ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಈ ಪ್ರಯೋಗವನ್ನು ಮಾಡಿದೆ. ಈ ಹಿಂದೆ, ಈ ಕಂಪನಿಯು ರಾಯಲ್ ಎನ್‌ಫೀಲ್ಡ್ ಟಾರಸ್ ಎಂಬ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಡೀಸೆಲ್ ಎಂಜಿನ್ ಬೈಕನ್ನು ತಂದಿತ್ತು. ಆದರೆ ಅದರ ಹೆಚ್ಚಿನ ಕಂಪನಗಳು ಮತ್ತು ವಿಪರೀತ ಭಾರದಿಂದಾಗಿ ಜನರು ಅದನ್ನು ಖರೀದಿಸಲಿಲ್ಲ. ಈ ಕಾರಣದಿಂದಾಗಿ, ಕಂಪನಿಯು ಈ ಮಾದರಿಯ ಬೈಕ್ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

ಇದನ್ನೂ ಓದಿ: ಇಂಧನ ಉಳಿಸಲು ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್

ಸರಳವಾಗಿ ಹೇಳುವುದಾದರೆ, ಗ್ರಾಹಕರ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ಬೈಕ್‌ಗಳಲ್ಲಿ ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರ ಬಳಸಲಾಗುತ್ತದೆ. ಹಗುರವಾಗಿರುವ ಮತ್ತು ತ್ವರಿತ ಪಿಕಪ್ ಒದಗಿಸುವ ಪೆಟ್ರೋಲ್ ಎಂಜಿನ್‌ಗಳು ಭಾರವಾದ ಎಂಜಿನ್, ಅತಿಯಾದ ಕಂಪನಗಳು ಮತ್ತು ದುಬಾರಿ ನಿರ್ವಹಣೆಯನ್ನು ಹೊಂದಿರುವ ಡೀಸೆಲ್ ಎಂಜಿನ್​ಗಳಿಗಿಂತ ಬೈಕ್‌ಗಳಿಗೆ ಹೆಚ್ಚು ಸೂಕ್ತವಾದುದು. ಹೀಗಾಗಿಯೇ, ಬೈಕ್​ಗಳಲ್ಲಿ ಪೆಟ್ರೋಲ್ ಇಂಜಿನ್ ಮಾತ್ರ ಅಳವಡಿಕೆ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ

ನವದೆಹಲಿ, ಮೇ 16: ವಿವಾದಿತ ಭೋಜಶಾಲೆ (Bhojshala) ಪ್ರದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ ದೇವಸ್ಥಾನವೆಂದು ಘೋಷಿಸಿದೆ. ದೇವಸ್ಥಾನ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿ ದೇವಿಗೆ ಅರ್ಪಿತವಾದ ದೇವಾಲಯ ಎಂದು ಮಧ್ಯಪ್ರದೇಶ ಹೈಕೋರ್ಟ್ ನಿನ್ನೆ ಘೋಷಿಸಿತ್ತು. ಇಂದು ಧಾರ್‌ನ ಭೋಜಶಾಲೆ ಸಂಕೀರ್ಣದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಿ, ಆರತಿ ಸಲ್ಲಿಸಿದರು. ಇಂದು ಭೋಜ ಉತ್ಸವ ಸಮಿತಿಯ ಪದಾಧಿಕಾರಿಗಳೊಂದಿಗೆ ಭಕ್ತರು ಭೋಜಶಾಲೆ ಆವರಣದಲ್ಲಿ ಜಮಾಯಿಸಿದರು. ಅಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಸಿಇಟಿ ಪರೀಕ್ಷೆಯಲ್ಲೂ ‘ನೀಟ್’ ಮಾದರಿ ಹಗರಣ? ಒಂದೇ ಸೆಂಟರ್‌ನ 74 ವಿದ್ಯಾರ್ಥಿಗಳಿಗೆ 200ಕ್ಕೆ 200 ಅಂಕ! – Kannada News | KCET Agricultural Practical Exam Scam: Outrage Over 74 Students Scoring 200 on 200 At Single Center

ಕೆಸಿಇಟಿ ಪರೀಕ್ಷೆಯಲ್ಲೂ ‘ನೀಟ್’ ಮಾದರಿ ಹಗರಣ?

ಹುಬ್ಬಳ್ಳಿ, ಮೇ 16: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಕೃಷಿ ವಿಜ್ಞಾನ ಕೋರ್ಸ್‌ಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಹುಬ್ಬಳ್ಳಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಮಟ್ಟದ ‘ನೀಟ್’ (NEET) ಪರೀಕ್ಷೆಯ ಹಗರಣದ ಮಾದರಿಯಲ್ಲೇ ರಾಜ್ಯದ ಕೆಸಿಇಟಿ (KCET) ಪ್ರಾಯೋಗಿಕ ಪರೀಕ್ಷೆಯಲ್ಲೂ ಬೃಹತ್ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಲಾಗಿದ್ದು, ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ.

ಮುಖ್ಯಾಂಶಗಳು

  • ಕೆಸಿಇಟಿ ಕೃಷಿ ವಿಜ್ಞಾನ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ.
  • ಹಿರಿಯೂರು ಕೇಂದ್ರದ ಎಪ್ಪತ್ತನಾಲ್ಕು ವಿದ್ಯಾರ್ಥಿಗಳಿಗೆ ಇನ್ನೂರಕ್ಕೆ ಇನ್ನೂರು ಪೂರ್ಣ ಅಂಕಗಳು ಲಭ್ಯ.
  • ನೀಟ್ ಮಾದರಿ ಹಗರಣ ಶಂಕೆ; ಮರುಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳಿಂದ ತೀವ್ರ ಆಗ್ರಹ.

ಏನಿದು ಅಕ್ರಮ?

ಕೃಷಿ ವಿಜ್ಞಾನ ಕೋರ್ಸ್‌ಗಳ ಆಯ್ಕೆಗಾಗಿ ಮೇ 10ರಂದು ರಾಜ್ಯಾದ್ಯಂತ ಒಟ್ಟು 17 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಪಾಲಕರು ಮತ್ತು ವಿದ್ಯಾರ್ಥಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪರೀಕ್ಷಾ ಕೇಂದ್ರವೊಂದರಲ್ಲೇ ಬರೋಬ್ಬರಿ 74 ವಿದ್ಯಾರ್ಥಿಗಳು 200ಕ್ಕೆ 200 ಪೂರ್ಣ ಅಂಕಗಳನ್ನು ಪಡೆದುಕೊಂಡಿದ್ದಾರೆ. ಆದರೆ, ರಾಜ್ಯದ ಇನ್ನುಳಿದ 16 ಪರೀಕ್ಷಾ ಕೇಂದ್ರಗಳನ್ನು ಒಟ್ಟಾಗಿ ಸೇರಿಸಿದರೂ ಕೇವಲ 24 ವಿದ್ಯಾರ್ಥಿಗಳು ಮಾತ್ರ ಪೂರ್ಣ ಅಂಕ ಗಳಿಸಲು ಸಾಧ್ಯವಾಗಿದೆ. ಒಂದೇ ಕೇಂದ್ರದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ ಬಂದಿರುವುದು ಪರೀಕ್ಷಾ ಅಕ್ರಮ ನಡೆದಿರುವುದಕ್ಕೆ ಸ್ಪಷ್ಟ ಸಾಕ್ಷಿ ಎಂದು ಪೋಷಕರು ದೂರಿದ್ದಾರೆ.

ಪರೀಕ್ಷಾ ವಿಧಾನ ಮತ್ತು ಮೀಸಲಾತಿ

ರಾಜ್ಯದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಕೃಷಿ ವಿಜ್ಞಾನ ಕೋರ್ಸ್‌ಗಳಲ್ಲಿ ಶೇಕಡಾ 50 ರಷ್ಟು ಸೀಟುಗಳನ್ನು ಮೀಸಲಾಗಿಡಲಾಗಿದೆ. ಈ ವಿಶೇಷ ಸೀಟುಗಳ ಹಂಚಿಕೆಗಾಗಿಯೇ ಈ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. 17 ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ನಡೆಯುವ ಈ ಪರೀಕ್ಷೆಯಲ್ಲಿ ತೋಟಗಾರಿಕೆ, ಕೃಷಿ, ಹೈನುಗಾರಿಕೆಗೆ ಸಂಬಂಧಿಸಿದ ವಿವಿಧ ಬೀಜಗಳು, ಗಿಡಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಇಡಲಾಗಿರುತ್ತದೆ. ಅಭ್ಯರ್ಥಿಗಳು ಅವುಗಳನ್ನು ಭೌತಿಕವಾಗಿ ನೋಡಿ ಗುರುತಿಸಿ ಉತ್ತರ ಬರೆಯಬೇಕು. ಪ್ರತಿಯೊಂದು ಕೇಂದ್ರಕ್ಕೂ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತದೆ. ಇಂತಹ ಪರೀಕ್ಷೆಯಲ್ಲಿ ಹಿರಿಯೂರು ಕೇಂದ್ರದಲ್ಲಿ ಮಾತ್ರ ಇಷ್ಟೊಂದು ಗರಿಷ್ಠ ಅಂಕಗಳು ಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ 2 ಸಾವಿರ ಕೋಟಿ ರೂ. ನಕಲಿ ಐಟಿಸಿ ಹಗರಣದಲ್ಲಿ ಸಚಿವ ಜಮೀರ್‌ ಖಾನ್‌ ಸಂಸ್ಥೆಗೂ ಲಿಂಕ್: ‘ನ್ಯಾಷನಲ್ ಟ್ರಾವೆಲ್ಸ್’ಗೆ ನೋಟಿಸ್!

ಮರುಪರೀಕ್ಷೆಗೆ ಹೆಚ್ಚಿದ ಒತ್ತಾಯ

ಒಂದೆಡೆ ಅಂಕಗಳ ಹಗರಣ ನಡೆದಿದ್ದರೆ, ಮತ್ತೊಂದೆಡೆ ಪರೀಕ್ಷೆ ಬರೆಯಲು ಅರ್ಹರಿದ್ದ ಹಲವು ವಿದ್ಯಾರ್ಥಿಗಳಿಗೆ ಕೆಸಿಇಟಿ ಹಾಲ್ ಟಿಕೆಟ್ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪವೂ ಕೇಳಿಬಂದಿದೆ. ಕೆಸಿಇಟಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಇದರಿಂದಾಗಿ ಹಗಲಿರುಳು ಕಷ್ಟಪಟ್ಟು ಓದಿದ ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವಾಗಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ನಡೆದಿರುವ ಪರೀಕ್ಷೆಯನ್ನು ತಕ್ಷಣವೇ ರದ್ದುಗೊಳಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಕೂಡಲೇ ಮರುಪರೀಕ್ಷೆ (Re-exam) ನಡೆಸಬೇಕೆಂದು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿ ಸಮೂಹ ತೀವ್ರ ಒತ್ತಾಯಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಯಮ ಗೊತ್ತಿಲ್ಲದೇ 8 ಅಂಕ ಕಳೆದುಕೊಂಡ ಪಾಕಿಸ್ತಾನ್..! – Kannada News | Slow Over Rate Costs Pakistan 8 WTC Points

ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾದ (ಸ್ಲೋ ಓವರ್-ರೇಟ್) ಕಾರಣಕ್ಕಾಗಿ ಪಾಕಿಸ್ತಾನ್ ಕ್ರಿಕೆಟ್ ತಂಡಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭಾರಿ ದಂಡ ವಿಧಿಸಿದೆ. ಪಂದ್ಯದಲ್ಲಿ 8 ಓವರ್‌ಗಳನ್ನು ಕಡಿಮೆ ಬೌಲ್ ಮಾಡಿದ ಪರಿಣಾಮವಾಗಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಪಾಕಿಸ್ತಾನದ 8 ಅಂಕಗಳನ್ನು ಕಡಿತಗೊಳಿಸಲಾಗಿದೆ.

ಅಂದರೆ ಪಾಕಿಸ್ತಾನ್ ತಂಡವು ಬರೋಬ್ಬರಿ 8 ಅಂಕಗಳನ್ನು ಕಳೆದುಕೊಂಡಿದೆ. ಹೀಗೆ ಅಂಕ ಕಳೆದುಕೊಂಡಿರುವುದು ನಿಯಮ ಗೊತ್ತಿಲ್ಲದೇ ಎಂಬುದು ವಿಶೇಷ. ಏಕೆಂದರೆ 5 ದಿನಗಳ ಪಂದ್ಯದಲ್ಲಿ ಪಾಕ್ ತಂಡವು ಒಮ್ಮೆಯೂ ಸ್ಲೋ ಓವರ್ ತಪ್ಪನ್ನು ಸರಿಪಡಿಸಲು ಮುಂದಾಗಲಿಲ್ಲ. ಇದರಿಂದಾಗಿಯೇ 8 ಅಂಕಗಳನ್ನು ಕಳೆದುಕೊಳ್ಳಬೇಕಾಗಿ ಬಂದಿದೆ.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಟೆಸ್ಟ್ ಪಂದ್ಯಗಳಲ್ಲಿ ನಿಗದಿತ ಸಮಯದೊಳಗೆ ಓವರ್‌ಗಳನ್ನು ಮುಗಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಓವರ್​ ಮುಗಿಸದಿದ್ದರೆ…

  • ಪ್ರತಿ ಕೊರತೆಯ ಓವರ್‌ಗೆ ಆಟಗಾರರ ಪಂದ್ಯದ ಶುಲ್ಕದ  ಶೇಕಡಾ 5 ರಷ್ಟು ದಂಡ ವಿಧಿಸಲಾಗುತ್ತದೆ.
  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಯಮಗಳ ಪ್ರಕಾರ, ಪ್ರತಿ ಒಂದು ಕಡಿಮೆ ಓವರ್‌ಗೆ 1 WTC ಅಂಕವನ್ನು ಕಡಿತಗೊಳಿಸಲಾಗುತ್ತದೆ.

ಪಾಕಿಸ್ತಾನ್ ಎಡವಟ್ಟು:

ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್​ ಪಂದ್ಯವು ಐದು ದಿನಗಳ ಕಾಲ ನಡೆದಿತ್ತು. ಈ ವೇಳೆ ಎರಡು ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಪಾಕಿಸ್ತಾನ್  ತಂಡವು ನಿಗದಿತ ಸಮಯಕ್ಕಿಂತ 8 ಓವರ್‌ಗಳಷ್ಟು ಹಿಂದೆ ಇತ್ತು. ಅಂದರೆ ಮೊದಲ ಇನಿಂಗ್ಸ್​ನಲ್ಲಿ ಮಾಡಲಾದ ಸ್ಲೋ ಓವರ್​ ರೇಟ್ ತಪ್ಪನ್ನು ದ್ವಿತೀಯ ಇನಿಂಗ್ಸ್​ ವೇಳೆ ಸರಿಪಡಿಸಿಕೊಳ್ಳಬೇಕೆಂಬುದೇ ಪಾಕ್ ತಂಡಕ್ಕೆ ಗೊತ್ತಿರಲಿಲ್ಲ.

ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಯಮಗಳ ಪ್ರಕಾರ, ಪ್ರತಿ ಸ್ಲೋ ಓವರ್​ ರೇಟ್​ಗೆ, ಅಂದರೆ ಪ್ರತಿ ಓವರ್​ಗೆ ಒಂದೊಂದು ಅಂಕಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆ ಕೂಡ ಇರಲಿಲ್ಲ. ಪರಿಣಾಮ ಒಂದೇ ಪಂದ್ಯದ ಮೂಲಕ ಒಟ್ಟು 8 ಅಂಕಗಳನ್ನು ಕಳೆದುಕೊಂಡಿದ್ದಾರೆ.

ಒಂದು ವೇಳೆ ಮೊದಲ ಇನಿಂಗ್ಸ್​ನಲ್ಲಿನ ಸ್ಲೋ ಓವರ್ ರೇಟ್ ತಪ್ಪನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಸರಿಪಡಿಸಿದ್ದರೆ, ಅಂದರೆ ಬೇಗನೆ ಓವರ್ ಮಾಡಿ ಮುಗಿಸಿದ್ದರೆ ಅಂಕ ಕಡಿತದಿಂದ ಪಾರಾಗಬಹುದಿತ್ತು. ಇಲ್ಲ ಕಡಿಮೆ ಅಂಕಗಳ ಕಡಿತವನ್ನು ಕಡಿಮೆ ಮಾಡಿಕೊಳ್ಳಬಹುದಿತ್ತು.

ಆದರೆ ಬಾಂಗ್ಲಾದೇಶ್ ವಿರುದ್ಧ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿದ್ದ ಪಾಕಿಸ್ತಾನ್ ತಂಡದ ಆಟಗಾರರು ಬೌಲಿಂಗ್ ವೇಳೆ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಇದರಿಂದ ನಿಗದಿತ ಸಮಯದೊಳಗೆ ಓವರ್​ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಇದೀಗ ಅಂಕಗಳ ಕಡಿತದೊಂದಿಗೆ ದಂಡದ ಶಿಕ್ಷೆಗೂ ಗುರಿಯಾಗಿದ್ದಾರೆ.

  • ಅಂಕಗಳ ನಷ್ಟ: ನಿಯಮದ ಪ್ರಕಾರ ಪಾಕಿಸ್ತಾನದ ಖಾತೆಯಿಂದ ಒಟ್ಟು 8 ಪ್ರಮುಖ WTC ಅಂಕಗಳನ್ನು ಕಡಿತಗೊಳಿಸಲಾಗಿದೆ.
  • ದಂಡದ ಶಿಕ್ಷೆ: ತಂಡದ ಎಲ್ಲಾ ಆಟಗಾರರಿಗೆ ಅವರ ಪಂದ್ಯದ ಶುಲ್ಕದಲ್ಲಿ ಶೇಕಡಾ 40 ರಷ್ಟು (8 ಓವರ್ x 5%) ದಂಡ ವಿಧಿಸಲಾಗಿದೆ.
  • ತಪ್ಪೊಪ್ಪಿಗೆ: ಪಾಕಿಸ್ತಾನ್ ತಂಡದ ನಾಯಕ ಶಾನ್ ಮಸೂದ್ ಅವರು ಪಂದ್ಯದ ರೆಫರಿ ವೆಂಡಿ ಜಾನ್ಸನ್ ವಿಧಿಸಿದ ಈ ದಂಡ ಮತ್ತು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಯಾವುದೇ ಅಧಿಕೃತ ವಿಚಾರಣೆಯ ಅಗತ್ಯ ಬರಲಿಲ್ಲ.

ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ:

ಈ ಅಂಕಗಳ ಕಡಿತದೊಂದಿಗೆ ಪಾಕಿಸ್ತಾನ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಅಂಕಪಟ್ಟಿಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಕೇವಲ 4 ಅಂಕಗಳೊಂದಿಗೆ ವೆಸ್ಟ್ ಇಂಡೀಸ್ ತಂಡದ ಜೊತೆಗೆ ಅಂಕಪಟ್ಟಿಯ ಕೊನೆಯ ಸ್ಥಾನಗಳಿಗೆ ಕುಸಿದಿದ್ದು, ಮುಂಬರುವ WTC ಫೈನಲ್ ರೇಸ್‌ನಿಂದ ಹೊರಬೀಳುವ ಆತಂಕ ಎದುರಾಗಿದೆ.

ಇದನ್ನೂ ಓದಿ: IPL ಫೈನಲ್​ಗೆ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥನಿಗೆ ಆಹ್ವಾನ!

ಒಟ್ಟಾರೆಯಾಗಿ ಹೇಳುವುದಾದರೆ, ಆಧುನಿಕ ಕ್ರಿಕೆಟ್‌ನಲ್ಲಿ ಕೇವಲ ಬ್ಯಾಟಿಂಗ್-ಬೌಲಿಂಗ್ ಅಷ್ಟೇ ಅಲ್ಲ, ಸಮಯದ ನಿರ್ವಹಣೆಯೂ ಪಂದ್ಯದ ಫಲಿತಾಂಶವನ್ನು ಬದಲಾಯಿಸಬಲ್ಲದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ನಿಯಮಗಳ ಅರಿವಿಲ್ಲದೆ ಅಥವಾ ನಿರ್ಲಕ್ಷ್ಯದಿಂದಾಗಿ ಪಾಕಿಸ್ತಾನ 8 ಪ್ರಮುಖ ಅಂಕಗಳನ್ನು ಕಳೆದುಕೊಂಡಿರುವುದು ಅದರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕನಸಿಗೆ ಭಾರಿ ಪೆಟ್ಟು ನೀಡಿದೆ. ಮುಂದಿನ ಪಂದ್ಯಗಳಲ್ಲಾದರೂ ಪಾಕಿಸ್ತಾನ ತಂಡ ಈ ತಪ್ಪುಗಳಿಂದ ಪಾಠ ಕಲಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Source link

ಹಾಸನ: ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ? ನಿರ್ವಾಹಕ ಹೇಳಿದ್ದೇನು ನೋಡಿ – Kannada News | Hassan Bus Fire: Know How 36 Sleeper Bus Passengers Miraculously Escaped After Midnight Tyre Burst

ಹಾಸನ, ಮೇ 16: ಉಡುಪಿಯ ಮಣಿಪಾಲದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಎಸಿ ಬಸ್‌ಗೆ ಹಾಸನದ ಶಾಂತಿಗ್ರಾಮ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್‌ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಆದಾಗ್ಯೂ, ಚಾಲಕನ ಸಮಯಪ್ರಜ್ಞೆಯಿಂದ 36 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆ ಬಗ್ಗೆ ನಿರ್ವಾಹಕ ‘ಟಿವಿ9’ ಜತೆ ಮಾತನಾಡಿದ್ದು, ಆ ಕ್ಷಣದಲ್ಲಿ ಜನರನ್ನು ಹೇಗೆ ಬಚಾವ್ ಮಾಡಿದ್ದು ಎಂಬುದನ್ನು ವಿವರಿಸಿದ್ದಾರೆ.

ತಡರಾತ್ರಿ 2:30ರ ಸುಮಾರಿಗೆ ಬಸ್‌ನ ಹಿಂಬದಿ ಟೈರ್ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಚಾಲಕ ಬಸ್‌ ನಿಲ್ಲಿಸಿ, ನಿದ್ರೆಯಲ್ಲಿದ್ದ ಪ್ರಯಾಣಿಕರನ್ನು ಎಚ್ಚರಿಸಿ ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 18 ಮಹಿಳೆಯರು ಮತ್ತು ಮೂವರು ಮಕ್ಕಳೂ ಸೇರಿದಂತೆ ಒಟ್ಟು 36 ಪ್ರಯಾಣಿಕರು ಈ ಬಸ್‌ನಲ್ಲಿ ಇದ್ದರು. ಬೆಂಕಿ ಅನಾಹುತದಿಂದ ಪ್ರಯಾಣಿಕರ ಮೊಬೈಲ್ ಮತ್ತು ಲಗೇಜ್‌ಗಳು ಸುಟ್ಟುಹೋಗಿವೆ ಎಂದು ಅವರು ತಿಳಿಸಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಘಟನೆಗೆ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನದಲ್ಲಿ ‘ಧುರಂಧರ್ 2’ ಅಬ್ಬರ: ಮುಗಿಬಿದ್ದ ಜನ ಸರ್ವರ್ ಕ್ರ್ಯಾಶ್ – Kannada News | Dhurandhar 2 movie trending number 1 in Pakistan

ಧುರಂಧರ್ 2’ (Dhurandhar 2) ಸಿನಿಮಾ ಭಾರತ ಮಾತ್ರವಲ್ಲದೆ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದೆ. 1800 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಆದರೆ ಈ ಸಿನಿಮಾ ಸೌದಿ ರಾಷ್ಟ್ರಗಳು, ಪಾಕಿಸ್ತಾನ ಇನ್ನೂ ಕೆಲವೆಡೆ ನಿಷೇಧಕ್ಕೆ ಒಳಗಾಗಿತ್ತು. ಅದರಲ್ಲೂ ಸಿನಿಮಾ ಕತೆಯೇ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಇರುವಂಥಹದ್ದು. ಆದರೂ ಸಹ ಇದೀಗ ಪಾಕಿಸ್ತಾನದ ಜನ ಮುಗಿಬಿದ್ದು ‘ಧುರಂಧರ್ 2’ ಸಿನಿಮಾ ನೋಡಿದ್ದಾರೆ. ಈಗ ಮಾತ್ರವಲ್ಲ ಈ ಹಿಂದೆ ‘ಧುರಂಧರ್’ ಮೊದಲ ಭಾಗ ಬಿಡುಗಡೆ ಆದಾಗಲೂ ಸಹ ಪಾಕ್​​ನ ಜನ ಹುಚ್ಚೆದ್ದು ಆ ಸಿನಿಮಾ ವೀಕ್ಷಿಸಿದ್ದರು. ಈಗ ಮತ್ತೆ ಅದೇ ಕ್ರೇಜ್ ಪುನರಾವರ್ತನೆಗೊಂಡಿದೆ.

‘ಧುರಂಧರ್ 2’ ಸಿನಿಮಾ ಮೇ 14 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ಪಾಕಿಸ್ತಾನದಲ್ಲಿ ಸಹ ನೆಟ್​​ಫ್ಲಿಕ್ಸ್​ನಲ್ಲಿ ಈ ಸಿನಿಮಾ ವೀಕ್ಷಿಸಬಹುದಾಗಿದೆ. ಸಿನಿಮಾದ ಬಿಡುಗಡೆಗಾಗಿ ನಿರೀಕ್ಷೆಯಿಂದ ಕಾಯುತ್ತಿದ್ದ ಪಾಕಿಸ್ತಾನದ ಸಿನಿಮಾ ಪ್ರೇಮಿಗಳು ಮೇ 13 ರ ಮಧ್ಯರಾತ್ರಿಯವರೆಗೆ ಎದ್ದಿದ್ದು, ಸಿನಿಮಾ ಸ್ಟ್ರೀಮಿಂಗ್ ಆರಂಭಿಸುತ್ತಿದ್ದಂತೆ ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ‘ಧುರಂಧರ್ 2’ ಸಿನಿಮಾ ಪಾಕಿಸ್ತಾನದ ನೆಟ್​​ಫ್ಲಿಕ್ಸ್​​ನಲ್ಲಿ ನಂಬರ್ 1 ಟ್ರೆಂಡಿಂಗ್ ಆಗಿದೆ. ಅಷ್ಟೇ ಅಲ್ಲದೆ, ಮಾವಿಯಾ ಉಮರ್ ಫಾರೂಕಿ ಎಂಬ ಹೆಸರಿನ ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್ ಹೇಳಿರುವ ಪ್ರಕಾರ, ‘ಧುರಂಧರ್ 2’ ಕ್ರೇಜ್ ಎಷ್ಟಿತ್ತೆಂದರೆ, ಒಟ್ಟಿಗೆ ಜನ ‘ಧುರಂಧರ್ 2’ ನೋಡಿದ್ದರಿಂದ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಸರ್ವರ್‌ಗಳು ಸ್ವಲ್ಪ ಸಮಯದವರೆಗೆ ಕ್ರ್ಯಾಶ್ ಆಗಿದ್ದವಂತೆ!

ಕಂಟೆಂಟ್ ಕ್ರಿಯೇಟರ್ ಹೇಳಿರುವಂತೆ ‘ಪಾಕಿಸ್ತಾನದಲ್ಲಿ ‘ಧುರಂಧರ್ 2’ ಬಿಡುಗಡೆಯಾದ್ದರಿಂದ ಸರ್ವರ್ ಕ್ರ್ಯಾಶ್ ಆಗಿದೆ. ‘ಧುರಂಧರ್ 2’ ಯಾವಾಗ ಅಪ್​​ಲೋಡ್ ಆಗುತ್ತದೆ ಎಂದು ಜನ ಮೊಬೈಲ್ ಹಿಡಿದು ಕಾಯುತ್ತಿದ್ದರು. ರಾತ್ರಿ 12ಕ್ಕೆ ಸಿನಿಮಾ ಅಪ್​​ಲೋಡ್ ಆಗುತ್ತಿದ್ದಂತೆ ಒಟ್ಟಿಗೆ ಕ್ಲಿಕ್ ಮಾಡಿ ಸಿನಿಮಾ ನೋಡಲು ಆರಂಭಿಸಿದರು. ಇದರಿಂದ ಪಾಕ್​​ನಲ್ಲಿ ನೆಟ್​ಫ್ಲಿಕ್ಸ್ ಸರ್ವರ್ ಕೆಲ ಹೊತ್ತು ಕ್ರ್ಯಾಶ್ ಆಯ್ತು’ ಎಂದಿದ್ದಾರೆ.

ಇದನ್ನೂ ಓದಿ:ಒಟಿಟಿಯಲ್ಲಿ ಬಿಡುಗಡೆ ಆಯ್ತು ‘ಧುರಂಧರ್ 2’ ಆದರೆ ಭಾರತೀಯರಿಗಲ್ಲ

2025ರಲ್ಲಿ ‘ಧುರಂಧರ್’ ಸಿನಿಮಾ ಬಿಡುಗಡೆ ಆದಾಗ ಆ ಸಿನಿಮಾ ಸಹ ಪಾಕ್​​ನಲ್ಲಿ ಕ್ರೇಜ್ ಹುಟ್ಟಿಸಿತ್ತು. ಸಿನಿಮಾದ ಪೈರಸಿ ಸಿಡಿಗಳು ಬಿಸಿ ಬಿರಿಯಾನಿಯಂತೆ ಬಿಕರಿ ಆಗಿದ್ದವು. ನೆಟ್​​ಫ್ಲಿಕ್ಸ್​ನಲ್ಲಿ ಸಿನಿಮಾ ಬಿಡುಗಡೆ ಆದಾಗಲೂ ಸಹ ಜನ ಮುಗಿಬಿದ್ದು ಸಿನಿಮಾ ನೋಡಿದ್ದರು. ಪಾಕ್​​ಸ ಸಂಸತ್​​ನಲ್ಲಿ ಸಹ ಸಿನಿಮಾದ ಬಗ್ಗೆ ಚರ್ಚೆ ಆಗಿತ್ತು. ಈಗ ಮತ್ತೆ ‘ಧುರಂಧರ್ 2’ ಮೂಲಕ ಅದೇ ಕ್ರೇಜ್ ಪುನರಾವರ್ತನೆ ಆಗಿದೆ.

ಪ್ರಸ್ತುತ ‘ಧುರಂಧರ್ 2’ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಆದರೆ ವಿದೇಶದಲ್ಲಿ ಮಾತ್ರವೇ ಬಿಡುಗಡೆ ಆಗಿದ್ದು, ಭಾರತದಲ್ಲಿ ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಲಿದೆ. ಜೂನ್ 4 ರಂದು ಜಿಯೋ ಹಾಟ್​​ಸ್ಟಾರ್​​ನಲ್ಲಿ ‘ಧುರಂಧರ್ 2’ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಮನೆಯಲ್ಲಿ ಆಮೆ ಪ್ರತಿಮೆ ಇಟ್ಟರೆ ಅದೃಷ್ಟ ಖುಲಾಯಿಸುತ್ತಾ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Vastu turtle placement attract wealth health and good luck to your home

ಆಮೆ ಪ್ರತಿಮೆ ಇಟ್ಟರೆ ಅದೃಷ್ಟImage Credit source: Ai generated

ಹಿಂದೂ ಸಂಸ್ಕೃತಿ, ಪುರಾಣ ಮತ್ತು ವಾಸ್ತುಶಾಸ್ತ್ರದಲ್ಲಿ ಆಮೆಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಎರಡನೆಯದಾದ ಕೂರ್ಮಾವತಾರವೇ ಇದಕ್ಕೆ ಮುಖ್ಯ ಕಾರಣವಾಗಿದೆ. ದೇವತೆಗಳು ಮತ್ತು ರಾಕ್ಷಸರು ಸೇರಿ ಕ್ಷೀರಸಾಗರವನ್ನು ಮಂಥನ ಮಾಡುವಾಗ, ಮುಳುಗುತ್ತಿದ್ದ ಮಂದಾರ ಪರ್ವತವನ್ನು ವಿಷ್ಣುವು ಆಮೆಯ ರೂಪದಲ್ಲಿ ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ದೇವತೆಗಳಿಗೆ ರಕ್ಷಣೆ ನೀಡಿದನು. ಆ ಸಮುದ್ರ ಮಂಥನದಿಂದಲೇ ಲೋಕಕಲ್ಯಾಣದ ಅಮೃತ ಉದ್ಭವಿಸಿದ್ದರಿಂದ, ಆಮೆಯನ್ನು ಸ್ಥಿರತೆ, ದೀರ್ಘಾಯುಷ್ಯ, ಜ್ಞಾನ ಮತ್ತು ಸಂಪತ್ತಿನ ಸಂಕೇತವೆಂದು ಪೂಜಿಸಲಾಗುತ್ತದೆ.

ವಾಸ್ತು ಪ್ರಕಾರ ಆಮೆಯನ್ನು ಇಡಬೇಕಾದ ದಿಕ್ಕುಗಳು:

ಮನೆಯಲ್ಲಿ ಆಮೆಯ ಪ್ರತಿಮೆ, ಸ್ಫಟಿಕ ಅಥವಾ ಲೋಹದ ಆಕೃತಿಯನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಆರೋಗ್ಯ ಮತ್ತು ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ. ವಾಸ್ತುಶಾಸ್ತ್ರದ ಪ್ರಕಾರ, ಆಮೆಯನ್ನು ಮುಖ್ಯವಾಗಿ ಉತ್ತರ, ಈಶಾನ್ಯ ಅಥವಾ ನೈಋತ್ಯ ದಿಕ್ಕುಗಳಲ್ಲಿ ಇಡುವುದು ಅತ್ಯಂತ ಶ್ರೇಷ್ಠ ಎನ್ನಲಾಗುತ್ತದೆ. ಉತ್ತರ ದಿಕ್ಕು ಕುಬೇರನಿಗೆ ಸೇರಿದ್ದಾಗಿದ್ದು, ಇಲ್ಲಿ ಆಮೆ ಇಡುವುದರಿಂದ ಸಂಪತ್ತು, ವೃತ್ತಿಜೀವನ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರಗತಿ ಸಿಗುತ್ತದೆ. ದೇವ ಮೂಲೆಯಾದ ಈಶಾನ್ಯದಲ್ಲಿ ಆಮೆಯನ್ನು ಇರಿಸಿದರೆ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಹೆಚ್ಚಾಗುತ್ತದೆ. ಹಾಗೆಯೇ, ನೈಋತ್ಯ ದಿಕ್ಕಿನಲ್ಲಿ ಇಡುವುದರಿಂದ ಜೀವನದಲ್ಲಿ ಸ್ಥಿರತೆ ಬರುವುದರ ಜೊತೆಗೆ ಕುಟುಂಬದ ಸದಸ್ಯರ ನಡುವಿನ ಸಂಬಂಧಗಳು ಬಲಗೊಳ್ಳುತ್ತವೆ ಎಂದು ನಂಬಲಾಗಿದೆ.

ಆಮೆಯ ವಸ್ತುವಿಗೆ ತಕ್ಕಂತೆ ದಿಕ್ಕಿನ ಆಯ್ಕೆ:

ಆಮೆಯನ್ನು ಯಾವ ವಸ್ತುವಿನಿಂದ ತಯಾರಿಸಲಾಗಿದೆ ಎಂಬುದರ ಆಧಾರದ ಮೇಲೆ ಅದನ್ನು ಇಡುವ ದಿಕ್ಕು ಮತ್ತು ಸಿಗುವ ಫಲಗಳು ಬದಲಾಗುತ್ತವೆ. ಲೋಹದ ಆಮೆಯಾಗಿದ್ದರೆ ಅದನ್ನು ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರಿಸುವುದರಿಂದ ವೃತ್ತಿ ಬೆಳವಣಿಗೆಯಾಗುತ್ತದೆ. ಸ್ಫಟಿಕ ಅಥವಾ ಗಾಜಿನ ಆಮೆಯನ್ನು ಉತ್ತರ ಅಥವಾ ನೈಋತ್ಯ ದಿಕ್ಕಿನಲ್ಲಿ ಇಟ್ಟರೆ ವಾಸ್ತು ದೋಷಗಳು ನಿವಾರಣೆಯಾಗಿ ಕುಟುಂಬದಲ್ಲಿ ಸಾಮರಸ್ಯ ಹೆಚ್ಚುತ್ತದೆ. ಆರೋಗ್ಯ ವೃದ್ಧಿಗಾಗಿ ಮತ್ತು ಧನಾತ್ಮಕ ಶಕ್ತಿಗಾಗಿ ಮರದ ಆಮೆಯನ್ನು ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಕಲ್ಲಿನ ಆಮೆಗೆ ನೈಋತ್ಯ ದಿಕ್ಕು ಉತ್ತಮವಾಗಿದ್ದು ಇದು ಆರ್ಥಿಕ ಸ್ಥಿರತೆ ನೀಡುತ್ತದೆ. ಇನ್ನು ಸಂಪತ್ತು ಹೆಚ್ಚಾಗಲು ಆಗ್ನೇಯದಲ್ಲಿ ಸೆರಾಮಿಕ್ ಆಮೆಯನ್ನು ಹಾಗೂ ಅದೃಷ್ಟಕ್ಕಾಗಿ ಈಶಾನ್ಯದಲ್ಲಿ ಮಣ್ಣಿನ ಆಮೆಯನ್ನು ಇರಿಸಬೇಕು.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಆಮೆ ಇಡುವಾಗ ಪಾಲಿಸಬೇಕಾದ ಮುಖ್ಯ ನಿಯಮಗಳು:

ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಸ್ಥಾಪಿಸುವಾಗ ಕೆಲವು ಸರಳ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದಾಗಿ, ಆಮೆಯ ಮುಖವು ಯಾವಾಗಲೂ ಪೂರ್ವ ದಿಕ್ಕಿಗೆ (ಕೆಲವೊಮ್ಮೆ ಉತ್ತರಕ್ಕೂ ಇಡಬಹುದು) ಮುಖ ಮಾಡಿರುವಂತೆ ನೋಡಿಕೊಳ್ಳಿ. ಆಮೆಯನ್ನು ಎಂದಿಗೂ ಬರಿ ನೆಲದ ಮೇಲೆ ನೇರವಾಗಿ ಇಡಬಾರದು; ಬದಲಿಗೆ ಒಂದು ಗಾಜಿನ ಅಥವಾ ಲೋಹದ ತಟ್ಟೆಯಲ್ಲಿ ನೀರು ಮತ್ತು ವರ್ಣರಂಜಿತ ಕಲ್ಲುಗಳನ್ನು ಹಾಕಿ ಅದರ ಮಧ್ಯದಲ್ಲಿ ಆಮೆಯನ್ನು ಇರಿಸಬೇಕು, ಇದು ಸಕಾರಾತ್ಮಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ. ಮನೆಯ ಮುಖ್ಯ ಪ್ರವೇಶದ್ವಾರದ ಬಳಿ ಆಮೆಯನ್ನು ಇಡುವುದರಿಂದ ಕೆಟ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸಿದಂತೆ ತಡೆಯುತ್ತದೆ. ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ಆಮೆಯನ್ನು ಮನೆಗೆ ತರಲು ಶುಭ ದಿನಗಳಾಗಿದ್ದು, ಜ್ಯೋತಿಷ್ಯದ ಪ್ರಕಾರ ಆಮೆ ಉಂಗುರ ಧರಿಸುವುದರಿಂದಲೂ ಅದೃಷ್ಟ ಒಲಿಯುತ್ತದೆ ಎಂದು ನಂಬಲಾಗಿದೆ.

ಜೀವಂತ ಆಮೆಯನ್ನು ಸಾಕುವ ಮುನ್ನ ಗಮನಿಸಿ:

ಒಂದು ವೇಳೆ ನೀವು ಕೃತಕ ಪ್ರತಿಮೆಗಳ ಬದಲಿಗೆ ನಿಜವಾದ ಜೀವಂತ ಆಮೆಯನ್ನು ಮನೆಯಲ್ಲಿ ಸಾಕಲು ಬಯಸಿದರೆ, ಅದಕ್ಕೆ ಹೆಚ್ಚಿನ ಜವಾಬ್ದಾರಿ ಬೇಕಾಗುತ್ತದೆ. ಜೀವಂತ ಆಮೆಯನ್ನು ಮನೆಯ ಉತ್ತರ ಅಥವಾ ಈಶಾನ್ಯ ಮೂಲೆಯಲ್ಲಿ ಇರಿಸಿ, ಅದಕ್ಕೆ ಸೂಕ್ತವಾದ ಆವಾಸಸ್ಥಾನ ಮತ್ತು ಸರಿಯಾದ ಆರೈಕೆಯನ್ನು ಒದಗಿಸಬೇಕಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಒಂದು ವೇಳೆ ನಿಮಗೆ ಆಮೆಯ ಸರಿಯಾದ ಆರೈಕೆ ಮತ್ತು ಪೋಷಣೆ ಮಾಡಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಆಟಿಕೆ ಅಥವಾ ಲೋಹದ ಆಮೆಯನ್ನೇ ಇಟ್ಟುಕೊಳ್ಳುವುದು ಅತ್ಯಂತ ಸೂಕ್ತ ಮತ್ತು ಶ್ರೇಯಸ್ಕರ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL ಫೈನಲ್​ಗೆ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥನಿಗೆ ಆಹ್ವಾನ! – Kannada News | IPL 2026 Final: PCB Chief Mohsin Naqvi Invited!

ಭಾರತ ಮತ್ತು ಪಾಕಿಸ್ತಾನ್ ನಡುವೆ ಕ್ರೀಡಾ ಸಂಬಂಧಗಳಲ್ಲಿ ದೀರ್ಘಕಾಲದ ಉದ್ವಿಗ್ನತೆ ಮುಂದುವರಿದಿದ್ದರೂ, ಒಂದು ಅಚ್ಚರಿಯ ಮತ್ತು ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಭಾರತದಲ್ಲಿ ನಡೆಯಲಿರುವ ಐಪಿಎಲ್ 2026ರ ಫೈನಲ್ ಪಂದ್ಯ ಹಾಗೂ ಐಸಿಸಿ (ICC) ಬೋರ್ಡ್ ಸಭೆಯಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ಲಭಿಸಿದೆ ಎಂದು ವರದಿಯಾಗಿವೆ.

ಐಸಿಸಿ ಸಭೆ ಮತ್ತು ಐಪಿಎಲ್ ಫೈನಲ್:

ಮೇ 30 ಮತ್ತು 31 ರಂದು ಭಾರತದ ಅಹಮದಾಬಾದ್‌ನಲ್ಲಿ ಅಂತರಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ತ್ರೈಮಾಸಿಕ ಸಭೆ ನಡೆಯಲಿದೆ. ಇದೇ ವೇಳೆ ಮೇ 31 ರಂದು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯವೂ ಜರುಗಲಿದೆ. ಈ ಎರಡೂ ಐತಿಹಾಸಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಮೊಹ್ಸಿನ್ ನಖ್ವಿ ಅವರಿಗೆ ಆಮಂತ್ರಣ ನೀಡಲಾಗಿದೆ ಎಂದು ಪಾಕ್ ಚಾನೆಲ್ ಜಿಯೋ ನ್ಯೂಸ್ ವರದಿ ಮಾಡಿದೆ.

ಗ್ರೀನ್ ಸಿಗ್ನಲ್‌ಗಾಗಿ ಕಾಯುವಿಕೆ:

ಮೊಹ್ಸಿನ್ ನಖ್ವಿ ಅವರು ಕೇವಲ ಪಿಸಿಬಿ ಅಧ್ಯಕ್ಷರಷ್ಟೇ ಅಲ್ಲದೆ, ಪಾಕಿಸ್ತಾನದ ಹಾಲಿ ಗೃಹ ಸಚಿವರೂ ಆಗಿರುವುದರಿಂದ ಅವರ ಭಾರತ ಪ್ರವಾಸ ರಾಜತಾಂತ್ರಿಕವಾಗಿ ಅತ್ಯಂತ ಸೂಕ್ಷ್ಮವಾಗಿದೆ. ಮೂಲಗಳ ಪ್ರಕಾರ, ಅವರು ಭಾರತಕ್ಕೆ ಪ್ರಯಾಣ ಬೆಳೆಸಬೇಕೇ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೇ ತೆಗೆದುಕೊಳ್ಳಲಿದ್ದಾರೆ. ಸರ್ಕಾರದ ಅನುಮತಿ ಸಿಕ್ಕರೆ ಮಾತ್ರ ನಖ್ವಿ ಭಾರತಕ್ಕೆ ಆಗಮಿಸಲಿದ್ದಾರೆ.

ರಾಜತಾಂತ್ರಿಕವಾಗಿ ಈ ಆಹ್ವಾನ ಏಕೆ ಮುಖ್ಯ?

  • ದ್ವಿಪಕ್ಷೀಯ ಸರಣಿಗಳಿಲ್ಲ: ಕಳೆದ ಹಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ್ ನಡುವೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆಯುತ್ತಿಲ್ಲ. ಐಪಿಎಲ್‌ನಲ್ಲೂ ಪಾಕ್ ಆಟಗಾರರಿಗೆ ಅವಕಾಶವಿಲ್ಲ.
  •  ನಖ್ವಿ ಅವರ ಹೆಚ್ಚುವರಿ ಜವಾಬ್ದಾರಿ: ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಐಸಿಸಿ ಸಭೆಯಲ್ಲಿ ಅವರ ಉಪಸ್ಥಿತಿ ಮುಖ್ಯ ಎನ್ನಲಾಗಿದೆ.
  • ಕ್ರಿಕೆಟ್ ರಾಜತಾಂತ್ರಿಕತೆ: ಈ ಆಹ್ವಾನವು ಉಭಯ ದೇಶಗಳ ನಡುವಿನ ಕ್ರೀಡಾ ಸಂಬಂಧಗಳ ದೃಷ್ಟಿಯಿಂದ ಸಣ್ಣ ಆಶಾಕಿರಣವಾಗಬಹುದು ಎಂದು ವಿಶ್ಲೇಷಕರು ಭಾವಿಸಿದ್ದಾರೆ.

ನಖ್ವಿ ಮತ್ತು ವಿವಾದ!

ಮೊಹ್ಸಿನ್ ನಖ್ವಿ ಮತ್ತು ಏಷ್ಯಾಕಪ್ ವಿವಾದವು ಭಾರತ ಹಾಗೂ ಪಾಕಿಸ್ತಾನ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅತಿರೇಕದ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಸೆಪ್ಟೆಂಬರ್ 2025 ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ವೇಳೆ ಈ ಹೈ-ಡ್ರಾಮಾ ನಡೆದಿತ್ತು.

ಟೂರ್ನಿಯ ಆರಂಭದಲ್ಲೇ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡಲು (ಹಸ್ತಲಾಘವ) ನಿರಾಕರಿಸಿದ್ದರು. ಭಾರತದಲ್ಲಿ ನಡೆದ ಉಗ್ರಗಾಮಿ ದಾಳಿಯ ಸಂತ್ರಸ್ತರ ಪರವಾಗಿ ಮತ್ತು ಭಾರತ ಸರ್ಕಾರದ ನೀತಿಯನ್ನು ಬೆಂಬಲಿಸಿ ಭಾರತ ಈ ನಿರ್ಧಾರ ಕೈಗೊಂಡಿತ್ತು.

ಇದರಿಂದ ಕೆರಳಿದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರೂ ಆದ ಮೊಹ್ಸಿನ್ ನಖ್ವಿ, “ಭಾರತವು ಕ್ರೀಡೆಯಲ್ಲಿ ರಾಜಕೀಯ ತರುತ್ತಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಕಿಡಿಕಾರಿದ್ದರು ಮತ್ತು ಮ್ಯಾಚ್ ರೆಫರಿಯನ್ನು ಬದಲಾಯಿಸುವಂತೆ ಹಠ ಹಿಡಿದಿದ್ದರು.

ಇದಾದ ಬಳಿಕ ಸೆಪ್ಟೆಂಬರ್ 28, 2025 ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆದರೆ, ಬಹುಮಾನ ವಿತರಣಾ ಸಮಾರಂಭದ ವೇಳೆ ಭಾರತ ತಂಡವು ಎಸಿಸಿ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರಿಂದ ವಿಜೇತರ ಟ್ರೋಫಿ ಮತ್ತು ಪದಕಗಳನ್ನು ಸ್ವೀಕರಿಸಲು ಸಂಪೂರ್ಣವಾಗಿ ನಿರಾಕರಿಸಿದ್ದರು. ಅಲ್ಲದೆ ಭಾರತ ತಂಡವು ಬೇರೆ ಯಾವುದೇ ತಟಸ್ಥ ಅಧಿಕಾರಿಯಿಂದ ಟ್ರೋಫಿ ಪಡೆಯಲು ಸಿದ್ಧವಿರುವುದಾಗಿ ತಿಳಿಸಿತ್ತು.

ಆದರೆ, ಪ್ರತಿಷ್ಠೆಗೆ ಬಿದ್ದ ಮೊಹ್ಸಿನ್ ನಖ್ವಿ, ತಾವೇ ಟ್ರೋಫಿ ನೀಡುವುದಾಗಿ ಪಟ್ಟು ಹಿಡಿದರು. ಗಂಟೆಗಳ ಕಾಲ ಗೊಂದಲ ಮುಂದುವರಿದು, ಅಂತಿಮವಾಗಿ ಟ್ರೋಫಿ ವಿತರಿಸದೆಯೇ ಸಮಾರಂಭ ಮುಕ್ತಾಯವಾಯಿತು. ಅಷ್ಟಕ್ಕೇ ನಿಲ್ಲದ ನಖ್ವಿ, ವಿಜೇತ ತಂಡವಾದ ಭಾರತಕ್ಕೆ ಸಿಗಬೇಕಿದ್ದ ಏಷ್ಯಾಕಪ್ ಟ್ರೋಫಿಯನ್ನು ತಮ್ಮೊಂದಿಗೆ ಹೋಟೆಲ್ ರೂಮ್​ಗೆ ಕೊಂಡೊಯ್ದಿದ್ದರು. ಇದರಿಂದ ಭಾರತ ತಂಡ ಟ್ರೋಫಿ ಇಲ್ಲದೆಯೇ ಸಂಭ್ರಮಿಸಬೇಕಾಗಿ ಬಂತು.

ಇದನ್ನೂ ಓದಿ: RCB 38 ವರ್ಷದ ಆಟಗಾರನನ್ನು ಆಯ್ಕೆ ಮಾಡಲು ಇದುವೇ ಕಾರಣ!

ಬಳಿಕ ಬಿಸಿಸಿಐ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಧಿಕೃತ ಪತ್ರ ಬರೆದಾಗ, ನಖ್ವಿ ಹೊಸ ವಿವಾದ ಸೃಷ್ಟಿಸಿದರು. “ಭಾರತಕ್ಕೆ ಟ್ರೋಫಿ ಬೇಕಿದ್ದರೆ ಅವರ ನಾಯಕ ಸೂರ್ಯಕುಮಾರ್ ಯಾದವ್ ದುಬೈನಲ್ಲಿರುವ ನಮ್ಮ ಎಸಿಸಿ ಕಚೇರಿಗೆ ಖುದ್ದಾಗಿ ಬಂದು ನನ್ನ ಕೈಯಿಂದಲೇ ಪಡೆದುಕೊಂಡು ಹೋಗಲಿ, ನಾವು ಕೊರಿಯರ್ ಮಾಡುವುದಿಲ್ಲ” ಎಂದು ಷರತ್ತು ವಿಧಿಸಿದರು. ಇದನ್ನು ಬಿಸಿಸಿಐ ತೀವ್ರವಾಗಿ ಖಂಡಿಸಿತು. ಇದಾಗ್ಯೂ ಮೊಹ್ಸಿನ್ ನಖ್ವಿ ಟೀಮ್ ಇಂಡಿಯಾಗೆ ಏಷ್ಯಾಕಪ್ ಹಸ್ತಾಂತರಿಸಿರಲಿಲ್ಲ.

ಈ ಎಲ್ಲಾ ಕಹಿ ಘಟನೆಗಳ ನಡುವೆ ಇದೀಗ ಮೊಹ್ಸಿನ್ ನಖ್ವಿ ಅವರಿಗೆ ಐಪಿಎಲ್​ ಫೈನಲ್ ವೀಕ್ಷಿಸಲು ಆಹ್ವಾನ ನೀಡಲಾಗಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಇದು ಕೇವಲ ಐಸಿಸಿ ಸಭೆಯ ಶಿಷ್ಟಾಚಾರದ ಭಾಗವೋ ಅಥವಾ ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧದ ಉತ್ತಮಗೊಳಿಸಲಿರುವ ತಂತ್ರವೋ ಎಂಬುದನ್ನು ಕಾಲವೇ ಉತ್ತರಿಸಲಿದೆ.

Source link