ಪ್ರಧಾನಿ ಮೋದಿ ಇಂಧನ ಮಿತವ್ಯಯದ ಕರೆ: ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ – Kannada News | Union Minister V. Somanna Abandons Security Escort Following PM Modis Austerity Call
ತುಮಕೂರು, ಮೇ 15: ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಮಿತವ್ಯಯದ ಕರೆಯನ್ನು ಪಾಲಿಸಿ ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ದಿಶಾ ಸಭೆಗೆ ಆಗಮಿಸಿದ ಸೋಮಣ್ಣ ಅವರು, ಆರ್.ಪಿ.ಎಫ್. ಸೇರಿದಂತೆ ಯಾವುದೇ ಭದ್ರತಾ ವಾಹನಗಳನ್ನು ಬಳಸದೆ ಕೇವಲ ಸ್ಥಳೀಯ ಬೆಂಗಾವಲಿನೊಂದಿಗೆ ಬಂದಿದ್ದಾರೆ. ಈ ಕುರಿತು ಮಾತನಾಡಿದ ಸಚಿವರು, ಪ್ರಧಾನಮಂತ್ರಿಗಳ ಕರೆ ಕೇವಲ ಇಂಧನ ಉಳಿತಾಯಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ದೇಶಕ್ಕೆ ಉತ್ತಮ ಸಂದೇಶ ರವಾನಿಸುವುದು ಹಾಗೂ ದೇಶದ…