Category Archives: Blog

Your blog category

ಅನಾವಶ್ಯಕ ಕೊಂಕು ತೆಗೆಯುವವರ ಬಾಯಿ ಮುಚ್ಚಿಸಿದ ‘ಕೆಡಿ’ ಟೀಂ; ‘ಡೆವಿಲ್’ ಹಾದಿಯಲ್ಲಿ ಧ್ರುವ ಸಿನಿಮಾ – Kannada News | KD Teams Silence Negative Reviews: How Kannada Films Disable BookMyShow Ratings

ಯಾವುದೇ ಬಿಗ್ ಬಜೆಟ್ ಚಿತ್ರ ರಿಲೀಸ್ ಆಗುತ್ತದೆ ಎಂದರೆ ಅದಕ್ಕೆ ಕೊಂಕು ತೆಗೆಯುವವರು ಸಂಖ್ಯೆ ದೊಡ್ಡದಿರುತ್ತದೆ. ಈಗಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಇದನ್ನು ತಡೆಯುವುದು ಅಸಾಧ್ಯ. ನಾನಾ ರೀತಿಯ ಪ್ರಯತ್ನಗಳು ನಡೆದು ಕೊನೆಗೆ ಅದು ಸಾಧ್ಯವಾಗದೆ ಕೈ ಬಿಟ್ಟ ಅನೇಕ ಸಿನಿಮಾಗಳಿವೆ. ಆದರೆ, ‘ಡೆವಿಲ್’ ಸಿನಿಮಾ ಈ ಪ್ರಕ್ರಿಯೆಯಲ್ಲಿ ಯಶಸ್ಸು ಕಂಡಿತು. ಈಗ ‘ಕೆಡಿ’ ಸಿನಿಮಾ ಕೂಡ ಇದೇ ಮಾರ್ಗ ಅನುಸರಿಸಿದೆ.

‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಯಿತು. ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ವಿಮರ್ಶೆಗಳು ಸಿಗುತ್ತಿವೆ. ಈ ಮಧ್ಯೆ ಬುಕ್ ಮೈ ಶೋನಲ್ಲಿ ಸಿನಿಮಾಗೆ ರೇಟಿಂಗ್ ಕೊಡುವ ಆಯ್ಕೆಯನ್ನೇ ತೆಗೆಯಲಾಗಿದೆ. ಈ ಮೂಲಕ ‘ಕೆಡಿ’ ಬಗ್ಗೆ ಉದ್ದೇಶಪೂರ್ವಕವಾಗಿ ಕೆಟ್ಟ ವಿಮರ್ಶೆ ಕೊಡಲು ಪ್ಲ್ಯಾನ್ ಮಾಡಿದವರು ಸಂಚು ವಿಫಲವಾಗಿದೆ.

ದರ್ಶನ್ ಅವರು ಜೈಲಿನಲ್ಲಿರುವ ಸಂದರ್ಭದಲ್ಲಿ ‘ಡೆವಿಲ್’ ಚಿತ್ರ ರಿಲೀಸ್ ಆಯಿತು. ಈ ಸಂದರ್ಭದಲ್ಲಿ ಚಿತ್ರಕ್ಕೆ ಕೆಲವರು ಕೆಟ್ಟದನ್ನು ಮಾಡುವ ಭಯ ತಂಡವನ್ನು ಕಾಡಿತ್ತು. ಹೀಗಾಗಿ, ‘ಡೆವಿಲ್’ ಟೀಂ ಕನ್ನಡದ ‘ಐಪ್ಲೆಕ್ಸ್’ ಮೂಲಕ ಕೋರ್ಟ್​​ಗೆ ತೆರಳಿ ಬುಕ್ ಮೈ ಶೋ ರೇಟಿಂಗ್ ಕೊಡದಂತೆ ಆದೇಶ ತಂದಿತ್ತು. ‘ಡೆವಿಲ್’ ಸಿನಿಮಾ ಈ ಪ್ರಯೋಗದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಅನೇಕರು ಇದೇ ಮಾರ್ಗ ಅನುಸರಿಸಿದರು.

ಸುದೀಪ್ ಅಭಿನಯದ ‘ಮಾರ್ಕ್’, ಅರ್ಜುನ್ ಜನ್ಯ ನಿರ್ದೇಶನದ ‘45’, ಧನ್ವೀರ್ ನಟನೆಯ ‘ಹಯಗ್ರೀವ’ ಸಿನಿಮಾಗಳು ಇದೇ ತಂತ್ರ ಫಾಲೋ ಮಾಡಿದವು. ಈ ಪ್ರಯೋಗ ಅದೆಷ್ಟು ಯಶಸ್ಸು ಕಂಡಿತು ಎಂದರೆ ತೆಲುಗಿನ ‘ಮನ ಶಂಕರ ವರಪ್ರಸಾದ ಗಾರು’, ‘ಅನಗನಗ ಒಕರಾಜು’, ‘ನಾರಿ ನಾರಿ ನಡುಮ ಮುರಾರಿ’, ‘ಫಂಕಿ’, ‘ಕಪಲ್ ಫ್ರೆಂಡ್ಲಿ’ ಕೂಡ ಇದೇ ತಂತ್ರದ ಮೊರೆ ಹೋದವು. ಈಗ ‘ಕೆಡಿ’ ಸಿನಿಮಾಗೂ ಕೂಡ ಬುಕ್ ಮೈ ಶೋ ರೇಟಿಂಗ್ ಆಫ್ ಮಾಡಿಸಲಾಗಿದೆ. ಇದರ ಹಿಂದೆಯೂ ಐಪ್ಲೆಕ್ಸ್​ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ: ಕಿಚ್ಚನ ಅಭಿಮಾನಿಗಳು ಫುಲ್ ಖುಷ್

ಮುಂದಿನ ದಿನಗಳಲ್ಲಿ ಬಹುತೇಕ ಎಲ್ಲಾ ಸಿನಿಮಾಗಳನ್ನು ಇದನ್ನೇ ಫಾಲೋ ಮಾಡಬಹುದು. ಇದರಿಂದ ಫ್ಯಾನ್ಸ್ ವಾರ ತಪ್ಪುತ್ತದೆ. ಅನಾವಶ್ಯಕವಾಗಿ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಹರಡುವುದಕ್ಕೂ ತಡೆ ಬಿದ್ದಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ: ಕಣ್ಣೀರು ತರಿಸುತ್ತೆ ಈ ‘ಮೌನ ಹೋರಾಟಗಾರ’ನ ಕಥೆ! – Kannada News | Homeless in Bengaluru: Auto Driver’s Inspiring Fight with Dignity and Hope

ಬೆಂಗಳೂರು, ಮೇ.1: ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಸ್ವಂತ ಮನೆ ಹೊಂದುವ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಅವಕಾಶಗಳ ಈ ನಗರದಲ್ಲಿ ಬದುಕಿಗಾಗಿ ಪ್ರತಿದಿನ ನಿಶ್ಶಬ್ದವಾಗಿ ಹೋರಾಡುವ ಅದೆಷ್ಟೋ ಜೀವಗಳಿವೆ. ಇದು ಅಂತಹದ್ದೇ ಒಬ್ಬ ಆಟೋ ಚಾಲಕನ ಭಾವನಾತ್ಮಕ ಮತ್ತು ಹೃದಯಸ್ಪರ್ಶಿ ಕಥೆ. ಆಟೋ ಓಡಿಸುವುದು ಈತನ ಜೀವನೋಪಾಯದ ದಾರಿ. ಆದರೆ ಹೊರಗಿನ ಜಗತ್ತಿಗೆ ಕಾಣದ ಸತ್ಯವೆಂದರೆ, ಈತನ ಪಾಲಿಗೆ ಆಟೋ ಕೇವಲ ವಾಹನವಲ್ಲ, ಅದುವೇ ಈತನ ಸೂರು. ತಲೆಮರೆಸಿಕೊಳ್ಳಲು ಸ್ವಂತ ಮನೆಯಿಲ್ಲದ ಕಾರಣ, ಈ ಚಾಲಕ ರಾತ್ರಿಯೆಲ್ಲಾ ತನ್ನ ಆಟೋದಲ್ಲಿಯೇ ಮಲಗುತ್ತಾನೆ. ಒಂದು ದಿನ ಪ್ರಯಾಣಿಕರೊಬ್ಬರು ಆತನ ಪರಿಸ್ಥಿತಿಯನ್ನು ಗಮನಿಸಿದರು. ಚಾಲಕನ ಮೊಬೈಲ್ ಬ್ಯಾಟರಿ ಕಡಿಮೆಯಿದ್ದಾಗ, ಆ ಮಹಿಳೆ ತನ್ನ ಮನೆಯ ಬಳಿ ಬಂದು ಫೋನ್ ಚಾರ್ಜ್ ಮಾಡುವಂತೆ ಆತನಿಗೆ ತಿಳಿಸಿದರು. ಆದರೆ ಆತ, “ಬೇಡ ಮೇಡಂ, ಅದು ತುಂಬಾ ಸಮಯ ತೆಗೆದುಕೊಳ್ಳುತ್ತದೆ” ಎಂದು ನಯವಾಗಿಯೇ ನಿರಾಕರಿಸಿದ. ಆ ವೇಳೆ ಮಹಿಳೆಯು, “ಸಂಪೂರ್ಣ ಪರದೆಗಳಿಲ್ಲದ ಈ ಆಟೋದಲ್ಲಿ ಮಳೆಯ ನಡುವೆ ಹೇಗೆ ಮಲಗುತ್ತೀರಿ?” ಎಂದು ಕೇಳಿದರು. ಅದಕ್ಕೆ ಆ ಚಾಲಕ ಸಮಾಧಾನದಿಂದಲೇ ಉತ್ತರಿಸಿದ, “ರಕ್ಷಣೆಗಾಗಿ ಮೆಟ್ರೋ ನಿಲ್ದಾಣದ ಬಳಿ ಆಟೋ ನಿಲ್ಲಿಸುತ್ತೇನೆ ಮೇಡಂ, ಫೋನ್ ಚಾರ್ಜ್ ಮಾಡಲು ಹತ್ತಿರದ ಅಂಗಡಿಯವರಿಗೆ ಕೊಡುತ್ತೇನೆ” ಎಂದು ಹೇಳಿದ, ನಗರದ ಒಂದು ಕಡೆ ಜನರು ಐಷಾರಾಮಿ ಬದುಕು ನಡೆಸುತ್ತಿದ್ದರೆ, ಇನ್ನೊಂದೆಡೆ ಇಂತಹ ಮೌನ ಹೋರಾಟಗಳು ನಡೆಯುತ್ತಿವೆ. ಕಷ್ಟಗಳಿದ್ದರೂ ಈ ಚಾಲಕ ತನ್ನ ಘನತೆ, ಕಠಿಣ ಪರಿಶ್ರಮ ಮತ್ತು ಭರವಸೆಯೊಂದಿಗೆ ಬದುಕುತ್ತಿದ್ದಾನೆ ಎಂದು @Karnataka Portfolio ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಮಕ್ಕಳನ್ನು ಇಂಜಿನಿಯರಿಂಗ್ ಕೋರ್ಸ್ಗೆ ಸೇರಿಸುತ್ತೀರಾ? ಈ ವಿಚಾರ ತಿಳಿದಿರಲಿ – Kannada News | Only 17 percent of Karnataka Engineering Graduates Employable: Report Reveals Staggering Job Crisis

ಮಕ್ಕಳನ್ನು ಇಂಜಿನಿಯರಿಂಗ್ ಕೋರ್ಸ್ಗೆ ಸೇರಿಸುವ ಪೋಷಕರಿಗೆ ಕಹಿ ಸುದ್ದಿ! Image Credit source: google Gemini

ಬೆಂಗಳೂರು, ಮೇ 01: ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದು ಸಿಇಟಿಯಲ್ಲಿ ರ್ಯಾಂಕ್ ಬಂದ ಕೂಡಲೇ ಮಕ್ಕಳನ್ನು ಇಂಜಿನಿಯರಿಂಗ್ ಕೋರ್ಸಿಗೆ (Engineering) ಸೇರಿಸಿ ಬಿಟ್ಟರೆ ಮುಗಿಯಿತು. ನಾಲ್ಕು ವರ್ಷ ಕಳೆಯುತ್ತಿದ್ದಂತೆ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ಸಿಕ್ಕಿಯೇ ಬಿಡುತ್ತದೆ ಎಂಬ ಭಾವನೆ ಬಹುತೇಕ ಪೋಷಕರಲ್ಲಿದೆ. ಆದರೆ, ಇದಕ್ಕೆ ತದ್ವಿರುದ್ಧವಾದ ಮತ್ತು ಆಘಾತಕಾರಿಯಾದ ವಿಚಾರ ಒಂದು ಈಗ ಬಹಿರಂಗವಾಗಿದೆ. ಕರ್ನಾಟಕದ ಇಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ. 17ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಎಂದು ಕರ್ನಾಟಕ ಇಂಜಿನಿಯರಿಂಗ್ ಶಿಕ್ಷಣ ಪರಿವರ್ತನೆ ಸುಧಾರಣಾ ಸಮಿತಿ ಸಲ್ಲಿಸಿರುವ ವರದಿ ಬಹಿರಂಗಪಡಿಸಿದೆ. ಅಂದರೆ, ರಾಜ್ಯದ ಬರೋಬ್ಬರಿ ಶೇ. 83ರಷ್ಟು ಇಂಜಿನಿಯರಿಂಗ್ ಪದವೀಧರರು ಉದ್ಯೋಗ ಮಾರುಕಟ್ಟೆಗೆ ಬೇಕಾದ ಕೌಶಲ್ಯ ಹೊಂದಿಲ್ಲದೆ ನಿರುದ್ಯೋಗಿಗಳಾಗುತ್ತಿದ್ದಾರೆ.

ಉದ್ಯೋಗ ಬಿಕ್ಕಟ್ಟಿಗೆ ಕಾರಣವೇನು?

ಪ್ರೊ. ಸಾದಗೋಪನ್ ನೇತೃತ್ವದ ತಜ್ಞರ ಸಮಿತಿಯು ಉದ್ಯೋಗದ ಈ ಗಂಭೀರ ಕುಸಿತಕ್ಕೆ ಹಲವು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದೆ. ಕಂಪ್ಯೂಟರ್ ಸೈನ್ಸ್ ಪದವೀಧರರಿಗೆ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಹೆಚ್ಚಿನ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ. ಮೆಕ್ಯಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್‌ನಂತಹ ಮೂಲ ಇಂಜಿನಿಯರಿಂಗ್ ವಿಭಾಗಗಳಿಗೆ ದಾಖಲಾತಿ ತೀವ್ರವಾಗಿ ಕುಸಿದಿದೆ. ಒಂದು ಕಾಲದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈಗ ಶಿಕ್ಷಣದ ಗುಣಮಟ್ಟ ಕುಸಿದಿದೆ. ವಿದ್ಯಾರ್ಥಿಗಳಲ್ಲಿ ಇಂದಿನ ಮಾರುಕಟ್ಟೆಗೆ ಬೇಕಾದ ಸ್ಪರ್ಧಾತ್ಮಕ ಕೌಶಲ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಸೆಮಿಕಂಡಕ್ಟರ್ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರಿ ಬೇಡಿಕೆ

ಆಶ್ಚರ್ಯಕರ ವಿಷಯವೆಂದರೆ, ಕಂಪ್ಯೂಟರ್ ಸೈನ್ಸ್ ಹೊರತುಪಡಿಸಿ ಇತರ ಕ್ಷೇತ್ರಗಳಲ್ಲಿ ತಜ್ಞರ ಭಾರಿ ಕೊರತೆ ಇದೆ. 2027ರ ವೇಳೆಗೆ ಭಾರತದಲ್ಲಿ ಸುಮಾರು 2.50 ರಿಂದ 3 ಲಕ್ಷ ವೃತ್ತಿಪರರ ಅಗತ್ಯವಿದ್ದು, ಕರ್ನಾಟಕದಲ್ಲಿಯೇ 10,000-15,000 ಜನರ ಕೊರತೆ ಎದುರಾಗಲಿದೆ. ಏರೋಸ್ಪೇಸ್ ಮತ್ತು ಡಿಫೆನ್ಸ್ (4,500-8,500), ಎಲೆಕ್ಟ್ರಿಕ್ ವೆಹಿಕಲ್ಸ್ (6,000-11,000) ಮತ್ತು ಕ್ಲೀನ್ ಎನರ್ಜಿ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ ಇದ್ದರೂ, ಇದನ್ನು ಸಿಎಸ್ ಅಥವಾ ಐಟಿ ಪದವೀಧರರಿಂದ ತುಂಬಲು ಸಾಧ್ಯವಿಲ್ಲ.

‘ಕೀರಾ’ (KEERA) ರಚನೆ

ಈ ಶಿಕ್ಷಣ ಬಿಕ್ಕಟ್ಟನ್ನು ಸರಿಪಡಿಸಲು ರಾಜ್ಯ ಸರ್ಕಾರವು ಕರ್ನಾಟಕ ಇಂಜಿನಿಯರಿಂಗ್ ಶಿಕ್ಷಣ ಸುಧಾರಣಾ ಪ್ರಾಧಿಕಾರ (KEERA) ರಚಿಸಲು ನಿರ್ಧರಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಕುರಿತು ಶೀಘ್ರವೇ ಪ್ರತ್ಯೇಕ ಕಾಯ್ದೆ ತರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ Engineering Career After PUC: ಪಿಯುಸಿ ನಂತರ ವೃತ್ತಿಜೀವನಕ್ಕೆ ಬಿ.ಟೆಕ್ ಅಥವಾ ಪಾಲಿಟೆಕ್ನಿಕ್, ಯಾವುದು ಉತ್ತಮ?

ಪ್ರಮುಖ ಶಿಫಾರಸುಗಳು

ಖಾಸಗಿ ಕಾಲೇಜುಗಳಲ್ಲಿ ಯಾವುದೇ ಹೊಸ ಕೋರ್ಸ್‌ಗೆ ಆರಂಭದಲ್ಲಿ 60 ಸೀಟುಗಳಿಗೆ ಮಾತ್ರ ಮಿತಿ ಹೇರಲಾಗುವುದು. ಪ್ರತಿ ವರ್ಷ ಸೀಟುಗಳ ಹೆಚ್ಚಳ ಮಾಡಲು ಕಾಲೇಜುಗಳು ಎನ್‌ಬಿಎ (NBA) ಮಾನ್ಯತೆ ಪಡೆಯುವುದು ಕಡ್ಡಾಯ. ಯಾವುದೇ ವಿಭಾಗದಲ್ಲಿ ಗರಿಷ್ಠ ಸೀಟುಗಳ ಸಂಖ್ಯೆ 300 ಮೀರಬಾರದು. ಒಂದು ಸಂಸ್ಥೆಯಲ್ಲಿ ಐದಕ್ಕಿಂತ ಹೆಚ್ಚು ಕಂಪ್ಯೂಟರ್ ಸಂಬಂಧಿತ ವಿಭಾಗಗಳನ್ನು ಆರಂಭಿಸುವಂತಿಲ್ಲ ಮತ್ತು ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 900 ಮೀರಬಾರದು.’ಕೋರ್ + ಎಐ’ (CORE + AI) ಮಾದರಿಯ ಪಠ್ಯಕ್ರಮ ಜಾರಿಗೆ ತರಲು ಸಮಿತಿ ಸೂಚಿಸಿದೆ.

ಹೀಗಾಗಿ, ಪೋಷಕರು ತಮ್ಮ ಮಕ್ಕಳನ್ನು ಕೇವಲ ‘ಕಂಪ್ಯೂಟರ್ ಸೈನ್ಸ್’ ಎಂಬ ವ್ಯಾಮೋಹಕ್ಕೆ ಬಿದ್ದು ಕಾಲೇಜುಗಳಿಗೆ ಸೇರಿಸುವ ಮುನ್ನ, ಮಾರುಕಟ್ಟೆಯ ವಾಸ್ತವತೆ ಮತ್ತು ಕಾಲೇಜಿನ ಗುಣಮಟ್ಟವನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಸನ: ಬಿಯರ್ ಚಿಮ್ಮಿದ ವಿಚಾರಕ್ಕೆ ಗಲಾಟೆ, ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್ – Kannada News | Hassan Shocker: Drunk Youths Brandish Loaded Gun Over Beer Spill Dispute; 4 Arrested After Viral Video

ಹಾಸನ, ಮೇ 1: ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರು ಹುಚ್ಚಾಟ ನಡೆಸಿದ ಘಟನೆ ಅರಸೀಕೆರೆ ತಾಲ್ಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ನಡೆದಿದೆ. ಬಿಯರ್ ಬಾಟಲ್ ಓಪನ್ ಮಾಡಿದಾಗ ಬಿಯರ್ ಮೈಮೇಲೆ ಚಿಮ್ಮಿದ ಎಂಬ ಸಣ್ಣ ವಿಷಯಕ್ಕೆ ಗಲಾಟೆ ಆರಂಭವಾಗಿ, ಅಂತಿಮವಾಗಿ ಬಂದೂಕು ಪ್ರದರ್ಶಿಸುವ ಹಂತಕ್ಕೆ ತಲುಪಿದೆ. ಸಿಂಗೇನಹಳ್ಳಿ ಮತ್ತು ಡಿ.ಎಂ.ಕುರ್ಕೆ ಗ್ರಾಮದ ಯುವಕರ ನಡುವೆ ಈ ಗಲಾಟೆ ನಡೆದಿದೆ. ಮಾತಿನ ಚಕಮಕಿ ಜೋರಾದಾಗ ಸಿಂಗೇನಹಳ್ಳಿ ಗ್ರಾಮದ ರಮೇಶ್ ಎಂಬಾತ ಏರ್ ಗನ್ ತಂದು ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಬಂದೂಕು ಕಿತ್ತುಕೊಳ್ಳಲು ನೂಕಾಟ-ತಳ್ಳಾಟ ನಡೆದಿದ್ದು, ಲೋಡ್ ಆಗಿದ್ದ ಬಂದೂಕಿನಿಂದ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಈ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಘಟನೆಗೆ ಸಂಬಂಧಿಸಿದಂತೆ ರಮೇಶ್, ಮಂಜುನಾಥ್, ಮಧುಸೂದನ್ ಮತ್ತು ದರ್ಶನ್ ಎಂಬುವವರ ವಿರುದ್ಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೂಜಾ ಹೆಗ್ಡೆ ಇಷ್ಟದ ಕನ್ನಡ ನಟ ಯಾರು: ನಟಿಯೇ ಕೊಟ್ಟಿದ್ದಾರೆ ಉತ್ತರ – Kannada News | Pooja Hegde talks about Kantara and Raj B Shetty

ಪೂಜಾ ಹೆಗ್ಡೆ (Pooja Hegde) ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಬಾಲಿವುಡ್​, ತೆಲುಗು, ತಮಿಳು ಸಿನಿಮಾಗಳಲ್ಲಿ ಬಲು ಬೇಡಿಕೆಯ ನಟಿಯಾಗಿರುವ ಪೂಜಾ ಹೆಗ್ಡೆ ಕನ್ನಡದ ಸಿನಿಮಾನಲ್ಲಿ ನಟಿಸಿಲ್ಲ ಆದರೆ ಅವರ ಮೂಲ ಕರ್ನಾಟಕವೇ. ಮಂಗಳೂರಿನ ಮೂಲದ ಈ ಚೆಲುವೆ ಬೆಳೆದಿದ್ದೆಲ್ಲ ಮುಂಬೈನಲ್ಲಿ ಆದರೆ ತಮ್ಮ ಮೂಲವನ್ನು ಮರೆತಿಲ್ಲ. ಇತ್ತೀಚೆಗಷ್ಟೆ ಮಂಗಳೂರಿಗೆ ಬಂದಿದ್ದ ಪೂಜಾ ಹೆಗ್ಡೆ, ದೈವ ಕಾರ್ಯದಲ್ಲಿ ಭಾಗಿ ಆಗಿದ್ದರು. ಜೊತೆಗೆ ತುಳು ನಾಡಿನ ಹಲವು ದೇವಾಲಯಗಳಿಗೆ ಸಹ ಭೇಟಿ ಕೊಟ್ಟು ದರ್ಶನ ಪಡೆದುಕೊಂಡರು.

ತುಳುವನ್ನು ಸುಲಲಿತವಾಗಿ ಮಾತನಾಡಬಲ್ಲ ಪೂಜಾ ಹೆಗ್ಡೆ, ತಮ್ಮ ಈ ಭೇಟಿಯ ಸಂದರ್ಭ ಸ್ಥಳೀಯ ಯೂಟ್ಯೂಬ್ ಚಾನೆಲ್​​ ಒಂದಕ್ಕೆ ಚುಟುಕು ಸಂದರ್ಶನ ನೀಡಿರುವ ನಟಿ ಪೂಜಾ ಹೆಗ್ಡೆ, ಕರ್ನಾಟಕದ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ, ತಮ್ಮ ಹಾಗೂ ಕರ್ನಾಟಕದ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗದಲ್ಲಿ ಮೆಚ್ಚಿನ ಯಾರು ಎಂಬುದನ್ನು ಸಹ ನಟಿ ಪೂಜಾ ಹೆಗ್ಡೆ ಹೇಳಿಕೊಂಡಿದ್ದಾರೆ.

ಮೊದಲಿಗೆ ‘ಕಾಂತಾರ’ ಸಿನಿಮಾದ ಬಗ್ಗೆ ಮಾತನಾಡಿರುವ ನಟಿ ಪೂಜಾ ಹೆಗ್ಡೆ, ‘ಬಾಲ್ಯದಿಂದಲೂ ಭೂತ, ದೈವಗಳನ್ನು, ಆಚರಣೆಗಳನ್ನು ನೋಡುತ್ತಾ ಬೆಳೆದ ನನಗೆ ಅವುಗಳ ಮಹತ್ವ ಎಲ್ಲವೂ ತಿಳಿದಿತ್ತು. ಆದರೆ ‘ಕಾಂತಾರ’ ಸಿನಿಮಾ ಅದನ್ನು ಇಡೀ ದೇಶಕ್ಕೆ ಪರಿಚಯಿಸಿತು. ಉತ್ತರ ಭಾರತದ ಜನ ಸಹ ಆ ಕತೆಯೊಂದಿಗೆ ಕನೆಕ್ಟ್ ಆದರು. ಅಲ್ಲಿ ಹಲವಾರು ಮಂದಿ ನನ್ನನ್ನು ದೈವದ ಬಗ್ಗೆ ಭೂತದ ಬಗ್ಗೆ ಕೇಳಲು ಆರಂಭಿಸಿದ್ದರು’ ಎಂದಿದ್ದಾರೆ ಪೂಜಾ. ಕನ್ನಡ ಚಿತ್ರರಂಗದಲ್ಲಿ ತಮ್ಮ ನೆಚ್ಚಿನ ನಟ ರಾಜ್ ಬಿ ಶೆಟ್ಟಿ ಎಂದ ಪೂಜಾ, ‘ನನಗೆ ರಾಜ್ ಬಿ ಶೆಟ್ಟಿ ನಟನೆ ಇಷ್ಟವಾಗುತ್ತದೆ. ಅವರು ಬಹಳ ಚೆನ್ನಾಗಿ ನಟಿಸುತ್ತಾರೆ. ‘ಸು ಫ್ರಂ ಸೋ’ ಸಿನಿಮಾ ನೋಡಿದ್ದೇನೆ. ಆ ಸಿನಿಮಾನಲ್ಲಿ ಅವರು ತುಳುವಿನಲ್ಲಿ ಸಹ ಮಾತನಾಡಿದ್ದಾರೆ’ ಎಂದಿದ್ದಾರೆ ಪೂಜಾ ಹೆಗ್ಡೆ.

ಇದನ್ನೂ ಓದಿ:ಗ್ಲಾಮರಸ್ ಅವತಾರದಲ್ಲಿ ನಟಿ ಪೂಜಾ ಹೆಗ್ಡೆ: ವಿಡಿಯೋ ನೋಡಿ

ತುಳು ನಾಡಿನೊಂದಿಗೆ ತಮ್ಮ ನಂಟಿನ ಬಗ್ಗೆ ಮಾತನಾಡಿರುವ ಪೂಜಾ ಹೆಗ್ಡೆ, ‘ನಾನು ಪ್ರತಿ ಬಾರಿ ಬೇಸಿಗೆ ರಜೆ ಕಳೆಯಲು ಇಲ್ಲಿಗೆ ಬರುತ್ತಿದ್ದೆ. ನಮ್ಮ ಕಸಿನ್ಸ್ ಎಲ್ಲರೂ ಆ ಸಮಯದಲ್ಲಿ ಬರುತ್ತಿದ್ದರು. ನಾವೆಲ್ಲ ಆಟ ಆಡುತ್ತಿದ್ದೆವು. ಇಲ್ಲಿ ಬಂದು ನೇರಳೆ ಹಣ್ಣು ತಿನ್ನುತ್ತಿದ್ದ ನೆನಪು ನನಗೆ ಈಗಲೂ ಇದೆ. ಬಹಳ ಅದ್ಭುತ ದಿನಗಳನ್ನು ಇಲ್ಲಿ ಕಳೆದಿದ್ದೇನೆ’ ಎಂದು ಪೂಜಾ ಹೆಗ್ಡೆ ಹೇಳಿಕೊಂಡಿದ್ದಾರೆ.

ಪೂಜಾ ಹೆಗ್ಡೆ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘ಜನ ನಾಯಗನ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ದುಲ್ಕರ್ ಸಲ್ಮಾನ್ ಜೊತೆಗೆ ತೆಲುಗು ಸಿನಿಮಾ ಒಂದರಲ್ಲಿ ಪೂಜಾ ನಟಿಸುತ್ತಿದ್ದಾರೆ. ವರುಣ್ ಧವನ್ ಜೊತೆಗೆ ಹಿಂದಿ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸಹ ಶೀಘ್ರವೇ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಒಟ್ಟಾರೆಯಾಗಿ ಪೂಜಾ ಸಖತ್ ಬ್ಯುಸಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯಾರೋ ಸಿಂಪಲ್ ಸುಧಾ ಗಂಡ ಅಂತೆ:ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ – Kannada News | Labour Day 2026: Congress MLC BK Hariprasad Opposes Infosys Founder Narayana Murthy’s 75 Hour Work Statement

ಬೆಂಗಳೂರು, (ಮೇ,1): ವಾರಕ್ಕೆ 75 ಗಂಟೆಗಗಳ ಕಾಲ ಕೆಲಸ ಮಾಡಬೇಕು ಎಂದಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ (Infosys Founder Narayana Murthy) ಅವರ ವಿರುದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (Congress MLC BK Hariprasad) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಮಿಕ ದಿನಾಚರಣೆ (Labour Day 2026) ಕಾರ್ಯಕ್ರಮದ ವೇಳೆ ಕೆಲಸ ಅವಧಿ ಪ್ರಸ್ತಾಪಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಅಂದ್ರು. ಆದ್ರೆ, ಆಯಮ್ಮ ಯಾರೋ ಸಿಂಪಲ್ ಸುಧಾ ಅಂತೆ ನನಗೆ ಗೊತ್ತಿಲ್ಲ, ಆಯಮ್ಮನ ಗಂಡ ಪತಿ ವಾರಕ್ಕೆ 75 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು ಅಂದ್ರೆ ನಾವೇನು ಪ್ರಾಣಿಗಳಾ? ಎಂದು ನಾರಾಯಣ ಮೂರ್ತಿ ವಿರುದ್ಧ ಕಿಡಿಕಾರಿದ್ದಾರೆ.

ನಾವು ಮನುಷ್ಯರು. ನಾವು ಕೆಲಸ ಮಾಡಿಲ್ಲ ಅಂದ್ರೆ ಮಾಲೀಕರು ಅಲ್ಲ. ಮಾಲೀಕ ಕೆಲಸ ಕೊಡಬಹುದು, ನಾವು ಕೆಲಸ ಮಾಡಿದ್ರೇನೆ ಮಾಲೀಕ. ಎಲ್ಲಾ ಒಟ್ಟಿಗೆ ನಡೆಯಬೇಕು. ಸ್ವಾಭಿಮಾನ, ನಿಮ್ಮ ಹಕ್ಕು, ಸಮಾನತೆಗೆ ಹೋರಾಟ ಮಾಡಬೇಕು ಎಂದರು.

Source link

ಪೊಲೀಸ್ ಠಾಣೆ ಮೆಟ್ಟಿಲೇರಿದ ‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್: ನಿರ್ಮಾಪಕರ ವಿರುದ್ಧ ಕಲಾವಿದರಿಂದ ದೂರು – Kannada News | Vasudeva Kutumba TV Serial Dispute: Actors File Police Complaint Over Unpaid Dues

ನಿರ್ಮಾಪಕರ ವಿರುದ್ಧ ದೂರುImage Credit source: Tv9 Kannada

ಸ್ಟಾರ್ ಸುವರ್ಣ ಚಾನೆಲ್​​ನಲ್ಲಿ ಪ್ರಸಾರ ಕಾಣುತ್ತಿರುವ ‘ವಸುದೇವ ಕುಟುಂಬ’ ಧಾರಾವಾಹಿಯ ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರ ನಡುವಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಲವು ತಿಂಗಳುಗಳಿಂದಲೂ ಧಾರಾವಾಹಿಯ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ನೀಡಿಲ್ಲ. ಮಾತ್ರವಲ್ಲದೆ, ಆಹಾರ, ಇನ್ನಿತರೆಗಳನ್ನು ಸರಿಯಾಗಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದ್ದ ಬೆನ್ನಲ್ಲೇ ಈ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಧಾರವಾಹಿಯ ಕಲಾವಿದರು ದೂರು ಸಲ್ಲಿಕೆ ಮಾಡಿದ್ದಾರೆ.

ದೂರಿನಲ್ಲಿ ತಮಗಾದ ಅನ್ಯಾಯದ ಬಗ್ಗೆ ನಟಿ ಚೈತ್ರಾ ಉಲ್ಲೇಖಿಸಿದ್ದು, ‘ವಸುದೇವ ಕುಟುಂಬ’ ಧಾರಾವಾಹಿಯಲ್ಲಿ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದು, ನಾವು ಕಲಾವಿದರು ಕೋರಮಂಗಲ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆಯೊಂದಿಗೆ (ಪ್ರೊಡ್ಯೂಸರ್ ರೇಖಾ ಕೆ.ಬಿ ಮತ್ತು ನಿರ್ದೇಶಕ ಕೋರಮಂಗಲ ಅನಿಲ್) ಒಪ್ಪಂದ ಮಾಡಿಕೊಂಡಿದ್ದೇವೆ. ಆ ಒಪ್ಪಂದದ ಪ್ರಕಾರ, ನಾವು ಮಾಡಿದ ಕೆಲಸಕ್ಕೆ 30 ದಿನಗಳೊಳಗೆ ಪಾವತಿ ನೀಡಬೇಕು ಎಂದು ಉಲ್ಲೇಖಿಸಲಾಗಿದೆ. ಆದರೆ, ಡಿಸೆಂಬರ್ ತಿಂಗಳಿಂದ (2 ದಿನಗಳ ಪಾವತಿ), ಜನವರಿ, ಫೆಬ್ರವರಿ ಹಾಗೂ ಮಾರ್ಚ್ 7, 2026ರವರೆಗೆ ನನಗೆ ಯಾವುದೇ ಪಾವತಿ ಬಂದಿಲ್ಲ. ನಮ್ಮೊಂದಿಗೆ ಕೆಲಸ ಮಾಡಿದ ಇತರ ತಂತ್ರಜ್ಞರೂ ಸಹ ಡಿಸೆಂಬರ್, ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಪಾವತಿಯನ್ನು ಪಡೆಯಬೇಕಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆಯನ್ನು ಕರೆ ಅಥವಾ ಸಂದೇಶಗಳ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ದೊರಕಿಲ್ಲ.  ಪಾವತಿಯ ದಿನಾಂಕದ ಕುರಿತು ಕೂಡ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್, ನಿರ್ಮಾಪಕರ ನಡು ರಸ್ತೆಯಲ್ಲಿ ಅಡ್ಡ ಹಾಕಿದ ಹಂಸ

ನಾಗರಬಾವಿಯಲ್ಲಿ ನಿರ್ಮಾಪಕರು ನಡೆಸುತ್ತಿರುವ ‘ತತ್ಸವಿ ಹೋಟೆಲ್’ ಬಳಿಯೂ ಹೋಗಿ ನಾವು ಹಣ ಪಾವತಿಯಾಗದಿರುವ ಬಗ್ಗೆ ಕೇಳಿದ್ದು, ಈ ವೇಳೆ ಅವರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಬೆದರಿಕೆ ಮತ್ತು ಕಿರುಕುಳ ನೀಡಿದ್ದೇವೆ ಎಂದು ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನಮ್ಮ ಮೇಲೆಯೇ ದೂರು ನೀಡಿದ್ದಾರೆ. ಹೀಗಾಗಿ ನಮಗೆ ಪಾವತಿಸಬೇಕಿರುವ ಹಣವನ್ನು ತಕ್ಷಣ ನೀಡುವಂತೆ ಮತ್ತು ನಿರ್ಮಾಣ ಸಂಸ್ಥೆಯಿಂದ ನಮ್ಮ ಮೇಲೆ ಮಾಡಲಾಗಿರುವ ಆರೋಪಗಳಿಂದ ರಕ್ಷಣೆ ನೀಡುವಂತೆ ವಿನಂತಿಸೋದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:25 pm, Fri, 1 May 26

Source link

ಬೆಂಗಳೂರಿನ ಜನರೇ ಈ ವೀಕೆಂಡ್​​ ಮಿಸ್​ ಮಾಡಿಕೊಳ್ಳಬೇಡಿ: ಈ ನಗರದಲ್ಲಿ ನಡೆಯಲಿದೆ ರೆಸ್ಟೋರೆಂಟ್ ವೀಕ್ – Kannada News | Bengaluru’s Food Culture Shines at Restaurant Week India 2026: A Deep Dive

ಬೆಂಗಳೂರು, ಮೇ.1: ಬೆಂಗಳೂರಿನ ರೆಸ್ಟೋರೆಂಟ್ ವೀಕ್ ಇಂಡಿಯಾ 2026 ಸಮ್ಮೇಳನದಲ್ಲಿ ನಗರ ಆಹಾರಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಇಲ್ಲಿ ಆಹಾರಕ್ಕೆ ಬೇರೆ ರಾಜ್ಯದ ಜನ ಫಿದಾ ಆಗಿದ್ದಾರೆ. ಈ ಬಗ್ಗೆ ಗುಜರಾತಿನ ದಂಪತಿಗಳು ಈ ವಿಶೇಷ ಕೂಟದಲ್ಲಿ ಬಗ್ಗೆ ಅದ್ಬುತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ದೇಶದ ಪ್ರಮುಖ ನಗರಗಳಾದ ದೆಹಲಿ ಮತ್ತು ಮುಂಬೈಗೆ ಹೋಲಿಸಿದರೆ ಬೆಂಗಳೂರಿನ ಆಹಾರ ಸಂಸ್ಕೃತಿಯು ಅತ್ಯಂತ ವಿಭಿನ್ನ ಮತ್ತು ಆಳವಾದದ್ದು. ಇಲ್ಲಿನ ಜನರು ಕೇವಲ ಫ್ಯಾಷನ್ ಅಥವಾ ಟ್ರೆಂಡ್‌ಗಾಗಿ ಹೋಟೆಲ್‌ಗಳಿಗೆ ಹೋಗುವುದಿಲ್ಲ, ಬದಲಿಗೆ ಅಧಿಕೃತ ರುಚಿ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಬೆಲೆ ನೀಡುತ್ತಾರೆ. ಇನ್ನು ಬೆಂಗಳೂರಿನ ರೆಸ್ಟೋರೆಂಟ್ ವೀಕ್ ಇಂಡಿಯಾವೂ ಏಪ್ರಿಲ್ 24ರಿಂದ ಆರಂಭವಾಗಿದೆ ಮೇ 3 ಅಂದರೆ ಭಾನುವಾರದ ವರೆಗೆ ಇದೆ.

ಏಪ್ರಿಲ್ ತಿಂಗಳಿನಲ್ಲಿ ಹತ್ತು ದಿನಗಳ ಕಾಲ ಬೆಂಗಳೂರು, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ‘ರೆಸ್ಟೋರೆಂಟ್ ವೀಕ್’ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಆಯ್ದ ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ ಒಬ್ಬರಿಗೆ 1500 ರೂ. ರಂತೆ ನಿಗದಿಪಡಿಸಿದ ದರದಲ್ಲಿ (Prix-fixe menu) ಊಟ ಲಭ್ಯವಿರುತ್ತದೆ. ಇದರಲ್ಲಿ ಒಂದು ಹಸಿವು ಹೆಚ್ಚಿಸುವ ಆಹಾರ (Appetizer), ಒಂದು ಮುಖ್ಯ ಊಟ ಮತ್ತು ಒಂದು ಸಿಹಿ ತಿಂಡಿ ಒಳಗೊಂಡಿರುತ್ತದೆ. ಯುವ ಗ್ರಾಹಕರಿಗೆ ಹೊಸ ರೆಸ್ಟೋರೆಂಟ್‌ಗಳನ್ನು ಪರಿಚಯಿಸುವುದು ಮತ್ತು ನಗರದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಇದರ ಗುರಿಯಾಗಿದೆ.

ಬೆಂಗಳೂರಿನ ಒಟ್ಟು 17 ರೆಸ್ಟೋರೆಂಟ್‌ಗಳು ಈ ಸಂಭ್ರಮದಲ್ಲಿ ಪಾಲ್ಗೊಂಡಿವೆ:

23rd ಸ್ಟ್ರೀಟ್ ಪಿಜ್ಜಾ (23rd Street Pizza)

ಲೂಪಾ (Lupa), ಮ್ಯೂರೋ (Muro), ಫರ್ವರ್ (Fervour)

ಆಲಿವ್ ಬೀಚ್ (Olive Beach), ಟಿಜೌರಿ (Tijouri), ಸ್ಪೈಸ್ ಟೆರೇಸ್ (Spice Terrace)

ಕೋಪಿಟಿಯಾಮ್ ಲಾಹ್ (Kopitiam Lah), ಕಪ್ಪ ಚಕ್ಕ ಕಂಧಾರಿ (Kappa Chakka Kandhari)

ದಿ ಹುಡ್ (The Hood), ಬಾರ್ ಸಮ (Bar Sama), ಪಿಕಾಪ್ ನೋ ಕ್ಯಾಪ್ (Pizza No Cap)

ಇದನ್ನೂ ಓದಿ: ನಮ್ಮ ಮಸಾಲ ದೋಸೆಗೆ ವಿಶ್ವ ಮಟ್ಟದಲ್ಲಿ ಭಾರೀ ಡಿಮ್ಯಾಂಡ್​; ‘ಟಾಪ್ 10’ ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಸ್ಥಾನ!

ರೆಸ್ಟೋರೆಂಟ್ ವೀಕ್ ಇಂಡಿಯಾದ ಸಹ-ಸಂಸ್ಥಾಪಕ ಆತಿಶ್ ನಾಥ್ ಅವರು ಹೇಳುವ ಪ್ರಕಾರ, ಆಹಾರ ರುಚಿ ಹಾಗೂ ಮೌಲ್ಯದಲ್ಲಿ ರಾಜದಿಂದ ರಾಜ್ಯಕ್ಕೆ ವಿಭಿನ್ನತೆ ಇರುತ್ತದೆ. ಈಗ ಬೆಂಗಳೂರಿನ ಗ್ರಾಹಕರನ್ನು ಮೆಚ್ಚಿಸುವುದು ಕಷ್ಟ, ಏಕೆಂದರೆ ಅವರು ರುಚಿಯ ಬಗ್ಗೆ ಆಳವಾದ ಜ್ಞಾನ ಹೊಂದಿರುತ್ತಾರೆ. ಅವರು ಹಣಕ್ಕೆ ತಕ್ಕ ಮೌಲ್ಯವನ್ನು ಬಯಸುತ್ತಾರೆ. ಇನ್ನು ಮುಂಬೈನ ಜನರು ಹೊಸ ರೆಸ್ಟೋರೆಂಟ್‌ಗಳ ಬಗ್ಗೆ ಇರುವ ಕುತೂಹಲ ಮತ್ತು ಅಲ್ಲಿನ ಶಕ್ತಿಯನ್ನು ಇಷ್ಟಪಡುತ್ತಾರೆ. ದೆಹಲಿ ಜನರು ಪರಂಪರೆಗೆ ಮತ್ತು ತಮ್ಮ ಅಧಿಕಾರವನ್ನು ತೋರಿಸಲು ಇಷ್ಟಪಡುತ್ತಾರೆ. ಬೆಂಗಳೂರಿನಲ್ಲಿ ಜನರು ಪಿಜ್ಜಾ ಸವಿಯುತ್ತಾ ಅದರ ರುಚಿಯ ಬಗ್ಗೆ ಚರ್ಚೆ ಮಾಡುತ್ತಾರೆ. ಇದು ಇಲ್ಲಿನ ಜನರ ಆಹಾರದ ಮೇಲಿರುವ ಆಸಕ್ತಿಯನ್ನು ತೋರಿಸುತ್ತದೆ. ಒಟ್ಟಾರೆಯಾಗಿ, ಬೆಂಗಳೂರು ಯಾವುದೇ ಅಬ್ಬರವಿಲ್ಲದೆ ತನ್ನದೇ ಆದ ವಿಶಿಷ್ಟ ಮತ್ತು ಉತ್ತರ ಆಹಾರ ಸಂಸ್ಕೃತಿಯನ್ನು ಬೆಳೆಸಿಕೊಂಡಿದೆ.

ಪ್ರಮುಖ ರೆಸ್ಟೋರೆಂಟ್‌ಗಳ ಪಟ್ಟಿ:

  • ಬೆಂಗಳೂರು: ಕಪ್ಪಾ ಚಕ್ಕ ಕಂಧಾರಿ (Kappa Chakka Kandhari), ಬಾರ್ ಸಾಮ (Bar Sama), ಲೂಪಾ (Lupa), 23rd ಸ್ಟ್ರೀಟ್ ಪಿಜ್ಜಾ, ಮತ್ತು ಮ್ಯೂರೋ.

  • ಮುಂಬೈ: ಬಾಂಬೆ ಕ್ಯಾಂಟೀನ್ (The Bombay Canteen), ಅಮೇರಿಕಾನೋ (Americano) ಮತ್ತು ಒ ಪೆಡ್ರೊ (O Pedro).

  • ದೆಹಲಿ: ಇಂಜಾ (Inja), ಅಡ್ರಿಫ್ಟ್ ಕಾಯ (Adrift Kaya) ಮತ್ತು ಆಲಿವ್ ಬಾರ್ & ಕಿಚನ್ (Olive Bar & Kitchen).

  • ಬುಕ್ ಮಾಡುವುದು ಹೇಗೆ?

    1. ಕಡ್ಡಾಯ ಬುಕಿಂಗ್: ಈ ರೆಸ್ಟೋರೆಂಟ್‌ಗಳಲ್ಲಿ ನೇರವಾಗಿ ಹೋಗಿ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ‘ರೆಸ್ಟೋರೆಂಟ್ ವೀಕ್’ ಅಧಿಕೃತ ವೆಬ್‌ಸೈಟ್ ಮೂಲಕ ಮುಂಚಿತವಾಗಿ ಬುಕ್ ಮಾಡುವುದು ಕಡ್ಡಾಯ.

    2. ಪೂರ್ವ ಪಾವತಿ (Pre-payment): ಬುಕಿಂಗ್ ಮಾಡುವಾಗಲೇ ಹಣವನ್ನು ಪಾವತಿಸಬೇಕಾಗುತ್ತದೆ. ಇದು ಗ್ರಾಹಕರು ಮತ್ತು ರೆಸ್ಟೋರೆಂಟ್ ಇಬ್ಬರಿಗೂ ನಿಶ್ಚಿತತೆಯನ್ನು ನೀಡುತ್ತದೆ.

    3. ನಿಗದಿತ ಮೆನು: ನೀವು ಹೋಗುವ ಮೊದಲೇ ಮೆನು ಸಿದ್ಧವಿರುತ್ತದೆ (ಅಪ್ಪೆಟೈಸರ್, ಮೇನ್ ಕೋರ್ಸ್ ಮತ್ತು ಡೆಸರ್ಟ್). ಇದು ಗೊಂದಲವಿಲ್ಲದ, ಉದ್ದೇಶಪೂರ್ವಕ ಊಟದ ಅನುಭವವನ್ನು ನೀಡುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:08 pm, Fri, 1 May 26

Source link

ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: 30ಕ್ಕೂ ಹೆಚ್ಚು ಜನರಿಗೆ ಗಾಯ – Kannada News | KSRTC Bus Overturns Near Male Mahadeshwara Hills: More Than30 Injured at Ponnachi Turn, Traffic Hit for Kilometers

ಚಾಮರಾಜನಗರ, ಮೇ 01: ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಕೆಎಸ್​​ಆರ್​​ಟಿಸಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತಾಳ ಬೆಟ್ಟದ ಪೊನ್ನಾಚಿ ತಿರುವಿನ ಬಳಿ ನಿಯಂತ್ರಣ ಕಳೆದುಕೊಂಡು ಬಸ್​​ ಪಲ್ಟಿಯಾಗಿದ್ದು, ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಘಾತದ ಹಿನ್ನೆಲೆ ಕಿಲೋ ಮೀಟರ್ ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಲಾಂಗ್ ವೀಕೆಂಡ್ ಎಫೆಕ್ಸ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್! – Kannada News | Long Weekend Rush: Massive Traffic Jam on Bengaluru Nelamangala Highway as Residents Head to Hometowns

ನೆಲಮಂಗಲ, ಮೇ 1: ಇಂದಿನಿಂದ (ಮೇ 1) ಸತತ ಮೂರು ದಿನಗಳ ರಜೆ ಇರುವುದರಿಂದ ಬೆಂಗಳೂರಿಗರು ತಮ್ಮ ಊರುಗಳತ್ತ ಮತ್ತು ಪ್ರವಾಸಿ ತಾಣಗಳತ್ತ ತೆರಳುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿನಿಂದ ಹೊರಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಕ್ರವಾರ ಬೆಳಗ್ಗೆ ವಾಹನಗಳ ದಟ್ಟಣೆ ವಿಪರೀತವಾಗಿ ಹೆಚ್ಚಾಗಿದ್ದು, ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವಂತಾಗಿದೆ. ಅದರಲ್ಲೂ ಬೆಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಿಲೋಮೀಟರ್‌ಗಟ್ಟಲೆ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಿವೆ. ನೆಲಮಂಗಲ ಟೋಲ್ ಬಳಿ ವಾಹನಗಳು ಸಾಲುಗಟ್ಟಿರುವ ಚಾಚಿಕೊಂಡಿದ್ದು, ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿರುವುದು ಕಂಡುಬಂತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link