Category Archives: Blog

Your blog category

DC vs RCB: ರಾಹುಲ್ ವಿರುದ್ಧ ಸೇಡು ತೀರಿಸಿಕೊಂಡ ಹೇಜಲ್‌ವುಡ್; ವಿಡಿಯೋ – Kannada News | IPL 2026: DC vs RCB Match 39 Delhi’s Dramatic Collapse, Hazlewood Dominates

ಐಪಿಎಲ್ 2026 ರ 39ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಮೊದಲ 3 ಓವರ್​ಗಳಲ್ಲೇ ಪ್ರಮುಖ 5 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭುವನೇಶ್ವರ್ ಕುಮಾರ್ ಹಾಗೂ ಹೇಜಲ್‌ವುಡ್ ಅವರ ದಾಳಿಗೆ ತತ್ತರಿಸಿ ಹೋಗಿರುವ ಡೆಲ್ಲಿ ಬ್ಯಾಟರ್​ಗಳಿಗೆ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ.

ಅದರಲ್ಲೂ ಇದೇ ಉಭಯ ತಂಡಗಳ ನಡುವೆ ಏಪ್ರಿಲ್ 18 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ದೆಹಲಿ 6 ವಿಕೆಟ್‌ಗಳಿಂದ ಆರ್​​ಸಿಬಿಯನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್, ಆರ್​ಸಿಬಿ ವಿರುದ್ಧ ಗೆಲುವಿನ ಅರ್ಧಶತಕ ಬಾರಿಸಿದ್ದರು. ಅಲ್ಲದೆ ಆ ಪಂದ್ಯದಲ್ಲಿ ಅವರು ಹೇಜಲ್‌ವುಡ್ ವಿರುದ್ಧ ಸರಾಗವಾಗಿ ರನ್ ಕಲೆಹಾಕಿದ್ದರು. ತವರು ಮೈದಾನದ ಲಾಭ ಪಡೆದುಕೊಂಡಿದ್ದ ರಾಹುಲ್ ಹೇಜಲ್‌ವುಡ್ ಬೌಲಿಂಗ್​ನಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದಿದ್ದರು.

ಹೀಗಾಗಿ ಇಂದಿನ ಪಂದ್ಯದಲ್ಲಿ ರಾಹುಲ್ ಮೇಲೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದರು. ಅದರಂತೆ ಆರ್​​ಸಿಬಿ ಪರ ಎರಡನೇ ಓವರ್ ಬೌಲಿಂಗ್ ಮಾಡಿದ ಹೇಜಲ್‌ವುಡ್, ಎಸೆದ ಮೊದಲ ಎಸೆತದಲ್ಲೇ ರಾಹುಲ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಹೇಜಲ್‌ವುಡ್ ಎಸೆದ ಶಾರ್ಟ್​ ಬಾಲ್ ಅನ್ನು ಸಿಕ್ಸರ್​ಗಟ್ಟುವ ಯತ್ನದಲ್ಲಿ ರಾಹುಲ್ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿದರು. ಕಳೆದ ಮುಖಾಮುಖಿಯಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ರಾಹುಲ್​, ಈ ಪಂದ್ಯದಲ್ಲಿ ಕೇವಲ 1 ರನ್ ಬಾರಿಸಲಷ್ಟೇ ಶಕ್ತರಾದರು.

ಇನ್ನು ಇದೇ ಓವರ್​ನಲ್ಲಿಯೇ ಹೇಜಲ್​ವುಡ್ ಮತ್ತೊಂದು ವಿಕೆಟ್ ಉರುಳಿಸಿದರು. ರಾಹುಲ್ ವಿಕೆಟ್ ಪತನದ ಬಳಿಕ ಬಂದ ಸಮೀರ್ ರಿಜ್ವಿ ಕೂಡ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ಖಾತೆ ತೆರೆಯದೆ ನಿರ್ಗಮಿಸಿದರು.

Source link

ಪಂಚಮಸಾಲಿ ಪೀಠದ ‘ಲೆಕ್ಕಾ’ಚಾರ: 18 ವರ್ಷದ ಲೆಕ್ಕ ಕೊಟ್ಟ ಟ್ರಸ್ಟ್‌; ಕಳ್ಳಲೆಕ್ಕ ಎಂದ ಸ್ವಾಮೀಜಿ ಟೀಂ – Kannada News | Harihara Panchamasali Peetha Crisis: Trust that submits 18 year old financial report; Vachanananda Sri Rejects Report

ಟ್ರಸ್ಟಿ ಬಿ.ಸಿ ಉಮಾಪತಿ, ವಚನಾನಂದ ಶ್ರೀImage Credit source: tv9 kannada

ದಾವಣಗೆರೆ, ಏಪ್ರಿಲ್​ 27: ಮಠದಲ್ಲಿ ಅನುದಾನ ಮತ್ತು ಭಕ್ತರ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಹರಿಹರದ ಪಂಚಮಸಾಲಿ ಮಠದ (Harihara Panchamasali Peetha) ಆಡಳಿತ ಮಂಡಳಿ ಹಾಗೂ ವಚನಾನಂದ ಶ್ರೀ ಮಧ್ಯೆ ಬಹಿರಂಗ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಬಗ್ಗೆ ಲೆಕ್ಕ ಕೊಡುವಂತೆ ವಚನಾನಂದ ಶ್ರೀ ಪಟ್ಟು ಹಿಡಿದಿದ್ದರು. ಈ ಬೆನ್ನಲ್ಲೇ ಇಂದು ಟ್ರಸ್ಟ್‌ ಸದಸ್ಯರು 2008 ರಿಂದ 2026ವರೆಗಿನ ಲೆಕ್ಕದ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಈ ಲೆಕ್ಕವನ್ನ ನಾವು ಒಪ್ಪುವುದಿಲ್ಲ, ಇದು ಕಳ್ಳ ಲೆಕ್ಕ ಎಂದು ಸ್ವಾಮೀಜಿ ಹಾಗೂ ತಂಡ ಕಿಡಿಕಾರಿದ್ದಾರೆ. ಇನ್ನು ಇದೇ ವೇಳೆ ಮಠದ ಆವರಣ ಅಕ್ಷರಶಃ ರಣಾಂಗಣವಾಗಿತ್ತು. ವಚನಪಠಣ ಆಗಬೇಕಿದ್ದ ಜಾಗದಲ್ಲಿ ಬೈಗುಳ ಕೇಳಿಬಂದವು.

ಪಂಚಮಸಾಲಿ ಸಮುದಾಯ ನಾಡಿನ ದೊಡ್ಡ ಸಮುದಾಯಗಳಲ್ಲೊಂದು. ಇದೇ ಸಮುದಾಯದ ಬೆಳವಣಿಗೆಗೆ ಅಂತಾನೇ ಹರಿಹರದಲ್ಲಿ ಮಠ ಸ್ಥಾಪಿಸಲಾಗಿದೆ. ಆದರೆ ಇದೇ ಮಠದಲ್ಲಿ ಇಂದು ನಡೆದಿದ್ದು ಮಾತ್ರ ಬಿಗ್‌ ಹೈಡ್ರಾಮಾ.

ಇದನ್ನೂ ಓದಿ: ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತಾ?

ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿಯಾಗಿದ್ದ ವಚನಾನಂದ ಶ್ರೀಗಳನ್ನ ಹತ್ತಾರು ಕಾರಣ ನೀಡಿ ಮಠದಿಂದ ಉಚ್ಚಾಟನೆ ಮಾಡಲಾಗಿತ್ತು. ಪಂಚಮಸಾಲಿ ಟ್ರಸ್ಟ್‌ ತೆಗೆದುಕೊಂಡ ಇದೇ ನಿರ್ಧಾರ ಶ್ರೀಗಳ ಪರ ಇರುವ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಉಚ್ಚಾಟನೆ ಮಾಡಿದ್ರೂ ಮಠ ತೊರೆಯದ ಶ್ರೀಗಳು, ಲೆಕ್ಕ ಕೊಡಿ ಅಂತಾ ಅಭಿಯಾನ ಆರಂಭಿಸಿದ್ದರು. ಇದೇ ಅಭಿಯಾನಕ್ಕೆ ಉತ್ತರ ಎಂಬಂತೆ ಮಠದ ಆವರಣದಲ್ಲೇ ಬಹಿರಂಗ ಸಭೆ ನಡೆಸಿದ ಟ್ರಸ್ಟ್‌ ಸದಸ್ಯರು 2008 ರಿಂದ 2026 ರವರೆಗಿನ ಲೆಕ್ಕ ಕೊಟ್ಟಿದ್ದಾರೆ.

18 ವರ್ಷಗಳಲ್ಲಿ 27,61,57,017 ರೂ. ದೇಣಿಗೆ ಸಂಗ್ರಹ

ಕಳೆದ 18 ವರ್ಷಗಳಲ್ಲಿ ಮಠದ ಭಕ್ತರಿಂದ 27 ಕೋಟಿ 61 ಲಕ್ಷದ57 ಸಾವಿರದ17 ರೂಪಾಯಿ ದೇಣಿಗೆ ಸಂಗ್ರಹ ಆಗಿದೆ. ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಅಂತಾ 12 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇನ್ನು ಮರಳು ಮಾರಾಟದಿಂದ 10 ಲಕ್ಷ ರೂಪಾಯಿ ಸಂಗ್ರಹವಾದರೆ, ತುಲಾಭಾರದಿಂದ4.5 ಕೋಟಿ ರೂ ಮೌಲ್ಯದ 174 ಕೆಜಿ ಬೆಳ್ಳಿ ಸಂಗ್ರಹವಾಗಿದೆ. 174 ಕೆಜಿ ಬೆಳ್ಳಿಯನ್ನು ಬ್ಯಾಂಕ್ ಲಾಕರ್‌ ಸುರಕ್ಷಿತವಾಗಿ ಇಡಲಾಗಿದೆ ಅಂತಾ ಟ್ರಸ್ಟ್‌ನವರು ಲೆಕ್ಕ ಒಪ್ಪಿಸಿದ್ದಾರೆ.

ಈ ಲೆಕ್ಕವನ್ನ ನಾವು ಒಪುವುದಿಲ್ಲ: ವಚನಾನಂದ ಶ್ರೀಗಳು

ಇನ್ನು ಲೆಕ್ಕ ಕೊಡುತ್ತಿರುವ ವೇಳೆ ಅತ್ತ ಮಠಕ್ಕೆ ಮಾಜಿ ಶಾಸಕರಾದ ಹೆಚ್‌ಎಸ್ ಶಿವಶಂಕರ್‌, ಅರುಣ್ ಪೂಜಾರ್ ಎಂಟ್ರಿ ಆಗಿದ್ರು. ಇಬ್ಬರನ್ನ ಸ್ವಾಗತಿಸಿದ ಸ್ವಾಮೀಜಿ ಪರ ಭಕ್ತರು, ಇದು ಕಳ್ಳ ಲೆಕ್ಕ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದು, ವೇದಿಕೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ತಳ್ಳಾಟ ನೂಕಾಟ ಉಂಟಾಯಿತು. ಈ ಲೆಕ್ಕವನ್ನ ನಾವು ಒಪುವುದಿಲ್ಲ ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.

ಗೌರವದಿಂದ ಮಠ ಬಿಟ್ಟು ಹೋಗಿ ಎಂದ ಟ್ರಸ್ಟ್‌: ನೀವೆ ಮಠ ಖಾಲಿ ಮಾಡಿ ಎಂದ ವಚನಾನಂದ ಶ್ರೀ

ಲೆಕ್ಕದ ಗಲಾಟೆ ಒಂದುಕಡೆಯಾದರೆ, ಟ್ರಸ್ಟ್‌ನವರು ಇಂದು ಮನಗೂಳಿ ಶ್ರೀಗಳನ್ನ ಕರೆಸಿ ಲೆಕ್ಕಪತ್ರದ ಕಾರ್ಯಕ್ರಮ ನಡೆಸಿದರು. ಹೀಗಾಗಿ ವಚನಾನಂದ ಶ್ರೀಗಳ ಬದಲಾಗಿ ಬೇರೆಯವರನ್ನ ಪಟ್ಟ ಕಟ್ಟುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಈ ಬಗ್ಗೆಯೂ ಮಾತನಾಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬಿ.ಸಿ ಉಮಾಪತಿ, ಶ್ರೀಗಳಿಗೆ ಗೌರವದಿಂದ ಹೋಗು ಅಂತಾ ಹೇಳಿದ್ದೇವೆ. ಇಲ್ಲದಿದ್ದರೆ ಮುಂದೆ ನೋಡಿಕೊಳ್ತೇವೆ ಎಂದಿದ್ದಾರೆ. ಆದರೆ ವಚನಾನಂದ ಶ್ರೀಗಳು ಮಾತ್ರ ನೀವೆ ಮಠ ಖಾಲಿ ಮಾಡಿ ಅಂತಾ ತಿರುಗೇಟು ಕೊಟ್ಟಿದ್ದಾರೆ.

ಮನಗೂಳಿ ಶ್ರೀಗಳ ಎಂಟ್ರಿ ವೇಳೆ ಬಿಗ್ ಹೈಡ್ರಾಮಾ!

ಸಭೆ ಬಳಿಕ ಮಹಾಂತ ಶ್ರೀಗಳ ಗದ್ದುಗೆ ದರ್ಶನಕ್ಕೆ ಮನಗೂಳಿ ಶ್ರೀಗಳು ಬಂದಿದ್ದರು. ಆಗ ಶ್ರೀಗಳ ಮೇಲೆಯೇ ಭಕ್ತರು ಬಾಟಲ್‌ ಎಸಿದಿದ್ದಾರೆ. ಆಗ ಮತ್ತೊಂದು ಸುತ್ತಿನ ಗಲಾಟೆ ಆಯ್ತು. ಹೀಗೆ ಪಂಚಮಸಾಲಿ ಒಳಜಗಳ ಈಗ ಬೀದಿಗೆ ಬಂದಿದ್ದು, ಇದು ಮತ್ತೆಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡ್ಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಆದಾಯ ಹೆಚ್ಚಿಸಿಕೊಳ್ಳಲು ಬಯಸಿದರೆ ಮೊದಲು ಈ ಅಭ್ಯಾಸಗಳನ್ನು ತ್ಯಜಿಸಿ – Kannada News | Chanakya Niti: Chanakya says that income cannot be increased if you have these habits

ಆದಾಯವನ್ನು (income) ಹೆಚ್ಚಿಸಿಕೊಳ್ಳಬೇಕು, ಶ್ರೀಮಂತಿಕೆಯನ್ನು ಗಳಿಸಬೇಕು ಎಂದು ಪ್ರತಿಯೊಬ್ಬರು ಸಹ ಬಯಸುತ್ತಾರೆ. ಆದರೆ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದೇ ಅನೇಕರಿಗೆ ಗೊತ್ತಿಲ್ಲ. ಒಳ್ಳೆಯ ಜೀವನವನ್ನು ನಡೆಸಲು ಆದಾಯವನ್ನು ಹೆಚ್ಚಿಸಲು ನಮ್ಮ ಆಲೋಚನೆಗಳನ್ನು ಮತ್ತು ಅಭ್ಯಾಸಗಳನ್ನು ಬದಲಾಯಿಸಬೇಕು ಎಂದು ಆಚಾರ್ಯ ಚಾಣಕ್ಯರು. ಕೆಲವು ಕೆಟ್ಟ ಅಭ್ಯಾಸಗಳನ್ನು ಸುಧಾರಿಸದಿದ್ದರೆ, ನೀವು ಲಕ್ಷಾಂತರ ರೂಪಾಯಿಗಳನ್ನು ಗಳಿಸಿದರೂ, ಅದು ಎಂದಿಗೂ ಉಳಿಯುವುದಿಲ್ಲ. ಆದ್ದರಿಂದ, ನಿಮ್ಮ ಆದಾಯವನ್ನು ಹೆಚ್ಚಿಸಲು ಬಯಸಿದರೆ ಮೊದಲು ಈ ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಲೇಬೇಕು.

ಈ ಅಭ್ಯಾಸಗಳನ್ನು ತ್ಯಜಿಸಿದರೆ ಮಾತ್ರ ನಿಮ್ಮ ಆದಾಯ ಹೆಚ್ಚಾಗುತ್ತದೆ:

ಸಮಯ ವ್ಯರ್ಥ ಮಾಡುವ ಅಭ್ಯಾಸವನ್ನು ಬಿಟ್ಟುಬಿಡಿ: ಆಚಾರ್ಯ ಚಾಣಕ್ಯರ ಪ್ರಕಾರ, ಸಮಯವು ನಮ್ಮ ದೊಡ್ಡ ಸಂಪತ್ತು. ಆದ್ದರಿಂದ, ಸಮಯವನ್ನು ಗೌರವಿಸದ ಯಾರಾದರೂ ಜೀವನದಲ್ಲಿ ಎಂದಿಗೂ ದೊಡ್ಡ ಯಶಸ್ಸನ್ನು ಸಾಧಿಸಲು ಅಥವಾ ಹಣ ಗಳಿಸಲು ಸಾಧ್ಯವಿಲ್ಲ. ನೀವು ಯಾವುದೇ ಕೆಲಸ ಮಾಡದ ಸೋಮಾರಿತನದಿಂದ ಸಮಯವನ್ನು ವ್ಯರ್ಥ ಮಾಡುತ್ತಿದ್ದರೆ, ಈ ಅಭ್ಯಾಸವನ್ನು ಸರಿಪಡಿಸುವುದು ಬಹಳ ಮುಖ್ಯ. ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸುವುದು ನಿಮ್ಮ ಆದಾಯವನ್ನು ಹೆಚ್ಚಿಸುವ ಮೊದಲ ಹೆಜ್ಜೆ. ನೀವು ಯಾವುದೇ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಲು ಕಲಿತಾಗ, ನಿಮ್ಮ ಉತ್ಪಾದಕತೆ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಆದಾಯವೂ ಹೆಚ್ಚಾಗುತ್ತದೆ.

ವ್ಯರ್ಥ ಖರ್ಚು ಮಾಡುವ ಅಭ್ಯಾಸವನ್ನು ಬಿಟ್ಟುಬಿಡಿ: ಆಚಾರ್ಯ ಚಾಣಕ್ಯರ ಪ್ರಕಾರ, ಹಣವನ್ನು ಉಳಿಸುವುದು  ಗಳಿಸುವಷ್ಟೇ ಮುಖ್ಯ. ಕೈಯಲ್ಲಿ ಹಣ ಇದ್ದಾದ ಅದನ್ನು ನಿಷ್ಪ್ರಯೋಜಕ ವಸ್ತುಗಳನ್ನು ಖರೀದಿಸಲು ಖರ್ಚು ಮಾಡಿದರೆ ಹಣವೆಲ್ಲಾ ವ್ಯರ್ಥವಾಗುತ್ತದೆ. ಅದರ ಬದಲು ಗಳಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದನ್ನು ಕಲಿಯಿರಿ. ಇದರಿಂದ ಆದಾಯ ಕೂಡ ಹೆಚ್ಚಾಗುತ್ತದೆ. ಮತ್ತು ನೀವು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ.

ಸೋಮಾರಿತನವನ್ನು ಬಿಟ್ಟುಬಿಡಿ: ನಿಮ್ಮ ಯಶಸ್ಸಿನ ದೊಡ್ಡ ಶತ್ರು ನಿಮ್ಮ ಸ್ವಂತ ಸೋಮಾರಿತನ. ಚಾಣಕ್ಯ ನೀತಿಯ ಪ್ರಕಾರ, ಸೋಮಾರಿತನವನ್ನು ಬಿಟ್ಟು ಪರಿಶ್ರಮದಿಂದ ಕೆಲಸ ಮಾಡುವವರು ಮಾತ್ರ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ನೀವು ಪ್ರತಿಯೊಂದು ಕೆಲಸವನ್ನು ಮುಂದೂಡುತ್ತಲೇ ಇರುವ ಅಥವಾ ಕಠಿಣ ಪರಿಶ್ರಮದಿಂದ ದೂರ ಸರಿಯುವ ವ್ಯಕ್ತಿಯಾಗಿದ್ದರೆ, ನಿಮ್ಮ ಆದಾಯ ಎಂದಿಗೂ ಹೆಚ್ಚಾಗುವುದಿಲ್ಲ. ನೀವು ಮೊದಲು ನಿಮ್ಮ ದೈನಂದಿನ ದಿನಚರಿಯನ್ನು ಸುಧಾರಿಸಬೇಕು ಮತ್ತು ಕಠಿಣ ಪರಿಶ್ರಮವನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು. ಆಗ ಮಾತ್ರ ಆದಾಯವನ್ನು ಹೆಚ್ಚಿಸಲು ಸಾಧ್ಯ.

ಇದನ್ನೂ ಓದಿ: ಅಭ್ಯಾಸಗಳು ನಿಮ್ಮನ್ನು ಒಂಟಿಯಾನ್ನಾಗಿಸುತ್ತದೆ ಎಚ್ಚರ!

ಕೆಟ್ಟ ಸಹವಾಸದಿಂದ ದೂರವಿರಿ: ನೀವು ಯಾವ ರೀತಿಯ ಜನರೊಂದಿಗೆ ಬೆರೆಯುತ್ತೀರಿ ಎಂಬುದು ನಿಮ್ಮ ಆಲೋಚನೆ ಮತ್ತು ನಿಮ್ಮ ಗಳಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀವು ಕಠಿಣ ಪರಿಶ್ರಮದಿಂದ ದೂರ ಸರಿಯುವ ಅಥವಾ ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಜನರೊಂದಿಗೆ ಸಹವಾಸ ಮಾಡಿದರೆ, ನೀವು ಕೂಡ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ, ಆದಾಯವನ್ನು ಹೆಚ್ಚಿಸಲು ಬಯಸಿದರೆ ಸಕಾರಾತ್ಮಕ ,ಮನೋಭಾವವನ್ನು ಹೊಂದಿರುವ ಮತ್ತು ಕಷ್ಟಪಟ್ಟು ಕೆಲಸ ಮಾಡಲು ನಿಮ್ಮನ್ನು ಪ್ರೇರೇಪಿಸುವ ಜನರೊಂದಿಗೆ ಇರುವುದು ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವಾಗಲೇ ಬಂತು ಪ್ರಮೋಷನ್ ಚೀಟಿ: ಮಹತ್ವದ ಹೇಳಿಕೆ ನೀಡಿದ ಸಿಎಂ – Kannada News | Karnataka CM to KAS: Prioritize Public Service, Curb Agents, Ensure Timely Promotions

ಬೆಂಗಳೂರು, ಏ.27: “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಿಜವಾದ ಪ್ರಭುಗಳು. ನಾವು ಮತ್ತು ನೀವು ಅವರ ಸೇವೆಗಾಗಿ ಇದ್ದೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಅಧಿಕಾರಿಗಳಿಗೆ ಸಂವಿಧಾನದ ಆಶಯವನ್ನು ನೆನಪಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸುವಂತೆ ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿ KAS ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಇದೇ ವೇಳೆ ಅವರು ಅಧಿಕಾರಿಗಳ ಪ್ರಮೋಷನ್ ಬಗ್ಗೆಯೂ ಮಾತನಾಡಿದರು. ನಿಮ್ಮ ಪದೋನ್ನತಿ ಬಗ್ಗೆ ವೇದಿಕೆಯಲ್ಲಿ ಅಧಿಕಾರಿಯೊಬ್ಬರಿ ಚೀಟಿ ನೀಡಿದ್ದಾರೆ. “ನನಗೆ ಪ್ರಮೋಷನ್ ಮಾಡಿ ಎಂಬ ಚೀಟಿ ಬಂದಿದೆ. ಈಗಾಗಲೇ ಎರಡು ಸಭೆಗಳನ್ನು ನಡೆಸಿ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಅರ್ಹ ಅಧಿಕಾರಿಗಳಿಗೆ ಪ್ರಮೋಷನ್ ನೀಡುವ ಪ್ರಕ್ರಿಯೆ ನಡೆಯಲಿದೆ,” ಎಂದು ಭರವಸೆ ನೀಡಿದರು.

ಮಾತು ಮುಂದುವರಿಸಿದ ಅವರು, “ನಾವು ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ರಿನಿವಲ್ ಆಗಬೇಕು. ಆದರೆ ನೀವು 30-35 ವರ್ಷ ಸೇವೆ ಸಲ್ಲಿಸುತ್ತೀರಿ. ನಿವೃತ್ತಿಯಾಗುವವರೆಗೆ ಜನರ ಸೇವೆ ಮಾಡುವ ದೊಡ್ಡ ಅವಕಾಶ ನಿಮಗಿದೆ,” ಎಂದರು.”ನಮಗೆ ಸಂಬಳ ಕೊಡುವುದು ಜನರೇ, ಅವರೇ ಪ್ರಭುಗಳು. ನೆಪ ಹೇಳದೆ ಜನರ ಕೆಲಸ ಮಾಡಿಕೊಡಿ. ಅದರಿಂದ ನಿಮ್ಮ ಜೀವನ ಸಾರ್ಥಕವಾಗುತ್ತದೆ,” ಎಂದು ಕಿವಿಮಾತು ಹೇಳಿದರು.

ಸಮಾಜದ ನಾಡಿಮಿಡಿತ ಅರ್ಥ ಮಾಡಿಕೊಳ್ಳದಿದ್ದರೆ ವ್ಯಕ್ತಿತ್ವ ಬೆಳೆಯಲು ಸಾಧ್ಯವಿಲ್ಲ. “ಓದಿಗಿಂತ ಕಾಮನ್ ಸೆನ್ಸ್ ಬಹಳ ಮುಖ್ಯ. ಸಮಾಜದ ಬಗ್ಗೆ ಅರಿವಿದ್ದರೆ ಮಾತ್ರ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯ,” ಎಂದು ಸಿಎಂ ಅಭಿಪ್ರಾಯಪಟ್ಟರು. ಇನ್ನು ಅಧಿಕಾರಿಗಳ ಜೊತೆ ಮಾತನಾಡಲು ಹಳ್ಳಿಯ ಜನರು ಇಂದಿಗೂ ಹೆದರುತ್ತಾರೆ. ಈ ಭಯದಿಂದಾಗಿ ಅವರು ಮಧ್ಯವರ್ತಿಗಳನ್ನು (Agents) ಕರೆದುಕೊಂಡು ಬರುತ್ತಾರೆ. ಇದನ್ನು ತಪ್ಪಿಸಬೇಕು.

ಇದನ್ನೂ ಓದಿ: ಹೆಚ್ಚು ಮಾತನಾಡಬೇಡಿ, ಸುಮ್ಮನೆ ನಿಮ್ಮ ಕೆಲಸ ಮಾಡಿ: ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ

“ಗ್ಯಾರಂಟಿ ಯೋಜನೆಗಳ ಹಣ ನೇರವಾಗಿ ಜನರ ಅಕೌಂಟ್‌ಗೆ ಹೋಗುತ್ತಿರುವುದು ಮಧ್ಯವರ್ತಿಗಳ ಹಾವಳಿ ತಪ್ಪಿಸಲಿಕ್ಕಾಗಿಯೇ. ನಿಮ್ಮ ಕಚೇರಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಆರ್‌.ಟಿ.ಒ (RTO) ಕಚೇರಿಗಳಲ್ಲಿ ಏಜೆಂಟ್‌ಗಳಿಗೆ ಅವಕಾಶ ನೀಡಬೇಡಿ,” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಐಎಎಸ್ ಮತ್ತು ಐಪಿಎಸ್ ವ್ಯವಸ್ಥೆಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡ ಸಿಎಂ, ಸಮಾಜವಾದಿ ಚಿಂತಕರ ಮಾತುಗಳನ್ನು ಉಲ್ಲೇಖಿಸಿ ಆಡಳಿತದಲ್ಲಿ 33% ಸಿಇಒಗಳನ್ನು ಮಾಡುವ ಪ್ರಸ್ತಾಪದ ಬಗ್ಗೆ ಮಾತನಾಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ’ ಸಿನಿಮಾದಲ್ಲಿ ಕಾಲ ಭೈರವನಾಗಲು ಸುದೀಪ್ ಒಪ್ಪಿದ್ದು ಯಾಕೆ? ಸಿಕ್ತು ಉತ್ತರ – Kannada News | This is why Kichcha Sudeep agreed to do cameo in Dhruva Sarja starrer KD movie by Jogi Prem

ನಟ ಕಿಚ್ಚ ಸುದೀಪ್ (Kichcha Sudeep) ಅವರು ‘ಕೆಡಿ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಕಾಲ ಭೈರವ ಎಂಬುದು ಈ ಪಾತ್ರದ ಹೆಸರು. ಸುದೀಪ್ ನಟಿಸಿದ್ದಾರೆ ಎಂಬುದು ಗೊತ್ತಾದ ಕೂಡಲೇ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ. ಧ್ರುವ ಸರ್ಜಾ (Dhruva Sarja) ಅಭಿನಯದ ಈ ಸಿನಿಮಾದಲ್ಲಿ ಅನೇಕ ಸ್ಟಾರ್ ಕಲಾವಿದರು ಅಭಿನಯಿಸಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಅವರಂತಹ ಪ್ಯಾನ್ ಇಂಡಿಯಾ ಸ್ಟಾರ್​ಗಳು ಕೂಡ ‘ಕೆಡಿ’ ಸಿನಿಮಾದ (KD Movie) ಪಾತ್ರವರ್ಗದಲ್ಲಿ ಇದ್ದಾರೆ. ಅಷ್ಟಕ್ಕೂ ಸುದೀಪ್ ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದಲ್ಲಿ ‘ಕೆಡಿ’ ಸಿನಿಮಾ ಮೂಡಿಬಂದಿದೆ. ಸುದೀಪ್ ಅವರು ಪ್ರೇಮ್ ಬಗ್ಗೆ ಮಾತನಾಡಿದರು. ‘ಮೊದಲು ನಾನು ಪ್ರೇಮ್ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಅವರು ಸಿನಿಮಾ ಬಗ್ಗೆ ಅಪಾರ ಉತ್ಸಾಹ, ಪ್ರೀತಿ ಇರುವಂತಹ ನಿರ್ದೇಶಕ. ಆಗುಹೋಗುಗಳ ಮಧ್ಯೆ ಒಂದು ಒಳ್ಳೆಯ ಸಿನಿಮಾವನ್ನು ನೀಡಲು ಅವರು ಪ್ರಯತ್ನಿಸುತ್ತಾರೆ’ ಎಂದು ಸುದೀಪ್ ಮಾತು ಆರಂಭಿಸಿದರು.

‘ಪ್ರೇಮ್ ಅವರ ಪ್ರಯತ್ನವನ್ನು ನಾವು ಈಗ ನೋಡುತ್ತಿರುವುದಲ್ಲ. ಅವರ ಮೊದಲೇ ಸಿನಿಮಾದಿಂದಲೇ ನೋಡಿಕೊಂಡು ಬಂದಿದ್ದೇವೆ. ಇಂದಿನವರೆಗೂ ಅವರು ನನಗೆ ಒಬ್ಬ ವ್ಯಕ್ತಿಯಾಗಿ ಇಷ್ಟ. ವ್ಯಕ್ತಿ ಇಷ್ಟ ಆದಮೇಲೆ ಅವರಿಗಾಗಿ ನಾವು ಏನು ಬೇಕಾದರೂ ಮಾಡುತ್ತೇನೆ. ಹಾಗಿರುವಾಗ ಕಾಲ ಭೈರವ ಪಾತ್ರ ಒಂದು ಸಣ್ಣ ಸಂಗತಿ ಅಷ್ಟೇ. ಅದು ನಾವು ಅವರಿಗೆ ಮಾಡಿದ ಉಪಕಾರ ಅಲ್ಲ. ಅವರು ಸಂಪಾದಿಸಿದ ಪ್ರೀತಿ ಅದು’ ಎಂದು ಸುದೀಪ್ ಹೇಳಿದರು.

‘ಅವರು ನನಗೆ ಧನ್ಯವಾದ ಹೇಳುತ್ತಿದ್ದಾರೆ. ಆದರೆ ನಾನು ಏನೂ ಉಪಕಾರ ಮಾಡಿಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದು ಅದ್ದೂರಿಯಾದ ಸಿನಿಮಾ ಮೂಡಿಬರುತ್ತಿದೆ. ಅದರಲ್ಲಿ ನಾನು ಕೂಡ ಭಾಗವಾಗಲು ಅವಕಾಶ ಸಿಕ್ಕಿದೆ. ನನ್ನ ಸಹೋದರ ಧ್ರುವ ಸರ್ಜಾ ನಟನೆಯ ಇಷ್ಟು ದೊಡ್ಡ ಸಿನಿಮಾ ಸಿದ್ಧವಾಗುವಾಗ ಅದರಲ್ಲಿ ನಾನು ಕೂಡ ಇರಬೇಕು ಎನಿಸಿತು’ ಎಂದಿದ್ದಾರೆ ಕಿಚ್ಚ ಸುದೀಪ್.

ಇದನ್ನೂ ಓದಿ: ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್​ಗೆ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡ್ತಾರೆ ಈ ಅಭಿಮಾನಿ!

‘ನೀವೆಲ್ಲರೂ ಸಿನಿಮಾ ನೋಡಬೇಕು. ಚಿರು ಮತ್ತು ಧ್ರುವ ಅವರನ್ನು ಬಹಳ ವರ್ಷದಿಂದ ನಾನು ನೋಡಿಕೊಂಡು ಬಂದಿದ್ದೇನೆ. ಧ್ರುವ ಜೊತೆ ತೆರೆ ಹಂಚಿಕೊಳ್ಳಲು ನನಗೆ ಅವಕಾಶ ಸಿಕಿದ್ದು ಗ್ರೇಟ್. ಚಿರು ಜೊತೆಯೂ ನಾನು ಕೆಲಸ ಮಾಡಿದ್ದೆ. ಪ್ರೇಮ್ ಇದ್ದರೆ ಆ ಸೆಟ್​​ನಲ್ಲಿ ಅದ್ಭುತವಾದ ಎನರ್ಜಿ ಇರುತ್ತದೆ. ನಾನು ವಿಲನ್ ಸಿನಿಮಾ ಮಾಡಿದಾಗ ಅವರ ಜೊತೆ ಕೆಲಸ ಎಂಜಾಯ್ ಮಾಡಿದ್ದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ನ್ಯೂಜಿಲೆಂಡ್; ದೇಶಕ್ಕಾಗುವ ಪ್ರಯೋಜನಗಳೇನು? – Kannada News | India and New Zealand sign free trade agreement FTA How it will boost investment and opportunities

ನವದೆಹಲಿ, ಏಪ್ರಿಲ್ 27: ಭಾರತ ಮತ್ತು ನ್ಯೂಜಿಲೆಂಡ್​ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಹೊಸ ರಫ್ತು ಮಾರುಕಟ್ಟೆಗಳನ್ನು ತೆರೆಯುವ ಮತ್ತು ವ್ಯಾಪಾರ ನಿಯಮಗಳನ್ನು ಸರಾಗಗೊಳಿಸುವ ಮಹತ್ವದ ಕ್ರಮದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಮತ್ತು ನ್ಯೂಜಿಲೆಂಡ್‌ನ ವ್ಯಾಪಾರ ಮತ್ತು ಹೂಡಿಕೆ ಸಚಿವ ಟಾಡ್ ಮೆಕ್‌ಕ್ಲೇ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಮುಕ್ತ ವ್ಯಾಪಾರ ಒಪ್ಪಂದ ನ್ಯೂಜಿಲೆಂಡ್‌ಗೆ ಭಾರತದ ರಫ್ತಿನ ಶೇ.100ರಷ್ಟು ಸುಂಕ-ಮುಕ್ತ ಪ್ರವೇಶವನ್ನು ಒದಗಿಸುತ್ತದೆ. ಇದು ಎಲ್ಲಾ ಸುಂಕ ರೇಖೆಗಳು ಅಥವಾ ಉತ್ಪನ್ನ ವರ್ಗಗಳನ್ನು ಒಳಗೊಂಡಿದೆ. ಇದು ಜವಳಿ, ಉಡುಪು, ಚರ್ಮ, ಪಾದರಕ್ಷೆಗಳು, ರತ್ನಗಳು ಮತ್ತು ಆಭರಣಗಳು, ಎಂಜಿನಿಯರಿಂಗ್ ಸರಕುಗಳು ಮತ್ತು ಸಂಸ್ಕರಿಸಿದ ಆಹಾರಗಳಂತಹ ವಲಯಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಎಂಎಸ್‌ಎಂಇಗಳು ಮತ್ತು ಉದ್ಯೋಗವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ

ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಮ್ಮ ನಡುವೆ ವ್ಯಾಪಾರ ಮಾಡುವ ಗರಿಷ್ಠ ಸಂಖ್ಯೆಯ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕೊನೆಗೊಳಿಸಲು ಅಥವಾ ತೀವ್ರವಾಗಿ ಕಡಿಮೆ ಮಾಡಲು ಒಪ್ಪಿಕೊಂಡಿವೆ. ಭಾರತ-ನ್ಯೂಜಿಲೆಂಡ್ ವ್ಯಾಪಾರ ಒಪ್ಪಂದ ದ್ವಿಮುಖ ವಾಣಿಜ್ಯ ಮತ್ತು ಹೂಡಿಕೆಗಳಿಗೆ ಅಡ್ಡಿಯಾಗುವ ಅಥವಾ ಉತ್ತೇಜಿಸುವ ಅಡೆತಡೆಗಳನ್ನು ಕಡಿತಗೊಳಿಸಲಿದೆ.

“ಈ ಒಪ್ಪಂದವು ಭಾರತದಲ್ಲಿ 20 ಶತಕೋಟಿ ರೂ. ಹೂಡಿಕೆಯನ್ನು ಸುಗಮಗೊಳಿಸುತ್ತದೆ, ವ್ಯಾಪಾರ, ಸೇವೆಗಳು, ಹೂಡಿಕೆ, ನಾವೀನ್ಯತೆ, ಚಲನಶೀಲತೆ, ಕೃಷಿ ಉತ್ಪಾದಕತೆ ಮತ್ತು ಶಿಕ್ಷಣದಲ್ಲಿ ನಮ್ಮ ಸಹಕಾರವನ್ನು ಆಳಗೊಳಿಸುತ್ತದೆ. ಕೌಶಲ್ಯಪೂರ್ಣ ಪ್ರತಿಭೆಗಳು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗಗಳನ್ನು ಸೃಷ್ಟಿಸುತ್ತದೆ” ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಭಾರತಕ್ಕೆ ಮುಕ್ತ ವ್ಯಾಪಾರ ಒಪ್ಪಂದದ ಪ್ರಯೋಜನಗಳು:

– ಜವಳಿ, ಪ್ಲಾಸ್ಟಿಕ್ ವಸ್ತುಗಳು, ಚರ್ಮ ಮತ್ತು ಎಂಜಿನಿಯರಿಂಗ್ ಸರಕುಗಳಂತಹ ಕಾರ್ಮಿಕ-ತೀವ್ರ ವಲಯಗಳು ಸೇರಿದಂತೆ ಎಲ್ಲಾ ಭಾರತೀಯ ಸರಕುಗಳು ನ್ಯೂಜಿಲೆಂಡ್‌ನಲ್ಲಿ ಶೂನ್ಯ ಸುಂಕಕ್ಕೆ ಪ್ರವೇಶಿಸಲಿವೆ. ಇದರ ಸರಾಸರಿ ಆಮದು ಸುಂಕ ಕೇವಲ ಶೇ. 2.3ರಷ್ಟು ಆಗಿದೆ.

– ನ್ಯೂಜಿಲೆಂಡ್ 15 ವರ್ಷಗಳಲ್ಲಿ 20 ಶತಕೋಟಿ USD ಹೂಡಿಕೆ ಮಾಡಲು (FDI) ಬದ್ಧವಾಗಿದೆ.

-ಐಟಿ ಸೇವೆಗಳು, ವೃತ್ತಿಪರ ಸೇವೆಗಳು, ಶಿಕ್ಷಣ, ಹಣಕಾಸು ಸೇವೆಗಳು, ಪ್ರವಾಸೋದ್ಯಮ, ನಿರ್ಮಾಣ ಮತ್ತು ಇತರ ವ್ಯಾಪಾರ ಸೇವೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಹೆಚ್ಚಿನ ಮೌಲ್ಯದ ಸೇವಾ ವಲಯಗಳಲ್ಲಿ ಭಾರತ ಬದ್ಧತೆಗಳನ್ನು ಪಡೆದುಕೊಳ್ಳಲಿದೆ.

-FTA ಕೌಶಲ್ಯಪೂರ್ಣ ಉದ್ಯೋಗಗಳಲ್ಲಿ ಭಾರತೀಯ ವೃತ್ತಿಪರರಿಗೆ ಹೊಸ ತಾತ್ಕಾಲಿಕ ಉದ್ಯೋಗ ಪ್ರವೇಶ ವೀಸಾ ಮಾರ್ಗದ ಮೂಲಕ ಕೌಶಲ್ಯಪೂರ್ಣ ಉದ್ಯೋಗ ಮಾರ್ಗಗಳನ್ನು ತೆರೆಯುತ್ತದೆ.

-ಭಾರತದಿಂದ ಸುಂಕ-ಮುಕ್ತ ವೈನ್ ಮತ್ತು ಸ್ಪಿರಿಟ್‌ಗಳ ರಫ್ತುಗಳು, ಓಷಿಯಾನಿಯಾ ದೇಶದ ವೈನ್‌ಗಳು ರಿಯಾಯಿತಿ ಸುಂಕದಲ್ಲಿ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ. ಇದನ್ನು 10 ವರ್ಷಗಳ ಅವಧಿಯಲ್ಲಿ ಕಡಿಮೆ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs RCB Playing XI: ಟಾಸ್ ಗೆದ್ದ ಆರ್​ಸಿಬಿ; ಡೆಲ್ಲಿ ತಂಡದಲ್ಲಿ 3 ಬದಲಾವಣೆ – Kannada News | DC vs RCB Playing XI Delhi Capitals vs Royal Challengers Bengaluru Today IPL 2026 match Confirmed playing 11 details with name in Kannada

ಇಂದು ಐಪಿಎಲ್ 2026 (IPL 2026) ರ 39ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (DC vs RCB) ತಂಡವನ್ನು ಎದುರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಹಾಲಿ ಚಾಂಪಿಯನ್ ಆರ್‌ಸಿಬಿಗೆ ಸೇಡಿನ ಸಮರವಾಗಿದೆ. ಏಕೆಂದರೆ ಏಪ್ರಿಲ್ 18 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಉಭಯ ತಂಡಗಳ ಮೊದಲ ಪಂದ್ಯದಲ್ಲಿ ದೆಹಲಿ 6 ವಿಕೆಟ್‌ಗಳಿಂದ ಆರ್​​ಸಿಬಿಯನ್ನು ಸೋಲಿಸಿತ್ತು. ಹೀಗಾಗಿ ತವರಿನಲ್ಲಿ ಸೋಲಿನ ದವಡೆಗೆ ತಳ್ಳಿದ ಡೆಲ್ಲಿ ತಂಡವನ್ನು ಅವರ ತವರಿನಲ್ಲಿ ಮಣಿಸಲು ಆರ್​ಸಿಬಿ ರೆಡಿಯಾಗಿದೆ.

ಟಾಸ್ ಗೆದ್ದ ಆರ್​​ಸಿಬಿ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಆರ್​ಸಿಬಿ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದೆ.

ಮುಖಾಮುಖಿ ದಾಖಲೆ

ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇದುವರೆಗೆ 34 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಕೇವಲ 13 ಪಂದ್ಯಗಳನ್ನು ಗೆದ್ದಿದೆ. ಇದರರ್ಥ ಈ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೇಲುಗೈ ಸಾಧಿಸಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಸ್ಥಾನ

ಈ ಆವೃತ್ತಿಯಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿರುವ ಆರ್​​ಸಿಬಿ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಮೂರನ್ನು (6 ಅಂಕಗಳು) ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಪಂಜಾಬ್ ವಿರುದ್ಧದ ಸೋಲಿನಿಂದ ಬಳಲುತ್ತಿರುವ ಡೆಲ್ಲಿ ತಂಡವು ಮತ್ತೆ ಪುಟಿದೇಳಬೇಕಾದರೆ ತನ್ನ ಹಿಂದಿನ ಪ್ರದರ್ಶನವನ್ನು ಮರೆತು ಹೊಸದಾಗಿ ಆರಂಭಿಸಬೇಕಾಗುತ್ತದೆ.

ಡೆಲ್ಲಿ ತಂಡವು ಇಲ್ಲಿಯವರೆಗೆ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ, ಆದರೆ ಅದರ ಬೌಲರ್‌ಗಳು ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡಿಲ್ಲ. ಮತ್ತೊಂದೆಡೆ, ಆರ್‌ಸಿಬಿ ಸಾಕಷ್ಟು ಸಮತೋಲನದಿಂದ ಕೂಡಿದೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ, ಆರ್‌ಸಿಬಿಯ ಬ್ಯಾಟಿಂಗ್ ಘಟಕ ಬಲಿಷ್ಠವಾಗಿದೆ. ದೇವದತ್ ಪಡಿಕ್ಕಲ್ ಅವರ ಅತ್ಯುತ್ತಮ ಫಾರ್ಮ್ ಅದನ್ನು ಮತ್ತಷ್ಟು ಬಲಪಡಿಸಿದೆ. ಆರ್‌ಸಿಬಿಯ ಬ್ಯಾಟಿಂಗ್‌ ವಿಭಾಗದಂತೆ ಬೌಲರ್‌ಗಳು ಕೂಡ ನಿರ್ಣಾಯಕ ಕ್ಷಣಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ 11

ಆರ್​ಸಿಬಿ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಂ.

ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಮಂಗೇಶ್ ಯಾದವ್, ವಿಕಿ ಓಸ್ಟ್ವಾಲ್ ಮತ್ತು ವೆಂಕಟೇಶ್ ಅಯ್ಯರ್.

DC vs RCB IPL 2026 Live Score: ಟಾಸ್ ಗೆದ್ದ ಆರ್​​ಸಿಬಿ ಬೌಲಿಂಗ್ ಆಯ್ಕೆ

ಡೆಲ್ಲಿ ಕ್ಯಾಪಿಟಲ್ಸ್: ಸಾಹಿಲ್ ಪರಾಖ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ನಿತೀಶ್ ರಾಣಾ, ಸಮೀರ್ ರಿಜ್ವಿ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್(ನಾಯಕ), ದುಷ್ಮಂತ ಚಮೀರಾ, ಕುಲ್ದೀಪ್ ಯಾದವ್, ಟಿ ನಟರಾಜನ್, ಕೈಲ್ ಜೇಮಿಸನ್.

ಇಂಪ್ಯಾಕ್ಟ್ ಪ್ಲೇಯರ್: ಆಕಿಬ್ ನಬಿ, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ವಿಜಯ್ ಮತ್ತು ಅಭಿಷೇಕ್ ಪೊರೆಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:09 pm, Mon, 27 April 26

Source link

ಹೆಚ್ಚು ಮಾತನಾಡಬೇಡಿ, ಸುಮ್ಮನೆ ನಿಮ್ಮ ಕೆಲಸ ಮಾಡಿ: ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ – Kannada News | Umapathi Exposes Panchamasali Peetha Account Details; Somanna Calls During PC

ದಾವಣಗೆರೆ, ಏ.27: ಹರಿಹರದ ಪಂಚಮಸಾಲಿ ಪೀಠದ ಅಭಿವೃದ್ಧಿ ಕಾರ್ಯಗಳ ಲೆಕ್ಕಾಚಾರದ ವಿಚಾರವಾಗಿ ಉಂಟಾಗಿರುವ ಗೊಂದಲಗಳ ನಡುವೆ, ಉದ್ಯಮಿ ಮತ್ತು ಟ್ರಸ್ಟ್ ಪ್ರಮುಖರಾದ ಬಿ.ಸಿ. ಉಮಾಪತಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಪೀಠದ ಸಂಪೂರ್ಣ ಆದಾಯ ಮತ್ತು ವೆಚ್ಚದ ಲೆಕ್ಕವನ್ನು ಸಾರ್ವಜನಿಕವಾಗಿ ಮಂಡಿಸಿದರು. ವಿಶೇಷವೆಂದರೆ, ಲೆಕ್ಕ ನೀಡುವ ಸಂದರ್ಭದಲ್ಲೇ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಉಮಾಪತಿ ಅವರಿಗೆ ಕರೆ ಮಾಡಿ ಸಂಧಾನದ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಸುದ್ದಿಗೋಷ್ಠಿ ಆರಂಭವಾಗುತ್ತಿದ್ದಂತೆಯೇ ವಿ. ಸೋಮಣ್ಣ ಅವರು ಉಮಾಪತಿ ಅವರಿಗೆ ಕರೆ ಮಾಡಿದರು. “ಹೆಚ್ಚು ಮಾತನಾಡಬೇಡಿ, ಸುಮ್ಮನೆ ನಿಮ್ಮ ಕೆಲಸ ಮಾಡಿ” ಎಂದು ಸೋಮಣ್ಣ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಉಮಾಪತಿ, “ನನ್ನ ಮರ್ಯಾದೆಗಿಂತ ಸಮಾಜದ ಮರ್ಯಾದೆ ಮುಖ್ಯ. ಸಮಾಜದ ಮುಂದೆ ಸತ್ಯ ಹೇಳದಿದ್ದರೆ ನೋವಾಗುತ್ತದೆ. ಅವರು (ವಚನಾನಂದ ಶ್ರೀಗಳು) ನಾನೇನೋ ಹಣ ತಿಂದಿದ್ದೇನೆ ಎಂಬಂತೆ ಮಾತನಾಡುತ್ತಿದ್ದಾರೆ, ಹಾಗಾಗಿ ಲೆಕ್ಕ ಕೊಡುವುದು ಅನಿವಾರ್ಯ” ಎಂದು ಉತ್ತರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಟ್ಯಂತರ ಮೌಲ್ಯದ ಜಮೀನು ಕಬಳಿಕೆಗೆ ಯತ್ನ: ಬದುಕಿರುವಾಗಲೇ ನಿವೃತ್ತ ಉದ್ಯೋಗಿಯ ಚಟ್ಟ ಕಟ್ಟಿದ ಭೂಗಳ್ಳರು – Kannada News | Bengaluru Land Scam: Attempt to HAL retired employee Land Grabbed with fake death certificate

ದೇವನಹಳ್ಳಿ, ಏಪ್ರಿಲ್​ 27: ಬೆಂಗಳೂರು ಸುತ್ತಮುತ್ತ ಜಮೀನಿನ (Land Scam) ಬೆಲೆ ಕೋಟಿ ಕೋಟಿ ದಾಟುತ್ತಿದ್ದಂತೆ ಭೂಗಳ್ಳರ ಅಟ್ಟಹಾಸ ಮಿತಿಮೀರಿದೆ. ಕಷ್ಟಪಟ್ಟು ದುಡಿದ ಹಣದಲ್ಲಿ ನಿವೃತ್ತ ಜೀವನಕ್ಕೆ ಆಸರೆಯಾಗಲೆಂದು ಖರೀದಿಸಿದ್ದ ಜಮೀನಿನ ಮೇಲೆ ಕಣ್ಣಾಕಿದ ಕಿಡಿಗೇಡಿಗಳು, ಮಾಲೀಕ ಬದುಕಿರುವಾಗಲೇ ಆತ ಸತ್ತು ಹೋಗಿದ್ದಾನೆ ಎಂದು ನಕಲಿ ಮರಣ ಪತ್ರ (fake death certificate) ಸೃಷ್ಟಿಸಿದ್ದಾರೆ. ಇಷ್ಟೇ ಅಲ್ಲದೆ, ಈ ಅಕ್ರಮಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದು, ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಯರ್ರಮುದ್ದನಹಳ್ಳಿಯಲ್ಲಿರುವ ಈ 40 ಎಕರೆ ಕೆಂಪು ಮಣ್ಣಿನ ಭೂಮಿ ನೋಡಲು ಅತ್ಯಂತ ಫಲವತ್ತಾಗಿದೆ. ಇದೇ ಈ ಎಲ್ಲ ಅವಾಂತರಗಳಿಗೆ ಮೂಲ. ಈ ಜಮೀನಿನ ಮಾಲೀಕ ರಘುರಾಮಯ್ಯ ಅವರು ಹೆಚ್‌ಎಎಲ್ ನಿವೃತ್ತ ಉದ್ಯೋಗಿ. ಮುಂದಿನ ಜೀವನದ ಭದ್ರತೆಗಾಗಿ ಅವರು ಈ ಭೂಮಿಯನ್ನು ಖರೀದಿಸಿದ್ದರು. ಆದರೆ ಇಂದು ಇದೇ ಭೂಮಿ ಅವರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಮಹಿಳಾ ಶೌಚಾಲಯದಲ್ಲಿ ಭ್ರೂಣ ಪತ್ತೆ; ಬೆಚ್ಚಿಬಿದ್ದ ಸಿಬ್ಬಂದಿ!

ಈ ಹಿಂದೆ ಜಮೀನು ಮಾರಾಟ ಮಾಡಲು ಕೆಲ ಬ್ರೋಕರ್ಗಳಿಗೆ ಜಮೀನು ದಾಖಲೆ ನೀಡಿದ್ದು, ನಂತರ ಮಾರಾಟ ಮಾಡುವುದು ಬೇಡ ಅಂತ ಕೈಬಿಟ್ಟಿದ್ದರು. ಇದೀಗ ಮಾಲೀಕ ಮಾರಾಟ ಮಾಡಲ್ಲ ಅಂದರೂ ಬೆಂಬಿಡದ ಕೆಲ ಭೂಗಳ್ಳರು ಬದುಕಿರುವ ರಘುರಾಮಯ್ಯರನ್ನ 1995ರಲ್ಲೇ ಸಾವನ್ನಪಿರುವುದಾಗಿ ನಕಲಿ ಡೆತ್ ಸರ್ಟಿಫಿಕೇಟ್ ತಯಾರಿಸಿ ಜಮೀನಿಗೆ ನಕಲಿ ದಾಖಲೆ ಮಾಡಿ ಕಿರಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಅಧಿಕಾರಿಗಳಿಂದ 40 ಲಕ್ಷ ರೂ ಲಂಚಕ್ಕೆ ಬೇಡಿಕೆ: ರಘುರಾಮಯ್ಯ ಗಂಭೀರ ಆರೋಪ

ಇನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಎಸಿ (AC) ಕಚೇರಿಯಲ್ಲಿ ಮುಟೇಷನ್ ರದ್ದುಪಡಿಸಲಾಗಿದೆ.  ಇದನ್ನು ಪ್ರಶ್ನಿಸಲು ಹೋದರೆ ಅಧಿಕಾರಿಗಳು 40 ಲಕ್ಷ ರೂ ಲಂಚ ಕೇಳುತ್ತಿದ್ದಾರೆ ಎಂದು ರಘುರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಒಮ್ಮೆ ಮುಟೇಷನ್ ಆದ ಮೇಲೆ ರದ್ದು ಮಾಡಲು ಹೇಗೆ ಸಾಧ್ಯ ಎಂದು ಕೇಳಿದರೆ ಸಮರ್ಪಕ ಉತ್ತರ ನೀಡದೆ ಅಲೆದಾಡಿಸುತ್ತಿದ್ದಾರೆ. ರಾತ್ರಿ ವೇಳೆ ಭೂಗಳ್ಳರು ಜಮೀನಿನ ಬಳಿ ಬಂದು ಬೆದರಿಕೆ ಹಾಕುತ್ತಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂತ್ರಸ್ತ ಕುಟುಂಬ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ: ಕಲಾಪ್ರೇಮಿಗಳ ಮನಗೆದ್ದ ಜೌಮ್ ಪ್ಲೆನ್ಸಾ ಶಿಲ್ಪಕಲೆ

ಬೆಂಗಳೂರು ಗ್ರಾಮಾಂತರದಲ್ಲಿ ಭೂ ಅಕ್ರಮಗಳು ಮಿತಿಮೀರುತ್ತಿವೆ. ನ್ಯಾಯ ಕೊಡಿಸಬೇಕಾದ ಅಧಿಕಾರಿಗಳೇ ಲಂಚಕ್ಕೆ ಕೈಯೊಡ್ಡುತ್ತಿರುವ ಆರೋಪಗಳು ಕೇಳಿಬಂದಿದ್ದು, ಈ ಕುರಿತು ಜಿಲ್ಲಾಡಳಿತ ಹಾಗೂ ಕಂದಾಯ ಸಚಿವರು ಪರಿಶೀಲಿಸಿ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅತ್ತೆ- ಸೊಸೆಯ ನಡುವಿನ ಜಗಳಕ್ಕೆ ಕಾರಣಗಳೇನು? ಇವರಿಬ್ಬರ ಸಂಬಂಧವನ್ನು ಸರಿಪಡಿಸುವುದು ಹೇಗೆ? – Kannada News | Reasons for conflict between mother in law and daughter in law? How to mend their relationship?

ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧವು (relationship) ಅತ್ಯಂತ ಸೂಕ್ಷ್ಮ ಮತ್ತು ಸೂಕ್ಷ್ಮವಾದದದ್ದು, ಈ ಸಂಬಂಧದಲ್ಲಿ ಸಣ್ಣದೊಂದು ತಪ್ಪು ನಡೆದರೂ ಕೂಡ ಇದು ಇಡೀ ಸಂಬಂಧದ ಸಾರವನ್ನೇ ಬದಲಾಯಿಸಬಹುದು. ಇದೇ ಕಾರಣಕ್ಕೇನೋ ಅತ್ತೆ ಸೊಸೆ ಮಧ್ಯೆ ಸಣ್ಣಪುಟ್ಟ ವಿಚಾರಗಳಿಗೂ ಮನಸ್ತಾಪ ಏರ್ಪಡೋದು. ಯಾವ ಮನೆಯಲ್ಲಿ ಅತ್ತೆ ಸೊಸೆ ಜಗಳವಿರುತ್ತದೆಯೋ ಆ ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರೋದಿಲ್ಲ. ಆದ ಕಾರಣದಿಂದ ಇಬ್ಬರೂ ಹೊಂದಿಕೊಂಡು ಜೀವನ ನಡೆಸುತ್ತಾ ಹೋಗಬೇಕಾಗುತ್ತದೆ. ಹೀಗಿರುವಾಗ ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧವನ್ನು ಬಲಪಡಿಸಲು, ಇವರಿಬ್ಬರ ನಡುವೆ ಜಗಳಗಳಯ ನಡೆಯಲು ಕಾರಣಗಳೇನು, ಅವುಗಳನ್ನು ಯಾವ ರೀತಿ ಸರಿಪಡಿಸಬಹುದು ಎಂಬುದನ್ನು ನೋಡೋಣ ಬನ್ನಿ.

ಅತ್ತೆ-ಸೊಸೆ ಮಧ್ಯೆ ಜಗಳಗಳು ನಡೆಯಲು ಕಾರಣಗಳೇನು?

ಮಗನ ವಿಚಾರ: ಹಲವು ಬಾರಿ, ಮಗನ ವಿಚಾರವಾಗಿ ಅತ್ತೆ ಮತ್ತು ಸೊಸೆಯ ನಡುವೆ ಸಂಘರ್ಷ ನಡೆಯುತ್ತದೆ. ಮದುವೆಯ ನಂತರ ತನ್ನ ಮಗ ಬದಲಾಗಿದ್ದಾನೆ, ಯಾವಾಗಲೂ ಹೆಂಡತಿಯ ಮಾತನ್ನೇ ಕೇಳುತ್ತಾಳೆ ಎಂದು ಅತ್ತೆ ಕೋಪ ಮಾಡಿಕೊಂಡರೆ, ಸೊಸೆಯಾದವಳು ನನ್ನ ಗಂಡ ಯಾವಾಗಲು ನನಗಿಂತ ಆತನ ತಾಯಿಯ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಾನೆ ಎಂದುಕೊಳ್ಳುತ್ತಾಳೆ. ಈ ವಿಚಾರವಾಗಿ ಅನೇಕ ಮನೆಗಳಲ್ಲಿ ಜಗಳಗಳು ನಡೆಯುತ್ತವೆ.

 ಮನೆಕೆಲಸದ ವಿಚಾರವಾಗಿ: ಮನೆ ಕೆಲಸದ ವಿಚಾರವಾಗಿಯೂ ಅತ್ತೆ ಸೊಸೆಯ ಮಧ್ಯೆ ಮನಸ್ತಾಪ ಏರ್ಪಡುತ್ತದೆ.  ಇತ್ತೀಚಿನ ದಿನಗಳಲ್ಲಿ ಶೇಕಡ 80 ರಷ್ಟು ಯುವತಿಯರು ಮನೆಯ ಹೊರಗಡೆ ಕೆಲಸ ಮಾಡುವವರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಮನೆಕೆಲಸದಲ್ಲಿ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಅತ್ತೆ ಸೊಸೆಯ ಮೇಲೆ ಕೋಪ ಮಾಡುತ್ತಾರೆ. ಈ ಪರಿಸ್ಥಿತಿಯನ್ನು ತಕ್ಷಣ ಪರಿಹರಿಸುವುದು ಉತ್ತಮ.

ಆಗಾಗ್ಗೆ ತವರು ಮನೆಗೆ ಭೇಟಿ ನೀಡುವುದು: ಅತ್ತೆಗೆ ಸೊಸೆ ಮೇಲೆ ಎಷ್ಟೇ ಪ್ರೀತಿ ಇದ್ದರೂ, ಸೊಸೆ ಆಗಾಗ್ಗೆ ತನ್ನ ಹೆತ್ತವರ ಮನೆಗೆ ಹೋಗುವುದು ಅತ್ತೆಗೆ ಇಷ್ಟವಾಗುವುದಿಲ್ಲ. ಇದು ಕೂಡ ಅತ್ತೆ ಸೊಸೆಯ ನಡುವೆ ಅಂತರ ಹೆಚ್ಚಲು ಒಂದು ಕಾರಣ.

ಇತರರೊಂದಿಗೆ ಹೋಲಿಕೆ ಮಾಡುವುದು: ಕೆಲಸದ ವಿಚಾರದಲ್ಲಿ, ಮನೆ ನೋಡಿಕೊಳ್ಳುವ ವಿಚಾರದಲ್ಲಿ ಅತ್ತೆ ಸೊಸೆಯನ್ನು ಇತತರೊಂದಿಗೆ ಹೋಲಿಕೆ ಮಾಡುತ್ತಾರೆ. ಅದೇ ರೀತಿ ಸೊಸೆ ಕೂಡ ತನ್ನ ಅತ್ತೆಯನ್ನು ಇತರರೊಂದಿಗೆ ಹೋಲಿಕೆ ಮಾಡುತ್ತಾರೆ. ಇದು ಇವರಿಬ್ಬರ ನಡುವೆ ಸಂಘರ್ಷ ಉಂಟಾಗಲು ಕಾರಣವಾಗುತ್ತದೆ.

ಪೀಳಿಗೆಗಳ ಅಂತರ : ಹಿರಿಯರ ಜೀವನಶೈಲಿ ಮತ್ತು ಹೊಸ ಪೀಳಿಗೆಯ ಆಧುನಿಕ ಚಿಂತನೆಯ ನಡುವಿನ ಸಂಘರ್ಷವು ಆಗಾಗ್ಗೆ ಅತ್ತೆ ಸೊಸೆಯ ವಿವಾದಗಳಿಗೆ ಕಾರಣವಾಗುತ್ತದೆ. ಇದಲ್ಲದೆ ಸಂವಹನದ ಕೊರತೆ, ಹೊಂದಾಣಿಕೆ, ಪ್ರೈವೆಸಿ  ಇಲ್ಲದಿರುವುದು ಇವೆಲ್ಲವೂ ಅತ್ತೆ ಸೊಸೆಯ ಸಂಬಂಧದಲ್ಲಿ ಅಂತರ ಸೃಷ್ಟಿಯಾಗಲು ಮುಖ್ಯ ಕಾರಣ.

ಇದನ್ನೂ ಓದಿ: ಪತಿ ಪತ್ನಿಯರು ಸರಳ ಸೂತ್ರ ಪಾಲಿಸಿದರೆ ದಾಂಪತ್ಯ ಜೀವನ ಹಾಲು-ಜೇನಿನಂತೆ ಇರುವುದು ಖಂಡಿತ

ಅತ್ತೆ ಮತ್ತು ಸೊಸೆಯ ನಡುವೆ ಉತ್ತಮ ಸಂಬಂಧವನ್ನು ಹೇಗೆ ಕಾಪಾಡಿಕೊಳ್ಳುವುದು?

ಪರಸ್ಪರ ಗೌರವಿಸಿ: ಅತ್ತೆ ಮನೆಯ ಅಡಿಪಾಯ ಎಂದು ಸೊಸೆ ಅರ್ಥಮಾಡಿಕೊಳ್ಳಬೇಕು ಮತ್ತು ಸೊಸೆ ಈಗ ಆ ಮನೆಯ ಅವಿಭಾಜ್ಯ ಅಂಗ ಎಂದು ಅತ್ತೆ ಒಪ್ಪಿಕೊಳ್ಳಬೇಕು. ಈ ಹೊಂದಾಣಿಕೆ ಮತ್ತು ಪರಸ್ಪರ ಗೌರವ ಅತ್ತೆ ಸೊಸೆಯ ಬಂಧವನ್ನು ಬಿಗಿಗೊಳಿಸುತ್ತದೆ.

ತಾಳ್ಮೆ ಮತ್ತು ಸಂಯಮ: ಯಾವುದೇ ಸಮಸ್ಯೆಗೆ ಕೋಪ ಪರಿಹಾರವಲ್ಲ. ವಿವಾದ ಹೆಚ್ಚಾದರೆ ಮೌನವಾಗಿರುವುದು ಜಾಣತನ. ಮನಸ್ತಾಪ ಏರ್ಪಟ್ಟಾಗ ಮಾತಿಗೆ ಮಾತು ಬೆಳೆಸಿ ಜಗಳವನ್ನು ದೊಡ್ಡದು ಮಾಡುವ ಬದಲು ತಾಳ್ಮೆಯಿಂದ ಮೌನವಾಗಿರಿ. ಇದರಿಂದ ಸಂಬಂದ ಹಳಸುವುದಿಲ್ಲ.

ಒಟ್ಟಿಗೆ ಸಮಯ ಕಳೆಯಿರಿ: ಬ್ಯುಸಿ ಜೀವನದ ಹೊರತಾಗಿಯೂ, 15-20 ನಿಮಿಷಗಳ ಕಾಲ ಅತ್ತೆ ಸೊಸೆ ಒಟ್ಟಿಗೆ ಕುಳಿತು ಚಹಾ ಕುಡಿಯುತ್ತಾ, ಟಿವಿ ನೋಡುತ್ತಾ, ಮಾತನಾಡುತ್ತಾ ಜೊತೆಯಾಗಿ ಸಮಯ ಕಳೆಯಬೇಕು. ಅಲ್ಲದೆ ಶಾಪಿಂಗ್‌ಗೆ ಜೊತೆಯಾಗಿ ಹೋಗಬೇಕು. ಇದರಿಂದ ಅತ್ತೆ ಸೊಸೆಯ ಮಧ್ಯೆ ಹೊಂದಾಣಿಕೆ ಹೆಚ್ಚಾಗುತ್ತದೆ.

ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಅತ್ತೆ-ಸೊಸೆ ಮಧ್ಯೆ ಜಗಳಗಳು ಏರ್ಪಡುವುದಿಲ್ಲ ಮತ್ತು ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link