Category Archives: Blog

Your blog category

ನೀತಿ ಆಯೋಗಕ್ಕೆ ಹೊಸ ಉಪಾಧ್ಯಕ್ಷರು; ಅಶೋಕ್ ಕುಮಾರ್ ಲಾಹಿರಿ ಯಾರು? – Kannada News | Ashok Lahiri NITI Aayog Vice Chairman: Eminent Economist to Lead Think Tank

ಪ್ರಧಾನಿ ಮೋದಿ ಜೊತೆ ನೀತಿ ಆಯೋಗ್ ನೂತನ ಉಪಾಧ್ಯಕ್ಷ ಅಶೋಕ್ ಲಾಹಿರಿImage Credit source: PTI

ನವದೆಹಲಿ, ಏಪ್ರಿಲ್ 26: ನೀತಿ ಆಯೋಗಕ್ಕೆ ಹೊಸ ಉಪಾಧ್ಯಕ್ಷರಾಗಿ (ವೈಸ್ ಛೇರ್ಮನ್) ಅಶೋಕ್ ಕುಮಾರ್ ಲಾಹಿರಿಯವರು (Ashok Kumar Lahiri) ನೇಮಕವಾಗಿದ್ದಾರೆ. ಹಾಲಿ ಉಪಾಧ್ಯಕ್ಷರಾಗಿರುವ ಸುಮನ್ ಬೆರಿ (Suman Bery) ಅವರ ಸ್ಥಾನವನ್ನು ಲಾಹಿರಿ ತುಂಬಲಿದ್ದಾರೆ. ಭಾರತ ಸರ್ಕಾರದ ನೀತಿಯನ್ನು ರೂಪಿಸುವ ಚಿಂತನ ವೇದಿಕೆಯಂತಿರುವ ನೀತಿ ಆಯೋಗ್​ನಲ್ಲಿ ಉಪಾಧ್ಯಕ್ಷ ಸ್ಥಾನ ಮಹತ್ವದ್ದು. ಪ್ರಧಾನಿಗಳು ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಆದರೆ, ಚಿಂತನ ಮಂಥನ, ನೀತಿ ಶಿಫಾರಸು ಇವೆಲ್ಲವೂ ಉಪಾಧ್ಯಕ್ಷರ ಕೈಯಲ್ಲಿರುತ್ತದೆ.

ಅಶೋಕ್ ಕುಮಾರ್ ಲಾಹಿರಿ ಯಾರು?

ಅಶೋಕ್ ಕುಮಾರ್ ಲಾಹಿರಿ ಅವರು ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದು, ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇವರು ಈ ಹಿಂದೆ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ (CEA) ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳದ ಬಾಲೂರಘಾಟ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದರು.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ ಸತತ 3 ವಾರ ಏರಿಕೆ; ಒಟ್ಟು ರಿಸರ್ವ್ಸ್ 703 ಬಿಲಿಯನ್ ಡಾಲರ್

ಅವರ ಹಿನ್ನೆಲೆ ಮತ್ತು ಸಾಧನೆಗಳು

2002 ರಿಂದ 2007 ರವರೆಗೆ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಗಳಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇವರು 15ನೇ ಹಣಕಾಸು ಆಯೋಗದ ಸದಸ್ಯರಾಗಿಯೂ ಪ್ರಮುಖ ಪಾತ್ರ ವಹಿಸಿದ್ದರು.

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಪಡೆದಿರುವ ಇವರು, ಆರ್ಥಿಕ ನೀತಿ ನಿರೂಪಣೆಯಲ್ಲಿ ತಜ್ಞರೆಂದು ಪರಿಗಣಿಸಲ್ಪಟ್ಟಿದ್ದಾರೆ.

ನೀತಿ ಆಯೋಗದ ಹಿಂದಿನ ಉಪಾಧ್ಯಕ್ಷರು

ನೀತಿ ಆಯೋಗವು 2015 ರಲ್ಲಿ ಸ್ಥಾಪನೆಯಾದ ನಂತರ ಈ ಕೆಳಗಿನ ಪ್ರಮುಖರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ:

  1. ಅರವಿಂದ್ ಪನಗರಿಯಾ: ನೀತಿ ಆಯೋಗದ ಮೊದಲ ಉಪಾಧ್ಯಕ್ಷರು (2015-2017).
  2. ರಾಜೀವ್ ಕುಮಾರ್: ಎರಡನೇ ಉಪಾಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದರು (2017-2022).
  3. ಸುಮನ್ ಬೆರಿ: ಇವರು ಅಶೋಕ್ ಕುಮಾರ್ ಲಾಹಿರಿ ಅವರಿಗಿಂತ ಮೊದಲು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ರುಪಾಯಿ ಮೌಲ್ಯ ಕುಸಿತ; ಆತಂಕ ಪಡಬೇಕಿಲ್ಲ; ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಅವಕಾಶ: ಸಿಇಎ ಅನಂತನಾಗೇಶ್ವರನ್

ನೀತಿ ಆಯೋಗದ ಬಗ್ಗೆ

ನೀತಿ ಆಯೋಗವು (National Institution for Transforming India) ಭಾರತ ಸರ್ಕಾರದ ನೀತಿ ನಿರೂಪಣೆಯ ‘ಥಿಂಕ್ ಟ್ಯಾಂಕ್’ ಆಗಿ ಕಾರ್ಯನಿರ್ವಹಿಸುತ್ತದೆ. ಪ್ರಧಾನಮಂತ್ರಿಯವರು ಇದರ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ ಮತ್ತು ಉಪಾಧ್ಯಕ್ಷರನ್ನು ಪ್ರಧಾನಮಂತ್ರಿಯವರೇ ನೇಮಕ ಮಾಡುತ್ತಾರೆ.

ಅಶೋಕ್ ಕುಮಾರ್ ಲಾಹಿರಿಯವರ ನೇಮಕವು ದೇಶದ ಆರ್ಥಿಕ ಯೋಜನೆಗಳು ಮತ್ತು ಸುಧಾರಣೆಗಳಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Mann Ki Baat: ಭಾರತದ ಅಭಿವೃದ್ಧಿಗೆ ಸೌರ ಹಾಗೂ ಪವನ ಶಕ್ತಿ ಬಹಳ ಮುಖ್ಯ: ಪ್ರಧಾನಿ ಮೋದಿ – Kannada News | Mann Ki Baat Focuses on Census Drive and Buddha’s Teachings

ನವದೆಹಲಿ, ಏಪ್ರಿಲ್ 26: ಭಾರತದ ಅಭಿವೃದ್ಧಿಗೆ ಸೌರಶಕ್ತಿ ಮತ್ತು ಪವನ ಶಕ್ತಿ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ನಾವು ವಿದ್ಯುತ್ ಅನ್ನು ಸಂರಕ್ಷಿಸಬೇಕು ಮತ್ತು ಸೌರ, ಪವನ ಶಕ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಮನ್​ಕಿ ಬಾತ್​ನಲ್ಲಿ ಹೇಳಿದ್ದಾರೆ.

ದಕ್ಷಿಣ ಅಮೆರಿಕದ ಚಿಲಿಯಲ್ಲಿರುವ ಒಂದು ಸಂಸ್ಥೆಯು ಭಗವಾನ್ ಬುದ್ಧನ ಬೋಧನೆಗಳನ್ನು ಪ್ರಚಾರ ಮಾಡುತ್ತಿದೆ. ಲಡಾಖ್ ಮೂಲದ ಡ್ರುಬ್ಬನ್ ಓಟ್ಜರ್ ರಿನ್‌ಪೋಚೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು. 2027ರ ಜನಗಣತಿಯನ್ನು ದೇಶದ ಅಭಿವೃದ್ಧಿಯ ದಿಕ್ಸೂಚಿ ಎಂದು ಕರೆದ ಪ್ರಧಾನಿ, ಇದು ಕೇವಲ ಸರ್ಕಾರಿ ಕೆಲಸವಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಒತ್ತಿ ಹೇಳಿದರು.

ಈ ಬಾರಿ ಗಣತಿದಾರರು ಮೊಬೈಲ್ ಆಪ್ ಮೂಲಕ ಮನೆ ಮನೆಗೆ ಭೇಟಿ ನೀಡಲಿದ್ದಾರೆ.ಗಣತಿದಾರರು ಮನೆಗೆ ಬರುವ 15 ದಿನಗಳ ಮೊದಲೇ ನಾಗರಿಕರು ತಮ್ಮ ಮಾಹಿತಿಯನ್ನು ಸ್ವತಃ ಆನ್‌ಲೈನ್‌ನಲ್ಲಿ ದಾಖಲಿಸಬಹುದು. ಪ್ರಕ್ರಿಯೆ ಮುಗಿದ ನಂತರ ಸಿಗುವ ವಿಶೇಷ ಐಡಿಯನ್ನು ಸಿಬ್ಬಂದಿಗೆ ತೋರಿಸಿದರೆ ಸಾಕು.

ಅಮೆರಿಕ-ಇರಾನ್ ಯುದ್ಧದಂತಹ ಜಾಗತಿಕ ಅನಿಶ್ಚಿತತೆಗಳ ನಡುವೆ, ಪ್ರಧಾನಿ ಮೋದಿ ಅವರು ಭಗವಾನ್ ಬುದ್ಧನ ಆದರ್ಶಗಳನ್ನು ಸ್ಮರಿಸಿದರು. ಇದು ಯುದ್ಧದ ಯುಗವಲ್ಲ ಎಂದು ಪುನರುಚ್ಚರಿಸಿದ ಅವರು, ಶಾಂತಿ ಮತ್ತು ಅಹಿಂಸೆಯ ಮೂಲಕವೇ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಮತ್ತಷ್ಟು ಓದಿ:ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಮಿಳುನಾಡಿನ ಕಲ್ಪಾಕಂನಲ್ಲಿರುವ ‘ಫಾಸ್ಟ್ ಬ್ರೀಡರ್ ರಿಯಾಕ್ಟರ್’ ನಿರ್ಣಾಯಕ ಹಂತವನ್ನು ತಲುಪಿರುವುದನ್ನು ಪ್ರಧಾನಿ ಶ್ಲಾಘಿಸಿದರು.”ನಮ್ಮ ಪರಮಾಣು ವಿಜ್ಞಾನಿಗಳು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ. ಇದು ನಾಗರಿಕ ಪರಮಾಣು ಪ್ರೋಗ್ರಾಮ್​ನ ಅತ್ಯಂತ ಐತಿಹಾಸಿಕ ಮೈಲಿಗಲ್ಲು ಎಂದು ವಿಜ್ಞಾನಿಗಳನ್ನು ಅಭಿನಂದಿಸಿದರು.

ನಾವು ತಂತ್ರಜ್ಞಾನದ ಅದ್ಭುತವನ್ನು ವೀಕ್ಷಿಸುತ್ತಿದ್ದೇವೆ; ಇದು ನಮ್ಮ ಭೂತಕಾಲವನ್ನು ವರ್ತಮಾನದೊಂದಿಗೆ ಸರಾಗವಾಗಿ ಸಂಪರ್ಕಿಸುತ್ತದೆ. ಈ ತಿಂಗಳ ಆರಂಭದಲ್ಲಿ ಫ್ರಾನ್ಸ್‌ನ ಬೋರ್ಡೆಕ್ಸ್‌ನಲ್ಲಿ ಯುರೋಪಿಯನ್ ಬಾಲಕಿಯರ ಗಣಿತ ಒಲಿಂಪಿಯಾಡ್ ನಡೆದಿತ್ತು, ಅಲ್ಲಿ ಭಾರತೀಯ ವಿದ್ಯಾರ್ಥಿಗಳು ಅಸಾಧಾರಣ ಪ್ರದರ್ಶನ ನೀಡಿದರು ಎಂದು ಪ್ರಧಾನಿ ಮೋದಿ ಹೇಳಿದರು. ಈ ಸ್ಪರ್ಧೆಯಲ್ಲಿ ಭಾರತೀಯ ತಂಡವು ವಿಶ್ವದಲ್ಲಿ ಆರನೇ ಸ್ಥಾನ ಪಡೆದಿದ್ದು, ಇದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ: ಕಲಾಪ್ರೇಮಿಗಳ ಮನಗೆದ್ದ ಜೌಮ್ ಪ್ಲೆನ್ಸಾ ಶಿಲ್ಪಕಲೆ – Kannada News | ‘Bengaluru’s Soul’: Jaume Plensa’s Stunning 16ft Sculpture Unveiled at KIA Terminal 2, Art at Bangalore Airport

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ

ಬೆಂಗಳೂರು, ಏಪ್ರಿಲ್ 26: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 (T2) ಈಗ ಮತ್ತೊಂದು ಜಾಗತಿಕ ಆಕರ್ಷಣೆಗೆ ಸಾಕ್ಷಿಯಾಗಿದೆ. ವಿಶ್ವಪ್ರಸಿದ್ಧ ಸ್ಪ್ಯಾನಿಷ್ ಕಲಾವಿದ ಜೌಮ್ ಪ್ಲೆನ್ಸಾ ಅವರು ಕೆತ್ತಿರುವ 16 ಅಡಿ ಎತ್ತರದ ‘ಬೆಂಗಳೂರಿನ ಆತ್ಮ’ (Bengaluru’s Soul) ಎಂಬ ಭವ್ಯ ಶಿಲ್ಪಕಲೆಯು ಶನಿವಾರ ಸಂಜೆ ಅನಾವರಣಗೊಂಡಿದ್ದು, ಪ್ರಯಾಣಿಕರ ಪಾಲಿಗೆ ಹೊಸ ‘ಇನ್‌ಸ್ಟಾಗ್ರಾಮ್ ಸ್ಪಾಟ್’ ಆಗಿ ಹೊರಹೊಮ್ಮಿದೆ.

ವೈವಿಧ್ಯತೆಯ ಪ್ರತಿಬಿಂಬ

ಈ ಬೃಹತ್ ಕಲಾಕೃತಿಯು ಕನ್ನಡ, ಅರೇಬಿಕ್, ಚೈನೀಸ್, ತಮಿಳು, ಕೊರಿಯನ್, ಗ್ರೀಕ್, ಹಿಂದಿ ಮತ್ತು ಲ್ಯಾಟಿನ್ ಸೇರಿದಂತೆ ವಿಶ್ವದ ವಿವಿಧ ಭಾಷೆಗಳ ಅಕ್ಷರಗಳನ್ನು ಹಾಗೂ ಗಣಿತದ ಚಿಹ್ನೆಗಳನ್ನು ಒಳಗೊಂಡಿದೆ. ಬೆಂಗಳೂರಿನ ಸಾಂಸ್ಕೃತಿಕ ವೈವಿಧ್ಯತೆ, ಸೃಜನಶೀಲತೆ ಮತ್ತು ಜಾಗತಿಕ ದೃಷ್ಟಿಕೋನಕ್ಕೆ ಈ ಶಿಲ್ಪಕಲೆಯು ಗೌರವ ಸಲ್ಲಿಸುತ್ತದೆ. ಅಕ್ಷರಗಳನ್ನು ಹೆಣೆದು ಸಿದ್ಧಪಡಿಸಿದ ಈ ವಿನ್ಯಾಸವು ನಗರದ ವೈವಿಧ್ಯತೆಯನ್ನು ಸಾರುತ್ತದೆ.

ಬಯೋಕಾನ್ ಫೌಂಡೇಶನ್ ಸಹಯೋಗ

ಬಯೋಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರ ಆಮಂತ್ರಣದ ಮೇರೆಗೆ ಜೌಮ್ ಪ್ಲೆನ್ಸಾ ಅವರು ಈ ಕಲಾಕೃತಿಯನ್ನು ರಚಿಸಿದ್ದಾರೆ. ಸಾರ್ವಜನಿಕ ಕಲೆಗಳು ನಾಗರಿಕ ಸ್ಥಳಗಳಿಗೆ ಮಾನವೀಯ ಸ್ಪರ್ಶ ನೀಡುತ್ತವೆ ಮತ್ತು ಹಂಚಿಕೆಯ ಗುರುತನ್ನು ಬೆಳೆಸುತ್ತವೆ ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕೆ ಸ್ಪೇನ್ ರಾಯಭಾರಿಯಾದ ಜುವಾನ್ ಆಂಟೋನಿಯೊ ಮಾರ್ಚ್ ಪುಜೋಲ್ ಅವರು ಈ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಕಲಾವಿದ ಹೇಳಿದ್ದೇನು?

ಗ್ಯಾಲರಿಗಳಿಗೆ ಭೇಟಿ ನೀಡಲು ಸಾಧ್ಯವಾಗದ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಸೌಂದರ್ಯವನ್ನು ತರುವ ಹಂಬಲ ನನ್ನದು ಎಂದು ಕಲಾವಿದ ಪ್ಲೆನ್ಸಾ ಹೇಳಿದ್ದಾರೆ. ಚಿಕಾಗೋ, ನ್ಯೂಯಾರ್ಕ್ ಮತ್ತು ಲಂಡನ್‌ನಂತಹ ಮಹಾನಗರಗಳಲ್ಲಿ ಕಲಾಕೃತಿಗಳನ್ನು ರಚಿಸಿರುವ ಪ್ಲೆನ್ಸಾ, ಈಗ ಬೆಂಗಳೂರಿನ ಹೆಮ್ಮೆಯ ವಿಮಾನ ನಿಲ್ದಾಣಕ್ಕೆ ತಮ್ಮ ಅದ್ಭುತ ಕೊಡುಗೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:53 pm, Sun, 26 April 26

Source link

Garuda Purana: ಮದುವೆಯಾಗದಿದ್ದರೆ ಜೀವನ ಅಪೂರ್ಣವೇ? ಗರುಡ ಪುರಾಣ ಹೇಳುವುದೇನು? – Kannada News | Sacred indian marriage spiritual significance and grihastha dharma

ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಎಂಬುದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಾಮಾಜಿಕ ಅಥವಾ ಕಾನೂನಾತ್ಮಕ ಒಪ್ಪಂದವಲ್ಲ. ಬದಲಿಗೆ, ಇದನ್ನು ಹದಿನಾರು ಸಂಸ್ಕಾರಗಳಲ್ಲಿ ಅತ್ಯಂತ ಪ್ರಮುಖವಾದ ‘ಪವಿತ್ರ ಸಂಸ್ಕಾರ’ ಎಂದು ಪರಿಗಣಿಸಲಾಗುತ್ತದೆ. ವೇದ ಮತ್ತು ಪುರಾಣಗಳ ಪ್ರಕಾರ, ಮನುಷ್ಯನ ಜೀವನಯಾನವನ್ನು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಆಶ್ರಮಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕರಲ್ಲಿ ‘ಗೃಹಸ್ಥ ಆಶ್ರಮ’ವು ಉಳಿದ ಮೂರು ಆಶ್ರಮಗಳಿಗೆ ಆಧಾರಸ್ತಂಭವಾಗಿದ್ದು, ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಡುತ್ತದೆ.

ಗೃಹಸ್ಥಾಶ್ರಮ ಧರ್ಮದ ಅಡಿಪಾಯ:

ಮದುವೆ ಏಕೆ ಅಗತ್ಯ ಎಂಬ ಪ್ರಶ್ನೆಗೆ ಧರ್ಮಶಾಸ್ತ್ರಗಳು ಸ್ಪಷ್ಟ ಉತ್ತರ ನೀಡುತ್ತವೆ. ಗೃಹಸ್ಥ ಜೀವನವು ಸಮಾಜದ ಮತ್ತು ಧರ್ಮದ ಸಂರಕ್ಷಣೆಗೆ ಮೂಲಾಧಾರ. ದಾನ, ಧರ್ಮ, ಯಜ್ಞ ಮತ್ತು ಅತಿಥಿ ಸತ್ಕಾರಗಳಂತಹ ಪುಣ್ಯ ಕಾರ್ಯಗಳು ಒಬ್ಬ ಗೃಹಸ್ಥನ ಮೂಲಕವೇ ಸುಗಮವಾಗಿ ನಡೆಯುತ್ತವೆ. ಇದಲ್ಲದೆ, ಪಿತೃ ಋಣವನ್ನು ತೀರಿಸಲು ಮತ್ತು ವಂಶಾವಳಿಯನ್ನು ಮುಂದುವರಿಸಲು ಸಂತಾನೋತ್ಪತ್ತಿ ಅಗತ್ಯವಾಗಿದ್ದು, ಇದು ವೈವಾಹಿಕ ಜೀವನದ ಮೂಲಕ ಪವಿತ್ರತೆಯನ್ನು ಪಡೆಯುತ್ತದೆ. ಇಲ್ಲಿ ಪತ್ನಿಯನ್ನು ‘ಸಹಧರ್ಮಚಾರಿಣಿ’ ಎನ್ನಲಾಗುತ್ತದೆ; ಅಂದರೆ ಆಧ್ಯಾತ್ಮಿಕ ಪಥದಲ್ಲಿ ಪತಿಯೊಂದಿಗೆ ಹೆಜ್ಜೆ ಹಾಕುವ ಸಮಾನ ಪಾಲುದಾರತಿ ಎಂದರ್ಥ.

ಗರುಡ ಪುರಾಣದ ದೃಷ್ಟಿಯಲ್ಲಿ ವಿವಾಹ:

ಜೀವನ, ಸಾವು ಮತ್ತು ಕರ್ಮಫಲಗಳ ಬಗ್ಗೆ ಆಳವಾಗಿ ವಿವರಿಸುವ ಗರುಡ ಪುರಾಣವು ವಿವಾಹದ ಬಗ್ಗೆ ಕೆಲವು ಮಹತ್ವದ ಪರಿಕಲ್ಪನೆಗಳನ್ನು ಮುಂದಿಡುತ್ತದೆ. ಗರುಡ ಪುರಾಣದ ಪ್ರಕಾರ, ಗೃಹಸ್ಥ ಜೀವನವು ಕೇವಲ ಲೌಕಿಕ ಸುಖಭೋಗಗಳಿಗಾಗಿ ಇರುವ ವೇದಿಕೆಯಲ್ಲ, ಇದು ‘ಕರ್ಮಯೋಗ’ವನ್ನು ಸಾಧಿಸುವ ಮಾರ್ಗವಾಗಿದೆ. ತನ್ನ ಕುಟುಂಬದ ಜವಾಬ್ದಾರಿಗಳನ್ನು ನಿಷ್ಠೆಯಿಂದ ಮತ್ತು ಸದ್ಗುಣದಿಂದ ನಿರ್ವಹಿಸುವ ವ್ಯಕ್ತಿಯು ಸಾಕ್ಷಾತ್ ದೇವರನ್ನು ಪೂಜಿಸಿದಷ್ಟೇ ಪುಣ್ಯವನ್ನು ಗಳಿಸುತ್ತಾನೆ ಎಂದು ಈ ಪುರಾಣವು ಬೋಧಿಸುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪವಿತ್ರ ಬಾಂಧವ್ಯ ಮತ್ತು ಪೂರ್ಣತೆ:

ಗಂಡ-ಹೆಂಡತಿಯ ನಡುವಿನ ಬಾಂಧವ್ಯವು ದೈವದ ಸಮ್ಮುಖದಲ್ಲಿ ಅಗ್ನಿಸಾಕ್ಷಿಯಾಗಿ ಏರ್ಪಟ್ಟಿರುತ್ತದೆ. ಹಾಗಾಗಿ, ಈ ಸಂಬಂಧದಲ್ಲಿ ಪರಸ್ಪರ ಗೌರವ ಮತ್ತು ಅಚಲವಾದ ನಂಬಿಕೆ ಇರಬೇಕು. ಪುರಾಣಗಳ ಪ್ರಕಾರ, ಮದುವೆಯಾಗದ ವ್ಯಕ್ತಿಯ ಜೀವನವು ಆಧ್ಯಾತ್ಮಿಕವಾಗಿ ಅಪೂರ್ಣವೆಂದು ಪರಿಗಣಿಸಲ್ಪಡುತ್ತದೆ. ಕೆಲವು ಪಿತೃ ಕಾರ್ಯಗಳು ಮತ್ತು ಶ್ರಾದ್ಧಾದಿ ವಿಧಿವಿಧಾನಗಳು ಪತ್ನಿಯ ಸಹಯೋಗವಿಲ್ಲದೆ ಅಥವಾ ಸಂತತಿಯಿಲ್ಲದೆ ಪೂರ್ಣ ಫಲ ನೀಡುವುದಿಲ್ಲ. ಯಾವುದೇ ಧಾರ್ಮಿಕ ಕಾರ್ಯವನ್ನು ದಂಪತಿಗಳು ಒಟ್ಟಾಗಿ ಮಾಡಿದಾಗ ಮಾತ್ರ ಅದು ಸಂಪೂರ್ಣ ಫಲ ನೀಡುತ್ತದೆ ಎಂಬುದು ಶಾಸ್ತ್ರೋಕ್ತ ಸತ್ಯ.

ಆಧ್ಯಾತ್ಮಿಕ ದೃಷ್ಟಿಕೋನ:

ಆಧ್ಯಾತ್ಮಿಕವಾಗಿ ನೋಡಿದರೆ, ಮದುವೆ ಎಂಬುದು ಒಂದು ದೊಡ್ಡ ಜವಾಬ್ದಾರಿ ಮತ್ತು ತ್ಯಾಗದ ಸಂಕೇತವಾಗಿದೆ. ಇಬ್ಬರು ವ್ಯಕ್ತಿಗಳು ತಮ್ಮ ವೈಯಕ್ತಿಕ ಸ್ವಾರ್ಥವನ್ನು ಬದಿಗಿಟ್ಟು ಕುಟುಂಬ, ಸಮಾಜ ಮತ್ತು ಧರ್ಮಕ್ಕಾಗಿ ಬದುಕುವುದನ್ನು ಕಲಿಯುವುದೇ ವಿವಾಹದ ನಿಜವಾದ ಗುರಿ. ಇದು ಮನಸ್ಸನ್ನು ಹತೋಟಿಯಲ್ಲಿಡಲು ಮತ್ತು ಜೀವನದಲ್ಲಿ ಶಿಸ್ತನ್ನು ಬೆಳೆಸಲು ಸಹಾಯ ಮಾಡುತ್ತದೆ. ಕೇವಲ ಪ್ರೀತಿಯ ಆಕರ್ಷಣೆಯಲ್ಲದೆ, ಪರಸ್ಪರರ ಬೆಳವಣಿಗೆಗೆ ಪೂರಕವಾಗಿ ನಿಲ್ಲುವುದು ವಿವಾಹದ ಶ್ರೇಷ್ಠತೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಫಾರೆಕ್ಸ್ ರಿಸರ್ವ್ಸ್ ಸತತ 3 ವಾರ ಏರಿಕೆ; ಒಟ್ಟು ರಿಸರ್ವ್ಸ್ 703 ಬಿಲಿಯನ್ ಡಾಲರ್ – Kannada News | India’s forex reserves crosses 703 billion USD on April 17th

ನವದೆಹಲಿ, ಏಪ್ರಿಲ್ 26: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಏಪ್ರಿಲ್ 17ಕ್ಕೆ 703.308 ಬಿಲಿಯನ್ ಡಾಲರ್ ಮುಟ್ಟಿದೆ. ಆ ಒಂದು ವಾರದಲ್ಲಿ ಮೀಸಲು ನಿಧಿಯಲ್ಲಿ 2.362 ಬಿಲಿಯನ್ ಡಾಲರ್​ನಷ್ಟು ಏರಿದೆ. ಸತತ ಮೂರನೇ ವಾರ ಫಾರೆಕ್ಸ್ ಹೆಚ್ಚಳ ಆಗಿರುವುದು. ಹಿಂದಿನ ವಾರದಲ್ಲಿ (ಏಪ್ರಿಲ್ 10) ಫಾರೆಕ್ಸ್ ರಿಸರ್ವ್ಸ್ 3.825 ಬಿಲಿಯನ್ ಡಾಲರ್ ಏರಿಕೆ ಆಗಿ 700.946 ಬಿಲಿಯನ್ ಡಾಲರ್​ನಷ್ಟು ಇತ್ತು.

ಚಿನ್ನದ ಸಂಗ್ರಹ ಹೆಚ್ಚಳ

ಭಾರತದ ಫಾರೆಕ್ಸ್ ರಿಸರ್ವ್ಸ್​ನಲ್ಲಿ ಎರಡನೇ ಅತಿದೊಡ್ಡ ಪಾಲು ಹೊಂದಿರುವ ಚಿನ್ನದ ಸಂಗ್ರಹ ಈ ವಾರ (ಏಪ್ರಿಲ್ 17) ಪ್ರಮುಖವಾಗಿ ಏರಿದೆ. 790 ಮಿಲಿಯನ್ ಡಾಲರ್​ಗಳಷ್ಟು ಏರಿದೆ. ಭಾರತ ಮಾತ್ರವಲ್ಲ, ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಸತತವಾಗಿ ಚಿನ್ನದ ಖರೀದಿ ಮಾಡುವುದು ಮುಂದುವರಿದಿದೆ.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಲೈಸೆನ್ಸ್ ರದ್ದು ಮಾಡಿದ ಆರ್​ಬಿಐ; ಪೇಟಿಎಂ ಗ್ರಾಹಕರಿಗೆ ತೊಂದರೆಯಾ?

ಫಾರೆಕ್ಸ್ ಮೀಸಲು ನಿಧಿಯಲ್ಲಿ ಪ್ರಮುಖ ಭಾಗವಾಗಿರುವ ವಿದೇಶೀ ಕರೆನ್ಸಿ ಆಸ್ತಿ ಗಣನೀಯವಾಗಿ ಏರಿದೆ. 1.481 ಬಿಲಿಯನ್ ಡಾಲರ್​ಗಳಷ್ಟು ಹೆಚ್ಚಳಗೊಂಡು 557 ಬಿಲಿಯನ್ ಡಾಲರ್ ಮಟ್ಟ ದಾಟಿದೆ.

ಏಪ್ರಿಲ್ 17ರ ವಾರದಲ್ಲಿ ಏರಿಕೆಯಾದ ಫಾರೆಕ್ಸ್ ನಿಧಿ

ಒಟ್ಟೂ ಏರಿಕೆ 2.362 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್ (ಎಫ್​ಸಿಎ): 1.481 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 790 ಮಿಲಿಯನ್ ಡಾಲರ್
  • ಎಸ್​ಡಿಆರ್: 78 ಬಿಲಿಯನ್ ಡಾಲರ್ ಏರಿಕೆ
  • ಐಎಂಎಫ್​ನಲ್ಲಿರುವ ರಿಸರ್ವ್ಸ್: 14 ಮಿಲಿಯನ್ ಡಾಲರ್

ಭಾರತದ ಒಟ್ಟು ಫಾರೆಕ್ಸ್ ರಿಸರ್ವ್ಸ್ (ಏ. 17ಕ್ಕೆ)

ಒಟ್ಟು ರಿಸರ್ವ್ಸ್: 703.308 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ: 557.463 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 122.133 ಬಿಲಿಯನ್ ಡಾಲರ್
  • ಎಸ್​ಡಿಆರ್: 18.841 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿ ರಿಸರ್ವ್ಸ್: 4.87 ಬಿಲಿಯನ್ ಡಾಲರ್

ಇದನ್ನೂ ಓದಿ: ರುಪಾಯಿ ಮೌಲ್ಯ ಕುಸಿತ; ಆತಂಕ ಪಡಬೇಕಿಲ್ಲ; ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಅವಕಾಶ: ಸಿಇಎ ಅನಂತನಾಗೇಶ್ವರನ್

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳಿವು

  1. ಚೀನಾ: 3.64 ಟ್ರಿಲಿಯನ್ ಡಾಲರ್
  2. ಜಪಾನ್: 1.39 ಟ್ರಿಲಿಯನ್ ಡಾಲರ್
  3. ಸ್ವಿಟ್ಜರ್​ಲ್ಯಾಂಡ್: 1.077 ಟ್ರಿಲಿಯನ್ ಡಾಲರ್
  4. ರಷ್ಯಾ: 755 ಬಿಲಿಯನ್ ಡಾಲರ್
  5. ಭಾರತ: 703 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Thalaivar 173: ರಜನಿಕಾಂತ್ ಮುಂದಿನ ಸಿನಿಮಾದಲ್ಲಿ ಖ್ಯಾತ ನಿರ್ದೇಶಕ ಶಂಕರ್ ವಿಲನ್? – Kannada News | Director Shankar to play villain in Rajinikanth new movie Thalaivar 173 film update

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ 173ನೇ ಸಿನಿಮಾ ಬಗ್ಗೆ ಸಾಕಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಕೇಳಿಬರುತ್ತಿವೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರವನ್ನು ತಾತ್ಕಾಲಿಕವಾಗಿ ‘ತಲೈವರ್ 173’ (Thalaivar 173) ಎಂದು ಕರೆಯಲಾಗುತ್ತಿದೆ. ದಿನದಿಂದ ದಿನಕ್ಕೆ ಈ ಸಿನಿಮಾ ಕುತೂಹಲ ಕೆರಳಿಸುತ್ತಿದೆ. ಈಗ ಈ ಚಿತ್ರದ ಬಗ್ಗೆ ಒಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಖ್ಯಾತ ನಿರ್ದೇಶಕ ಎಸ್. ಶಂಕರ್ (Shankar) ಅವರು ಈ ಸಿನಿಮಾದಲ್ಲಿ ರಜನಿಕಾಂತ್ ಎದುರು ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹಬ್ಬಿದೆ.

ದಕ್ಷಿಣ ಭಾರತದ ಲೆಜೆಂಡರಿ ನಿರ್ದೇಶಕ ಎಂದೇ ಖ್ಯಾತರಾಗಿರುವ ಶಂಕರ್ ಅವರು ಈ ಹಿಂದೆ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ‘ತಲೈವರ್ 173’ ಚಿತ್ರದಲ್ಲಿ ಅವರು ಪೂರ್ಣ ಪ್ರಮಾಣದ ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ. ಇದು ನಿಜವಾದರೆ, ಬೆಳ್ಳಿತೆರೆಯ ಮೇಲೆ ರಜನಿ ಮತ್ತು ಶಂಕರ್ ಅವರನ್ನು ಮುಖಾಮುಖಿಯಾಗಿ ನೋಡಲು ಅಭಿಮಾನಿಗಳಿಗೆ ಹಬ್ಬವೇ ಸರಿ.

ವಿಶೇಷವೆಂದರೆ, ಈ ಚಿತ್ರವನ್ನು ಮತ್ತೊಬ್ಬ ದಿಗ್ಗಜ ಕಮಲ್ ಹಾಸನ್ ಅವರು ತಮ್ಮ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ದಶಕಗಳ ನಂತರ ರಜನಿ ಮತ್ತು ಕಮಲ್ ಈ ಚಿತ್ರದ ಮೂಲಕ ಒಂದಾಗುತ್ತಿರುವುದು ವಿಶೇಷ. ಅಷ್ಟೇ ಅಲ್ಲದೆ, ಈ ಚಿತ್ರದಲ್ಲಿ ಕಮಲ್ ಹಾಸನ್ ಅವರು ಒಂದು ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.

ಮೊದಲು ಈ ಚಿತ್ರಕ್ಕೆ ಬೇರೆ ನಿರ್ದೇಶಕರ ಹೆಸರು ಕೇಳಿಬಂದಿತ್ತಾದರೂ, ಈಗ ಸಿಬಿ ಚಕ್ರವರ್ತಿ ಅವರು ‘ತಲೈವರ್ 173’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕಮಲ್ ಹಾಸನ್ ನಿರ್ಮಾಣ, ರಜನಿಕಾಂತ್ ನಟನೆ ಮತ್ತು ಶಂಕರ್ ಖಳನಾಯಕನಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾ ಕಾಲಿವುಡ್‌ನ ಅತಿದೊಡ್ಡ ಮಲ್ಟಿಸ್ಟಾರರ್ ಚಿತ್ರವಾಗಿ ಹೊರಹೊಮ್ಮಲಿದೆ.

ಇದನ್ನೂ ಓದಿ: ‘ಜನ ನಾಯಗನ್’ ಯಾಕೆ ವಿಳಂಬ ಆಗಿದೆ ಅಂತ ಕೇಳಿದ್ದಕ್ಕೆ ಸೈಲೆಂಟ್ ಆದ ರಜನಿಕಾಂತ್

ರಜನಿಕಾಂತ್ ಅವರಿಗೆ ಭರ್ಜರಿ ಬೇಡಿಕೆ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಸದ್ಯಕ್ಕೆ ಅವರು ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಆ ಸಿನಿಮಾದಲ್ಲಿ ಮೋಹನ್​ಲಾಲ್, ಶಿವರಾಜ್​ಕುಮಾರ್ ಮುಂತಾದ ಹಿರಿಯ ನಟರು ಅಭಿನಯಿಸಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ತಂಡದ ಮುಂದಿನ ಪಂದ್ಯಕ್ಕೆ ಇಬ್ಬರು ಅಲಭ್ಯ?

Source link

ಮೇ 2ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ: ಹೈಕೋರ್ಟ್​​ ಆದೇಶದ ಬೆನ್ನಲ್ಲೇ ಸಕಲ ಸಿದ್ಧತೆ – Kannada News | Postal Ballot Recount for Sringeri Assembly Seat on May 2 Following High Court Order

ಡಿ.ಎನ್. ಜೀವರಾಜ್ ಮತ್ತು ಟಿ.ಡಿ. ರಾಜೇಗೌಡ

ಚಿಕ್ಕಮಗಳೂರು, ಏಪ್ರಿಲ್​​ 26: ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಮೇ 2ರಂದು ಐಡಿಎಸ್‌ಜಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ನಡೆಯಲಿದೆ. ಮರುಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಎಡಿಸಿ ಗೌರವ್ ಶೆಟ್ಟಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದ್ದು, ನಾಲ್ವರು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಬೆಳಗ್ಗೆ 8 ಗಂಟೆಗೆ ಮರುಎಣಿಕೆ ಪ್ರಾರಂಭವಾಗಲಿದೆ.

201 ಮತಗಳ ಅಂತರದಲ್ಲಿ ಸೋತಿದ್ದ ಜೀವರಾಜ್

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 201 ಮತಗಳ ಅಂತರದಿಂದ ಸೋತಿದ್ದರು. ಒಟ್ಟು 2,811 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತವಾಗಿದ್ದವು. ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಮರುಎಣಿಕೆಗೆ ಮನವಿ ಮಾಡಿದ್ದರಾದರೂ, ಜಿಲ್ಲಾ ಚುನಾವಣಾಧಿಕಾರಿ ಅದನ್ನು ಪರಿಗಣಿಸದೆ ಟಿ.ಡಿ. ರಾಜೇಗೌಡರನ್ನು ವಿಜೇತರಾಗಿ ಘೋಷಿಸಿದ್ದರು. ಇದರಿಂದ ಅಸಮಾಧಾನಗೊಂಡ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್​​ ಆದೇಶದಂತೆ ಇದೀಗ ಅಂಚೆ ಮತಗಳ ಮರುಎಣಿಕೆಗೆ ಸಿದ್ಧತೆ ನಡೆಸಲಾಗ್ತಿದೆ.

ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ

ಶೃಂಗೇರಿ ಶಾಸಕರಾಗಿ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ.ಎನ್.ಜೀವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಹೈಕೋರ್ಟ್ ಪೀಠ, 279 ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಆದೇಶ ಹೊರಡಿಸಿತ್ತು. ಅಲ್ಲದೆ  2 ವಾರಗಳಲ್ಲಿ ಮರುಪರಿಶೀಲನೆ ನಡೆಸಿ ಫಲಿತಾಂಶ ಪ್ರಕಟಿಸಲು ನಿರ್ದೇಶನ ನೀಡಿತ್ತು. ಇನ್ನು ಮತ ಮರುಎಣಿಕೆ ವೇಳೆ ಏಜೆಂಟ್‌ಗಳು, ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಸೋತ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಹಾಜರಾಗುವ ನಿರೀಕ್ಷೆಯಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Kashtabhanjan Hanuman: ಮೀಸೆಯುಳ್ಳ ಹನುಮ, ಪಾದದಡಿ ಶನಿ ದೇವ; ಭಕ್ತರ ಸಂಕಷ್ಟ ನಿವಾರಿಸುವ ಕಷ್ಟಭಂಜನ ಹನುಮಾನ್ – Kannada News | Kashtabhanjan Hanuman Sarangpur: Solve Problems and Shani Dosha at Gujarat’s Holy Temple

ದೇಶದಲ್ಲಿ ಹನುಮನಿಗೆ ಸಂಬಂಧಿಸಿದ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಹಲವು ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ. ಅವುಗಳಲ್ಲಿ ಒಂದು ಗುಜರಾತ್‌ನ ಸಾರಂಗಪುರದಲ್ಲಿರುವ ಕಷ್ಟಭಂಜನ ದೇವ್ ಹನುಮಾನ್ ದೇವಾಲಯ. “ಕಷ್ಟಭಂಜನ” ಎಂದರೆ ಕಷ್ಟಗಳನ್ನು ನಾಶಪಡಿಸುವವನು ಎಂದರ್ಥ. ಜೀವನದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವವರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ ಶೀಘ್ರವೇ ನೆಮ್ಮದಿ ಸಿಗುತ್ತದೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ.

ದೇವಾಲಯದ ಸ್ಥಾಪನೆಯ ಹಿಂದಿನ ಇತಿಹಾಸ:

ಈ ದೇವಾಲಯದ ಸ್ಥಾಪನೆಯ ಹಿಂದೆ ಒಂದು ರೋಚಕ ಇತಿಹಾಸವಿದೆ. ಇಲ್ಲಿನ ಹನುಮಂತನ ವಿಗ್ರಹವನ್ನು ಸದ್ಗುರು ಗೋಪಾಲಾನಂದ ಸ್ವಾಮಿಗಳು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ಅವರು ತಮ್ಮ ದಂಡದಿಂದ ಈ ವಿಗ್ರಹವನ್ನು ಮುಟ್ಟಿದ ಕ್ಷಣವೇ ಅದರಲ್ಲಿ ದೈವೀ ಶಕ್ತಿ ಸಂಚರಿಸಿ ಜೀವಂತವಾಯಿತು ಎಂಬ ಕಥೆಯು ಈ ಕ್ಷೇತ್ರದ ಪಾವಿತ್ರ್ಯತೆಯನ್ನು ಹೆಚ್ಚಿಸಿದೆ. ಕಾಲಾನಂತರದಲ್ಲಿ, 1899ರಲ್ಲಿ ವಡ್ತಾಲ್‌ನ ಕೊಥಾರಿ ಗೋರ್ಧಂಡಾಸ್ ಅವರ ನೇತೃತ್ವದಲ್ಲಿ ದೇವಾಲಯಕ್ಕೆ ಭವ್ಯವಾದ ರೂಪ ನೀಡಲಾಯಿತು. ಈ ಸಂಕೀರ್ಣದಲ್ಲಿ ಸ್ವಾಮಿ ನಾರಾಯಣರಿಗಾಗಿ ಮೀಸಲಾದ ಪ್ರತ್ಯೇಕ ಮಂದಿರವೂ ಇದ್ದು, ಅವರ ಬೋಧನೆಗಳನ್ನು ಅಲ್ಲಿ ಸಂರಕ್ಷಿಸಲಾಗಿದೆ.

54 ಅಡಿ ಎತ್ತರದ ಹನುಮಂತನ ಪ್ರತಿಮೆ:

ಇತ್ತೀಚೆಗೆ ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾದ 54 ಅಡಿ ಎತ್ತರದ ಹನುಮಂತನ ಪ್ರತಿಮೆಯು ಜಗತ್ತಿನ ಗಮನ ಸೆಳೆಯುತ್ತಿದೆ. ಸಾವಿರಾರು ಕಿಲೋ ಲೋಹದಿಂದ ನಿರ್ಮಿಸಲಾದ ಈ ದೈತ್ಯ ಪ್ರತಿಮೆಯು ದೂರದ ಊರುಗಳಿಂದಲೂ ಭಕ್ತರಿಗೆ ದರ್ಶನ ನೀಡುತ್ತದೆ. ಈ ಪ್ರತಿಮೆಯ ವಿನ್ಯಾಸವು ಅತ್ಯಂತ ವಿಶಿಷ್ಟವಾಗಿದ್ದು, ಹನುಮಂತನನ್ನು ಶೌರ್ಯದ ಸಂಕೇತವಾದ ಮೀಸೆಯೊಂದಿಗೆ ಚಿತ್ರಿಸಲಾಗಿದೆ. ಸುವರ್ಣ ವಸ್ತ್ರಗಳಿಂದ ಕಂಗೊಳಿಸುವ ಈ ಸ್ವಾಮಿಯ ಸುತ್ತಲೂ ವಾನರ ಸೈನ್ಯವು ಕಾವಲು ನಿಂತಂತೆ ಕೆತ್ತಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಹನುಮಂತನ ಪಾದದ ಕೆಳಗೆ ಶನಿ ದೇವ:

ಈ ದೇವಾಲಯದ ಅತ್ಯಂತ ವಿಶಿಷ್ಟ ಅಂಶವೆಂದರೆ ಹನುಮಂತನ ಪಾದದ ಕೆಳಗೆ ಶನಿ ದೇವನು ನೆಲೆಸಿರುವುದು. ಪುರಾಣದ ಪ್ರಕಾರ, ಭಕ್ತರಿಗೆ ನೀಡುವ ತೊಂದರೆಯ ವಿಷಯದಲ್ಲಿ ಹನುಮಂತ ಮತ್ತು ಶನಿಯ ನಡುವೆ ನಡೆದ ವಾದದಲ್ಲಿ ಹನುಮಂತನು ಜಯಗಳಿಸುತ್ತಾನೆ. ಆಗ ಶನಿ ದೇವನು ಹನುಮನ ಭಕ್ತರಿಗೆ ಎಂದೂ ತೊಂದರೆ ಕೊಡುವುದಿಲ್ಲವೆಂದು ಮಾತು ನೀಡಿ ಆತನ ಪಾದಕ್ಕೆ ಶರಣಾದನು ಎಂಬ ಕಥೆಯಿದೆ. ಇದೇ ಕಾರಣಕ್ಕೆ, ಶನಿ ದೋಷ ಅಥವಾ ಸಾಡೇಸಾತಿ ಪ್ರಭಾವ ಇರುವವರು ಇಲ್ಲಿಗೆ ಬಂದು ದರ್ಶನ ಪಡೆದರೆ ಗ್ರಹ ದೋಷಗಳಿಂದ ಮುಕ್ತಿ ಹೊಂದುತ್ತಾರೆ ಎಂಬ ನಂಬಿಕೆ ಬಲವಾಗಿದೆ.

ಶನಿವಾರದಂದು ಇಲ್ಲಿ ಜನಸಾಗರ:

ವಿಶೇಷವಾಗಿ ಪ್ರತಿ ಶನಿವಾರದಂದು ಇಲ್ಲಿ ಜನಸಾಗರವೇ ಹರಿದು ಬರುತ್ತದೆ. ಅಂದು ನಡೆಯುವ ವಿಶೇಷ ಪೂಜೆಗಳು, ಹೋಮಗಳು ಮತ್ತು ಹವನಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ ಎಂಬ ವಿಶ್ವಾಸ ಭಕ್ತರಲ್ಲಿದೆ. ಸಾರಂಗಪುರದ ಈ ಪುಣ್ಯಕ್ಷೇತ್ರವು ಕೇವಲ ಒಂದು ಧಾರ್ಮಿಕ ಸ್ಥಳವಾಗಿರದೆ, ಲಕ್ಷಾಂತರ ಜನರಿಗೆ ಜೀವನದಲ್ಲಿ ಹೊಸ ಭರವಸೆ, ಧೈರ್ಯ ಮತ್ತು ಶಾಂತಿಯನ್ನು ನೀಡುವ ದಿವ್ಯ ಚೇತನವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡ ಅವಳಿ ಶಿಶುಗಳ ತಾಯಿ – Kannada News | Tragedy at Koderma Station: Young Mother Dies in Train Mishap

ಕೊಡೆರ್ಮಾ, ಏಪ್ರಿಲ್ 26: ಮಹಿಳೆಯೊಬ್ಬರು ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದು, ರೈಲಿನಡಿ ಪ್ರಾಣಬಿಟ್ಟಿರುವ ಘಟನೆ ಜಾರ್ಖಂಡ್​ನ ಕೊಡೆರ್ಮಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ 24 ವರ್ಷದ ಮಹಿಳೆ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ರೈಲು ನಿಲ್ದಾಣದಿಂದ ಹೊರಡಲು ಪ್ರಾರಂಭಿಸಿದಾಗ ಯುವತಿ ತನ್ನಿಬ್ಬರು ಮಕ್ಕಳೊಂದಿಗೆ ರೈಲನ್ನು ಹತ್ತಲು ಪ್ರಯತ್ನಿಸಿದ್ದಾರೆ.

ಆದರೆ, ಸಮತೋಲನ ತಪ್ಪಿದ ಅವರು ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಲ್ಲಿ ಬಿದ್ದಿದ್ದಾರೆ. ಅಲ್ಲಿದ್ದ ಪ್ರಯಾಣಿಕರು ಕಿರುಚಾಡುವಷ್ಟರಲ್ಲೇ ರೈಲಿನ ಚಕ್ರಗಳು ಆಕೆಯ ಪ್ರಾಣಪಕ್ಷಿಯನ್ನು ಹಾರಿಸಿದ್ದವು. ಈ ದುರಂತದ ಅತ್ಯಂತ ಕಟು ಸತ್ಯವೆಂದರೆ ಆಕೆಯ ಜೊತೆಗಿದ್ದ ಇಬ್ಬರು ಮುಗ್ಧ ಮಕ್ಕಳು. ತಾಯಿ ಹಳಿಯ ಮೇಲೆ ಶವವಾಗಿ ಬಿದ್ದಿದ್ದರೆ, ಏನೂ ಅರಿಯದ ಆ ಮಕ್ಕಳು ಅಪರಿಚಿತರ ತೋಳುಗಳಲ್ಲಿ ಕುಳಿತು ಅಳುತ್ತಿರುವ ದೃಶ್ಯ ಕಲ್ಲೆದೆಯನ್ನೂ ಕರಗಿಸುವಂತಿದೆ.

ಘಟನೆಯ ನಂತರ ಕೊಡೆರ್ಮಾ ನಿಲ್ದಾಣದಲ್ಲಿ ಸ್ಮಶಾನ ಮೌನ ಆವರಿಸಿದೆ. ರೈಲ್ವೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದಿದ್ದು, ಮಕ್ಕಳನ್ನು ಸುರಕ್ಷಿತವಾಗಿ ಶಿಶು ಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಮೃತ ಯುವತಿಯ ಕುಟುಂಬದವರನ್ನು ಪತ್ತೆಹಚ್ಚುವ ಕೆಲಸ ಮುಂದುವರೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link