Chanakya Niti: ಗಂಡ ಹೆಂಡತಿ ನಡುವಿನ ಜಗಳಗಳಿಗೆ ನಿಜವಾದ ಕಾರಣವೇ ಈ ಅಂಶಗಳು – Kannada News

ಗಂಡ ಹೆಂಡತಿ (husband and wife) ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಆದರೆ ಈಗಿನ ಕಾಲದಲ್ಲಿ ಗಂಡ ಹೆಂಡತಿಯ ಜಗಳ ಡಿವೋರ್ಸ್‌ ತನಕ ಎಂಬಂತಾಗಿದೆ. ಹೌದು ಈಗಂತೂ ಗಂಡ ಹೆಂಡತಿಯರ ನಡುವೆ ಹೊಂದಾಣಿಕೆಯ ಗುಣವೇ ಇಲ್ಲ, ಸಣ್ಣಪುಟ್ಟ ವಿಚಾರಗಳಿಗೂ ದೊಡ್ಡದಾಗಿ ಜಗಳವಾಡಿ ಸುಂದರ ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಈ ಎಲ್ಲಾ ಜಗಳಗಳಿಗೆ ಈ ಅಂಶಗಳೇ ಮುಖ್ಯ ಕಾರಣವಾಗಿದ್ದು, ಗಂಡ ಹೆಂಡತಿ ಕೂತು ಅದನ್ನು ಬಗೆಹರಿಸಿದರೆ ಸಂಸಾರವನ್ನು ಸುಂದರವಾಗಿ ಸಾಗಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾವ ಅಂಶಗಳು ಪತಿ ಪತ್ನಿಯರ ಜಗಳಕ್ಕೆ ಮುಖ್ಯ ಕಾರಣ ಎಂಬುದನ್ನು ನೋಡೋಣ ಬನ್ನಿ.

ಗಂಡ-ಹೆಂಡತಿ ಜಗಳಕ್ಕೆ ನಿಜವಾದ ಕಾರಣವೇನು?

ಅನ್ಯೋನ್ಯತೆಯ ಕೊರತೆ: ಚಾಣಕ್ಯರ ಪ್ರಕಾರ, ಪರಸ್ಪರ ಪ್ರೀತಿ, ಸ್ನೇಹ ಮತ್ತು ಗೌರವವು ದಾಂಪತ್ಯದಲ್ಲಿ ಮುಖ್ಯ. ಇವುಗಳಿಲ್ಲದೆ, ಸಂಬಂಧವು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಗಂಡ ಮತ್ತು ಹೆಂಡತಿಯ ನಡುವೆ ಪರಸ್ಪರ ತಿಳುವಳಿಕೆಯ ಕೊರತೆ, ಸಂಬಂಧದಲ್ಲಿ ಮೋಸ ಮಾಡುವುದು ಮತ್ತು ಸಣ್ಣ ವಿಷಯಗಳನ್ನೂ ದೊಡ್ಡದಾಗಿಸುವುದು ಈ ಎಲ್ಲಾ ಅಂಶಗಳು ಸಂಬಂಧವನ್ನು ಹಾನಿಗೊಳಿಸುತ್ತದೆ. ಸಣ್ಣ ಭಿನ್ನಾಭಿಪ್ರಾಯಗಳು ಮತ್ತು ಅನಗತ್ಯ ವಾದಗಳು ಸಂಬಂಧದಲ್ಲಿ ಬಿರುಕು ಮೂಡಿಸುತ್ತದೆ. ಚಾಣಕ್ಯರ  ಪ್ರಕಾರ, ಪರಸ್ಪರರ ಅಗತ್ಯತೆಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದ ದಂಪತಿಗಳ ನಡುವೆ ಯಾವಾಗಲೂ ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತವೆ.

ಹಣಕಾಸಿನ ಸಮಸ್ಯೆಗಳು: ಚಾಣಕ್ಯರ ಪ್ರಕಾರ, ಹಣದ ವಿಷಯದಲ್ಲಿ ಯಾವಾಗಲೂ ಜಾಗರೂಕರಾಗಿರಬೇಕು. ಸಾಲ, ಆದಾಯದ ಕೊರತೆಗಳಂತಹ ಹಣಕಾಸಿನ ಸಮಸ್ಯೆಗಳು ಪತಿ ಮತ್ತು ಪತ್ನಿಯ ನಡುವಿನ ಉದ್ವಿಗ್ನತೆ ಹೆಚ್ಚಿಸುತ್ತದೆ. ಹೌದು ಆದಾಯ ಕಮ್ಮಿಯಾಗಿ ಗಂಡ ಅಥವಾ ಹೆಂಡತಿ ತಮ್ಮ ಖರ್ಚನ್ನು ತೀರಾ ಹೆಚ್ಚು ಮಾಡಿದರೆ ಇದು ಇವರಿಬ್ಬರ ನಡುವೆ ವಾಗ್ವಾದವನ್ನು ಉಂಟು ಮಾಡುತ್ತವೆ. ಇವೇ ಜಗಳಗಳು ನಡೆಯಲು ಮುಖ್ಯ ಕಾರಣವಾಗುತ್ತದೆ.

ಇದನ್ನೂ ಓದಿ: ಎಲ್ಲರೂ ನಿಮ್ಮನ್ನು ಗೌರವಿಸಬೇಕೆಂದರೆ ತಕ್ಷಣವೇ ಅಭ್ಯಾಸಗಳನ್ನು ತ್ಯಜಿಸಿ

ಪ್ರಾಮಾಣಿಕತೆಯ ಕೊರತೆ: ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಯಾರೇ ಒಬ್ಬರು ಪ್ರಾಮಾಣಿಕವಾಗಿಲ್ಲದಿದ್ದರೂ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ. ಸಂಬಂಧದಲ್ಲಿ ಪ್ರೀತಿ, ನಂಬಿಕೆ ಕಡಿಮೆಯಾದಾಗ ಜಗಳಗಳು ಉಂಟಾಗುತ್ತವೆ. ಹಾಗಾಗಿ ಏನೇ ಆದರೂ ಗಂಡ ಮತ್ತು ಹೆಂಡತಿ ಸಂಬಂಧದಲ್ಲಿ ಪ್ರಾಮಾಣಿಕವಾಗಿರಬೇಕು. ಯಾವುದೇ ವಿಚಾರಗಳನ್ನು ಮುಚ್ಚುಮರೆ ಮಾಡಬಾರದು.

ಜವಾಬ್ದಾರಿಯ ಕೊರತೆ:  ಚಾಣಕ್ಯನ ಪ್ರಕಾರ, ಗಂಡ ಮತ್ತು ಹೆಂಡತಿ ಸಮಾನ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು. ಒಬ್ಬರಿಗೊಬ್ಬರು ನೆರಳಿನಂತಿರಬೇಕು. ಇನ್ನೊಬ್ಬರನ್ನು ನಿರ್ಲಕ್ಷಿಸಿದರೆ, ಸಂಬಂಧವು ಮುರಿದು ಬೀಳುವುದು ಸಹಜ. ವಿಶೇಷವಾಗಿ ಮಕ್ಕಳನ್ನು ಬೆಳೆಸುವಲ್ಲಿ, ಮನೆಯನ್ನು ನಿರ್ವಹಿಸುವಲ್ಲಿ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ಸಹಕಾರವಿಲ್ಲದಿದ್ದರೆ, ಜವಾಬ್ದಾರಿಯ ಹೊರೆ ಒಬ್ಬ ವ್ಯಕ್ತಿಯ ಮೇಲೆ ಬೀಳುತ್ತದೆ. ಆಗ ಮನಸ್ತಾಪ ಮೂಡಲು ಕಾರಣವಾಗುತ್ತದೆ. ಹಾಗಾಗಿ ಸಂಬಂಧ ಚೆನ್ನಾಗಿರಬೇಕೆಂದರೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಚಾಣಕ್ಯರು ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *