Chanakya Niti: ಜೀವನದಲ್ಲಿ ಈ ವಿಚಾರಗಳು ಎಂದಿಗೂ ಅತಿಯಾಗಬಾರದು ಎನ್ನುತ್ತಾರೆ ಚಾಣಕ್ಯ

Chanakya Niti: ಜೀವನದಲ್ಲಿ ಈ ವಿಚಾರಗಳು ಎಂದಿಗೂ ಅತಿಯಾಗಬಾರದು ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು (Acharya Chanakya)  ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲದೆ, ನಮ್ಮ ಜೀವನಕ್ಕೆ ಸಂಬಂಧಿಸಿದ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಈ ಬೋಧನೆಗಳನ್ನು ಅನುಸರಿಸುವ ಮೂಲಕ ನೀವು ಸಂತೋಷ, ಸಮೃದ್ಧ ಮತ್ತು ಯಶಸ್ವಿ ಜೀವನವನ್ನು ನಡೆಸಬಹುದು ಮತ್ತು ಸಮಾಜದಲ್ಲಿ ಗೌರವವನ್ನೂ ಪಡೆಯಬಹುದು. ಅದೇ ರೀತಿ ಜೀವನ ಸರ್ವನಾಶವಾಗಬಾರದು ಎಂದರೆ ಈ ಒಂದಷ್ಟು ವಿಷಯಗಳು ಅತಿಯಾಗಬಾರದು ಎಂದೂ ಹೇಳಿದ್ದಾರೆ. ಹೌದು ಬದುಕಿನಲ್ಲಿ ಈ ಕೆಲವೊಂದು ವಿಷಯಗಳ ಬಗ್ಗೆ ಅತಿಯಾಗಿ ಅಹಂಕಾರ ಪಟ್ಟರೆ, ಕೆಲವು ವಿಷಯಗಳು ಅತಿಯಾದರೆ ಜೀವನವೇ ನಾಶವಾಗಬಹುದು. ಅತಿಯಾಗಬಾರದ ಆ ಸಂಗತಿಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಜೀವನದಲ್ಲಿ ಈ ಸಂಗತಿಗಳ ಬಗ್ಗೆ ಅಹಂಕಾರ ಪಡಬೇಡಿ:

ನಿಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಹೆಮ್ಮೆ ಪಡಬೇಡಿ: ಆಚಾರ್ಯ ಚಾಣಕ್ಯರ ಪ್ರಕಾರ, ಸುಂದರವಾಗಿರುವುದು ಅದ್ಭುತವಾದ ವಿಷಯ, ಆದರೆ ನಿಮ್ಮ ಸೌಂದರ್ಯದ ಬಗ್ಗೆ ಅತಿಯಾಗಿ ಹೆಮ್ಮೆಪಡುವುದು ಭವಿಷ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಸೌಂದರ್ಯವು ಶಾಶ್ವತವಲ್ಲ. ಹಾಗಾಗಿ  ಸೌಂದರ್ಯದ ಬದಲು ವ್ಯಕ್ತಿತ್ವ ಮತ್ತು ಗುಣಗಳನ್ನು ಮೆಚ್ಚಿಕೊಳ್ಳಬೇಕು.

ಜ್ಞಾನ, ಸಂಪತ್ತಿನ ಬಗ್ಗೆ ಅಹಂಕಾರ ಬೇಡ: ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯ ದೊಡ್ಡ ಶತ್ರು ಅಹಂಕಾರ. ಒಬ್ಬ ವ್ಯಕ್ತಿಯು ತನ್ನ ಜ್ಞಾನ, ಶಕ್ತಿ ಅಥವಾ ಸಂಪತ್ತಿನ ಬಗ್ಗೆ ಅಹಂಕಾರಪಟ್ಟರೆ ಆತನ ನಾಶ ಖಚಿತ ಎಂದು ಚಾಣಕ್ಯ ಹೇಳುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ರಾವಣ. ಹಾಗಾಗಿಆಚಾರ್ಯ ಚಾಣಕ್ಯ ಹೇಳುತ್ತಾರೆ   ಪ್ರತಿಯೊಬ್ಬ ವ್ಯಕ್ತಿಯು ಅಹಂಕಾರ ಬಿಟ್ಟು ನಮ್ರತೆಯಿಂದ ಬದುಕಲು ಕಲಿಯಬೇಕು.

ಅಗತ್ಯಕ್ಕಿಂತ ಹೆಚ್ಚಿನದನ್ನು ದಾನ ಮಾಡುವುದು: ಆಚಾರ್ಯ ಚಾಣಕ್ಯರು ದಾನ ಮಾಡುವುದು ಪುಣ್ಯದ ಕಾರ್ಯ ಎಂದು ಹೇಳುತ್ತಾರೆ. ಆದರೆ ನಿಮ್ಮ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನದನ್ನು ದಾನ ಮಾಡಬಾರದು. ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ನಿಮ್ಮ ಸಾಮರ್ಥ್ಯಕ್ಕೂ ಮೀರಿ ನೀವು ದಾನ ಮಾಡಿದರೆ ತೊಂದರೆಗೆ ಸಿಲುಕುತ್ತೀರಿ.  ಹಾಗಾಗಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ  ಮಾಡಿ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಇಂತಹ ಜನರ ಸಹವಾಸ ಮಾಡಬೇಡಿ ಎಂದಿದ್ದಾರೆ ಚಾಣಕ್ಯ

ಅತಿಯಾದ ನಂಬಿಕೆ ಒಳ್ಳೆಯದಲ್ಲ: ಆಚಾರ್ಯ ಚಾಣಕ್ಯರ ಪ್ರಕಾರ, ಯಾರನ್ನಾದರೂ ಕುರುಡಾಗಿ ನಂಬುವುದು ಒಳ್ಳೆಯದಲ್ಲ. ಏಕೆಂದರೆ ಅತಿಯಾದ ನಂಬಿಕೆ ಹೆಚ್ಚಾಗಿ ದ್ರೋಹಕ್ಕೆ ಕಾರಣವಾಗಬಹುದು. ಹೌದು ಕೆಲವರು ನಿಮ್ಮ ನಂಬಿಕೆಯನ್ನು ಗಳಿಸಿ ಎಲ್ಲಾ ರೀತಿಯಲ್ಲೂ ನಿಮಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾರನ್ನೂ ಹೆಚ್ಚು ನಂಬಬೇಡಿ.

ಅತಿಯಾಗಿ ಮಾತನಾಡುವುದು: ಹೆಚ್ಚು ಮಾತನಾಡುವುದರಿಂದ ಗಂಭೀರ ತೊಂದರೆಯಾಗಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬಂತೆ ಅತಿಯಾಗಿ ಮಾತನಾಡಿದರೆ ನೀವೇ ತೊಂದರೆಯಲ್ಲಿ ಸಿಲುಕುತ್ತೀರಿ. ಹಾಗಾಗಿ ಯಾವಾಗಲೂ ಬುದ್ಧಿವಂತಿಕೆಯಿಂದ, ಚಿಂತನಶೀಲವಾಗಿ ಮತ್ತು ಅಗತ್ಯವಿದ್ದಾಗ ಮಾತ್ರ ಮಾತನಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *