ಟಿವಿ9 ಕನ್ನಡ ಡಿಜಿಟಲ್ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಯಾವೆಲ್ಲಾ ವಸ್ತುಗಳನ್ನು ಇತರರಿಂದ ಪಡೆಯಬಾರದು ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ನಾವು ಜೀವನದಲ್ಲಿ ಕಷ್ಟಪಟ್ಟು ಸಂಪಾದನೆ ಮಾಡಿರುತ್ತೇವೆ ಮತ್ತು ನಮ್ಮ ಜೀವನವನ್ನು ಉತ್ತಮವಾಗಿ ನಡೆಸಲು ಯೋಜನೆಗಳನ್ನು ರೂಪಿಸಿಕೊಳ್ಳುತ್ತೇವೆ. ಆದರೆ, ಕೆಲವೊಮ್ಮೆ ಆಕಸ್ಮಿಕವಾಗಿ ನಾವು ಇತರರಿಂದ ಕೆಲವು ವಸ್ತುಗಳನ್ನು ಪಡೆದುಕೊಂಡರೆ, ನಮ್ಮ ಅದೃಷ್ಟ ಕುಂಠಿತವಾಗಬಹುದು ಎಂದು ಪ್ರಾಚೀನ ನಂಬಿಕೆಗಳು ಹೇಳುತ್ತವೆ. ಜೀವನದಲ್ಲಿ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ಅಥವಾ ಸಾಲವಾಗಿ ಪಡೆದುಕೊಳ್ಳದಿರುವುದು ಉತ್ತಮ.
ಉದಾಹರಣೆಗೆ, ಉಪ್ಪನ್ನು ಯಾರಿಂದಲೂ ಪಡೆಯಬಾರದು. ಇದರಿಂದ ಕುಟುಂಬದಲ್ಲಿ ಸಾಲಗಳು ಹೆಚ್ಚಾಗಬಹುದು ಮತ್ತು ಅವುಗಳನ್ನು ತೀರಿಸುವುದು ಕಷ್ಟವಾಗಬಹುದು. ಅಡುಗೆ ಎಣ್ಣೆಯನ್ನು ಬೇರೆಯವರಿಂದ ಪಡೆದರೆ, ಅದೃಷ್ಟ ದೂರಾಗಿ ಕೆಲಸಗಳು ಅರ್ಧಂಬರ್ಧವಾಗುವ ಸಾಧ್ಯತೆ ಇದೆ. ಸೂಜಿಯನ್ನು ಯಾರಿಂದಲೂ ತೆಗೆದುಕೊಂಡರೆ, ಸಂಬಂಧಗಳಲ್ಲಿ ಕಲಹಗಳು ಉಂಟಾಗಬಹುದು. ಹೀಗೆ ಹಲವು ವಸ್ತುಗಳನ್ನು ಸ್ವೀಕರಿಸದ ಹಿಂದಿನ ಕಾರಣವೇನು ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.
