Daily Devotional: ಮಕ್ಕಳು ಮಾತನಾಡುವಾಗ ತೊದಲುತ್ತಿದ್ದಾರಾ? ಜ್ಯೋತಿಷ್ಯ ಪರಿಹಾರ ಇಲ್ಲಿದೆ – Kannada News | Astrological and Spiritual Remedies for Childrens Delayed Speech and Stuttering

ಮಕ್ಕಳು ಮಾತನಾಡುವಾಗ ತೊದಲುತ್ತಿದ್ದರೆ ಅಥವಾ ಮಾತು ತಡವಾಗಿದ್ದರೆ ಪೋಷಕರಿಗೆ ಇದು ಸಾಮಾನ್ಯವಾಗಿ ಆತಂಕವನ್ನುಂಟು ಮಾಡುವ ಸಂಗತಿಯಾಗಿದೆ. ಸಾಮಾನ್ಯವಾಗಿ ವೈದ್ಯರು “ಏನೂ ತೊಂದರೆ ಇಲ್ಲ, ಸ್ವಲ್ಪ ದಿನ ಕಾಯಿರಿ, ಸರಿಹೋಗುತ್ತದೆ” ಎಂದು ಹೇಳುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಇದಕ್ಕೆ ಕೆಲವು ನಿರ್ದಿಷ್ಟ ಕಾರಣಗಳು ಮತ್ತು ಪರಿಹಾರಗಳು ಇವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಮಕ್ಕಳ ಮಾತಿನ ಸಾಮರ್ಥ್ಯವನ್ನು ವೃದ್ಧಿಸಲು ಕೆಲವು ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಪರಿಹಾರಗಳನ್ನು ಸೂಚಿಸಲಾಗಿದೆ. ಪುಟ್ಟ ಮಕ್ಕಳಿರುವ ಮನೆಗಳಲ್ಲಿ, ವಿಶೇಷವಾಗಿ ಮೂರರಿಂದ ಐದು ವರ್ಷದೊಳಗಿನ ಮಕ್ಕಳು ಮಲಗುವ ಅಥವಾ ಆಡುವ ಕೋಣೆಯಲ್ಲಿ ಆದಷ್ಟು ಹಸಿರು ಬಣ್ಣ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಬೇಕು. ಗೋಡೆಯ ಬಣ್ಣ ತಿಳಿ ಹಸಿರಾಗಿರಬಹುದು ಅಥವಾ ವಾಲ್‌ಪೇಪರ್ ಹಸಿರು ಬಣ್ಣದ್ದಾಗಿರಬಹುದು. ಪಾಟ್‌ಗಳಲ್ಲಿ ಗಿಡಗಳನ್ನು ಇಡುವುದು ಸಹ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಸಿರು ಬಣ್ಣವು ಬುಧ ಗ್ರಹಕ್ಕೆ ಸಂಬಂಧಿಸಿದ್ದು, ಇದು ಬುದ್ಧಿಶಕ್ತಿ ಮತ್ತು ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿ.

ಐದು ಅಥವಾ ಆರು ವರ್ಷ ವಯಸ್ಸಾದರೂ ಮಕ್ಕಳು ತೊದಲು ಮಾತನಾಡುತ್ತಿದ್ದರೆ, ಡಾಕ್ಟರ್‌ಗಳ ಸಲಹೆಯ ಜೊತೆಗೆ ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸಬಹುದು. ಪ್ರತಿ ಬುಧವಾರ ನೆನೆಸಿದ ಹೆಸರು ಕಾಳನ್ನು ಆ ಮಗುವಿನ ಕೈಯಿಂದ ದಾನ ಮಾಡಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಬುಧವಾರದ ದಿನ ಹೆಸರು ಕಾಳು ದಾನ ಮಾಡುವುದು ಬುಧ ಗ್ರಹದ ಅನುಗ್ರಹಕ್ಕೆ ಕಾರಣವಾಗುತ್ತದೆ.

ವಾಕ್ಚಾತುರ್ಯದ ದೇವತೆ ಸಾಕ್ಷಾತ್ ಸರಸ್ವತಿ. ಮಕ್ಕಳ ಮಾತಿನ ಶಕ್ತಿಯನ್ನು ಹೆಚ್ಚಿಸಲು ಗುರುಗಳ (ಮಠಾಧೀಶರು ಅಥವಾ ಆಧ್ಯಾತ್ಮಿಕ ಶಕ್ತಿ ಹೊಂದಿದ ಮಹನೀಯರು) ಆಶೀರ್ವಾದ ಪಡೆಯಬಹುದು. ಗುರುವಾರದ ದಿನ, ಬೆಳಗಿನ ಸೂರ್ಯೋದಯದ ಸಮಯದಲ್ಲಿ, ಗುರುಗಳಿಗೆ ನಮಸ್ಕಾರ ಮಾಡಿ, ಅವರ ಕೈಯಿಂದ ಬೆಳ್ಳಿಯ ಕಡ್ಡಿಯಿಂದ ಮಗುವಿನ ನಾಲಿಗೆಯ ಮೇಲೆ ಐಂ ಬೀಜಾಕ್ಷರವನ್ನು ಬರೆಸುವುದು ಬಹಳ ಶುಭಕರ. ಇದು ಮಾತಿನ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಗುರೂಜಿ ಹೇಳಿದ್ದಾರೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆಯಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವುದು ಅಥವಾ ಫೋನ್‌ನಲ್ಲಿ ಕೇಳಿಸುವುದು ಸಹ ಉತ್ತಮ ಪರಿಹಾರ. ಗಾಯತ್ರಿ ಮಂತ್ರದ ಶಬ್ದ ತರಂಗಗಳು ಮಗುವಿನ ಕಿವಿಗೆ ತಲುಪಿದಾಗ, ಅದು ನಾಲಿಗೆ ಮತ್ತು ಕಂಠದ ಶಕ್ತಿಯನ್ನು ಹೆಚ್ಚಿಸುತ್ತದೆ. ಗಾಯತ್ರಿ ಮಂತ್ರವು ಗ್ರಹಣ ಶಕ್ತಿಯನ್ನು ಹೆಚ್ಚಿಸಿ, ಮೆದುಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಮನಸ್ಸಿಗೆ ತೀಕ್ಷ್ಣ ಶಕ್ತಿಯನ್ನು ನೀಡುತ್ತದೆ. ಹಯಗ್ರೀವ ಸ್ತೋತ್ರ “ಜ್ಞಾನಾನಂದಮಯಂ ದೇವಂ ನಿರ್ಮಲ ಸ್ಫಟಿಕಾಕೃತಿಂ ಆಧರಂ ಸರ್ವ ವಿದ್ಯಾ ನಾಮ್ ಹಯಗ್ರೀವ ಮುಪಾಸ್ಮಹೇ” ಇದನ್ನು ಪಠಿಸುವುದು ಹಾಗೂ ದಕ್ಷಿಣಾಮೂರ್ತಿ ದರ್ಶನ ಮಾಡಿಸುವುದು ಸಹ ಜ್ಞಾನ ಮತ್ತು ಮಾತಿನ ವೃದ್ಧಿಗೆ ಸಹಕಾರಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *