ಮದುವೆಗೆ ಯಾವ ಯಾವ ಸಹಾಯ ಮಾಡಿದರೆ ಏನೇನು ಫಲ ಸಿಗುತ್ತೆ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಇಂದಿನ ದಿನಗಳಲ್ಲಿ ಮದುವೆಗೆ ಸಹಾಯ ಮಾಡುವುದನ್ನು ಜನರು ಮರೆಯುತ್ತಿದ್ದಾರೆ, ಆದರೆ ವಿವಾಹದ ಸಮಯದಲ್ಲಿ ಗಂಡು ವಿಷ್ಣುವಿನ ರೂಪ ಮತ್ತು ಹೆಣ್ಣು ಮಹಾಲಕ್ಷ್ಮಿಯ ರೂಪವಾಗಿರುವುದರಿಂದ ಅಲ್ಲಿ ಸರ್ವ ದೇವತೆಗಳ ಉಪಸ್ಥಿತಿ ಇರುತ್ತದೆ ಎಂದು ಗುರೂಜಿ ಹೇಳಿದ್ದಾರೆ. ಮದುವೆಗೆ ಹಣ, ವಸ್ತ್ರ, ಅಕ್ಕಿ ಅಥವಾ ತರಕಾರಿ ದಾನ ಮಾಡುವುದರಿಂದ ಹೋಮ-ಯಜ್ಞ ಮಾಡಿದ ಪುಣ್ಯ ಸಿಗಲಿದ್ದು, ಪಿತೃ ದೋಷ, ಸರ್ಪ ದೋಷ ಮತ್ತು ಅಕಾಲಿಕ ಮರಣದ ಭೀತಿ ದೂರವಾಗುತ್ತದೆ ಎಂದು ಅವರು ವಿವರಿಸಿದ್ದಾರೆ
