ಗಾಲೆ ಟೆಸ್ಟ್ನಲ್ಲಿ (Galle Test) ಟೀಂ ಇಂಡಿಯಾ ನೀಡಿರುವ 372 ರನ್ಗಳ ಗುರಿ ಬೆನ್ನಟ್ಟಿರುವ ಆತಿಥೇಯ ಶ್ರೀಲಂಕಾ ಸೋಲಿನ ಭೀತಿಯನ್ನು ಎದುರಿಸುತ್ತಿದೆ. ಇದರ ನಡುವೆ ತಂಡಕ್ಕೆ ದೊಡ್ಡ ಹಿನ್ನಡೆಯುಂಟಾಗಿದ್ದು, ಅನುಭವಿ ಬ್ಯಾಟ್ಸ್ಮನ್ ದಿನೇಶ್ ಚಾಂಡಿಮಲ್ (Dinesh Chandimal) ಗಾಲೆ ಟೆಸ್ಟ್ನಿಂದ ಹೊರಬಿದಿದ್ದಾರೆ. ಭಾರತದ ಎರಡನೇ ಇನ್ನಿಂಗ್ಸ್ನಲ್ಲಿ ಫೀಲ್ಡಿಂಗ್ ಮಾಡುವಾಗ ಚಾಂಡಿಮಲ್ ಗಾಯಗೊಂಡರು. ಬೌಂಡರಿ ಲೈನ್ನಲ್ಲಿ ಚೆಂಡನ್ನು ತಡೆಯಲು ಪ್ರಯತ್ನಿಸುವಾಗ ಅವರ ಕುತ್ತಿಗೆಗೆ ಗಾಯವಾಯಿತು. ಗಾಯ ಗಂಭೀರವಾಗಿದ್ದರ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಾಂಡಿಮಲ್ ಮತ್ತೆ ಆಟದಲ್ಲಿ ಮುಂದುವರೆಯಲು ಸಾಧ್ಯವಾಗದ ಕಾರಣ ಬದಲಿ ಆಟಗಾರನಾಗಿ ಪಸಿಂದು ಸೂರ್ಯಬಂಢಾರ ಅವರನ್ನು ತಂಡದಲ್ಲಿ ಆಡಿಸಲಾಯಿತು.
ಸೊನ್ನೆ ಸುತ್ತಿದ ಬಂಢಾರ
ಆದಾಗ್ಯೂ ಪಸಿಂದು ಸೂರ್ಯಬಂಢಾರ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದರು. ನಿಶಾನ್ ಮದುಷ್ಕಾ ವಿಕೆಟ್ ಪತನದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಪಸಿಂದು ತಾನು ಎದುರಿಸಿದ ಮೊದಲ ಎಸೆತದಲ್ಲೇ ಮಾನವ್ ಸುತಾರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂಗೆ ಬಲಿಯಾದರು. ಹೀಗಾಗಿ ದಿನೇಶ್ ಚಾಂಡಿಮಲ್ ಬದಲಿಗೆ ತಂಡ ಕೂಡಿಕೊಂಡರೂ ಪಸಿಂದು ಸೂರ್ಯಬಂಢಾರ ತಂಡಕ್ಕೆ ಯಾವುದೇ ರೀತಿಯಲ್ಲೂ ಸಹಾಯಕವಾಗಲಿಲ್ಲ.
India Tour of Sri Lanka 2026: Team Update
Pasindu Sooriybandara comes in as the ‘concussion replacement’ for Dinesh Chandimal
Dinesh Chandimal sustained an injury while fielding during the first session of the day fourth day, hitting his shoulder and head hard on the ground.… pic.twitter.com/Hx8DuhksF7
— Sri Lanka Cricket 🇱🇰 (@OfficialSLC) August 18, 2026
IND vs SL: ಮೂವರಿಂದ 145 ರನ್; ಉಳಿದವರಿಂದ ಕೇವಲ 48 ರನ್
ಗಾಲೆಯಲ್ಲಿ ಶ್ರೀಲಂಕಾ ಗೆಲುವು ಕಷ್ಟ
ಗಾಲೆ ಟೆಸ್ಟ್ನಲ್ಲಿ ಶ್ರೀಲಂಕಾ ತಂಡ ಆರಂಭದಲ್ಲೇ ಆಘಾತ ಎದುರಿಸಿದೆ. ಟೀಂ ಇಂಡಿಯಾ ನೀಡಿರುವ ಬೃಹತ್ ಮೊತ್ತವನ್ನು ಬೆನ್ನಟ್ಟುವುದು ಶ್ರೀಲಂಕಾಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ. ಏಕೆಂದರೆ ನಾಲ್ಕನೇ ಇನ್ನಿಂಗ್ಸ್ನಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟುವುದು ಕಷ್ಟಕರ. ಈ ಮೈದಾನದಲ್ಲಿ ಶ್ರೀಲಂಕಾ ನಾಲ್ಕನೇ ಇನ್ನಿಂಗ್ಸ್ನಲ್ಲಿ ಇದುವರೆಗೆ 300 ರನ್ಗಳನ್ನು ಸಹ ದಾಖಲಿಸಿಲ್ಲ. ಇದಲ್ಲದೆ, ಈ ಪಂದ್ಯದಲ್ಲಿ ಗಾಲೆ ಪಿಚ್ ವರ್ತಿಸುತ್ತಿರುವ ರೀತಿಯನ್ನು ನೋಡಿದರೆ, ಶ್ರೀಲಂಕಾ ತಂಡವು ಪಂದ್ಯವನ್ನು ಗೆಲ್ಲುವುದು ಅಸಂಭವವೆಂದು ತೋರುತ್ತದೆ. ಆದಾಗ್ಯೂ, ಗಾಲೆಯಲ್ಲಿನ ಹವಾಮಾನವು ಖಂಡಿತವಾಗಿಯೂ ಶ್ರೀಲಂಕಾಕ್ಕೆ ಸಹಾಯ ಮಾಡಬಹುದು. ಆದ್ದರಿಂದ ಟೀಂ ಇಂಡಿಯಾ ಲಂಕಾ ತಂಡವನ್ನು ಆದಷ್ಟು ಬೇಗ ಆಲೌಟ್ ಮಾಡಬೇಕಿದೆ.