ಸ್ಟಾರ್ ಆಟಗಾರರ ಗಾಯದ ಸಮಸ್ಯೆಯಿಂದ ತತ್ತರಿಸಿ ಹೋಗಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಮತ್ತೊಂದು ಘಾತ ಎದುರಾಗಿದೆ. ಸತತ ಸೋಲುಗಳಿಂದ ಕಂಗೆಟ್ಟು, ಇತ್ತೀಚೆಗಷ್ಟೇ ಗೆಲುವಿನ ಲಯಕ್ಕೆ ಮರಳಿದ್ದ ಸಿಎಸ್ಕೆ ತಂಡದಿಂದ ಯುವ ವೇಗಿಯೊಬ್ಬ ಹೊರಬಿದ್ದಿದ್ದಾನೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದ ಯುವ ವೇಗಿ ರಾಮಕೃಷ್ಣ ಘೋಷ್ (Ramakrishna Ghosh) ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಇದರ ಪರಿಣಾಮವಾಗಿ ಅವರು ಇಡೀ ಐಪಿಎಲ್ನಿಂದಲೇ ಹೊರಬಿದ್ದಿದ್ದಾರೆ. ಈ ವಿಚಾರವನ್ನು ಸಿಎಸ್ಕೆ ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಸಿಎಸ್ಕೆಗೆ ಗಾಯದ ಸಮಸ್ಯೆ
ಗಾಯದ ಕಾರಣದಿಂದಾಗಿ ಐಪಿಎಲ್ನಿಂದ ಹೊರಬಿದ್ದ ಮೊದಲ ಸಿಎಸ್ಕೆ ಆಟಗಾರ ರಾಮಕೃಷ್ಣ ಘೋಷ್ ಅಲ್ಲ. ಅವರಿಗೂ ಮೊದಲು ನಾಥನ್ ಎಲ್ಲಿಸ್, ಆಯುಷ್ ಮ್ಹಾತ್ರೆ ಮತ್ತು ಖಲೀಲ್ ಅಹ್ಮದ್ ಗಾಯದಿಂದಾಗಿ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಇವರುಗಳ ಜೊತೆಗೆ ಅನುಭವಿ ಬ್ಯಾಟ್ಸ್ಮನ್ ಎಂಎಸ್ ಧೋನಿ ಕೂಡ ಗಾಯದಿಂದಾಗಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಧೋನಿ ಐಪಿಎಲ್ನಿಂದ ಹೊರಬಿದ್ದಿಲ್ಲವಾದರೂ ಅವರು ಆಡುವುದು ಕೂಡ ಅನುಮಾನವಾಗಿದೆ. ಇದೆಲ್ಲದರ ನಡುವೆ ರಾಮಕೃಷ್ಣ ಗಾಯದಿಂದ ಐಪಿಎಲ್ ತೊರೆದಿರುವುದು ಸಿಎಸ್ಕೆಗೆ ನುಂಗಲಾರದ ತುತ್ತಾಗಿದೆ.
OFFICIAL ANNOUNCEMENT:
Ramakrishna Ghosh sustained a fracture to his right foot during the CSK v MI match at Chepauk.
He will take no further part in IPL 2026.
Get well soon, Rambo. pic.twitter.com/CQve4zLixG— Chennai Super Kings (@ChennaiIPL) May 3, 2026
ಚೊಚ್ಚಲ ಪಂದ್ಯದ ಬಳಿಕ ಔಟ್
ವಾಸ್ತವವಾಗಿ ಐಪಿಎಲ್ 2026 ರ 45ನೇ ಪಂದ್ಯ ಚೆಪಾಕ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ರಾಮಕೃಷ್ಣ ಘೋಷ್, ಮುಂಬೈ ತಂಡದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದಿದ್ದರು. ಇದು ರಾಮಕೃಷ್ಣ ಅವರ ಮೊದಲ ಐಪಿಎಲ್ ಪಂದ್ಯವಾಗಿತ್ತು. ಮೊದಲ ಪಂದ್ಯದಲ್ಲೇ ಸ್ಟಾರ್ ಬ್ಯಾಟರ್ನ ವಿಕೆಟ್ ಕಿತ್ತು ಸಂಭ್ರಮಿಸಿದ್ದ ರಾಮಕೃಷ್ಣ ಅದೇ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಈ ಪಂದ್ಯದ ಸಮಯದಲ್ಲಿ ರಾಮಕೃಷ್ಣ ಘೋಷ್ ಅವರ ಬಲಗಾಲಿನ ಮೂಳೆ ಮುರಿತಗೊಂಡಿದೆ ಎಂದು ಸಿಎಸ್ಕೆ ಫ್ರಾಂಚೈಸಿ, ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಈ ಗಾಯದಿಂದಾಗಿ ಅವರು ಈ ಆವೃತ್ತಿಯಲ್ಲಿ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.
CSK vs GT: ತವರಿನಲ್ಲೇ ಮಂಕಾದ ಸಿಎಸ್ಕೆ; ಗುಜರಾತ್ಗೆ 8 ವಿಕೆಟ್ ಜಯ
ಸೂರ್ಯನ ವಿಕೆಟ್ ಪಡೆದಿದ್ದ ರಾಮಕೃಷ್ಣ
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೇ 2 ರಂದು ಈ ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ರಾಮಕೃಷ್ಣ ಘೋಷ್ ಮೂರು ಓವರ್ಗಳನ್ನು ಬೌಲಿಂಗ್ ಮಾಡಿ ಒಟ್ಟು 24 ರನ್ಗಳನ್ನು ನೀಡಿ ಸೂರ್ಯಕುಮಾರ್ ಯಾದವ್ ರೂಪದಲ್ಲಿ ಏಕೈಕ ವಿಕೆಟ್ ಪಡೆದಿದ್ದರು. ಮುಂಬರುವ ಪಂದ್ಯಗಳಲ್ಲಿ ಅವರು ಸಿಎಸ್ಕೆ ಬೌಲಿಂಗ್ ದಾಳಿಯನ್ನು ಬಲಪಡಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಅವರ ಚೊಚ್ಚಲ ಪಂದ್ಯದ ಒಂದು ದಿನದ ನಂತರ ಈ ಗಾಯವು ಅವರಿಗೆ ಮತ್ತು ತಂಡಕ್ಕೆ ಭಾರಿ ನಿರಾಶೆಯನ್ನುಂಟುಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:50 pm, Sun, 3 May 26
