ಮಂಗಳ ಗ್ರಹ ವೃಷಭ ರಾಶಿಗೆ ಸಂಚಾರImage Credit source: Getty Images
ಜುಲೈ ತಿಂಗಳಲ್ಲಿ ಮಂಗಳ ಗ್ರಹವು ವೃಷಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕುಜನನ್ನು ಶಕ್ತಿ, ಸಾಹಸ, ಭೂಮಿ ಮತ್ತು ಭ್ರಾತೃತ್ವದ ಕಾರಕನೆಂದು ಪರಿಗಣಿಸಲಾಗುತ್ತದೆ. ವೃಷಭ ರಾಶಿಯು ಶುಕ್ರನ ಮನೆಯಾಗಿದ್ದು, ಇದು ಸ್ಥಿರ ಹಾಗೂ ಪೃಥ್ವಿ ತತ್ವದ ರಾಶಿಯಾಗಿದೆ. ಈ ಸಂಚಾರದಿಂದಾಗಿ ಜುಲೈ ತಿಂಗಳಲ್ಲಿ ದ್ವಾದಶ ರಾಶಿಗಳ ಮೇಲೆ ಹೀಗೆಲ್ಲ ಪರಿಣಾಮ ಬೀರಲಿದೆ.
ಈ ರಾಶಿಗೆ ಉತ್ತಮ ಫಲ:
ಮೇಷ ರಾಶಿ:
ನಿಮ್ಮ ರಾಶ್ಯಾಧಿಪತಿಯಾದ ಕುಜನು ದ್ವಿತೀಯ ಭಾವದಲ್ಲಿ ಸಂಚರಿಸುವುದರಿಂದ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಬಾಕಿ ಉಳಿದಿರುವ ಹಣ ಕೈ ಸೇರಲಿದೆ. ಆದರೆ, ಮಾತಿನಲ್ಲಿ ಕಠೋರತೆ ಬರಬಹುದು, ಕುಟುಂಬದಲ್ಲಿ ಸಂಯಮದಿಂದ ವರ್ತಿಸುವುದು ಒಳಿತು.
ಸಿಂಹ ರಾಶಿ:
ದಶಮ ಭಾವದಲ್ಲಿ ಕುಜನ ಸಂಚಾರವು ವೃತ್ತಿ ರಂಗದಲ್ಲಿ ಅದ್ಭುತ ಪ್ರಗತಿಯನ್ನು ನೀಡುತ್ತದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಅಥವಾ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಧೈರ್ಯದ ನಿರ್ಧಾರಗಳು ಲಾಭ ತರಲಿವೆ.
ವೃಶ್ಚಿಕ ರಾಶಿ:
ಸಪ್ತಮ ಭಾವದಲ್ಲಿ ಕುಜನಿರುವುದರಿಂದ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಆದರೆ ವ್ಯಾಪಾರ ಮತ್ತು ಜಂಟಿ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಾಣಬಹುದು. ನಿಮ್ಮ ಪ್ರಭಾವ ಸಮಾಜದಲ್ಲಿ ಹೆಚ್ಚಾಗಲಿದೆ.
ಮಕರ ರಾಶಿ:
ಪಂಚಮ ಭಾವದಲ್ಲಿ ಕುಜನ ಇರುವಿಕೆಯಿಂದಾಗಿ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಆಕಸ್ಮಿಕ ಧನಲಾಭದ ಯೋಗವಿದೆ.
ಈ ರಾಶಿಗೆ ಮಿಶ್ರ ಫಲ
ವೃಷಭ ರಾಶಿ:
ನಿಮ್ಮದೇ ರಾಶಿಯಲ್ಲಿ ಕುಜನಿರುವುದರಿಂದ ಕೋಪ ಮತ್ತು ಆತುರ ಹೆಚ್ಚಾಗಬಹುದು. ಆರೋಗ್ಯದ ಕಡೆಗೆ ಗಮನ ಕೊಡುವುದು ಅಗತ್ಯ. ರಕ್ತದೊತ್ತಡ ಅಥವಾ ಉಷ್ಣ ಬಾಧೆ ಕಾಡಬಹುದು. ಆದಾಗ್ಯೂ, ಕಾರ್ಯಕ್ಷಮತೆ ಹೆಚ್ಚಿರುತ್ತದೆ.
ಕರ್ಕಾಟಕ ರಾಶಿ:
ಏಕಾದಶ ಭಾವದಲ್ಲಿ ಕುಜನಿರುವುದರಿಂದ ಆರ್ಥಿಕ ಪ್ರಗತಿ ಉತ್ತಮವಾಗಿರುತ್ತದೆ. ಆದರೆ ದೊಡ್ಡ ಒಡಹುಟ್ಟಿದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರದಂತೆ ಎಚ್ಚರ ವಹಿಸಬೇಕು.
ಕನ್ಯಾ ರಾಶಿ:
ಭಾಗ್ಯಸ್ಥಾನದಲ್ಲಿ ಕುಜನಿರುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ತಂದೆಯವರ ಆರೋಗ್ಯದ ಕಡೆಗೆ ನಿಗಾ ಇರಲಿ. ವಿದೇಶ ಪ್ರಯಾಣ ಅಥವಾ ದೂರದ ಪ್ರಯಾಣದ ಯೋಜನೆಗಳು ಸಫಲವಾಗುತ್ತವೆ.
ಮೀನ ರಾಶಿ:
ತೃತೀಯ ಭಾವದಲ್ಲಿ ಕುಜನಿರುವುದರಿಂದ ನಿಮ್ಮ ಪರಾಕ್ರಮ ಮತ್ತು ಧೈರ್ಯ ವೃದ್ಧಿಯಾಗುತ್ತದೆ. ಸಣ್ಣ ಪ್ರವಾಸಗಳಿಂದ ಲಾಭವಾಗಲಿದೆ. ಸಹೋದರ-ಸಹೋದರಿಯರೊಂದಿಗೆ ಸುಧಾರಿತ ಬಾಂಧವ್ಯ ಇರಲಿದೆ.
ಈ ರಾಶಿಗೆ ಅಶುಭ ಫಲ
ಮಿಥುನ ರಾಶಿ:
ದ್ವಾದಶ ಭಾವದಲ್ಲಿ ಕುಜನಿರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಬಹುದು. ಕಣ್ಣಿನ ಸಮಸ್ಯೆ ಅಥವಾ ನಿದ್ರಾಹೀನತೆ ಕಾಡಬಹುದು. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಜಾಗರೂಕರಾಗಿರಿ.
ಇದನ್ನೂ ಓದಿ: ಶುಕ್ರ-ಕೇತು ಸಂಯೋಗ; ಈ 4 ರಾಶಿಯವರು ಜುಲೈನಲ್ಲಿ ಅತ್ಯಂತ ಜಾಗರೂಕರಾಗಿರಿ
ತುಲಾ ರಾಶಿ:
ಅಷ್ಟಮ ಭಾವದಲ್ಲಿ ಕುಜನ ಸಂಚಾರವಿರುವುದರಿಂದ ವಾಹನ ಚಾಲನೆಯಲ್ಲಿ ಅತಿ ಹೆಚ್ಚಿನ ಜಾಗ್ರತೆ ಅಗತ್ಯ. ಹಠಾತ್ ಆರೋಗ್ಯ ಏರುಪೇರಾಗಬಹುದು. ಮಾತು ಮತ್ತು ಸಿಟ್ಟಿನ ಮೇಲೆ ನಿಯಂತ್ರಣವಿರಲಿ.
ಧನು ರಾಶಿ:
ಷಷ್ಠ ಭಾವದಲ್ಲಿ ಕುಜನಿರುವುದರಿಂದ ಶತ್ರುಗಳ ಮೇಲೆ ಜಯ ಸಿಗಲಿದೆ. ಆದರೆ ಸಾಲದ ವಹಿವಾಟುಗಳಿಂದ ದೂರವಿರಿ. ಆರೋಗ್ಯದ ದೃಷ್ಟಿಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಗಮನ ಕೊಡಿ.
ಕುಂಭ ರಾಶಿ:
ಚತುರ್ಥ ಭಾವದಲ್ಲಿ ಕುಜನಿರುವುದರಿಂದ ಕೌಟುಂಬಿಕ ಜೀವನದಲ್ಲಿ ಶಾಂತಿ ಕೊರತೆಯಾಗಬಹುದು. ತಾಯಿಯವರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಭೂಮಿ ಅಥವಾ ವಾಹನ ಖರೀದಿ ಮಾಡುವಾಗ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. ಕುಜನ ಅನುಗ್ರಹಕ್ಕಾಗಿ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡುವುದು ಉತ್ತಮ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
