ರಾಯಚೂರು: ಬಿಸಿಲ ಝಳಕ್ಕೆ ಪೊಲೀಸ್ ಶ್ವಾನಗಳು ಕಂಗಾಲು: ಏರ್ ಕೂಲರ್​ ವ್ಯವಸ್ಥೆ ಮಾಡಿ ಮಕ್ಕಳಂತೆ ಆರೈಕೆ ಮಾಡ್ತಿರುವ ಸಿಬ್ಬಂದಿ – Kannada News | Raichur Heatwave: Police Dogs Get Air Coolers and Special Diet as Temperatures Hit 45 Degrees Celsius

ರಾಯಚೂರು, ಏಪ್ರಿಲ್ 24: ರಾಯಚೂರು ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಅತಿ ಹೆಚ್ಚು ತಾಪಮಾನದಿಂದ ಪೊಲೀಸ್ ಶ್ವಾನಗಳ ಆರೋಗ್ಯಕ್ಕೆ ಧಕ್ಕೆಯಾಗದಂತೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆಯು ತಮ್ಮ ಶ್ವಾನದಳಕ್ಕೆ ಬಿಸಿಲಿನಿಂದ ರಕ್ಷಣೆ ಒದಗಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಶ್ವಾನಗಳಿರುವ ಕೊಠಡಿಗಳಲ್ಲಿ ಏರ್ ಕೂಲರ್‌ಗಳು ಮತ್ತು ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಸದ್ಯ ರಾಯಚೂರಿನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದೆ. ಈ ಉಷ್ಣಾಂಶದಿಂದ ಶ್ವಾನಗಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬ ಕಾರಣಕ್ಕೆ ಪ್ರತಿದಿನ ಅವುಗಳಿಗೆ ಎಳನೀರು, ಮೊಸರು, ಮಜ್ಜಿಗೆ ಹಾಗೂ ತಣ್ಣೀರು ನೀಡಲಾಗುತ್ತಿದೆ.

ಜಿಆರ್‌ ಸಿಬ್ಬಂದಿಗಳು ಪುಟಾಣಿ ಮಕ್ಕಳಂತೆ ಶ್ವಾನಗಳ ಆರೈಕೆ ಮಾಡುತ್ತಿದ್ದಾರೆ. ಅವುಗಳ ಆರೋಗ್ಯದಲ್ಲಿ ಯಾವುದೇ ಏರುಪೇರಾಗದಂತೆ ಕ್ಷಣಕ್ಷಣವೂ ನಿಗಾ ವಹಿಸಲಾಗುತ್ತಿದೆ ಎಂದು ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಡವರಿಗೆ ಸೇರಬೇಕಿದ್ದ ಅನ್ನಭಾಗ್ಯ ಅಕ್ಕಿ ದಂಧೆಕೋರರ ಪಾಲು: 2,000ಕ್ಕೂ ಹೆಚ್ಚು ಮೂಟೆಗಳು ವಶಕ್ಕೆ – Kannada News | Massive Annabhagya Rice Seizure in Koppal: Over 2,000 Bags of Illegally Stored Grain Recovered

ಕೊಪ್ಪಳ, ಏಪ್ರಿಲ್​​ 24: ತಾಲೂಕಿನ ಕೂಕನಪಳ್ಳಿ ಹೊರವಲಯದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ದೊಡ್ಡ ಪ್ರಮಾಣದ ದಾಸ್ತಾನನ್ನು ಪತ್ತೆ ಹಚ್ಚಲಾಗಿದೆ. ಮುನಿರಾಬಾದ್ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 2,000ಕ್ಕೂ ಹೆಚ್ಚು ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 150 ಟನ್‌ನಷ್ಟು ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು ಎಂಬುದು ಗೊತ್ತಾಗಿದೆ. ಬಳ್ಳಾರಿ ವಲಯ ಐಜಿಪಿ ಸೂಚನೆ ಮೇರೆಗೆ ಈ ದಾಳಿ ನಡೆಸಲಾಗಿದ್ದು, ಫಲಾನುಭವಿಗಳಿಂದ ಕಡಿಮೆ ಬೆಲೆಗೆ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ನಡೆಯುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಅಕ್ಕಿಯನ್ನು ಹೊರ ರಾಜ್ಯಗಳಿಗೆ ರಫ್ತು ಮಾಡುವ ಉದ್ದೇಶ ಹೊಂದಿದ್ದರು ಎಂದು ಶಂಕಿಸಲಾಗಿದೆ. ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಆಟವಾಡುತ್ತಾ ಪಾತ್ರೆಯೊಳಗೆ ಸಿಲುಕಿದ್ದ ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು! – Kannada News | Thiruvananthapuram: Toddler Saved from Pot by Brave Kerala Rescuers

ತಿರುವನಂತಪುರಂ, ಏ.24: ಆಟವಾಡುತ್ತಿದ್ದಾಗ ಪಾತ್ರೆಯೊಳಗೆ ಸಿಲುಕಿಕೊಂಡಿದ್ದ ಪುಟ್ಟ ಮಗುವೊಂದನ್ನು ಕೇರಳದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಅತ್ಯಂತ ನಾಜೂಕಾಗಿ ರಕ್ಷಿಸಿದ್ದಾರೆ. ಇವರ ಈ ಸಮಯೋಚಿತ ಕಾರ್ಯಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮನೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಅಡುಗೆ ಮನೆಯಲ್ಲಿದ್ದ ದೊಡ್ಡದಾದ ಅಲ್ಯೂಮಿನಿಯಂ ಪಾತ್ರೆಯೊಳಗೆ ಇಳಿದಿದೆ. ಆದರೆ, ಹೊರಬರಲು ಪ್ರಯತ್ನಿಸಿದಾಗ ಮಗುವಿನ ಸೊಂಟದ ಭಾಗ ಪಾತ್ರೆಯಲ್ಲಿ ಸಿಲುಕಿಕೊಂಡಿದೆ. ಮಗುವಿನ ಅಳು ಕೇಳಿ ಓಡಿ ಬಂದ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಪೋಷಕರು ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಮಗುವಿಗೆ ಯಾವುದೇ ನೋವಾಗದಂತೆ ಅತ್ಯಂತ ಎಚ್ಚರಿಕೆ ವಹಿಸಿ, ಹೈಡ್ರಾಲಿಕ್ ಕಟ್ಟರ್‌ಗಳನ್ನು ಬಳಸಿ ಅಲ್ಯೂಮಿನಿಯಂ ಪಾತ್ರೆಯನ್ನು ನಿಧಾನವಾಗಿ ಕತ್ತರಿಸುವ ಮೂಲಕ ಮಗುವನ್ನು ಸುರಕ್ಷಿತವಾಗಿ ಹೊರತೆಗೆದರು. ಮಗು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಷ್ಟದ ಸಮಯದಲ್ಲಿ ದೇವರಂತೆ ಬಂದು ನೆರವಾದ ಪೊಲೀಸರ ಈ ಕಾರ್ಯ ‘ಮಾನವೀಯತೆಯ ಸುಂದರ ನೋಟ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು – Kannada News | Sadhu Kokila talks about Dr Rajkumar watch video

ಡಾ ರಾಜ್​ಕುಮಾರ್ (Dr Rajkumar) ಜಯಂತಿ ನಿಮಿತ್ತ ಗೀತ-ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್​ಕುಮಾರ್ ಕುಟುಂಬದ ಸದಸ್ಯರ ಜೊತೆಗೆ ಶಾಸಕ ಗೋಪಾಲಯ್ಯ ಮತ್ತು ಚಿತ್ರರಂಗದ ಕೆಲ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಟ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಸಾಧು ಕೋಕಿಲ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಣ್ಣಾವ್ರ ಬಗ್ಗೆ ಮಾತನಾಡಿದರು. ನಾವೆಲ್ಲ, ಅಣ್ಣಾವ್ರನ್ನು ಒಮ್ಮೆ ಮುಟ್ಟಲು ಕಾಯುತ್ತಿದ್ದೆವು. ಅವರ ಮಾತು, ಅವರ ನಡೆ-ನುಡಿ, ಅವರ ಮೈಕಟ್ಟು ಎಲ್ಲವೂ ಅದ್ಭುತ. ಅವರ ಮೈಯ್ಯಂತೂ ರೇಷ್ಮೆಯಂತೆ ನುಣುಪಾಗಿ ಇರುತ್ತಿತ್ತು ಎಂದು ಸಾಧು ಕೋಕಿಲ ಹೇಳಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಕೊಲೆಗಾರನಿಗೆ ನಾಯಕನ ಪಟ್ಟ: ‘ಲಾರೆನ್ಸ್ ಆಫ್ ಪಂಜಾಬ್’ ಸಾಕ್ಷ್ಯಚಿತ್ರ ನಿಷೇಧ – Kannada News | Lawrence of Punjab Dacuseries banned by Central government

‘ನಾಯಕ’ ಎಂದರೆ ಒಳ್ಳೆಯವ, ಮಹಿಳೆಯರ ಘನತೆ ಕಾಪಾಡುವವ, ಶಿಷ್ಟರ ರಕ್ಷಣೆ ಮಾಡುವಾತ, ಸುಳ್ಳು ಹೇಳದವ, ಅನ್ಯಾಯದ ವಿರದ್ಧ ಹೋರಾಡುವವ, ಹಣಕ್ಕಾಗಿ ತನ್ನ ಆದರ್ಶ ತ್ಯಜಿಸದವ, ಹಿಂಸೆಯ ವಿರುದ್ಧ ನಿಲ್ಲುವವ. ಆದರೆ ಇತ್ತೀಚೆಗಿನ ಸಿನಿಮಾಗಳಲ್ಲಿ ‘ನಾಯಕ’ ಎಂದರೆ ರೌಡಿ, ಮಹಿಳಾ ಪೀಡಕ, ಹಿಂಸೆಯನ್ನು ಎಂಜಾಯ್ ಮಾಡುವವ ಎಂದಾಗಿದೆ. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ನಿಜ ಜೀವನದಲ್ಲಿ ರೌಡಿ, ಭೂಗತ ಪಾತಕಿ, ಕೊಲೆಗಾರರ ಆಗಿರುವವನನ್ನು ‘ನಾಯಕ’ನನ್ನಾಗಿಸಲಾಗುತ್ತಿದೆ. ಇಂಥಹದೇ ಥೀಮ್​​ನ ಒಂದು ಡಾಕ್ಯು ಸೀರೀಸ್ ಒಂದು ಬಿಡುಗಡೆ ಆಗಲಿದ್ದು, ಅದರ ಹೆಸರು ‘ಲಾರೆನ್ಸ್ ಆಫ್ ಪಂಜಾಬ್’ (Lawrence of Punjab) ಇದರ ನಿಷೇಧಕ್ಕೆ ಈಗ ಒತ್ತಾಯ ಕೇಳಿಬಂದಿತ್ತು. ಅದರಂತೆ ಸರ್ಕಾರ ಇದೀಗ ಡಾಕ್ಯು ಸೀರೀಸ್ ಬಿಡುಗಡೆಗೆ ನಿಷೇಧ ಹೇರಿದೆ.

‘ಲಾರೆನ್ಸ್ ಆಫ್ ಪಂಜಾಬ್’ ಡಾಕ್ಯು ಸೀರೀಸ್ (ಸಾಕ್ಷ್ಯ ಸರಣಿ) ಕುಖ್ಯಾತ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಕುರಿತಾಗಿದ್ದಾಗಿದೆ. ಸಾಕ್ಷ್ಯ ಸರಣಿ ಆಗಿದ್ದು, ನಿಜ ವ್ಯಕ್ತಿ, ದೃಶ್ಯಗಳು, ವಿಡಿಯೋಗಳ ಜೊತೆಗೆ ಚಿತ್ರೀಕರಿಸಿದ ದೃಶ್ಯಗಳನ್ನು ಸಹ ಒಳಗೊಂಡಿತ್ತು. ಈ ಸಾಕ್ಷ್ಯ ಸರಣಿಯಲ್ಲಿ ಲಾರೆನ್ಸ್ ಬಿಷ್ಣೋಯಿಯನ್ನು ‘ಹೀರೋ’ ಎಂಬಂತೆ ಬಿಂಬಿಸಲಾಗಿದೆ ಎಂಬ ಆರೋಪವಿತ್ತು. ಇಲ್ಲಿ ತಿಳಿಯಬೇಕಾದ ವಿಷಯವೆಂದರೆ ಲಾರೆನ್ಸ್ ಬಿಷ್ಣೊಯಿ ಪಾತಕಿ ಆಗಿದ್ದು, ಆತನ ಮೇಲೆ 80ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಬಹುತೇಕ ಕ್ರಿಮಿನಲ್ ಪ್ರಕರಣಗಳು. ಕೊಲೆ, ಅತ್ಯಾಚಾರ, ವಂಚನೆ, ಬೆದರಿಕೆ, ವಸೂಲಿ, ಸುಲಿಗೆ ಇನ್ನೂ ಹಲವು. ಆರು ಗಂಭೀರ ಪ್ರಕರಣಗಳಲ್ಲಿ ಲಾರೆನ್ಸ್ ಅಪರಾಧಿ ಎಂದು ಈಗಾಗಲೇ ಘೋಷಣೆ ಸಹ ಆಗಿದೆ. ಇಂಥಹಾ ವ್ಯಕ್ತಿಯ ಬಗ್ಗೆ ಇದೀಗ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ.

‘ಲಾರೆನ್ಸ್ ಆಫ್ ಪಂಜಾಬ್’ ಡಾಕ್ಯುಸೀರಿಸ್ ಬಿಡುಗಡೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಸಲ್ಲಿಸಲಾಗಿತ್ತು. ಸ್ವತಃ ಪಂಜಾಬ್ ಕಾಂಗ್ರೆಸ್, ಈ ಕುರಿತು ಅರ್ಜಿ ಸಲ್ಲಿಸಿ, ನಿಷೇಧಕ್ಕೆ ಒತ್ತಾಯಿಸಿತ್ತು. ಲಾರೆನ್ಸ್ ಬಿಷ್ಣೋಯಿ ಸಹೋದರ ಸಂಬಂಧಿ ಸಹ ಡಾಕ್ಯುಸೀರೀಸ್ ಬಿಡುಗಡೆಗೆ ವಿರೋಧಿಸಿದ್ದರು. ಅಲ್ಲದೆ, ಬಿಷ್ಣೋಯಿ ಗ್ಯಾಂಗ್​​ನಿಂದ ಹತ್ಯೆಯಾದ ಖ್ಯಾತ ಗಾಯಕ, ಪಂಜಾಬ್ ಕಾಂಗ್ರೆಸ್ ಯುವ ಮುಖಂಡ ಸಿಧು ಮೂಸೆವಾಲ ತಂದೆಯವರೂ ಸಹ ಈ ಡಾಕ್ಯು ಸೀರೀಸ್ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:‘ರಾಜ ಶಿವಾಜಿ’ ಸಿನಿಮಾದ ಕಲಾವಿದರಿಗೆ ಸಿಕ್ಕಿದೆ ಭಾರೀ ಸಂಭಾವನೆ

ಲಾರೆನ್ಸ್ ಬಿಷ್ಣೋಯ್ ವಿರುದ್ಧದ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಇಂತಹ ಸಮಯದಲ್ಲಿ ಈ ಸರಣಿ ಬಿಡುಗಡೆ ಮಾಡುವುದು ಸರಿಯಲ್ಲ ಮತ್ತು ಇದು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕವನ್ನು ಅವರ ಕುಟುಂಬ ಸದಸ್ಯರು ವ್ಯಕ್ತಪಡಿಸಿದ್ದರು, ಪಂಜಾಬ್ ಪೊಲೀಸರು ಕೂಡ ಈ ಸಾಕ್ಷ್ಯಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಸರಣಿಯು ಸಮಾಜದಲ್ಲಿ ಅಪರಾಧಗಳನ್ನು ವೈಭವೀಕರಿಸಬಹುದು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದು ಇದನ್ನು ನಿರ್ಬಂಧಿಸುವಂತೆ ಕೋರಿತ್ತು.

ಅದರಂತೆ, ‘ಲಾರೆನ್ಸ್ ಆಫ್ ಬಿಷ್ಣೋಯಿ’ ಸಾಕ್ಷ್ಯ ಚಿತ್ರ ನಿಷೇಧಕ್ಕೆ ಒತ್ತಾಯಿಸಿ ಹಾಕಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಈ ಡಾಕ್ಯುಸರಣಿಯನ್ನು ನಿಷೇಧ ಮಾಡುವುದಾಗಿ ಹರಯಾಣ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ‘ಲಾರೆನ್ಸ್ ಆಫ್ ಬಿಷ್ಣೋಯಿ’ ಡಾಕ್ಯು ಸೀರೀಸ್ ಏಪ್ರಿಲ್ 27ರಂದು ಬಿಡುಗಡೆ ಆಗಬೇಕಿತ್ತು. ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ತೋರಿಸಿರುವಂತೆ ಕೆಲವು ಪೊಲೀಸ್ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಪಂಜಾಬ್​ನ ಭೂತಕ ಗ್ಯಾಂಗ್​​ಗಳು ಹಾಗೂ ಲಾರೆನ್ಸ್ ಬಿಷ್ಣೋಯಿ ಬಗ್ಗೆ ಮಾತನಾಡಿದ್ದಾರೆ. ಬಿಷ್ಣೋಯಿಯನ್ನು ಅದ್ಧೂರಿ ಹಿನ್ನೆಲೆ ಸಂಗೀತದೊಂದಿಗೆ ‘ಹೀರೋ’ ರೀತಿ ತೋರಿಸಿರುವ ದೃಶ್ಯಗಳು ಸಹ ಟ್ರೈಲರ್​​ನಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ ಸಾವು! ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ – Kannada News | Ballari Hospital Negligence: Elderly Cancer Patient Dies Post Surgery, Family alleges

ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ ಸಾವು!

ಬಳ್ಳಾರಿ, ಏಪ್ರಿಲ್ 24: ಜಿಲ್ಲೆಯ ಬಿಎಂಇಆರ್‌ಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ (Cancer) ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ ಸಾವನ್ನಪ್ಪಿದ ಘಟನೆ ವಿವಾದಕ್ಕೆ ಕಾರಣವಾಗಿದ್ದು, ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆಪರೇಷನ್ ನಂತರ ಸೂಕ್ತ ಔಷಧಿ, ಇಂಜೆಕ್ಷನ್ ನೀಡದ ಕಾರಣದಿಂದ ವೈದ್ಧೆ ಸಾವನ್ನಪ್ಪಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಅಕ್ಕಮ್ಮ ಬದುಕುತ್ತಿದ್ದರು ಎಂದು ಕುಟುಂಬಸ್ಥರ ಅಳಲು

ಬಾಯಿಯ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಅಕ್ಕಮ್ಮ (70) ಎಂಬುವವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 17ರಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಪರೇಷನ್ ಯಶಸ್ವಿಯಾಗಿ ನಡೆದಿತ್ತು ಎಂದು ವೈದ್ಯರು ತಿಳಿಸಿದ್ದರು. ಶಸ್ತ್ರಚಿಕಿತ್ಸೆಯ ನಂತರವೂ ವೈದ್ಯರು ಸರಿಯಾಗಿಯೇ ನೋಡಿಕೊಂಡಿದ್ದರು ಎನ್ನಲಾಗಿದೆ.

ಆದರೆ ಆಪರೇಷನ್ ಬಳಿಕ ಆಸ್ಪತ್ರೆ ಸಿಬ್ಬಂದಿ ಅಗತ್ಯವಿರುವ ಸಮಯಕ್ಕೆ ಇಂಜೆಕ್ಷನ್, ಔಷಧಿ ಹಾಗೂ ಇತರೆ ಚಿಕಿತ್ಸೆ ನೀಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ವೈದ್ಯರು ಸೂಚನೆ ನೀಡಿದ್ದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು, ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಅಕ್ಕಮ್ಮ ಬದುಕುತ್ತಿದ್ದರು ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಖಾಸಗಿ ಮೆಡಿಸಿನ್​ಗೆ ಸಾವಿರಾರು ರೂ. ಖರ್ಚು!

ಆಸ್ಪತ್ರೆಯಲ್ಲಿ ಔಷಧ ಲಭ್ಯವಿಲ್ಲವೆಂದು ಹೇಳಿ ಖಾಸಗಿ ಮೆಡಿಸಿನ್ ಖರೀದಿಸಲು ಹೇಳಲಾಗಿದ್ದು, ಸುಮಾರು 40 ಸಾವಿರ ರೂ. ಖರ್ಚು ಮಾಡಿಸಿದ್ದಾರೆ ಎಂಬ ಆರೋಪವೂ ಇದೆ. ಜೊತೆಗೆ, ಖಾಸಗಿ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆ ಮಾಡಿಸಲು ಒತ್ತಾಯಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಅಕ್ಕಮ್ಮ ಸಾವಿಗೆ ಕಾರಣವಾದ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮರಳಿ ಬಾಲ್ಯವನ್ನು ನೆನಪಿಸುವಂತಿದೆ ಈ ದೃಶ್ಯ; ಪಾಠದ ನಡುವೆ ತಿಂಡಿ ತಿಂದ ಪುಟಾಣಿ – Kannada News | A little boy who stole and ate a snack between lessons

ಪುಟ್ಟ ಮಕ್ಕಳು (little kids) ಕ್ಲಾಸ್ ರೂಮ್ ನಲ್ಲಿ ಶಿಕ್ಷಕರಿಗೆ ತಿಳಿಯದಂತೆ ಚಾಕಲೇಟ್ ತಿನ್ನೋದು, ಟಿಫನ್ ಬಾಕ್ಸ್ ತೆರೆದು ತಿಂಡಿ ತಿನ್ನೋದು ಹೀಗೆ ಇನ್ನಿತ್ತರ ಚಟುವಟಿಕೆಯಲ್ಲಿ ತೊಡಗಿ ಸಿಕ್ಕಿ ಬೀಳುತ್ತಾರೆ. ನೀವು ಕೂಡ ಶಿಕ್ಷಕರಿಗೆ ಚಳ್ಳೆ ಹಣ್ಣು ತಿನ್ನಿಸಿರಬಹುದು. ಕೆಲವೊಮ್ಮೆ ಟೀಚರ್ ಕೈಯಲ್ಲಿ ಸಿಕ್ಕಿ ಬಿದ್ದು ನೆಪಗಳನ್ನು ಹೇಳಿದ್ದೀರಬಹುದು. ಈ ಪುಟಾಣಿಯದ್ದು ಅದೇ ಕಥೆ. ಪುಟಾಣಿಯು ಶಿಕ್ಷಕರನ್ನು ಯಾಮಾರಿಸುವ ವಿಡಿಯೋ ವೈರಲ್ ಆಗಿದೆ. ಟೀಚರ್ ಹೋಮ್ ವರ್ಕ್ ಮಾಡೋದಕ್ಕೆ ಹೇಳಿದ್ರೆ ಈ ಪುಟ್ಟ ಹುಡುಗ ಟಿಫನ್ ಬಾಕ್ಸ್ ತೆರೆದು ಮೆಲ್ಲನೆ ತಿಂಡಿ ತಿನ್ನುತ್ತಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

ನಾಝಿಯಾ ಆಮೀರ್‌ (Nazia Aamir) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲೂ ಕ್ಲಾಸ್ ರೂಮ್ ದೃಶ್ಯವನ್ನು ನೋಡಬಹುದು. ಸಹಪಾಠಿಗಳು ಬರೆಯುವುದರಲ್ಲಿ ಬ್ಯುಸಿಯಾದ್ರೆ, ಈ ಪುಟ್ಟ ಹುಡುಗನು ಟೀಚರ್‌ಗೆ ತಿಳಿಯದಂತೆ ಮೆಲ್ಲನೆ ಟಿಫಿನ್ ಬಾಕ್ಸ್ ತೆರೆದು ತಿಂಡಿ ತಿನ್ನುತ್ತಿದ್ದಾನೆ. ತದನಂತರದಲ್ಲಿ ಏನು ಅರಿಯದಂತೆ ಬರೆಯಲು ಶುರು ಮಾಡಿದ್ದಾನೆ. ಈ ಪುಟ್ಟ ಹುಡುಗನ ಕಳ್ಳಾಟವನ್ನು ಶಿಕ್ಷಕರೊಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಾಲ್‌ನಲ್ಲಿದ್ದ ಗೊಂಬೆಗಳ ಪಾದ ಮುಟ್ಟಿ ನಮಸ್ಕರಿಸಿದ ಪುಟಾಣಿ

ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬಾಲ್ಯದಲ್ಲಿ ನಾನು ಹೀಗೆ ಮಾಡಿದ್ದೆ ಎಂದು ಹೇಳಿದರೆ, ಇನ್ನೊಬ್ಬರು ತುಂಬಾ ಮುದ್ದಾದ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಖಂಡಿತವಾಗಿ ಇದು ನಾನೇ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Mirrors: ಮನೆಯ ಈ ಭಾಗಗಳಲ್ಲಿ ತಪ್ಪಿಯೂ ಕನ್ನಡಿ ಇಡಬೇಡಿ; ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | Vastu Mirrors: Avoid These Key Placement Mistakes for Positive Home Energy

ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಲ್ಲಿ ಕನ್ನಡಿ ಅತ್ಯಂತ ಮುಖ್ಯವಾದುದು. ಸರಿಯಾದ ದಿಕ್ಕಿನಲ್ಲಿರುವ ಕನ್ನಡಿ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿದರೆ, ತಪ್ಪು ಸ್ಥಳದಲ್ಲಿರುವ ಕನ್ನಡಿ ನಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ. ಕನ್ನಡಿಗೆ ಸಂಬಂಧಿಸಿದಂತೆ ನೀವು ಮಾಡಬಾರದ ಕೆಲವು ಪ್ರಮುಖ ತಪ್ಪುಗಳು ಇಲ್ಲಿವೆ.

ಹಾಸಿಗೆಯ ಮುಂದೆ ಕನ್ನಡಿ:

ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಹಾಸಿಗೆಗೆ ನೇರವಾಗಿ ಎದುರಾಗಿ ಕನ್ನಡಿಯನ್ನು ಇಡಬಾರದು. ಮಲಗಿರುವಾಗ ನಿಮ್ಮ ಪ್ರತಿಬಿಂಬ ಕನ್ನಡಿಯಲ್ಲಿ ಕಂಡರೆ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದು ಮಾನಸಿಕ ಆತಂಕ ಮತ್ತು ದೈಹಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

ಒಡೆದ ಕನ್ನಡಿ ನಕಾರಾತ್ಮಕತೆಯ ಸಂಕೇತ:

ಮನೆಯಲ್ಲಿ ಒಡೆದ ಅಥವಾ ಬಿರುಕು ಬಿಟ್ಟ ಕನ್ನಡಿಯನ್ನು ಇಡುವುದು ಅತ್ಯಂತ ಅಶುಭ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕುಟುಂಬದ ಸದಸ್ಯರ ನಡುವೆ ಮನಸ್ತಾಪ ಉಂಟುಮಾಡುತ್ತದೆ. ಅಂತಹ ಕನ್ನಡಿ ಕಂಡುಬಂದ ತಕ್ಷಣ ಅದನ್ನು ಮನೆಯಿಂದ ಹೊರಹಾಕುವುದು ಶ್ರೇಯಸ್ಕರ.

ಅಡುಗೆಮನೆಯಲ್ಲಿ ಕನ್ನಡಿ ಇಡಬೇಡಿ:

ಅಡುಗೆಮನೆಯು ಮನೆಯ ಶಕ್ತಿಯ ಕೇಂದ್ರಬಿಂದು. ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ಕನ್ನಡಿಗಳನ್ನು ಇಡುವುದರಿಂದ ಮನೆಯ ಶಾಂತಿಗೆ ಭಂಗ ಬರಬಹುದು. ಇದು ಅನಗತ್ಯ ಕಲಹ ಮತ್ತು ಮನೆಯ ಒಟ್ಟಾರೆ ವಾತಾವರಣದಲ್ಲಿ ಅಪಶ್ರುತಿಯನ್ನು ಸೃಷ್ಟಿಸುತ್ತದೆ.

ಮುಖ್ಯ ಬಾಗಿಲಿನ ಮೇಲೆ ಕನ್ನಡಿ:

ಅಲಂಕಾರಕ್ಕಾಗಿ ಅನೇಕರು ಮುಖ್ಯ ಬಾಗಿಲಿನ ಮೇಲೆ ಕನ್ನಡಿ ಹಾಕುತ್ತಾರೆ. ಆದರೆ, ಇದು ಮನೆಗೆ ಪ್ರವೇಶಿಸುವ ಸಕಾರಾತ್ಮಕ ಶಕ್ತಿಯನ್ನು ಮರಳಿ ಪ್ರತಿಫಲಿಸುತ್ತದೆ (Reflect). ಇದರಿಂದ ಮನೆಗೆ ಬರಬೇಕಾದ ಅದೃಷ್ಟ ಹೊರಹೋಗಬಹುದು. ಹಾಗಾಗಿ, ಬಾಗಿಲಿಗೆ ನೇರವಾಗಿ ಎದುರಾಗಿ ಅಥವಾ ಬಾಗಿಲಿನ ಮೇಲೆ ಕನ್ನಡಿ ಇಡಬೇಡಿ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಅತಿಯಾದ ಕನ್ನಡಿಗಳ ಬಳಕೆ ಬೇಡ:

ಮನೆ ಸುಂದರವಾಗಿ ಕಾಣಲಿ ಎಂದು ಎಲ್ಲೆಂದರಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ. ಅತಿಯಾದ ಕನ್ನಡಿಗಳು ಶಕ್ತಿಯ ಸಮತೋಲನವನ್ನು ತಪ್ಪಿಸುತ್ತವೆ ಮತ್ತು ಅಸ್ತವ್ಯಸ್ತ ವಾತಾವರಣವನ್ನು ಸೃಷ್ಟಿಸುತ್ತವೆ. ಅಗತ್ಯವಿರುವ ಕಡೆ ಮಾತ್ರ ಯೋಜಿತವಾಗಿ ಕನ್ನಡಿಯನ್ನು ಅಳವಡಿಸಿ.

ಸ್ವಚ್ಛತೆಯೇ ಸಮೃದ್ಧಿ:

ಸ್ಥಳದ ಜೊತೆಗೆ ಕನ್ನಡಿಯ ಸ್ವಚ್ಛತೆಯೂ ಅತಿ ಮುಖ್ಯ. ಧೂಳು ಹಿಡಿದ ಅಥವಾ ಕೊಳಕು ಕನ್ನಡಿಗಳು ಬಡತನಕ್ಕೆ ದಾರಿಯಾಗಬಹುದು ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಸದಾ ಕನ್ನಡಿಯನ್ನು ಶುಭ್ರವಾಗಿಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ತುಂಬಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:19 pm, Fri, 24 April 26

Source link

ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ: ಪೊಲೀಸ್ ಕಮಿಷನರ್ ಹೇಳಿದ್ದೇನು ನೋಡಿ – Kannada News | Hubballi Tragedy: 14 Year Old Boy ends life After Mother Takes Away Mobile Phone; Police Chief Issues Advisory

ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆImage Credit source: tv9

ಹುಬ್ಬಳ್ಳಿ, ಏಪ್ರಿಲ್ 24: ಮೊಬೈಲ್ ಗೇಮ್‌ಗೆ (Mobile Game) ದಾಸನಾಗಿದ್ದ ಬಾಲಕನೊಬ್ಬ ತಾಯಿ ಫೋನ್ ಕಿತ್ತುಕೊಂಡಿದ್ದಕ್ಕೆ ಮನನೊಂದು ನೇಣಿಗೆ ಶರಣಾಗಿರುವ ದಾರುಣ ಘಟನೆ ಹುಬ್ಬಳ್ಳಿಯ ಉದಯನಗರದಲ್ಲಿ ನಡೆದಿದೆ. 14 ವರ್ಷದ ಸಮರ್ಥ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಉದಯನಗರದ ನಿವಾಸಿಯಾದ ಸಮರ್ಥ್ ಕಳೆದ ಕೆಲವು ದಿನಗಳಿಂದ ‘ಫ್ರೀಫೈರ್’ (Free Fire) ನಂತಹ ಆನ್‌ಲೈನ್ ಗೇಮ್‌ಗಳಿಗೆ ವಿಪರೀತ ಅಡಿಕ್ಟ್ ಆಗಿದ್ದ. ಗುರುವಾರ ರಾತ್ರಿ ಸತತವಾಗಿ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬುದ್ಧಿವಾದ ಹೇಳಿದ್ದಾರೆ. ‘ಮೊಬೈಲ್ ಸಾಕು ಮಾಡು, ಓದಿಕೊಳ್ಳುವ ಕಡೆ ಗಮನ ಕೊಡು’ ಎಂದು ಹೇಳಿ ಆತನ ಕೈಲಿದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಸಮರ್ಥ್, ತಕ್ಷಣ ತನ್ನ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ.

ಸುಮಾರು 15-20 ನಿಮಿಷಗಳಾದರೂ ಬಾಲಕ ಹೊರಬಾರದಿದ್ದಾಗ ಆತಂಕಗೊಂಡ ತಂದೆ, ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಈ ವೇಳೆ ಮಗ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಬಾಗಿಲು ಮುರಿದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಷಕರಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಕಿವಿಮಾತು


ಘಟನೆ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಇದು ಅತ್ಯಂತ ದುರದೃಷ್ಟಕರ ಘಟನೆ. ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಪೋಷಕರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಮಕ್ಕಳು ಮೊಬೈಲ್ ಅಡಿಕ್ಷನ್‌ಗೆ ಒಳಗಾದಾಗ ಪೋಷಕರನ್ನೇ ಬ್ಲ್ಯಾಕ್‌ಮೇಲ್ ಮಾಡುವ ಹಂತಕ್ಕೆ ತಲುಪುತ್ತಾರೆ. ಒಂದು ವೇಳೆ ಮಕ್ಕಳು ಮೊಬೈಲ್‌ಗೆ ಹೆಚ್ಚು ಅಡಿಕ್ಟ್ ಆಗಿದ್ದರೆ, ಏಕಾಏಕಿ ಮೊಬೈಲ್‌ನಿಂದ ದೂರವಿಡಲು ಪ್ರಯತ್ನಿಸಬಾರದು. ಬದಲಾಗಿ, ಅವರ ಶಿಕ್ಷಕರು ಅಥವಾ ಮಕ್ಕಳ ತಜ್ಞರ ಜೊತೆ ಸಮಾಲೋಚಿಸಿ, ನಿಧಾನವಾಗಿ ಈ ವ್ಯಸನದಿಂದ ಹೊರಬರುವಂತೆ ಮಾಡಬೇಕು.ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ

ಮೊಬೈಲ್ ಅಡಿಕ್ಷನ್ ಎಂದಿಗೂ ಒಳ್ಳೆಯದಲ್ಲ. ಮೊಬೈಲ್‌ನಲ್ಲಿ ಗೇಮ್ ಆಡಿ ಜೀವನದಲ್ಲಿ ಯಾರೂ ಯಶಸ್ವಿಯಾದ ಉದಾಹರಣೆಗಳಿಲ್ಲ. ಮೊಬೈಲ್ ಅನ್ನು ರಚನಾತ್ಮಕ ಉದ್ದೇಶಗಳಿಗಾಗಿ ಬಳಸಬಹುದು. ಗ್ರಾಮರ್, ಭಾಷೆ, ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು YouTube ನಲ್ಲಿ ಲಭ್ಯವಿರುವ ಕೋರ್ಸ್‌ಗಳ ಮೂಲಕ ಮುಂದಿನ ವರ್ಷದ ವಿಷಯಗಳನ್ನು ಸಿದ್ಧಪಡಿಸಲು ಮೊಬೈಲ್ ಉಪಯುಕ್ತವಾಗಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲಿನ ಮೇಲೆ ಹತ್ತಿ ಹೈವೋಲ್ಟೇಜ್ ತಂತಿ ಸ್ಪರ್ಶಿಸಿ ಒಂದೇ ಕ್ಷಣದಲ್ಲಿ ಸುಟ್ಟು ಕರಕಲಾದ ವ್ಯಕ್ತಿ – Kannada News | Fatal Misstep: Youth Dies After Contact with Overhead Rail Wire in Darbhanga

ದರ್ಭಂಗ, ಏಪ್ರಿಲ್ 24: ಕೇವಲ ಒಂದು ಕ್ಷಣದ ಅಜಾಗರೂಕತೆ ಅಥವಾ ದುಸ್ಸಾಹಸ ಹೇಗೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಬಿಹಾರದ ದರ್ಭಂಗದಲ್ಲಿ ವ್ಯಕ್ತಿಯೊಬ್ಬ ರೈಲಿನ ಮೇಲೇರಿ ನಡೆಯುವ ಸಾಹಸ ಮಾಡಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಾಣಬಿಟ್ಟಿದ್ದಾರೆ. ಸರಕು ರೈಲು ನಿಧಾನವಾಗಿ ಚಲಿಸುತ್ತಿದ್ದಾಗ ಯುವಕ ಬೋಗಿಯ ಮೇಲೆ ಹತ್ತಿದ್ದಾನೆ. ಇದನ್ನು ಗಮನಿಸಿದ ನಿಲ್ದಾಣದಲ್ಲಿದ್ದ ಜನರು ಮತ್ತು ಪ್ರಯಾಣಿಕರು, ಕೆಳಗಿಳಿಯಪ್ಪಾ, ಅಪಾಯವಿದೆ ಎಂದು ಪದೇ ಪದೇ ಕಿರುಚುತ್ತಾ ಎಚ್ಚರಿಕೆ ನೀಡಿದ್ದಾರೆ. ಆದರೆ, ಯಾವುದನ್ನೂ ಲೆಕ್ಕಿಸದ ಯುವಕ ಬೋಗಿಯ ಮೇಲೆ ನಡೆಯುತ್ತಾ ಮುಂದೆ ಸಾಗಿದ್ದಾನೆ.

ಯುವಕ ಬೋಗಿಯ ಮೇಲ್ಭಾಗದಲ್ಲಿ ನಿಂತು ತನ್ನ ಕೈಯನ್ನು ಅಪಾಯಕಾರಿಯಾಗಿ ಓವರ್‌ಹೆಡ್ ವಿದ್ಯುತ್ ಮಾರ್ಗದ (High-Voltage Line) ಹತ್ತಿರ ಕೊಂಡೊಯ್ದಿದ್ದಾನೆ. ಕೈ ತಂತಿಗೆ ತಗುಲಿದ ತಕ್ಷಣವೇ ದೊಡ್ಡ ಮಟ್ಟದ ಸ್ಫೋಟದಂತಹ ಶಬ್ದದೊಂದಿಗೆ ಬೆಂಕಿ ಕಾಣಿಸಿಕೊಂಡಿತ್ತು.
ವಿದ್ಯುತ್ ಆಘಾತದ ತೀವ್ರತೆಗೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಈತ ಮಾನಸಿಕವಾಗಿ ಅಸ್ಥಿರವಾಗಿದ್ದನೇ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version