ಭಾರತದ ಆರ್ಥಿಕ ಪ್ರಗತಿಗೆ ತೊಡಕಾಗಿರುವ ಅಂಶಗಳೇನು? ಬರ್ನ್​ಸ್ಟೈನ್ ಸಲಹೆ ನೀಡಿರುವ ಪರಿಹಾರಗಳೇನು? – Kannada News | Bernstein’s Bold Reforms for India’s Economy: Cash Free, Manufacturing & AI Focus

ನವದೆಹಲಿ, ಏಪ್ರಿಲ್ 23: ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಬರ್ನ್‌ಸ್ಟೈನ್ (Bernstein), ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮುಕ್ತ ಪತ್ರದಲ್ಲಿ ಭಾರತದ ಆರ್ಥಿಕತೆಯನ್ನು ಸುಧಾರಿಸಲು ಹಲವು ಕ್ರಾಂತಿಕಾರಿ ಮತ್ತು ದಿಟ್ಟ ಸಲಹೆಗಳನ್ನು ನೀಡಿದೆ. ಭಾರತವು ತನ್ನ ಇತ್ತೀಚಿನ ಆರ್ಥಿಕ ಸಾಧನೆಗಳ ಬಗ್ಗೆ ಅತಿಯಾದ ಆತ್ಮವಿಶ್ವಾಸ ಹೊಂದದೆ, ರಚನಾತ್ಮಕ ಸುಧಾರಣೆಗಳಿಗೆ ಮುಂದಾಗಬೇಕು ಎಂದು ಈ ಪತ್ರದಲ್ಲಿ ಎಚ್ಚರಿಸಲಾಗಿದೆ. ಭಾರತದ ಆರ್ಥಿಕ ಸಾಧನೆಗೆ ತೊಡಕಾಗಿರುವ ಕೆಲ ಅಂಶಗಳನ್ನೂ ಗುರುತಿಸಿ ಎತ್ತಿ ತೋರಿಸಿದೆ. ಅದರಲ್ಲೂ ಮುಖ್ಯವಾಗಿ ಉದ್ಯೋಗ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳನ್ನು ವಿವರಿಸಲಾಗಿದೆ. ವೇಣುಗೋಪಾಲ್ ಗಾರೆ ಮತ್ತು ಅನಿಖಿಲ್ ಅರೇಲಾ ಅವರು ಬರ್ನ್​ಸ್ಟೈನ್ ಪರವಾಗಿ ಈ ಪತ್ರ ಸಿದ್ಧಪಡಿಸಿದ್ದಾರೆ.

ನಗದು ರಹಿತ ಆರ್ಥಿಕತೆಗೆ ದಿಟ್ಟ ಹೆಜ್ಜೆ

ಬರ್ನ್‌ಸ್ಟೈನ್ ನೀಡಿದ ಅತ್ಯಂತ ಆಶ್ಚರ್ಯಕರ ಸಲಹೆಯೆಂದರೆ, ಮುಂದಿನ 5 ವರ್ಷಗಳಲ್ಲಿ ಭಾರತವು ಕೇವಲ 10 ರೂಪಾಯಿ ಮುಖಬೆಲೆಯ ನೋಟುಗಳನ್ನು ಮಾತ್ರ ಚಲಾವಣೆಯಲ್ಲಿ ಇಟ್ಟು, ಉಳಿದ ಎಲ್ಲಾ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಹಂತಹಂತವಾಗಿ ರದ್ದುಗೊಳಿಸಬೇಕು. ಇದರಿಂದ ಕಪ್ಪು ಹಣ ಮತ್ತು ಅನಧಿಕೃತ ನಗದು ವಹಿವಾಟುಗಳಿಗೆ ಕಡಿವಾಣ ಬೀಳುತ್ತದೆ. ಡಿಜಿಟಲ್ ಪಾವತಿಗಳು ಸಂಪೂರ್ಣವಾಗಿ ಚಲಾವಣೆಗೆ ಬರುತ್ತವೆ. ಆರ್ಥಿಕತೆಯಲ್ಲಿ ಪಾರದರ್ಶಕತೆ ಹೆಚ್ಚಾಗುತ್ತದೆ.

ಉದ್ಯೋಗ ಮತ್ತು ಉತ್ಪಾದನಾ ವಲಯ

ಕೃತಕ ಬುದ್ಧಿಮತ್ತೆ (Generative AI) ಭಾರತದ ಸೇವಾ ವಲಯದ (Services Sector) ಉದ್ಯೋಗಗಳಿಗೆ ಕುತ್ತು ತರಬಹುದು. ಆದ್ದರಿಂದ, ಕಾರ್ಮಿಕರನ್ನು ಉತ್ಪಾದನಾ ವಲಯದಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಸುಧಾರಣೆಗಳು ಬೇಕು.

ಭಾರತವು ತಂತ್ರಜ್ಞಾನದ ಕೇವಲ ‘ಬಳಕೆದಾರ’ನಾಗದೆ, ತಂತ್ರಜ್ಞಾನವನ್ನು ‘ಸೃಷ್ಟಿಸುವ’ ದೇಶವಾಗಬೇಕು. ಕೇವಲ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವ ಬದಲು, ಸ್ವದೇಶಿ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು.

ಇದನ್ನೂ ಓದಿ: ಏಪ್ರಿಲ್‌ನಲ್ಲಿ ಭಾರತದ ಖಾಸಗಿ ವಲಯ ಭರ್ಜರಿ ಏರಿಕೆ: ಉತ್ಪಾದನಾ, ಸೇವಾ ವಲಯಗಳ PMI ವರದಿಯಲ್ಲಿ ಗಮನಾರ್ಹ ಸಂಗತಿಗಳು

ಕೃಷಿ ಮತ್ತು ಇಂಧನ ಸುಧಾರಣೆ

ದೇಶದ ಶೇ. 45ರಷ್ಟು ಉದ್ಯೋಗಿಗಳು ಕೃಷಿಯಲ್ಲಿದ್ದರೂ, ಜಿಡಿಪಿಗೆ ಅವರ ಕೊಡುಗೆ ಕೇವಲ ಶೇ. 15ರಷ್ಟಿದೆ. ಸಾಲ ಮನ್ನಾದಂತಹ ತಾತ್ಕಾಲಿಕ ಕ್ರಮಗಳ ಬದಲು, ಕೃಷಿ ಕ್ಷೇತ್ರದಲ್ಲಿ ಆಳವಾದ ಸುಧಾರಣೆಗಳನ್ನು ತರಬೇಕು.

ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳಿಗೆ (EV) ಸಂಪೂರ್ಣವಾಗಿ ಬದಲಾಗುವ ಸ್ಪಷ್ಟ ಯೋಜನೆಯನ್ನು ರೂಪಿಸಬೇಕು.

ಮೂಲಸೌಕರ್ಯ ಮತ್ತು ಸಂಶೋಧನೆ

ವಿಮಾನಯಾನಕ್ಕಿಂತ ಹೆಚ್ಚಾಗಿ ರೈಲ್ವೆ ಮತ್ತು ಸಮೂಹ ಸಾರಿಗೆಯ (Mass Transit) ಅಭಿವೃದ್ಧಿಗೆ ಒತ್ತು ನೀಡಬೇಕು.

ಭಾರತವು ತನ್ನ ಜಿಡಿಪಿಯ ಕೇವಲ ಶೇ. 0.7ರಷ್ಟನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ (Research & Development) ಬಳಸುತ್ತಿದೆ. ಇದನ್ನು ಹೆಚ್ಚಿಸದಿದ್ದರೆ ಜಾಗತಿಕ ಸ್ಪರ್ಧೆಯಲ್ಲಿ ಹಿಂದೆ ಬೀಳುವ ಅಪಾಯವಿದೆ.

ಬರ್ನ್​ಸ್ಟೀನ್ ವರದಿ ಪ್ರಕಾರ ಭಾರತಕ್ಕೆ ತೊಡಕಾಗಿರುವ ಕೆಲ ಅಂಶಗಳು

  • ಪಿಎಲ್​ಐನಂತಹ ಉಪಕ್ರಮಗಳು ಉತ್ಪಾದನೆಗೆ ಪುಷ್ಟಿ ಕೊಟ್ಟಿವೆಯಾದರೂ ಈ ಕ್ಷೇತ್ರದ ಜಿಡಿಪಿ ಪಾಲು ಶೇ. 16-17ರಷ್ಟೇ ಇದೆ.
  • ಅನಿಯಂತ್ರಿತ ಮತ್ತು ಕಡಿಮೆ ಉತ್ಪನ್ನಶೀಲತೆಯ ಕ್ಷೇತ್ರಗಳಲ್ಲಿ ಉದ್ಯೋಗ ಹೆಚ್ಚು ಕೇಂದ್ರಿತವಾಗಿದೆ.
  • ಸಪ್ಲೈ ಚೈನ್​ಗಳು ದುರ್ಬಲವಾಗವೆ. ಸುಧಾರಿತ ಉತ್ಪಾದನಾ ಕ್ಷೇತ್ರದಲ್ಲಿ ಪ್ರತಿಭಾ ಲಭ್ಯತೆ ಕಡಿಮೆ ಇದೆ. ಉತ್ಪಾದನಾ ಸಮಯ ಇತರ ಆರ್ಥಿಕತೆಗಳಿಗೆ ಹೋಲಿಸಿದರೆ ನಿಧಾನ ಇದೆ.
  • ಐಟಿ, ಬಿಪಿಒ ಕ್ಷೇತ್ರವು ಬಹಳ ವರ್ಷಗಳಿಂದ ಮಧ್ಯಮ ವರ್ಗದವರಿಗೆ ಉದ್ಯೋಗಾವಕಾಶ ಕೊಟ್ಟಿವೆ. ಆದರೆ, ಜನರೇಟಿವ್ ಎಐ, ಆಟೊಮೇಶನ್ ಅಳವಡಿಕೆಯಿಂದ ಈ ಸೆಕ್ಟರ್​ನ ಹೆಚ್ಚಿನ ಉದ್ಯೋಗಗಳಿಗೆ ಕುತ್ತು ಬರಲಿದೆ.
  • ಭಾರತವು ತಯಾರಕನಾಗುವುದರ ಬದಲು ಬಳಕೆದಾರನಾಗುವ ಅಪಾಯ ಇದೆ.
  • ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಹೂಡಿಕೆ ಸೀಮಿತವಾಗಿದೆ. ಫ್ಯಾಕ್ಟರಿಗಳ ಸಂಖ್ಯೆ ಅಥವಾ ಉದ್ಯೋಗಗಳ ಸಂಖ್ಯೆ ಹೆಚ್ಚಿಲ್ಲ.
  • ಹೆಚ್ಚಿನ ಕೆಲಸಗಾರರು ಕಡಿಮೆ ವೇತನದ ನಗರ ಸೇವೆಗಳು ಹಾಗೂ ಅಸ್ಥಿರ ಸ್ವ ಉದ್ಯೋಗಗಳಿಗೆ ಜಾರುತ್ತಿದ್ದಾರೆ. ಇದರಿಂದ ಒಟ್ಟಾರೆ ಉದ್ಯೋಗ ಗುಣಮಟ್ಟ ಕಡಿಮೆ ಇದೆ.
  • ಕೃಷಿ ದುರ್ಬಲ ಅಂಶವಾಗಿ ಮುಂದುವರಿದಿದೆ. ಶೇ. 42-45 ಕೆಲಸಗಾರರು ಕೃಷಿ ಕ್ಷೇತ್ರದಲ್ಲಿದ್ದರೂ ಅದರ ಜಿಡಿಪಿ ಕೊಡುಗೆ ಶೇ. 15-16 ಇರಬಹುದು.
  • ವಿದ್ಯುತ್ ಸೆಕ್ಟರ್​ನಲ್ಲಿ ಕ್ಷಮತೆಯ ಕೊರತೆ ಇದೆ. ಕಚ್ಚಾ ತೈಲ ಆಮದು ಮೇಲೆ ಹೆಚ್ಚಿನ ಅವಲಂಬನೆ ಇದೆ.

ಇದನ್ನೂ ಓದಿ: ವಾಟ್ಸಾಪ್​ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್; ಬಂದಿದೆ ಹೊಸ ಫೀಚರ್

ಬರ್ನ್​ಸ್ಟೀನ್ ವರದಿಯಲ್ಲಿ ನೀಡಲಾಗಿರುವ ಕೆಲ ಸಲಹೆಗಳು

  • ಎಲೆಕ್ಟ್ರಿಕ್ ವಾಹನಗಳಿಗೆ ಪುಷ್ಟಿ ಕೊಡಬೇಕು. ಪೆಟ್ರೋಲ್, ಡೀಸಲ್ ವಾಹನಗಳನ್ನು ಹಂತ ಹಂತವಾಗಿ ನೀಗಿಸಬೇಕು.
  • ನೀರಾವರಿ ಹೆಚ್ಚಿಸಬೇಕು. ಸಬ್ಸಿಡಿ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು.
  • ಕೃಷಿಯಲ್ಲಿ ಉತ್ಪನ್ನಶೀಲತೆ ಮತ್ತು ರೈತರ ಆದಾಯ ಹೆಚ್ಚಿಸಲು ಸಂಗ್ರಹಗಾರ ಮತ್ತು ಸಾಗಣೆ ವ್ಯವಸ್ಥೆಯನ್ನು ಹೆಚ್ಚಿಸಬೇಕು.
  • ಎಐ, ಆಟೊಮೇಶನ್, ರೋಬೋಟಿಕ್ಸ್, ಅಡ್ವಾನ್ಸ್ಡ್ ಮೆಟೀರಿಯಲ್ಸ್, ಎಐ ಅಳವಡಿಕೆಯ ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ಉದಯೋನ್ಮುಖ ಕ್ಷೇತ್ರಗಳನ್ನು ಗುರುತಿಸುವ ಒಂದು ವ್ಯವಸ್ಥೆ ನಿರ್ಮಾಣವಾಗಬೇಕು.
  • ಹತ್ತು ರೂ ಮುಖಬೆಲೆಯ ನೋಟುಗಳನ್ನು ಉಳಿಸಿ ಉಳಿದವನ್ನು ಕೈಬಿಡಬೇಕು. ಇದರಿಂದ ಕಪ್ಪು ಹಣ ಶೇಖರಣೆ ತಪ್ಪಿಸಬಹುದು.

“ಭಾರತದ ಬಳಿ ಬಂಡವಾಳ, ಪ್ರತಿಭೆ ಅಥವಾ ಮಹತ್ವಾಕಾಂಕ್ಷೆಯ ಕೊರತೆಯಿಲ್ಲ. ಆದರೆ ಕಠಿಣ ನಿರ್ಧಾರಗಳನ್ನು ಮುಂದೂಡುವ ಬದಲು ಈಗಲೇ ತೆಗೆದುಕೊಳ್ಳುವ ಮನಸ್ಸು ಬೇಕು. ಸುಧಾರಣೆಗಳ ಕಿಟಕಿ ಈಗ ತೆರೆದಿದೆ, ಆದರೆ ಅದು ಬೇಗನೆ ಮುಚ್ಚಬಹುದು” ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಎಸ್​ಕೆ ಆಟಗಾರನಿಗೆ ಮಾತೃ ವಿಯೋಗ – Kannada News | Mukesh Choudhary Out of MI vs CSK IPL 2026 Match After Mother’s Demise

ಐಪಿಎಲ್ 2026 ರ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ವೇಗದ ಬೌಲರ್ ಮುಖೇಶ್ ಚೌಧರಿ ಅವರ ತಾಯಿ ನಿಧನರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮುಖೇಶ್ ಚೌಧರಿ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದೆ. ಅಲ್ಲದೆ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿರುವ ಮುಖೇಶ್ ಚೌಧರಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ ಎಂಬುದನ್ನು ಖಚಿತಪಡಿಸಿದೆ.

ಸಂತಾಪ ಸೂಚಿಸಿದ ಸಿಎಸ್‌ಕೆ

ಮುಖೇಶ್ ಚೌಧರಿ ಅವರ ತಾಯಿಯ ನಿಧನದಿಂದ ತೀವ್ರ ದುಃಖಿತರಾಗಿದ್ದೇವೆ ಈ ಕಷ್ಟದ ಸಮಯದಲ್ಲಿ ದುಃಖವನ್ನು ಬರಿಸುವ ಶಕ್ತಿಯನ್ನು ಮುಖೇಶ್ ಕುಮಾರ್ ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲು ಬರೆದುಕೊಂಡಿದೆ.

ಮುಖೇಶ್ ಪ್ರದರ್ಶನ

2026 ರ ಐಪಿಎಲ್‌ನಲ್ಲಿ ಮುಖೇಶ್ ಚೌಧರಿ ಇಲ್ಲಿಯವರೆಗೆ ಕೇವಲ ಒಂದು ಪಂದ್ಯವನ್ನು ಆಡಿದ್ದಾರೆ. ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಅವರು 21 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಪಂದ್ಯದಲ್ಲಿ ಅವರು ಇಶಾನ್ ಕಿಶನ್ ಮತ್ತು ಟ್ರಾವಿಸ್ ಹೆಡ್ ಅವರ ವಿಕೆಟ್‌ಗಳನ್ನು ಕಬಳಿಸಿದ್ದರು.

ಖಲೀಲ್ ಅಹ್ಮದ್ ಬದಲಿಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸಿಎಸ್‌ಕೆಯ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮುಖೇಶ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿತ್ತು. ಗಾಯದ ಕಾರಣದಿಂದಾಗಿ ಖಲೀಲ್ ಅಹ್ಮದ್ ಐಪಿಎಲ್ 2026 ರಿಂದ ಹೊರಬಿದ್ದಿರುವುದರಿಂದ ಮುಖೇಶ್ ಚೌಧರಿಗೆ ಆಡುವ ಅವಕಾಶ ಸಿಕ್ಕಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC Exam 2 Time Table: 10ನೇ ತರಗತಿಯಲ್ಲಿ ಫೇಲ್ ಆದವರಿಗೆ ಮತ್ತೊಂದು ಚಾನ್ಸ್: ಪರೀಕ್ಷೆ-2 ವೇಳಾಪಟ್ಟಿ ಪ್ರಕಟ – Kannada News | Karnataka SSLC exam 2 time table Announced By KSEAB, here Is date And Fee details

ಬೆಂಗಳೂರು, (ಏಪ್ರಿಲ್ 23): ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Results 2026)   ಪ್ರಕಟವಾಗಿದ್ದು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೇ.94.10 ಫಲಿತಾಂಶ ಬಂದಿದೆ. ಇನ್ನು ಜಿಲ್ಲೆಗಳಲ್ಲಿ 98.40% ಉತ್ತೀರ್ಣ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ‌ ಸ್ಥಾನ ಪಡೆದುಕೊಂಡಿದ್ದರೆ, ಕಲಬುರಗಿ ಕೊನೆ ಸ್ಥಾನದಲ್ಲಿದೆ. ಇನ್ನು ಪಾಸಾದ ವಿದ್ಯಾರ್ಥಿಗಳ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಮುಂದೆ ಯಾವ ಕಾಲೇಜಿ ಏನು ಅಂತೆಲ್ಲಾ ಚರ್ಚೆಯಲ್ಲಿ ತೊಡಗಿದ್ದಾರೆ. ಇನ್ನು ಫೇಲಾದ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವಿಲ್ಲ. ಇನ್ನೊಂದು ಪರೀಕ್ಷೆ ಬರೆಯಲು ಅವಕಾಶ ಇದ್ದು, ಎರಡನೇ ಪರೀಕ್ಷೆ ಬರೆದು ಪಾಸಾಗಿ ಕಾಲೇಜು ಮೆಟ್ಟಿಲು ಏರಬಹುದು. ಹೌದು…ಪರೀಕ್ಷೆ 2 ವೇಳಾಪಟ್ಟಿ ಸಹ ಪ್ರಕಟವಾಗಿದ್ದು, ಅದು ಈ ಕೆಳಗಿನಂತಿದೆ ನೋಡಿ.

ಮೇ 18ರಿಂದ ಮೇ 25ರವರೆಗೆ ಪರೀಕ್ಷೆ 2

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ (ಪೂರಕ ಪರೀಕ್ಷೆ) ನಡೆಸಲಾಗುತ್ತದೆ. ಪರೀಕ್ಷೆ-2 ಮೇ 18ರಿಂದ ಮೇ 25, 2026ರವರೆಗೆ ನಡೆಯಲಿದೆ. ಈ ಮರುಪರೀಕ್ಷೆಗೆ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಈ ಬಾರಿ ಮರುಪರೀಕ್ಷೆಯ ತೃತೀಯ ಪರೀಕ್ಷೆಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: SSLC District Wise Result: ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ

ಪರೀಕ್ಷೆ 1ಕ್ಕೆ ಗೈರು ಹಾಜರಾಗಿರುವ ವಿದ್ಯಾರ್ಥಿಗಳು ಈಗಾಗಲೇ ಅಭ್ಯಾಸ ಮಾಡಿದ ಶಾಲೆಯಲ್ಲಿ  ಪರೀಕ್ಷೆ 2ಕ್ಕೆ ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.  ಇವರು ಖಾಸಗಿ ವಿದ್ಯಾರ್ಥಿಗಳಾಗಿ ನೊಂದಾಯಿಸಲು  ನಿಗಧಿಪಡಿಸಿರುವ  ನೋಂದಣಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.

ಪರೀಕ್ಷೆ 2 ವೇಳಾಪಟ್ಟಿ

  • 18-5-26 ಪ್ರಥಮ ಭಾಷೆ: ಕನ್ನಡ, ತೆಗಲು, ಹಿಂದಿ, ಇಂಗ್ಲೀಷ್, ಮರಾಠಿ, ಉರ್ದು, ಸಂಸ್ಕೃತ.
  • 19-5-26: (ಕೋರ್ ಸಬ್ಜೆಕ್ಟ್) ಪೊಲಿಟಿಕಲ್ ಸೈನ್ಸ್,.
  • 20-5-26 ದ್ವಿತೀಯ ಭಾಷೆ: ಇಂಗ್ಲೀಷ್, ಕನ್ನಡ.
  • 21-5-26: (ಕೋರ್ ಸಬ್ಜೆಕ್ಟ್) ಗಣಿತ, ಸಮಾಜಶಾಸ್ತ್ರ,.
  • 22 5-26: ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಕೊಂಕಣಿ, ತುಳು, ಮರಾಠಿ, ಸಂಸ್ಕೃತ.
  • 23-5-26 ಕೋರ್ ಸಬ್ಜೆಕ್ಟ್: ಸೋಷಿಯಲ್ ಸೈನ್ಸ್

ಪರೀಕ್ಷೆ 2  ಶುಲ್ಕ ಎಷ್ಟು?

ಪರೀಕ್ಷೆ 1ರಲ್ಲಿ ಅನುತ್ತೀರ್ಣರಾದವರಿಗೆ  ಪರೀಕ್ಷೆ 2 ಅವಕಾಶ ಇದ್ದು, ನೊಂದಾಯಿಸಿಕೊಳ್ಳಲು ವಿಷಯಕ್ಕೆ ಇಂತಿಷ್ಟು ಎಂದು ಶುಲ್ಕು ನಿಗಧಿಪಡಿಸಲಾಗಿದೆ.  ಒಂದು ವಿಷಯಕ್ಕೆ  ಅಂದರೆ ಒಂದೇ ವಿಷಯದಲ್ಲಿ ಫೇಲಾಗಿದ್ದರೆ 448 ರೂ. , ಎರಡು ವಿಷಯಕ್ಕೆ 559 ರೂ., ಇನ್ನು ಮೂರು ಅಥವಾ 3ಕ್ಕಿಂತ ಹೆಚ್ಚು ವಿಷಯಗಳಿಗೆ 752 ರೂಪಾಯಿ ಕಟ್ಟಬೇಕು. ವಿಶೇಷ ಅಂದ್ರೆ ತೃತೀಯ ಭಾಷೆ ಹಿಂದಿಯಲ್ಲಿ ಅಂಕಗಳನ್ನು ಉತ್ತಮಗೊಳಿಸಲು ಶುಲ್ಕ ವಿನಾಯಿ ನೀಡಲಾಗಿದೆ.

ಮರುಮೌಲ್ಯಮಾಪನ ಮತ್ತು ಮರುಎಣಿಕೆ

ಫಲಿತಾಂಶದಲ್ಲಿ ಅಸಮಾಧಾನವಿದ್ದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ (Revaluation) ಮತ್ತು ಅಂಕಗಳ ಮರುಎಣಿಕೆ (Re-totalling) ಅವಕಾಶ ಕಲ್ಪಿಸಲಾಗಿದೆ. ಫಲಿತಾಂಶ ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ಈ ಸಂಬಂಧ ಅರ್ಜಿಯನ್ನು kseab.karnataka.gov.in ವೆಬ್‌ಸೈಟ್ ಮೂಲಕ ಸಲ್ಲಿಸಬಹುದು.’

ಸ್ಕ್ಯಾನ್ ಪ್ರತಿ ಮತ್ತು ಮರುಮೌಲ್ಯಮಾಪನದ ಶುಲ್ಕ

ಫಲಿತಾಂಶದಲ್ಲಿ ಅಸಮಾಧಾನವಿದ್ದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆದ್ರೆ, ಮರುಮೌಲ್ಯ ಮಾಪನಕ್ಕೆ ಒಂದು ವಿಷಯಕ್ಕೆ 800 ರೂ ಶುಲ್ಕ ಜೊತೆಗೆ 10 ರೂ. ಸೇವಾ ಶುಲ್ಕ ಕಟ್ಟಬೇಕು. ಇನ್ನು ನಿಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಬೇಕಾಗಿದ್ದಲ್ಲಿ ಒಂದು ವಿಷಯಕ್ಕೆ  410 ರೂಪಾಯಿ ಪ್ಲಸ್ 10 ರೂ. ಸೇವಾ ಶುಲ್ಕ ನಿಗಧಿಪಡಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಲ್ಲಂಗಡಿ ಹಣ್ಣು ಕಿಡ್ನಿಯನ್ನು ಕ್ಲೀನ್ ಮಾಡುತ್ತದೆಯೇ? ಬೇಸಿಗೆಯಲ್ಲಿ ಈ ಹಣ್ಣಿನ ಸೇವನೆ ಆರೋಗ್ಯಕರವೇ? – Kannada News | Watermelon for Kidney Health: Benefits, Risks, and Portion Guide

ಗ್ರೀಷ್ಮಕಾಲದಲ್ಲಿ ಅಂದರೆ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರಗಳನ್ನು ಅದರಲ್ಲಿಯೂ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ತರಕಾರಿಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುತ್ತದೆ. ಅಂತವುಗಳ ಪೈಕಿ ಕಲ್ಲಂಗಡಿ ಹಣ್ಣು (Watermelon) ಕೂಡ ಒಂದು. ದೇಹದಲ್ಲಿ ನೀರಿನ ಕೊರತೆಯಾಗುವುದನ್ನು ತಡೆಯಲು ಜನ ಇದನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ ಆದರೆ ಕಲ್ಲಂಗಡಿ ಕಿಡ್ನಿ (Kidney) ಆರೋಗ್ಯಕ್ಕೆ ಹಾನಿಕಾರಕವೇ, ಇದು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ, ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಇರುವವರು ಇದನ್ನು ಸೇವನೆ ಮಾಡಬಹುದೇ, ಈ ಬಗ್ಗೆ ತಜ್ಞರ ಅಭಿಪ್ರಾಯವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಲ್ಲಂಗಡಿ ಹಣ್ಣಿನ ಸೇವನೆ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದೇ?

ಆರೋಗ್ಯ ತಜ್ಞರ ಪ್ರಕಾರ, ಸರಿಯಾದ ಪ್ರಮಾಣದಲ್ಲಿ ಕಲ್ಲಂಗಡಿ ಸೇವಿಸುವುದು ಕಿಡ್ನಿಗೆ ಹಾನಿಕಾರಕವಲ್ಲ. ಇದರಲ್ಲಿ ಸುಮಾರು 90% ನೀರಿನ ಅಂಶವಿದ್ದು, ದೇಹವನ್ನು ಹೈಡ್ರೇಟ್ ಇಡಲು ಸಹಾಯ ಮಾಡುತ್ತದೆ. ಉತ್ತಮ ಹೈಡ್ರೇಶನ್ ಕಿಡ್ನಿಗಳ ಕಾರ್ಯಕ್ಷಮತೆಗೆ ಒಳ್ಳೆಯದು. ಜೊತೆಗೆ ಈ ಹಣ್ಣಿನಲ್ಲಿ ವಿಟಮಿನ್ C, ಪೊಟ್ಯಾಸಿಯಮ್ ಹಾಗೂ ಕೆಲವು ಅಮಿನೋ ಆಮ್ಲಗಳು ಇದ್ದು, ದೇಹದ ಸಮತೋಲನ ಕಾಪಾಡಲು ಸಹಕಾರಿ.

ಇದನ್ನೂ ಓದಿ: ಕಿಡ್ನಿ ಆರೋಗ್ಯವಾಗಿ ಇರಬೇಕು ಅಂದ್ರೆ ಆರೋಗ್ಯ ತಜ್ಞರು ಹೇಳಿದ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಲೇಬೇಕು!

ಕಿಡ್ನಿ ರೋಗಿಗಳು ತಿನ್ನಬಹುದೇ?

ತಜ್ಞರ ಮಾತಿನ ಪ್ರಕಾರ, ಸಾಮಾನ್ಯವಾಗಿ ಕಿಡ್ನಿ ಸಮಸ್ಯೆ ಹೊಂದಿರುವವರು ವೈದ್ಯರ ಸಲಹೆಯೊಂದಿಗೆ ಮಿತ ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಬಹುದು. ಇದರಲ್ಲಿ ಇರುವ ಅಮಿನೋ ಆಮ್ಲಗಳು ಕಿಡ್ನಿ ಆರೋಗ್ಯಕ್ಕೆ ಸಹಾಯ ಮಾಡುವ ಸಾಧ್ಯತೆಯಿದೆ. ಆದರೆ ಗಂಭೀರ ಕಿಡ್ನಿ ಕಾಯಿಲೆ ಇರುವವರು ತಮ್ಮ ವೈದ್ಯರ ಮಾರ್ಗದರ್ಶನವನ್ನು ತಪ್ಪದೇ ಪಾಲಿಸಬೇಕು.

ಕಲ್ಲಂಗಡಿ ಕಿಡ್ನಿಯನ್ನು ಕ್ಲೀನ್ ಮಾಡುತ್ತದೆಯೇ?

ಬಹಳಷ್ಟು ಜನರು ಕಲ್ಲಂಗಡಿ ಹಣ್ಣು ಕಿಡ್ನಿಯನ್ನು ಡಿಟಾಕ್ಸ್ ಮಾಡುತ್ತದೆ ಎಂದು ನಂಬುತ್ತಾರೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ವೈದ್ಯಕೀಯವಾಗಿ ನೋಡಿದರೆ, ಕಿಡ್ನಿಗಳು ಸ್ವತಃ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವ ಸಾಮರ್ಥ್ಯ ಹೊಂದಿವೆ. ಕಲ್ಲಂಗಡಿ ಹೈಡ್ರೇಶನ್ ನೀಡುತ್ತದೆ. ಇದು ಆರೋಗ್ಯಕರವಾದ ಹಣ್ಣಾದರೂ, ಅತಿಯಾಗಿ ಸೇವಿಸುವುದರಿಂದ ಶರೀರದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಮಧುಮೇಹ ರೋಗಿಗಳು ಎಚ್ಚರಿಕೆ ವಹಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Brahma Muhurt: ಬೆಳಿಗ್ಗೆ 3 ರಿಂದ 5 ಗಂಟೆಯ ನಡುವೆ ಎಚ್ಚರವಾಗುತ್ತಿದೆಯೇ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು ಗೊತ್ತಾ? – Kannada News | Waking Up 3 5 AM? Spiritual Meaning and Brahma Muhurta Secrets Unveiled

ನಿದ್ರೆಯ ಸಮಯದಲ್ಲಿ ಹಠಾತ್ತನೆ ಎಚ್ಚರಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ ಎಂದು ನಮಗೆ ತೋರಬಹುದು. ದಿನಕ್ಕೆ ಒಂದು ಅಥವಾ ಎರಡು ಬಾರಿ ಹೀಗಾದರೆ ಚಿಂತೆಯಿಲ್ಲ, ಆದರೆ ನೀವು ಪದೇ ಪದೇ ಬೆಳಿಗ್ಗೆ 3 ರಿಂದ 5 ಗಂಟೆಯ ನಡುವೆಯೇ ಎಚ್ಚರಗೊಳ್ಳುತ್ತಿದ್ದರೆ, ಅದರ ಹಿಂದೆ ಒಂದು ಬಲವಾದ ಕಾರಣವಿರಬಹುದು. ಇಡೀ ಜಗತ್ತೇ ಗಾಢ ನಿದ್ರೆಯಲ್ಲಿರುವಾಗ ನಿಮ್ಮ ನಿದ್ರೆ ಮಾತ್ರ ಈ ನಿರ್ದಿಷ್ಟ ಸಮಯದಲ್ಲಿ ಅಡ್ಡಿಪಡಿಸುತ್ತಿದ್ದರೆ, ಅದು ಜೀವನದಲ್ಲಿ ಸಂಭವಿಸಲಿರುವ ಆಂತರಿಕ ಬದಲಾವಣೆ ಅಥವಾ ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಬ್ರಹ್ಮ ಮುಹೂರ್ತ ಪವಿತ್ರ ಶಕ್ತಿಯ ಕಾಲ:

ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಸಮಯವನ್ನು ಕೇವಲ ಅಂಕಿಗಳಾಗಿ ನೋಡುವುದಿಲ್ಲ, ಬದಲಾಗಿ ಒಂದು ಅದೃಶ್ಯ ಶಕ್ತಿಯಾಗಿ ವಿವರಿಸಲಾಗಿದೆ. ಬೆಳಿಗ್ಗೆ 3 ರಿಂದ 5 ರವರೆಗಿನ ಸಮಯವನ್ನು ‘ಬ್ರಹ್ಮ ಮುಹೂರ್ತ’ ಎಂದು ಕರೆಯಲಾಗುತ್ತದೆ. ಇದು ದಿನದ 24 ಗಂಟೆಗಳಲ್ಲಿ ಅತ್ಯಂತ ಪವಿತ್ರವಾದ ಸಮಯ. ಈ ಅವಧಿಯಲ್ಲಿ ವಾತಾವರಣವು ಸಂಪೂರ್ಣವಾಗಿ ಶುದ್ಧವಾಗಿದ್ದು, ಸಕಾರಾತ್ಮಕ ಶಕ್ತಿಯು ಅತಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಎಚ್ಚರಗೊಳ್ಳುವ ವ್ಯಕ್ತಿಯು ಆಧ್ಯಾತ್ಮಿಕ ಶಕ್ತಿ ಮತ್ತು ದೈವಿಕ ಆಶೀರ್ವಾದಗಳನ್ನು ಸುಲಭವಾಗಿ ಪಡೆಯುತ್ತಾನೆ ಎಂಬ ನಂಬಿಕೆಯಿದೆ.

ದೈಹಿಕ ಅಗತ್ಯವೋ ಅಥವಾ ದೈವಿಕ ಸಂದೇಶವೋ?

ರಾತ್ರಿಯಲ್ಲಿ ಎಚ್ಚರವಾಗುವುದಕ್ಕೆ ಹೆಚ್ಚು ನೀರು ಕುಡಿಯುವುದು ಅಥವಾ ವಯಸ್ಸಿನ ಕಾರಣವಿರಬಹುದು ಎಂದು ನಾವು ಭಾವಿಸುತ್ತೇವೆ. ಆದರೆ ಜ್ಯೋತಿಷ್ಯದ ದೃಷ್ಟಿಕೋನದಲ್ಲಿ, ಈ ಪವಿತ್ರ ಸಮಯದಲ್ಲಿ ಮೂತ್ರ ವಿಸರ್ಜನೆಯಂತಹ ನೈಸರ್ಗಿಕ ಪ್ರಕ್ರಿಯೆಯ ನೆಪದಲ್ಲಿ ನಿಮ್ಮನ್ನು ಎಚ್ಚರಗೊಳಿಸುವುದು ಒಂದು ಸಂಕೇತವಾಗಿದೆ. ನಿಮ್ಮನ್ನು ಗಾಢ ನಿದ್ರೆಯಿಂದ ಹೊರತಂದು, ನಿರ್ದಿಷ್ಟ ಉದ್ದೇಶಕ್ಕಾಗಿ ಅಥವಾ ಬ್ರಹ್ಮಾಂಡದ ಶಕ್ತಿಯೊಂದಿಗೆ ನಿಮ್ಮನ್ನು ಸಂಪರ್ಕಿಸಲು ಪ್ರಕೃತಿಯೇ ಮಾಡುವ ಪ್ರಯತ್ನ ಇದಾಗಿರುತ್ತದೆ ಎಂದು ಹೇಳಲಾಗುತ್ತದೆ.

ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತ:

ಬೆಳಿಗ್ಗೆ 3 ರಿಂದ 5 ಗಂಟೆಯ ನಡುವೆ ಎಚ್ಚರಗೊಳ್ಳುವುದು ನಿಮ್ಮ ಪ್ರಜ್ಞೆಯು ಉನ್ನತ ಮಟ್ಟಕ್ಕೆ ತಲುಪುತ್ತಿದೆ ಎಂಬುದನ್ನು ಸೂಚಿಸುತ್ತದೆ. ಈ ಸಮಯದಲ್ಲಿ ಮನಸ್ಸು ಅತ್ಯಂತ ಶಾಂತ ಮತ್ತು ಕೇಂದ್ರೀಕೃತವಾಗಿರುತ್ತದೆ. ಆದ್ದರಿಂದಲೇ ಈ ಅವಧಿಯು ಧ್ಯಾನ, ಪ್ರಾರ್ಥನೆ ಮತ್ತು ಆತ್ಮಾವಲೋಕನಕ್ಕೆ ಅತ್ಯುತ್ತಮವಾಗಿದೆ. ಈ ಸಮಯದಲ್ಲಿ ವ್ಯಕ್ತಿಯ ಆಂತರಿಕ ಪ್ರಜ್ಞೆಯು ಕಾಸ್ಮಿಕ್ ಶಕ್ತಿಯೊಂದಿಗೆ (Cosmic Energy) ನೇರವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ, ಇದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪೂರ್ವಜರ ಮತ್ತು ದೇವತೆಗಳ ಆಶೀರ್ವಾದ:

ಹಿಂದೂ ನಂಬಿಕೆಯ ಪ್ರಕಾರ, ಬ್ರಹ್ಮ ಮುಹೂರ್ತವು ಭೌತಿಕ ಲೋಕ ಮತ್ತು ಆಧ್ಯಾತ್ಮಿಕ ಲೋಕಗಳ ನಡುವಿನ ಅಂತರವು ಕಿರಿದಾಗಿರುವ ಸಮಯ. ಈ ಸಮಯದಲ್ಲಿ ನೀವು ಆಗಾಗ್ಗೆ ಎಚ್ಚರಗೊಂಡರೆ, ಅದು ನಿಮ್ಮ ಪೂರ್ವಜರು ಅಥವಾ ಆರಾಧ್ಯ ದೇವತೆಗಳು ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂಬುದರ ಸಂಕೇತವೂ ಆಗಿರಬಹುದು. ಇದು ಅವರ ರಕ್ಷಣೆ, ಆಶೀರ್ವಾದ ಮತ್ತು ನಿಮ್ಮೊಂದಿಗೆ ಅವರು ಆಧ್ಯಾತ್ಮಿಕವಾಗಿ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ.

ಹೀಗಾದಾಗ ಏನು ಮಾಡಬೇಕು?

ನೀವು ಈ ಪವಿತ್ರ ಸಮಯದಲ್ಲಿ ಎಚ್ಚರಗೊಂಡಾಗ, ಭಯಪಡುವ ಬದಲು ಎರಡು ನಿಮಿಷ ಕಣ್ಣು ಮುಚ್ಚಿ ಪ್ರಶಾಂತವಾಗಿ ಕುಳಿತುಕೊಳ್ಳಿ. ನಿಮ್ಮ ಇಷ್ಟದೇವತೆಯನ್ನು ಸ್ಮರಿಸಿ ಅಥವಾ ಸರಳವಾಗಿ ಉಸಿರಾಟದ ಮೇಲೆ ಗಮನವಿಟ್ಟು ಧ್ಯಾನ ಮಾಡಿ. ಇದು ನಿಮ್ಮ ಜೀವನದಲ್ಲಿ ಅದ್ಭುತವಾದ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳ್ತಂಗಡಿಯ ಐತಿಹಾಸಿಕ ದೇಗುಲಕ್ಕೆ ನುಗ್ಗಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ – Kannada News | Mangaluru: Temple Vandalism Incident; Man Breaks In at Night, Damages Idol

ಮಂಗಳೂರು, ಏಪ್ರಿಲ್​​ 23: ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ (Balanja Temple) ತಡರಾತ್ರಿ ಅಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ದೇಗುಲಕ್ಕೆ ನುಗ್ಗಿ ದಾಂಧಲೆ ಮಾಡಿದ್ದಲ್ಲದೇ ದೇವರ ಮೂರ್ತಿ ಭಗ್ನಗೊಳಿಸಿ ವಿಕೃತಿ ಮೆರೆದಿರುವಂತಹ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಅಜೇಯ್ ಎಂಬಾತನಿಂದ ಕೃತ್ಯವೆಸಗಲಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ಮೊದಲು ದೇಗುಲದ ಕೆರೆಗೆ ಹಾರಿದ ಅಜೇಯ್, ಬಳಿಕ ದೇವಸ್ಥಾನದ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದಾನೆ. ದೇಗುಲದ ಒಳಗಿದ್ದ ಪೂಜಾ ಪರಿಕರಗಳು ಹಾಗೂ ದೈವದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ದೇವರ ಮೂರ್ತಿಯನ್ನು ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾನೆ.

ಇದನ್ನೂ ಓದಿ: ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ! ಮೈ ಜುಮ್ ಎನ್ನಿಸುವ ದೃಶ್ಯ

ಇನ್ನು ಅಜೇಯ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಈ ಕೃತ್ಯದ ಹಿಂದೆ ಮಾನಸಿಕ ಅಸ್ವಸ್ಥತೆಯ ಶಂಕೆ ವ್ಯಕ್ತವಾಗಿದೆ. ಸದ್ಯ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಕಾಲೇಜು ವಿದ್ಯಾರ್ಥಿಗೆ ಗುಂಪೊಂದರಿಂದ ಮಾರಣಾಂತಿಕ ಹಲ್ಲೆ

ಕಾಲೇಜು ವಿದ್ಯಾರ್ಥಿಗೆ ಐವರ ತಂಡದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಸ್ ನಿಲ್ದಾಣದ ಬಳಿ ನಡೆದಿದೆ. ಆದಿಲ್ ಹುಸೈನ್(21) ಹಲ್ಲೆಗೊಳಗಾದ ಬಿಕಾಂ ವಿದ್ಯಾರ್ಥಿ. ತಲೆ ಹಾಗೂ ಮುಖದ ಭಾಗಕ್ಕೆ ತಂಡದಿಂದ ದಾಳಿ ಮಾಡಲಾಗಿದ್ದು, ಮೊಹಿಯುದ್ದೀನ್, ಮೋಹದ್ ಸೇರಿ ಐವರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.

ನಡೆದಿದ್ದೇನು?

ಪುತ್ತೂರು ಖಾಸಗಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಆದಿಲ್ ಹುಸೈನ್, ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಚಹಾ ಕುಡುಯುತ್ತ ನಿಂತಿದ್ದ ವೇಳೆ ಕಲ್ಲಿನಿಂದ ದಾಳಿ ಮಾಡಲಾಗಿದೆ. ಇತ್ತೀಚೆಗೆ ಕಾಲೇಜಿನಲ್ಲಿ ಮೊಹಿಯುದ್ದೀನ್ ತಂಡದಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿತ್ತು. ಹಳೇ ದ್ವೇಷ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ವಿದ್ಯಾರ್ಥಿ ಆದಿಲ್ ದೂರು ನೀಡಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಲಂಡನ್‌ನಲ್ಲಿ 100 ರೂ ದಿನಸಿ ಶಾಪಿಂಗ್ ಚಾಲೆಂಜ್‌ ಸ್ವೀಕರಿಸಿದ ಭಾರತೀಯ ಮಹಿಳೆ – Kannada News | Indian woman accepts 100 grocery item shopping challenge in London

ಭಾರತಕ್ಕೆ ಹೋಲಿಸಿದ್ರೆ ವಿದೇಶದಲ್ಲಿ (foreign) ಜೀವನ ನಡೆಸುವುದು ತುಂಬಾ ಸುಲಭ. ಕೈ ತುಂಬಾ ಸಂಬಳ ಸಿಗುತ್ತದೆ, ಹೀಗಾಗಿ ಆರಾಮಾದಾಯಕವಾಗಿದೆ ಜೀವನ ನಡೆಸಬಹುದು ಅಂದುಕೊಳ್ತಾರೆ. ದಿನನಿತ್ಯ ಅಗತ್ಯಗಳನ್ನು ಪೂರೈಸಿಕೊಳ್ಳಲು ತಿಂಗಳ ಸಂಬಳ ಸಾಲುವುದಿಲ್ಲ. ಅಗ್ಗದ ಬೆಲೆಗೆ ದಿನಸಿ ವಸ್ತುಗಳು ಸಿಗಲ್ಲ. ಇದೀಗ ಭಾರತೀಯ ಮಹಿಳೆ ಲಂಡನ್‌ನಲ್ಲಿ (London) ಚಾಲೆಂಜ್ ಸ್ವೀಕರಿಸಿದ್ದಾರೆ. ಕೇವಲ 100 ರೂಯೊಳಗೆ ದಿನಸಿ ಸಾಮಗ್ರಿಗಳನ್ನು ಖರೀದಿಸುವುದೇ ಬಹುದೊಡ್ಡ ಚಾಲೆಂಜ್. ಆದರೆ ಕೊನೆಗೆ ಈ ಮಹಿಳೆ 100 ರೂಗೆ ಖರೀದಿಸಲು ಸಾಧ್ಯವಾದ ವಸ್ತು ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ವಿದೇಶಿ ದುಬಾರಿ ಜೀವನ ಕಂಡು ಶಾಕ್ ಆಗಿದ್ದಾರೆ.

@veggiewander ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಭಾರತೀಯ ಮಹಿಳೆ ಲಂಡನ್‌ನಲ್ಲಿ 100 ರೂಗೆ ದಿನಸಿ ಸಾಮಗ್ರಿಗಳನ್ನು ಖರೀದಿಸಿರುವ ಚಾಲೆಂಜ್ ಸ್ವೀಕರಿಸಿರುವುದನ್ನು ಕಾಣಬಹುದು. ಮಹಿಳೆಯೂ 100 ರೂ ನೋಟು ಹಿಡಿದು ಲಂಡನ್‌ನ ಅಂಗಡಿಯೊಂದಕ್ಕೆ ನಡೆದು ಹೋಗಿದ್ದಾರೆ. ಈ ಬಜೆಟ್ ಒಳಗೆ ಏನನ್ನಾದರೂ ಖರೀದಿಸಲು ಪ್ರಯತ್ನಿಸುವ  ಚಾಲೆಂಜ್ ನೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ.

ವೈರಲ್ ವಿಡಿಯೋ ಇಲ್ಲಿದೆ

ಮೊದಲು ಸ್ಯಾಂಡ್‌ವಿಚ್ ವಿಭಾಗಕ್ಕೆ ಹೋಗಿ ಬೇಸಿಕ್ ಚೀಸ್ ಹಾಗೂ ಈರುಳ್ಳಿ ಸ್ಯಾಂಡ್‌ವಿಚ್ ಅನ್ನು ಎತ್ತಿಕೊಂಡು ಬೆಲೆ ಎಷ್ಟೆಂದು ನೋಡಿದಾಗ 1.50 ಪೌಂಡ್‌ಗಳು (ಸುಮಾರು 190 ರೂ ) ಎಂದು ತಿಳಿಯುತ್ತದೆ. ಆ ಬಳಿಕ ಆ ಮಹಿಳೆ 500 ಮಿಲಿ ನೀರಿನ ಬಾಟಲಿಯನ್ನು ತೆಗೆದುಕೊಂಡಿದ್ದಾರೆ. ಈ ಬಾಟಲಿಯ ಬೆಲೆ ಬೆಲೆ 1.15 ಪೌಂಡ್‌ಗಳು (ಸುಮಾರು 145 ರೂ) ಗಳಾಗಿದ್ದು, ಮತ್ತೆ 100 ರೂ ಒಳಗೆ ಖರೀದಿಸಬಹುದಾದ ದಿನಸಿ ವಸ್ತುವಿಗಾಗಿ ಹುಡುಕಾಟ ನಡೆಸಿದ್ದಾರೆ.

ತದನಂತರದಲ್ಲಿ 0.89 ಪೌಂಡ್‌ಗಳ (ಸುಮಾರು 113 ರೂ) ಬೆಲೆಯ ಎಲೆಕೋಸು ಮತ್ತು 1.65 ಪೌಂಡ್‌ಗಳ (ಸುಮಾರು 209 ರೂ ) ಬೆಲೆಯ ಓರಿಯೊ ಬಿಸ್ಕಟ್‌ ಪ್ಯಾಕ್ ಗಮನಿಸುತ್ತಾರೆ. ತನ್ನ ಬಜೆಟ್ ಚಾಲೆಂಜ್ ಗಿಂತ ಈ ಎಲ್ಲಾ ವಸ್ತುವಿನ ಬೆಲೆ ಹೆಚ್ಚಾಗಿರುವುದರಿಂದ ಅಲ್ಲಿಗೆ ಸುಮ್ಮನಾಗುತ್ತಾರೆ. ಆದರೆ ಕೊನೆಗೆ ಸಿಕ್ಕಿದ್ದು ಸಣ್ಣದಾದ ಕ್ಯಾರೆಟ್ ಪ್ಯಾಕೆಟ್. ಇದರ ಬೆಲೆ 0.60 ಪೌಂಡ್‌ಗಳ (ಸುಮಾರು 75 ರೂ). 100 ರೊಳಗೆ ಸಿಗುವ ಏಕೈಕ ವಸ್ತು ಅದೇ ಎಂದು ತೀರ್ಮಾನಿಸಿ, ಅದನ್ನು ಖರೀದಿಸಲು ನಿರ್ಧರಿಸುತ್ತಾರೆ.

ಇದನ್ನೂ ಓದಿ: ಜರ್ಮನ್‌ನಲ್ಲಿ ಡ್ರೀಮ್‌ ಜಾಬ್‌ ಗಿಟ್ಟಿಸಿಕೊಂಡ ಭಾರತೀಯ ಮಹಿಳೆ ಹೇಳಿದ್ದೇನು ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತದಲ್ಲಿ ಈ ಮೊತ್ತಕ್ಕೆ ಹಲವಾರು ದಿನಸಿ ವಸ್ತುಗಳನ್ನು ಸುಲಭವಾಗಿ ಕೊಂಡುಕೊಳ್ಳಬಹುದು ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಾರತದೊಂದಿಗೆ ಏಕೆ ಹೋಲಿಸುತ್ತೀರಿ. ಹಾಗೆ ನೋಡಿದರೆ ನೀವು ಸಂಬಳವನ್ನು ಹೋಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಭಾರತಕ್ಕೂ ವಿದೇಶಕ್ಕೂ ಇಷ್ಟೇ ವ್ಯತ್ಯಾಸ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ – Kannada News | Salman Khan and Nayantara movie shooting begins

ಸಲ್ಮಾನ್ ಖಾನ್ (Salman Khan) ಇದೀಗ ಮತ್ತೊಬ್ಬ ದಕ್ಷಿಣದ ನಿರ್ದೇಶಕನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಮಹರ್ಷಿ’, ‘ವಾರಿಸು’ ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ನೀಡಿರುವ ವಂಶಿ ಪೈಡಪಲ್ಲಿ ನಿರ್ದೇಶನದ ಬಾಲಿವುಡ್ ಸಿನಿಮಾನಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದು, ನಯನತಾರಾ ಈ ಸಿನಿಮಾದ ನಾಯಕಿ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ತೆಲುಗು ಸ್ಟಾರ್ ನಿರ್ಮಾಪಕ ದಿಲ್ ರಾಜು. ಇದೀಗ ಸಿನಿಮಾದ ಮುಹೂರ್ತ ನೆರವೇರಿದ್ದು, ಸಿನಿಮಾದ ಚಿತ್ರೀಕರಣವೂ ಶುರುವಾಗಿದೆ. ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಗುಜರಾತ್ ಶಿಕ್ಷಣ ಸಚಿವರಿಗೆ POTM ಪ್ರಶಸ್ತಿ ಅರ್ಪಿಸಿದ ರವೀಂದ್ರ ಜಡೇಜಾ – Kannada News | Ravindra Jadeja’s IPL Man of the Match: Dedicates Award to Wife Rivaba Jadeja

ವಾಸ್ತವವಾಗಿ ಲಕ್ನೋ ವಿರುದ್ಧದ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಮಾತನಾಡಿದ್ದ ರಿವಾಬಾ ಜಡೇಜಾ, ಲಕ್ನೋ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದಿದ್ದರು. ರಿವಾಬಾ ಹೇಳಿದಂತೆ ಜಡೇಜಾ ಬ್ಯಾಟಿಂಗ್​ನಲ್ಲಿ 43 ರನ್​ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರೆ, ಬೌಲಿಂಗ್​ನಲ್ಲಿ ಪ್ರಮುಖ ವಿಕೆಟ್ ಉರುಳಿಸಿದರು. ಇದಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

Source link

ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ – Kannada News | Tamil Nadu Elections Newlyweds Couple come to vote soon after marriage in Tirunelveli

ಚೆನ್ನೈ, ಏಪ್ರಿಲ್ 23: ತಮಿಳುನಾಡಿನಲ್ಲಿ ಇಂದು ವಿಧಾನಸಭಾ ಚುನಾವಣೆ (Tamil Nadu Assembly Elections) ನಡೆಯುತ್ತಿದೆ. ಇಂದು ನಡೆದ ಚುನಾವಣೆಯಲ್ಲಿ ಮತ ಚಲಾಯಿಸಲು ತಿರುನಲ್ವೇಲಿಯಲ್ಲಿ ನವವಿವಾಹಿತ ದಂಪತಿ ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದಿದ್ದಾರೆ. ಕೊರಳಲ್ಲಿ ಹಾರ ಹಾಕಿಕೊಂಡೇ ಮತಗಟ್ಟೆಗೆ ಬಂದ ದಂಪತಿ ಮತ ಚಲಾಯಿಸಿದ್ದಾರೆ.

ತಮಿಳುನಾಡಿನಲ್ಲಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಸಮ್ಮಿಶ್ರ ಸರ್ಕಾರದ ಅವಧಿ ಮೇ 7ರಂದು ಕೊನೆಗೊಳ್ಳುತ್ತದೆ. ಹೀಗಾಗಿ, ತಮಿಳುನಾಡಿನಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದೆ. ಅದರಂತೆ, 3,585 ಪುರುಷ ಅಭ್ಯರ್ಥಿಗಳು ಮತ್ತು 438 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 4,023 ಅಭ್ಯರ್ಥಿಗಳು ತಮಿಳುನಾಡಿನಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಸುಮಾರು 5.73 ಕೋಟಿ ಮತದಾರರು ಇಂದು ಮತ ಚಲಾಯಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version