Vaibhav Sooryavanshi: ನಾ ಕಾರ್ಟೂನ್ ನೋಡಿಯೇ ಬ್ಯಾಟಿಂಗ್​ಗೆ ಬರೋದು..! – Kannada News | Vaibhav Sooryavanshi said, “I watch cartoons before every match”

ಕೇವಲ 15 ವರ್ಷ ವಯಸ್ಸಿನಲ್ಲೇ  ಕ್ರಿಕೆಟ್ ಮೈದಾನದಲ್ಲಿ ಧೂಳೆಬ್ಬಿಸುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ, ತಮ್ಮ ವಿಶಿಷ್ಟ ಹವ್ಯಾಸದಿಂದ ಸುದ್ದಿಯಲ್ಲಿದ್ದಾರೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಗೂ ಮುನ್ನ ಆಟಗಾರರು ಅತಿಯಾದ ಒತ್ತಡದಲ್ಲಿರುತ್ತಾರೆ. ಆದರೆ ವೈಭವ್ ಮಾತ್ರ ಇದಕ್ಕೆ ವ್ಯತಿರಿಕ್ತ. ಇದಕ್ಕೆ ಸಾಕ್ಷಿ ಅವರು ನೀಡಿರುವ ಕಾರ್ಟೂನ್ ಹೇಳಿಕೆ..!

ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ನಡೆದ ಪೋಸ್ಟ್ ಮ್ಯಾಚ್ ಸಂದರ್ಶನವೊಂದರಲ್ಲಿ ವೈಭವ್ ಅವರಿಗೆ “ಈ ವಯಸ್ಸಿನ ಮಕ್ಕಳು ಕಾರ್ಟೂನ್ ನೋಡುವಾಗ ನೀನು ಬೌಲರ್‌ಗಳ ಬೆವರಿಳಿಸುತ್ತಿದ್ದೀಯಾ, ನಿನ್ನ ಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ?” ಎಂದು ಕೇಳಲಾಗಿತ್ತು. ಅದಕ್ಕೆ ವೈಭವ್ ನೀಡಿದ ಮುಗ್ಧ ಉತ್ತರ ಇಲ್ಲಿದೆ:

“ಪಂದ್ಯಕ್ಕೂ ಮೊದಲು ನನ್ನ ತಲೆಯಲ್ಲಿ ಹೆಚ್ಚೇನೂ ಓಡುವುದಿಲ್ಲ. ನನಗೆ ಕಾರ್ಟೂನ್ ನೋಡುವ ಹವ್ಯಾಸವಿದೆ. ಹಾಗಾಗಿ ಇಂದಿಗೂ ನಾನು ಪಂದ್ಯ ಆರಂಭವಾಗುವ ಮೊದಲು ಕಾರ್ಟೂನ್ ನೋಡುತ್ತೇನೆ. ಇದರಿಂದ ಮನಸ್ಸು ಶಾಂತವಾಗಿರುತ್ತದೆ, ಆದರೆ ಪಂದ್ಯದ ಮೇಲೆ ನನ್ನ ಗಮನ ಪೂರ್ತಿ ಇರುತ್ತದೆ.” ಎಂದಿದ್ದಾರೆ. ಈ ಉತ್ತರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇತ್ತ ಕಾರ್ಟೂನ್ ನೋಡುತ್ತಲೇ ಬೌಲರ್​ಗಳಿಗೆ ಬೆವರಿಳಿಸುತ್ತಿರುವ ವೈಭವ್ ಸೂರ್ಯವಂಶಿ ಇದೀಗ ಐಪಿಎಲ್ ಇತಿಹಾಸದಲ್ಲೇ ಅತೀ ವೇಗವಾಗಿ 500 ರನ್ ಕಲೆಹಾಕಿದ ದಾಖಲೆ ನಿರ್ಮಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 8 ರನ್ ಬಾರಿಸುವುದರೊಂದಿಗೆ ವೈಭವ್ ಈ ದಾಖಲೆ ಬರೆದಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್ ಹೆಸರಿನಲ್ಲಿತ್ತು. ಮ್ಯಾಕ್ಸ್​ವೆಲ್ 260 ಎಸೆತಗಳ ಮೂಲಕ ಐಪಿಎಲ್​ನಲ್ಲಿ 500 ರನ್ ಪೂರೈಸಿದ್ದರು. ಇದೀಗ ಬಾಸ್ ಬೇಬಿ ಖ್ಯಾತಿಯ ವೈಭವ್ ಸೂರ್ಯವಂಶಿ ಕೇವಲ 227 ಎಸೆತಗಳಲ್ಲಿ 500 ರನ್ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದಲ್ಲದೆ ಐಪಿಎಲ್​ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಕೂಡ ವೈಭವ್ ಸೂರ್ಯವಂಶಿ ಹೆಸರಿನಲ್ಲಿದೆ. ಈ ಎಲ್ಲಾ ದಾಖಲೆಗಳ ಹಿಂದೆ ಕಾರ್ಟೂನ್ ನೋಡುವ ಹವ್ಯಾಸ ಇರುವುದು ಇದೀಗ ಬಹಿರಂಗವಾಗಿದೆ.

ಇದನ್ನೂ ಓದಿ: ಈಗಲೇ RCB ಆಟಗಾರನ ಆಯ್ಕೆ ಮಾಡಿ: CSKಗೆ ಐಡಿಯಾ ನೀಡಿದ ಅಶ್ವಿನ್

ಒಟ್ಟಿನಲ್ಲಿ 15ನೇ ವಯಸ್ಸಿನಲ್ಲೇ ಕ್ರಿಕೆಟ್ ಅಂಗಳದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗಿರುವ ವೈಭವ್ ಸೂರ್ಯವಂಶಿ ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಈ ಮೂಲಕ ಭಾರತದ ಪರ 15ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿದ ಹಿರಿಮೆಗೆ ಪಾತ್ರರಾಗಲಿದ್ದಾರಾ ಕಾದು ನೋಡಬೇಕಿದೆ.

Published On – 9:59 am, Thu, 23 April 26

Source link

ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್  – Kannada News | Rajinikanth Cast His vote at Stella Maris School in Chennai For Tamil Nadu Assembly Election 2026

ಇಂದು (ಏಪ್ರಿಲ್ 23) ತಮಿಳುನಾಡಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಮಾತದಾನ ನಡೆಯುತ್ತಿದೆ. ರಜನಿಕಾಂತ್ ಅವರು ಬಂದು ತಮ್ಮ ಮತ ಚಲಾಯಿಸಿದರು. ಸಾಮಾನ್ಯರಂತೆ ಬಂದ ಅವರು ಚೆನ್ನೈನ ಸ್ಟೆಲ್ಲಾ ಮೇರಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ವೋಟ್ ಹಾಕಿದರು. ಆ ಬಳಿಕ ಅವರು ಮತ ಹಾಕಿದ ಬೆರಳನ್ನು ಜನರತ್ತ ತೋರಿಸಿದರು. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈಸೂರು: ಸಫಾರಿ ವೇಳೆ ರಸ್ತೆಗೆ ಬಂದ ಹುಲಿ ವಾಹನಗಳ ಮಧ್ಯೆಯೇ ರಸ್ತೆ ದಾಟಿದ ಅಪರೂಪದ ವಿಡಿಯೋ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆ – Kannada News | Mysore Safari Thrill: Tiger Spotted Walking Between Safari Vehicles in Karapura Jungle Lodge, Video goes viral

ಮೈಸೂರು, ಏಪ್ರಿಲ್ 23: ಮೈಸೂರಿನ ಕಾರಾಪುರ ಜಂಗಲ್ ರೆಸಾರ್ಟ್ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿಯ ದರ್ಶನವಾಗಿದೆ. ಸಫಾರಿ ವಾಹನಗಳು ರಸ್ತೆಯಲ್ಲಿದ್ದರೂ ಸಹ ಯಾವುದಕ್ಕೂ ಅಂಜದ ಹುಲಿ, ಅತ್ಯಂತ ಗಾಂಭಿರ್ಯದಿಂದ ರಸ್ತೆಯಲ್ಲೇ ನಡೆದು ಬಂದಿದೆ. ವಾಹನಗಳ ನಡುವೆಯೇ ರಸ್ತೆ ದಾಟಿ ನಂತರ ನಿಧಾನವಾಗಿ ಕಾಡಿನೊಳಗೆ ಮರೆಯಾಗಿದೆ. ಸಫಾರಿಗೆ ತೆರಳಿದ್ದ ಮೈಸೂರಿನ ನಿವಾಸಿ ಸೌಮ್ಯ ಪ್ರಕಾಶ್ ಎಂಬುವವರು ಈ ಸುಂದರ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಹುಲಿಯನ್ನು ಇಷ್ಟು ಹತ್ತಿರದಿಂದ ಕಂಡ ಪ್ರವಾಸಿಗರು ಪುಳಕಿತಗೊಂಡಿದ್ದಾರೆ. ಸದ್ಯ, ಸೌಮ್ಯ ಪ್ರಕಾಶ್ ಸೆರೆಹಿಡಿದಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರ: ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಂದ ಪತಿ – Kannada News | KGF Murder: Husband Arrested for Wife’s Brutal Killing in Kolar

ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಂದ ಪತಿImage Credit source: Tv9 kannada

ಕೋಲಾರ, ಏ.23 : ರಾಜ್ಯದಲ್ಲಿ ಅಕ್ರಮ ಸಂಬಂಧಗಳ ಪ್ರಕರಣಗಳ ನಡುವೆ ಅನುಮಾನಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಗಂಡನನ್ನು ಬಿಟ್ಟು ಇನ್ನೊಂದು ಹುಡುಗನ ಜತೆ ಅಥವಾ ಹುಡುಗಿಯ ಜತೆಗೆ ಹೋಗುವುದು. ಹೀಗೆ ಅನೇಕ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ನಡುವೆ ಪತಿ-ಪತ್ನಿ ಮಧ್ಯೆ ಅನುಮಾನಕ್ಕೆ ಬಳಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.  ನೆನ್ನೆಯಿಂದ (ಏ.22) ಈ ಅಕ್ರಮ ಸಂಬಂಧಗಳ ವರದಿಯೂ ಸುಮಾರು ಬೆಳಕಿಗೆ ಬಂದಿದೆ. ಇದೀಗ ಪತ್ನಿಯ ನಡತೆಯ ಮೇಲೆ ಸಂಶಯ ವ್ಯಕ್ತಪಡಿಸಿದ ಪತಿಯೊಬ್ಬ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಈಶ್ವರಮ್ಮ ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಆಂಧ್ರಪ್ರದೇಶದ ಪೆದ್ದೂರು ಮೂಲದ ಗೋಪಿನಾಥ ಎಂದು ಗುರುತಿಸಲಾಗಿದೆ. ಈ ದಂಪತಿ ಇತ್ತೀಚೆಗೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು.

ಸಂಬಂಧಿಕರ ಭೇಟಿ ಮಾಡಿ ವಾಪಸ್ ಆಗುವ ಸಂದರ್ಭದಲ್ಲಿ ದಾರಿಯುದ್ದಕ್ಕೂ ದಂಪತಿಗಳು ಜಗಳ ಮಾಡಿಕೊಂಡೆ ಬಂದಿದ್ದಾರೆ ಎಂದು ಹೇಳಲಾಗಿದೆ. ಇದರ ನಡುವೆ ಪತ್ನಿಯ ಶೀಲದ ಮೇಲೆ ಮೊದಲೇ ಶಂಕೆ ಹೊಂದಿದ್ದ ಗೋಪಿನಾಥ, ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡಿದ್ದಾನೆ. ತನ್ನೊಂದಿಗೆ ತಂದಿದ್ದ ಮಚ್ಚಿನಿಂದ ಈಶ್ವರಮ್ಮ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಈಶ್ವರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಯುವಕರಲ್ಲಿ ಹೆಚ್ಚುತ್ತಿದೆ ಬಾಯಿ ಕ್ಯಾನ್ಸರ್: ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ, ತಜ್ಞರ ಎಚ್ಚರಿಕೆ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಊರಿಗಾಂ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಗೋಪಿನಾಥನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಊರಿಗಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಬಾರಿಯ ಸೋಲಿಗೆ ರಿಷಭ್ ಪಂತ್ ನೀಡಿದ ಕಾರಣವೇನು ಗೊತ್ತಾ? – Kannada News | Rishabh pant post match interview after lsg vs rr match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 40 ರನ್​ಗಳಿಂದ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 159 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 18 ಓವರ್​ಗಳಲ್ಲಿ 119 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಎಲ್​ಎಸ್​ಜಿ ಪಡೆ 40 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಮ್ಮ ಬ್ಯಾಟಿಂಗ್ ವಿಭಾಗವು ಸತತವಾಗಿ ಕೈಕೊಡುತ್ತಿದೆ. ಈ ಸೋಲನ್ನು ವಿವರಿಸುವುದು ಕಷ್ಟ. ತಂಡವಾಗಿ ನಮಗೆ ಇದು ನಿರಾಸೆ ತಂದಿದೆ. ಮೈದಾನದಲ್ಲಿ ಚೆಂಡು ಸ್ವಿಂಗ್ ಆಗುತ್ತಿದ್ದಾಗ ನಾವು ಸ್ವಲ್ಪ ಸಮಯ ತೆಗೆದುಕೊಂಡು ಆಡಬೇಕಿತ್ತು. ನಾನೂ ಸೇರಿದಂತೆ ಬ್ಯಾಟರ್‌ಗಳು ಇನ್ನಿಂಗ್ಸ್ ಅನ್ನು ಆಳವಾಗಿ ಕೊಂಡೊಯ್ಯುವಲ್ಲಿ ವಿಫಲರಾದೆವು” ಎಂದು ಪಂತ್ ಒಪ್ಪಿಕೊಂಡಿದ್ದಾರೆ.

ಬ್ಯಾಟಿಂಗ್ ಬಗ್ಗೆ ಅಸಮಾಧಾನವಿದ್ದರೂ, ಬೌಲರ್‌ಗಳ ಶ್ರಮವನ್ನು ರಿಷಭ್ ಪಂತ್ ಶ್ಲಾಘಿಸಿದ್ದಾರೆ. “ನಮ್ಮ ಬೌಲರ್‌ಗಳು ಅದ್ಭುತವಾಗಿ ಕೆಲಸ ಮಾಡಿದರು. ರಾಜಸ್ಥಾನದಂತಹ ಬಲಿಷ್ಠ ತಂಡವನ್ನು 159 ರನ್‌ಗಳಿಗೆ ಕಟ್ಟಿಹಾಕಿದ್ದು ಸಣ್ಣ ವಿಷಯವಲ್ಲ. ಆದರೆ ಬೌಲರ್‌ಗಳ ಈ ಪರಿಶ್ರಮಕ್ಕೆ ಬ್ಯಾಟರ್‌ಗಳು ಬೆಂಬಲ ನೀಡಬೇಕಿತ್ತು. ಆದರೆ ನಮ್ಮ ಬ್ಯಾಟರ್​ಗಳಿಗೆ ಅದು ಸಾಧ್ಯವಾಗಿಲ್ಲ” ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸತತ ಸೋಲುಗಳಿಂದ ಕಂಗೆಟ್ಟಿರುವ ಲಕ್ನೋ ಸೂಪರ್ ತಂಡಕ್ಕೆ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸಿದ ರಿಷಭ್ ಪಂತ್ “ನಾವು ಸೋಲಿಗೆ ಕಾರಣಗಳನ್ನು ಹೊರಗೆ ಹುಡುಕುವ ಬದಲು, ನಮ್ಮ ಒಳಗಡೆಯೇ ಹುಡುಕಬೇಕಿದೆ. ನಮ್ಮಲ್ಲಿ ಸಾಮರ್ಥ್ಯವಿದೆ, ಅದನ್ನು ಪ್ರದರ್ಶಿಸುವ ಅಗತ್ಯವಿದೆ. ತಲೆ ಎತ್ತಿ ನಿಂತು ಮುನ್ನುಗ್ಗೋಣ, ನಾವು ಖಂಡಿತವಾಗಿಯೂ ಲಯಕ್ಕೆ ಮರಳುತ್ತೇವೆ ಎಂಬ ನಂಬಿಕೆ ನನಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಈಗಲೇ RCB ಆಟಗಾರನ ಆಯ್ಕೆ ಮಾಡಿ: CSKಗೆ ಐಡಿಯಾ ನೀಡಿದ ಅಶ್ವಿನ್

ಒಟ್ಟಿನಲ್ಲಿ ಕಳಪೆ ಬ್ಯಾಟಿಂಗ್​ನಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ಮತ್ತೊಮ್ಮೆ ಸೋಲನುಭವಿಸಿದೆ. ಈ ಸೋಲಿಗೆ ಬ್ಯಾಟರ್​ಗಳೇ ಕಾರಣ. ಹೀಗಾಗಿ ಈ ಸಮಸ್ಯೆಯನ್ನು ನಾವು ಶೀಘ್ರದಲ್ಲೇ ಬಗೆಹರಿಸಿಕೊಳ್ಳಬೇಕಿದೆ. ಈ ಮೂಲಕ ದ್ವಿತೀಯಾರ್ಧದಲ್ಲಿ ಕಂಬ್ಯಾಕ್ ಮಾಡಬೇಕು, ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಹೇಳಿದ್ದಾರೆ.

Source link

‘ಕೆಡಿ’ ಟ್ರೇಲರ್​​ನಲ್ಲಿ ಪುನೀತ್ ರಾಜ್​​ಕುಮಾರ್ ಚಿತ್ರದ ಡೈಲಾಗ್; ಅಪ್ಪುಗೆ ಪ್ರೇಮ್ ಗೌರವ – Kannada News | KD Trailer: Dhruva Sarja’s Dialogue Echoes Puneeth Rajkumar, Prem’s Tribute Revealed

‘ಕೆಡಿ’ಸಿನಿಮಾ ಏಪ್ರಿಲ್ 30ರಂದು ವಿಶ್ವಾದ್ಯಂತ ತೆರೆಗೆ ಬರಲು ರೆಡಿ ಇದೆ. ಹೀಗಿರುವಾಗಲೇ ಚಿತ್ರದ ಟ್ರೇಲರ್ ಏಪ್ರಿಲ್ 22ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಾಳಿ ಪಾತ್ರದಲ್ಲಿ ಧ್ರುವ ಸರ್ಜ ಮಿಂಚಿದ್ದಾರೆ. ಮತ್ತೊಮ್ಮೆ ರಗಡ್ ಪಾತ್ರದ ಮೂಲಕ ಅವರು ಬಂದಿದ್ದಾರೆ. ಪ್ರೇಮ್ ಅವರು ರಾ ಆಗಿ ಸಿನಿಮಾ ಮಾಡಿದ್ದಾರೆ. ಈಗ ‘ಕೆಡಿ’ ಸಿನಿಮಾದ ಟ್ರೇಲರ್ ಅಲ್ಲಿ ಬರುವ ಡೈಲಾಗ್ ಗಮನ ಸೆಳೆದಿದೆ. ಪುನೀತ್ ಅವರ ಸಿನಿಮಾ ಒಂದರ ಡೈಲಾಗ್ ಕೂಡ ಸೇಮ್ ಟು ಸೇಮ್ ಇತ್ತು ಎಂಬುದನ್ನು ಫ್ಯಾನ್ಸ್ ನೆನಪಿಸಿಕೊಂಡಿದ್ದಾರೆ.

ಪ್ರೇಮ್ ಸಿನಿಮಾ ಎಂದರೆ ಅಲ್ಲಿ ಒಮ್ಮೆಯಾದರೂ ಮಚ್ಚು ಝಳಪಲೇಬೇಕು. ‘ಜೋಗಿ’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಕೈಗೆ ಮಚ್ಚು ಕೊಟ್ಟು ಚಿತ್ರ ಹಿಟ್ ಆಗುವಂತೆ ಮಾಡಿದರು. ಆ ಬಳಿಕ ಅವರ ಹಲವು ಸಿನಿಮಾಗಳಲ್ಲಿ ಮಚ್ಚಿನ ಬಳಕೆ ಆಗಿದೆ. ಈಗ ‘ಕೆಡಿ’ ಸಿನಿಮಾದಲ್ಲಿ ಮಚ್ಚಿನ ಬಳಕೆ ಸಾಕಷ್ಟಾಗಿದೆ. ಟ್ರೇಲರ್ ನೋಡಿದರೆ ಇದು ಗೊತ್ತಾಗುತ್ತದೆ. ಟ್ರೇಲರ್ ಉದ್ದಕ್ಕೂ ರಕ್ತ ಹರಿಯುತ್ತದೆ.

ಟ್ರೇಲರ್ ಕ್ಲೈಮ್ಯಾಕ್ಸ್​ ಅಲ್ಲಿ ಧ್ರುವ ಸರ್ಜ ಮಚ್ಚನ್ನು ಹಿಡಿದಿರುತ್ತಾರೆ. ಅವರ ಹೆಗಲೇಮೆಲ ಓರ್ವ ವ್ಯಕ್ತಿಯನ್ನು ಮಲಗಿಸಿಕೊಂಡಿರುತ್ತಾರೆ. ಸುತ್ತಲೂ ಇರೋ ವಿಲನ್​​ಗಳಿಗೆ ಧ್ರುವ ಡೈಲಾಗ್ ಒಂದನ್ನು ಹೇಳುತ್ತಾರೆ. ‘ಮೊದಲನೆಬಾರಿ ಮಚ್ಚು ಹಿಡಿದಿದ್ದೇನೆ.ಅಪ್ಪಿತಪ್ಪಿ ಕೈಕಾಲು ಉಳಿದುಕೊಂಡರೆ ನಿಮ್ಮ ಹೆತ್ತ ತಾಯಿಗೆ ತಪ್ಪಾಯ್ತು ಎಂದು ಹೇಳಿಬಿಡಿ ಅಣ್ಣ’ ಎಂದು ಧ್ರುವ ಸರ್ಜಾ ಉತ್ತರ ಕರ್ನಾಟಕ ಸ್ಟೈಲ್​​ನಲ್ಲಿ ಹೇಳುತ್ತಾರೆ. ಈ ಡೈಲಾಗ್ ಪುನೀತ್ ಸಿನಿಮಾದಲ್ಲೂ ಇತ್ತು.

ಇದನ್ನೂ ಓದಿ:  ‘ಕೆಡಿ’ ಸಿನಿಮಾ ಟ್ರೇಲರ್ ಬಿಡುಗಡೆ; ಧ್ರುವ ಸರ್ಜಾ, ಸಂಜಯ್ ದತ್ ಆ್ಯಕ್ಷನ್ ಅಬ್ಬರ

ಪುನೀತ್ ರಾಜ್​​ಕುಮಾರ್ ನಟನೆಯ ‘ರಾಜ್ ದಿ ಶೋ ಮ್ಯಾನ್’ ಸಿನಿಮಾದಲ್ಲೂ ಇದೇ ರೀತಿಯ ಸಂಭಾಷಣೆ ಬರುತ್ತದೆ. ‘ಅಣ್ಣ ಲೈಫ್ ಅಲ್ಲಿ ಇದೇ ಮೊದಲ ಬಾರಿ ಮಚ್ಚು ಹಿಡಿದಿದ್ದೇನೆ. ಅಪ್ಪಿ ತಪ್ಪಿ ಉಲ್ಟಾ ಬಿದ್ರೆ ಬೇಜಾರ್ ಮಾಡ್ಕಬೇಡಿ ಅಣ್ಣ’ ಎಂದು ಹೇಳುತ್ತಾರೆ ಪುನೀತ್. ‘ರಾಜ್ ದಿ ಶೋ ಮ್ಯಾನ್’ ಚಿತ್ರವನ್ನು ನಿರ್ದೇಶನ ಮಾಡಿದ್ದು ಜೋಗಿ ಪ್ರೇಮ್. ಈ ಕಾರಣದಿಂದಲೇ ಅವರು ‘ಕೆಡಿ’ ಸಿನಿಮಾದಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳಲು ಈ ಡೈಲಾಗ್ ಇಟ್ಟಿರಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka SSLC 10th Result 2026 LIVE: ಕರ್ನಾಟಕ SSLC ಫಲಿತಾಂಶಕ್ಕೆ ಕ್ಷಣಗಣನೆ – Kannada News | KSEAB Karnataka SSLC 10th Result 2026 Live updates

ಬೆಂಗಳೂರು, ಏ,23 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ನಡೆಸಿದ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ  ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯಾದ್ಯಂತ ಸುಮಾರು 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆದಿದ್ದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶದ ಅಧಿಕೃತ ಘೋಷಣೆ ಹೊರಬೀಳಲಿದೆ.ಈ ವರ್ಷ ಪರೀಕ್ಷೆಗಾಗಿ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, ಅವರಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ರಾಜ್ಯಾದ್ಯಂತ ಪರೀಕ್ಷೆಗೆ ಹಾಜರಾಗಿದ್ದಾರೆ. ಪತ್ರಿಕಾಗೋಷ್ಠಿ ಮುಗಿದ ಬಳಿಕ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ವೀಕ್ಷಿಸಬಹುದು.

Source link

ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ – Kannada News | Hormuz Flashpoint: Iran Fires on Ships as Talks Stall

ಟೆಹ್ರಾನ್, ಏಪ್ರಿಲ್ 23: ಹಾರ್ಮುಜ್ ಜಲಸಂಧಿ(Hormuz Strait) ಮತ್ತೊಮ್ಮೆ ಜಾಗತಿಕ ಸಂಘರ್ಷದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆ, ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೂರು ಹಡಗುಗಳ ಮೇಲೆ ನಡೆದ ದಾಳಿ ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿದೆ. ಪಶ್ಚಿಮ ಏಷ್ಯಾದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧದ ಕಾರ್ಮೋಡಗಳು ಮತ್ತಷ್ಟು ದಟ್ಟವಾಗಿವೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಗನ್‌ಬೋಟ್‌ಗಳು ಮೂರು ಪ್ರತ್ಯೇಕ ವ್ಯಾಪಾರಿ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಅಂತಾರಾಷ್ಟ್ರೀಯ ಸಮುದ್ರ ಭದ್ರತೆಗೆ ಸವಾಲು ಹಾಕಿವೆ.

ಒಮಾನ್‌ನ ಈಶಾನ್ಯಕ್ಕೆ ಸಂಚರಿಸುತ್ತಿದ್ದ ಲೈಬೀರಿಯನ್ ಧ್ವಜವನ್ನು ಹೊಂದಿರುವ ಹಡಗು ಈ ದಾಳಿಗೆ ಗುರಿಯಾಗಿದೆ. ಹಡಗಿನ ಕ್ಯಾಪ್ಟನ್ ನೀಡಿರುವ ಮಾಹಿತಿ ಪ್ರಕಾರ, ಐಆರ್‌ಜಿಸಿಯ ಗನ್‌ಬೋಟ್ ಅತಿ ವೇಗವಾಗಿ ಹಡಗಿನ ಸಮೀಪಕ್ಕೆ ಬಂದಿತ್ತು. ಅಷ್ಟರಲ್ಲಿ ಗನ್‌ಬೋಟ್‌ನಲ್ಲಿದ್ದ ಮೂವರು ವ್ಯಕ್ತಿಗಳು ಹಡಗಿನ ಸೇತುವೆಯ (Bridge) ಭಾಗವನ್ನು ಗುರಿಯಾಗಿಸಿಕೊಂಡು ಮನಬಂದಂತೆ ಗುಂಡು ಹಾರಿಸಿದರು. ದಾಳಿಯ ಬೆನ್ನಲ್ಲೇ ಒಂದು ಹಡಗಿನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು.

ಗುಂಡಿನ ದಾಳಿ ನಡೆದರೂ ಮತ್ತು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡರೂ, ಮೂರೂ ಹಡಗುಗಳಲ್ಲಿರುವ ಸಿಬ್ಬಂದಿ ವರ್ಗಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಹಡಗುಗಳಿಗೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ ಎಂದು ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ದೃಢಪಡಿಸಿದೆ.

ಮತ್ತಷ್ಟು ಓದಿ: ಎಲ್ಲ ದೇಶಗಳ ಕಮರ್ಷಿಯಲ್ ಹಡಗಿಗೂ ಹಾರ್ಮುಜ್ ಜಲಸಂಧಿ ತೆರೆದಿದೆ; ಇರಾನ್ ಮಹತ್ವದ ಘೋಷಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ರಾಜತಾಂತ್ರಿಕ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ. ಟ್ರಂಪ್ ಅವರು ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಿದ್ದರೂ, ಮಾನವೀಯ ನೆಲೆಯಲ್ಲಿ ದಾಳಿಯನ್ನು ತಡೆಹಿಡಿದಿದ್ದರು. ಆದರೆ, ಇರಾನ್‌ನ ಈ ಉದ್ಧಟತನವು ಟ್ರಂಪ್ ಅವರ ಮುಂದಿನ ನಿರ್ಧಾರದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

ಹಾರ್ಮುಜ್ ಜಲಸಂಧಿಯು ವಿಶ್ವದ ಒಟ್ಟು ತೈಲ ವ್ಯಾಪಾರದ ಬಹುಪಾಲು ಪಾಲನ್ನು ನಿರ್ವಹಿಸುತ್ತದೆ. ಈ ಮಾರ್ಗದಲ್ಲಿ ಹಡಗುಗಳ ಮೇಲೆ ದಾಳಿ ನಡೆಯುತ್ತಿರುವುದು ತೈಲ ಬೆಲೆ ಏರಿಕೆಗೆ ಮತ್ತು ಜಾಗತಿಕ ಸರಬರಾಜು ಸರಪಳಿಯ ಮೇಲೆ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನ ಯುವಕರಲ್ಲಿ ಹೆಚ್ಚುತ್ತಿದೆ ಬಾಯಿ ಕ್ಯಾನ್ಸರ್: ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ, ತಜ್ಞರ ಎಚ್ಚರಿಕೆ – Kannada News | Bengaluru Health Alert: Doctors Warn of Rising Oral Cancer Cases Among Youth; Symptoms Often Overlooked

ಬೆಂಗಳೂರು, ಏಪ್ರಿಲ್ 23: ಸಾಮಾನ್ಯವಾಗಿ ಬಾಯಿ ಕ್ಯಾನ್ಸರ್ (Oral Cancer) ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಭಾವನೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ (Bengaluru) 30 ಮತ್ತು 40ರ ವಯೋಮಾನದ ಯುವಜನತೆಯಲ್ಲಿ ಇದರ ಲಕ್ಷಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಬಾಯಿ ಕ್ಯಾನ್ಸರ್​​ಗೆ ತಂಬಾಕು ಸೇವನೆ ಇಂದಿಗೂ ಪ್ರಮುಖ ಕಾರಣವಾಗಿದ್ದರೂ, ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚುವಲ್ಲಿ ವಿಳಂಬವಾಗುತ್ತಿರುವುದು ಈ ಅಪಾಯವನ್ನು ಹೆಚ್ಚಿಸಿದೆ ಎಂದು ಮೆಡಿಕಲ್ ಆಂಕಾಲಜಿಸ್ಟ್ ಡಾ. ರಾಜೀವ್ ವಿಜಯಕುಮಾರ್ ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಯುವಕರಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣಗಳೇನು?

ತಂಬಾಕು ಮಾತ್ರವಲ್ಲದೆ ಹೈ ಪ್ರೊಸೆಸ್ಡ್ ಆಹಾರಗಳ ಸೇವನೆ, ಮೈಕ್ರೋ ನ್ಯೂಟ್ರಿಯೆಂಟ್ಸ್ ಕೊರತೆ, ಅತಿಯಾದ ಮಾನಸಿಕ ಒತ್ತಡ ಹಾಗೂ HPV ಸೋಂಕು ಕೂಡ ಯುವಜನತೆಯಲ್ಲಿ ಕ್ಯಾನ್ಸರ್ ಹೆಚ್ಚಲು ಕಾರಣವಾಗುತ್ತಿವೆ. ಯುವಕರಲ್ಲಿ ಕ್ಯಾನ್ಸರ್ ಇರಲಾರದು ಎಂಬ ಕನಿಷ್ಠ ಅನುಮಾನವೂ ಇಲ್ಲದಿರುವುದು ರೋಗನಿರ್ಣಯ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಹೆಡ್ ಅಂಡ್ ನೆಕ್ ಸರ್ಜರಿ ತಜ್ಞ ಡಾ. ನಾರಾಯಣ ಸುಬ್ರಮಣಿಯಂ ಅಭಿಪ್ರಾಯಪಟ್ಟಿರುವುದನ್ನು ವರದಿ ಉಲ್ಲೇಖಿಸಿದೆ.

ಬಾಯಿ ಕ್ಯಾನ್ಸರ್ ಲಕ್ಷಣಗಳೇನು? ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ಬಾಯಿ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ನೋವು ರಹಿತವಾಗಿರುತ್ತವೆ. ಹೀಗಾಗಿ ಜನರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ, ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಎಚ್ಚರಿಕೆ ವಹಿಸಬೇಕಂದು ವೈದ್ಯರು ತಿಳಿಸಿದ್ದಾರೆ.

  • ಕೆನ್ನೆಯ ಒಳಭಾಗದಲ್ಲಿ ಬಿಳಿ ಅಥವಾ ಕೆಂಪು ಮಚ್ಚೆಗಳು ಕಾಣಿಸಿಕೊಳ್ಳುವುದು.
  • ಹಲ್ಲುಗಳು ಸಡಿಲಗೊಳ್ಳುವುದು.
  • ಬಾಯಿ ಹುಣ್ಣು ಅಥವಾ ಹಲ್ಲು ನೋವು ದೀರ್ಘಕಾಲ ಗುಣವಾಗದೆ ಇರುವುದು.

ಶೇ 50-65 ರಷ್ಟು ಪ್ರಕರಣಗಳಲ್ಲಿ ಆರಂಭದಲ್ಲಿ ನೋವು ಇಲ್ಲದಿರುವ ಕಾರಣಕ್ಕೆ ರೋಗ ಉಲ್ಬಣಗೊಂಡ ಹಂತದಲ್ಲಿ ಆಸ್ಪತ್ರೆಗೆ ಬರುತ್ತಾರೆ ಎಂದು ರೇಡಿಯೇಶನ್ ಆಂಕಾಲಜಿ ತಜ್ಞೆ ಡಾ. ಲಿಥಿಕಾ ಲಾವಣ್ಯ ವಿವರಿಸಿದ್ದಾರೆ.

ದಂತ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ

ಬಹಳಷ್ಟು ಮಂದಿ ಬಾಯಿ ಹುಣ್ಣು ಅಥವಾ ಒಸಡುಗಳಲ್ಲಿ ರಕ್ತ ಬರುವುದನ್ನು ಸಾಮಾನ್ಯ ದಂತ ಸಮಸ್ಯೆ ಎಂದು ಭಾವಿಸಿ ಡೆಂಟಿಸ್ಟ್‌ಗಳ ಬಳಿ ಹೋಗುತ್ತಾರೆ. ಪದೇ ಪದೇ ಚಿಕಿತ್ಸೆ ಪಡೆದರೂ ಗುಣವಾಗದಿದ್ದಾಗ ಆಂಕಾಲಾಜಿಸ್ಟ್‌ಗಳ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಡಾ. ಸಾಕ್ಷಿ ಹಿಂದೂಜಾ ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈಗಲೇ RCB ಆಟಗಾರನ ಆಯ್ಕೆ ಮಾಡಿ: CSKಗೆ ಐಡಿಯಾ ನೀಡಿದ ಅಶ್ವಿನ್ – Kannada News | Ashwin Urges CSK to Loan RCB’s Vihaan Malhotra as Mhatre Replacement

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಸೋಲುಗಳ ನಡುವೆ ಆಟಗಾರರ ಗಾಯದ ಸಮಸ್ಯೆ ಸಿಎಸ್​ಕೆ ಫ್ರಾಂಚೈಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಸ್ಫೋಟಕ ದಾಂಡಿಗ ಆಯುಷ್ ಮ್ಹಾತ್ರೆ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇತ್ತ ಸತತ ಸೋಲು ಮತ್ತು ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ಒಂದು ಮಹತ್ವದ ಸಲಹೆ ನೀಡಿದ್ದಾರೆ. ಅದು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಯುವ ಪ್ರತಿಭೆಯೊಬ್ಬರನ್ನು ‘ಲೋನ್’ (Loan) ಆಧಾರದ ಮೇಲೆ ಪಡೆಯಲು..!

ಇತ್ತೀಚೆಗೆ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 18 ವರ್ಷದ ಆಯುಷ್ ಮ್ಹಾತ್ರೆ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು 6 ರಿಂದ 12 ವಾರಗಳ ಕಾಲಾವಕಾಶ ಬೇಕಾಗಿರುವುದರಿಂದ ಅವರು ಈ ಬಾರಿಯ ಐಪಿಎಲ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇದು ಸಿಎಸ್‌ಕೆಗೆ ಭಾರಿ ಹೊಡೆತ ನೀಡಿದೆ.

ಅಶ್ವಿನ್ ಐಡಿಯಾ!

ಆಯುಷ್ ಮ್ಹಾತ್ರೆ ಹೊರಬಿದ್ದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಸಿಎಸ್​ಕೆ ತಂಡಕ್ಕೆ ಸೂಪರ್ ಐಡಿಯಾ ನೀಡಿದ್ದಾರೆ. ಸಿಎಸ್​ಕೆ ಫ್ರಾಂಚೈಸಿಯು ಆರ್‌ಸಿಬಿ ತಂಡದ ಯುವ ಆಟಗಾರ ವಿಹಾನ್ ಮಲ್ಹೋತ್ರಾ ಅವರನ್ನು ಮಿಡ್-ಸೀಸನ್ ಲೋನ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ವಿಹಾನ್ ಅತ್ಯಂತ ಪ್ರತಿಭಾವಂತ ಆಟಗಾರನಾಗಿದ್ದು, ಆರ್‌ಸಿಬಿ ಪರ ಈವರೆಗೆ ಒಂದು ಪಂದ್ಯವನ್ನೂ ಆಡಿಲ್ಲ. ಅವರು ಸಿಎಸ್‌ಕೆಗೆ ಉತ್ತಮ ಆಯ್ಕೆಯಾಗಬಲ್ಲರು. ಹೀಗಾಗಿ ಸಿಎಸ್​ಕೆ ಫ್ರಾಂಚೈಸಿ ಆರ್​ಸಿಬಿ ಜೊತೆ ಮಾತುಕತೆ ನಡೆಸಿ ಅವರನ್ನು ಲೋನ್ ಮೂಲಕ ಪಡೆಯುವುದು ಉತ್ತಮ ಎಂದಿದ್ದಾರೆ.

ವಿಹಾನ್ ಮಲ್ಹೋತ್ರಾ ಯಾರು?

ವಿಹಾನ್ ಮಲ್ಹೋತ್ರಾ 19 ವರ್ಷದ ಪ್ರತಿಭಾನ್ವಿತ ಬ್ಯಾಟರ್. 2026ರ ಹರಾಜಿನಲ್ಲಿ ಆರ್‌ಸಿಬಿ ಇವರನ್ನು 30 ಲಕ್ಷ ರೂ.ಗೆ ಖರೀದಿಸಿದೆ. ಇದಾಗ್ಯೂ ಅವರು ಆರ್​ಸಿಬಿ ಪರ ಇನ್ನೂ ಕೂಡ ಪಾದಾರ್ಪಣೆ ಮಾಡಿಲ್ಲ.

ಇತ್ತ ಆರ್​ಸಿಬಿ ಪರ ಈವರೆಗೆ ಯಾವುದೇ ಪಂದ್ಯವಾಡದಿರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ವಿಹಾನ್ ಅವರನ್ನು ಲೋನ್ ಮೂಲಕ ಪಡೆದುಕೊಳ್ಳುವುದು ಉತ್ತಮ. ಈ ಮೂಲಕ ಆಯುಷ್ ಮ್ಹಾತ್ರೆ ಅವರ ಬದಲಿಯಾಗಿ ಬಳಸಿಕೊಳ್ಳಬೇಕೆಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಒಂದು ವೇಳೆ  ಆರ್‌ಸಿಬಿ ಒಪ್ಪದಿದ್ದರೆ, ಭಾರತದ ಅಂಡರ್-19 ವಿಕೆಟ್ ಕೀಪರ್ ಬ್ಯಾಟರ್ ಅಭಿಜ್ಞಾನ್ ಕುಂಡು ಅವರನ್ನು ಭವಿಷ್ಯದ ದೃಷ್ಟಿಯಿಂದ ತಂಡಕ್ಕೆ ಸೇರಿಸಿಕೊಳ್ಳಲು ಅಶ್ವಿನ್ ಸೂಚಿಸಿದ್ದಾರೆ.

ಆರ್‌ಸಿಬಿ ಯಾಕೆ ಲೋನ್ ನೀಡಬೇಕು?

ಅಶ್ವಿನ್ ಪ್ರಕಾರ, ಪ್ರಸ್ತುತ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಭದ್ರವಾದ ಸ್ಥಾನದಲ್ಲಿದೆ. ಆದರೆ ಸಿಎಸ್‌ಕೆ ಕೆಳಮಟ್ಟದಲ್ಲಿದೆ. ಆರ್‌ಸಿಬಿಯಲ್ಲಿ ಅವಕಾಶ ಸಿಗದ ಆಟಗಾರನಿಗೆ ಸಿಎಸ್‌ಕೆ ಪರ ಆಡಲು ಅವಕಾಶ ನೀಡುವ ಮೂಲಕ ಆರ್‌ಸಿಬಿ ಹಣವನ್ನೂ ಗಳಿಸಬಹುದು ಮತ್ತು ಆಟಗಾರನಿಗೆ ಅನುಭವವೂ ಸಿಗುತ್ತದೆ ಎಂಬುದು ಅಶ್ವಿನ್ ವಾದ.

ಐಪಿಎಲ್ ಲೋನ್ ನಿಯಮವೇನು?

ಐಪಿಎಲ್‌ನಲ್ಲಿ ಆಟಗಾರರ ‘ಮಿಡ್-ಸೀಸನ್ ಲೋನ್’ ನಿಯಮವು ತಂಡಗಳು ತಮ್ಮಲ್ಲಿರುವ ಆಟಗಾರರನ್ನು ತಾತ್ಕಾಲಿಕವಾಗಿ ಬೇರೆ ತಂಡಗಳಿಗೆ ನೀಡಲು ಅವಕಾಶ ಮಾಡಿಕೊಡುತ್ತದೆ. ಈ ನಿಯಮದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…

  • ಪಂದ್ಯಗಳ ಮಿತಿ ನಿಯಮ: ಆವೃತ್ತಿಯ ಅರ್ಧಭಾಗದವರೆಗೆ ಕೇವಲ 2 ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳಲ್ಲಿ (ಪ್ಲೇಯಿಂಗ್ ಇಲೆವೆನ್ ಅಥವಾ ಕನ್ಶನ್ ಸಬ್ಸ್ಟಿಟ್ಯೂಟ್ ಆಗಿ) ಭಾಗವಹಿಸಿದ ಆಟಗಾರರು ಮಾತ್ರ ಲೋನ್ ಪಡೆಯಲು ಅರ್ಹರು.
  • ಆಯ್ಕೆಯ ನಿಯಮ: ಈ ನಿಯಮವು ಭಾರತೀಯ ಮತ್ತು ವಿದೇಶಿ, ಇಬ್ಬರೂ ಕ್ಯಾಪ್ಡ್  ಮತ್ತು ಅನ್‌ಕ್ಯಾಪ್ಡ್ ಆಟಗಾರರಿಗೆ ಅನ್ವಯಿಸುತ್ತದೆ.
  • ಒಂದು ಬಾರಿ ಅವಕಾಶ: ಒಬ್ಬ ಆಟಗಾರನನ್ನು ಒಂದು ಸೀಸನ್‌ನಲ್ಲಿ ಕೇವಲ ಒಮ್ಮೆ ಮಾತ್ರ ಲೋನ್ ಮೇಲೆ ನೀಡಲು ಅವಕಾಶವಿದೆ.
  • ಆಟಗಾರ ಆಯ್ಕೆಯ ಸಮಯ: ಸಾಮಾನ್ಯವಾಗಿ ಲೋನ್ ವಿಂಡೋ ಸೀಸನ್‌ನ 7ನೇ ಪಂದ್ಯದಿಂದ 34ನೇ ಪಂದ್ಯದವರೆಗೆ ತೆರೆದಿರುತ್ತದೆ.
  • ಮೂಲ ತಂಡದ ವಿರುದ್ಧ ಆಡುವಂತಿಲ್ಲ: ಲೋನ್ ಪಡೆದ ಆಟಗಾರನು ತನ್ನನ್ನು ಲೋನ್ ನೀಡಿದ ಮೂಲ ತಂಡದ ವಿರುದ್ಧದ ಪಂದ್ಯದಲ್ಲಿ ಆಡುವಂತಿಲ್ಲ.
  • ಸಹಮತಿ: ಲೋನ್ ಪ್ರಕ್ರಿಯೆಗೆ ಆಟಗಾರನ ಒಪ್ಪಿಗೆಯೂ ಅನಿವಾರ್ಯವಾಗಿರುತ್ತದೆ.
  • ಸಂಭಾವನೆ: ಆಟಗಾರನ ಮೂಲ ಹರಾಜು ಮೊತ್ತವನ್ನು ಅವರ ಮೂಲ ಫ್ರಾಂಚೈಸಿ ಪಾವತಿಸುತ್ತದೆ. ಆದರೆ, ಲೋನ್ ಅವಧಿಯಲ್ಲಿ ಅವರು ಆಡುವ ಪಂದ್ಯಗಳ ಫೀಸ್ ಅನ್ನು ಅವರನ್ನು ಪಡೆದ ಹೊಸ ತಂಡವು ಪಾವತಿಸಬೇಕಾಗುತ್ತದೆ.
  • ಲೋನ್ ಫೀಸ್: ಎರಡು ತಂಡಗಳು ಪರಸ್ಪರ ಒಪ್ಪಂದದ ಮೇರೆಗೆ ಹೆಚ್ಚುವರಿ ‘ಲೋನ್ ಫೀಸ್’ ಅನ್ನು ನಿಗದಿಪಡಿಸಬಹುದು. ಇದು ಐಪಿಎಲ್ ಸ್ಯಾಲರಿ ಕ್ಯಾಪ್ ವ್ಯಾಪ್ತಿಗೆ ಬರುವುದಿಲ್ಲ.
  • ಲೋನ್ ಅವಧಿ: ಲೋನ್ ಪಡೆದ ಆಟಗಾರನು ಆ ಸೀಸನ್‌ನ ಅಂತ್ಯದವರೆಗೆ ಹೊಸ ತಂಡದಲ್ಲೇ ಇರುತ್ತಾರೆ. ಸೀಸನ್ ಮುಗಿದ ನಂತರ ಅವರು ಮತ್ತೆ ತಮ್ಮ ಮೂಲ ತಂಡಕ್ಕೆ  ಮರಳಬೇಕು. ಅಂದರೆ ಆರ್​ಸಿಬಿ ಆಟಗಾರ ಸಿಎಸ್​ಕೆಗೆ ಹೋದರೆ, ಮುಂದಿನ ಸೀಸನ್​ನಲ್ಲಿ ಮತ್ತೆ ಆರ್​ಸಿಬಿ ತಂಡಕ್ಕೆ ಮರಳಬೇಕು.

ಇದನ್ನೂ ಓದಿ: ಕೇವಲ 227 ಎಸೆತಗಳು… ವೈಭವ್ ಆರ್ಭಟಕ್ಕೆ ಐಪಿಎಲ್ ದಾಖಲೆ ಉಡೀಸ್

ಆಯುಷ್ ಮ್ಹಾತ್ರೆ ಅವರ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಈ ನಿಯಮವನ್ನು ಬಳಸಿಕೊಂಡು ಆರ್‌ಸಿಬಿಯ ವಿಹಾನ್ ಮಲ್ಹೋತ್ರಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತಮ್ಮ ತಂಡಕ್ಕೆ ಆಯ್ಕೆ ಮಾಡುವಂತೆ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿದ್ದಾರೆ. ಈ ಐಡಿಯಾ ಬಳಸಿಕೊಂಡು ಸಿಎಸ್​ಕೆ ಆರ್​ಸಿಬಿ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಲಿದೆಯಾ ಕಾದು ನೋಡಬೇಕಿದೆ.

Published On – 8:31 am, Thu, 23 April 26

Source link

Exit mobile version