ರಾಜ್ಯದಲ್ಲಿ ಸಫಾರಿ ಬಂದ್​ನಿಂದ ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ ಪ್ರವಾಸಿಗರ ದಂಡು! ಕರ್ನಾಟಕಕ್ಕಾಗುವ ನಷ್ಟವೆಷ್ಟು ಗೊತ್ತಾ? – Kannada News | Safari Ban in Bandipur, Nagarahole: Tourism loss, Karnataka driving tourists to Kerala

ಕರ್ನಾಟಕದಲ್ಲಿ ಸಫಾರಿ ಬಂದ್​ನಿಂದ ದಿನಕ್ಕೆ 3 ಕೋಟಿ ನಷ್ಟ! ಬೆಂಗಳೂರು, ಫೆಬ್​ರವರಿ 16: ರಾಜ್ಯದಲ್ಲಿ ಸಫಾರಿಗೆ (Safari) ತಾತ್ಕಾಲಿಕ ನಿಷೇಧ ಹೇರಿರುವ ಸರ್ಕಾರದ ಕ್ರಮ ಇದೀಗ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮತ್ತು ನಾಗರಹೊಳ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ಬಂದ್ ಮಾಡಿರುವುದರಿಂದ ಸ್ಥಳೀಯರ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಸಫಾರಿ ಬಂದ್​ನಿಂದ ಕೇರಳ, ತಮಿಳುನಾಡಿಗೆ ಲಾಭ! ಹುಲಿ ಹಾಗೂ ಚಿರತೆ ದಾಳಿಯಿಂದ ರಾಜ್ಯದ ಹಲವೆಡೆ ಸಾವು ನೋವುಗಳು ಹೆಚ್ಚಾದ ಹಿನ್ನೆಲೆ…

Read More

ಟಾಲಿವುಡ್​ನ ಮತ್ತೋರ್ವ ಸ್ಟಾರ್ ಹೀರೋಗೆ ನಾಯಕಿ ಆದ ರುಕ್ಮಿಣಿ ವಸಂತ್ – Kannada News | Rukmini Vasanth Joins Naga Chaitanya’s New Telugu Film; Kannada Actress’s In Tollywood

ಕನ್ನಡದ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ಸದ್ಯ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬ್ಯುಸಿ ಇರೋದು ಗೊತ್ತೇ ಇದೆ. ಈಗ ಅವರು ಒಂದು ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅವರು ತೆಲುಗು ಹೀರೋ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರಂತೆ. ಈ ವಿಷಯ ಕೇಳಿದ ಅವರ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಅವರು ಬೇರೆ ಯಾರೂ ಅಲ್ಲ, ನಾಗ ಚೈತನ್ಯ ಅವರು. ನಾಗ ಚೈತನ್ಯ ಸಿನಿಮಾ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುತ್ತಾರೆ. ಅವರು ಮಜಿಲಿ, ಲವ್ ಸ್ಟೋರಿ,…

Read More

“ಇಷ್ಟು ಕೆಟ್ಟದಾಗಿ ಸೋಲುವ ಬದಲು ಬಾಯ್ಕಾಟ್ ಮಾಡಿದ್ದೇ ಲೇಸಾಗಿತ್ತು”: ಪಾಕ್​​ನ್ನು ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು – Kannada News | IND vs PAK T20 World Cup: Netizens Troll Pakistan with Hilarious Memes After 61 Run Defeat

ನಿನ್ನೆ (ಫೆಬ್ರವರಿ 15, 2026) ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 61 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮೀಮ್‌ಗಳ ಸುರಿಮಳೆಯಾಗುತ್ತಿದೆ. ಭಾರತ ನೀಡಿದ 176 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಕೇವಲ 114 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿದೆ. ಈ ಸೋಲನ್ನು ಭಾರತೀಯ ಅಭಿಮಾನಿಗಳು ಅತ್ಯಂತ ಹಾಸ್ಯಮಯವಾಗಿ ಸಂಭ್ರಮಿಸುತ್ತಿದ್ದಾರೆ. ಈ ಪಂದ್ಯದ ಹೈಲೈಟ್ ಎಂದರೆ ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ವಿಚಿತ್ರ…

Read More

ಟಿಪ್ಪು ಸುಲ್ತಾನನನ್ನು ಸಮಾಧಿಯಿಂದ ಮತ್ತೆ ಜೀವಂತಗೊಳಿಸಲಾಗುತ್ತಿದೆ: ಬಿಜೆಪಿ ವಿರುದ್ಧ ಶಿವಸೇನೆ ಟೀಕೆ – Kannada News | Malegaon Tipu Sultan Photo Sparks Row: Shiv Sena Slams BJP, Revives Historical Debate

ಪುಣೆ, ಫೆಬ್ರವರಿ 16: ಮಹಾರಾಷ್ಟ್ರದ ಮಾಲೆಗಾಂವ್ ಮಹಾನಗರ ಪಾಲಿಕೆ ಕಚೇರಿಯಲ್ಲಿ ಟಿಪ್ಪು ಸುಲ್ತಾನ್​​(Tipu Sultan) ನ ಫೋಟೊ ಹಾಕಿದ್ದ ಬಗ್ಗೆ ವಿವಾದ ಭುಗಿಲೆದ್ದಿದೆ. ಶಿವಸೇನೆ ಸೇರಿದಂತೆ ಹಲವಾರು ಹಿಂದೂ ಸಂಘಟನೆಗಳು ತಮ್ಮ ವಿರೋಧ ವ್ಯಕ್ತಪಡಿಸಿವೆ. ಶಿವಸೇನೆ (ಯುಬಿಟಿ) ತನ್ನ ಮುಖವಾಣಿ ಸಾಮ್ನಾದಲ್ಲಿ ಟಿಪ್ಪು ಸುಲ್ತಾನ್ ವಿವಾದದ ಬಗ್ಗೆ ಬಿಜೆಪಿಯನ್ನು ಗುರಿಯಾಗಿಸಿಕೊಂಡಿದೆ. ಔರಂಗಜೇಬ್ ಮತ್ತು ಅಫ್ಜಲ್ ಖಾನ್ ಅವರಂತೆ ಟಿಪ್ಪು ಸುಲ್ತಾನನನ್ನು ಈಗ ಸಮಾಧಿಯಿಂದ ಮತ್ತೆ ಜೀವಂತಗೊಳಿಸಲಾಗುತ್ತಿದೆ ಎಂದು ಅದು ಹೇಳಿದೆ. ಔರಂಗಜೇಬ್ ಮತ್ತು ಅಫ್ಜಲ್ ಖಾನ್ ಅವರಂತೆ…

Read More

ಪ್ರವಾಸಿಗರೇ ಎಚ್ಚರ: ಹಂಪಿಯ ವಿರೂಪಾಕ್ಷ ದೇಗುಲದ ಬಳಿ ಚಿರತೆ ಪ್ರತ್ಯಕ್ಷ – Kannada News | Leopard Spotted Near Virupaksha Temple in Hampi: Tourists Alerted After CCTV Footage Emerges

ವಿಜಯನಗರ, ಫೆಬ್ರವರಿ 16: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಐತಿಹಾಸಿಕ ಹಂಪಿಯ ಜನತಾ ಪ್ಲಾಟ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಶ್ರೀ ವಿರೂಪಾಕ್ಷ ದೇಗುಲದ ಕೂಗಳತೆ ದೂರದಲ್ಲಿಯೇ ಚಿರತೆ ಕಂಡು ಬಂದಿರುವುದು ಪ್ರವಾಸಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ. ಚಿರತೆ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿರತೆ ಓಡ್ಯಾಟದ ದೃಶ್ಯ ಕಂಡು ಜನರು ಭಯಭೀತರಾಗಿದ್ದಾರೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಅಯ್ಯೋ ದೇವ್ರೆ ಭಾರತ ಗೆದ್ದಿದೆ: ಇಂಡಿಯಾದ ಗೆಲ್ಲುವನ್ನು ಸಂಭ್ರಮಿಸಿದ ಬಲೂಚಿಸ್ತಾನ – Kannada News | India vs Pakistan Match: Balochistan Erupts in Joy Post India’s Victory; Viral Footage

ಕೊಲಂಬೊದಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 175 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು ಕೇವಲ 114 ರನ್​ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನವನ್ನು ರುಬ್ಬುತ್ತಿದ್ದಾರೆ. ಇಂಡಿಯಾ ಗೆದ್ದರೆ ಭಾರತ ಸಂಭ್ರಮಿಸಿಬೇಕಿತ್ತು. ಆದರೆ ಈ ಸಂಭ್ರಮ ಗಡಿಯಾಚೆಗೆ ಇದೆ. ಬಲೂಚಿಸ್ತಾನದ ವಿವಿಧ ಭಾಗಗಳಲ್ಲಿ ಭಾರತದ ಗೆಲ್ಲುವನ್ನು ಸಂಭ್ರಮಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದು…

Read More

ರಾಜ್ಯದೆಲ್ಲೆಡೆ ಮಹಾ ಶಿವರಾತ್ರಿಯ ಸಂಭ್ರಮ; ಇಲ್ಲಿವೆ ಶಿವರಾತ್ರಿಯ ವೈಭವದ ಅಪರೂಪದ ಕ್ಷಣಗಳು – Kannada News | Maha Shivaratri 2026: Grand Celebrations Across Karnataka

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಅಂಗವಾಗಿ ಲಕ್ಷಾಂತರ ಭಕ್ತರು ಸೇರಿ ಜಾಗರಣೆ ನೆರವೇರಿಸಿದರು. ರಾತ್ರಿ ಮಲೆಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ಸಲ್ಲಿಸಲಾಯಿತು. ಭಜನೆ, ಓಂ ನಮ ಶಿವಾಯ ಮಂತ್ರಪಠಣದೊಂದಿಗೆ ಶಿವನಾಮಸ್ಮರಣೆಯಲ್ಲಿ ಭಕ್ತಿಭಾವದ ವಾತಾವರಣದಲ್ಲಿ ಭಕ್ತರು ಮಿಂದೆದ್ದರು. Source link

Read More

Video: ಬಸ್ ಮೇಲೆ ಏಕಾಏಕಿ ದಾಳಿ ಮಾಡಿದ ಆನೆ – Kannada News | Forest Route Turns Frightening as Elephant Confronts Bus

ಒಡಿಶಾ, ಫೆಬ್ರವರಿ 16: ಪ್ರಾಣಿಗಳಿಗೆ ಕೀಟಲೆ ಕೊಡಲೇಬಾರದು ಅದರಲ್ಲೂ ಆನೆಗಳ ತಂಟೆಗಂತೂ ಹೋಗಲೇಬೇಡಿ. ಒಡಿಶಾದಲ್ಲಿ ನಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೋಪಗೊಂಡ ಆನೆಯೊಂದು ಬಸ್ ಮೇಲೆ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಸ್ ಮೇಲೆ ದಾಳಿ ನಡೆಸಿದ ಪರಿಣಾಮ ಬಸ್ಸಿನ ಮುಂಭಾಗದ ಗಾಜು ಪೂತರತಿಯಾಗಿ ಒಡೆದಿದೆ. ಅದೇ ಸಮಯದಲ್ಲಿ ಆನೆಯ ಗಮನವನ್ನು ಬೇರೆಡೆಗೆ ಹರಿಸಿದ ಪರಿಣಾಮ ಅದು ಅಲ್ಲಿಂದ ಹೋಗಿತ್ತು. ಈ ಘಟನೆ ಒಡಿಶಾ-ಆಂಧ್ರಪ್ರದೇಶ ಗಡಿ ಪ್ರದೇಶದಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.    …

Read More

‘ಪ್ರತಿ ದಿನ ನಿನ್ನ ಮಿಸ್ ಮಾಡಿಕೊಳ್ತೀನಿ’; ದರ್ಶನ್ ಬರ್ತ್​​ಡೇಗೆ ರಕ್ಷಿತಾ ಭಾವುಕ ಪೋಸ್ಟ್

ನಟ ದರ್ಶನ್ (Darshan) ಅವರು ಇದೇ ಮೊದಲ ಬಾರಿಗೆ ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಅವರು ರೇಣುಕಾಸ್ವಾಮಿ ಕೊಲೆ ಕೇಸ್​​ನ ಆರೋಪಿ ಆಗಿದ್ದರೂ, ಜೈಲಿನಿಂದ ಹೊರಗೇ ಇದ್ದರು. ಕುಟುಂಬದ ಜೊತೆ ಅವರು ಈ ದಿನವನ್ನು ಸಂಭ್ರಮಿಸಿದ್ದರು. ಆದರೆ, ಈ ಬಾರಿ ಅವರು ಜೈಲಿನಲ್ಲಿರುವುದರಿಂದ ಅವರ ಕುಟುಂಬ ಹಾಗೂ ಅಭಿಮಾನಿ ವರ್ಗಕ್ಕೆ ಈ ಬಗ್ಗೆ ಬೇಸರ ಇದೆ. ಅವರಿಲ್ಲದೆ ಆಚರಿಸುತ್ತಿರುವ ಮೊದಲ ಬರ್ತ್​​​ಡೇ ಇದಾಗಿದೆ. ಈ ಸಂದರ್ಭದಲ್ಲಿ ನಟಿ ರಕ್ಷಿತಾ ಅವರು ಭಾವುಕರಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ….

Read More

Video: ಶಿವ-ಪಾರ್ವತಿ ಕಲ್ಯಾಣ ವೇಳೆ ದೇವಸ್ಥಾನದಲ್ಲಿ ಪ್ರತ್ಯಕ್ಷವಾದ ನಾಗರಹಾವು – Kannada News | Cobra Appears at Temple During Shiva Parvati Kalyanam in Telangana Village

ತೆಲಂಗಾಣ, ಫೆಬ್ರವರಿ 16: ದೇಶಾದ್ಯಂತ ಫೆಬ್ರವರಿ 15ರಂದು ಮಹಾಶಿವರಾತ್ರಿಯನ್ನು  ಭಕ್ತಿಯಿಂದ ಆಚರಿಸಲಾಯಿತು. ಬಹುತೇಕ ದೇವಸ್ಥಾನಗಳಲ್ಲಿ ಜಾಗರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಕೂಡ ಜರುಗಿತ್ತು. ಹಾಗೆಯೇ ತೆಲಂಗಾಣದ ಗೋಡಿಸೇರಿಯಾಲ ಗ್ರಾಮದಲ್ಲಿರುವ ಶ್ರೀ ರಾಜರಾಜರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವ ಪಾರ್ವತಿ ಕಲ್ಯಾಣ ನಡೆಯುತ್ತಿದ್ದಾಗ ದೇವಾಲಯದ ಆವರಣದಲ್ಲಿ ಇದ್ದಕ್ಕಿದ್ದಂತೆ ನಾಗರಹಾವೊಂದು ಪ್ರತ್ಯಕ್ಷವಾಗಿತ್ತು.     ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  Source link

Read More