Headlines

‘ಧೈರ್ಯವಿದ್ದರೆ ವಿಧಾನಸಭೆಯಲ್ಲಿ ಉತ್ತರಿಸಿ’; ಕಾವೇರಿ ಸಮಸ್ಯೆ ಕುರಿತು ಸಿಎಂ ವಿಜಯ್‌ಗೆ ಉದಯನಿಧಿ ಸ್ಟಾಲಿನ್ ಸವಾಲು – Kannada News | Wearing black Shirt Udhayanidhi Stalin slams CM Vijay over farmers issues and Cauvery Dispute

ಚೆನ್ನೈ, ಆಗಸ್ಟ್ 6: ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2026-27ರ ಹಣಕಾಸು ವರ್ಷದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಬಜೆಟ್ ವರದಿಯನ್ನು ರೈತರಿಗೆ ಯಾವುದೇ ಪ್ರಯೋಜನವನ್ನು ನೀಡದ ನಿರಾಶಾದಾಯಕ ವರದಿ ಎಂದು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin)  ಟೀಕಿಸಿದ್ದಾರೆ. ಎಲ್ಲಾ ಡಿಎಂಕೆ ಶಾಸಕರು ಇಂದು ವಿಧಾನಸಭೆಗೆ ಕಪ್ಪು ಶರ್ಟ್ ಧರಿಸಿ ಬಂದು, ಸರ್ಕಾರ ರೈತರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು. ಬಜೆಟ್ ಭಾಷಣದ ನಂತರ ವಿಧಾನಸಭೆ ಆವರಣದಲ್ಲಿ ಮಾಧ್ಯಮಗಳನ್ನು ಭೇಟಿಯಾದ ಡಿಎಂಕೆ ನಾಯಕ…

Read More

CWG 2026: ಬೆಂಗಳೂರಿಗೆ ಆಗಮಿಸಿದ ಕಂಚಿನ ಪದಕ ವಿಜೇತೆ ಶಿಲ್ಪಾಗೆ ಅದ್ಧೂರಿ ಸ್ವಾಗತ – Kannada News | 2026 Commonwealth Games: Para Athlete Shilpa’s Grand Bengaluru Welcome

2026 ರ ಕಾಮನ್‌ವೆಲ್ತ್ ಈ ಕ್ರೀಡಾಕೂಟದಲ್ಲಿ ಭಾರತ ಒಟ್ಟು 39 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ದೇಶದ ಕ್ರೀಡಾಪಟುಗಳು ಒಟ್ಟು 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳನ್ನು ಗೆದ್ದರು. ಈ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಪ್ಯಾರಾ ಅಥ್ಲೀಟ್ ಶಿಲ್ಪಾ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಇದೀಗ ತವರಿಗೆ ಮರಳಿದ ಶಿಲ್ಪಾ ಅವರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿ ಡೋಲು-ಕುಣಿತ ಹೂವಿನ…

Read More

‘ಬೀಯಿಂಗ್ ಹ್ಯೂಮನ್’ ವಂಚನೆ ಪ್ರಕರಣ: ನಟ ಸಲ್ಮಾನ್ ಖಾನ್​ಗೆ ಸಮನ್ಸ್ ಜಾರಿ – Kannada News | Salman Khan and sister Alvira summoned by Chandigarh Court in Being Human Cheating Case

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹಾಗೂ ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಅವರಿಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಸಲ್ಮಾನ್ ಖಾನ್ ಅವರ ಪ್ರಸಿದ್ಧ ಬ್ರ್ಯಾಂಡ್ ‘ಬೀಯಿಂಗ್ ಹ್ಯೂಮನ್’ (Being Human) ಜ್ಯುವೆಲ್ಲರಿ ವ್ಯವಹಾರಕ್ಕೆ ಸಂಬಂಧಿಸಿದ ಕೋಟಿಗಟ್ಟಲೆ ರೂಪಾಯಿ ವಂಚನೆ ಪ್ರಕರಣದಲ್ಲಿ ಈ ಸಮನ್ಸ್ ನೀಡಲಾಗಿದೆ. ಇದರಿಂದಾಗಿ ಹಳೆಯ ಉದ್ಯಮ ವಿವಾದವೊಂದು ಮತ್ತೆ ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಪ್ರಾರಂಭಿಸಿದೆ. ಪ್ರಕರಣದ ಹಿನ್ನೆಲೆ ಏನು? ಚಂಡೀಗಢ ಮೂಲದ ಉದ್ಯಮಿ…

Read More

‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ – Kannada News | Darshan’s lawyers saw Boss Kannada movie what were their opinion

‘ಬಾಸ್’ (Boss) ಸಿನಿಮಾ ಕಳೆದ ಕೆಲ ತಿಂಗಳುಗಳಿಂದ ಸಾಕಷ್ಟು ವಿವಾದ ಸೃಷ್ಟಿಸಿದ ಕನ್ನಡ ಸಿನಿಮಾ. ನಟ ದರ್ಶನ್ ಜೀವನ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬ ಸುದ್ದಿ ಹರಿದಾಡಿದ್ದ ಕಾರಣಕ್ಕೆ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಖುದ್ದು ವಿಜಯಲಕ್ಷ್ಮಿ ದರ್ಶನ್ ಅವರು ‘ಬಾಸ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆದರೆ ಚಿತ್ರತಂಡವು ಇದು ದರ್ಶನ್ ಕುರಿತ ಸಿನಿಮಾ ಅಲ್ಲ ಎಂದೇ ಹೇಳುತ್ತಾ ಬಂತು. ಆದರೆ ಇದೀಗ ಸಿನಿಮಾ ಬಿಡುಗಡೆಗೆ…

Read More

ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ, ಅಷ್ಟಕ್ಕೂ ಆಗಿದ್ದೇನು? – Kannada News | Congress Ahinda MLAs Upset On Siddaramaiah over Not recommended Names For Minister Post

ಬೆಂಗಳೂರು, (ಆಗಸ್ಟ್ 06): ಸಂಪುಟ ಪುನಾರಚನೆ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್​​​​​​ನಲ್ಲಿ (Karnataka Congress) ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ಹಲವು ಹಿರಿಯ-ಕಿರಿಯ ಶಾಸಕರು ಬೇಸರಗೊಂಡಿದ್ದು, ಅವರನ್ನ ಮನವೊಲಿಸುವ ಯತ್ನವೂ ಸಹ ನಡೆದಿದೆ. ಇದರ ಮಧ್ಯೆ ಇನ್ನೊಂದೆಡೆ ಅಹಿಂದ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ  (Siddaramaiah) ಮೇಲೆ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತೀವ್ರ ಬೇಸರಗೊಂಡಿರುವ ಹೆಚ್ ಸಿ ಮಹದೇವಪ್ಪ ಅವರು ದೆಹಲಿಗೆ ಹಾರಿದ್ದಾರೆ. ಸಚಿವ ಸ್ಥಾನಕ್ಕೆ ಸಿದ್ದರಾಮಯ್ಯನವರು ತಮ್ಮ ಹೆಸರು ಶಿಫಾರಸು ಮಾಡಿದ್ದಾರೆ ಎಂದು ಹಲವು ಶಾಸಕರು…

Read More

ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಶಾಪ್​​ ದರೋಡೆಗೆ ಯತ್ನ: ಮಾಲೀಕನ ಮೇಲೆ ಗುಂಡಿನ ದಾಳಿ – Kannada News | Nelamangala Gold Shop Owner Shot During Robbery Attempt in Dabaspete

ನೆಲಮಂಗಲ, ಆಗಸ್ಟ್​ 06: ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ (firing) ನಡೆಸಿ ದರೋಡೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ನಡೆದಿದೆ. ದಾಬಸ್‌ಪೇಟೆಯ ಪ್ರೇಮ್ ಶಿವ ಜ್ಯುವೆಲರಿ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದ್ದು, ದಾಳಿಯಲ್ಲಿ ಮಾಲೀಕ ಪುನ್ನಾರಾಮ್ ಗಾಯಗೊಂಡಿದ್ದಾರೆ. ಸದ್ಯ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಡೆದಿದ್ದೇನು? ಬೊಲೆರೋ ಕಾರಿನಲ್ಲಿ ಆಗಮಿಸಿದ್ದ ಐದಾರು ಜನರ ತಂಡ, ಆಭರಣ ಖರೀದಿಸುವವರಂತೆ ಗ್ರಾಹಕರ…

Read More

ನೂತನ ಸಚಿವರಿಗೆ ಇಂದೇ ಖಾತೆ ಹಂಚಿಕೆ?: ಮಂತ್ರಿಗಳಿಗೆ ಖಡಕ್​​ ಸೂಚನೆ ಕೊಟ್ಟಿದ್ದೇಕೆ ಹೈಕಮಾಂಡ್​​? – Kannada News | Portfolio Allocation for New Karnataka Ministers Today? Why the High Command Issued a Stern Directive

ಬೆಂಗಳೂರು, ಆಗಸ್ಟ್​​ 06: ಕರ್ನಾಟಕದಲ್ಲಿ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಇಂದು ಖಾತೆ ಹಂಚಿಕೆ ಆಗುವ ಸಾಧ್ಯತೆ ಇದೆ. ಇಂದು ರಾತ್ರಿಯೊಳಗೆ 19 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ನಿರೀಕ್ಷೆಯಿದೆ.ಈ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ನಿನ್ನೆ ತಡರಾತ್ರಿ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಹೀಗಿದ್ದರೂ ಮತ್ತೊಂದು ಸುತ್ತಿನ ಚರ್ಚೆ ಬಳಿಕ ಅಂತಿಮ ನಿರ್ಧಾರವಾಗಲಿದೆ. ನೂತನ ಸಚಿವರಿಗೆ ಖಾತೆ ಹಂಚಿದರೂ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇರುವ ಕಾರಣ ಹೀಗಾಗಿ ಯಾವುದೇ ಖಾತೆ ನೀಡಿದರೂ ಕಾರ್ಯ…

Read More

892 ಕೋಟಿ: ಪತಿ ರಣ್​​ಬೀರ್ ಕಪೂರ್ ಅನ್ನೇ ಹಿಂದಿಕ್ಕಿದ ನಟಿ ಆಲಿಯಾ ಭಟ್ – Kannada News | Alia Bhatt’s brand value calculated around 892 crore rs higher than Ranbir Kapoor

ಇತ್ತೀಚೆಗಿನ ನಟ, ನಟಿಯರು ಕೇವಲ ನಟನಾ ವೃತ್ತಿಗೆ ಸೀಮಿತವಾಗಿಲ್ಲ. ಉದ್ಯಮಿಗಳು ಸಹ ಹೌದು. ಅದರಲ್ಲೂ ಬಾಲಿವುಡ್ (Bollywood) ನಟಿಯರು ದೊಡ್ಡ ದೊಡ್ಡ ಉದ್ಯಮಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಕೆಲವರು ಸ್ವಂತದ ಸಂಸ್ಥೆಗಳನ್ನು ಕಟ್ಟಿ ಬಲು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಸೆಲೆಬ್ರಿಟಿಗಳ ಆಸ್ತಿ ಮೌಲ್ಯ ಅಥವಾ ಬ್ರ್ಯಾಂಡ್ ಮೌಲ್ಯ ಆಗಾಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ವೃತ್ತಿ ಹಾಗೂ ಉದ್ಯಮದಲ್ಲಿ ಹೆಚ್ಚು ಹೆಚ್ಚು ಯಶಸ್ಸು ಗಳಿಸುತ್ತಲೂ ಈ ಬ್ರ್ಯಾಂಡ್ ಮೌಲ್ಯ ಹೆಚ್ಚುತ್ತಲೇ ಸಾಗುತ್ತದೆ. ಕೆಲ ವರ್ಷಗಳ ಹಿಂದೆ ತಮ್ಮ ಬುದ್ಧಿಪತ್ತೆಯಿಂದಾಗಿ ‘ಪೆದ್ದಿ’ ಎನಿಸಿಕೊಂಡಿದ್ದ…

Read More

IND vs PAK: ಕ್ರಿಕೆಟ್‌ನಲ್ಲಿ ಭಾರತ- ಪಾಕ್ ಮುಖಾಮುಖಿ ಯಾವಾಗ? – Kannada News | Asian Games 2026: India vs Pakistan Cricket Showdown Final Match Only?

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಕ್ರಿಕೆಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇದಕ್ಕೆ ಕಾರಣ ಎರಡೂ ತಂಡಗಳು ಪರಸ್ಪರ ದ್ವಿಪಕ್ಷೀಯ ಸರಣಿಗಳನ್ನು ಆಡದೆ ಇರುವುದು. ಆದಾಗ್ಯೂ ಉಭಯ ತಂಡಗಳು ಐಸಿಸಿ (ICC) ಹಾಗೂ ಎಸಿಸಿ ಈವೆಂಟ್​ಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗುತ್ತವೆ. ಈ ಈವೆಂಟ್​ಗಳು ಅಪರೂಪಕ್ಕೊಮ್ಮೆ ನಡೆಯುವುದರಿಂದ ಅಭಿಮಾನಿಗಳು ಎರಡು ತಂಡಗಳ ನಡುವಿನ ಕದನವನ್ನು ವೀಕ್ಷಿಸಲು ಸಾಕಷ್ಟು ಸಮಯ ಕಾಯಬೇಕು. ಇದೀಗ ಆ ಸಮಯ ಸನಿಹ ಬಂದಿದೆ. ಭಾರತ ಹಾಗೂ ಪಾಕಿಸ್ತಾನ…

Read More

Puja Tips: ಪೂಜೆಯಲ್ಲಿ ಕಲಶ ಸ್ಥಾಪನೆಯ ಮಹತ್ವ ಮತ್ತು ತೆಂಗಿನಕಾಯಿಯ ಸರಿಯಾದ ದಿಕ್ಕು – Kannada News | Kalasha Sthapana Guide: Correct Coconut Direction for Auspicious Hindu Pujas and Blessings

ಪೂಜೆಯಲ್ಲಿ ಕಲಶ ಸ್ಥಾಪನೆImage Credit source: Getty Images ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯಕ್ರಮ, ವ್ರತ ಅಥವಾ ಹಬ್ಬದ ಪೂಜೆಗಳಿರಲಿ, ಕಲಶ ಸ್ಥಾಪನೆ ಇಲ್ಲದೆ ಆ ಪೂಜೆಯು ಪೂರ್ಣಗೊಳ್ಳುವುದಿಲ್ಲ. ನವರಾತ್ರಿ, ದೀಪಾವಳಿ, ಗಣೇಶ ಚತುರ್ಥಿ ಅಥವಾ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿಯ ಕಥೆಯಾಗಲಿ, ತಾಮ್ರ ಅಥವಾ ಮಣ್ಣಿನ ಕಲಶದ ಮೇಲೆ ಮಾವಿನ ಎಲೆಗಳನ್ನು ಇಟ್ಟು, ಅದರ ಮೇಲೆ ತೆಂಗಿನಕಾಯಿಯನ್ನು (ಶ್ರೀಫಲ) ಪ್ರತಿಷ್ಠಾಪಿಸುವುದು ಅತ್ಯಂತ ಪವಿತ್ರವಾದ ಆಚರಣೆಯಾಗಿದೆ. ಆದರೆ, ನಾವು ಆಗಾಗ್ಗೆ ಪೂಜೆಯ ಗಡಿಬಿಡಿಯಲ್ಲಿ ಮತ್ತು ಸಿದ್ಧತೆಗಳಲ್ಲಿ ಮುಳುಗಿ,…

Read More