ಆಸ್ತಿ ವರ್ಗಾವಣೆ ವೇಳೆ ಸಕ್ಸಶನ್ ಸರ್ಟಿಫಿಕೇಟ್ ಮಾಡಿಸಬೇಕಾ, ಪ್ರೊಬೇಟ್ ಮಾಡಿಸಬೇಕಾ? ಇವೆರಡರ ಪಾತ್ರವೇನು? ಇಲ್ಲಿದೆ ವಿವರ – Kannada News | Legal steps to inherit property what are probate and succession certificate when can be used

ಆಸ್ತಿ ವರ್ಗಾವಣೆಯಲ್ಲಿ ಉಯಿಲು ಅಥವಾ ವಿಲ್ (Will) ಬರೆದಿಡುವುದು ಸಾಮಾನ್ಯವಾಗುತ್ತಿದೆ. ಈ ವಿಲ್ ಅನ್ನು ಎಕ್ಸಿಕ್ಯೂಟ್ ಮಾಡುವ ಸಂದರ್ಭದಲ್ಲಿ ಪ್ರೊಬೇಟ್ (Probate) ಮಾಡಿಸುವ ಪ್ರಕ್ರಿಯೆ ಬಗ್ಗೆ ಕೇಳಿರಬಹುದು. ಪಿತ್ರಾರ್ಜಿತ ಆಸ್ತಿ ವರ್ಗಾವಣೆ ಸಂದರ್ಭದಲ್ಲಿ ಸಕ್ಸಶನ್ ಸರ್ಟಿಫಿಕೇಟ್ ಮಾಡಿಸಬೇಕಾಗಬಹುದು. ಕೋರ್ಟ್​ನಲ್ಲಿ ಸಕ್ಸಶನ್ ಸರ್ಟಿಫಿಕೇಟ್ ಪಡೆಯುವುದು ಮತ್ತು ಪ್ರೊಬೇಟ್ (Probate) ಮಾಡಿಸುವುದು, ಇವೆರಡು ಸಂಗತಿಗಳ ಬಗ್ಗೆ ಕೆಲವರಲ್ಲಿ ಸಹಜ ಗೊಂದಲಗಳಿವೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಪ್ರೋಬೇಟ್ ಎಂದರೇನು?

ಪ್ರೋಬೇಟ್ ಎಂದರೆ ಮರಣಶಾಸನ ಅಥವಾ ಉಯಿಲು ಅಥವಾ ವಿಲ್ (Will) ನೈಜವಾದುದು ಮತ್ತು ಮಾನ್ಯವಾದುದು ಎಂದು ಸಿವಿಲ್ ನ್ಯಾಯಾಲಯವು ನೀಡುವ ಅಧಿಕೃತ ಪ್ರಮಾಣಪತ್ರವಾಗಿದೆ. ಇದು ವಿಲ್ ಬರೆದ ವ್ಯಕ್ತಿಯು ಮಾನಸಿಕವಾಗಿ ಸ್ವಸ್ಥನಾಗಿದ್ದಾಗ ಅದನ್ನು ಬರೆದಿದ್ದಾನೆಯೇ ಎಂಬುದನ್ನು ಖಚಿತಪಡಿಸುತ್ತದೆ ಮತ್ತು ಅದನ್ನು ಜಾರಿಗೆ ತರಲು ವಿಲ್‌ನಲ್ಲಿ ಹೆಸರಿಸಲಾದ ವ್ಯಕ್ತಿಗೆ (Executor) ಕಾನೂನುಬದ್ಧ ಅಧಿಕಾರ ನೀಡುತ್ತದೆ. ಕೋರ್ಟ್​ನಿಂದ ಪ್ರೊಬೇಟ್ ಪಡೆದ ವ್ಯಕ್ತಿಯು ವಿಲ್​ನಲ್ಲಿರುವಂತೆ ಆಸ್ತಿಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಕಾನೂನು ಪ್ರಕ್ರಿಯೆಗೆ ಮುಂದಾಗಬಹುದು.

ಪ್ರೋಬೇಟ್ ಈಗ ಕಡ್ಡಾಯವೇ?

2025 ರ ‘ರಿಪೀಲಿಂಗ್ ಅಂಡ್ ಅಮೆಂಡಿಂಗ್ ಆಕ್ಟ್’ ಮೂಲಕ ‘ಇಂಡಿಯನ್ ಸಕ್ಸೆಷನ್ ಆಕ್ಟ್ 1925’ ನ ಸೆಕ್ಷನ್ 213 ಅನ್ನು ರದ್ದುಗೊಳಿಸಲಾಗಿದೆ. ಈಗ ಪ್ರೋಬೇಟ್ ಪ್ರಕ್ರಿಯೆಯು ಐಚ್ಛಿಕ (Voluntary) ಮಾತ್ರವೇ ಆಗಿದೆ.

ಇದನ್ನೂ ಓದಿ: ಗ್ರಾಹಕರ ಮೇಲೆ ಡಾರ್ಕ್ ಪ್ಯಾಟರ್ನ್ ತಂತ್ರ: ಝೆಪ್ಟೋ, ಬುಕ್ ಮೈ ಶೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಕಂಪನಿಗಳಿಗೆ ದಂಡ

ಪ್ರೋಬೇಟ್ ಯಾವಾಗ ಮತ್ತು ಏಕೆ ಬೇಕು?

ಪ್ರೋಬೇಟ್ ಈಗ ಕಡ್ಡಾಯವಲ್ಲದಿದ್ದರೂ, ಈ ಕೆಳಗಿನ ಸಂದರ್ಭಗಳಲ್ಲಿ ಇದು ಅತ್ಯಂತ ಉಪಯುಕ್ತ:

  • ಆಸ್ತಿ ವ್ಯಾಜ್ಯಗಳಿದ್ದರೆ: ಆಸ್ತಿ ಹಂಚಿಕೆಯಲ್ಲಿ ಕುಟುಂಬದ ಮಧ್ಯೆ ಭಿನ್ನಾಭಿಪ್ರಾಯ ಅಥವಾ ವ್ಯಾಜ್ಯಗಳಿದ್ದರೆ ಪ್ರೋಬೇಟ್ ಪಡೆಯುವುದು ಸೂಕ್ತ.
  • ಹೆಚ್ಚಿನ ಮೌಲ್ಯದ ಆಸ್ತಿಗಳು: ಬ್ಯಾಂಕ್‌ಗಳು, ಹೌಸಿಂಗ್ ಸೊಸೈಟಿಗಳು ಮತ್ತು ಆಸ್ತಿ ಖರೀದಿದಾರರು ವಿಲ್‌ನ ನೈಜತೆಯನ್ನು ನಂಬಲು ಪ್ರೋಬೇಟ್ ಪತ್ರವನ್ನು ಕೋರಬಹುದು.

ಗಮನಿಸಿ: ಪ್ರೋಬೇಟ್ ಎನ್ನುವುದು ಆಸ್ತಿಯ ಮಾಲೀಕತ್ವದ ಸಾಕ್ಷಿಯಲ್ಲ; ಇದು ವಿಲ್‌ನ ಸಿಂಧುತ್ವವನ್ನು ಮಾತ್ರ ಪ್ರಮಾಣೀಕರಿಸುತ್ತದೆ. ಪ್ರೋಬೇಟ್ ಬಂದ ನಂತರ ಖಾತೆ ಬದಲಾವಣೆ (Mutation) ಪ್ರಕ್ರಿಯೆಯ ಮೂಲಕ ಮಾಲೀಕತ್ವ ವರ್ಗಾವಣೆಯಾಗುತ್ತದೆ. ವಿಲ್ ಇದ್ದಾಗ ಮಾತ್ರವೇ ಈ ಪ್ರೊಬೇಟ್ ಪ್ರಕ್ರಿಯೆ ಇರುವುದು.

ವಿಲ್ (Will) ಇಲ್ಲದಿದ್ದರೆ ಏನಾಗುತ್ತದೆ?

ವ್ಯಕ್ತಿಯು ಯಾವುದೇ ವಿಲ್ ಬರೆಯದೆ ನಿಧನರಾದರೆ, ಪ್ರೋಬೇಟ್ ಅನ್ವಯಿಸುವುದಿಲ್ಲ. ಬದಲಾಗಿ, ಅವರ ಧರ್ಮ/ಸಂಪ್ರದಾಯಕ್ಕೆ ಅನುಗುಣವಾಗಿ ವಾರಸುದಾರರಿಗೆ ಆಸ್ತಿ ಹಂಚಿಕೆಯಾಗುತ್ತದೆ (ಉದಾಹರಣೆಗೆ: ಹಿಂದೂಗಳಿಗೆ ‘ಹಿಂದೂ ಉತ್ತರಾಧಿಕಾರ ಕಾಯ್ದೆ, 1956’).

ಇಂತಹ ಸಂದರ್ಭಗಳಲ್ಲಿ, ಸಕ್ಸಷನ್ ಸರ್ಟಿಫಿಕೇಟ್ (Succession Certificate) ಮತ್ತು ಲೀಗಲ್ ಹೇರ್ ಸರ್ಟಿಫಿಕೇಟ್ (Legal Heir Certificate) ಆಯ್ಕೆಗಳಿರುತ್ತವೆ.

ಇದನ್ನೂ ಓದಿ: ಆಫ್ರಿಕಾದ ಅತಿದೊಡ್ಡ ಏರ್ಲೈನ್ಸ್ ಬೆಳೆಸಿದ್ದ ತೆವೊಲ್ಡೆ ಗೆಬ್ರೆಮರಿಯಮ್ ಈಗ ಏರ್ ಇಂಡಿಯಾದ ನೂತನ ಸಾರಥಿ

  • ಸಕ್ಸೆಷನ್ ಸರ್ಟಿಫಿಕೇಟ್ : ಬ್ಯಾಂಕ್ ಡೆಪಾಸಿಟ್, ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಂತಹ ಚರ ಆಸ್ತಿಗಳನ್ನು ಪಡೆಯಲು ನ್ಯಾಯಾಲಯದಿಂದ ಇದನ್ನು ಪಡೆಯಬೇಕಾಗುತ್ತದೆ. ಸಿವಿಲ್ ಕೋರ್ಟ್ ಅಥವಾ ಜಿಲ್ಲಾ ನ್ಯಾಯಾಲಯವು ಈ ಪ್ರಮಾಣಪತ್ರ ನೀಡುತ್ತದೆ. ಇದಕ್ಕೆ ಕೆಲ ತಿಂಗಳುಗಳೇ ಆಗಬಹುದು.
  • ಲೀಗಲ್ ಹೇರ್ ಸರ್ಟಿಫಿಕೇಟ್ : ಕಂದಾಯ ಇಲಾಖೆಯಿಂದ ದೊರೆಯುವ ಈ ಪತ್ರವು ಕೇವಲ ವಾರಸುದಾರರ ಗುರುತಿಗಷ್ಟೇ ಸೀಮಿತವಾಗಿದ್ದು, ವ್ಯಾಜ್ಯಗಳಿದ್ದಾಗ ಮಾಲೀಕತ್ವವನ್ನು ನಿರ್ಧರಿಸುವುದಿಲ್ಲ. ಪಿಂಚಣಿ, ಯುಟಿಲಿಟಿ ವರ್ಗಾವಣೆಗೆ ಬಳಸಲಾಗುವ ಇದನ್ನು ತಹಶೀಲ್ದಾರ್ ಕಚೇರಿಯಲ್ಲಿ ಕೊಡಲಾಗುತ್ತದೆ. ಒಂದೆರಡು ವಾರದಲ್ಲಿ ಈ ಸರ್ಟಿಫಿಕೇಟ್ ಸಿಗುತ್ತದೆ.

ನಾಮಿನಿ ಮತ್ತು ವಾರಸುದಾರರ ವ್ಯತ್ಯಾಸ

ಬ್ಯಾಂಕ್ ಖಾತೆ ಅಥವಾ ಇನ್ಶೂರೆನ್ಸ್‌ನಲ್ಲಿ ‘ನಾಮಿನಿ’ (Nominee) ಆಗಿರುವ ವ್ಯಕ್ತಿಯು ಹಣ ಅಥವಾ ಆಸ್ತಿಯನ್ನು ಪಡೆಯುವ ಅರ್ಹತೆ ಹೊಂದಿದ್ದರೂ, ಅವರೇ ಅದರ ಪೂರ್ಣ ಕಾನೂನುಬದ್ಧ ಮಾಲೀಕರಾಗುವುದಿಲ್ಲ. ಅಂತಿಮವಾಗಿ ಕಾನೂನುಬದ್ಧ ವಾರಸುದಾರರೇ (Legal Heirs) ಆ ಆಸ್ತಿಗೆ ನಿಜವಾದ ಹಕ್ಕುದಾರರಾಗಿರುತ್ತಾರೆ. ನಾಮಿನಿ ಎನಿಸಿಕೊಂಡವರು, ಆಸ್ತಿಯನ್ನು ಕಾನೂನುಬದ್ಧ ವಾರಸುದಾರರಿಗೆ ತಲುಪಿಸಲು ಅಧಿಕಾರ ಹೊಂದಿರುತ್ತಾರೆ. ನಾಮಿನಿಯೇ ನೈಜ ವಾರಸುದಾರರಾಗಿದ್ದರೆ ಅವರೇ ಆಸ್ತಿಯನ್ನು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

83ನೇ ವಯಸ್ಸಿನಲ್ಲೂ 24 ಗಂಟೆ ನಿರಂತರ ಕೆಲಸ ಮಾಡಿದ ನಟ ಅಮಿತಾಭ್ ಬಚ್ಚನ್ – Kannada News | Amitabh Bachchan works 24 hour shift for KBC season 18 shoot at the age of 83

ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು 83ನೇ ವಯಸ್ಸಿನಲ್ಲೂ ಯುವ ನಟರಿಗೆ ಸವಾಲೆಸೆಯುವಂತಹ ಕಾರ್ಯವೈಖರಿ ಹಾಗೂ ನಿಷ್ಠೆಯನ್ನು ಮೆರೆಯುತ್ತಿದ್ದಾರೆ. ಇತ್ತೀಚೆಗೆ ಅವರು ಸತತ 24 ಗಂಟೆಗಳ ಕಾಲ ವಿಶ್ರಾಂತಿಯಿಲ್ಲದೆ ಕೆಲಸ ಮಾಡಿದ್ದು, ತಕ್ಷಣವೇ ತಮ್ಮ ಜನಪ್ರಿಯ ಕ್ವಿಜ್ ಶೋ ‘ಕೌನ್ ಬನೇಗಾ ಕರೋಡ್‌ಪತಿ’ (KBC) ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.

ಆಗಸ್ಟ್ 6ರಂದು ‘ಕೌನ್ ಬನೇಗಾ ಕರೋಡ್‌ಪತಿ’ ಶೂಟಿಂಗ್‌ಗೆ ತೆರಳಬೇಕಿರುವ ಬಗ್ಗೆ ಉಲ್ಲೇಖಿಸಿದ ಅಮಿತಾಭ್ ಬಚ್ಚನ್ ಅವರು, ‘ಸ್ವಲ್ಪ ಆಹಾರ ಸೇವಿಸಿ, ವಿಶ್ರಾಂತಿ ಪಡೆಯಬೇಕಿದೆ. ಆಗಸ್ಟ್ 6ರಂದು ಮತ್ತೆ ಬೆಳಿಗ್ಗೆಯೇ ಕೆಬಿಸಿ ಶೂಟಿಂಗ್ ಕರೆಯನ್ನು ಸ್ವೀಕರಿಸಬೇಕಿದೆ. ಪ್ರಸಾರದ ದಿನಾಂಕ ನಿಗದಿಯಾಗಿದೆ, ಈಗ ಶೂಟಿಂಗ್‌ಗೆ ಹೋಗದಿದ್ದರೆ ನನ್ನ ಜಾಗಕ್ಕೆ ಬೇರೆಯವರನ್ನು ಬದಲಾಯಿಸಿಬಿಡುತ್ತಾರೆ’ ಎಂದು ಹಾಸ್ಯದ ಧಾಟಿಯಲ್ಲಿ ತಮ್ಮ ಕಮಿಟ್‌ಮೆಂಟ್ ಬಗ್ಗೆ ಬರೆದಿದ್ದಾರೆ.

ಆಗಸ್ಟ್ 10ರಿಂದ ಕೆಬಿಸಿ ಸೀಸನ್ 18 ಪ್ರಸಾರ:

‘ಕೌನ್ ಬನೇಗಾ ಕರೋಡ್‌ಪತಿ ಸೀಸನ್ 18’ ಕಾರ್ಯಕ್ರಮವು ಆಗಸ್ಟ್ 10ರಿಂದ ಸೋನಿ ಎಂಟರ್‌ಟೇನ್‌ಮೆಂಟ್ ಟೆಲಿವಿಷನ್ ಮತ್ತು ಸೋನಿ ಲಿವ್​ನಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಈ ಬಾರಿ ಶೋ ‘ಸೋಚ್‌ನಾ ಪಡೇಗಾ’ (ಆಲೋಚಿಸಬೇಕಾಗುತ್ತದೆ) ಎಂಬ ವಿಶಿಷ್ಟ ಥೀಮ್‌ನೊಂದಿಗೆ ಬರಲಿದೆ. ಮಾಹಿತಿ ಎಲ್ಲರಿಗೂ ಸುಲಭವಾಗಿ ಸಿಗುವ ಈ ಕಾಲದಲ್ಲಿ, ವಿಷಯಗಳನ್ನು ಗ್ರಹಿಸುವ ಮತ್ತು ಅನ್ವಯಿಸುವ ಸಾಮರ್ಥ್ಯವೇ ಪ್ರಮುಖ ಸ್ಪರ್ಧೆಯಾಗಿದೆ ಎಂಬುದನ್ನು ಈ ಸೀಸನ್ ಬಿಂಬಿಸಲಿದೆ.

ಇದನ್ನೂ ಓದಿ: ನನಗೆ ಆಪರೇಷನ್ ಆಗಿಲ್ಲ, ನಾನು ಚೆನ್ನಾಗಿದ್ದೇನೆ; ವದಂತಿಗೆ ಬ್ರೇಕ್ ಹಾಕಿದ ಅಮಿತಾಭ್ ಬಚ್ಚನ್

ಬಿಗ್ ಬಿ ಮುಂದಿನ ಸಿನಿಮಾ:

ಕೆಬಿಸಿ ಹೊರತಾಗಿ ಅಮಿತಾಭ್ ಬಚ್ಚನ್ ಅವರು ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಸೀಕ್ವೆಲ್‌ನಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಕಮಲ್ ಹಾಸನ್ ಅವರು ತಮ್ಮ ಪಾತ್ರಗಳನ್ನು ಮುಂದುವರಿಸಲಿದ್ದಾರೆ. ಆದರೆ ಮೊದಲ ಭಾಗದಲ್ಲಿ ಪ್ರಮುಖ ಪಾತ್ರದಲ್ಲಿದ್ದ ದೀಪಿಕಾ ಪಡುಕೋಣೆ ಎರಡನೇ ಭಾಗದಲ್ಲಿ ಇರುವುದಿಲ್ಲ. ದೀಪಿಕಾ ಅವರೊಂದಿಗೆ ಚಿತ್ರತಂಡ ಪರಸ್ಪರ ಸಮ್ಮತಿಯಿಂದ ದೂರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರ್ತ್‌ಡೇ, ಪ್ರಿವೆಡ್ಡಿಂಗ್‌ ಶೂಟ್​​​​ಗೆ ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌, ಬಾಡಿಗೆ ಎಷ್ಟು? – Kannada News | Bengaluru’s open top Ambaari double decker buses ready for pre wedding shoots, birthday parties, here Is rent Details

ಬೆಂಗಳೂರು, (ಆಗಸ್ಟ್ 06): ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಅನ್ನು(ambaari double decker buses)  ಈಗ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗಾಗಿ ಬುಕ್ ಮಾಡಬಹುದು. ಹೌದು…ಪ್ರವಾಸೋದ್ಯಮ ಇಲಾಖೆಯ ಅಂಬಾರಿ ಡಬಲ್ ಡೆಕರ್ ಬಸ್​​​​ಗಳು ಇನ್ಮುಂದೆ ಬೆಂಗಳೂರು ನಗರದಲ್ಲಿ ಓಡಾಡಲು ಸೀಮಿತವಾಗಿರುವುದಿಲ್ಲ. ಬದಲಾಗಿ ಪ್ರಿ ವೆಡ್ಡಿಂಗ್ ಶೂಟ್, ಬರ್ತ್​​​​ ಡೇ ಸೆಲೆಬ್ರೆಶನ್​​​ಗೆ ಬಸ್​​​​​ಗಳು ಬಾಡಿಗೆಗೆ ಸಿಗಲಿವೆ.

2026ರ ಜನವರಿಯಲ್ಲಿ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್‌ಗಳ ಸೇವೆಯನ್ನು ಪ್ರಾರಂಭಿಸಲಾಯಿತು. ಕೆಎಸ್‌ಟಿಡಿಸಿ (KSTDC) ನಿರ್ವಹಿಸುವ ಮೂರು ಬಸ್‌ಗಳು ಇದುವರೆಗೆ ಪ್ರವಾಸಿಗರಿಗೆ ನಗರ ಪರ್ಯಟನೆಯ ‘ಹಾಪ್-ಆನ್, ಹಾಪ್-ಆಫ್’ (Hop-on, Hop-off) ಸೇವೆಯನ್ನು ನೀಡುತ್ತಿದ್ದವು. ಇವು ರವೀಂದ್ರ ಕಲಾಕ್ಷೇತ್ರ, ಹಡ್ಸನ್ ಸರ್ಕಲ್, ಕಸ್ತೂರ್ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ಕಬ್ಬನ್ ರಸ್ತೆ, ವಿಧಾನ ಸೌಧ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿದಂತೆ ಒಟ್ಟು 26 ಪ್ರಮುಖ ಆಕರ್ಷಣೀಯ ಸ್ಥಳಗಳನ್ನು ಸುತ್ತಿಬರುತ್ತವೆ.

ಇದನ್ನೂ ನೋಡಿ: ಲಾಲ್‌ಬಾಗ್​​ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

ಬಾಡಿಗೆ ಎಷ್ಟು?

ಇನ್ನು ಈ ಬಸ್ ಒಂದು ದಿನಕ್ಕೆ ವಾರದ ದಿನಗಳಲ್ಲಿ 32 ಸಾವಿರ ರೂಪಾಯಿ, ವಾರಾಂತ್ಯದಲ್ಲಿ 40 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಇನ್ನು ಸಮಾರಂಭಗಳು ಮತ್ತು ಪಾರ್ಟಿಗಳಿಗೆ 5 ಗಂಟೆಗಳ ಅವಧಿಗೆ ವಾರಾಂತ್ಯ (Sat-Sun): 28,000 + 5% GST, ವಾರದ ದಿನಗಳು (Mon-Fri 26,000 ರೂ. + 5% GST. ಒಂದು ವೇಳೆ ನಿಯಮಿತ ಸಮಯ ಮೀರಿದರೆ, ಇಡೀ ದಿನದ ದರ ಅನ್ವಯಿಸುತ್ತದೆ.

ಫೋಟೋಶೂಟ್‌ಗಳಿಗೆ (2 ಗಂಟೆಗಳ ಅವಧಿ)

  • ವಾರಾಂತ್ಯ (Sat-Sun): 16,000 ರೂಪಾಉಇ + 5% GST.
  • ವಾರದ ದಿನಗಳು (Mon-Fri):12,000 ರೂ. + 5% GST.
  • 2 ಗಂಟೆಗಿಂತ ಹೆಚ್ಚುವರಿ ಸಮಯಕ್ಕೆ ವಾರಾಂತ್ಯದಲ್ಲಿ ಪ್ರತಿ ಗಂಟೆಗೆ 7,000 ಹಾಗೂ ವಾರದ ದಿನಗಳಲ್ಲಿ ಪ್ರತಿ ಗಂಟೆಗೆ 6,000 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಇದು ಕೇವಲ ಹೆಚ್ಚುವರಿ ಆದಾಯ ಗಳಿಕೆಯಷ್ಟೇ ಅಲ್ಲ, ಬೆಂಗಳೂರಿನಂತಹ ನಗರದಲ್ಲಿ ಪ್ರವಾಸಿಗರಿಗೆ ಮತ್ತು ಜನರಿಗೆ ಆಚರಣೆ ಮಾಡಲು ಹೊಸ ಮತ್ತು ವಿಶಿಷ್ಟ ಆಯ್ಕೆಗಳನ್ನು ಒದಗಿಸುವ ಪ್ರಯತ್ನವಾಗಿದೆ.

ಕೆಎಸ್‌ಟಿಡಿಸಿ ಅಧಿಕಾರಿಯೊಬ್ಬರು,ಜನವರಿಯಿಂದ ಇದುವರೆಗೆ ಸುಮಾರು 20,000 ಜನರು ಈ ಹಾಪ್-ಆನ್, ಹಾಪ್-ಆಫ್ ಸೇವೆಯನ್ನು ಬಳಸಿಕೊಂಡಿದ್ದಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ ಹಾಗೂ ವಾರದ ದಿನಗಳಲ್ಲೂ ಉತ್ತಮ ಸ್ಪಂದನೆ ಸಿಗುತ್ತಿದೆ. ತಂಪಾದ ವಾತಾವರಣವಿದ್ದಾಗ ಹೆಚ್ಚಿನವರು ಟಾಪ್‌ ಡೆಕ್‌ ಸೀಟುಗಳನ್ನೇ ಇಷ್ಟಪಡುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು, ಈಗ ಸಾರ್ವಜನಿಕರಿಗೆ ಜನ್ಮದಿನದ ಆಚರಣೆಗಳು, ಕಾರ್ಪೊರೇಟ್ ಈವೆಂಟ್‌ಗಳು ಹಾಗೂ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗೆ ಅಂಬಾರಿ ಬಸ್‌ಗಳನ್ನು ಕಾಯ್ದಿರಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಎಂಟಿಸಿಯಲ್ಲಿ ಡಿಜಿಟಲ್ ಕ್ರಾಂತಿ: ಯುಪಿಐನಿಂದಲೇ ಶೇ.51ಕ್ಕೂ ಹೆಚ್ಚು ಟಿಕೆಟ್ ಆದಾಯ!

ಬೆಂಗಳೂರು, ಆಗಸ್ಟ್​​ 06: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಯುಪಿಐ (UPI) ಮೂಲಕ ಟಿಕೆಟ್ ಖರೀದಿ ಮಾಡುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಸಂಸ್ಥೆಯ ಒಟ್ಟು ಟಿಕೆಟ್ ಆದಾಯದ ಶೇ.50ಕ್ಕೂ ಹೆಚ್ಚು ಈ ಮೂಲಕವೇ ಸಂಗ್ರಹವಾಗುತ್ತಿದೆ. ಆದರೆ, ನೆಟ್‌ವರ್ಕ್ ಸಮಸ್ಯೆ ಮತ್ತು ವಹಿವಾಟು ವಿಫಲವಾಗುವ ಘಟನೆಗಳು ಇನ್ನೂ ಪ್ರಯಾಣಿಕರು ಹಾಗೂ ನಿರ್ವಾಹಕರಿಗೆ ತೊಂದರೆ ಉಂಟುಮಾಡುತ್ತಿವೆ ಎನ್ನಲಾಗಿದೆ.

UPI ಮೂಲಕ ಈ ವರ್ಷ 313.4 ಕೋಟಿ ಆದಾಯ

ಬಿಎಂಟಿಸಿ ಅಂಕಿಅಂಶಗಳ ಪ್ರಕಾರ, 2025ರ ಜನವರಿಯಲ್ಲಿ ಒಟ್ಟು ಆದಾಯದಲ್ಲಿ ಯುಪಿಐ ಪಾಲು ಶೇ.22.2 ಇದ್ದರೆ, ಡಿಸೆಂಬರ್ ವೇಳೆಗೆ ಅದು ಶೇ.50.9ಕ್ಕೆ ಏರಿಕೆಯಾಗಿದೆ. ಈ ವರ್ಷ ಜನವರಿ 1ರಿಂದ ಜುಲೈ 30ರವರೆಗೆ ಬಿಎಂಟಿಸಿಯ ಒಟ್ಟು 609.5 ಕೋಟಿ ಟಿಕೆಟ್ ಆದಾಯದಲ್ಲಿ 313.4 ಕೋಟಿ ಯುಪಿಐ ಮೂಲಕ ಬಂದಿದೆ. ಅಂದರೆ ಒಟ್ಟು ಆದಾಯದಲ್ಲಿ ಶೇ.51.4 ಡಿಜಿಟಲ್ ಪಾವತಿಯ ಪಾಲಾಗಿದೆ.

ಇದನ್ನೂ ಓದಿ: ಬರ್ತ್‌ಡೇ, ಪ್ರಿವೆಡ್ಡಿಂಗ್‌ ಶೂಟ್​​​​ಗೆ ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌, ಬಾಡಿಗೆ ಎಷ್ಟು?

ಡೈನಾಮಿಕ್ QR ಕೋಡ್ ವ್ಯವಸ್ಥೆ ಜಾರಿ

ಟಿಕೆಟ್ ಖರೀದಿಯನ್ನು ಸುಲಭಗೊಳಿಸಲು ಹಾಗೂ ನಗದು ವಹಿವಾಟು ಕಡಿಮೆ ಮಾಡಲು ಬಿಎಂಟಿಸಿ ಸುಮಾರು ಆರು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳಲ್ಲಿ (ETM) ಡೈನಾಮಿಕ್ QR ಕೋಡ್ ವ್ಯವಸ್ಥೆ ಜಾರಿಗೆ ತಂದಿದೆ. ಈ ಮೊದಲು ಬಸ್‌ಗಳಲ್ಲಿ ಅಂಟಿಸಲಾಗಿದ್ದ ಸ್ಟ್ಯಾಟಿಕ್ QR ಕೋಡ್ ಮೂಲಕ ಪ್ರಯಾಣಿಕರು ಮುಂಚಿತವಾಗಿ ಪಾವತಿ ಮಾಡಬಹುದಾಗಿತ್ತು. ಆದರೆ ಕೆಲವರು ನಕಲಿ ಅಥವಾ ಎಡಿಟ್ ಮಾಡಿದ ಪಾವತಿ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ವಂಚನೆ ನಡೆಸಿದ ಹಿನ್ನೆಲೆಯಲ್ಲಿ ಆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು.

ನೆಟ್‌ವರ್ಕ್ ಸಮಸ್ಯೆಯಿಂದ ತೊಂದರೆ

ಡಿಜಿಟಲ್ ಪಾವತಿ ಹೆಚ್ಚಾದರೂ, ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇನ್ನೂ ದೊಡ್ಡ ಸವಾಲಾಗಿ ಉಳಿದಿದೆ. ನಿರ್ವಾಹಕರು ಪ್ರಯಾಣಿಕರ ಗಮ್ಯಸ್ಥಾನ ನಮೂದಿಸಿದ ಬಳಿಕವೇ QR ಕೋಡ್ ಸೃಷ್ಟಿಯಾಗುತ್ತದೆ. ಆದರೆ ನೆಟ್‌ವರ್ಕ್ ನಿಧಾನವಾಗಿದ್ದರೆ ಅಥವಾ ಸಿಗ್ನಲ್ ಇಲ್ಲದಿದ್ದರೆ QR ಕೋಡ್ ಸೃಷ್ಟಿಯಾಗಲು ವಿಳಂಬವಾಗುತ್ತದೆ. ನಗರದ ಹೊರವಲಯಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧೈರ್ಯವಿದ್ದರೆ ವಿಧಾನಸಭೆಯಲ್ಲಿ ಉತ್ತರಿಸಿ’; ಕಾವೇರಿ ಸಮಸ್ಯೆ ಕುರಿತು ಸಿಎಂ ವಿಜಯ್‌ಗೆ ಉದಯನಿಧಿ ಸ್ಟಾಲಿನ್ ಸವಾಲು – Kannada News | Wearing black Shirt Udhayanidhi Stalin slams CM Vijay over farmers issues and Cauvery Dispute

ಚೆನ್ನೈ, ಆಗಸ್ಟ್ 6: ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2026-27ರ ಹಣಕಾಸು ವರ್ಷದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಬಜೆಟ್ ವರದಿಯನ್ನು ರೈತರಿಗೆ ಯಾವುದೇ ಪ್ರಯೋಜನವನ್ನು ನೀಡದ ನಿರಾಶಾದಾಯಕ ವರದಿ ಎಂದು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin)  ಟೀಕಿಸಿದ್ದಾರೆ. ಎಲ್ಲಾ ಡಿಎಂಕೆ ಶಾಸಕರು ಇಂದು ವಿಧಾನಸಭೆಗೆ ಕಪ್ಪು ಶರ್ಟ್ ಧರಿಸಿ ಬಂದು, ಸರ್ಕಾರ ರೈತರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು. ಬಜೆಟ್ ಭಾಷಣದ ನಂತರ ವಿಧಾನಸಭೆ ಆವರಣದಲ್ಲಿ ಮಾಧ್ಯಮಗಳನ್ನು ಭೇಟಿಯಾದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸರ್ಕಾರದ ಕೃಷಿ ಬಜೆಟ್ ಅನ್ನು ತೀವ್ರವಾಗಿ ಟೀಕಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, “ಕಳೆದ ಡಿಎಂಕೆ ಆಡಳಿತದಲ್ಲಿ ಪರಿಚಯಿಸಲಾದ ಕಲ್ಯಾಣ ಯೋಜನೆಗಳ ಹೆಸರುಗಳನ್ನು ಟಿವಿಕೆ ಸರ್ಕಾರ ಬದಲಾಯಿಸಿ, ತಮ್ಮದೇ ಎಂದು ಬಿಂಬಿಸಿಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಡಳಿತ ಪಕ್ಷವು ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸದೆ ನಿರಂತರವಾಗಿ ರೈತರನ್ನು ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು. “ಚುನಾವಣಾ ಪ್ರಚಾರದ ಸಮಯದಲ್ಲಿ ಮುಖ್ಯಮಂತ್ರಿಗಳು 5 ಎಕರೆವರೆಗೆ ಭೂಮಿ ಹೊಂದಿರುವ ಎಲ್ಲಾ ರೈತರಿಗೆ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ, ಅವರು ಆರಂಭದಲ್ಲಿ 50,000 ರೂ.ವರೆಗೆ ಮಾತ್ರ ಮನ್ನಾ ಮಾಡಲಾಗುವುದು ಎಂದು ಹೇಳಿದ್ದರು. ನಂತರ, ಡಿಎಂಕೆ ಮತ್ತು ರೈತರ ವಿರೋಧದ ನಂತರ, ಅವರು ಅದನ್ನು 75,000ಕ್ಕೆ ಹೆಚ್ಚಿಸಿದರು. ಚುನಾವಣಾ ಭರವಸೆಯಂತೆ ರೈತರು ಸಂಪೂರ್ಣ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದ್ದರೂ, ಸರ್ಕಾರ ಈ ವಿಷಯದ ಬಗ್ಗೆ ಮೌನವಾಗಿದೆ” ಎಂದು ಉದಯನಿಧಿ ಆರೋಪಿಸಿದರು.

ಇದನ್ನೂ ಓದಿ: ‘ಅಹಂಕಾರವೇ ವಿನಾಶಕ್ಕೆ ದಾರಿ’; ಉದಯನಿಧಿ ಬಿಡುಗಡೆ ಬಳಿಕ ಸಿಎಂ ವಿಜಯ್ ಸರ್ಕಾರದ ವಿರುದ್ಧ ಸ್ಟಾಲಿನ್ ವಾಗ್ದಾಳಿ

ಮೇಕೆದಾಟು ಮತ್ತು ಕಾವೇರಿ ನೀರಿನ ಕೊರತೆ:

ಕಳೆದ ಕೆಲವು ತಿಂಗಳುಗಳಲ್ಲಿ ತಮಿಳುನಾಡು ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಈ ಬಜೆಟ್‌ನಲ್ಲಿ ಯಾವುದೇ ಪರಿಹಾರವಿಲ್ಲ ಎಂದು ಅವರು ಟೀಕಿಸಿದರು. “ರಾಜ್ಯದಲ್ಲಿ ಕಾವೇರಿ ನೀರಿನ ಕೊರತೆಯಿಂದಾಗಿ, ರೈತರು ಕೃಷಿ ಮಾಡಲು ಸಾಧ್ಯವಾಗದೆ ಭಾರಿ ನಷ್ಟ ಅನುಭವಿಸಿದ್ದಾರೆ. ಕರ್ನಾಟಕ ಸರ್ಕಾರದ ಮೇಕೆದಾಟು ಅಣೆಕಟ್ಟು ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಸರ್ಕಾರ ತಮಿಳುನಾಡು ರೈತರ ಹಕ್ಕುಗಳನ್ನು ರಕ್ಷಿಸಲು ಯಾವುದೇ ಗಂಭೀರ ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ಅಸಮಾಧಾನ ಹೊರಹಾಕಿದರು.

ಕಳೆದ ಕೆಲವು ತಿಂಗಳುಗಳಿಂದ ಅನೇಕ ಕಷ್ಟಗಳನ್ನು ಎದುರಿಸುತ್ತಿರುವ ರೈತರ ಧ್ವನಿಯಾಗಿ ಮತ್ತು ಅವರ ಹಕ್ಕುಗಳನ್ನು ರಕ್ಷಿಸುವ ಮಾರ್ಗವಾಗಿ ಎಲ್ಲಾ ಡಿಎಂಕೆ ಶಾಸಕರು ಕಪ್ಪು ಶರ್ಟ್ ಧರಿಸಿ ಬಂದು ನಾಯಕನ ಆದೇಶದ ಮೇರೆಗೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಉದಯನಿಧಿ ಹೇಳಿದರು.

ಇದನ್ನೂ ಓದಿ: ‘ಟಿವಿಕೆ ಸರ್ಕಾರ ನನ್ನನ್ನು ಉಗ್ರನಂತೆ ನಡೆಸಿಕೊಂಡಿತು’; ಉದಯನಿಧಿ ಸ್ಟಾಲಿನ್ ಆರೋಪ

ಧೈರ್ಯವಿದ್ದರೆ ಉತ್ತರಿಸಿ:

ವಿಧಾನಸಭೆಯಲ್ಲಿ ಕಾವೇರಿ ನೀರಿನ ಸಮಸ್ಯೆ ಮತ್ತು ರೈತರ ಮೇಲಿನ ಪರಿಣಾಮದ ಕುರಿತು ಚರ್ಚಿಸಲು ಪ್ರಶ್ನೋತ್ತರ ಅವಧಿ ಮುಗಿದ ನಂತರ ಮುಂದೂಡಿಕೆ ನಿರ್ಣಯ ಮಂಡಿಸಲು ಸ್ಪೀಕರ್‌ಗೆ ಪತ್ರ ಸಲ್ಲಿಸಲಾಗಿದೆ. “ನಾಳೆ ರೈತರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸುತ್ತೇವೆ. ಮುಖ್ಯಮಂತ್ರಿಗಳಿಗೆ ಧೈರ್ಯವಿದ್ದರೆ, ಅವರು ಎದ್ದು ನಿಂತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ” ಎಂದು ಉದಯನಿಧಿ ಸ್ಟಾಲಿನ್ ಸವಾಲು ಹಾಕಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಬೆಂಗಳೂರಿಗೆ ಆಗಮಿಸಿದ ಕಂಚಿನ ಪದಕ ವಿಜೇತೆ ಶಿಲ್ಪಾಗೆ ಅದ್ಧೂರಿ ಸ್ವಾಗತ – Kannada News | 2026 Commonwealth Games: Para Athlete Shilpa’s Grand Bengaluru Welcome

2026 ರ ಕಾಮನ್‌ವೆಲ್ತ್ ಈ ಕ್ರೀಡಾಕೂಟದಲ್ಲಿ ಭಾರತ ಒಟ್ಟು 39 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ದೇಶದ ಕ್ರೀಡಾಪಟುಗಳು ಒಟ್ಟು 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳನ್ನು ಗೆದ್ದರು. ಈ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಪ್ಯಾರಾ ಅಥ್ಲೀಟ್ ಶಿಲ್ಪಾ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಇದೀಗ ತವರಿಗೆ ಮರಳಿದ ಶಿಲ್ಪಾ ಅವರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

ವಿಮಾನ ನಿಲ್ದಾಣದಲ್ಲಿ ಡೋಲು-ಕುಣಿತ ಹೂವಿನ ಸುರಿಮಳೆ ಸುರಿಸಿ ಜಯಘೋಷದ ನಡುವೆ ಶಿಲ್ಪಾ ಅವರನ್ನು ಸ್ವಾಗತಿಸಲಾಯಿತು. ಶಿಲ್ಪಾರನ್ನು ಸ್ವಾಗತಿಸಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರೆಲ್ಲರೂ ಶಿಲ್ವಾ ಅವರಿಗೆ ಹೂಗುಚ್ಛ ನೀಡಿ ಅದ್ದೂರಿ ಸ್ವಾಗತ ನೀಡಿದರು. ಹಾಗೆಯೇ ಶಿಲ್ಪಾ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

Source link

‘ಬೀಯಿಂಗ್ ಹ್ಯೂಮನ್’ ವಂಚನೆ ಪ್ರಕರಣ: ನಟ ಸಲ್ಮಾನ್ ಖಾನ್​ಗೆ ಸಮನ್ಸ್ ಜಾರಿ – Kannada News | Salman Khan and sister Alvira summoned by Chandigarh Court in Being Human Cheating Case

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹಾಗೂ ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಅವರಿಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಸಲ್ಮಾನ್ ಖಾನ್ ಅವರ ಪ್ರಸಿದ್ಧ ಬ್ರ್ಯಾಂಡ್ ‘ಬೀಯಿಂಗ್ ಹ್ಯೂಮನ್’ (Being Human) ಜ್ಯುವೆಲ್ಲರಿ ವ್ಯವಹಾರಕ್ಕೆ ಸಂಬಂಧಿಸಿದ ಕೋಟಿಗಟ್ಟಲೆ ರೂಪಾಯಿ ವಂಚನೆ ಪ್ರಕರಣದಲ್ಲಿ ಈ ಸಮನ್ಸ್ ನೀಡಲಾಗಿದೆ. ಇದರಿಂದಾಗಿ ಹಳೆಯ ಉದ್ಯಮ ವಿವಾದವೊಂದು ಮತ್ತೆ ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಪ್ರಾರಂಭಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಚಂಡೀಗಢ ಮೂಲದ ಉದ್ಯಮಿ ಅರುಣ್ ಗುಪ್ತಾ ಎಂಬುವರು ಈ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಶೋರೂಮ್ ತೆರೆಯಲು ತಮ್ಮನ್ನು ಪ್ರಚೋದಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಉದ್ಯಮದ ಯಶಸ್ಸಿಗೆ ಅಗತ್ಯ ಬೆಂಬಲ ನೀಡುವುದಾಗಿ ಮತ್ತು ಭಾರಿ ಲಾಭ ಸಿಗಲಿದೆ ಎಂದು ಕಂಪನಿಯ ಪದಾಧಿಕಾರಿಗಳು ನೀಡಿದ ಭರವಸೆಯನ್ನು ನಂಬಿ ಸುಮಾರು 2ರಿಂದ 3 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾಗಿ ಗುಪ್ತಾ ದೂರಿದ್ದಾರೆ.

ಸುಳ್ಳಾದ ಭರವಸೆ, ಭಾರಿ ಆರ್ಥಿಕ ನಷ್ಟ:

ಉದ್ಯಮಿ ಅರುಣ್ ಗುಪ್ತಾ ಅವರ ಪ್ರಕಾರ, ಶೋರೂಮ್ ಆರಂಭವಾದ ಬಳಿಕ ಕಂಪನಿಯು ಒಪ್ಪಂದದಂತೆ ಯಾವುದೇ ಪ್ರಚಾರ ಅಥವಾ ವ್ಯಾಪಾರ ಬೆಂಬಲವನ್ನು ನೀಡಲಿಲ್ಲ. ಅಷ್ಟೇ ಅಲ್ಲದೆ, ಜ್ಯುವೆಲ್ಲರಿ ಆಭರಣಗಳ ಪೂರೈಕೆಯನ್ನೂ ಹಠಾತ್ತನೆ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ತಮ್ಮ ಶೋರೂಮ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿ, ಕೋಟಿಗಟ್ಟಲೆ ರೂಪಾಯಿ ಆರ್ಥಿಕ ನಷ್ಟ ಅನುಭವಿಸಬೇಕಾಯಿತು ಎಂದು ಅವರು ಆರೋಪಿಸಿದ್ದಾರೆ.

ಸಲ್ಮಾನ್ ಖಾನ್ ಬದಲಿಗೆ ಆಯುಷ್ ಶರ್ಮಾ ಭೇಟಿ:

ಶೋರೂಮ್ ಉದ್ಘಾಟನೆಗೆ ಖುದ್ದು ನಟ ಸಲ್ಮಾನ್ ಖಾನ್ ಆಗಮಿಸಲಿದ್ದಾರೆ ಎಂದು ಕಂಪನಿಯ ಪ್ರತಿನಿಧಿಗಳು ಭರವಸೆ ನೀಡಿದ್ದರು ಎಂದು ಉದ್ಯಮಿ ತಿಳಿಸಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಸಲ್ಮಾನ್ ಖಾನ್ ಬದಲಿಗೆ ಅವರ ಭಾವ, ನಟ ಆಯುಷ್ ಶರ್ಮಾ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದರು. ಕೊಟ್ಟ ಮಾತು ತಪ್ಪಿದ್ದಕ್ಕೆ ಹಾಗೂ ವ್ಯವಹಾರದಲ್ಲಿ ಆದ ನಷ್ಟಕ್ಕೆ ಸಂಬಂಧಪಟ್ಟವರು ಸೂಕ್ತ ಸ್ಪಂದನೆ ನೀಡಲಿಲ್ಲ ಎಂಬುದು ಗುಪ್ತಾ ಅವರ ದೂರು.

ಇದನ್ನೂ ಓದಿ: ವಿಪರೀತ ತೂಕ ಕಡಿಮೆ ಆಗಿದ್ದರ ಬಗ್ಗೆ ಮೌನ ಮುರಿದ ನಟ ಸಲ್ಮಾನ್ ಖಾನ್

ಕಂಪನಿಯ ಸ್ಪಷ್ಟನೆ:

ಈ ವಿವಾದದ ಕುರಿತು ಹಿಂದೆ ಸ್ಪಷ್ಟನೆ ನೀಡಿದ್ದ ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ವ್ಯವಹಾರದ ಲೈಸೆನ್ಸ್ ಹೊಂದಿರುವ ಕಂಪನಿಯು, ಫ್ರಾಂಚೈಸಿ ಒಪ್ಪಂದದಲ್ಲಿ ಸಲ್ಮಾನ್ ಖಾನ್ ಅಥವಾ ಅವರ ಸಹೋದರಿ ಅಲ್ವಿರಾ ಯಾವುದೇ ರೀತಿಯ ನೇರ ಪಾಲುದಾರರಲ್ಲ ಎಂದು ತಿಳಿಸಿತ್ತು. ಆದ್ದರಿಂದ ಈ ವ್ಯಾಪಾರ ವಿವಾದಕ್ಕೂ ಸಲ್ಮಾನ್ ಖಾನ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಕಂಪನಿ ಹೇಳಿಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ – Kannada News | Darshan’s lawyers saw Boss Kannada movie what were their opinion

ಬಾಸ್’ (Boss) ಸಿನಿಮಾ ಕಳೆದ ಕೆಲ ತಿಂಗಳುಗಳಿಂದ ಸಾಕಷ್ಟು ವಿವಾದ ಸೃಷ್ಟಿಸಿದ ಕನ್ನಡ ಸಿನಿಮಾ. ನಟ ದರ್ಶನ್ ಜೀವನ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬ ಸುದ್ದಿ ಹರಿದಾಡಿದ್ದ ಕಾರಣಕ್ಕೆ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಖುದ್ದು ವಿಜಯಲಕ್ಷ್ಮಿ ದರ್ಶನ್ ಅವರು ‘ಬಾಸ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆದರೆ ಚಿತ್ರತಂಡವು ಇದು ದರ್ಶನ್ ಕುರಿತ ಸಿನಿಮಾ ಅಲ್ಲ ಎಂದೇ ಹೇಳುತ್ತಾ ಬಂತು. ಆದರೆ ಇದೀಗ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾ ರಿಲೀಸ್​​ಗೆ ಮುಂಚೆ, ದರ್ಶನ್ ಪರ ವಕೀಲರು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ವಕೀಲರು ಹೇಳಿದ್ದೇನೆಂದು, ಸಿನಿಮಾದ ನಟ ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ, ಅಷ್ಟಕ್ಕೂ ಆಗಿದ್ದೇನು? – Kannada News | Congress Ahinda MLAs Upset On Siddaramaiah over Not recommended Names For Minister Post

ಬೆಂಗಳೂರು, (ಆಗಸ್ಟ್ 06): ಸಂಪುಟ ಪುನಾರಚನೆ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್​​​​​​ನಲ್ಲಿ (Karnataka Congress) ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ಹಲವು ಹಿರಿಯ-ಕಿರಿಯ ಶಾಸಕರು ಬೇಸರಗೊಂಡಿದ್ದು, ಅವರನ್ನ ಮನವೊಲಿಸುವ ಯತ್ನವೂ ಸಹ ನಡೆದಿದೆ. ಇದರ ಮಧ್ಯೆ ಇನ್ನೊಂದೆಡೆ ಅಹಿಂದ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ  (Siddaramaiah) ಮೇಲೆ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತೀವ್ರ ಬೇಸರಗೊಂಡಿರುವ ಹೆಚ್ ಸಿ ಮಹದೇವಪ್ಪ ಅವರು ದೆಹಲಿಗೆ ಹಾರಿದ್ದಾರೆ.

ಸಚಿವ ಸ್ಥಾನಕ್ಕೆ ಸಿದ್ದರಾಮಯ್ಯನವರು ತಮ್ಮ ಹೆಸರು ಶಿಫಾರಸು ಮಾಡಿದ್ದಾರೆ ಎಂದು ಹಲವು ಶಾಸಕರು ನಂಬಿದ್ದರು. ಆದ್ರೆ, ಸುರ್ಜೆವಾಲಾ ಜೊತೆಗೆ ಚರ್ಚೆ ವೇಳೆ ರಾಜ್ಯ ನಾಯಕರು ಶಿಫಾರಸು ಮಾಡಿದ್ದ ಹೆಸರುಗಳು ಬಹಿರಂಗವಾಗಿದ್ದು, ಆಂತರಿಕ ಚರ್ಚೆ ವೇಳೆ ಸಿದ್ದರಾಮಯ್ಯ ,ಡಿಕೆ ಶಿವಕುಮಾರ್ ರೆಫರ್ ಮಾಡಿದ್ದ ಲಿಸ್ಟ್ ಬಿಚ್ಚಿಡಲಾಗಿದೆ. ಈ ವೇಳೆ ಸಿದ್ದರಾಮಯ್ಯ ಕೆಲವೇ ಕೆಲವು ಹೆಸರುಗಳನ್ನು ಮಾತ್ರ ಶಿಫಾರಸು ಮಾಡಿದ್ದರು ಎನ್ನುವುದು ಗೊತ್ತಾಗಿದೆ. ಅಹಿಂದ ಶಾಸಕರ ಪರವಾಗಿ ಸಿದ್ದರಾಮಯ್ಯ ಪ್ರಬಲ ವಾದ ಮಂಡಿಸಿಲ್ಲ. ಸಿದ್ದರಾಮಯ್ಯ ತಮಗೆ ಸಚಿವ ಸ್ಥಾನ ಕೊಡಿಸುತ್ತಾರೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದರು. ಆದ್ರೆ, ಇದೀಗ ಎಲ್ಲ ಸಚಿವ ಸ್ಥಾನಕ್ಕೆ ತಮ್ಮ ಹೆಸರುಗಳನ್ನ ಶಿಫಾರಸ್ಸು ಮಾಡಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಸಿದ್ದರಾಮಯ್ಯನವರ ನಡೆಗೆ ಅಸಮಾಧಾನಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಶಾಪ್​​ ದರೋಡೆಗೆ ಯತ್ನ: ಮಾಲೀಕನ ಮೇಲೆ ಗುಂಡಿನ ದಾಳಿ – Kannada News | Nelamangala Gold Shop Owner Shot During Robbery Attempt in Dabaspete

ನೆಲಮಂಗಲ, ಆಗಸ್ಟ್​ 06: ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ (firing) ನಡೆಸಿ ದರೋಡೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ನಡೆದಿದೆ. ದಾಬಸ್‌ಪೇಟೆಯ ಪ್ರೇಮ್ ಶಿವ ಜ್ಯುವೆಲರಿ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದ್ದು, ದಾಳಿಯಲ್ಲಿ ಮಾಲೀಕ ಪುನ್ನಾರಾಮ್ ಗಾಯಗೊಂಡಿದ್ದಾರೆ. ಸದ್ಯ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದಿದ್ದೇನು?

ಬೊಲೆರೋ ಕಾರಿನಲ್ಲಿ ಆಗಮಿಸಿದ್ದ ಐದಾರು ಜನರ ತಂಡ, ಆಭರಣ ಖರೀದಿಸುವವರಂತೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ನುಗ್ಗಿದೆ. ಬಳಿಕ ಚಿನ್ನಾಭರಣಗಳನ್ನು ದರೋಡೆ ಮಾಡಲು ಯತ್ನಿಸಿದ್ದು, ಈ ವೇಳೆ ಮಾಲೀಕ ಪುನ್ನಾರಾಮ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆರಳಿದ ದರೋಡೆಕೋರರು ಅವರ ಮೇಲೆ ಏಕಾಏಕಿ ಫೈರಿಂಗ್ ಮಾಡಿ ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಗುಂಡಿನ ಸದ್ದು: ಬೆಚ್ಚಿಬಿದ್ದ ಅಪಾರ್ಟ್‌ಮೆಂಟ್‌ ಜನರು; ನಡೆದಿದ್ದೇನು?

ಇನ್ನು ಘಟನಾ ಸ್ಥಳ ಪರಿಶೀಲನೆ ವೇಳೆ ಅಂಗಡಿಯಲ್ಲಿ 2 ಜೀವಂತ ಗುಂಡುಗಳು ಪತ್ತೆಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು, ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ್ದ ಆಟೋ ಕದ್ದು ಪರಾರಿಯಾದ ಖದೀಮರು

ಮನೆ ಮುಂದೆ ನಿಲ್ಲಿಸಿದ್ದ ಆಟೋ ಕದ್ದು ಖದೀಮರು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಜಕ್ಕಸಂದ್ರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಚಿಕ್ಕಮಗಳೂರು ನಿವಾಸಿ  ಸುನೀಲ್ ಅವರು 9 ತಿಂಗಳ ಹಿಂದಷ್ಟೇ ಹೊಸ ಆಟೋ ಖರೀದಿ ಮಾಡಿದ್ದರು.

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆ ಮಾತು ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

ತಡರಾತ್ರಿ ಹೊಂಚುಹಾಕಿದ್ದ ಮೂವರು ಕಳ್ಳರು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆಟೋ ಕದ್ದು ಪರಾರಿ ಆಗಿದ್ದಾರೆ. ಕಳ್ಳರು ಆಟೋ ಕದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version