ಗೃಹಲಕ್ಷ್ಮಿ ಅಲ್ಲ ಚುನಾವಣಾ ಲಕ್ಷ್ಮೀ: ರಾಜ್ಯ ಸರ್ಕಾರದ ನಡೆಗೆ ವಿಜಯೇಂದ್ರ ವ್ಯಂಗ್ಯ – Kannada News | Vijayendra Slams Congress over Guarantees, Alleges Mismanagement and Betrayal of Voters

ಬೆಂಗಳೂರು, ಜೂನ್​​ 14: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ನಿರ್ವಹಣೆ ಬಗ್ಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಸಾಕಷ್ಟು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿತ್ತು. ಆದರೆ, ಈಗ ಗ್ಯಾರಂಟಿಗಳು ಸರಿಯಾಗಿ ತಲುಪುತ್ತಿಲ್ಲ ಮತ್ತು ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಆರೋಪಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯನ್ನು 4-5 ತಿಂಗಳುಗಳ ಕಾಲ ತಡೆಹಿಡಿದು, ಚುನಾವಣೆ ಬಂದಾಗ ಚುನಾವಣಾ ಲಕ್ಷ್ಮಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ಅಲ್ಲದೆ, ಗ್ಯಾರಂಟಿಗಳಿಂದ ಉಂಟಾದ ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ಲಕ್ಷಾಂತರ ಫಲಾನುಭವಿಗಳನ್ನು ಕಡಿತಗೊಳಿಸುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಿದೆ ಎಂದು ಅವರು ಟೀಕಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ! ಹಿಪ್ಪೋ ಹಾಗೂ ಜೀಬ್ರಾ ಮರಿಗಳ ಜನನ! – Kannada News | Bannerghatta Biological Park: Cheetahs Open for Public View, New Hippo and Zebra Calves Born

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಸೇರ್ಪಡೆ

ಬೆಂಗಳೂರು, ಜೂನ್ 14: ವನ್ಯಜೀವಿ ಪ್ರಿಯರಿಗೆ ಹಾಗೂ ಪ್ರವಾಸಿಗರಿಗೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ  ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಕರೆತರಲಾಗಿದ್ದ ಚೀತಾಗಳು ಯಶಸ್ವಿಯಾಗಿ ಹೊಸ ವಾತಾವರಣಕ್ಕೆ ಹೊಂದಿಕೊಂಡಿದ್ದು, ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿವೆ. ಇದರೊಂದಿಗೆ ಉದ್ಯಾನದಲ್ಲಿ ಜೀಬ್ರಾ ಮತ್ತು ನೀರಾನೆ ಮರಿಗಳು ಜನಿಸಿರುವುದು ಮೃಗಾಲಯದ ಸಂತಸವನ್ನು ಇಮ್ಮಡಿಗೊಳಿಸಿದೆ.

ಮುಖ್ಯಾಂಶಗಳು

  • ಬನ್ನೇರುಘಟ್ಟ ಉದ್ಯಾನವನದಲ್ಲಿ ಹೊಸದಾಗಿ ಚೀತಾಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
  • ಮೃಗಾಲಯದ ಉದ್ಯಾನದಲ್ಲಿ ಮುದ್ದಾದ ಜೀಬ್ರಾ ಮತ್ತು ಹಿಪ್ಪೋಪೊಟಮಸ್ ಮರಿಗಳು ಜನಿಸಿವೆ.
  • ದಕ್ಷಿಣ ಆಫ್ರಿಕಾದಿಂದ ಬಂದ ಚೀತಾಗಳು ಕ್ವಾರಂಟೈನ್ ಮುಗಿಸಿ ಪ್ರದರ್ಶನಕ್ಕೆ ಸಜ್ಜಾಗಿವೆ.

ಉದ್ಯಾನದಲ್ಲಿ ಜೀಬ್ರಾ ಮತ್ತು ಹಿಪ್ಪೋ ಮರಿಗಳ ಕಲರವ

ಮೃಗಾಲಯದ ಸಂರಕ್ಷಣಾ ಸಂತಾನೋತ್ಪತ್ತಿ ಕಾರ್ಯಕ್ರಮಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ‘ಕಬಿನಿ’ ಹೆಸರಿನ ಜೀಬ್ರಾ ಆರೋಗ್ಯವಂತ ಹೆಣ್ಣು ಮರಿಗೆ ಜನ್ಮ ನೀಡಿದೆ. ನವಜಾತ ಮರಿ ತಾಯಿಯ ಹಾಲನ್ನು ಕುಡಿಯುತ್ತಾ ಸಕ್ರಿಯವಾಗಿದ್ದು, ಇದರ ಸೇರ್ಪಡೆಯೊಂದಿಗೆ ಉದ್ಯಾನದಲ್ಲಿನ ಜೀಬ್ರಾಗಳ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಮತ್ತೊಂದೆಡೆ, ‘ದಶ್ಯಾ’ ಹೆಸರಿನ ಹೆಣ್ಣು ನೀರಾನೆ ಕೂಡ ಮುದ್ದಾದ ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಯ ಆರಂಭಿಕ ಹಂತದ ನೈಸರ್ಗಿಕ ಬಾಂಧವ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಸಿಬ್ಬಂದಿ ವಿಶೇಷ ಮುನ್ನೆಚ್ಚರಿಕೆ ವಹಿಸಿದ್ದಾರೆ ಹಾಗೂ ಪ್ರಾಣಿ ಆವರಣದ ಸುತ್ತ ಸಾರ್ವಜನಿಕರಿಂದ ಯಾವುದೇ ತೊಂದರೆಯಾಗದಂತೆ ನಿಗಾ ಇರಿಸಿದ್ದಾರೆ.

ಹೊಸ ಪರಿಸರಕ್ಕೆ ಹೊಂದಿಕೊಂಡ ದಕ್ಷಿಣ ಆಫ್ರಿಕಾದ ಚೀತಾಗಳು

ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ದಕ್ಷಿಣ ಆಫ್ರಿಕಾದ ಇಂದೂನಾ ಪ್ರೈಮೇಟ್ ಆಂಡ್ ಪ್ಯಾರಟ್ ಪಾರ್ಕ್‌ನಿಂದ ಕರೆತರಲಾಗಿದ್ದ ಎರಡು ಗಂಡು ಮತ್ತು ಎರಡು ಹೆಣ್ಣು ಚೀತಾಗಳು ತಮ್ಮ ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಈ ಅವಧಿಯಲ್ಲಿ ಪಶುವೈದ್ಯರು ಹಾಗೂ ಪ್ರಾಣಿ ಪಾಲನಾ ಸಿಬ್ಬಂದಿ ಅವುಗಳ ಆರೋಗ್ಯ, ಆಹಾರ ಪದ್ಧತಿ ಮತ್ತು ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹಗಲಿರುಳು ಸೂಕ್ಷ್ಮವಾಗಿ ಗಮನಿಸಿದ್ದರು. ಎಲ್ಲಾ ತಪಾಸಣೆಗಳು ತೃಪ್ತಿಕರವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಇದೀಗ ಅವುಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾದ ವಿಶಾಲವಾದ ಹೊರಾಂಗಣ ಆವರಣಕ್ಕೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳ ಪ್ರಕಾರ, ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಗಳು ಉದ್ಯಾನವನದ ವೈಜ್ಞಾನಿಕ ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ನೀಡುತ್ತಿರುವ ಆದ್ಯತೆಗೆ ಸಾಕ್ಷಿಯಾಗಿದೆ. ಮಾನವನ ಆರೈಕೆಯಲ್ಲೂ ವನ್ಯಜೀವಿಗಳು ನೈಸರ್ಗಿಕವಾಗಿ ವೃದ್ಧಿಯಾಗಲು ಪೂರಕ ವಾತಾವರಣವನ್ನು ಸೃಷ್ಟಿಸಿರುವುದಾಗಿ ಬಿಬಿಪಿ ಹೆಮ್ಮೆಯಿಂದ ಹೇಳಿಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಮೆರಿಕದೊಂದಿಗಿನ ಶಾಂತಿ ಮಾತುಕತೆ ಅಂತಿಮವಾಗಿಲ್ಲ, ಇವತ್ತೇ ಸಹಿ ಹಾಕಲ್ಲ ಎಂದ ಇರಾನ್ – Kannada News | US Iran Peace Prospects: Virtual Talks and the Path to a Permanent Accord

ಟೆಹ್ರಾನ್, ಜೂನ್ 14: ಅಮೆರಿಕ ಮತ್ತು ಇರಾನ್ ನಡುವೆ ಶಾಶ್ವತ ಶಾಂತಿ ಒಪ್ಪಂದದ ಕುರಿತು ಮಹತ್ವದ ವರ್ಚುವಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಉಭಯ ದೇಶಗಳು ಮಾತ್ರವಲ್ಲದೆ, ಮಧ್ಯಸ್ಥಿಕೆ ವಹಿಸಿರುವ ರಾಷ್ಟ್ರಗಳ ಪ್ರತಿನಿಧಿಗಳು ಸಹ ಭಾಗಿಯಾಗಲಿದ್ದಾರೆ. ಒಪ್ಪಂದದ ಪತ್ರದಲ್ಲಿ ಪರಸ್ಪರ ಡಿಜಿಟಲ್ ಸಹಿ ಹಾಕಿ ಶಾಂತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ. ಈ ವರ್ಚುವಲ್ ಸಭೆಯಲ್ಲಿ ಯುದ್ಧ ಅಂತ್ಯದ ಬಗ್ಗೆ ಘೋಷಣೆ ಆಗುವ ಸಾಧ್ಯತೆಯಿದ್ದು, ಪ್ರಸ್ತಾವಿತ ಒಪ್ಪಂದದಂತೆ ಕದನ ವಿರಾಮವನ್ನು 60 ದಿನಗಳವರೆಗೆ ವಿಸ್ತರಿಸಲಾಗುವುದು. ಈ ಪ್ರಕ್ರಿಯೆಯೊಂದಿಗೆ ಹಾರ್ಮೋಸ್ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸಲಾಗುವುದು. ಮುಂದಿನ ವಾರದಿಂದ ತಾಂತ್ರಿಕ ಮಟ್ಟದ ಮಾತುಕತೆಗಳು ಆರಂಭವಾಗಲಿದ್ದು, ಕದನ ವಿರಾಮದ ಅವಧಿಯಲ್ಲೇ ಪರಮಾಣು ಕಾರ್ಯಕ್ರಮದ ಬಗ್ಗೆಯೂ ಮಾತುಕತೆ ನಡೆಯಲಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಎಂದಿಗೂ ಅಣುವಸ್ತ್ರ ಹೊಂದುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಖರೀದಿ ಮತ್ತು ಸಂಶೋಧನೆ ಸೇರಿದಂತೆ ಯಾವುದೇ ರೀತಿಯಲ್ಲಿ ಅಣುವಸ್ತ್ರ ನಿಷೇಧಕ್ಕೆ ಒಪ್ಪಂದದಲ್ಲಿ ಒತ್ತು ನೀಡುವ ಸಾಧ್ಯತೆಯಿದೆ. ಇರಾನ್ ಒಳಗೆ ಯುರೇನಿಯಂ ದುರ್ಬಲಗೊಳಿಸುವ ಪ್ರಸ್ತಾಪವೂ ಇದ್ದು, ಒಪ್ಪಂದದ ಬಳಿಕ ಇರಾನ್‌ನ ನ್ಯೂಕ್ಲಿಯರ್ ಡಸ್ಟ್ ಧ್ವಂಸವಾಗಲಿದೆ. ಪರಮಾಣು ತ್ಯಾಜ್ಯವನ್ನು ನಾಶಪಡಿಸಲು ಅಮೆರಿಕ ಯೋಜನೆ ರೂಪಿಸುತ್ತಿದೆ.

ಆದರೆ, ಈ ಒಪ್ಪಂದದ ಬಗ್ಗೆ ಇರಾನ್ ಕಡೆಯಿಂದ ಇನ್ನೂ ಸ್ಪಷ್ಟ ಮತ್ತು ಏಕರೂಪದ ನಿಲುವು ಕಂಡುಬಂದಿಲ್ಲ. ಇರಾನ್‌ನ ವಿದೇಶಾಂಗ ಇಲಾಖೆಯ ವಕ್ತಾರ ಬಗಾಯಿ ಅವರು, ಅಮೆರಿಕ-ಇರಾನ್ ನಡುವಿನ ಒಪ್ಪಂದಕ್ಕೆ ಇಂದು ಸಹಿ ಹಾಕುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಅವರು ತಳ್ಳಿಹಾಕದಿದ್ದರೂ, ಒಪ್ಪಂದದಲ್ಲಿ ಪರಮಾಣು ಕಾರ್ಯಕ್ರಮದ ಬಗ್ಗೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಇರಾನ್ ನಾಯಕರಲ್ಲೇ ಒಪ್ಪಂದದ ಬಗ್ಗೆ ದ್ವಂದ್ವಗಳಿವೆ ಎಂಬುದನ್ನು ಸೂಚಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

1921ರ ದಂಗೆ, ಬಿಟಿಷರ ಬಾಲ್ ಬಾಯ್ಸ್, ಕೇರಳಂ ಫುಟ್​​ಬಾಲ್ ಕ್ರೇಝ್! – Kannada News | The Epic Journey of Kerala Football

“ಭಾರತದ ನಕ್ಷೆಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಸಂಭ್ರಮಿಸುವ ಕೋಟ್ಯಂತರ ಜನರ ನಡುವೆ, ಕಾಲಿಗೆ ಚೆಂಡು ಸಿಕ್ಕರೆ ಸಾಕು ಇಡೀ ಜಗತ್ತನ್ನೇ ಮರೆಯುವ ಒಂದು ಸುಂದರ ರಾಜ್ಯವಿದೆ, ಅದುವೇ ಕೇರಳಂ! ಇಡೀ ದೇಶ ಕ್ರಿಕೆಟ್ ಜ್ವರದಲ್ಲಿ ಮುಳುಗಿರುವಾಗ, ಕೇರಳದ ಮಲಬಾರ್ ಗದ್ದೆಗಳಲ್ಲಿ ಮತ್ತು ಕರಾವಳಿಯ ತೀರಗಳಲ್ಲಿ ಮಾತ್ರ ಫುಟ್‌ಬಾಲ್ ಎಂಬ ಮಾಂತ್ರಿಕ ಆಟದ ಸದ್ದು ಮೊಳಗುತ್ತಿರುತ್ತದೆ. ಅಲ್ಲಿನ ಜನರಿಗೆ ಫುಟ್‌ಬಾಲ್ ಕೇವಲ 90 ನಿಮಿಷಗಳ ಆಟವಲ್ಲ, ಅದೊಂದು ಭಾವನೆ, ಉಸಿರು ಮತ್ತು ಪರಂಪರೆ. ಆದರೆ, ಭಾರತೀಯ ಫುಟ್‌ಬಾಲ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಕೇರಳದ ಮಣ್ಣಿನಲ್ಲಿ ಈ ಕ್ರೀಡೆಯ ಬೇರುಗಳು ಇಷ್ಟೊಂದು ಆಳವಾಗಿ ಇಳಿಯಲು ಒಂದು ಶತಮಾನದ ಹಿಂದಿನ ರೋಚಕ ಇತಿಹಾಸ ಮತ್ತು ಬ್ರಿಟಿಷ್ ಸೈನಿಕರ ವಿರುದ್ಧ ನಡೆದ ‘ಬರಿಗಾಲಿನ ಪ್ರತಿರೋಧ’ ಕಾರಣ ಎಂಬುದು ತಿಳಿಯುತ್ತದೆ. ಆ ರೋಚಕ ಕಥೆಯ ವಿವರ ಇಲ್ಲಿದೆ…”

ಕೇರಳದ ಫುಟ್​​ಬಾಲ್ ಹಿಸ್ಟರಿ ಶುರುವಾಗುವುದು 1921 ರಿಂದ. ಅಂದರೆ ಸ್ವಾತಂತ್ರ ಪೂರ್ವದಲ್ಲೇ ಕೇರಳದಲ್ಲಿ ಕಾಲ್ಚೆಂಡಿನಾಟದ ಕ್ರೇಝ್ ಶುರುವಾಗಿತ್ತು. ಇಂತಹದೊಂದು ಕ್ರೇಝ್ ಹುಟ್ಟುಹಾಕಿದ್ದು ಬ್ರಿಟಿಷರು.

1921ರಲ್ಲಿ ನಡೆದ ಮಲಬಾರ್ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರು ಮಲಪ್ಪುರಂ ಅನ್ನು ತಮ್ಮ ಪ್ರಮುಖ ಮಿಲಿಟರಿ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಅಲ್ಲದೆ ಇದಕ್ಕಾಗಿ ಮಲಬಾರ್ ಸ್ಪೆಷಲ್ ಪೊಲೀಸ್ (MSP) ದಳವನ್ನು ಸಹ ಸ್ಥಾಪಿಸಿದ್ದರು.

ಹೀಗೆ ಮಲಬಾರ್ ತೀರಕ್ಕೆ ಬಂದ ಬ್ರಿಟಿಷ್ ಸೈನಿಕರು ತಮ್ಮ ದೈಹಿಕ ಫಿಟ್‌ನೆಸ್ ಹಾಗೂ ಬಿಡುವಿನ ವೇಳೆಯ ವಿನೋದಕ್ಕಾಗಿ ಬ್ಯಾರಾಕ್ಸ್ ಮೈದಾನಗಳಲ್ಲಿ ಫುಟ್‌ಬಾಲ್ ಆಡಲು ಆರಂಭಿಸಿದರು.

ಬ್ರಿಟಿಷರ ಕಾಲ್ಚೆಂಡಾಟವನ್ನು ಸ್ಥಳೀಯ ಮಲಯಾಳಿ ಯುವಕರು ಮೈದಾನದ ಬೇಲಿಯ ಆಚೆಯಿಂದ ನಿಂತು ಕುತೂಹಲದಿಂದ ಗಮನಿಸುತ್ತಿದ್ದರು. ಈ ಕುತೂಹಲವೇ ಯುವಕರನ್ನು ಹೊಸ ಕ್ರೀಡೆಯತ್ತ ಸೆಳೆಯಿತು.

ಬಾಲ್ ಬಾಯ್ಸ್​:

ಆರಂಭದಲ್ಲಿ ಬ್ರಿಟಿಷ್ ಸೈನಿಕರಿಗೆ ಬಾಲ್ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದ ಸ್ಥಳೀಯ ಯುವಕರು, ಕ್ರಮೇಣ ತಾವೂ ಆಟವನ್ನು ಕಲಿತರು. ಅಲ್ಲದೆ  ಸುಗ್ಗಿಯ ನಂತರದ ಗದ್ದೆಗಳಲ್ಲಿ ಆಡಲು ಆರಂಭಿಸಿದರು.

ಹೀಗೆ ಶುರುವಾದ ಆಟ ಆ ಬಳಿಕ ಬ್ರಿಟಿಷರೊಂದಿಗೆ ಜಿದ್ದಾಟವಾಗಿ ಬದಲಾಯಿತು. ಮಲಬಾರ್‌ನ ಯುವಕರಿಗೆ ಬ್ರಿಟಿಷರನ್ನು ಮೈದಾನದಲ್ಲಿ ಸೋಲಿಸುವುದು ಕೇವಲ ಆಟವಾಗಿರಲಿಲ್ಲ, ಅದು ತಮ್ಮನ್ನು ತುಳಿದಿದ್ದ ವಸಾಹತುಶಾಹಿ ಆಡಳಿತದ ವಿರುದ್ಧ ಕ್ರೀಡೆಯ ಮೂಲಕ ಸೇಡು ತೀರಿಸಿಕೊಳ್ಳುವ ತೀವ್ರವಾದ ರಾಷ್ಟ್ರೀಯತಾ ಭಾವನೆಯಾಗಿತ್ತು.

ಫುಟ್​ಬಾಲ್ ಮೆಕ್ಕಾ: ಮಲಪ್ಪುರಂ

MSP ದಳವು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ತಂಡಕ್ಕೆ ಸೇರಿಸಿಕೊಳ್ಳಲು ಆರಂಭಿಸಿದಾಗ, ಫುಟ್‌ಬಾಲ್ ಇಡೀ ಮಲಬಾರ್‌ನ ಹಳ್ಳಿ ಹಳ್ಳಿಗಳಿಗೆ ಹರಡಿತು. ಮಲಪ್ಪುರಂ ಜಿಲ್ಲೆಯು ಎಷ್ಟು ಪ್ರಸಿದ್ಧವಾಯಿತೆಂದರೆ, ಅದನ್ನು “ಕೇರಳದ ಫುಟ್‌ಬಾಲ್ ಮೆಕ್ಕಾ” ಎಂದು ಕರೆಯಲಾಯಿತು. ಇಲ್ಲಿಂದಲೇ ಮುಂದೆ ಭಾರತ ತಂಡವನ್ನು ಪ್ರತಿನಿಧಿಸಿದ ಒಲಿಂಪಿಯನ್ ರೆಹಮಾನ್ ಅವರಂತಹ ದಂತಕಥೆಗಳು ಹೊರಹೊಮ್ಮಿದರು.

ಬ್ರೆಝಿಲ್ ಕನೆಕ್ಷನ್‌ಗೆ ಮುನ್ನುಡಿ:

ಬ್ರಿಟಿಷರಿಂದ ಫುಟ್‌ಬಾಲ್ ಕಲಿತರೂ, ಕೇರಳದ ಜನರಿಗೆ ಬ್ರಿಟಿಷ್ ಶೈಲಿಯ ‘ಲಾಂಗ್ ಬಾಲ್’ ಆಟ ಇಷ್ಟವಾಗಲಿಲ್ಲ. ಲಾಂಗ್ ಬಾಲ್ ಆಟ ಎಂದರೆ ಮೈದಾನದ ಒಂದು ಕಡೆಯಿಂದ ಮತ್ತೊಂದು ಕಡೆಗೆ, ಅಂದರೆ ದೂರದಲ್ಲಿರುವ ತನ್ನದೇ ತಂಡದ ಆಟಗಾರನಿಗೆ ಚೆಂಡನ್ನು ಗಾಳಿಯಲ್ಲೇ ಎತ್ತಿ ಪಾಸ್ ಮಾಡುವ ಒಂದು ಪ್ರಮುಖ ತಂತ್ರವಾಗಿದೆ.

ಆದರೆ ಫುಟ್​​ಬಾಲ್ ಕರಗತವಾಗುತ್ತಿದ್ದಂತೆ ಮಲಯಾಳಿಗಳು ಈ ಲಾಂಗ್ ಬಾಲ್​​ ಆಟದಿಂದ ದೂರ ಸರಿಯಲಾರಂಭಿಸಿದರು. ಬದಲಿಗೆ ಅವರು ಮೈದಾನದಲ್ಲೇ ಸಣ್ಣ ಸಣ್ಣ ಪಾಸ್‌ಗಳನ್ನು ನೀಡುತ್ತಾ ಕಲಾತ್ಮಕವಾಗಿ ಆಡಲು ಬಯಸುತ್ತಿದ್ದರು.

ಮುಂದೆ 1950-70ರ ದಶಕದಲ್ಲಿ ಬ್ರೆಝಿಲ್ ತಂಡದ ‘ಸಾಂಬಾ ಶೈಲಿ’ ಮತ್ತು ‘ಜೋಗಾ ಬೋನಿಟೋ’ ಜಗತ್ತಿಗೆ ಪರಿಚಯವಾದಾಗ, ಮಲಬಾರ್‌ನ ಜನರಿಗೆ ತಮ್ಮದೇ ಆಟದ ಸುಧಾರಿತ ರೂಪ ಬ್ರೆಝಿಲ್‌ನವರ ಆಟದಲ್ಲಿ ಕಂಡಿತು. ಬ್ರಿಟಿಷರ ಮೇಲಿನ  ಕೋಪ ಮತ್ತು ಬ್ರೆಝಿಲ್‌ನ ಆಟದ ಮೇಲಿನ ಪ್ರೀತಿ ಎರಡೂ ಸೇರಿ ಇಂದಿನ ಹಳದಿ-ಹಸಿರು ಉನ್ಮಾದಕ್ಕೆ ಕಾರಣವಾಯಿತು.

ಪೆಲೆ ಎಂಬ ಜಾದೂಗಾರ:

ಒಂದೆಡೆ ಸಾಂಬಾ ಶೈಲಿಯ ಫುಟ್​​ಬಾಲ್ ಅನ್ನು ಪ್ರೀತಿಸಲಾರಂಭಿಸಿದ ಮಲಯಾಳಿಗಳಿಗೆ ಹೀರೋ ಆಗಿ ಪೆಲೆ ಎಂಬ ಜಾದೂಗಾರ ಸಿಕ್ಕಿದ. 1958, 1962 ಮತ್ತು 1970ರಲ್ಲಿ ಬ್ರೆಝಿಲ್ ವಿಶ್ವಕಪ್ ಗೆದ್ದಾಗ ಪೆಲೆ, ಗಾರಿಂಚಾ ಕೇರಳದಲ್ಲಿ ಮನೆ ಮಾತಾದರು.

ಅದರಲ್ಲೂ ಕಡುಬಡತನದಿಂದ ಬಂದ ಕಪ್ಪು ವರ್ಣದ ಆಟಗಾರರು ಫುಟ್​​​ಬಾಲ್ ಜಗತ್ತನ್ನು ಆಳುತ್ತಿರುವುದು ಮಲಯಾಳಿಗಳನ್ನು ಹೆಚ್ಚು ಆಕರ್ಷಿಸಿತು. ಇದು ಮಲಬಾರಿನ ಜನಸಾಮಾನ್ಯರಲ್ಲಿ ಮತ್ತು ಶೋಷಿತ ವರ್ಗದಲ್ಲಿ ತಾವೂ ಏನನ್ನಾದರೂ ಸಾಧಿಸಬಹುದು ಎಂಬ ದೊಡ್ಡ ಭರವಸೆ ಮೂಡಿಸಿತು.

ಈ ಭರವಸೆ ಮುಂದೆ ಕನಸುಗಳಾಯಿತು. ಈ ಕನಸುಗಳು ಫುಟ್​​ಬಾಲ್ ಉನ್ಮಾದವಾಯಿತು. ಇದೇ ಕಾರಣಕ್ಕೆ ಇಂದಿಗೂ ವಿಶ್ವಕಪ್ ಬಂದಾಗ ಮಲಬಾರ್‌ನ ಹಳ್ಳಿಹಳ್ಳಿಗಳಲ್ಲಿ ಬ್ರೆಝಿಲ್‌ನ ಹಳದಿ-ಹಸಿರು ಧ್ವಜಗಳು, ಪೆಲೆ, ರೊನಾಲ್ಡೊ, ರೊನಾಲ್ಡಿನೊ ಮತ್ತು ನೇಮರ್ ಅವರ ದೈತ್ಯ ಕಟೌಟ್‌ಗಳು ರಾರಾಜಿಸುತ್ತವೆ.

ಇದನ್ನೂ ಓದಿ: FIFA World cup 2026: ಫುಟ್‌ಬಾಲ್ ಆಟವನ್ನೇ ಬದಲಿಸಲಿದೆ ಹೊಸ ನಿಯಮಗಳು!

ಒಟ್ಟಾರೆಯಾಗಿ, ಮಲಬಾರ್‌ನ ಈ ಹಳದಿ-ಹಸಿರು ಉನ್ಮಾದವು ಕೇವಲ 90 ನಿಮಿಷಗಳ ಆಟಕ್ಕೆ ಸೀಮಿತವಾದದ್ದಲ್ಲ, ಅದು ತಲೆಮಾರುಗಳಿಂದ ಹರಿದುಬಂದಿರುವ ಒಂದು ಜೀವಂತ ಪರಂಪರೆ. ಬ್ರೆಝಿಲ್‌ನ ಮಣ್ಣಿನ ‘ಜೋಗಾ ಬೋನಿಟೋ’ ಶೈಲಿ ಮತ್ತು ಮಲಬಾರ್‌ನ ಜನರ ಸಾಂಸ್ಕೃತಿಕ ಅಸ್ಮಿತೆ ಎರಡೂ ಒಂದಾಗಿ, ಭೌಗೋಳಿಕ ಗಡಿಗಳನ್ನು ಮೀರಿ ನಿಂತಿರುವ ಅಪರೂಪದ ಪ್ರೇಮಕಾವ್ಯವಿದು. ಜಗತ್ತಿನ ನಕ್ಷೆಯಲ್ಲಿ ಬ್ರೆಝಿಲ್ ಎಲ್ಲೋ ದೂರದಲ್ಲಿದ್ದರೂ, ವಿಶ್ವಕಪ್ ಬಂದಾಗಲೆಲ್ಲಾ ಮಲಬಾರ್‌ನ ಪ್ರತಿಯೊಂದು ಹಳ್ಳಿಯೂ ಮತ್ತೊಂದು ಪುಟ್ಟ ಬ್ರೆಝಿಲ್ ಆಗಿ ರೂಪಾಂತರಗೊಳ್ಳುತ್ತದೆ. ಫುಟ್‌ಬಾಲ್ ಕೇವಲ ಕ್ರೀಡೆಯಲ್ಲ, ಅದು ಮಲಬಾರಿನ ಪಾಲಿಗೆ ಒಂದು ಧರ್ಮ, ಒಂದು ಸಂಭ್ರಮ ಎಂಬುದೇ ಸತ್ಯ!

ಕೇರಳದ ಬ್ರೆಝಿಲ್​ ಪ್ರೇಮಿಗಳಿಗೆ ಅರ್ಜೆಂಟೀನಾ ಎದುರಾಳಿ ಆಗಿದ್ದು ಹೇಗೆ? ನಿರೀಕ್ಷಿಸಿ…

Source link

ಸ್ವಚ್ಛತಾ ಅಭಿಯಾನ: ರಸ್ತೆಯಲ್ಲಿ ಕಸಗುಡಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ – Kannada News | Nirmala Sitharaman Participates in Cleanliness Drive, Sweeps Streets

ಬೆಂಗಳೂರು, ಜೂನ್​ 14: ಸ್ವಚ್ಛತಾ ಅಭಿಯಾನದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​ ಭಾಗಿಯಾಗಿದ್ದು, ಮಾಸ್ಕ್, ಗ್ಲೌಸ್ ಹಾಕಿ ಕಸ ಗುಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಳಿಕ ತಳ್ಳುವ ತರಕಾರಿ ಗಾಡಿ ವ್ಯಾಪಾರಿಗಳ ಬಳಿ ಮಾತನಾಡಿದ ಸಚಿವರು, ಕೇಂದ್ರ ಯೋಜನೆಯಡಿ ಲೋನ್ ಸಂಬಂಧ ವಿಚಾರಿಸಿದ್ದಾರೆ. ಈ ವೇಳೆ ನಮಗೆ ಲೋನ್ ಕೊಡಿಸಿ ಎಂದು ವ್ಯಾಪಾರಿಗಳು ಸಚಿವರನ್ನು ಆಗ್ರಹಿಸಿದ ಪ್ರಸಂಗ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಕಾಲಾ ಹಿರಣ್’ ಚಿತ್ರತಂಡಕ್ಕೆ ದೆಹಲಿ ಹೈಕೋರ್ಟ್ ನೋಟಿಸ್: ಬಿಡುಗಡೆಗೆ ತಡೆ ಕೋರಿದ ಸಲ್ಮಾನ್ ಖಾನ್ – Kannada News | Delhi High Court issues notice to makers of Kala Hiran Movie after Salman Khan plea

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ, ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ನಿರ್ಮಾಪಕರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ. ಚಿತ್ರದ ಬಿಡುಗಡೆ ಮತ್ತು ಪ್ರಚಾರಕ್ಕೆ ತಡೆ ನೀಡಬೇಕು ಎಂದು ಸಲ್ಮಾನ್ ಖಾನ್ (Salman Khan) ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು, ಚಿತ್ರದ ನಿರ್ಮಾಪಕ ಅಮಿತ್ ಜಾನಿ, ಜಾನಿ ಫೈರ್‌ಫಾಕ್ಸ್ ಫಿಲ್ಮ್ಸ್, ನಿರ್ದೇಶಕ ಭರತ್ ಶ್ರೀನಾಥೆ ಮತ್ತು ಕಾಸ್ಟಿಂಗ್ ಡೈರೆಕ್ಟರ್ ಅಕ್ಷಯ್ ಪಾಂಡೆ ಸೇರಿದಂತೆ ಸಂಬಂಧಪಟ್ಟ ಇತರೆ ವ್ಯಕ್ತಿಗಳಿಗೆ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿದೆ.

ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ವಕೀಲ ನಿಜಾಮ್ ಪಾಶಾ, ‘ಮೇ 29ರಂದು ಬಿಡುಗಡೆಯಾದ ಚಿತ್ರದ ಪ್ರಚಾರದ ಪೋಸ್ಟರ್‌ನಲ್ಲಿರುವ ಪಾತ್ರವು ಸಲ್ಮಾನ್ ಖಾನ್ ಅವರನ್ನು ಹೋಲುವಂತಿದೆ. ಅಲ್ಲದೆ, ಸಲ್ಮಾನ್ ಖಾನ್ ಅವರ ಗುರುತಾಗಿರುವ ವಿಶಿಷ್ಟವಾದ ಬ್ಲೂ ಬ್ರೇಸ್‌ಲೆಟ್ ಮಾದರಿಯನ್ನೇ ಆ ಪಾತ್ರವೂ ಧರಿಸಿದೆ. ಇದು ನಟನ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವಂತೆ 2025ರ ಡಿಸೆಂಬರ್ 11ರಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಚಿತ್ರತಂಡವು ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಜೂನ್ 20ರಂದು ಬಿಡುಗಡೆಯಾಗಬೇಕಿದ್ದ ಟ್ರೇಲರ್ ಅನ್ನು ಹಠಾತ್ತನೆ ಶುಕ್ರವಾರವೇ (ಜೂನ್ 12) ಬಿಡುಗಡೆ ಮಾಡಿದೆ ಎಂದು ಸಲ್ಮಾನ್ ಖಾನ್ ಅವರ ಕಾನೂನು ತಂಡ ಕೋರ್ಟ್‌ಗೆ ತಿಳಿಸಿತು. ಸದ್ಯಕ್ಕೆ ಈ ಸಿನಿಮಾದ ಟ್ರೇಲರ್ ಸಖತ್ ವೈರಲ್ ಆಗುತ್ತಿದೆ.

ಕಾಲಾ ಹಿರಣ್ ಸಿನಿಮಾ ಟ್ರೇಲರ್:

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇವೆ. ಈ ಪ್ರಕರಣಕ್ಕೆ ಸಂಬಂಧಿಸಿದ 4 ಎಫ್‌ಐಆರ್‌ಗಳ ಪೈಕಿ ಮೂರರಲ್ಲಿ ಸಲ್ಮಾನ್ ಈಗಾಗಲೇ ಖುಲಾಸೆಗೊಂಡಿದ್ದಾರೆ. ಮತ್ತೊಂದು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಯಾವುದೇ ಅಂತಿಮ ಆದೇಶ ಬಂದಿಲ್ಲ. ಹೀಗಿರುವಾಗ ನಿರ್ಮಾಪಕರು ಸಲ್ಮಾನ್ ಖಾನ್ ಅವರ ಜನಪ್ರಿಯತೆ ಹಾಗೂ ವೈಯಕ್ತಿಕ ಜೀವನದ ಘಟನೆಗಳನ್ನು ಬಳಸಿಕೊಂಡು ವಾಣಿಜ್ಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ ಎಂದು ವಕೀಲರು ವಾದಿಸಿದರು.

ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ

ತಮ್ಮ ಅನುಮತಿಯಿಲ್ಲದೆ ತಮ್ಮ ಚಿತ್ರಣ, ಶೈಲಿ ಹಾಗೂ ಬ್ರೇಸ್‌ಲೆಟ್‌ನಂತಹ ವೈಯಕ್ತಿಕ ಗುರುತುಗಳನ್ನು ಬಳಸಿ ಸಿನಿಮಾ ಮಾಡಿರುವುದು ಕಾನೂನುಬಾಹಿರ ಮತ್ತು ಇದು ತಮ್ಮ ಘನತೆಗೆ ಧಕ್ಕೆ ತರುತ್ತದೆ ಎಂದು ಸಲ್ಮಾನ್ ಖಾನ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಪ್ರಕರಣದ ಮುಂದಿನ ನಿರ್ಧಾರವು ಜೂನ್ 19ರ ಕೋರ್ಟ್ ವಿಚಾರಣೆಯ ಮೇಲೆ ನಿಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಲಂಡನ್​​ನ ಅಪಾರ್ಟ್​ಮೆಂಟ್​​ನ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದ ಬಾಲಕಿಯನ್ನು ಕಾಪಾಡಿದ ಭಾರತೀಯ ವ್ಯಕ್ತಿ – Kannada News | London Hero: Indian Man Mohammed Jesil Saves Child Falling from Apartment Window

ಬಾಲಕಿಯ ಕಾಪಾಡಿದ ವ್ಯಕ್ತಿImage Credit source: Free Press Journal

ಲಂಡನ್, ಜೂನ್ 14: ಅಪಾರ್ಟ್​ಮೆಂಟ್​ನ ಕಿಟಕಿಯ ಅಂಚಿನಲ್ಲಿ ನೇತಾಡುತ್ತಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮೂರು ವರ್ಷದ ಹೆಣ್ಣು ಮಗು(Baby)ವನ್ನು ಭಾರತೀಯ ವ್ಯಕ್ತಿಯೊಬ್ಬರು ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಲಂಡನ್‌ನ ಇಲ್ಫೋರ್ಡ್ ಹೈ ಸ್ಟ್ರೀಟ್‌ನ ವಾಣಿಜ್ಯ ಸಂಕೀರ್ಣದಲ್ಲಿರುವ ಫ್ಲಾಟ್‌ನ ಕಿಟಕಿಯಿಂದ ಅದ್ಹೇಗೋ ಬಾಲಕಿ ಹೊರಬಂದಿದ್ದಾಳೆ, ಬಳಿಕ ಕಿಟಕಿ ಚೌಕಟ್ಟನ್ನು ಹಿಡಿದು ನೇತಾಡಿದ್ದಾಳೆ.

ಇದನ್ನು ಕಂಡ ರಸ್ತೆಯಲ್ಲಿದ್ದ ನೂರಾರು ಪ್ರೇಕ್ಷಕರು ದಿಗ್ಭ್ರಮೆಗೊಂಡರು. ಪಕ್ಕದ ಕಿಟಕಿಯಿಂದ ಮಹಿಳೆಯೊಬ್ಬಳು ಮಗುವನ್ನು ಎತ್ತಲು ಕೈಚಾಚಿದರೂ ಮಗು ಸಿಗುತ್ತಿರಲಿಲ್ಲ. ಇತ್ತ ಮಗುವಿನ ಕೈಗಳ ಶಕ್ತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿತ್ತು. ಯಾವುದೇ ಕ್ಷಣದಲ್ಲಾದರೂ ಮಗು ಕೆಳಗೆ ಬಿದ್ದು ಪ್ರಾಣ ಹೋಗುವ ಭೀತಿ ಎದುರಾಗಿತ್ತು.

ಅದೇ ರಸ್ತೆಯಲ್ಲಿ ರೆಸ್ಟೋರೆಂಟ್ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಭಾರತ ಮೂಲದ ಮೊಹಮ್ಮದ್ ಜೆಸಿಲ್ ಅವರಿಗೆ ಜನರ ಕಿರುಚಾಟ ಕೇಳಿಸಿದೆ. ಹೊರಗೆ ಬಂದು ನೋಡಿದಾಗ ಕಿಟಕಿಯಲ್ಲಿ ನೇತಾಡುತ್ತಿದ್ದ ಮಗು ಕಂಡಿದೆ. ಒಂದು ಕ್ಷಣವೂ ಯೋಚಿಸದ ಜೆಸಿಲ್ ತಕ್ಷಣವೇ ಮಗುವಿನ ರಕ್ಷಣೆಗೆ ಧಾವಿಸಿದರು.
ನನಗೆ ಬೇರೆನೂ ಯೋಚನೆ ಬರಲಿಲ್ಲ. ನಾನು ಕೇವಲ ಐದು ತಿಂಗಳ ವಯಸ್ಸಿನ ಅವಳಿ ಮಕ್ಕಳ ತಂದೆ. ಕಷ್ಟದಲ್ಲಿದ್ದ ಆ ಮಗುವನ್ನು ನೋಡಿದಾಗ ನನ್ನೊಳಗಿನ ತಂದೆಯ ಹೃದಯ ಜಾಗೃತವಾಯಿತು. ನಾನು ಹೀರೋ ಅಲ್ಲ, ಒಬ್ಬ ತಂದೆಯಾಗಿ ನನ್ನ ಕರ್ತವ್ಯ ಮಾಡಿದೆ ಎಂದು ಜೆಸಿಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: ನಾಯಿ ಹಾಗೂ ಎರಡು ವರ್ಷದ ಮಗು ನಾಲ್ಕು ದಿನಗಳಿಂದ ನಾಪತ್ತೆ, ಮೂರು ದಿನಗಳ ಬಳಿಕ ವಾಪಸಾದ ನಾಯಿ

ಮಗುವಿನ ಹಿಡಿತ ಸಡಿಲಗೊಳ್ಳುತ್ತಿದ್ದಂತೆ, ಜೆಸಿಲ್ ಮತ್ತು ಅಲ್ಲಿಗೆ ಬಂದಿದ್ದ ಬ್ರಿಟನ್ ಪೊಲೀಸ್ ಅಧಿಕಾರಿಯೊಬ್ಬರು ನೇರವಾಗಿ ಮಗುವಿನ ಕೆಳಭಾಗದಲ್ಲಿ ನಿಂತುಕೊಂಡರು. ದಾರಿಹೋಕರೊಬ್ಬರು ಸಣ್ಣ ಏಣಿಯೊಂದನ್ನು ತಂದು ಬೆಂಬಲವಾಗಿ ನಿಲ್ಲಿಸಿದರು.

ವಿಡಿಯೋ

ಕ್ಷಣಾರ್ಧದಲ್ಲಿ ಮಗು ಕಿಟಕಿಯ ಮೇಲಿಂದ ಕೈಬಿಟ್ಟು ಕೆಳಗೆ ಬಿದ್ದಿದೆ. ಇಡೀ ಜನಸಮೂಹವೇ ಆಘಾತದಿಂದ ಕಣ್ಣು ಮುಚ್ಚಿಕೊಂಡ ಆ ರಣರೋಚಕ ಕ್ಷಣದಲ್ಲಿ, ಜೆಸಿಲ್ ಅತ್ಯಂತ ಜಾಗರೂಕತೆಯಿಂದ ಬೀಳುತ್ತಿದ್ದ ಮಗುವನ್ನು ಗಾಳಿಯಲ್ಲೇ ಸುರಕ್ಷಿತವಾಗಿ ತಮ್ಮ ಕೈಗಳಿಂದ ಹಿಡಿದುಕೊಂಡಿದ್ದಾರೆ! ಪೊಲೀಸ್ ಅಧಿಕಾರಿ ಜೆಸಿಲ್ ಮತ್ತು ಮಗು ಇಬ್ಬರೂ ಕೆಳಗೆ ಬೀಳದಂತೆ ಗಟ್ಟಿಯಾಗಿ ಹಿಡಿದು ಸ್ಥಿರಗೊಳಿಸಿದರು.

ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾದ ಮಗುವಿನ ತಂದೆ, ಭಾರತೀಯ ಯುವಕ ಜೆಸಿಲ್ ಮತ್ತು ಪೊಲೀಸ್ ಅಧಿಕಾರಿಯನ್ನು ‘ನಮ್ಮ ಪಾಲಿನ ರಿಯಲ್ ಹೀರೋಗಳು’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಲಂಡನ್ ಪೊಲೀಸರು ಮತ್ತು ಅಲ್ಲಿನ ಮಾಧ್ಯಮಗಳು ಭಾರತೀಯ ಯುವಕ ಮೊಹಮ್ಮದ್ ಜೆಸಿಲ್ ಅವರ ಈ ಅಪ್ರತಿಮ ಸಾಹಸ ಹಾಗೂ ಮಾನವೀಯತೆಯನ್ನು ಮುಕ್ತಾಕಂಠದಿಂದ ಪ್ರಶಂಸಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ರಕ್ಷಣೆಯ ವಿಡಿಯೋ ಭಾರಿ ವೈರಲ್ ಆಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate: ವಾರಾಂತ್ಯದಲ್ಲೂ ಚಿನ್ನದ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 14th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 14: ಶುಕ್ರವಾರ ಗ್ರಾಮ್​ಗೆ 270 ರೂ ಏರಿಕೆಯಾಗಿದ್ದ ಬಂಗಾರದ ದರ (Gold Rates) ಈ ವಾರಾಂತ್ಯದಲ್ಲಿ 45 ರೂಗಳಷ್ಟು ಹೆಚ್ಚಿದೆ. ಅಪರಂಜಿ ಚಿನ್ನದ ಬೆಲೆ 14,900 ರೂ ಗಡಿ ದಾಟಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಬೆಳ್ಳಿ ಬೆಲೆ 5 ರೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,36,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,49,080 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,36,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 14ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,908 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,665 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,181 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,908 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,665 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,665 ರೂ
  • ಚೆನ್ನೈ: 13,860 ರೂ
  • ಮುಂಬೈ: 13,665 ರೂ
  • ದೆಹಲಿ: 13,680 ರೂ
  • ಕೋಲ್ಕತಾ: 13,665 ರೂ
  • ಕೇರಳ: 13,665 ರೂ
  • ಅಹ್ಮದಾಬಾದ್: 13,670 ರೂ
  • ಜೈಪುರ್: 13,680 ರೂ
  • ಲಕ್ನೋ: 13,680 ರೂ
  • ಭುವನೇಶ್ವರ್: 13,665 ರೂ

ಇದನ್ನೂ ಓದಿ: ಮೇ ತಿಂಗಳಲ್ಲಿ ಬೆಲೆ ಏರಿಕೆಗೆ ಇನ್ನಷ್ಟು ವೇಗ; ರೀಟೇಲ್ ಹಣದುಬ್ಬರ ಶೇ. 3.93 ದಾಖಲು

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 566 ರಿಂಗಿಟ್ (13,280 ರುಪಾಯಿ)
  • ದುಬೈ: 508.50 ಡಿರಾಮ್ (13,181 ರುಪಾಯಿ)
  • ಅಮೆರಿಕ: 138.50 ಡಾಲರ್ (13,187 ರುಪಾಯಿ)
  • ಸಿಂಗಾಪುರ: 184.80 ಸಿಂಗಾಪುರ್ ಡಾಲರ್ (13,696 ರುಪಾಯಿ)
  • ಕತಾರ್: 509.50 ಕತಾರಿ ರಿಯಾಲ್ (13,305 ರೂ)
  • ಸೌದಿ ಅರೇಬಿಯಾ: 523 ಸೌದಿ ರಿಯಾಲ್ (13,268 ರುಪಾಯಿ)
  • ಓಮನ್: 53.45 ಒಮಾನಿ ರಿಯಾಲ್ (13,218 ರುಪಾಯಿ)
  • ಕುವೇತ್: 42.71 ಕುವೇತಿ ದಿನಾರ್ (13,235 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 270 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 270 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಗನನ್ನು ಪತಿಯೇ ಕಿಡ್ನಾಪ್ ಮಾಡಿದ್ದಾನೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ತಾಯಿ! – Kannada News | Kodagu: Woman Accuses Drug Addict Husband of Kidnapping 5 Year Old Son

ಕೊಡಗು, ಜೂನ್ 14: ಕೌಟುಂಬಿಕ ಕಲಹದ ಹಿನ್ನೆಲೆ ನನ್ನ ಪತಿಯೇ ಮಗನನ್ನು ಕಿಡ್ನಾಪ್ ಮಾಡಿದ್ದಾನೆ, ದಯವಿಟ್ಟು ನನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿಯೊಬ್ಬಳು ಕಣ್ಣೀರಿಡುತ್ತಾ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಕೊಡಗು (Kodagu) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಮಹಿಳೆ ತನ್ನ ಮಗುವಿನೊಂದಿಗೆ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಈ ವೇಳೆ ಆಕೆಯ ಮನೆಗೆ ಬಂದ ಪತಿ, ಮಗುವನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮುಖ್ಯಾಂಶಗಳು

  • ಪತಿಯೇ ತನ್ನ ಐದು ವರ್ಷದ ಮಗನನ್ನು ಅಪಹರಿಸಿದ್ದಾನೆಂದು ತಾಯಿ ಆರೋಪಿಸಿದ್ದಾಳೆ.
  • ಕೊಡಗಿನ ಭವ್ಯ ಕೌಟುಂಬಿಕ ಕಲಹದಿಂದಾಗಿ ಆರು ತಿಂಗಳ ಹಿಂದೆ ವಿಚ್ಛೇದನ ಕೋರಿದ್ದರು.
  • ಮಗುವಿನ ಪತ್ತೆಗಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ.

ಕೌಟುಂಬಿಕ ಕಲಹ ಮತ್ತು ವಿಚ್ಛೇದನ ಅರ್ಜಿ

ಮಡಿಕೇರಿ ತಾಲ್ಲೂಕಿನ ಕಾಂತೂರು ಮೂರ್ನಾಡು ಗ್ರಾಮದ ನಿವಾಸಿ ಭವ್ಯ ಎಂಬಾಕೆಗೆ ಆರು ವರ್ಷಗಳ ಹಿಂದೆ ತಿಮ್ಮಯ್ಯ ಎಂಬುವರ ಜೊತೆ ವಿವಾಹವಾಗಿತ್ತು. ದಂಪತಿಗೆ 5 ವರ್ಷದ ಗಂಡು ಮಗನಿದ್ದಾನೆ. ಆದರೆ, ಕಳೆದ ಒಂದೆರಡು ವರ್ಷಗಳಿಂದ ಇವರಿಬ್ಬರ ಮಧ್ಯೆ ತೀವ್ರ ಜಗಳ ನಡೆಯುತ್ತಿತ್ತು. ಪತಿ ತಿಮ್ಮಯ್ಯ ಗಾಂಜಾ ಮತ್ತು ಮದ್ಯದ ವ್ಯಸನಿಯಾಗಿದ್ದು, ಕೆಲಸಕ್ಕೂ ಹೋಗದೆ, ನಿತ್ಯ ಹೆಂಡತಿಯ ಮೇಲೆ ಅನುಮಾನ ಪಡುತ್ತಾ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಪತಿಯ ಕಾಟ ತಡೆಯಲಾರದೆ ಭವ್ಯ ಆರು ತಿಂಗಳ ಹಿಂದೆ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸದ್ಯ ಮಗನೊಂದಿಗೆ ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು.

ಮಗನನ್ನು ಅಪಹರಿಸಿದ ಗಾಂಜಾ ವ್ಯಸನಿ ಪತಿ?

ಜೂನ್ 10 ರಂದು ಭವ್ಯ ಅವರ ತಾಯಿ ಮನೆ ಸಮೀಪ ಬಂದ ಪತಿ ತಿಮ್ಮಯ್ಯ, ಬಲವಂತವಾಗಿ 5 ವರ್ಷದ ಮಗನನ್ನು ಕರೆದುಕೊಂಡು ಹೋಗಿದ್ದಾನೆ. ಭವ್ಯ ಗಂಡನ ಮನೆಗೆ ಹೋಗಿ ನೋಡಿದಾಗ ಅಲ್ಲಿ ಪತಿಯಾಗಲಿ, ಮಗನಾಗಲಿ ಇರಲಿಲ್ಲ. ಪತಿ ಗಾಂಜಾ ವ್ಯಸನಿಯಾಗಿದ್ದರಿಂದ ಮಗುವಿಗೆ ಏನಾದರೂ ಹೆಚ್ಚು ಕಡಿಮೆ ಮಾಡಬಹುದು ಎಂಬ ಭೀತಿಯಲ್ಲಿ ತಾಯಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿಂದೆ ತಿಮ್ಮಯ್ಯ ಮಚ್ಚು, ಲಾಂಗು ಹಿಡಿದು ಹಲ್ಲೆಗೆ ಮುಂದಾಗಿದ್ದರಿಂದ ಮಗುವಿಗೆ ಏನಾಗಿದೆಯೋ ಎಂಬ ಭಯದಿಂದಲೇ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಗುವಿನ ಪತ್ತೆಗಾಗಿ ಭವ್ಯ ಸದ್ಯ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಅವರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಎಸ್‌ಪಿ ಅವರು ತನಿಖೆಗೆ ಆದೇಶಿಸಿದ್ದು, ಪೊಲೀಸರು ಮಗುವಿನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯ ಕಾಂಗ್ರೆಸ್​​ನಲ್ಲಿ ಬಗೆಹರಿಯದ ಗೊಂದಲ: ಸಚಿವ ಸ್ಥಾನ ಸಿಕ್ಕವರದ್ದೊಂದು, ಸಿಗದವರದ್ದೊಂದು ಕಥೆ – Kannada News | Unrest in Karnataka Congress: Portfolios Spark Discontent Among Seniors; Aspirants Step Up Lobbying for Cabinet Berth

ಬೆಂಗಳೂರು, ಜೂನ್​​ 14: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಚಾರವಾಗಿ ಕಾಂಗ್ರೆಸ್​​ನಲ್ಲಿ ಗೊಂದಲ ಮುಂದುವರಿದಿದೆ. ನೂತನ ಸಚಿವರಿಗೆ ಈಗಾಗಲೇ ಖಾತೆ ಹಂಚಿಕೆಯಾಗಿದ್ದರೂ ಅಸಮಾಧಾನ ಮಾತ್ರ ಮುಗಿದಿಲ್ಲ. ಬೇಸರಗೊಂಡಿದ್ದ ಹಿರಿಯ ಸಚಿವರ ಪೈಕಿ ಕೆಲವರನ್ನು ಮನವೊಲಿಸಲಾಗಿದೆಯಾದರೂ ಸಂಪೂರ್ಣವಾಗಿ ಇದಿನ್ನೂ ಬಗೆಹರಿದಿಲ್ಲ. ಮತ್ತೊಂದೆಡೆ ಎರಡನೇ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬ ಕುತೂಹಲವೂ ಹೆಚ್ಚಿದ್ದು ಮತ್ರಿಗಿರಿ ಯಾರಿಗೆಲ್ಲ ಎಂಬ ಬಗ್ಗೆಯೂ ಯಾವುದೇ ಉತ್ತರ ಇನ್ನೂ ಸಿಕ್ಕಿಲ್ಲ.

ಖಾತೆ ಬಗ್ಗೆ ಅಸಮಾಧಾನ

ತಮಗೆ ನೀಡಲಾಗಿರುವ ಖಾತೆಗಳ ಬಗ್ಗೆ ಕೆಲ ಹಿರಿಯ ಸಚಿವರೇ ಮುನಿಸಿಕೊಂಡಿರೋದೀಗ ಕಾಂಗ್ರೆಸ್​​ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಬಿಡಿಎ ಮತ್ತು ಬಿಎಂಆರ್ಡಿಎ ಒಳಗೊಳ್ಳದ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿರುವ ಕಾರಣಕ್ಕೆ ಪಟ್ಟು ಹಿಡಿದಿರುವ ಕೃಷ್ಣಭೈರೇಗೌಡರು, ಖಾತೆ ಹಂಚಿಕೆ ಆಗಿ 10 ದಿನಗಳು ಕಳೆದರೂ ಜವಾಬ್ದಾರಿಯನ್ನು ಮಾತ್ರ ವಹಿಸಿಕೊಂಡಿಲ್ಲ. ಇದೇ ವಿಷಯವಾಗಿ ದೆಹಲಿಯ ಹೈಕಮಾಂಡ್ ನಾಯಕರ ಜೊತೆ ಸರಣಿ ಸಭೆ ನಡೆಸಿ ಮನವಿ ಮಾಡಿರುವ ಅವರು ಸಿಎಂ ಡಿಕೆ ಶಿವಕುಮಾರ್ ಜೊತೆಗೂ ಒಂದೆರಡು ಸುತ್ತು ಚರ್ಚೆ ನಡೆಸಿದ್ದಾರೆ. ಹೀಗಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಪರಿಷತ್ ಚುನಾವಣೆ; ಅಡ್ಡ ಮತದಾನದ ಭೀತಿಯಲ್ಲಿ ಜೆಡಿಎಸ್, ಕಾಂಗ್ರೆಸ್ 

ಮಂತ್ರಿಗಿರಿ ಪಡೆಯಲು ಪೈಪೋಟಿ

ಖಾತೆ ಕ್ಯಾತೆ ನಡುವೆ ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿಯೂ ಕಾಂಗ್ರೆಸ್​​ನಲ್ಲಿ ಜೋರಾಗಿಯೇ ನಡೆಯತೊಡಗಿದೆ. ಹೈಕಮಾಂಡ್​​ನಿಂದ ಪ್ರಕಟವಾಗಲಿರುವ ಎರಡನೇ ಪಟ್ಟಿಯಲ್ಲಿ ಹೇಗಾದರೂ ಸ್ಥಾನಗಿಟ್ಟಿಸಬೇಕೆಂ ನಿಟ್ಟಿನಲ್ಲಿ ಆಕಾಂಕ್ಷಿ ಶಾಸಕರು ಸರ್ಕಸ್​​ ಆರಂಭಿಸಿದ್ದಾರೆ. ಅದರಲ್ಲೂಸಚಿವ ಸಂಪುಟ ಸೇರ್ಪಡೆಯಾಗಲು ಜಮೀರ್ ಅಹ್ಮದ್ ಭಾರಿ ಕಸರತ್ತು ನಡೆಸುತ್ತಿದ್ದು, ರಾಜ್ಯ ನಾಯಕರ ಮನೆ ಸುತ್ತುತ್ತಿದ್ದಾರೆ. ಈ ಸಂಬಂಧ ಸಿಎಂ ಡಿಕೆಶಿ ಭೇಟಿಯಾಗಿ ಮಾತುಕತೆ ನಡೆಸಿರುವ ಅವರು, ಎರಡು ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೂ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version