ದಕ್ಷಿಣ ಭಾರತ ಚಲನಚಿತ್ರ ನಿರ್ಮಾಪಕರ ಒಕ್ಕೂಟ ಸಭೆ: ಮಹತ್ವದ ನಿರ್ಧಾರ – Kannada News | Telugu, Tamil and Malayalam movie Producers meeting took important decisions

ಚಿತ್ರರಂಗದ (Movie) ಸಮಸ್ಯೆಗಳ ಬಗ್ಗೆ ಅದರಲ್ಲೂ ನಿರ್ಮಾಪಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಯುತ್ತಲೇ ಇವೆ. ತೆಲುಗು ನಿರ್ಮಾಪಕರು, ಕೇರಳ ನಿರ್ಮಾಪಕರು ಈ ಬಗ್ಗೆ ಸರ್ಕಾರಗಳೊಟ್ಟಿಗೆ ಸಹ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗಷ್ಟೆ ಹೈದರಾಬಾದ್‌ನ ಪ್ರತಿಷ್ಠಿತ ಹೋಟೆಲ್​​ನಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಪ್ರಮುಖ ಚಲನಚಿತ್ರ ನಿರ್ಮಾಪಕರು ಹಾಗೂ ನಿರ್ಮಾಪಕರ ಸಂಘಗಳ ಪ್ರತಿನಿಧಿಗಳು ಒಂದು ಮಹತ್ವದ ಸಭೆ ನಡೆಸಿದರು. ಚಲನಚಿತ್ರ ನಿರ್ಮಾಣ ಕ್ಷೇತ್ರ ಎದುರಿಸುತ್ತಿರುವ ಗಂಭೀರ ಸವಾಲುಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಭೆಗೆ ಕರ್ನಾಟಕದ ನಿರ್ಮಾಪಕರು ಭಾಗಿ ಆಗಿರಲಿಲ್ಲ ಎನ್ನಲಾಗುತ್ತಿದೆ.

ಚಿತ್ರಮಂದಿರಗಳ ಪ್ರದರ್ಶನ ನಿಯಮಗಳು ಅಥವಾ 8 ವಾರಗಳ OTT ವಿಂಡೋ ಕುರಿತು ಇತರ ಪಾಲುದಾರರು ಯಾವುದೇ ಪೂರ್ವ ಸಮಾಲೋಚನೆ ಇಲ್ಲದೆ ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳನ್ನು ಸಭೆಯು ಸರ್ವಾನುಮತದಿಂದ ಖಂಡಿಸಿದೆ. ನಿರ್ಮಾಪಕರ ಹಿತಾಸಕ್ತಿಗಳನ್ನು ದೀರ್ಘಕಾಲದವರೆಗೆ ರಕ್ಷಿಸಲು ‘ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರ ಸಂಘ’ (South Indian Film Producers Association – SIFPA) ಎಂಬ ಸಂಸ್ಥೆಯನ್ನು ರಚಿಸಲು ಒಪ್ಪಿಗೆ ಸೂಚಿಸಲಾಗಿದೆ.

ದಕ್ಷಿಣ ಭಾರತದ ಭಾಷಾ ಚಿತ್ರರಂಗದ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಚಿತ್ರರಂಗದ ತಕ್ಷಣದ ಸವಾಲುಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ನಾಲ್ಕೂ ಭಾಷಾ ಚಿತ್ರರಂಗಗಳ ನಡುವೆ ಸಮನ್ವಯ ಸಾಧಿಸುತ್ತದೆ. ಸದ್ಯಕ್ಕೆ ಯಾವುದೇ ಸಂಘಟನೆ ಅಥವಾ ವಲಯ ವಿಧಿಸುವ ನಿಯಮಗಳಿಗೆ ಬದ್ಧರಾಗದೆ, ನಿರ್ಮಾಪಕರು ತಮ್ಮ ಚಿತ್ರೀಕರಣ ಪ್ರಕ್ರಿಯೆ, ಹಕ್ಕುಗಳ ಮಾರಾಟ ಮತ್ತು ಬಿಡುಗಡೆಯ ವೇಳಾಪಟ್ಟಿಯನ್ನು ಸ್ವತಂತ್ರವಾಗಿ ಮುಂದುವರಿಸಲು ಸೂಚಿಸಲಾಗಿದೆ.

ಇದನ್ನೂ ಓದಿ:‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು

OTT ಬಿಡುಗಡೆಯ ಸಮಯಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರಗಳಿಗೆ ಸಹಿ ಮಾಡದಂತೆ ನಿರ್ಮಾಪಕ ಸದಸ್ಯರಿಗೆ ವಿಶೇಷವಾಗಿ ಸಲಹೆ ನೀಡಲಾಗಿದೆ. ಆರ್ಥಿಕ ಹಿತದೃಷ್ಟಿಯಿಂದ ಇಂತಹ ನಿರ್ಧಾರಗಳನ್ನು ಸಾಮೂಹಿಕ ಚರ್ಚೆಯ ನಂತರವೇ ತೆಗೆದುಕೊಳ್ಳಲಾಗುವುದು ಎಂದು ಸಭೆ ತೀರ್ಮಾನಿಸಿದೆ. ಸಭೆಯ ಕುರಿತು ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಕರ್ನಾಟಕದ ನಿರ್ಮಾಪಕರು ಭಾಗಿ ಆಗಿರುವ ಬಗ್ಗೆ ಮಾಹಿತಿ ಇಲ್ಲ. ಕರ್ನಾಟಕದ ನಿರ್ಮಾಪಕರಿಗೆ ಆಹ್ವಾನ ಇತ್ತೋ ಇಲ್ಲವೊ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:29 pm, Sun, 19 April 26

Source link

ಕೊಡಗು: ಸರ್ಕಾರಿ ಕಾಮಗಾರಿ ಟೆಂಡರ್​​ಗೆ ನಕಲಿ‌ ದಾಖಲೆ; ಲಕ್ಷಾಂತರ ರೂ ಲಪಟಾಯಿಸಲು ಯತ್ನ – Kannada News | Government Tender Scam: Fake Documents Exposed in Rain Damage Works

ಕೊಡಗು, ಏಪ್ರಿಲ್​ 19: ಸರ್ಕಾರದಿಂದ ಕೈಗೊಳ್ಳಲಾಗುವ ಯಾವುದೇ ಕಾಮಗಾರಿಗಳು ಅದರದ್ದೇ ಆದ ನೀತಿ ನಿಯಮಗಳಿಗೆ ಒಳಪಟ್ಟು ನಡೆಯುತ್ತವೆ. ಅಂದರೆ ಟೆಂಡರ್ (tender) ಕರೆಯುವುದು, ವರ್ಕ್ ಆರ್ಡರ್ ಪಡೆಯುವುದು, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನ ಸಲ್ಲಿಸುವುದು ಇತ್ಯಾದಿ. ಆದರೆ ಕೊಡಗುನಲ್ಲಿ ಸರ್ಕಾರದ ಟೆಂಡರ್ ಪಡೆಯಲು ನಕಲಿ ದಾಖಲೆಯನ್ನ (Fake documents) ಸಲ್ಲಿಸಿ ಲಕ್ಷಾಂತರ ರೂ ಮೌಲ್ಯದ ಕಾಮಗಾರಿ ಪಡೆಯಲು ಮುಂದಾದ ಪ್ರಕರಣ ಬಯಲಿಗೆ ಬಂದಿದೆ.

ಮಳೆಹಾನಿ ಕಾಮಗಾರಿ ಟೆಂಡರ್‌ನಲ್ಲಿ ಬೃಹತ್ ಅಕ್ರಮ: ನಕಲಿ ದಾಖಲೆ ಸಲ್ಲಿಕೆ ಆರೋಪ

ಕೊಡಗು ಜಿಲ್ಲೆಯ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಳೆಹಾನಿ ಪರಿಹಾರ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಾವೇರಿ ನೀರಾವರಿ ನಿಗಮದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಗುತ್ತಿಗೆದಾರರಾದ ನವೀನ್, ಸುರೇಶ್ ಎಂಬುವವರು ಟೆಂಡರ್ ಗಿಟ್ಟಿಸಿಕೊಂಡಿದ್ದಾರೆ ಎಂದು ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜೀವ್ ಲೋಚನ್ ದೂರಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರಾಯ್ತು ಈಗ ಗುತ್ತಿಗೆದಾರರ ಸರದಿ: ಬಾಕಿ ಬಿಲ್​​ಗೆ ಆಗ್ರಹಿಸಿ ಮಾ.6ರಂದು ಪ್ರತಿಭಟನೆಗೆ ಕರೆ

ಯಾವುದೇ ಸರ್ಕಾರಿ ಟೆಂಡರ್​ ಪಡೆಯುವ ಮೊದಲು ಮುಂಚೆ ಇಂತಹ ಕಡೆಗಳಲ್ಲಿ ಗುತ್ತಿಗೆ ಕೆಲಸ ಮಾಡಿದ್ದೇನೆ ಅಂತ ದೃಢೀಕೃತ ಪ್ರಮಾಣ ಪತ್ರಗಳನ್ನ ಸಲ್ಲಿಸುವುದು ಕಡ್ಡಾಯ. ಆದರೆ ಯಾವುದೇ ಕಾಮಗಾರಿಗಳನ್ನ ಮಾಡದಿರುವ ಈ ಗುತ್ತಿಗೆದಾರು ತಾವು ಕಾವೇರಿ ನೀರಾವರಿ ನಿಗಮ, ಮೈಸೂರು ಜಿಲ್ಲಾ ಪಂಚಾಯತ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಇಲಾಖೆ ಸೇರಿದಂತೆ ಹಲವು ಕಡೆ ಗುತ್ತಿಗೆ ಆಧಾರಿತ ಕೆಲಸ ಮಾಡಿರುವುದಾಗಿ ನಕಲಿ ದಾಖಲೆಗಳನ್ನ ಸಲ್ಲಿಸಿ ಮೋಸ ಮಾಡಿದ್ದಾರೆ ಎಂಬುದು ಕೊಡಗು ಗುತ್ತಿಗೆದಾರರ ಸಂಘದ ಆರೋಪ.

ಇದನ್ನೂ ಓದಿ: ಕೆಲಸವಿಲ್ಲದೆ ಕರಾವಳಿ ಗುತ್ತಿಗೆದಾರರ ಕೈ ಖಾಲಿ: ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಆರೋಪ

ಈ ಬಗ್ಗೆ ಈಗಾಗಲೇ ಪಂಚಾಯತ್ ರಾಜ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿ ಮೋಸ ಮಾಡಿದ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹಿಸಲಾಗಿದೆ. ಇನ್ನು ಇಂತಹ ಹತ್ತಾರು ಪರಕರಣಗಳು ನಡೆದಿರುವ ಸಾಧ್ಯತೆ ದಟ್ಟವಾಗಿದ್ದು, ಸಮಗ್ರ ತನಿಖೆಗೆ ಆದೇಶ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

PBKS vs LSG IPL 2026 Live Score: ಪಂಜಾಬ್ ಬ್ಯಾಟಿಂಗ್ ಆರಂಭ

ಎರಡನೇ ಡಬಲ್ ಹೆಡರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ. ಪಂಜಾಬ್ ಕಿಂಗ್ಸ್ ತಂಡವು ತಮ್ಮ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಪಂಜಾಬ್ ತಂಡವು ಒಂಬತ್ತು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ ಎಂಟನೇ ಸ್ಥಾನದಲ್ಲಿದೆ.

Source link

KKR vs RR: ರಿಂಕುಗೆ ಜೀವದಾನ ನೀಡಿ ಸೋತ ರಾಜಸ್ಥಾನ್; ಕೆಕೆಆರ್​ಗೆ ಮೊದಲ ಜಯ – Kannada News | IPL 2026: KKR Secures First Win vs RR at Eden Gardens, Ends Losing Streak

ಐಪಿಎಲ್ 2026 ರ 28ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಕೋಲ್ಕತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಅಂದರೆ ಕೆಕೆಆರ್​ ತಂಡದ ತವರು ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ ಕೆಕೆಆರ್​ ಈ ಆವೃತ್ತಿಯಲ್ಲಿ ಕೊನೆಗೂ ತನ್ನ ಗೆಲುವಿನ ಖಾತೆ ತೆರೆಯಿತು. ಮೊದಲ 6 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕೆಕೆಆರ್ ಈ ಪಂದ್ಯದ ಗೆಲುವಿನೊಂದಿಗೆ ಒಂದು ಸ್ಥಾನ ಮೇಲೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 156 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್​ ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತು. ಕೆಕೆಆರ್​ನ ಈ ಗೆಲುವಿನಲ್ಲಿ ರಾಜಸ್ಥಾನ್ ತಂಡದ ಕಳಪೆ ಫಿಲ್ಡಿಂಗ್ ಕೂಡ ಪ್ರಮುಖ ಪಾತ್ರವಹಿಸಿತು.

Published On – 7:19 pm, Sun, 19 April 26

Source link

ತಳ್ಳು ತಳ್ಳು ಐಸ್ಸಾ.. ಇನ್ನು ಸ್ವಲ್ಪ ತಳ್ಳಣ್ಣ; ನಡು ರಸ್ತೆಯಲ್ಲೇ ಕೆಟ್ಟು ನಿಂತ KSRTC ಬಸ್ – Kannada News | KSRTC Bus Breaks Down In Middle Of The Road AT Chikmagaluru, video Goes viral

ಚಿಕ್ಕಮಗಳೂರು, (ಏಪ್ರಿಲ್ 19): ಇತ್ತೀಚೆಗೆ ಸರ್ಕಾರಿ ಬಸ್​​ಗಳು ಎಲ್ಲೊಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಚಿಕ್ಕಮಗಳೂರಿನಲ್ಲೂ ಸಹ KSRTC ಬಸ್ ರಸ್ತೆ ಮಧ್ಯೆ ಕೆಟ್ಟು ನಿಂತಿರುವ ಘಟನೆ ನಡೆದಿದೆ. ಚಿಕ್ಕಮಗಳೂರು (Chikmagaluru) KSRTC ಬಸ್ ನಿಲ್ದಾಣದಿಂದ ಕಳಸಾಪುರಕ್ಕೆ ತೆರಳುತ್ತಿದ್ದ ಬಸ್, ಏಕಾಏಕಿ ಚಿಕ್ಕಮಗಳೂರು ನಗರದ NMC ಸಿಗ್ನಲ್ ಬಳಿ ಕೆಂಟು ನಿಂತಿದೆ. ಇದರಿಂದ ಪ್ರಯಾಣಿಕರು ಬಸ್ ತಳ್ಳಿ ತಳ್ಳಿ ಸುಸ್ತಾದರು. ಕೊನೆಗೆ ಒಂದಿಷ್ಟು ಸ್ಥಳೀಯರು ಕೈಜೋಡಿಸಿದ್ದರಿಂದ ಬಸ್ ಡಿಪೋ ಸೇರಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KKR vs RR: ಜುರೇಲ್ ಸ್ಟಂಪಿಂಗ್​ಗೆ ಸ್ಟನ್ ಆದ ಕ್ರೀಡಾಂಗಣ; ವಿಡಿಯೋ – Kannada News | IPL 2026: Dhruv Jurel’s Lightning Stumping Sends Cameron Green Packing in KKR vs RR Thriller

ಐಪಿಎಲ್ 2026 ರ 28ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 156 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್​ ಕೂಡ ಕಳಪೆ ಆರಂಭ ಪಡೆಯಿತು. ಆರಂಭಿಕರಿಬ್ಬರು ಖಾತೆ ತೆರೆಯದೆ ಔಟಾದರು. ಹೀಗಾಗಿ ಕಳೆದ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಕ್ಯಾಮರೂನ್ ಗ್ರೀನ್ ಮೇಲೆ ಜವಾಬ್ದಾರಿ ಹೆಚ್ಚಿತ್ತು. ಅದರಂತೆ ಗ್ರೀನ್ ಕೂಡ ಉತ್ತಮ ಆರಂಭ ಪಡೆದರು. ಆದರೆ ವಿಕೆಟ್‌ಕೀಪರ್‌ ಧೃವ್ ಜುರೇಲ್ ಅವರ ಮಿಂಚಿನ ಸ್ಟಂಪಿಂಗ್​ಗೆ ಗ್ರೀನ್ ಪೆವಿಲಿಯನ್ ಸೇರಿಕೊಳ್ಳಬೇಕಾಯಿತು.

ಕೆಕೆಆರ್ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಬೌಲಿಂಗ್ ಮಾಡುತ್ತಿದ್ದರು. ಆ ಓವರ್‌ನ ನಾಲ್ಕನೇ ಎಸೆತದಲ್ಲಿ, ಗ್ರೀನ್ ಫಾರ್ವರ್ಡ್ ಶಾಟ್ ಆಡಲಿದ್ದಾರೆ ಎಂಬುದನ್ನು ಗಮನಿಸಿದ ಬಿಷ್ಣೋಯ್, ಗೂಗ್ಲಿ ಬೌಲಿಂಗ್ ಮಾಡಿದರು. ಇತ್ತ ಬ್ಯಾಟ್ಸ್‌ಮನ್, ವಿಕೆಟ್‌ಕೀಪರ್‌ ಧ್ರುವ್ ಜುರೆಲ್ ಅವರ ಕಣ್ಣ ಮುಂದೆ ಇದ್ದ ಕಾರಣ, ಚೆಂಡು ಯಾವ ದಿಕ್ಕನ್ನು ಹೋಗುತ್ತಿದೆ ಎಂದು ಅವರಿಗೆ ಅರ್ಥವಾಗಲಿಲ್ಲ.

ಆದಾಗ್ಯೂ ಜುರೆಲ್ ಎಡಕ್ಕೆ ಡೈವ್ ಮಾಡಿ, ಚೆಂಡನ್ನು ಹಿಡಿದು, ಒಂದು ಕೈಯಿಂದ ಅದನ್ನು ಸ್ಟಂಪ್‌ಗೆ ಹೊಡೆದರು. ಜುರೆಲ್ ಅವರ ಮಿಂಚಿನ ವೇಗದ ವಿಕೆಟ್ ಕೀಪಿಂಗ್ ಕೌಶಲ್ಯಕ್ಕೆ ಇಡೀ ಮೈದಾನವೇ ದಂಗಾಯಿತು. ಇತ್ತ ಜುರೆಲ್ ಚುರುಕುತನಕ್ಕೆ ಬಲಿಯಾದ ಗ್ರೀನ್ 13 ಎಸೆತಗಳಲ್ಲಿ 27 ರನ್‌ಗಳಿಸಿ ಔಟಾದರು.

Source link

BEL Apprentice Recruitment 2026: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​​ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | BEL Apprentice Recruitment 2026: Machilipatnam Walk in for Graduates and Diploma Holders

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮಚಲಿಪಟ್ನಂ ಘಟಕದಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತಾಂತ್ರಿಕ ಮತ್ತು ಸಾಮಾನ್ಯ ಪದವಿ ಪಡೆದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಇದು ಸುಸಂದರ್ಭವಾಗಿದೆ.

ಹುದ್ದೆಗಳ ವಿವರ ಮತ್ತು ಅರ್ಹತೆ:

ಈ ನೇಮಕಾತಿಯಡಿ ವಿವಿಧ ಶೈಕ್ಷಣಿಕ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಹುದ್ದೆಯ ಆಧಾರದ ಮೇಲೆ ಮಾಸಿಕ ವೇತನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಪದವೀಧರ ಅಪ್ರೆಂಟಿಸ್‌ಗಳು (BE/B.Tech): ಇಂಜಿನಿಯರಿಂಗ್ ಪದವೀಧರರು ಈ ಹುದ್ದೆಗೆ ಅರ್ಹರಾಗಿದ್ದು, ಆಯ್ಕೆಯಾದವರಿಗೆ ಪ್ರತಿ ತಿಂಗಳು ರೂ. 17,500/- ಸ್ಟೈಫಂಡ್ ನೀಡಲಾಗುತ್ತದೆ.
  • ಸಾಮಾನ್ಯ ಪದವೀಧರ ಅಪ್ರೆಂಟಿಸ್‌ಗಳು (B.Sc): ಬಿ.ಎಸ್ಸಿ ಪದವಿ ಪಡೆದ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಇವರಿಗೆ ಮಾಸಿಕ ರೂ. 12,500/- ನೀಡಲಾಗುತ್ತದೆ.
  • ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್‌ಗಳು: ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಇವರಿಗೆ ಸಂಸ್ಥೆಯ ನಿಯಮದಂತೆ ವೇತನ ನಿಗದಿಯಾಗಲಿದೆ.

ಆಯ್ಕೆ ವಿಧಾನ ಮತ್ತು ವಯೋಮಿತಿ:

ಅಭ್ಯರ್ಥಿಗಳ ಆಯ್ಕೆಯನ್ನು ಪ್ರಮುಖವಾಗಿ ಲಿಖಿತ ಪರೀಕ್ಷೆಯ ಮೂಲಕ ನಡೆಸಲಾಗುತ್ತದೆ. ವಯೋಮಿತಿಗೆ ಸಂಬಂಧಿಸಿದಂತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಅಧಿಕೃತ ನಿಯಮಗಳ ಅನ್ವಯ ಸಡಿಲಿಕೆ ಇರಲಿದೆ. ಇದು ಕೇವಲ ತರಬೇತಿ ಅವಧಿಯಾಗಿದ್ದು, ಅಭ್ಯರ್ಥಿಗಳ ಸಾಮರ್ಥ್ಯ ಮತ್ತು ಶಿಸ್ತಿನ ಆಧಾರದ ಮೇಲೆ ಭವಿಷ್ಯದ ವೃತ್ತಿಜೀವನಕ್ಕೆ ಈ ಅನುಭವ ಸಹಕಾರಿಯಾಗಲಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂದರ್ಶನದ ವಿವರ:

ಆಸಕ್ತ ಅಭ್ಯರ್ಥಿಗಳು ಯಾವುದೇ ಆನ್‌ಲೈನ್ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಬದಲಾಗಿ, ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ವಾಕ್-ಇನ್-ಇಂಟರ್ವ್ಯೂ (ನೇರ ಸಂದರ್ಶನ) ಗೆ ಹಾಜರಾಗಬೇಕಾಗುತ್ತದೆ.

ಸಂದರ್ಶನ ನಡೆಯುವ ಸ್ಥಳ: ಲೇಡಿ ಆಂಪ್ಥಿಲ್ ಸರ್ಕಾರಿ ಜೂನಿಯರ್ ಕಾಲೇಜು, ರಾಮನಾಯ್ಡುಪೇಟ, ಮಚಲಿಪಟ್ನಂ – 521001.

ಪ್ರಮುಖ ದಿನಾಂಕ:

ಸಂದರ್ಶನವು ಏಪ್ರಿಲ್ 28, 2026 ರಂದು ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅಂಕಪಟ್ಟಿಗಳು, ಗುರುತಿನ ಚೀಟಿ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳೊಂದಿಗೆ ನಿಗದಿತ ಸಮಯಕ್ಕೆ ಹಾಜರಿರಬೇಕು.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳ ಚುನಾವಣಾ ಕಣದಲ್ಲಿ ಮೋದಿ ‘ಝಲ್​ಮುರಿ’ ಸವಿ; ಝಾರ್​ಗ್ರಾಮ್​ನಲ್ಲಿ ಜನಸಾಮಾನ್ಯರಂತೆ ಮಿಂಚಿದ ಪ್ರಧಾನಿ – Kannada News | At West Bengal Jhargram, PM Narendra Modi makes surprise visit to taste Jhalmuri at local shop

ಪಶ್ಚಿಮ ಬಂಗಾಳದಲ್ಲಿ ಝರ್ಮುರಿ ಅಂಗಡಿಯಲ್ಲಿ ನರೇಂದ್ರ ಮೋದಿImage Credit source: Narendra Modi’s X account

ಝಾರ್​ಗ್ರಾಮ್, (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಭಾನುವಾರ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಝಾರ್​ಗ್ರಾಮ್​ನಲ್ಲಿ (Jhargram) ಜನಸಾಮಾನ್ಯರ ಜೊತೆ ಬೆರೆತು ಸ್ಥಳೀಯ ಸಂಸ್ಕೃತಿಯ ಭಾಗವಾದರು. ಬೆಳಿಗ್ಗೆಯಿಂದಲೇ ಬರ್ಜೋರಾ ಮತ್ತು ಬಲರಾಮ್‌ಪುರಗಳಲ್ಲಿ ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ, ಮಧ್ಯಾಹ್ನದ ವೇಳೆಗೆ ಬುಡಕಟ್ಟು ಪ್ರಾಬಲ್ಯದ ಜಾರ್ಗ್ರಾಮ್ ತಲುಪಿದರು. ಅಲ್ಲಿನ ಸಮಾವೇಶದ ನಂತರ, ಹೆಲಿಪ್ಯಾಡ್ ಕಡೆಗೆ ಸಾಗುವ ದಾರಿಯಲ್ಲಿ ಪ್ರಧಾನಿಯವರು ಹಠಾತ್ ಆಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಲು ಸೂಚಿಸಿದರು.

ಬಂಗಾಳಿ ರುಚಿಗೆ ಮನಸೋತ ಮೋದಿ

ರಸ್ತೆಯ ಬದಿಯಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬರು ಸಿದ್ಧಪಡಿಸುತ್ತಿದ್ದ ಬಂಗಾಳದ ಪ್ರಸಿದ್ಧ ತಿಂಡಿ ‘ಝಲ್ ಮುರಿ’ (Jhalmuri) ಪ್ರಧಾನಿಯವರ ಗಮನ ಸೆಳೆಯಿತು. ಕಾರಿನಿಂದ ಇಳಿದ ಮೋದಿ ಅವರು ನೇರವಾಗಿ ವ್ಯಾಪಾರಿಯ ಬಳಿಗೆ ತೆರಳಿ, ಅಲ್ಲಿಯೇ ತಯಾರಾದ ಬಿಸಿಬಿಸಿ ಮತ್ತು ಖಾರವಾದ ಝಲ್ ಮುರಿಯನ್ನು ಸವಿದರು.

ಇದನ್ನೂ ಓದಿ: ವಿಪಕ್ಷಗಳು ಮಹಿಳೆಯರ ಹಕ್ಕು ಕಸಿದುಕೊಂಡು ಸಂಭ್ರಮಿಸಿದ್ದು ವಿಪರ್ಯಾಸ; ಪ್ರಧಾನಿ ಮೋದಿ ವಾಗ್ದಾಳಿ

ಕಡಲೆಕಾಯಿ, ಸಾಸಿವೆ ಎಣ್ಣೆ, ಈರುಳ್ಳಿ ಮತ್ತು ವಿಶೇಷ ಮಸಾಲೆಯಿಂದ ಕೂಡಿದ ಈ ತಿಂಡಿಯನ್ನು ಸವಿಯುತ್ತಾ, ಪ್ರಧಾನಿಯವರು ಸ್ಥಳೀಯ ಜನರೊಂದಿಗೆ ಕೆಲ ಕಾಲ ಮಾತನಾಡಿದರು.

ದೇಶದ ಪ್ರಧಾನಿಯೇ ರಸ್ತೆ ಬದಿಯ ತಿಂಡಿಯನ್ನು ಸವಿಯುತ್ತಿರುವುದನ್ನು ಕಂಡ ಸ್ಥಳೀಯರು ಆಶ್ಚರ್ಯ ಮತ್ತು ಸಂತೋಷ ವ್ಯಕ್ತಪಡಿಸಿದರು. ಅನೇಕರು ಈ ಕ್ಷಣವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ, “ಬಂಗಾಳದ ರುಚಿ ಯಾವಾಗಲೂ ವಿಶಿಷ್ಟವಾದುದು. ಜಾರ್ಗ್ರಾಮ್‌ನ ಝಲ್ ಮುರಿ ಅತ್ಯಂತ ಸ್ವಾದಿಷ್ಟವಾಗಿತ್ತು ಮತ್ತು ಇದು ನನ್ನ ಸುದೀರ್ಘ ದಿನದ ಪ್ರಚಾರಕ್ಕೆ ಹೊಸ ಚೈತನ್ಯ ನೀಡಿತು,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ವಿರೋಧಿಸಿದ್ದಕ್ಕೆ ವಿಪಕ್ಷ ಬೆಲೆ ತೆರಬೇಕಾಗುತ್ತದೆ; ಪಿಎಂ ಮೋದಿ ವಾಗ್ದಾಳಿ

ಝಾರ್​ಗ್ರಾಮ್ ಮತ್ತು ಸುತ್ತಮುತ್ತಲಿನ ಬುಡಕಟ್ಟು ಪ್ರದೇಶಗಳಲ್ಲಿ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಲು ಪ್ರಧಾನಿಯವರ ಈ ಸರಳ ನಡವಳಿಕೆ ಸಹಾಯ ಮಾಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಬಂಗಾಳದ ರಾಜಕೀಯ ಸಮರದಲ್ಲಿ ಮೋದಿ ಸವಿದ ‘ಝಲ್ ಮುರಿ’ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿಗಳ ಎಕ್ಸ್  ಪೋಸ್ಟ್

ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸರಣಿ ಸ್ಫೋಟ; ಸಾವಿನ ಸಂಖ್ಯೆ 16ಕ್ಕೆ ಏರಿಕೆ – Kannada News | Tamil Nadu Virudhu Nagar cracker factor series blast, several die and many injured

ವಿರುದುನಗರ: ತಮಿಳುನಾಡಿನ ಪಟಾಕಿ ತಯಾರಿಕಾ ಹಬ್ ಎಂದೇ ಕರೆಯಲ್ಪಡುವ ವಿರುದುನಗರ ಜಿಲ್ಲೆಯಲ್ಲಿ ಇಂದು ಭಾನುವಾರ ಸರಣಿ ಸ್ಫೋಟ (cracker blast) ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಕಟ್ಟನಾರ್‌ಪಟ್ಟಿ (Kattanarpatti) ಎಂಬ ಗ್ರಾಮದಲ್ಲಿ ಈ ಘೋರ ದುರಂತ ಸಂಭವಿಸಿದೆ.

ಪಟಾಕಿ ಘಟಕದ ಒಳಗಿನ ರಾಸಾಯನಿಕ ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಕಾರ್ಖಾನೆಯ ಇತರ ಭಾಗಗಳಿಗೆ ವ್ಯಾಪಿಸಿ, ನಾಲ್ಕೈದು ಭಾರಿ ಸ್ಫೋಟಗಳು ಸಂಭವಿಸಿವೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ 10ಕ್ಕೂ ಹೆಚ್ಚು ಕೊಠಡಿಗಳು ಸಂಪೂರ್ಣವಾಗಿ ಧ್ವಂಸವಾಗಿವೆ.

ಘಟನೆಯಲ್ಲಿ ಇದುವರೆಗೆ 16 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸುಮಾರು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಕಾಶಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ನೋಯ್ಡಾ ಹಿಂಸಾಚಾರದ ಮಾಸ್ಟರ್​ಮೈಂಡ್ ಆದಿತ್ಯ ಆನಂದ್ ಅರೆಸ್ಟ್​

ಅಗ್ನಿಶಾಮಕ ದಳದ ಹಲವಾರು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ. ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಪತ್ತೆ ಹಚ್ಚಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮುಖ್ಯಮಂತ್ರಿಗಳ ಸಾಂತ್ವನ ಮತ್ತು ಪರಿಹಾರ

ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

“ವಿರುದುನಗರ ಜಿಲ್ಲೆಯ ಕಟ್ಟನಾರ್‌ಪಟ್ಟಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದ ವಾರ್ತೆ ಕೇಳಿ ನನಗೆ ಅತೀವ ದುಃಖವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು,” ಎಂದು ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಕ್ಷಣವೇ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿಕೊಳ್ಳಲು ಸಚಿವರಾದ ಕೆ.ಕೆ.ಎಸ್.ಎಸ್.ಆರ್ ರಾಮಚಂದ್ರನ್ ಮತ್ತು ತಂಗಂ ತೆನ್ನರಸು ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ತಕ್ಷಣದ ಪರಿಹಾರವನ್ನು ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!

ಕಳೆದ ವಾರವಷ್ಟೇ (ಏಪ್ರಿಲ್ 13) ವಿರುದುನಗರ ಜಿಲ್ಲೆಯ ಸಾತ್ತೂರು ಸಮೀಪದ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು. ಒಂದು ವಾರದ ಅಂತರದಲ್ಲಿ ಎರಡನೇ ದೊಡ್ಡ ದುರಂತ ಸಂಭವಿಸಿರುವುದು ಸ್ಥಳೀಯ ಕಾರ್ಮಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಈ ಅವಘಡಗಳಿಗೆ ಪ್ರಮುಖ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Shankha: ಮನೆಯಲ್ಲಿ ಶಂಖ ಇಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ – Kannada News | Shankha in Sanatana Dharma: Benefits and Rules for Placing Sacred Conch at Home

ಸನಾತನ ಧರ್ಮದಲ್ಲಿ ಶಂಖವನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರ ವಸ್ತುವೆಂದು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ 14 ರತ್ನಗಳಲ್ಲಿ ಶಂಖವೂ ಒಂದು. ಇದು ಸಕಾರಾತ್ಮಕ ಶಕ್ತಿಯ ಮೂಲವಾಗಿದ್ದು, ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದುದಾಗಿದೆ. ಶತಮಾನಗಳಿಂದಲೂ ಪೂಜೆ, ಪುನಸ್ಕಾರ ಮತ್ತು ಆರತಿಗಳ ಸಮಯದಲ್ಲಿ ಶಂಖದ ಬಳಕೆ ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿ ಶಂಖವಿದ್ದರೆ ನಕಾರಾತ್ಮಕ ಶಕ್ತಿಗಳು ದೂರವಾಗಿ, ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿದೆ. ಆದರೆ, ಅದರ ಪೂರ್ಣ ಫಲ ಪಡೆಯಲು ಕೆಲವು ಶಾಸ್ತ್ರೋಕ್ತ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

ಸ್ಥಾಪನೆಗೆ ಸರಿಯಾದ ದಿಕ್ಕು ಮತ್ತು ವಿಧಾನ:

ವಾಸ್ತು ಶಾಸ್ತ್ರದ ಪ್ರಕಾರ, ಶಂಖವನ್ನು ಮನೆಯ ದೇವರ ಕೋಣೆಯಲ್ಲಿ ಅಥವಾ ಪ್ರಾರ್ಥನಾ ಸ್ಥಳದಲ್ಲಿ ಇಡುವುದು ಅತ್ಯಂತ ಸೂಕ್ತ. ಇದನ್ನು ಯಾವಾಗಲೂ ಈಶಾನ್ಯ, ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಬೇಕು. ಈ ದಿಕ್ಕುಗಳು ದೈವಿಕ ಶಕ್ತಿಗೆ ಪೂರಕವಾಗಿದ್ದು, ಇಲ್ಲಿ ಶಂಖವನ್ನು ಪ್ರತಿಷ್ಠಾಪಿಸುವುದರಿಂದ ಮನೆಯಲ್ಲಿ ಧನಾತ್ಮಕ ಕಂಪನಗಳು ಹೆಚ್ಚಾಗುತ್ತವೆ. ಶಂಖವನ್ನು ಇರಿಸುವಾಗ ಅದನ್ನು ನೇರವಾಗಿ ನೆಲದ ಮೇಲೆ ಇಡದೆ, ಒಂದು ಸ್ವಚ್ಛವಾದ ರೇಷ್ಮೆ ಬಟ್ಟೆ ಅಥವಾ ಪೀಠದ ಮೇಲೆ ಇರಿಸುವುದು ಶಾಸ್ತ್ರಸಮ್ಮತವಾದ ಕ್ರಮವಾಗಿದೆ.

ಪಾಲಿಸಬೇಕಾದ ಪ್ರಮುಖ ನಿಯಮಗಳು:

ಶಂಖವನ್ನು ಕೇವಲ ಅಲಂಕಾರಿಕ ವಸ್ತುವಾಗಿ ಬಳಸದೆ, ಭಕ್ತಿಪೂರ್ವಕವಾಗಿ ಆರಾಧಿಸಬೇಕು. ಪೂಜೆಯಲ್ಲಿ ಮುಖ್ಯವಾಗಿ ಎರಡು ರೀತಿಯ ಶಂಖಗಳಿರುತ್ತವೆ: ಬಲಮುರಿ ಮತ್ತು ಎಡಮುರಿ. ಬಲಮುರಿ ಶಂಖವನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪವೆಂದು ಪರಿಗಣಿಸಿ ಕೇವಲ ಪೂಜೆಗೆ ಮಾತ್ರ ಬಳಸಲಾಗುತ್ತದೆ. ಎಡಮುರಿ ಶಂಖವನ್ನು ಮಂಗಳಕರ ಶಬ್ದಕ್ಕಾಗಿ ಊದಲು ಬಳಸಲಾಗುತ್ತದೆ. ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಪೂಜೆಯ ನೀರು ತುಂಬಲು ಮತ್ತು ಊದಲು ಒಂದೇ ಶಂಖವನ್ನು ಬಳಸಬಾರದು; ಇವೆರಡಕ್ಕೂ ಪ್ರತ್ಯೇಕ ಶಂಖಗಳಿರುವುದು ಶ್ರೇಯಸ್ಕರ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ತಪ್ಪಿಸಬೇಕಾದ ಅಂಶಗಳು ಮತ್ತು ಎಚ್ಚರಿಕೆ:

ಶಂಖದ ವಿಚಾರದಲ್ಲಿ ಮಾಡುವ ಸಣ್ಣ ತಪ್ಪುಗಳು ಅಶುಭ ಫಲ ನೀಡಬಹುದು. ಶಂಖವನ್ನು ಎಂದಿಗೂ ಅಶುದ್ಧ ಅಥವಾ ಕೊಳಕು ಸ್ಥಳಗಳಲ್ಲಿ ಇರಿಸಬಾರದು. ಸೂರ್ಯಾಸ್ತದ ನಂತರ ಅಥವಾ ರಾತ್ರಿಯ ಸಮಯದಲ್ಲಿ ಶಂಖ ಊದುವುದನ್ನು ನಿಷೇಧಿಸಲಾಗಿದೆ; ಇದನ್ನು ಕೇವಲ ಮುಂಜಾನೆ ಮತ್ತು ಸಂಜೆಯ ಪೂಜೆಯ ಸಮಯದಲ್ಲಿ ಮಾತ್ರ ಬಳಸಬೇಕು. ಒಂದು ವೇಳೆ ಶಂಖವು ಭಿನ್ನವಾಗಿದ್ದರೆ ಅಥವಾ ಒಡೆದಿದ್ದರೆ ಅಂತಹ ಶಂಖವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು, ಏಕೆಂದರೆ ಅದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.

ಶಂಖದಿಂದಾಗುವ ಅದ್ಭುತ ಪ್ರಯೋಜನಗಳು:

ಮನೆಯಲ್ಲಿ ನಿಯಮಬದ್ಧವಾಗಿ ಶಂಖವನ್ನು ಇಟ್ಟು ಪೂಜಿಸುವುದರಿಂದ ವಾತಾವರಣವು ಶುದ್ಧೀಕರಣಗೊಳ್ಳುತ್ತದೆ. ಶಂಖದ ಧ್ವನಿಯು ಪರಿಸರದಲ್ಲಿರುವ ಕ್ರಿಮಿಕೀಟಗಳನ್ನು ನಾಶಪಡಿಸುವುದಲ್ಲದೆ, ಮಾನಸಿಕ ಶಾಂತಿಯನ್ನು ನೀಡುತ್ತದೆ. ಇದು ಮನೆಯ ಸದಸ್ಯರಲ್ಲಿ ಸಕಾರಾತ್ಮಕ ಚಿಂತನೆಯನ್ನು ಮೂಡಿಸಿ, ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ ಎರಡರಲ್ಲೂ ಶಂಖದ ಉಪಸ್ಥಿತಿಯು ಮನೆಗೆ ಒಂದು ದೈವಿಕ ಕಳೆಯನ್ನು ತರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version