ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ನಟ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ – Kannada News | Spandana Somanna says Gilli Nata become close to her family for this reason

ಕಿರುತೆರೆ ಸೀರಿಯಲ್ ಮೂಲಕ ಫೇಮಸ್ ಆದ ನಟಿ ಸ್ಪಂದನಾ ಸೋಮಣ್ಣ ಅವರು ಬಿಗ್ ಬಾಸ್ (BBK 12) ಶೋನಿಂದ ಎಲಿಮಿನೇಟ್ ಆಗಿ ಬಂದಿದ್ದಾರೆ. ‘ಟಿವಿ9’ ಜೊತೆ ಮಾತನಾಡಿದ ಅವರು ಬಿಗ್ ಬಾಸ್ ಮನೆಯೊಳಗಿನ ವಿಷಯಗಳನ್ನು ಹಂಚಿಕಂಡಿದ್ದಾರೆ. ಫ್ಯಾಮಿಲಿ ವೀಕ್​​ನಲ್ಲಿ ಸ್ಪಂದನಾ ಅವರ ಕುಟುಂಬದವರು ಬಿಗ್ ಬಾಸ್ ಮನೆಗೆ ಬಂದಾಗ ಗಿಲ್ಲಿ ನಟ (Gilli Nata) ಜೊತೆ ಹೆಚ್ಚು ಮಾತನಾಡಿದ್ದರು. ಅದಕ್ಕೆ ಕಾರಣ ಏನು ಎಂಬುದನ್ನು ಸ್ಪಂದನಾ ವಿವರಿಸಿದ್ದಾರೆ. ‘ಅದು ತುಂಬಾ ಸ್ಪೆಷಲ್ ಆಗಿತ್ತು. ಯಾಕೆಂದರೆ ನಮ್ಮ ಅಪ್ಪ ಪೂರ್ತಿ ಗಿಲ್ಲಿ ರೀತಿಯೇ ಮಾತನಾಡುತ್ತಿದ್ದರು. ತುಂಬಾ ಗೊತ್ತಿರುವವರ ರೀತಿ ಮಾತನಾಡುತ್ತಿದ್ದರು. ನಾನು ಮತ್ತು ಗಿಲ್ಲಿ ಒಂದೇ ಭಾಷೆಯಲ್ಲಿ ಮಾತನಾಡುತ್ತಿದ್ದೆವು. ಅದಕ್ಕೆ ಅವರು ಕನೆಕ್ಟ್ ಆಗಿದ್ದಾರೆ ಎನಿಸುತ್ತದೆ. ಅವರ ಅಪ್ಪ-ಅಮ್ಮ ಬಂದಾಗ ಕೂಡ ಚೆನ್ನಾಗಿ ಮಾತಾಡಿದರು. ನಾವು ಒಂದೇ ಕಡೆಯವರು ಆದ್ದರಿಂದ ಗಿಲ್ಲಿ ಜೊತೆ ನಮ್ಮ ತಂದೆ ಕನೆಕ್ಟ್ ಆದರು’ ಎಂದು ಸ್ಪಂದನಾ ಸೋಮಣ್ಣ (Spandana Somanna) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಷ್ಟರಲ್ಲೇ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಶಿಖರ್ ಧವನ್- ಸೋಫಿ ಶೈನ್

Source link

ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಖತರ್ನಾಕ್ ಮಹಿಳೆಯರು! – Kannada News | Viral Video Women stole 14 Lakh Rs Worth Gold Jewelry From Kalyan Jewellers In Prayagraj

ಪ್ರಯಾಗ್‌ರಾಜ್, ಜನವರಿ 6: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆಘಾತಕಾರಿ ಘಟನೆ (Shocking News) ಬೆಳಕಿಗೆ ಬಂದಿದೆ. ಕಲ್ಯಾಣ್ ಜ್ಯುವೆಲ್ಲರ್ಸ್ ಅಂಗಡಿಯಿಂದ ಮೂವರು ಮಹಿಳೆಯರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಈ ಕಳ್ಳತನವು 14 ನಿಮಿಷಗಳ ಕಾಲ ನಡೆಯಿತು. ಆ ಮಹಿಳೆಯರು ಯಾರಿಗೂ ಗೊತ್ತಾಗದಂತೆಯೇ ಕಳ್ಳತನ ಮಾಡಿದ್ದರು. ಆದರೆ, ಸಿಸಿಟಿವಿಯಲ್ಲಿ ಅವರ ಕಳ್ಳತನ ಸೆರೆಯಾಗಿದೆ.

ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ವೀಡಿಯೊದಲ್ಲಿ ಗಾಜಿನ ಕೌಂಟರ್ ಎದುರು ಕುಳಿತಿದ್ದ ಮೂವರು ಮಹಿಳೆಯರು ಚಿನ್ನದ ಕಿವಿಯೋಲೆಗಳನ್ನು ನೋಡುತ್ತಿದ್ದರು. ಆಗ ಒಬ್ಬ ಮಹಿಳೆ ಸೇಲ್ಸ್​​ನವರ ಗಮನವನ್ನು ಬೇರೆಡೆಗೆ ಸೆಳೆಯುತ್ತಾಳೆ. ಆಗ ಒಬ್ಬಳು ಮಹಿಳೆ ಗಾಜಿನ ಕೌಂಟರ್ ಒಳಗಿನಿಂದ ಆಭರಣಗಳ ಪೆಟ್ಟಿಗೆಯನ್ನು ತೆಗೆದುಕೊಂಡು ಅದನ್ನು ಇನ್ನೊಬ್ಬಳಿಗೆ ನೀಡುತ್ತಾಳೆ. ಅವಳು ಅದನ್ನು ತನ್ನ ಶಾಲಿನೊಳಗೆ ಮರೆಮಾಡುತ್ತಾಳೆ. ಈ ವಿಷಯ ಅಲ್ಲಿದ್ದವರ ಯಾರ ಗಮನಕ್ಕೂ ಬರಲೇ ಇಲ್ಲ. ಆದರೆ, ಒಂದು ಟ್ರೇ ಫುಲ್ ಆಭರಣ ನಾಪತ್ತೆಯಾಗಿದ್ದರಿಂದ ಸಿಸಿಟಿವಿ ಪರಿಶೀಲಿಸಿದಾಗ ಈ ಕಳ್ಳತನ ಬಯಲಾಗಿದೆ. ಆ ಮಹಿಳೆಯರನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನದಲ್ಲೂ ‘ಬಾರ್ಡರ್ 2’ ಸಿನಿಮಾ ರಿಲೀಸ್ ಮಾಡುವಂತೆ ಫ್ಯಾನ್ಸ್ ಒತ್ತಾಯ – Kannada News | Varun Dhawan fan from Pakistan wants to watch Border 2 movie

ಭಾರತ ಮತ್ತು ಪಾಕಿಸ್ತಾನದ ನಡುವೆ ವಾತಾವರಣ ಸರಿಯಿಲ್ಲ. ಪಾಕ್ (Pakistan) ನಡೆಸಿದ ಭಯೋತ್ಪಾದಕ ದಾಳಿಗಳ ಬಳಿಕ ಆ ದೇಶದ ಜೊತೆ ಭಾರತ ಬಹುತೇಕ ವ್ಯವಹಾರಗಳನ್ನು ಕಡಿತಗೊಳಿಸಿಕೊಂಡಿದೆ. ಭಾರತೀಯ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆ ಆಗುವುದಿಲ್ಲ. ಅದೇ ರೀತಿ, ಅಲ್ಲಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಭಾರತೀಯ ಚಿತ್ರರಂಗದಲ್ಲಿ ಅವಕಾಶ ನಿರಾಕರಿಸಲಾಗಿದೆ. ಹಾಗಿದ್ದರೂ ಕೂಡ ‘ಬಾರ್ಡರ್ 2’ (Border 2) ಸಿನಿಮಾವನ್ನು ಪಾಕಿಸ್ತಾನದಲ್ಲಿ ರಿಲೀಸ್ ಮಾಡುವಂತೆ ಅಲ್ಲಿನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್ (Varun Dhawan), ಅಹಾನ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ಅನುರಾಗ್ ಸಿಂಗ್ ಅವರು ‘ಬಾರ್ಡರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. 1971ರಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಿನ ಯುದ್ಧದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಆದ್ದರಿಂದ ಸಹಜವಾಗಿಯೇ ಪಾಕ್ ಮಂದಿಗೂ ಈ ಸಿನಿಮಾ ಮೇಲೆ ಕುತೂಹಲ ಇದೆ. ಭಾರತದಲ್ಲಿ ಹಾಗೂ ಇತರೆ ದೇಶಗಳಲ್ಲಿ ಈ ಸಿನಿಮಾ ಜನವರಿ 23ರಂದು ತೆರೆಕಾಣಲಿದೆ.

ಪಾಕಿಸ್ತಾನದಲ್ಲಿ ‘ಬಾರ್ಡರ್ 2’ ಬಿಡುಗಡೆ ಆಗುವುದಿಲ್ಲ. ಹಾಗಿದ್ದರೂ ಕೂಡ ಅಲ್ಲಿ ಇರುವ ವರುಣ್ ಧವನ್ ಅಭಿಮಾನಿಯೊಬ್ಬ ಸೋಶಿಯಲ್ ಮೀಡಿಯಾ ಮೂಲಕ ಈ ಬಗ್ಗೆ ವಿಚಾರಿಸಿದ್ದಾನೆ. ‘ಅಣ್ಣ.. ನಿಮ್ಮ ಸಿನಿಮಾ ಪಾಕಿಸ್ತಾನದಲ್ಲಿ ಯಾವಾಗ ಬಿಡುಗಡೆ ಆಗುತ್ತದೆ? ನಾನು ಸನ್ನಿ ಡಿಯೋಲ್ ಅಭಿಮಾನಿ. ಅವರಿಗೆ ನನ್ನ ಸಲಾಂ ತಿಳಿಸಿ’ ಎಂದು ಹೇಳಿದ್ದಾರೆ.

ಅದಕ್ಕೆ ವರುಣ್ ಧವನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘1971ರ ಯುದ್ಧ ಮತ್ತು ಅದರ ಸುತ್ತಮುತ್ತ ನಡೆದ ಸತ್ಯ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಸನ್ನಿ ಸರ್ ಅವರಿಗೆ ಪಾಕಿಸ್ತಾನದಲ್ಲಿ ಕೂಡ ಸಾಕಷ್ಟು ಅಭಿಮಾನಿಗಳು ಇದ್ದಾರೆ ಎಂಬುದು ನನಗೆ ಖಂಡಿತವಾಗಿ ತಿಳಿದಿದೆ’ ಎಂದು ವರುನ್ ಧವನ್ ಅವರು ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ರಿಲೀಸ್ ಆಯ್ತು ‘ಬಾರ್ಡರ್ 2’ ಸಿನಿಮಾ ಟೀಸರ್

1997ರಲ್ಲಿ ‘ಬಾರ್ಡರ್’ ಸಿನಿಮಾ ತೆರೆಕಂಡಿತ್ತು. ಅದರ ಸೀಕ್ವೆಲ್ ‘ಬಾರ್ಡರ್ 2’ ಈಗ ಬಿಡುಗಡೆ ಸಜ್ಜಾಗಿದೆ. ಸನ್ನಿ ಡಿಯೋಲ್, ಅಹಾನ್ ಶೆಟ್ಟಿ, ವರುಣ್ ಧವನ್, ದಿಲ್ಜಿತ್ ದೋಸಾಂಜ್, ಮೋನಾ ಸಿಂಗ್, ಸೋನಂ ಭಾಜ್ವ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಸುನೀಲ್ ಶೆಟ್ಟಿ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿತ್ರದುರ್ಗ: ಮರಕ್ಕೆ ಬೊಲೆರೊ ವಾಹನ ಡಿಕ್ಕಿ; ಒಂದೇ ಗ್ರಾಮದ ನಾಲ್ವರು ಕಾರ್ಮಿಕರು ಸಾವು – Kannada News | Chitradurga Bolero Accident: 4 Workers Dead Near Andanur

ಚಿತ್ರದುರ್ಗ, ಜನವರಿ 06: ಮರಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಬಳಿ ನಡೆದಿದೆ. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಅಡಕೆ ಲೋಡ್​​ ಇಳಿಸಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಕಿರಣ್(25), ಅರುಣ್(32), ಹನುಮಂತ(32) ಮತ್ತು ಗಿರಿರಾಜ್(46) ಮೃತರು. ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ.

Source link

ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ – Kannada News | DCM DK Shivakumar Wishes Siddaramaiah For Becoming Longest Serving CM of Karnataka

ಬೆಂಗಳೂರು, ಜನವರಿ 6: ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರು ದಾಖಲೆಯನ್ನು ಮುರಿದಿರುವ ಸಿದ್ದರಾಮಯ್ಯನವರಿಗೆ (Siddaramaiah) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಇಬ್ಬರ ನಡುವೆ ಅಧಿಕಾರದ ವಿಷಯಕ್ಕೆ ಶೀತಲ ಸಮರ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರ ನಡುವೆ ಸಿದ್ದರಾಮಯ್ಯನವರ ಸಾಧನೆಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ‘ಶುಭವಾಗಲಿ,’ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರಿಗೆ ಒಳ್ಳೆಯದಾಗಲಿ. ನಾನು ಅವರಿಗೆ ಶುಭ ಹಾರೈಸುತ್ತೇನೆ. ಶುಭವಾಗಲಿ ಎಂದು ಡಿಕೆ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral Photo: ನೀವು ಕೂಡ ಮನೆ ಮುಂದೆ ಈ ದೊಡ್ಡ ಕಣ್ಣುಗಳ ಮಹಿಳೆಯ ಫೋಟೋ ನೋಡಿದ್ದೀರಾ? – Kannada News | Why Is The Big Eyed Mystery Woman photo hanging At Bengaluru Construction Sites Viral News

ಬೆಂಗಳೂರು, ಜನವರಿ 6: ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ನಿರ್ಮಾಣವಾಗುತ್ತಿರುವ ಕಟ್ಟಡವಿದ್ದರೆ ಅಥವಾ ಹೊಸದಾಗಿ ಕಟ್ಟಿದ ಮನೆಯಿದ್ದರೆ ಅದರ ಮುಂದೆ ನೀವು ಈ ದೊಡ್ಡ ಕಣ್ಣುಗಳ ಮಹಿಳೆಯ ಭಯಭೀತಗೊಳಿಸುವ ಫೋಟೋವನ್ನು ಖಂಡಿತ ನೋಡಿರುತ್ತೀರಿ. ಅದರಲ್ಲೂ ನೀವು ಬೆಂಗಳೂರಿನಲ್ಲಿ (Bengaluru) ಇರುವವರಾದರೆ ಈ ಫೋಟೋ ನೋಡದೆ ಇರಲು ಸಾಧ್ಯವೇ ಇಲ್ಲ. ಸೀರೆಯುಟ್ಟ ಮಹಿಳೆ ದೊಡ್ಡ ಬಟ್ಟಲುಕಂಗಳನ್ನು ಬಿಟ್ಟುಕೊಂಡು ಹೆದರಿಸುತ್ತಿರುವ ಫೋಟೋ ಇದಾಗಿದೆ. ಈ ಫೋಟೋದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ.

ಸಾಮಾನ್ಯವಾಗಿ, ಯಾವುದಾದರೂ ಹೊಸ ಕಟ್ಟಡ ಕಟ್ಟುವಾಗ, ಅಥವಾ ಕಟ್ಟಿದ ಮನೆಯ ಗೃಹಪ್ರವೇಶಕ್ಕೂ ಮೊದಲು ಆ ಮನೆಗೆ ದೃಷ್ಟಿಯಾಗಬಾರದು ಎಂದು ವಿಕಾರವಾದ ಯಾವುದಾದರೂ ಮುಖವಾಡ ತಂದು ನೇತುಹಾಕುವುದು ವಾಡಿಕೆ. ಆದರೆ, ಆ ಮುಖವಾಡದ ಜಾಗವನ್ನು ಈಗ ಈ ಮಹಿಳೆ ಆವರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ಸಾಕು ನಾಯಿಯ ರಕ್ಷಣೆ; ವಿಡಿಯೋ ವೈರಲ್

ಮಹಾರಾಷ್ಟ್ರದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಹಲವು ಮನೆಗಳ ಎದುರು ಈ ಮಹಿಳೆಯ ಫೋಟೋ ನೋಡಿದ್ದರು. ಯಾರೀಕೆ? ಎಂದು ತಲೆಕೆಡಿಸಿಕೊಂಡಿದ್ದರು. ಗೂಗಲ್ ಲೆನ್ಸ್​​ನಲ್ಲಿ ಈ ಫೋಟೋ ಹಾಕಿ ಹುಡುಕಿದರೂ ಮಾಹಿತಿ ಸಿಗಲಿಲ್ಲ ಎಂದು ಆ ಮಹಿಳೆ ಫೇಸ್​​​ಬುಕ್​ನಲ್ಲಿ ಬರೆದಿದ್ದರು. ಈ ಪೋಸ್ಟ್ ಕೂಡಲೆ ಎಲ್ಲರ ಗಮನ ಸೆಳೆಯಿತು. ಇದು 3.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು ಮತ್ತು ಭಾರೀ ಚರ್ಚೆಗೆ ನಾಂದಿ ಹಾಡಿತು.

ಅನೇಕ ಬಳಕೆದಾರರು ಈ ಫೋಟೋ ಹಾಕುವ ಕಾರಣವನ್ನು ವಿವರಿಸಿದ್ದಾರೆ. ಕೆಟ್ಟ ದೃಷ್ಟಿ ತಗುಲದಂತೆ ಈ ರೀತಿಯ ಫೋಟೋಗಳನ್ನು ಹಾಕಲಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು ಈ ರೀತಿ ಮಹಿಳೆಯ ಫೋಟೋ ಹಾಕಿದ್ದಕ್ಕೆ ಕೋಪವನ್ನೂ ಹೊರಹಾಕಿದ್ದಾರೆ. ಮೀಮ್​​ಗಳಿಂದ ಪ್ರಭಾವಿತರಾಗಿ ರೀಲ್ಸ್ ಮಾಡುವ ಮಹಿಳೆಯ ಫೋಟೋವನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ.

ಇದನ್ನೂ ಓದಿ: Video: ಟೊಮೊಟೊ ಬಳಸಿ ಪೂರಿ ಲಟ್ಟಿಸಿದ ಯುವಕ, ವೈರಲ್‌ ಆಯ್ತು ದೃಶ್ಯ

ಬಾಟ್ ಪ್ರಕಾರ, ಈ ಫೋಟೋದಲ್ಲಿರುವ ಮಹಿಳೆ ಕರ್ನಾಟಕದ ಯೂಟ್ಯೂಬರ್ ನಿಹಾರಿಕಾ ರಾವ್. ಅವರ ಈ ವಿಚಿತ್ರವಾದ ಮುಖಭಾವವು 2023ರ ವೈರಲ್ ವೀಡಿಯೊ ಕ್ಲಿಪ್‌ನಿಂದ ಹುಟ್ಟಿಕೊಂಡಿತು. ಅದು ನಂತರ ಜನಪ್ರಿಯ ಮೀಮ್ ಆಗಿ ವೈರಲ್ ಆಗಿತ್ತು. ಕ್ರಮೇಣ ಆಕೆಯ ಆ ಫೋಟೋವನ್ನು ದೃಷ್ಟಿಗೊಂಬೆಯ ಬದಲು ಹಲವರು ತಮ್ಮ ಮನೆಯೆದುರು ಹಾಕಲಾರಂಭಿಸಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

0,0,0,1,4,1.. ಕೊನೆಯ ಓವರ್​ನಲ್ಲಿ ತಂಡದ ಸೋಲಿಗೆ ಕಾರಣರಾದ ಡೇವಿಡ್ ವಾರ್ನರ್; ವಿಡಿಯೋ – Kannada News | BBL: David Warner’s Fifty Fails to Save Sydney Thunder from Another Loss

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ತಂಡದ ಅದೃಷ್ಟ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ಡೇವಿಡ್ ವಾರ್ನರ್ ನಾಯಕತ್ವದ ತಂಡಕ್ಕೆ ಗೆಲುವಿನ ಸಿಹಿಗಿಂತ ಸೋಲಿನ ಕಹಿಯೇ ಎದುರಾಗುತ್ತಿದೆ. ಅದರಲ್ಲೂ ಗೆಲ್ಲುವ ಪಂದ್ಯವನ್ನು ಕಳೆದುಕೊಳ್ಳುತ್ತಿರುವುದು ಸಿಡ್ನಿ ತಂಡದ ದುರಾದೃಷ್ಟವಾಗಿದೆ. ಇಂದು ನಡೆದ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲೂ ಸ್ವತಃ ನಾಯಕ ಡೇವಿಡ್ ವಾರ್ನರ್ ಕೈನಿಂದಲೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಒಂದರರ್ಥದಲ್ಲಿ ತಂಡದ ಸೋಲಿಗೆ ನಾಯಕ ವಾರ್ನರ್ ಕಾರಣ ಎಂದರಲೂ ತಪ್ಪಾಗಲಾರದು.

ಜನವರಿ 6, ಮಂಗಳವಾರ ಅಡಿಲೇಡ್‌ನಲ್ಲಿ ನಡೆದ ಬಿಬಿಎಲ್‌ ಪಂದ್ಯದಲ್ಲಿ ಸಿಡ್ನಿ ಥಂಡರ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ಮುಖಾಮುಖಿಯಾಗಿದ್ದವು. ಅಡಿಲೇಡ್ ನೀಡಿದ 166 ರನ್‌ಗಳ ಗುರಿಗೆ ಪ್ರತಿಕ್ರಿಯೆಯಾಗಿ, ವಾರ್ನರ್ ಮತ್ತು ಮ್ಯಾಥ್ಯೂ ಜಿಲ್ಕ್ಸ್ 10 ಓವರ್‌ಗಳಲ್ಲಿ 73 ರನ್‌ಗಳನ್ನು ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಆದಾಗ್ಯೂ, ಜಿಲ್ಕ್ಸ್ ಔಟಾದ ನಂತರ ತಂಡದ ಇನ್ನಿಂಗ್ಸ್ ಕುಸಿಯಲಾರಂಭಿಸಿ 77 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ, ವಾರ್ನರ್ ಮತ್ತು ನಿಕ್ ಮ್ಯಾಡಿನ್ಸನ್ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿ ತಂಡವನ್ನು 121 ರನ್‌ಗಳಿಗೆ ಕೊಂಡೊಯ್ದರು.

ಈ ಹೊತ್ತಿಗೆ, ನಾಯಕ ವಾರ್ನರ್ ಈಗಾಗಲೇ ಅರ್ಧಶತಕ ಪೂರೈಸಿದ್ದರು. ಆದರೆ ಇನ್ನು ತುದಿಯಲ್ಲಿ ವಿಕೆಟ್‌ಗಳ ಪತನ ಮುಂದುವರೆದಿತ್ತು. ಅಂತಿಮವಾಗಿ, ತಂಡದ ಗೆಲುವಿಗೆ 20 ನೇ ಓವರ್‌ನಲ್ಲಿ 13 ರನ್‌ಗಳು ಬೇಕಾಗಿದ್ದವು. ವಾರ್ನರ್ ಸ್ಟ್ರೈಕ್‌ನಲ್ಲಿದ್ದ ಕಾರಣ ಅವರು ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ಬಳಿಕ ನಡೆದಿದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು.

ಇಂಗ್ಲಿಷ್ ವೇಗಿ ಲ್ಯೂಕ್ ವುಡ್ ಅವರ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ವಾರ್ನರ್ ಒಂದೇ ಒಂದು ರನ್ ಗಳಿಸಲಿಲ್ಲ. ಇದರಿಂದ ಪಂದ್ಯ ಸಿಡ್ನಿ ತಂಡದಿಂದ ಕೈನಿಂದ ಜಾರಲು ಪ್ರಾರಂಭಿಸಿತು. ನಾಲ್ಕನೇ ಎಸೆತದಲ್ಲಿ ವಾರ್ನರ್ ಕೇವಲ ಒಂದು ರನ್ ಗಳಿಸಿದಾಗ ಸೋಲು ಬಹುತೇಕ ಖಚಿತವಾಯಿತು. ಐದನೇ ಎಸೆತದಲ್ಲಿ ಬೌಂಡರಿ ಬಾರಿಸಲಾಯಿತ್ತಾದರೂ ಅದು ತುಂಬಾ ತಡವಾಗಿತ್ತು. ಕೊನೆಯ ಎಸೆತದಲ್ಲಿ ಒಂದು ರನ್ ಕಲೆಹಾಕಿದ ಸಿಡ್ನಿ ಥಂಡರ್ ಪಂದ್ಯವನ್ನು ಆರು ರನ್‌ಗಳಿಂದ ಸೋತಿತು. ಕೊನೆಯವರೆಗೂ ಅಜೇಯರಾಗಿ ಉಳಿದ ವಾರ್ನರ್ 51 ಎಸೆತಗಳಲ್ಲಿ 67 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಥಂಡರ್ ಸತತ ನಾಲ್ಕನೇ ಮತ್ತು ಆವೃತ್ತಿಯ ಒಟ್ಟಾರೆ ಆರನೇ ಸೋಲನ್ನು ಅನುಭವಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು – Kannada News | Ballari Riot: Sriramulu Alleges Congress Activist Rajasekhar Body Burned for Evidence Destruction

ಬಳ್ಳಾರಿ, ಜನವರಿ 06: ಸಂಪ್ರದಾಯದ ಪ್ರಕಾರ ಕಾಂಗ್ರೆಸ್​​ ಕಾರ್ಯಕರ್ತ ರಾಜಶೇಖರ್​ ಮೃತದೇಹವನ್ನು ಮಣ್ಣು ಮಾಡಬೇಕಿತ್ತು. ಆದರೆ ಸುಟ್ಟು ಹಾಕಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಬಳ್ಳಾರಿ ಜನಾರ್ದನರೆಡ್ಡಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಶೇಖರ್ ಮೃತದೇಹವನ್ನ ಮಣ್ಣು ಮಾಡಬೇಕಿತ್ತು. ಸಾಕ್ಷಿ ನಾಶ ಮಾಡಬೇಕು ಅಂತ ವ್ಯವಸ್ಥಿತವಾಗಿ ಸುಟ್ಟು ಹಾಕಲಾಗಿದೆ. ಅವರ ಕುಟುಂಬಸ್ಥರನ್ನ ಪೊಲೀಸರು ಹೆದರಿಸಿ, ಬೆದರಿಸಿದ್ದಾರೆ. ಬಹಳಷ್ಟು ಬುಲೆಟ್ ಆತನ ದೇಹ ಹೊಕ್ಕಿದೆ. ಏಕೆ ಸುಟ್ಟು ಹಾಕಿದರು. ಇಂದಲ್ಲಾ ನಾಳೆ ಸತ್ಯ ಹೊರಗೆ ಬರುತ್ತೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕನ್ನಡ, ತಮಿಳು ಮುಂತಾದ ಭಾಷೆಯ 55 ಹೊಸ ಪುಸ್ತಕ ಬಿಡುಗಡೆ ಮಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ – Kannada News | Union Minister Dharmendra Pradhan releases 55 new Classical Language Books

ನವದೆಹಲಿ, ಜನವರಿ 6: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಶಾಸ್ತ್ರೀಯ ಭಾಷೆಗಳಾದ ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯಾದ ಶ್ರೇಷ್ಠತಾ ಕೇಂದ್ರಗಳು ಅಭಿವೃದ್ಧಿಪಡಿಸಿದ 55 ಸಾಹಿತ್ಯ ಕೃತಿಗಳನ್ನು ಇಂದು ಬಿಡುಗಡೆ ಮಾಡಿದರು. ಕನ್ನಡ, ತೆಲುಗು, ಮಲಯಾಳಂ, ಒಡಿಯಾ, ತಮಿಳು ಮತ್ತು ಸೈನ್ ಭಾಷೆಯಲ್ಲಿ ಪ್ರಕಟವಾದ ಈ ಹೊಸ ಕೃತಿಗಳು ಭಾರತದ ಶ್ರೀಮಂತ ಭಾಷಾ ಸಂಪ್ರದಾಯಗಳ ಸುತ್ತ ಸಂಶೋಧನೆ ಮತ್ತು ಶಿಕ್ಷಣವನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ. ಕೇಂದ್ರ ಸರ್ಕಾರವು ವಿಶಾಲವಾದ ರಾಷ್ಟ್ರೀಯ ಚಳವಳಿಯ ಭಾಗವಾಗಿ ಈ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.

“ಸೈನ್ ಭಾಷೆಯಲ್ಲಿ ತಿರುಕ್ಕುರಲ್‌ನ ವ್ಯಾಖ್ಯಾನ ಸೇರಿದಂತೆ ಶಾಸ್ತ್ರೀಯ ಭಾರತೀಯ ಭಾಷೆಗಳಲ್ಲಿ 55 ವಿದ್ವತ್ಪೂರ್ಣ ಸಂಪುಟಗಳನ್ನು ಬಿಡುಗಡೆ ಮಾಡಲು ನನಗೆ ಸಂತೋಷವಾಗಿದೆ. ಕನ್ನಡ, ತೆಲುಗು, ಮಲಯಾಳಂ, ಒಡಿಯಾ, ತಮಿಳು ಮತ್ತು ಸಂಕೇತದ ಭಾಷೆಗಳಲ್ಲಿ ಈ ಸಾಹಿತ್ಯ ಕೃತಿಗಳು ಭಾರತದ ಭಾಷಾ ಪರಂಪರೆಯನ್ನು ಶಿಕ್ಷಣ, ಸಂಶೋಧನೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಕೇಂದ್ರದಲ್ಲಿ ಇರಿಸುವ ನಮ್ಮ ದೊಡ್ಡ ರಾಷ್ಟ್ರೀಯ ಪ್ರಯತ್ನದ ಒಂದು ಭಾಗವಾಗಿದೆ” ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮೋದಿಯ ಜೀವನ ರಾಷ್ಟ್ರಸೇವೆಯ ಸಂಕೇತ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬಣ್ಣನೆ

“ದೇಶದ ವೈವಿಧ್ಯಮಯ ಜನಸಂಖ್ಯೆಯನ್ನು ಏಕೀಕರಿಸುವಲ್ಲಿ ಭಾರತೀಯ ಭಾಷೆಗಳು ಬಹಳ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸಿವೆ. ಭಾರತದ ಸಾಹಿತ್ಯ ಪರಂಪರೆಯನ್ನು ಜನಪ್ರಿಯಗೊಳಿಸುವ ಮತ್ತು ಸಂರಕ್ಷಿಸುವ ಕಡೆಗೆ ನಾವು ಕೆಲಸ ಮಾಡುತ್ತಿದ್ದೇವೆ. ಭಾರತೀಯ ಭಾಷೆಗಳು ಅಭಿವ್ಯಕ್ತಿಯ ಮಾಧ್ಯಮವಾಗಿದ್ದು, ಸರ್ಕಾರವು ಈ ಭಾಷೆಗಳ ರಕ್ಷಣೆಗೆ ಬದ್ಧವಾಗಿದೆ” ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪ್ರತಿಯೊಂದು ಭಾರತೀಯ ಭಾಷೆಯನ್ನು ಮುಖ್ಯವೆಂದು ಪರಿಗಣಿಸಬೇಕು ಎಂಬ ಹೇಳಿಕೆಗಳೊಂದಿಗೆ ಸರ್ಕಾರ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಇತಿಹಾಸದಾದ್ಯಂತ ಸವಾಲುಗಳ ಹೊರತಾಗಿಯೂ, ಭಾರತೀಯ ಭಾಷೆಗಳು ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಂಡಿವೆ. ಈ ಸಂಪ್ರದಾಯಗಳನ್ನು ದುರ್ಬಲಗೊಳಿಸಲು ಪದೇ ಪದೇ ಪ್ರಯತ್ನಗಳು ನಡೆದರೂ ಅವು ಗಟ್ಟಿಯಾಗಿ ನಿಂತಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು; ಧರ್ಮೇಂದ್ರ ಪ್ರಧಾನ್ ಒತ್ತಾಯ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಭಾಷೆಗಳನ್ನು ನಿಗದಿತ ಪಟ್ಟಿಯಲ್ಲಿ ಸೇರಿಸಲು ಮತ್ತು ಶಾಸ್ತ್ರೀಯ ಪಠ್ಯಗಳನ್ನು ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ವಿಸ್ತೃತ ಪ್ರಯತ್ನಗಳು ನಡೆದಿವೆ. ಈ ಭಾಷೆಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸುವತ್ತ ಸರ್ಕಾರ ಒತ್ತು ನೀಡಿದೆ. “ಭಾರತ ಪ್ರಜಾಪ್ರಭುತ್ವದ ತಾಯಿ ಮತ್ತು ಅಪಾರ ಭಾಷಾ ವೈವಿಧ್ಯತೆಯ ದೇಶ. ನಮ್ಮ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಪತ್ತನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿಯಾಗಿರಬೇಕು” ಎಂದು ಧರ್ಮೇಂದ್ರ ಪ್ರಧಾನ್ ಪೋಸ್ಟ್‌ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version