ಹಾರ್ಮುಜ್​ನಲ್ಲಿ ಅಮೆರಿಕದ ಪೈಲಟ್​ಗಳ ಜೀವ ಉಳಿಸಿದ ಡ್ರೋನ್ ಬೋಟ್; ಇದರ ಹಿಂದಿರುವ ಶಕ್ತಿ ವಿಭವ್ ಅಲ್ಟೇಕರ್ – Kannada News

ವಾಷಿಂಗ್ಟನ್, ಜೂನ್ 10: ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆದ ಅತ್ಯಂತ ರೋಮಾಂಚಕ ರಕ್ಷಣಾ ಕಾರ್ಯಾಚರಣೆಯೊಂದರಲ್ಲಿ ಭಾರತೀಯ ಮೂಲದ ಇಂಜಿನಿಯರ್ ಒಬ್ಬರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಅಪಘಾತಕ್ಕೀಡಾಗಿದ್ದ ಅಮೆರಿಕ ಸೇನೆಯ ಪೈಲಟ್‌ಗಳನ್ನು ರಕ್ಷಿಸಿದ ಡ್ರೋನ್ ಬೋಟ್ ಕಾರ್ಯಾಚರಣೆ ಅನೇಕರ ಗಮನ ಸೆಳೆದಿದೆ. ಈ ವೇಳೆ, ಭಾರತ ಮೂಲದವರಾದ ವಿಭವ್ ಅಲ್ಟೇಕರ್ (Vibhav Altekar) ಅವರ ಹೆಸರು ಮುನ್ನೆಲೆಗೆ ಬಂದಿದೆ. ಅಮೆರಿಕ ವಾಯುಸೇನೆಯ ಅಪಾಚೆ ಹೆಲಿಕಾಪ್ಟರ್ ಸಮುದ್ರಕ್ಕೆ ಬಿದ್ದಾಗ, ಅದರ ಪೈಲಟ್ ಮತ್ತು…

Read More

ಫುಟ್​​ಬಾಲ್ ವಿಶ್ವಕಪ್ ಉದ್ಘಾಟನೆಯಲ್ಲಿ ಹೀಗಿತ್ತು ನೋರಾ ಫತೇಹಿ ಪ್ರದರ್ಶನ

ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಫುಟ್​​ಬಾಲ್ ವಿಶ್ವಕಪ್ ಉದ್ಘಾಟನೆ ವೇಳೆ ಅದ್ಧೂರಿ ನೃತ್ಯ ಮತ್ತು ಗಾಯನ ಪ್ರದರ್ಶನ ನೀಡಿದ್ದಾರೆ. ನಟನೆ, ಐಟಂ ಡ್ಯಾನ್ಸ್ ಜೊತೆಗೆ ಇತ್ತೀಚೆಗೆ ಆಲ್ಬಂ ಹಾಡುಗಳನ್ನು ಮಾಡುವತ್ತ ಗಮನ ಹರಿಸಿದ್ದ ನೋರಾ ಫತೇಹಿ ಈ ಹಿಂದೆ ಕೆಲವು ವಿದೇಶಿ ಆಲ್ಬಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು, ಖುದ್ದು ತಾವೇ ಆಲ್ಬಂಗಳನ್ನು ಹೊರತಂದಿದ್ದರು. ಇದೀಗ ಕೆಲ ಇತರೆ ಸಂಗೀತಗಾರರೊಟ್ಟಿಗೆ ಸೇರಿಕೊಂಡು ಫೀಫಾ ವಿಶ್ವಕಪ್ ಅನ್ನೇ ಗಮನದಲ್ಲಿರಿಸಿಕೊಂಡು ಆಲ್ಬಂ ಹೊರತಂದಿದ್ದಾರೆ. ಇದರ ಜೊತೆಗೆ ತಮ್ಮ ಹಾಡಿನ ಪ್ರದರ್ಶನವನ್ನು…

Read More

National Teacher Award 2026: ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ; ಕೇಂದ್ರ ಶಿಕ್ಷಣ ಸಚಿವಾಲಯದಿಂದ ನಾಮನಿರ್ದೇಶನಕ್ಕೆ ಮುಕ್ತ ಅವಕಾಶ!

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿImage Credit source: Pinterest ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಪ್ರಾಧ್ಯಾಪಕರು ಮತ್ತು ಬೋಧಕರನ್ನು ಗೌರವಿಸಲು ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2026’ ಕ್ಕಾಗಿ ಆನ್‌ಲೈನ್ ಮೂಲಕ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ತಾಂತ್ರಿಕ ಹಾಗೂ ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಶೈಕ್ಷಣಿಕ ನಾಯಕತ್ವ, ನಾವೀನ್ಯತೆ ಹಾಗೂ ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸಿದ ಆದರ್ಶ ಶಿಕ್ಷಕರನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತದೆ. ಈ…

Read More

ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ವಿಶೇಷ ಅನುಮತಿ ನೀಡಿದ ಸಿಎಂ ವಿಜಯ್ – Kannada News | Tamil Nadu CM Vijay grants special permission for Suriya Trisha starrer Karuppu 9 AM shows

ಕಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಕರುಪ್ಪು’ (Karuppu) ಸಿನಿಮಾ ಮೇ 14ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಬಿಡುಗಡೆ ಸಮಯದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Tamil Nadu CM Vijay) ಅವರು ಚಿತ್ರತಂಡಕ್ಕೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ ಮಾಡಲು ವಿಜಯ್ ಅವರು ಅನುಮತಿ ನೀಡಿದ್ದಾರೆ. ವಿಜಯ್ ಜೊತೆ ತ್ರಿಶಾ (Trisha) ಅವರು ಆಪ್ತತೆ…

Read More

BBL: ಸಿಡ್ನಿ ಸಿಕ್ಸರ್ಸ್ ಮಣಿಸಿ ಚಾಂಪಿಯನ್​ ಪಟ್ಟಕ್ಕೇರಿದ ಪರ್ತ್​; ಸಿಎಸ್​ಕೆ, ಮುಂಬೈ ದಾಖಲೆ ಧ್ವಂಸ – Kannada News | Perth Scorchers Dominate BBL 2025 26 Final, Clinch Record 6th Title and Most T20 Wins

2025-26 ರ ಬಿಗ್ ಬ್ಯಾಷ್ ಲೀಗ್‌ನ ಅಂತಿಮ ಪಂದ್ಯವು ಪರ್ತ್ ಸ್ಕಾರ್ಚರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ಪರ್ತ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಫೈನಲ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಪರ್ತ್ ಸ್ಕಾರ್ಚರ್ಸ್ ದಾಖಲೆಯ ಆರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಟಿ20 ಲೀಗ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡ ಎನಿಸಿಕೊಂಡಿದೆ. ಈ ವಿಚಾರದಲ್ಲಿ ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಸಿಪಿಎಲ್​ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್…

Read More

Vastu Guidance: ದೇವರ ಮುಂದೆ ದೀಪ ಹಚ್ಚುವಾಗ ಈ ತಪ್ಪು ಮಾಡಲೇಬೇಡಿ; ವಾಸ್ತು ಸಲಹೆ ಇಲ್ಲಿದೆ

ಪ್ರತಿ ಮನೆಯಲ್ಲೂ ದಿನದ ಆರಂಭ ದೇವರ ಮುಂದೆ ದೀಪ ಹಚ್ಚುವ ಮೂಲಕವೇ ಪ್ರಾರಂಭವಾಗುತ್ತದೆ. ದೀಪವು ಕೇವಲ ಕತ್ತಲೆಯನ್ನು ಹೋಗಲಾಡಿಸುವ ಸಾಧನವಲ್ಲ; ಅದು ಜ್ಞಾನ, ಸಮೃದ್ಧಿ ಮತ್ತು ಸಕಾರಾತ್ಮಕತೆಯ ಸಂಕೇತ. ದೀಪವಿಲ್ಲದ ಪೂಜೆಯು ಅಪೂರ್ಣವೆಂದು ಶಾಸ್ತ್ರಗಳು ಹೇಳುತ್ತವೆ, ಏಕೆಂದರೆ ದೀಪದ ಜ್ವಾಲೆಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದಹಿಸಿ, ದೈವಿಕ ಕಂಪನಗಳನ್ನು ಆಕರ್ಷಿಸುತ್ತದೆ. ಆದರೆ, ಈ ದೀಪವನ್ನು ಹಚ್ಚುವಾಗ ನಾವು ಪಾಲಿಸುವ ಸಣ್ಣಪುಟ್ಟ ನಿಯಮಗಳು ನಮ್ಮ ಪೂಜೆಯ ಫಲವನ್ನು ನಿರ್ಧರಿಸುತ್ತವೆ ಎಂಬುದು ಅನೇಕರಿಗೆ ತಿಳಿದಿಲ್ಲ. ದೀಪವನ್ನು ಹಚ್ಚುವಾಗ ಈ ನಿಯಮ…

Read More

ರಜನೀಕಾಂತ್ ಸಿನಿಮಾ: ಮೂರನೇ ಬಾರಿ ನಿರ್ದೇಶಕ ಬದಲು – Kannada News | Rajinikanth 173 movie director changed again

ರಜನೀಕಾಂತ್ (Rajinikanth) ಸಿನಿಮಾ ನಿರ್ಮಿಸಲು, ನಿರ್ದೇಶಿಸಲು ಜನ ಸಾಲು ಗಟ್ಟಿ ನಿಂತಿದ್ದಾರೆ. ಆದರೆ ಯಾಕೋ ರಜನೀಕಾಂತ್ ಅವರ ಹೊಸ ಸಿನಿಮಾಕ್ಕೆ ನಿರ್ದೇಶಕರುಗಳೇ ಸೆಟ್ ಆಗುತ್ತಿಲ್ಲ. ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಕಮಲ್ ಹಾಸನ್ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಅವರ 173ನೇ ಸಿನಿಮಾ ಸೆಟ್ಟೇರಲಿಕ್ಕಿದೆ. ಈಗ ಸಮಸ್ಯೆ ಆಗಿರುವುದು ಇದೇ ಸಿನಿಮಾಕ್ಕೆ. ಈಗಾಗಲೇ ಎರಡು ನಿರ್ದೇಶಕರನ್ನು ಬದಲಾಯಿಸಲಾಗಿತ್ತು. ಈಗ ಮೂರನೇ ನಿರ್ದೇಶಕರೂ ಸಹ ಸಿನಿಮಾದಿಂದ ಹೊರನಡೆದಿದ್ದಾರೆ. ರಜನೀಕಾಂತ್ ಅವರ…

Read More

Makara Jyothi: ಮಳೆಯ ಭೀತಿಯ ನಡುವೆಯೂ ಶಬರಿಮಲೆಯ ಬೆಟ್ಟದಲ್ಲಿ ಮಕರ ಜ್ಯೋತಿ ದರ್ಶನ – Kannada News | Thousands of Lord Ayyappa devotees who witnessed sacred Makara Jyothi on Ponnambalamedu Hill

ಶಬರಿಮಲೆ, ಜನವರಿ 14: ಪ್ರತಿ ವರ್ಷ ಲಕ್ಷಾಂತರ ಭಕ್ತರು ಶಬರಿಮಲೆಯ (Sabarimala) ಪೊನ್ನಂಬಲಮೇಡು ಬೆಟ್ಟದಲ್ಲಿ ಕಾಣುವ ಪವಿತ್ರವಾದ ಮಕರ ಜ್ಯೋತಿಯನ್ನು ವೀಕ್ಷಿಸಲು ಕಾಯುತ್ತಿರುತ್ತಾರೆ. ಇಂದು ಮಳೆಯ ಆತಂಕದ ನಡುವೆಯೇ ಮಕರ ಜ್ಯೋತಿಯ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದರು. ಕೊನೆಗೂ ಇಂದು ಸಂಜೆ 6.45ಕ್ಕೆ ಶಬರಿಮಲೆಯಿಂದ 8 ಕಿ.ಮೀ. ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿಯ ದರ್ಶನವಾಗಿದೆ. ಅಯ್ಯಪ್ಪ ಸ್ವಾಮಿ ಭಕ್ತರು ಕೈಜೋಡಿಸಿ, ಸ್ವಾಮಿ ಶರಣಂ ಅಯ್ಯಪ್ಪ ಎಂದು ಪಠಿಸುತ್ತಾ ಮಕರ ಜ್ಯೋತಿಯನ್ನು ವೀಕ್ಷಿಸಿದರು. ಈ ವೇಳೆ ನಕ್ಷತ್ರವು ಆಕಾಶದಲ್ಲಿ…

Read More

ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ – Kannada News | July 2026 Monthly Horoscope | Aries to Pisces July Month Jyeshtha and Ashadha Masa Bhavishya

ಜುಲೈ 2026 ರಲ್ಲಿ ಗ್ರಹಗಳ ಪರಿವರ್ತನೆಯಿಂದ ಪರಿವರ್ತನಾ ಯೋಗವೂ ಆಗಲಿದೆ. ಗುರುವು ಉಚ್ಚಸ್ಥಾನದಲ್ಲಿಯೂ ಬುಧನು ಸ್ವ ಸ್ಥಾನದಲ್ಲಿಯೂ ಇದ್ದಾನೆ. ಸೂರ್ಯನು ಚಂದ್ರನ ರಾಶಿಯಲ್ಲಿ ಇದ್ದು ಪತ್ನಿಯ ಸ್ಥಾನಕ್ಕೆ ಗ್ರಹನಾಯಕನು ವರ್ಷಕ್ಕೊಮ್ಮೆ ಬರುವ ಸಂದರ್ಭ. ಸೂರ್ಯನು ಉಚ್ಚಗಾಮಿಯಾಗಿ ಸಾಗುವ ಕಾರಣ ಸರ್ಕಾರದ ಉನ್ನತ ಸ್ಥಾನದಲ್ಲಿ ಇರುವವರಿಗೆ ಶುಭವೂ ಆಗಲಿದೆ. ​ ಮೇಷ ರಾಶಿ : ​ನಿಮ್ಮ ರಾಶ್ಯಾಧಿಪತಿ ಮಂಗಳ ದ್ವಿತೀಯದಲ್ಲಿದ್ದು, ಸೂರ್ಯ, ಗುರು ಚತುರ್ಥದಲ್ಲಿದ್ದಾರೆ. ಧನ ಲಾಭ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಆದರೆ ಶನಿ ೧೨ನೇ…

Read More

ಬಿಳಿ ಬಣ್ಣದ ಬಟ್ಟೆ ದೀರ್ಘಕಾಲದವರೆಗೆ ಹೊಸದರಂತೆ ಕಾಣಬೇಕೆಂದರೆ ಈ ಸಲಹೆ ಪಾಲಿಸಿ

ಬಿಳಿ ಬಟ್ಟೆಗಳು (White Clothes) ತುಂಬಾನೇ ಸ್ಟೈಲಿಶ್‌ ಆಗಿ ಕಾಣುವ ಕಾರಣ ಪ್ರತಿಯೊಬ್ಬರೂ ಈ ಬಣ್ಣದ ಬಟ್ಟೆಯನ್ನೇ ಧರಿಸಲು ಇಷ್ಟಪಡುತ್ತಾರೆ. ಬಿಳಿ ಬಣ್ಣದ ಬಟ್ಟೆಗಳು ಸುಂದರವಾಗಿ ಕಾಣಿಸುವಂತೆ ಮಾಡುವುದು ನಿಜ. ಅದೇ ರೀತಿ ಈ ಬಟ್ಟೆಗಳು ಬೇಗನೆ ಮಾಸುಕಾಗುತ್ತವೆ. ಹೌದು ಬೆವರು, ಧೂಳು, ಕಲೆ ಸಂಗ್ರಹಣೆಯಿಂದ ಹಾಗೂ ಸರಿಯಾದ ರೀತಿಯಲ್ಲಿ ತೊಳೆಯದಿರುವ ಕಾರಣ ಬಿಳಿ ಬಟ್ಟೆಗಳು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ವಾಸ್ತವವಾಗಿ, ನಾವು ಮಾಡುವ ಸಣ್ಣ ತಪ್ಪುಗಳೇ ಬಿಳಿ ಬಟ್ಟೆಗಳು ಹೊಳಪನ್ನು ಕಸಿದುಕೊಳ್ಳಲು ಮುಖ್ಯ ಕಾರಣ….

Read More