KRS Back Water: ಕೆಆರ್ಎಸ್ನಲ್ಲಿ ಕುಸಿದ ನೀರಿನ ಮಟ್ಟ; ಸಂಪೂರ್ಣವಾಗಿ ಗೋಚರಿಸುತ್ತಿರುವ ಪುರಾತನ ದೇಗುಲ! – Kannada News | KRS Dam: Submerged Lakshmi Narayanaswamy Temple Emerges as Water Levels Plummet
ಮಂಡ್ಯ, ಜೂನ್ 13: ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಪ್ರಸ್ತುತ 81 ಅಡಿಗೆ ತಲುಪಿದೆ. ಇದರಿಂದಾಗಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯ ಸಂಪೂರ್ಣವಾಗಿ ಗೋಚರಿಸುತ್ತಿದೆ. 90 ಅಡಿಗೆ ನೀರಿನ ಮಟ್ಟ ಕುಸಿದಾಗ ಈ ದೇವಾಲಯವು ಭಾಗಶಃ ಕಾಣಿಸಿಕೊಳ್ಳುತ್ತಿತ್ತು, ಆದರೆ ಈಗ ಸಂಪೂರ್ಣವಾಗಿ ಗೋಚರಿಸುತ್ತಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಆನಂದೂರು ಹಿನ್ನೀರಿನ ಪ್ರದೇಶದಲ್ಲಿರುವ ಈ ದೇವಾಲಯವು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನೀರಿನ ಮಟ್ಟ ಕುಸಿತದಿಂದ ಸ್ಪಷ್ಟವಾಗಿ ಕಾಣಿಸುತ್ತಿರುವ ದೇವಾಲಯದ ಸುತ್ತಮುತ್ತ…