ಬೆಂಗಳೂರು, ಮಾರ್ಚ್ 24: ಬೆಂಗಳೂರಿನ ಬಾರ್ ಮತ್ತು ರೆಸ್ಟೋರೆಂಟ್ಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಕೊರತೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಗ್ಯಾಸ್ ಸಿಲಿಂಡರ್ ಅಭಾವದ ಎಫೆಕ್ಟ್ಗೆ ಮಾಂಸಾಹಾರ ಪದಾರ್ಥಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ, ಇದರಿಂದ ಗ್ರಾಹಕರು ಇಷ್ಟಪಡುವ ಚಿಕನ್, ಮಟನ್ ಮತ್ತು ಫಿಶ್ ಐಟಂಗಳನ್ನು ನೀಡಲು ಮಾಲೀಕರಿಗೆ ಕಷ್ಟವಾಗಿದೆ. ಸದ್ಯ ಸಲಾಡ್ ಮತ್ತು ಕೆಲವು ಸರಳ ಐಟಂಗಳನ್ನು ಮಾತ್ರ ನೀಡಲಾಗುತ್ತಿದೆ. ವ್ಯಾಪಾರದಲ್ಲಿ ಶೇ.40ರಷ್ಟು ಕುಸಿತ ಕಂಡುಬಂದಿದೆ. ಗ್ರಾಹಕರು ನಾನ್-ವೆಜ್ಗಾಗಿ ಬರುತ್ತಿದ್ದರೂ, ಗ್ಯಾಸ್ ಇಲ್ಲದ ಕಾರಣ ಅವರಿಗೆ ಬೇಕಾದ ಆಹಾರವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು ಹೇಳುವುದೇನು ವಿಡಿಯೋ ನೋಡಿ.
ವಾಷಿಂಗ್ಟನ್, ಮಾರ್ಚ್ 24: ಅಮೆರಿಕ-ಇಸ್ರೇಲ್-ಇರಾನ್ ಯುದ್ಧದಲ್ಲಿ ಇದೀಗ ಗಮನ ಸೆಳೆಯುತ್ತಿರುವ ವ್ಯಕ್ತಿ ಅಮೆರಿಕದ ಪೀಟ್ ಹೆಗ್ಸೆತ್. ಇವರು ಡೊನಾಲ್ಡ್ ಟ್ರಂಪ್ (Donald Trump) ಅವರ ಕಟ್ಟಾ ಬೆಂಬಲಿಗರಲ್ಲಿ ಒಬ್ಬರು. ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿರುವ ಪೀಟ್ ಹೆಗ್ಸೆತ್ ಅವರೇ ಇರಾನ್ ಮೇಲೆ ದಾಳಿ ನಡೆಸೋಣ ಎಂದು ಟ್ರಂಪ್ ಕಿವಿಯೂದಿದ್ದಾರೆ ಎಂಬ ವಿಷಯ ಬಯಲಾಗಿದೆ. ಹೀಗಾಗಿ, ಈ ಪೀಟ್ ಹೆಗ್ಸೆತ್ ಬಗ್ಗೆ ಭಾರೀ ಚರ್ಚೆಗಳು ಶುರುವಾಗಿವೆ.
ಇರಾನ್ ಮೇಲೆ ಯುದ್ಧ ಮಾಡೋಣ ಎಂದು ಮೊದಲು ಹೇಳಿದ್ದೇ ಪೀಟ್ ಹೆಗ್ಸೆತ್ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಈ ಯುದ್ಧದ ಹೊಣೆಯನ್ನು ಹೆಗ್ಸೆತ್ ಹೆಗಲಿಗೆ ಹಾಕಿರುವ ಟ್ರಂಪ್ ಅವರ ಹೇಳಿಕೆಯಿಂದ ಪೀಟ್ ಹೆಗ್ಸೆತ್ ಟೀಕೆಗೆ ಗುರಿಯಾಗಿದ್ದಾರೆ. ಇಂದು ಟೆನ್ನೆಸ್ಸೀಯ ಮೆಂಫಿಸ್ನಲ್ಲಿ ರಾಷ್ಟ್ರೀಯ ಮಿಲಿಟರಿ ಮತ್ತು ಕಾನೂನು ಜಾರಿ ನಾಯಕರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯುಎಸ್ ಅಧ್ಯಕ್ಷ ಟ್ರಂಪ್, ಫೆಬ್ರವರಿ 28ರಂದು ಆಪರೇಷನ್ ಎಪಿಕ್ ಫ್ಯೂರಿಯನ್ನು ಪ್ರಾರಂಭಿಸಲು ಕಾರಣವಾದ ಸಂದರ್ಭಗಳ ಬಗ್ಗೆ ಹೀಗೆ ಹೇಳಿದ್ದಾರೆ. “ಆ ದಿನ ನಾನು ಪೀಟ್ಗೆ ಕರೆ ಮಾಡಿದೆ. ನಾನು ಜನರಲ್ ಕೇನ್ಗೆ ಕರೆ ಮಾಡಿದೆ. ಈ ಬಗ್ಗೆ ಮಾತಾಡೋಣ ಎಂದು ಅವರನ್ನು ಕರೆದೆ. ಮಧ್ಯಪ್ರಾಚ್ಯದಲ್ಲಿ ನಮಗೆ ಒಂದು ಸಮಸ್ಯೆ ಇದೆ. ಇರಾನ್ 47 ವರ್ಷಗಳಿಂದ ಭಯೋತ್ಪಾದನೆಯ ಪೂರೈಕೆದಾರ ದೇಶವಾಗಿದೆ. ಆ ದೇಶ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿದೆ. ಯಾವ ರೀತಿ ಈ ಸಮಸ್ಯೆಯನ್ನು ನಿವಾರಿಸಬಹುದು? ಎಂದು ಚರ್ಚಿಸಿದೆವು” ಎಂದಿದ್ದಾರೆ.
Trump blames Hegseth for the war: “Pete, I think you were the first one to speak up. You said, ‘Let’s do it.’” pic.twitter.com/QBGeFuhM1M
“ಆಗ ಪೀಟ್ ಹೆಗ್ಸೆತ್ ಅವರೇ ಮೊದಲು ಮಾತನಾಡಿದವರು. ಆಗ ಅವರು ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡಬಾರದು. ನಾವು ಅವರ ಮೇಲೆ ಯುದ್ಧ ಮಾಡೋಣ ಎಂದು ಹೇಳಿದರು ಎಂದು ನನಗೆ ನೆನಪು. ಅದಾದ ನಂತರ ನಾವು ಈ ಬಗ್ಗೆ ರಾತ್ರಿಯಿಡೀ ಚರ್ಚಿಸಿ ನಿರ್ಧಾರ ತೆಗೆದುಕೊಂಡೆವು” ಎಂದು ಟ್ರಂಪ್ ಹೇಳಿದ್ದಾರೆ.
.@SECWAR “Yesterday’s ceremony reminded us why we fight—not for nation-building or democracy promotion—but to CRUSH DIRECT THREATS to America, Americans, and our interests.
We fight to win, and we are winning. On our terms.
ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಿದ್ದು, ‘ಧುರಂಧರ್ 2’, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಎದುರು ಒಳ್ಳೆಯ ಪ್ರದರ್ಶನವನ್ನೇ ನೀಡುತ್ತಿದೆ. ಆದರೆ ಇದೀಗ ಡಾರ್ಲಿಂಗ್ ಕೃಷ್ಣ ವಿರುದ್ಧ ಕತೆ ಕದ್ದ ಆರೋಪ ಕೇಳಿ ಬರುತ್ತಿದೆ. ತಾವು ಹೇಳಿದ್ದ ಕತೆಯನ್ನು ಕದ್ದು ಡಾರ್ಲಿಂಗ್ ಕೃಷ್ಣ ಅವರು ತಮ್ಮ ಅನುಮತಿ ಇಲ್ಲದೇ ‘ಲವ್ ಮಾಕ್ಟೆಲ್ 3’ ಸಿನಿಮಾನಲ್ಲಿ ಬಳಸಿಕೊಂಡಿದ್ದಾರೆ ಎಂದು ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಗುರು ದೇಶಪಾಂಡೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ವಿಡಿಯೋ ನೋಡಿ…
ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಕಳೆದ ತಿಂಗಳು ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ವಿವಾಹವಾದರು. ಇವರ ಮದುವೆಯ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದವು. ಅದರಲ್ಲೂ ಮುಹೂರ್ತದ ದಿನ ರಶ್ಮಿಕಾ ಮತ್ತು ವಿಜಯ್ ಅವರುಗಳ ಧರಿಸಿದ್ದ ಉಡುಗೆ, ಧರಿಸಿದ್ದ ಚಿನ್ನದ ಆಭರಣಗಳಂತೂ ಎಲ್ಲರ ಮನಗೆದ್ದವು. ಇಡೀ ಮದುವೆ ಸಂಪ್ರದಾಯಿಕವಾಗಿ, ಸಾಂಸ್ಕೃತಿಕವಾಗಿ ರಿಚ್ ಆಗಿತ್ತು. ಸುಮಾರು ಒಂದು ವಾರ ನಡೆದ ಇವರ ಮದುವೆಯನ್ನು ಅರೇಂಜ್ ಮಾಡಿದ್ದು ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯಾದ ‘ಆರ್ವಿಆರ್ ಇವೆಂಟ್ ಆಂಡ್ ಡಿಜೈನ್’. ಇದರ ಮುಖ್ಯಸ್ಥೆ ಪ್ರಿಯಾ ಮಾಗಂಟಿ ಇದೀಗ ರಶ್ಮಿಕಾ ಮತ್ತು ವಿಜಯ್ ಅವರ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
“ಈ ವಿವಾಹವು ಕೇವಲ ಎರಡು ದೊಡ್ಡ ತಾರೆಗಳ ಮಿಲನವಾಗಿರಲಿಲ್ಲ, ಬದಲಾಗಿ ಎರಡು ಸರಳ ಮತ್ತು ಸುಂದರ ಮನಸ್ಸುಗಳ ಸಂಗಮವಾಗಿತ್ತು. ರಶ್ಮಿಕಾ ಮತ್ತು ವಿಜಯ್ ಅವರ ನಡುವಿನ ಗೌರವ ಮತ್ತು ಪ್ರೀತಿಯನ್ನು ಕಂಡು ತಾವು ಬೆರಗಾದೆ. ಅದ್ದೂರಿತನಕ್ಕಿಂತ ಹೆಚ್ಚಾಗಿ ಸಂಪ್ರದಾಯ ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ಮದುವೆ ನಡೆಯಬೇಕು ಎಂಬುದು ಈ ಜೋಡಿಯ ಆಸೆಯಾಗಿತ್ತು. ದಕ್ಷಿಣ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತೆ ಪ್ರತಿಯೊಂದು ಅಲಂಕಾರವನ್ನೂ ವಿನ್ಯಾಸಗೊಳಿಸಲಾಗಿತ್ತು’ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆಯ ಪ್ರತಿಯೊಂದು ಸಣ್ಣ ವಿಷಯದಲ್ಲೂ ಆಸಕ್ತಿ ವಹಿಸಿದ್ದರು. ಹೂವಿನ ಅಲಂಕಾರದಿಂದ ಹಿಡಿದು ಅತಿಥಿಗಳಿಗೆ ನೀಡುವ ಉಡುಗೊರೆಯವರೆಗೆ ಎಲ್ಲವೂ ಪರಿಸರ ಸ್ನೇಹಿಯಾಗಿರಬೇಕು ಎಂಬುದು ಅವರ ಕಾಳಜಿಯಾಗಿತ್ತು. ವಿಜಯ್ ಅವರು ಸಿದ್ಧತೆಗಳ ಸಮಯದಲ್ಲಿ ಅತ್ಯಂತ ಶಾಂತವಾಗಿ ಮತ್ತು ಸಹಕಾರದಿಂದ ನಡೆದುಕೊಂಡರು. “ನನ್ನ ಜೀವನದ ಈ ವಿಶೇಷ ದಿನವನ್ನು ಅತ್ಯಂತ ನೆನಪಿನ ಬುತ್ತಿಯಾಗಿಸಲು ನೀವು ಪಟ್ಟ ಶ್ರಮಕ್ಕೆ ಧನ್ಯವಾದಗಳು” ಎಂದು ವಿಜಯ್ ಪ್ಲಾನರ್ ತಂಡಕ್ಕೆ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದ್ದಾಗಿ ಪ್ರಿಯಾ ಹೇಳಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬದವರು ನೀಡಿದ ಸಹಕಾರ, ಇರಿಸಿದ ನಂಬಿಕೆಗೆ ಧನ್ಯವಾದ ಹೇಳಿರುವ ಪ್ರಿಯಾ, ವಿಶೇಷವಾಗಿ ತಾವು ಕೊಡಗಿಗೆ ರಶ್ಮಿಕಾರ ಮನೆಗೆ ಭೇಟಿ ನೀಡಿದ್ದು, ಅಲ್ಲಿ ಕೊಡವ ಸಂಪ್ರದಾಯವನ್ನು ನೋಡಿ ಕಲಿತು, ಅದನ್ನೇ ಮದುವೆಯಲ್ಲಿ ಬಳಸಿದ್ದು, ಇನ್ನೂ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಇಷ್ಟು ದೊಡ್ಡ ಮಟ್ಟದ ಖ್ಯಾತಿ ಇದ್ದರೂ, ಈ ಜೋಡಿಯ ಸರಳತೆ ನಮಗೆ ಮಾದರಿ. ಅವರ ಬದುಕು ಹೀಗೆಯೇ ಸುಂದರವಾಗಿರಲಿ’ ಎಂದು ಶುಭ ಹಾರೈಸಿದ್ದಾರೆ.
ಪ್ರಿಯಾ ಮಾಗಂಟಿ ಅವರು ಸೆಲೆಬ್ರಿಟಿ ವೆಡ್ಡಿಂಗ್ ಪ್ರಾನರ್ ಮತ್ತು ಇವೆಂಟ್ ಆರ್ಗನೈಜರ್ ಆಗಿದ್ದಾರೆ. ಹಲವು ಕೋಟ್ಯಧಿಪತಿಗಳ ಮಕ್ಕಳ ಮದುವೆಗಳನ್ನು ಪ್ರಿಯಾ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ನಡೆದ ಕ್ರೀಡಾ ತಾರೆ ಪಿವಿ ಸಿಂಧು ಅವರ ಮದುವೆಗೂ ಇವರೇ ಇವೆಂಟ್ ಆರ್ಗನೈಜರ್ ಆಗಿದ್ದರು. ಇನ್ನೂ ಹಲವಾರು ಸೆಲೆಬ್ರಿಟಿಗಳ ಮದುವೆಗಳನ್ನು ಇವರು ಮಾಡಿದ್ದಾರೆ.
ನಟಿ ಮೇಘನಾ ರಾಜ್ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ. ಚಿರಂಜೀವಿ ಸರ್ಜಾ (Chiranjeevi Sarja) ನಿಧನದ ಬಳಿಕ ಅವರು ಸಖತ್ ನೋವು ಅನುಭವಿಸಿದರು. ಪುತ್ರ ರಾಯನ್ (Raayan) ಜನಿಸಿದ ಬಳಿಕ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಯಿತು. ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಆ ಬಗ್ಗೆ ಮೇಘನಾ ರಾಜ್ (Meghana Raj) ಅವರು ಮಾತನಾಡಿದ್ದಾರೆ. ‘ರೆಯಾನ್ ಮಿಥುನ್’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಖಾಸಗಿ ಜೀವನದ ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ಸಿಂಗಲ್ ಪೇರೆಂಟ್ ಆಗಿದ್ದಾಗ ಕಷ್ಟಗಳು ಡಬಲ್ ಆಗಿರುತ್ತವೆ. ಅದರಲ್ಲೂ ತಾಯಿಯಾಗಿ ಮತ್ತು ಸೆಲೆಬ್ರಿಟಿಯಾಗಿದ್ದಾಗ 10 ಪಟ್ಟು ಜಾಸ್ತಿ ಕಷ್ಟ ಆಗುತ್ತದೆ. ಆ ಮಗುವಿನ ಮೇಲೂ ಜನರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ರಾಯನ್ ಹುಡುಗ ಆದ ಕಾರಣ ಆತನ ಜೀವನದಲ್ಲಿ ತಂದೆಯ ರೀತಿ ಮೇಲ್ ಫಿಗರ್ ಇರಬೇಕಾದ್ದು ತುಂಬಾ ಮುಖ್ಯ. ಈಗ ಅವನಿಗೆ 5 ವರ್ಷ ಆಗುತ್ತಿದೆ. ಅವನ ಚಟುವಟಿಕೆಗಳು ಬದಲಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ನಾನು ಸಿಂಗಲ್ ಪೇರೆಂಟ್ ಎಂಬುದು ನನಗೆ ಹೆಚ್ಚು ಫೀಲ್ ಆಗುತ್ತಿದೆ’ ಎಂದಿದ್ದಾರೆ ಮೇಘನಾ ರಾಜ್.
‘ಈ ಮೊದಲು ನಾನು ಇದನ್ನು ನಿಭಾಯಿಸಬಲ್ಲೆ ಎನಿಸಿತ್ತು. ಆದರೆ ಪ್ರತಿದಿನವೂ ನಿಭಾಯಿಸುವುದು ಕಷ್ಟ. ಸಾಕಪ್ಪ ಎನಿಸಿದ ದಿನಗಳು ಕೂಡ ಇವೆ. ಕೆಲವು ದಿನ ಅವನ ಎನರ್ಜಿ ನನ್ನ ಎನರ್ಜಿಗೆ ಹೊಂದಿಕೆ ಆಗಲ್ಲ. ನನ್ನ ಒಬ್ಬಳು ಕಸಿನ್ ಕೂಡ ಸಿಂಗಲ್ ಪೇರೆಂಟ್ ಪಾಲನೆಯಲ್ಲಿ ಬೆಳೆದವಳು. ಆಕೆಯ ಬಳಿ ಹೋಗಿ ನಾನು ಅನುಭವ ಕೇಳಿದೆ. ಸಾಕಷ್ಟು ವಿಷಯ ಚರ್ಚೆ ಮಾಡಿದೆವು. ‘ನೀನು ತಾಯಿ. ಒಳ್ಳೆಯ ತಾಯಿ ಆಗುವುದರ ಕಡೆಗೆ ಮಾತ್ರ ಗಮನ ಹರಿಸು. ತಂದೆ ಆಗಲು ಪ್ರಯತ್ನಿಸಬೇಡ. ಅದರ ಅವಶ್ಯಕತೆ ಕೂಡ ಇಲ್ಲ’ ಅಂತ ಆಕೆ ನನಗೆ ಸಲಹೆ ನೀಡಿದಳು. ನಾನು ಆ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡೆ. ಅದರಿಂದ ನನಗೆ ಬಹಳ ಅನುಕೂಲ ಆಯಿತು. ಕೆಲವು ದಿನ ನನಗೆ ಕಷ್ಟ ಆಗುತ್ತದೆ. ಆಗ ರಾಯನ್ ಜೀವನದಲ್ಲಿ ಫಾದರ್ ಫಿಗರ್ ಖಂಡಿತವಾಗಿಯೂ ಬೇಕು ಎನಿಸುತ್ತದೆ’ ಎಂದು ಮೇಘನಾ ರಾಜ್ ಹೇಳಿದ್ದಾರೆ.
‘ನನ್ನನ್ನು ಅರ್ಥ ಮಾಡಿಕೊಳ್ಳುವ ಸ್ನೇಹಿತರು ಇದ್ದಾರೆ. ಅವರ ಜೊತೆ ಮಾತನಾಡಿ ಎಲ್ಲವನ್ನೂ ಹೇಳಿಕೊಳ್ಳುವುದು ಸುಲಭ. ಮಾನಸಿಕವಾಗಿ ನನ್ನ ಮೇಲೆ ಇರುವ ಭಾರ ಹೆಚ್ಚು. ರಾಯನ್ಗೆ ಸೂಕ್ತವಾದ ಸ್ಕೂಲ್ ಹುಡುಕುವುದು, ಯಾವುದು ಬೇಕು-ಬೇಡ ಎಂದು ನಿರ್ಧರಿಸುವುದು ಕೂಡ ಕಷ್ಟ. ಎಲ್ಲವನ್ನೂ ಚರ್ಚಿಸಿ ನಿರ್ಧರಿಸಲು ನನಗೆ ಪಾರ್ಟ್ನರ್ ಇಲ್ಲ. ರಾಯನ್ನ ಎಲ್ಲ ಕೆಲಸಗಳನ್ನು ನಾನೇ ಮಾಡಬೇಕು. ಪಾರ್ಟ್ನರ್ ಇದ್ದರೆ ಇದನ್ನೆಲ್ಲ ಅವರು ಕೂಡ ಮಾಡಬೇಕಾಗುತ್ತದೆ. ಈಗ ನನ್ನ ತಂದೆ-ತಾಯಿಗೆ ವಯಸ್ಸಾಗುತ್ತಿದೆ. ಅವರಿಗೂ ಮಿತಿಗಳಿವೆ. ಅವರಿಗೆ ವಿಶ್ರಾಂತಿ ಬೇಕು. ನಾನು ಎಲ್ಲವನ್ನೂ ನಿಭಾಯಿಸಲೇಬೇಕು. ಅದೇ ಜೀವನ’ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಮಗನಿಗೆ ರಾಯನ್ ಎಂದು ಹೆಸರು ಇಟ್ಟಿದ್ದರ ಹಿಂದಿನ ಇಂಟರೆಸ್ಟಿಂಗ್ ವಿಷಯವನ್ನು ಮೇಘನಾ ರಾಜ್ ವಿವರಿಸಿದ್ದಾರೆ. ‘ಮಗನ ಹೆಸರು ಯಾವುದೇ ಧರ್ಮವನ್ನು ಸೂಚಿಸುವಂತೆ ಇರಬಾರದು. ಯಾಕೆಂದರೆ, ನಾನು ಆ ರೀತಿ ಬೆಳೆದಿಲ್ಲ. ಚಿರು ಆಲೋಚನೆ ಕೂಡ ಹಾಗೆ ಇರಲಿಲ್ಲ. ಭಾರತೀಯ ಹೆಸರು ಆಗಿರಬೇಕು. ಸಂಸ್ಕೃತದ ಪದವೇ ಆಗಿರಬೇಕು ಎಂಬುದು ನನ್ನ ಆಸೆ ಆಗಿತ್ತು. ಅದಕ್ಕಾಗಿ ಹುಡುಕಿದೆವು. ರಾಯನ್ ಎಂದರೆ ಎಲ್ಲ ಧರ್ಮದಲ್ಲೂ ರಾಜಕುಮಾರ ಎಂಬ ಅರ್ಥ ಇದೆ. ಹಾಗಾಗಿ ಇದಕ್ಕಿಂತ ಉತ್ತಮ ಹೆಸರು ಬೇರೆ ಇಲ್ಲ ಅನಿಸಿತು’ ಎಂದು ಮೇಘನಾ ರಾಜ್ ಹೇಳಿದ್ದಾರೆ.
ನವದೆಹಲಿ, ಮಾರ್ಚ್ 24: ಸೇಲ್ಗೆ ಇಡಲಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಮಾರಾಟವಾಗುವ ಮುನ್ನವೇ ರಾಜಸ್ಥಾನ್ ರಾಯಲ್ಸ್ ತಂಡ (Rajasthan Royals) ಬಿಕರಿಯಾಗಿದೆ. ಐಪಿಎಲ್ನ ಮೂಲ ಎಂಟು ಫ್ರಾಂಚೈಸಿಗಳಲ್ಲಿ ಒಂದಾದ ರಾಜಸ್ಥಾನ್ ರಾಯಲ್ಸ್ ಅನ್ನು ಕಾಲ್ ಸೊಮಾನಿ (Kal Somani) ಅವರ ನೇತೃತ್ವದ ಕನ್ಸಾರ್ಟಿಯಂ 1.63 ಬಿಲಿಯನ್ ಡಾಲರ್ಗೆ ಖರೀದಿ ಮಾಡಿದೆ. 1.63 ಬಿಲಿಯನ್ ಡಾಲರ್ ಎಂದರೆ ಸುಮಾರು 152820324000 ರೂ (15.28 ಸಾವಿರ ಕೋಟಿ ರೂ) ಆಗುತ್ತದೆ.
ಅಮೆರಿಕದ ರೀಟೇಲ್ ಕಿಂಗ್ ಎನಿಸಿದ ವಾಲ್ಮಾರ್ಟ್ ಮೊದಲಾದ ಹಲವು ಸಂಸ್ಥೆಗಳು ಸೇರಿ ಮಾಡಿಕೊಳ್ಳಲಾದ ಕನ್ಸಾರ್ಟಿಯಂ, ಅಥವಾ ಗುಂಪು ರಾಯಲ್ಸ್ ಫ್ರಾಂಚೈಸಿಯ ಚುಕ್ಕಾಣಿ ಹಿಡಿದಿದೆ. ಕನ್ಸಾರ್ಟಿಯಂ ನೇತೃತ್ವ ವಹಿಸಿರುವ ಕಾಲ್ ಸೋಮಾನಿ ಅವರು ಭಾರತ ಮೂಲದ ಅಮೆರಿಕನ್ ಉದ್ಯಮಿ.
ಸದ್ಯ, ರಾಜಸ್ಥಾನ್ ರಾಯಲ್ಸ್ ಮಾರಾಟವಾಗಿರುವ ಸುದ್ದಿ ಅಧಿಕೃತವಾಗಿ ಘೋಷಿಸಲಾಗಿಲ್ಲ. ಮಾಧ್ಯಮಗಳಿಗೆ ಮೂಲಗಳಿಂದ ಸಿಕ್ಕಿರುವ ಮಾಹಿತಿ. ಮುಂದಿನ ಕೆಲ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಬಹುದು.
ರಾಜಸ್ಥಾನ್ ರಾಯಲ್ಸ್ ತಂಡದ ಮುಂಚಿನ ಮಾಲೀಕರು ಮನೋಜ್ ಬಡಲೆ (Manoj Badale). ಬ್ರಿಟನ್ ಮೂಲದ ಮನೋಜ್ ಬಡಲೆ ಅವರು ಎಮರ್ಜಿಂಗ್ ಮೀಡಿಯಾದ ಮುಖ್ಯಸ್ಥರು. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲಿ ಇವರು ಶೇ. 65ರಷ್ಟು ಪಾಲು ಹೊಂದಿದ್ದರು. ರಾಯಲ್ಸ್ನ ಮೊದಲ ಮಾಲೀಕರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ. ಬೆಟ್ಟಿಂಗ್ ಹಗರಣಕ್ಕೆ (Betting scandal) ಸಿಲುಕಿ ಅವರು ಫ್ರಾಂಚೈಸಿ ಕಳೆದುಕೊಳ್ಳಬೇಕಾಯಿತು. ಆ ಬಳಿಕ ಮನೋಜ್ ಬಡಲೆ ಅವರು ಮಾಲಕತ್ವ ಪಡೆದರು.
ಕಾಲ್ ಸೊಮಾನಿ ಅವರು ಈ ಮುಂಚೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಪ್ರಮುಖ ಷೇರುದಾರರಲ್ಲಿ ಒಬ್ಬರಾಗಿದ್ದರು. ಇದೀಗ ಅವರ ಸಂಸ್ಥೆಯು ರಾಯಲ್ಸ್ ತಂಡದ ಪೂರ್ಣ ಷೇರುಗಳನ್ನು ಖರೀದಿ ಮಾಡಿದೆ. ಈ ಮಾರಾಟ ಅಥವಾ ಖರೀದಿಯು ಅಧಿಕೃತವಾಗಿ ಘೋಷಣೆ ಆಗಬೇಕು. ಹಾಗೆಯೇ, ಬಿಸಿಸಿಐನಿಂದ ಅನುಮೋದನೆ ಕೂಡ ಆಗಬೇಕು.
ರಾಜಸ್ಥಾನ್ ರಾಯಲ್ಸ್ ತಂಡದ ಖರೀದಿಗೆ ಕಾಲ್ ಸೊಮಾನಿ ಮಾತ್ರವಲ್ಲ, ಇನ್ನೂ ಕೆಲ ದಿಗ್ಗಜರು ಪೈಪೋಟಿ ನಡೆಸಿದದ್ದರು. ಟೈಮ್ಸ್ ಗ್ರೂಪ್, ಆದಿತ್ಯ ಬಿರ್ಲಾ ಗ್ರೂಪ್, ಮಿಟ್ಟಲ್ ಕುಟುಂಬ ಮೊದಲಾದವರು ಪ್ರಯತ್ನ ಪಟ್ಟಿದ್ದರೆನ್ನಲಾಗಿದೆ.
ಅಮೆರಿಕದ ಎರಿಝೋನಾದ ಸ್ಕಾಟ್ಸ್ಡೇಲ್ನಲ್ಲಿರುವ ಕಾಲ್ ಸೊಮಾನಿ ಅವರು ವಿವಿಧ ಉದ್ದಿಮೆಗಳ ಸ್ಥಾಪಕರೆನಿಸಿದ್ದಾರೆ. ಎಜುಟೆಕ್, ಎಐ, ಸ್ಪೋರ್ಟ್ಸ್ ಟೆಕ್, ಡಾಟಾ ಪ್ರೈವೆಸಿ ಇತ್ಯಾದಿ ಸೆಕ್ಟರ್ಗಳಲ್ಲಿ ಇವರ ಉದ್ದಿಮೆಗಳಿಗೆ. ಅನೇಕ ಸ್ಪೋರ್ಟ್ಸ್ ತಂಡಗಳಲ್ಲಿ ಹೂಡಿಕೆ ಮಾಡಿದ್ದಾರೆ, ಭಾಗಿಯಾಗಿದ್ದಾರೆ.
‘ಧುರಂಧರ್ 2’ (Dhurandhar) ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಬಿಡುಗಡೆ ಆದ ವಾರಕ್ಕೂ ಮುಂಚೆಯೇ 500 ಕೋಟಿಗೂ ಹೆಚ್ಚು ಗಳಿಕೆಯನ್ನು ಭಾರತದಲ್ಲಿ ಮಾಡಿದೆ. ಎಲ್ಲೆಡೆ ಸಿನಿಮಾದ ಶೋಗಳು ಹೌಸ್ಫುಲ್ ಆಗುತ್ತಿವೆ. ಅಲ್ಲು ಅರ್ಜುನ್, ರಾಜಮೌಳಿ, ರಜನೀಕಾಂತ್, ರಾಮ್ ಚರಣ್ ಇನ್ನೂ ಹಲವು ಸೆಲೆಬ್ರಿಟಿಗಳು ‘ಧುರಂಧರ್ 2’ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಸಿನಿಮಾವನ್ನು ಕೊಂಡಾಡಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಂತೂ ಸಿನಿಮಾ ಬಗ್ಗೆ ಪ್ರಶಂಸೆಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಇದೀಗ ‘ಧುರಂಧರ್ 2’ ಸಿನಿಮಾದಿಂದಾಗಿ ಅಮಿತಾಬ್ ಬಚ್ಚನ್ ಅವರ ಸಿನಿಮಾ ನಿಂತು ಹೋಗಿದೆ.
ಅಮಿತಾಬ್ ಬಚ್ಚನ್ ಅವರು ‘ಸರ್ಕಾರ್’ ಹೆಸರಿನ ಸಿನಿಮಾನಲ್ಲಿ ವರ್ಷಗಳ ಹಿಂದೆ ನಟಿಸಿದ್ದರು. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಿತ್ತು. ಎರಡೂ ಭಾಗಗಳನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದರು. ಇತ್ತೀಚೆಗಷ್ಟೆ ರಾಮ್ ಗೋಪಾಲ್ ವರ್ಮಾ ‘ಸರ್ಕಾರ್ 3’ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆದರೆ ‘ಧುರಂಧರ್ 2’ ಸಿನಿಮಾ ನೋಡಿದ ಮೇಲೆ ‘ಸರ್ಕಾರ್ 3’ ಸಿನಿಮಾ ಮಾಡುವ ಯೋಚನೆಯನ್ನೇ ಕೈಬಿಟ್ಟಿದ್ದಾರಂತೆ ವರ್ಮಾ.
ಸಂದರ್ಶನವೊಂದರಲ್ಲಿ ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದು, ‘ಧುರಂಧರ್ 2’ ಸಿನಿಮಾ ಶ್ರೇಷ್ಠವಾದ ಸಿನಿಮಾ ಆಗಿದ್ದು, ಆ ಶ್ರೇಷ್ಠತೆಯನ್ನು ನನ್ನಿಂದ ಮುಟ್ಟಲು ಸಾಧ್ಯವಿಲ್ಲ. ಸಿನಿಮಾ ನಿರ್ಮಾಣದ ಒಂದು ಮಾದರಿಯನ್ನು ‘ಧುರಂಧರ್ 2’ ಸಿನಿಮಾ ಸೆಟ್ ಮಾಡಿದೆ, ಆ ಸ್ಟಾಂಡರ್ಡ್ ಅನ್ನು ಈಗ ನನ್ನಿಂದ ತಲುಪಲು ಸಾಧ್ಯವಿಲ್ಲ, ಹಾಗಾಗಿ ‘ಸರ್ಕಾರ್ 3’ ಸಿನಿಮಾ ನಿರ್ದೇಶಿಸುತ್ತಿಲ್ಲ’ ಎಂದು ವರ್ಮಾ ಹೇಳಿದ್ದಾರೆ.
ಅದೇ ಸಂದರ್ಶನದಲ್ಲಿ ‘ಧುರಂಧರ್ 2’ ಸಿನಿಮಾದ ಬಗ್ಗೆ ಮಾತನಾಡಿರುವ ವರ್ಮಾ, ‘ಸಾಕಷ್ಟು ಸಿನಿಮಾಗಳು ಹಿಟ್, ಸೂಪರ್ ಹಿಟ್ ಆಗುತ್ತವೆ, ಆದರೆ ಈ ಸಿನಿಮಾ ‘ಪ್ರಭಾವ’, ‘ಪರಿಣಾಮ’ಗಳನ್ನು ಸೃಷ್ಟಿಸಿದೆ. ಇದು ಎಲ್ಲರಿಂದ ಸಾಧ್ಯವಿಲ್ಲ. ಬಾಲಿವುಡ್ಗೆ ಹೇಗೆ ಸಿನಿಮಾ ಮಾಡಬೇಕು ಎಂಬುದನ್ನು ಆದಿತ್ಯ ತೋರಿಸಿಕೊಟ್ಟಿದ್ದಾರೆ’ ಎಂದು ವರ್ಮಾ, ‘ಧುರಂಧರ್ 2’ ಸಿನಿಮಾವನ್ನು ಕೊಂಡಾಡಿದ್ದಾರೆ.
‘ಧುರಂಧರ್ 2’ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರು ರಾಮ್ ಗೋಪಾಲ್ ವರ್ಮಾ ಅವರ ಅಭಿಮಾನಿಯಂತೆ. ವರ್ಮಾ ಅವರ ‘ಸತ್ಯ’ ಮತ್ತು ‘ಕಂಪೆನಿ’ಗಳು ತಮ್ಮ ಮೇಲೆ ಪ್ರಭಾವ ಬೀರಿರುವುದಾಗಿ ಆದಿತ್ಯ ಹೇಳಿದ್ದರು.
ಐಪಿಎಲ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲೆಡೆ ಕ್ರೇಜ್ ಜೋರಾಗಿದೆ. ಆರ್ಸಿಬಿ ಆಟ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಹೀಗಾಗಿ ಆರ್ಸಿಬಿ ಆಡಳಿತ ಮಂಡಳಿ ಇಂದು ಸುದ್ದಿಗೋಷ್ಠಿ ಮಾಡಿದ್ದು, ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಜನ ಸಾವು ಹಿನ್ನೆಲೆ ಆಟಗಾರರು 11 ನಂಬರ್ನ ಜರ್ಸಿಯಲ್ಲಿ ಅಭ್ಯಾಸ ಮಾಡಲಿದ್ದಾರೆ. ಜೊತೆಗೆ ತೋಳಿಗೆ ಕಪ್ಪು ಬಣ್ಣದ ಬ್ಯಾಂಡ್ ಕೂಡ ಧರಿಸಲಿದ್ದಾರೆ. ಇನ್ನು ಕ್ರೀಡಾಂಗಣದಲ್ಲಿ 11 ಸೀಟ್ಗಳನ್ನು ಖಾಲಿ ಬಿಡಲಿದ್ದೇವೆ. ಇದು ಕಾಲ್ತುಳಿತದಲ್ಲಿ ಮೃತಪಟ್ಟ ಆರ್ಸಿಬಿ ಅಭಿಮಾನಿಗಳಿಗೆ ಅರ್ಪಣೆ ಎಂದು RCB ತಂಡದ ಉಪಾಧ್ಯಕ್ಷ ರಾಜೇಶ್ ಮೆನನ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಡೀಲ್ ಒಂದು ನಡೆದಿದೆ. ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕತ್ವದ ರೇಸ್ ಕೊನೆಗೊಂಡಿದ್ದು, ಅಮೆರಿಕ ಮೂಲದ ಉದ್ಯಮಿ ಕಲ್ ಸೋಮನಿ (Kal Somani) ನೇತೃತ್ವದ ಒಕ್ಕೂಟವು ತಂಡವನ್ನು ಬರೋಬ್ಬರಿ 1.63 ಬಿಲಿಯನ್ ಡಾಲರ್ (ಸುಮಾರು 15,286 ಕೋಟಿ ರೂ.) ಮೌಲ್ಯಕ್ಕೆ ಖರೀದಿಸಿದೆ.ಈ ಒಪ್ಪಂದದೊಂದಿಗೆ ರಾಜಸ್ಥಾನ ರಾಯಲ್ಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ.
ಸೋಮನಿ ಅವರಿಗೆ ವಾಲ್ಮಾರ್ಟ್ ಕುಟುಂಬದ ರಾಬ್ ವಾಲ್ಟನ್ ಮತ್ತು ಎನ್ಎಫ್ಎಲ್ ತಂಡವಾದ ‘ಡೆಟ್ರಾಯಿಟ್ ಲಯನ್ಸ್’ ಮಾಲೀಕರಾದ ಹ್ಯಾಂಪ್ ಕುಟುಂಬ ಸಾಥ್ ನೀಡಿದೆ. ಫೋರ್ಡ್ ಮೋಟಾರ್ ಕಂಪನಿಯ ಸಹ-ಮಾಲೀಕರಾದ ಶೀಲಾ ಫೋರ್ಡ್ ಹ್ಯಾಂಪ್ ಕೂಡ ಈ ಒಕ್ಕೂಟದ ಭಾಗವಾಗಿದ್ದಾರೆ. ಈ ಮಾಲೀಕತ್ವದ ಬದಲಾವಣೆಯು ಐಪಿಎಲ್ 2026ರ ಸೀಸನ್ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್;
Here is the Track Record of new RR owners:
– Kal Somani (Tech Entrepreneur) :
A data-driven strategist. He focuses on analytics and modernizing sports through technology, ensuring the team stays ahead of the curve digitally and on the field.
ಗಾಯದ ಕಾರಣದಿಂದಾಗಿ ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರನ್ ಐಪಿಎಲ್ 2026 ರಿಂದ ಹೊರಬಿದ್ದಿದ್ದಾರೆ. ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕರನ್ ಅವರ ಬದಲಿಗೆ ಶ್ರೀಲಂಕಾದ ಟಿ20 ನಾಯಕ ದಾಸುನ್ ಶಾನಕ ಅವರನ್ನು 2 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದಾಸುನ್ ಶನಕ 6 ಟೆಸ್ಟ್, 71 ಏಕದಿನ ಮತ್ತು 131 T20I ಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 3350 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಮತ್ತು 86 ವಿಕೆಟ್ಗಳನ್ನು ಗಳಿಸಿದ್ದಾರೆ. ಈ ಹಿಂದೆ ಇವರು ಗುಜರಾತ್ ಟೈಟಾನ್ಸ್ ಪರ ಆಡಿದ್ದರು.”ಸ್ಯಾಮ್ ಕರನ್ ಅವರನ್ನು ಕಳೆದುಕೊಂಡಿರುವುದು ಬೇಸರದ ಸಂಗತಿ. ಆದರೆ ದಾಸುನ್ ಶಾನಕ ಅವರಂತಹ ಅನುಭವಿ ಫಿನಿಶರ್ ತಂಡದ ಸಮತೋಲನವನ್ನು ಕಾಪಾಡಲಿದ್ದಾರೆ,” ಎಂದು ತಂಡದ ನಿರ್ದೇಶಕ ಕುಮಾರ್ ಸಂಗಕ್ಕಾರ ತಿಳಿಸಿದ್ದಾರೆ.
ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಲ್ಲಿದ್ದ ಸ್ಯಾಮ್ ಕರನ್ ಮತ್ತು ರವೀಂದ್ರ ಜಡೇಜಾ ಅವರನ್ನು ಆರ್ಆರ್ ತಂಡವು ಪಡೆದುಕೊಂಡಿತ್ತು. ಪ್ರತಿಯಾಗಿ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್ಕೆ ತಂಡಕ್ಕೆ ಟ್ರೇಡ್ ಮಾಡಲಾಗಿತ್ತು ಎಂಬುದು ಗಮನಾರ್ಹ.
ಜೆರುಸಲೇಂ, ಮಾರ್ಚ್ 24: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ನಿಲ್ಲಿಸಲು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ಅಮೆರಿಕ ಏಪ್ರಿಲ್ 9ರೊಳಗೆ ಯುದ್ಧವನ್ನು ಕೊನೆಗೊಳಿಸಲು ಬಯಸಿದೆ. ಆದರೆ, ಹೊಸ ಮಾತುಕತೆಗಳಲ್ಲಿ ಹಾಕಲಾದ ಷರತ್ತುಗಳನ್ನು ಒಪ್ಪಲು ಇರಾನ್ ಒಪ್ಪುವುದು ಅನುಮಾನ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ರಾಯಿಟರ್ಸ್ ವರದಿ ಮಾಡಿದೆ.
ಫೆಬ್ರವರಿ 28ರಂದು ಇರಾನ್ ವಿರುದ್ಧ ಯುಎಸ್- ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಆರಂಭವಾಗಿತ್ತು. ಇದು ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆದ ಅತ್ಯಂತ ಮಾರಕ ಘರ್ಷಣೆಗಳಲ್ಲಿ ಒಂದಾಗಿದೆ. ಸಂಘರ್ಷ ಪ್ರಾರಂಭವಾದಾಗಿನಿಂದ ಇರಾನ್ನಲ್ಲಿ ಸುಮಾರು 1,500 ಸಾವುಗಳು ವರದಿಯಾಗಿವೆ. ಗಲ್ಫ್ ರಾಷ್ಟ್ರಗಳಲ್ಲೂ ಸಾವುಗಳು ಉಂಟಾಗಿವೆ. ಬಿಕ್ಕಟ್ಟಿನ ಹೊರತಾಗಿಯೂ, ಡೊನಾಲ್ಡ್ ಟ್ರಂಪ್ ರಾಜತಾಂತ್ರಿಕ ಮಾತುಕತೆಯ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, ಯುಎಸ್ ಮತ್ತು ಇರಾನ್ ಮಧ್ಯಪ್ರಾಚ್ಯದಲ್ಲಿ ಹಗೆತನವನ್ನು ನಿಲ್ಲಿಸುವ ಉತ್ತಮ ಮತ್ತು ಉತ್ಪಾದಕ ಮಾತುಕತೆಯಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದ್ದರು.
ಆದರೆ, ಇರಾನ್ ಈ ಹೇಳಿಕೆಯನ್ನು ನಿರಾಕರಿಸಿತ್ತು. ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಹೇಳಿತ್ತು. ಇಂಧನದ ಬೆಲೆಯಲ್ಲಿ ಕಡಿಮೆ ಮಾಡಲು ಅಮೆರಿಕ ಈ ರೀತಿಯ ಹೇಳಿಕೆ ನೀಡುತ್ತಿದೆ ಎಂದು ಇರಾನ್ ಆರೋಪಿಸಿತ್ತು.
ಅಮೆರಿಕ ಮತ್ತು ಇಸ್ರೇಲ್ ತಮ್ಮ ಗುರಿಗಳಲ್ಲಿ ನಿಕಟವಾಗಿ ಸಮನ್ವಯಗೊಂಡಿವೆ ಎಂದು ಟ್ರಂಪ್ ಹೇಳಿದ್ದರು. “ಸಂಬಂಧವು ತುಂಬಾ ಒಳ್ಳೆಯದು. ನಾವು ಹೆಚ್ಚು ಕಡಿಮೆ ಒಂದೇ ರೀತಿಯ ವಿಷಯಗಳನ್ನು ಬಯಸುತ್ತೇವೆ, ನಾವಿಬ್ಬರೂ ಗೆಲುವು ಬಯಸುತ್ತೇವೆ. ಆ ಗೆಲುವು ನಮ್ಮ ಬಳಿ ಇದೆ” ಎಂದು ಅವರು ಹೇಳಿದ್ದರು.
ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಮತ್ತು ನೆರೆಯ ಗಲ್ಫ್ ರಾಷ್ಟ್ರಗಳಲ್ಲಿ ಪ್ರಮುಖ ಮೂಲಸೌಕರ್ಯಗಳ ಮೇಲಿನ ದಾಳಿಗಳು ತೈಲ ಬೆಲೆಗಳನ್ನು ಸುಮಾರು ಶೇ. 50ರಷ್ಟು ಹೆಚ್ಚಿಸಿವೆ. ಇದು ಜಾಗತಿಕ ಆರ್ಥಿಕ ಆಘಾತದ ಕಳವಳಗಳನ್ನು ಹೆಚ್ಚಿಸಿದೆ. ಈ ಹೋರಾಟವು ಈಗಾಗಲೇ ದೇಶಗಳಲ್ಲಿ 2,000ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ಹೆಚ್ಚಿನ ಸಾವುನೋವುಗಳು ಇರಾನ್ ಮತ್ತು ಲೆಬನಾನ್ನಲ್ಲಿ ವರದಿಯಾಗಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ