ತಂಪಾದ ನೀರು ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲವೇ? ನಿಜಾಂಶವನ್ನು ತಜ್ಞರಿಂದಲೇ ತಿಳಿದುಕೊಳ್ಳಿ

ತಂಪಾದ ನೀರು ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲವೇ? ನಿಜಾಂಶವನ್ನು ತಜ್ಞರಿಂದಲೇ ತಿಳಿದುಕೊಳ್ಳಿ

ಬಿಸಿಲಿನ ಧಗೆಯಿಂದ ಮುಕ್ತಿ ಪಡೆಯಲು ಹೆಚ್ಚಿನವರು ತಂಪಾದ ನೀರು (Cold Water) ಕುಡಿಯುವುದಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಬಿಸಿಲು ಮತ್ತು ಬೆವರಿನಿಂದ ದಣಿದಿದ್ದವರಿಗೆ ತಣ್ಣೀರು ತಕ್ಷಣ ತಂಪು ಮತ್ತು ಆರಾಮವನ್ನು ನೀಡುತ್ತದೆ. ಹಾಗಾಗಿ ಫ್ರಿಜ್‌ನ ನೀರು ಅಥವಾ ಐಸ್ ಹಾಕಿದ ನೀರು ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಪ್ರತಿಯೊಂದು ಅಭ್ಯಾಸವೂ ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ತಣ್ಣೀರು ಕೂಡ ಇದಕ್ಕೆ ಹೊರತಾಗಿಲ್ಲ. ಅದರಲ್ಲಿಯೂ ಕೆಲವರು ಪದೇ ಪದೇ ತಂಪಾಗಿರುವ ನೀರನ್ನು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ವಿಶೇಷವಾಗಿ ದೇಹ ಹೆಚ್ಚು ಬಿಸಿಯಾಗಿರುವಾಗ ಏಕಾಏಕಿ ತಣ್ಣೀರು ಕುಡಿಯುವುದರಿಂದ ಲಾಭಕ್ಕಿಂತ ಸಮಸ್ಯೆಗಳು ಉಂಟಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಇದು ಮುಂದೆ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೂ ಕಾರಣವಾಗಬಹುದು. ಹಾಗಾದರೆ ತಂಪಾದ ನೀರು ಕುಡಿಯುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತವೆ, ಯಾರು ಇದರಿಂದ ದೂರವಿರಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಂಪಾದ ನೀರು ಕುಡಿಯುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು:

ತಜ್ಞರ ಪ್ರಕಾರ, ತುಂಬಾ ತಂಪಾದ ನೀರು ಅಥವಾ ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ಭಾರವಾಗುವುದು ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳು ಕಂಡುಬರಬಹುದು. ಜೊತೆಗೆ, ತಣ್ಣೀರಿನಿಂದ ಗಂಟಲಿನಲ್ಲಿ ಕೆರೆತ ಅಥವಾ ಶೀತಕ್ಕೆ ಕಾರಣವಾಗಬಹುದು, ಅದರಲ್ಲಿಯೂ ಬೇಸಿಗೆಯಲ್ಲಿ ದೇಹ ಬಿಸಿಯಾಗಿರುವುದರಿಂದ ಒಮ್ಮೆಲೇ ತಣ್ಣೀರು ಕುಡಿದಾಗ ದೇಹದ ತಾಪಮಾನದಲ್ಲಿ ಏಕಾಏಕಿ ಬದಲಾವಣೆಯಾಗುತ್ತದೆ. ಕೆಲವರಿಗೆ ತಲೆನೋವು ಅಥವಾ ಸುಸ್ತು ಕಾಣಿಸಿಕೊಳ್ಳಬಹುದು. ಮಾತ್ರವಲ್ಲ, ಇದು ರಕ್ತ ಸಂಚಾರದ ಮೇಲೂ ಪರಿಣಾಮ ಬೀರುತ್ತದೆ. ನಿರಂತರವಾಗಿ ತಣ್ಣೀರು ಕುಡಿಯುವ ಅಭ್ಯಾಸ ದೇಹದ ಸಹಜ ಪ್ರಕ್ರಿಯೆಗಳನ್ನು ನಿಧಾನಗೊಳಿಸಬಹುದು, ಇದರಿಂದ ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು.

ಇದನ್ನೂ ಓದಿ: ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಇದರಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತಾ?

ತಂಪಾದ ನೀರು ಯಾರಿಗೆ ಒಳ್ಳೆಯದಲ್ಲ?

  • ಜೀರ್ಣಕ್ರಿಯೆ ಸರಿಯಾಗಿ ಆಗದವರು ತಣ್ಣೀರು ಕುಡಿಯಬಾರದು.
  • ಗಂಟಲು ಅಥವಾ ಸೈನಸ್ ಸಮಸ್ಯೆ ಇರುವವರಿಗೆ ಇದು ಹಾನಿಕಾರವಾಗಬಹುದು.
  • ಆಗಾಗ ಶೀತ ಆಗುತ್ತಿದ್ದರೆ ನೀವು ತಂಪಾದ ನೀರಿನಿಂದ ದೂರವಿರುವುದು ಉತ್ತಮ.
  • ಸಣ್ಣ ಮಕ್ಕಳು ಮತ್ತು ವೃದ್ಧರಿಗೆ ತಣ್ಣೀರು ಒಳ್ಳೆಯದಲ್ಲ.
  • ಹೃದಯ ಅಥವಾ ರಕ್ತದ ಒತ್ತಡ (ಬ್ಲಡ್ ಪ್ರೆಶರ್) ಸಮಸ್ಯೆ ಇರುವವರು ವಿಶೇಷ ಜಾಗ್ರತೆ ವಹಿಸಬೇಕು.

ತಣ್ಣೀರು ಕುಡಿಯುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು:

  • ತುಂಬಾ ಐಸ್ ಅಥವಾ ಅತಿಯಾಗಿ ತಂಪಾಗಿರುವ ನೀರನ್ನು ಕುಡಿಯುವುದು ಒಳ್ಳೆಯದಲ್ಲ.
  • ಬಿಸಿಲಿನಿಂದ ಬಂದ ತಕ್ಷಣವೇ ನೀರು ಕುಡಿಯದೆ, ಕೆಲವು ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು.
  • ದಿನವಿಡೀ ನೀರನ್ನು ಸ್ವಲ್ಪಸ್ವಲ್ಪವೇ ಕುಡಿಯಬೇಕು.
  • ಗಂಟಲು ನೋವು ಅಥವಾ ಇತರ ಸಮಸ್ಯೆಗಳಿದ್ದರೆ ತಣ್ಣೀರು ಕುಡಿಯಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ: 50 ಸಾವಿರ ಸಿಲಿಂಡರ್ ಬೇಡಿಕೆ ಬಗ್ಗೆ ಪ್ರಸ್ತಾಪ

ಬೆಂಗಳೂರು, ಮಾರ್ಚ್​ 20: ದೇಶದಲ್ಲಿ ಸಿಲಿಂಡರ್ (Cylinder) ಅಭಾವದ ಸರಣಿ ಸಮಸ್ಯೆ ಮುಂದುವರೆದಿದೆ. ಇತ್ತ ಕರ್ನಾಟಕದಲ್ಲೂ ಎಲ್​​​ಪಿಜಿಗಾಗಿ ಹೋಟೆಲ್ ಮಾಲೀಕರು ನಿತ್ಯ ಪರದಾಡುತ್ತಿದ್ದಾರೆ. ಒಂದ್ಕಡೆ ಗೃಹಬಳಕೆ ಸಿಲಿಂಡರ್ ಪಡೆಯಲು ಜನರು ಮುಗಿಬಿದ್ದರೆ, ಮತ್ತೊಂದ್ಕಡೆ ವಾಣಿಜ್ಯ ಸಿಲಿಂಡರ್ ಇಲ್ಲದೆ ಹಲವು ಉದ್ಯಮಗಳು ಬಂದ್ ಆಗುತ್ತಿವೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (cm Siddaramaiah) ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್​ಗೆ ಸಿಎಂ ಪತ್ರ

ಸಿಎಂ ಸಿದ್ದರಾಮಯ್ಯ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನ ಬರೆದಿದ್ದರು. ಈಗ ಸಿಲಿಂಡರ್ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್​ಗೆ ಬರೆದ ಪತ್ರದಲ್ಲಿ ರಾಜ್ಯದ ಸಿಲಿಂಡರ್​ಗಳ ಅಭಾವದ ಬಗ್ಗೆ ಉಲ್ಲೇಖಿಸಿದ್ದಾರೆ. 50 ಸಾವಿರ ಸಿಲಿಂಡರ್​ಗಳು ಬೇಕು. ಭಾರತಕ್ಕೆ ಬಂದಿರುವ ತೈಲ ಹಡಗುಗಳ ತೈಲವನ್ನ ಸಮರ್ಪಕವಾಗಿ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​

ರೆಸ್ಟೋರೆಂಟ್​ಗಳು, ಹೋಟೆಲ್​ಗಳು, ಅಡುಗೆ ತಯಾರಿಸುವ ಸಂಸ್ಥೆಗಳು ಹಾಗೂ ಪಿಜಿಗಳಲ್ಲಿ ಸಿಲಿಂಡರ್ ಅಭಾವ ಹೆಚ್ಚಾಗಿದೆ. ಹೀಗಾಗಿ 50 ಸಾವಿರ LPG ಸಿಲಿಂಡರ್​ಗಳ ಬೇಡಿಕೆಗೆ ಇದೆ. ನಾವು ದಿನಕ್ಕೆ 1000 ಸಿಲಿಂಡರ್​ಗಳನ್ನು ಮಾತ್ರ ಪೂರೈಸಲು ಸಮರ್ಥರಾಗಿದ್ದೇವೆ. ಈ ಕಾರಣಕ್ಕೆ ಹೋಟೆಲ್, ಪಿಜಿಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್ ಕೊರತೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ವಿದ್ಯಾರ್ಥಿಗಳು, ಐಟಿ ನೌಕರರು, ರೈತರು, ಡೈರಿ ಉತ್ಪಾದಕರು ಸೇರಿದಂತೆ ಅನೇಕ ಜನ ಆತಿಥ್ಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಇದೇ ರೀತಿ ಎಲ್​ಪಿಜಿ ಇಲ್ಲದೇ ಆಟೋ ರೀಕ್ಷಗಳಿಗೂ ಸಂಕಷ್ಟ ಶುರುವಾಗಿದೆ. ಭಾರತ 2 ಟ್ಯಾಂಕರ್​ಗಳನ್ನ ಸ್ವೀಕರಿಸಿದೆ. ಇದು ಸಮಸ್ಯೆಗಳನ್ನ ನಿವಾರಿಸುತ್ತದೆ. ಹೀಗಾಗಿ ಕರ್ನಾಟಕಕ್ಕೆ ಸಮರ್ಪಕ ಹಂಚಿಕೆ ಮಾಡಿ. ನಮ್ಮ ಲಭ್ಯತೆ ಚಿತಪಡಿಸಿಕೊಳ್ಳಲು ನೀವು ಹಸ್ತಕ್ಷೇಪ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು

ಬೆಂಗಳೂರು, ಮಾರ್ಚ್​​ 20: ಕಾಳೇನ ಅಗ್ರಹಾರ ಟು ತಾವರೆಕೆರೆ ನಡುವಿನ ಪಿಂಕ್ ಲೈನ್ ಎತ್ತರಿಸಿದ ಮೆಟ್ರೋ ಮಾರ್ಗವನ್ನು ಈ ವರ್ಷ ಮೇ ತಿಂಗಳಿನಲ್ಲಿ ಓಪನ್ ಮಾಡಲು ಬಿಎಂಆರ್ಸಿಎಲ್ ಭರದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ನಾಳೆಯಿಂದ ಏಪ್ರಿಲ್ 5ರ ವರೆಗೆ 16 ದಿನಗಳ ಕಾಲ RDSO ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಪರಿಶೀಲನಾ ಕಾರ್ಯಗಳು ನಡೆಯಲಿವೆ. ರೈಲಿನ ಸ್ಪೀಡ್ ಮತ್ತು ಲೋಡ್ ಟೆಸ್ಟ್ ಜೊತೆಗೆ ಟ್ರ್ಯಾಕ್ ಟೆಸ್ಟ್, ಸ್ಟೇಷನ್​​ಗಳ ತಪಾಸಣೆ, ಪವರ್ ಚೆಕ್ಕಿಂಗ್ ಸೇರಿ ಹಲವು ಬಗೆಯ ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.

ಇನ್ನು ಈ ಪಿಂಕ್​​ ಲೈನ್​​ಗೆ ಅದಾಗಲೇ 4 ರೈಲುಗಳು ಆಗಮಿಸಿವೆ. ಇವುಗಳ ಜೊತಗೆ ಈ ತಿಂಗಳ ಕೊನೆಯಲ್ಲಿ ಒಂದು ರೈಲು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಆರನೇ ರೈಲು ಸೇರ್ಪಡೆಯಾಗಲಿವೆ. ಆ ಮೂಲಕ ‌ಮೊದಲ ಹಂತದಲ್ಲಿ ಪಿಂಕ್ ಲೈನ್​​ನಲ್ಲಿ 6 ಡ್ರೈವರ್ಲೆಸ್ ರೈಲುಗಳು ಸಂಚರಿಸಲಿದ್ದು, ಕಾಳೇನ ಅಗ್ರಹಾರ ಟು ನಾಗವಾರ ನಡುವೆ ಇವು ಸಂಪರ್ಕ ಕಲ್ಪಿಸಲಿವೆ. ಪಿಂಕ್ ಲೈನ್ ಒಟ್ಟು 21.25 ಕಿ.ಮೀ. ವಿಸ್ತೀರ್ಣ ಹೊಂದಿದ್ದು 18 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಆ ಪೈಕಿ 12 ಅಂಡರ್ ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್​​ಗಳಾಗಿವೆ. ಈ ವರ್ಷ ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದ್ದು, ಉಳಿದ 13.76.ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಸ್ಟೇಷನ್​​ ಮಾರ್ಗದ ಕಾಮಗಾರಿ ನಡೆಯುತ್ತಿವೆ. ಇವು ಪೂರ್ಣಗೊಂಡ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್​​ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋಗೆ ಬಂತು ನಾಲ್ಕನೇ ರೈಲು, ಮೇನಲ್ಲಿ ಸಂಚಾರ ನಿರೀಕ್ಷೆ

ಪಿಂಕ್​​ ಲೈನ್​​ಗಾಗಿ ಬಿಇಎಂಎಲ್​​ನಲ್ಲಿ ಒಟ್ಟು 23 ರೈಲುಗಳಿಗೆ ಆರ್ಡರ್​ ನೀಡಲಾಗಿದ್ದು, ಈ ಮಾರ್ಗದ ಆರಂಭದಿಂದಾಗಿ ಪ್ರತಿನಿತ್ಯ ವಿಪರೀತ ವಾಹನ ದಟ್ಟಣೆಯಿಂದ ಕೂಡಿರುವ ಬನ್ನೇರುಘಟ್ಟ ರಸ್ತೆಯ ಸಂಚಾರ ಸುಧಾರಿಸುವ ನಿರೀಕ್ಷೆಯೂ ಮೂಡಿದೆ. ಕೇಂದ್ರ ರೈಲ್ವೆ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಿ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಕೊನೆಯದಾಗಿ ಕಮಿಷನರ್​​ ಆಫ್​​ ಮೆಟ್ರೋ ರೈಲ್ವೇ ಸೇಫ್ಟಿಯಿಂದಲೂ ಅನುಮತಿ ಸಿಗುತ್ತಿದ್ದಂತೆ ಪಿಂಕ್​​ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಶುರುವಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಐಪಿಒಗೆ ಮುನ್ನ ಫ್ಲಿಪ್​ಕಾರ್ಟ್ ಗ್ರೂಪ್ ಸಿಎಫ್​ಒ ಸ್ಥಾನ ಬಿಟ್ಟ ಶ್ರೀರಾಮ್ ವೆಂಕಟರಾಮ್

ನವದೆಹಲಿ, ಮಾರ್ಚ್ 20: ಅಮೆರಿಕದ ಎಂಎನ್​ಸಿ ಕಂಪನಿಯಾದ ವಾಲ್ಮಾರ್ಟ್​ನ ಒಡೆತನದ ಫ್ಲಿಪ್​ಕಾರ್ಟ್ ಸಂಸ್ಥೆಯ (Flipkart) ಎಕ್ಸಿಕ್ಯೂಟಿವ್ ಸ್ಥಾನಪಲ್ಲಟವಾಗುತ್ತಿದೆ. ಫ್ಲಿಪ್​ಕಾರ್ಟ್ ಗ್ರೂಪ್ ಚೀಫ್ ಫೈನಾನ್ಷಿಯಲ್ ಆಫೀಸರ್ ಸ್ಥಾನದಿಂದ ಶ್ರೀರಾಮ್ ವೆಂಕಟರಾಮ್ (Sriram Venkatram) ಅವರು ಕೆಳಗಿಳಿಯಲಿದ್ದಾರೆ. ಭಾರತದ ಅತಿದೊಡ್ಡ ಇಕಾಮರ್ಸ್ ಕಂಪನಿಗಳಲ್ಲಿ ಒಂದೆನಿಸಿರುವ ಫ್ಲಿಪ್​ಕಾರ್ಟ್ ಈ ಸಂಗತಿಯನ್ನು ಶುಕ್ರವಾರ ಪ್ರಕಟಿಸಿದೆ.

ಶ್ರೀರಾಮ್ ವೆಂಕಟರಾಮ್ ಅವರು 2015ರಲ್ಲಿ ಫ್ಲಿಪ್​ಕಾರ್ಟ್ ಸೇರಿದ್ದರು. ಹಲವು ಮುಂಚೂಣಿ ಹುದ್ದೆಗಳನ್ನು ನಿಭಾಯಿಸುತ್ತಾ ಹೋಗಿದ್ದ ಅವರು 2018ರಲ್ಲಿ ಗ್ರೂಪ್​ನ ಸಿಎಫ್​ಒ ಆಗಿ ಕಂಪನಿಯ ಹಣಕಾಸು ವಿಭಾಗದ ಚುಕ್ಕಾಣಿ ಹಿಡಿದು ಜವಾಬ್ದಾರಿ ನಿಭಾಯಿಸಿದ್ದರು.

ಇದನ್ನೂ ಓದಿ: ಶುಕ್ರವಾರ ಗರಿಗೆದರಿದ ಷೇರು ಬಜಾರು; ನಿನ್ನೆ ನೆಲಕಚ್ಚಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಂಡಿದ್ದು ಯಾಕೆ?

ರವಿ ಅಯ್ಯರ್ ಅವರು ಫ್ಲಿಪ್​ಕಾರ್ಟ್​ನ ನೂತನ ಸಿಎಫ್​ಒ

ಫ್ಲಿಪ್​ಕಾರ್ಟ್​ನ ಮಾರ್ಕೆಟ್​ಪ್ಲೇಸ್ ವಿಭಾಗದ ಸಿಎಫ್​ಒ ಆಗಿರುವ ರವಿ ಅಯ್ಯರ್ ಅವರು ಗ್ರೂಪ್ ಸಿಎಫ್​ಒ ಆಗಿ ಶ್ರೀರಾಮ್ ವೆಂಕಟರಾಮ್ ಸ್ಥಾನವನ್ನು ತುಂಬಲಿದ್ದಾರೆ. ಅಯ್ಯರ್ ಅವರು 2014ರಿಂದಲೂ ಫ್ಲಿಪ್​ಕಾರ್ಟ್​ನಲ್ಲಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ಇವರನ್ನು ಉನ್ನತ ಹುದ್ದೆಗೆ ಅಣಿಗೊಳಿಸುವ ಕೆಲಸ ಕಂಪನಿಯಲ್ಲಿ ನಡೆದಿದೆ. ಆ ನಿಟ್ಟಿನಲ್ಲಿ ಮಾರ್ಕೆಟ್​ಪ್ಲೇಸ್ ಬ್ಯುಸಿನೆಸ್​ನ ಸಿಎಫ್​ಒ ಆಗಿ ಅವರಿಗೆ ಬಡ್ತಿ ಕೊಡಲಾಗಿತ್ತು. ಗ್ರೂಪ್ ಸಿಎಫ್​ಒ ಆಗಲು ಬೇಕಾದ ಪ್ರತ್ಯಕ್ಷ ಅನುಭವ ಗಳಿಸಲು ಅವರಿಗೆ ಆ ಸ್ಥಾನ ಕೊಡಲಾಗಿದ್ದಿರಬಹುದು.

ಅದೇ ವೇಳೆ, ಶ್ರೀರಾಮ್ ವೆಂಕಟರಾಮ್ ಅವರೂ ಕೂಡ ಆರು ತಿಂಗಳಿಂದ ಕಂಪನಿಯ ಕಾರ್ಯಗಳಲ್ಲಿ ಮತ್ತು ನಿರ್ಧಾರಗಳಲ್ಲಿ ತೀರಾ ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಕಡಿಮೆಗೊಳಿಸಿದ್ದರು. ರವಿ ಅಯ್ಯರ್ ಅವರನ್ನು ಆ ಸ್ಥಾನಕ್ಕೆ ಅಣಿಗೊಳಿಸುವ ಪ್ರಯತ್ನ ಅದಾಗಿದ್ದಿರಬಹುದು.

ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ ಹೆಚ್ಚಳ; ಮಾಮೂಲಿ ಪೆಟ್ರೋಲ್ ದರದಲ್ಲಿ ಇಲ್ಲ ಬದಲಾವಣೆ

ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಫ್ಲಿಪ್​ಕಾರ್ಟ್ ಭಾರತದ ಮುಖ್ಯ ಇಕಾಮರ್ಸ್ ಕಂಪನಿ. ಬನ್ಸಾಲ್ ಸಹೋದರರು ಸ್ಥಾಪಿಸಿದ ಕಂಪನಿ ಇದು. ಅಮೆರಿಕದ ರೀಟೇಲ್ ಮಾರಾಟ ಕಂಪನಿಯಾದ ವಾಲ್ಮಾರ್ಟ್ ಫ್ಲಿಪ್​ಕಾರ್ಟ್ ಅನ್ನು ಖರೀದಿಸಿತ್ತು. ಸದ್ಯ ಕಲ್ಯಾಣ್ ಕೃಷ್ಣಮೂರ್ತಿ ಅವರು ಗ್ರೂಪ್ ಸಿಇಒ ಆಗಿದ್ದಾರೆ. ಫ್ಲಿಪ್​ಕಾರ್ಟ್ ಈ ವರ್ಷ ಐಪಿಒ ಆಫರ್ ಮಾಡುತ್ತಿದ್ದು ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹುಳಿಯಾರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು: ಕೇಸ್​​ ತನಿಖೆ ಹೊಣೆ ಸಿಐಡಿಗೆ

ತುಮಕೂರು, ಮಾರ್ಚ್​​ 20: ಹುಳಿಯಾರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ.ಜಿ. ಪರಮೇಶ್ವರ್​​ ಅವರೇ ಮಾಹಿತಿ ನೀಡಿದ್ದಾರೆ. ಜೂಜಾಟ ಕೇಸ್​​ ಸಂಬಂಧ ವಿಚಾರಣೆಗೆ ಪೊಲೀಸರು ಕರೆತಂದಿದ್ದ ಆರು ಮಂದಿಯ ಪೈಕಿ ಓರ್ವ ಮೃತಪಟ್ಟಿದ್ದರು. ಅನುಮಾನಾಸ್ಪದವಾಗಿ ಕಾಂತರಾಜು ಎಂಬವರು ಮೃತಪಟ್ಟಿದ್ದು, ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಿ ಕೊಲೆಗೈಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಸರ್ಕಾರ ಪ್ರಕರಣವನ್ನು ಸಿಐಡಿಗೆ ನೀಡಿದೆ.

ಚಿಕ್ಕನಾಯಕನಹಳ್ಳಿಯ ಯಳನಾಡು ಗ್ರಾಮದ ನಿವಾಸಿ ಮೃತ ಕಾಂತರಾಜು ಜೊತೆ ನಿನ್ನೆ ಸಂಜೆ ಇದ್ದ ಪ್ರದೀಪ್​​ ಎಂಬವರು ಹೇಳುವಂತೆ, ಜೂಜಾಡದಿದ್ದರೂ ಕಾಂತರಾಜು ಸೇರಿ ಐವರನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಪೊಲೀಸ್​​ ಠಾಣೆಗೆ ಬರುವ ಹೊತ್ತಲ್ಲಿ ಕಾಂತರಾಜು ತುಂಬಾ ಸುಸ್ತಾಗಿರುವಂತೆ ಕಂಡಿದ್ದರು. ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿರುವಂತೆ ಕಂಡರೂ ಪೊಲೀಸರು ತಲೆಕೆಡಿಸಿಕೊಂಡಿರಲಿಲ್ಲ. ಹೇಳಿಕೆ ಪಡೆಯಲು ಬಂದಿದ್ದ ಸರ್ಕಲ್​​ ಇನ್ಸ್​​ಪೆಕ್ಟರ್​​ ಠಾಣೆಯಲ್ಲಿಯೇ ಮಲಗಿದ್ದ ಕಾಂತರಾಜು ಮುಖಕ್ಕೆ ಕಾಲಿನಿಂದ ಒದ್ದು ಎಬ್ಬಿಸಿದ್ದಾರೆ. ಎಲ್ಲ ಪ್ರಕ್ರಿಯೆ ಮುಗಿಸಿ ಹೊರ ಬರುವಾಗ ಕಾಂತರಾಜು ಠಾಣೆಯ ಬಾಗಿಲ ಬಳಿ ಕುಸಿದು ಬಿದ್ದು ಮೃತಪಟ್ಟಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿಚಾರಣೆಗೆಂದು ಠಾಣೆಗೆ ಕರೆತಂದ ವ್ಯಕ್ತಿ ಲಾಕಪ್​​​ನಲ್ಲೇ ಡೆತ್? ಕೆರಳಿದ ಗ್ರಾಮಸ್ಥರು

ಮತ್ತೊಂದೆಡೆ ಕಾಂತರಾಜು ಕುಟುಂಬದ ದುಃಖದ ಕಟ್ಟೆ ಒಡೆದಿದ್ದು, ಪತ್ನಿ, ಇಬ್ಬರು ಮಕ್ಕಳು ನಮಗ್ಯಾರು ದಿಕ್ಕು ಎಂದು ಗೋಳಾಡುತ್ತಿದ್ದಾರೆ. ಘಟನೆ ಬಗ್ಗೆ ಸೂಕ್ತ ತನಿಖೆ ಆಗಬೇಕು.  ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಆಗಬೇಕು ಎಂದು ಮೃತನ ಮಗಳಾದ ನಂದಿತಾ ಆಗ್ರಹಿಸಿದ್ದಾರೆ. ಇನ್ನು ಕಾಂತರಾಜು ಮಗ ತಿಲಕ್ ಗೌಡ ತಂದೆಯ ಸಾವಿನ ಬಗ್ಗೆ ದೂರು ನೀಡಿದ್ದು, ಸಾವಿಗೆ ಪೊಲೀಸರೆ ಹೊಣೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಗ್ಯ ಸಮಸ್ಯೆ ಬಗ್ಗೆ ಹೇಳಿದರೂ ಚಿಕಿತ್ಸೆ ಕೊಡಿಸದೆ, ತಂದೆಯ ತಲೆ, ಕಾಲು ಹಾಗೂ ಎದೆಗೆ ಬೂಟು ಕಾಲಿನಿಂದ ಒದ್ದಿರೋದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಹುಳಿಯಾರು ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತದಲ್ಲಿ 300ಕ್ಕೂ ಹೆಚ್ಚು ಆನ್​ಲೈನ್​ ಗೇಮಿಂಗ್ ಆ್ಯಪ್, ವೆಬ್​ಸೈಟ್​ಗಳಿಗೆ ನಿಷೇಧ

ನವದೆಹಲಿ, ಮಾರ್ಚ್ 20: ಭಾರತದಲ್ಲಿ ಒಟ್ಟು 8,400 ಅಕ್ರಮ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದ ನಂತರ ಸುಮಾರು 4,900 ಸೈಟ್‌ಗಳ ಮೇಲೆ ಕ್ರಮ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಅಕ್ರಮ ಬೆಟ್ಟಿಂಗ್ (Illegal Betting) ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಹಾಗೇ, 300 ವೆಬ್‌ಸೈಟ್‌ಗಳು ಮತ್ತು ಆನ್​ಲೈನ್ ಗೇಮಿಂಗ್ ಅಪ್ಲಿಕೇಶನ್‌ಗಳನ್ನು (Online Gaming Apps) ನಿರ್ಬಂಧಿಸಿದೆ.

ಕೇಂದ್ರ ಸರ್ಕಾರವು ಅಕ್ರಮ ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲಿನ ಕಠಿಣ ಕ್ರಮವನ್ನು ತೀವ್ರಗೊಳಿಸಿದೆ. ಆನ್‌ಲೈನ್ ಕ್ರೀಡಾ ಬೆಟ್ಟಿಂಗ್, ಕ್ಯಾಸಿನೊ-ಶೈಲಿಯ ಗೇಮಿಂಗ್ ಮತ್ತು ಪೀರ್-ಟು-ಪೀರ್ ಬೆಟ್ಟಿಂಗ್, ಓಲ್ಡ್ ಸ್ಕೂಲ್ ಸತ್ತಾ ಆ್ಯಂಡ್ ಮಟ್ಕಾ ನೆಟ್​ವರ್ಕ್, ಕ್ಯಾಸಿನೋ ಆ್ಯಪ್ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬೆಟ್ಟಿಂಗ್ ಪ್ಲಾಟ್​​ಫಾರ್ಮ್​ಗಳ ಮೇಲೆ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಬೆಟ್ಟಿಂಗ್ ಚಟಕ್ಕೆ ಬಿದ್ದು ತಂದೆ ಆಸ್ತಿ ಮಾರಿಸಿದ ಮಗ: ಆದರೂ ಬುದ್ಧಿ ಕಲಿಯದ ಇಂಜಿನಿಯರ್‌ ಕಳ್ಳನಾದ!

ಸರ್ಕಾರದ ಈ ಕ್ರಮವು ಆನ್‌ಲೈನ್ ಕ್ರೀಡಾ ಬೆಟ್ಟಿಂಗ್ ವೆಬ್‌ಸೈಟ್‌ಗಳು, ಸ್ಲಾಟ್‌ಗಳು, ರೂಲೆಟ್ ಮತ್ತು ಲೈವ್ ಡೀಲರ್ ಟೇಬಲ್‌ಗಳಂತಹ ಆಟಗಳನ್ನು ನೀಡುವ ವರ್ಚುವಲ್ ಕ್ಯಾಸಿನೊಗಳು ಮತ್ತು ಪೀರ್-ಟು-ಪೀರ್ ಮಾರುಕಟ್ಟೆಗಳಾಗಿ ಕಾರ್ಯನಿರ್ವಹಿಸುವ ಬೆಟ್ಟಿಂಗ್ ಎಕ್ಸ್‌ಚೇಂಜ್‌ಗಳು ಸೇರಿದಂತೆ ಹಲವಾರು ವರ್ಗಗಳ ಅಕ್ರಮ ಪ್ಲಾಟ್​​ಫಾರ್ಮ್​ಗಳನ್ನು ಗುರಿಯಾಗಿಸಿಕೊಂಡಿದೆ. ಅಧಿಕಾರಿಗಳು ರಿಯಲ್-ಮನಿ ಕಾರ್ಡ್ ಮತ್ತು ಕ್ಯಾಸಿನೊ ಗೇಮಿಂಗ್ ಅಪ್ಲಿಕೇಶನ್‌ಗಳ ಜೊತೆಗೆ ಸತ್ತಾ ಮತ್ತು ಮಟ್ಕಾ ಜೂಜಿನ ನೆಟ್‌ವರ್ಕ್‌ಗಳ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮಹಾದೇವ ಬೆಟ್ಟಿಂಗ್ ಆ್ಯಪ್ ಹಗರಣ, 2023ರಲ್ಲಿ ಬಂಧಿಸಲಾಗಿದ್ದ ಆರೋಪಿ ನಾಪತ್ತೆ, ಹಸ್ತಾಂತರಕ್ಕೆ ತಡೆ

ಅಧಿಕೃತ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಸುಮಾರು 8,400 ಜೂಜು ಮತ್ತು ಬೆಟ್ಟಿಂಗ್ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಇವುಗಳಲ್ಲಿ ಸುಮಾರು 4,900 ಪ್ಲಾಟ್‌ಫಾರ್ಮ್‌ಗಳನ್ನು ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದ ನಂತರ ತೆಗೆದುಹಾಕಲಾಯಿತು. ಇದು ಡಿಜಿಟಲ್ ಗೇಮಿಂಗ್ ಮತ್ತು ಬೆಟ್ಟಿಂಗ್ ಚಟುವಟಿಕೆಗಳನ್ನು ನಿಯಂತ್ರಿಸಲು ಕಾನೂನು ಚೌಕಟ್ಟನ್ನು ಬಲಪಡಿಸಿತು.

ಈ ವರ್ಷದ ಜನವರಿಯ ಆರಂಭದಲ್ಲಿ ಕೇಂದ್ರ ಸರ್ಕಾರವು 242 ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ವೆಬ್‌ಸೈಟ್ ಲಿಂಕ್‌ಗಳನ್ನು ನಿರ್ಬಂಧಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಪಂಜಾಬ್ ಕಿಂಗ್ಸ್​ಗೆ ಆಘಾತ; ಸ್ಟಾರ್ ವೇಗಿ ಆರಂಭಿಕ ಪಂದ್ಯಗಳಿಗೆ ಅಲಭ್ಯ

Source link

Dhurandhar 2: ರಣವೀರ್ ಸಿಂಗ್ ಮುಂದೆ ಬೇರೆ ಹೀರೋಗಳೆಲ್ಲ ಜೋಕರ್​ಗಳು; ಆರ್​ಜಿವಿ ಟೀಕೆ

‘ಧುರಂಧರ್ 2 ಒಂದು ಹಾರರ್. ಬುದ್ಧಿಹೀನ ಮತ್ತು ಅತಿಯಾದ ಅಬ್ಬರದ ಸಿನಿಮಾಗಳ ಮೂಲಕ ತಮ್ಮ ವೃತ್ತಿಜೀವನ ಕಟ್ಟಿಕೊಂಡಿರುವ ಎಲ್ಲಾ ಫಿಲ್ಮ್ ಮೇಕರ್​ಗಳಿಗೆ ಇದೊಂದು ಭಯಾನಕ ಅನುಭವ. ಮೆದುಳನ್ನು ಮನೆಯಲ್ಲೇ ಬಿಟ್ಟು ಸಿನಿಮಾ ನೋಡಲು ಪ್ರೇರೇಪಿಸುತ್ತಿದ್ದಂತಹ ಸಿನಿಮಾಗಳ ಕಾಲ ಮುಗಿಯಿತು. ಅಬ್ಬರದ ಮತ್ತು ಮಸಾಲಾ ಸಿನಿಮಾಗಳು ಈಗ ವೆಂಟಿಲೇಟರ್ ಮೇಲೆ ಉಸಿರಾಡಲು ಒದ್ದಾಡುತ್ತಿವೆ. ದೇವರಂತೆ ಆರಾಧಿಸಲ್ಪಡುವ ಪ್ರತಿಯೊಬ್ಬ ಹೀರೋಗಳಿಗೂ ಧುರಂಧರ್ 2 (Dhurandhar 2) ಸಿನಿಮಾ ನಡುಕ ಹುಟ್ಟಿಸಲಿದೆ.’

‘ಈ ಸಿನಿಮಾ ಮೂಲಕ ರಣವೀರ್ ಸಿಂಗ್ ಅವರು ಎಂದಿಗೂ ಕಷ್ಟಪಡದ ಹೀರೋಗಳನ್ನು ಕೊಂದು ಹಾಕಿದ್ದಾರೆ. ಅಂತಹ ಹಳೇ ಮಾದರಿಯ ಹೀರೋಗಳ ಹೆಣದ ಮೇಲೆ, ಅವರು ಒಬ್ಬ ನೈಜ ಹೀರೋಗೆ ಜನ್ಮ ನೀಡಿದ್ದಾರೆ. ಈ ಹೊಸ ಹೀರೋನಲ್ಲೂ ದೋಷಗಳಿವೆ. ಆದರೆ ಅತ್ಯಂತ ಅಪಾಯಕಾರಿ ಮತ್ತು ಊಹಿಸಲಾಗದ ವ್ಯಕ್ತಿ ಈತ. ಇಲ್ಲಿ ಹೀರೋಯಿಸಂ ಎನ್ನುವುದು ಕಿವಿಗೆ ಹಾನಿಯಾಗುವಂತಹ ಹಿನ್ನೆಲೆ ಸಂಗೀತದ ಮೂಲಕ ಜನರ ತಲೆಗೆ ತುರುಕಿದ್ದಲ್ಲ. ಬದಲಿಗೆ ಆತನ ಕಾರ್ಯಗಳಿಂದ ಹೀರೋಯಿಸಂ ಮೂಡಿಬಂದಿದೆ.’

‘ಈ ಹೊಸ ಮಾದರಿಯ ಹೀರೋಗೆ ಹೋಲಿಸಿದರೆ, ಹಳೆಯ ದೇವಮಾನವ ಹೀರೋಗಳು ಇದ್ದಕ್ಕಿದ್ದಂತೆ ಸರ್ಕಸ್‌ನ ಜೋಕರ್‌ಗಳಂತೆ ಹಾಸ್ಯಾಸ್ಪದವಾಗಿ ಕಾಣುತ್ತಾರೆ. ಧುರಂಧರ್ 2 ಚಿತ್ರದ ಕಲೆಕ್ಷನ್ ಕಂಡು ಅವರ ಕುರುಡು ಅಭಿಮಾನಿಗಳು ಅಸಹಾಯಕರಾಗಿ ಭಯಬೀಳುತ್ತಿದ್ದಾರೆ. ಫಿಸಿಕ್ಸ್ ಒಂದು ಹಾಸ್ಯ ಮತ್ತು ಗ್ರಾವಿಟಿಯೇ ಇಲ್ಲ ಎಂಬಂತೆ ಸಾಹಸ ದೃಶ್ಯಗಳನ್ನು ಸೃಷ್ಟಿಸಿ ಕೆರಿಯರ್ ಕಟ್ಟಿಕೊಂಡವರಿಗೆ ಈ ಸಿನಿಮಾ ಭೀತಿ ಹುಟ್ಟಿಸಿದೆ. ಮನುಷ್ಯರನ್ನು 50 ಅಡಿ ಎತ್ತರಕ್ಕೆ ಎಸೆಯುವ, ರಬ್ಬರ್ ಬಾಲ್ ತರಹ ನೆಲಕ್ಕೆ ಬಡಿಯುವ, ನಗರವನ್ನೇ ಭಸ್ಮ ಮಾಡುವ ಸ್ಫೋಟದಿಂದ ಬದುಕುಳಿದು ಧೂಳು ಕೊಡವಿಕೊಂಡು ಡೈಲಾಗ್ ಹೊಡೆಯುವ ದೃಶ್ಯಗಳನ್ನು ಹೊಸ ತಲೆಮಾರಿನ ಪ್ರೇಕ್ಷಕರು ಈಗ ಕೊಲ್ಲಲಿದ್ದಾರೆ.’

‘ನೈಜ ಆಕ್ಷನ್ ಸೀನ್‌ಗಳನ್ನು ನೋಡಿದ ಮೇಲೆ, ಗಾಳಿಯಲ್ಲಿ ಹಾರುವ ಖಳನಾಯಕ ಗುಂಪು ಈಗ ನಕಲಿಯಾಗಿ ಕಾಣುತ್ತಿದೆ. ವೈರ್ ಮತ್ತು ಕ್ರೇನ್‌ಗಳ ಮೂಲಕ ಹೀರೋಗಳನ್ನು ಮೇಲೆತ್ತಿ ತೋರಿಸುತ್ತಿದ್ದ ನಿರ್ದೇಶಕರು ಈಗ ಬೆವರುತ್ತಾ ಎಚ್ಚರಗೊಳ್ಳುವಂತಾಗಿದೆ. ಕೇವಲ ಹೇರ್ ಸ್ಟೈಲ್, ಕಾಸ್ಟ್ಯೂಮ್, ಫೋಟೋಶಾಪ್ ಮಾಡಿದ ಸಿಕ್ಸ್ ಪ್ಯಾಕ್ ಮತ್ತು ಡಿಸೈನರ್ ಬಟ್ಟೆಗಳಿಂದ ಪಾತ್ರಗಳು ಸೃಷ್ಟಿಯಾಗುತ್ತವೆ ಎಂದು ನಂಬಿರುವ ಪ್ಯಾನ್-ಇಂಡಿಯಾ ನಿರ್ದೇಶಕರು ಈಗ ತಮ್ಮ ಕುರ್ಚಿಯಲ್ಲಿ ನಡುಗುತ್ತಿದ್ದಾರೆ.’

‘ಧುರಂಧರ್ 2 ಚಿತ್ರದ ಹೀರೋನ ಶಕ್ತಿ ಆತನ ಬೈಸೆಪ್ಸ್‌ನಿಂದಲ್ಲ, ಬದಲಿಗೆ ಆತನ ಬುದ್ಧಿವಂತಿಕೆಯಿಂದ ಬರುತ್ತದೆ ಎಂದು ಪ್ರೇಕ್ಷಕರು ತಿಳಿದುಕೊಂಡ ಮೇಲೆ, ಈ ಹೇರ್ ಮತ್ತು ಕಾಸ್ಟ್ಯೂಮ್ ಶಾಲೆಯ ಸಿನಿಮಾಗಳು ಸಣ್ಣ ಮಕ್ಕಳ ಆಟದಂತೆ ಕಾಣುತ್ತಿವೆ. ಧುರಂಧರ್ 2 ಕೇವಲ ಒಂದು ಸಿನಿಮಾವಲ್ಲ. ಅದೊಂದು ಅಂತಿಮ ತೀರ್ಪು. ಪ್ರೇಕ್ಷಕರ ಬುದ್ಧಿವಂತಿಕೆಯನ್ನು ಅವಮಾನಿಸುವ ಮತ್ತು ಹೀರೋಗಳನ್ನು ದೇವರುಗಳನ್ನಾಗಿ ಮಾಡಿ ಪ್ರೇಕ್ಷಕರನ್ನು ಕುರಿಗಳನ್ನಾಗಿಸುವ ಸಿನಿಮಾಗಳನ್ನು ಆದಿತ್ಯ ಧಾರ್ ಅವರು ಕೊಂದಿದ್ದಾರೆ.’

ಇದನ್ನೂ ಓದಿ: ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ

‘ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಆ ಹಳೆಯ ನಿರ್ಮಾಪಕರ ನಂಬಿಕೆಗಳನ್ನು ಎಷ್ಟು ಆಳವಾದ ಗುಂಡಿಯಲ್ಲಿ ಹೂತು ಹಾಕುತ್ತಿದೆ ಎಂದರೆ, ಅಲ್ಲಿಂದ ಅವರ ಪ್ರೇತಾತ್ಮಗಳೂ ಹೊರಬರಲು ಸಾಧ್ಯವಿಲ್ಲ. ಈಗ ನೀವು ಕೇಳುತ್ತಿರುವ ಬಾಕ್ಸ್ ಆಫೀಸ್ ಕಲೆಕ್ಷನ್‌ನ ಆರ್ಭಟವೇ ಆ ಹಳೇ ಮಾದರಿಯ ಸಿನಿಮಾಗಳ ಅಂತ್ಯದ ಕಿರುಚಾಟ. ಈಗಾಗಲೇ ಚಿತ್ರೀಕರಣ ಹಂತದಲ್ಲಿರುವ ಅಂತಹ ಸಿನಿಮಾಗಳ ನಿರ್ಮಾಪಕರು ಈ ಕೂಡಲೇ ಧುರಂಧರ್ 2 ಚಿತ್ರವನ್ನು ಹಲವು ಬಾರಿ ನೋಡಿ ತಮ್ಮನ್ನು ತಾವು ತಿದ್ದಿಕೊಳ್ಳದಿದ್ದರೆ, ಅವರನ್ನು ಆ ದೇವರೂ ಕೂಡ ಉಳಿಸಲು ಸಾಧ್ಯವಿಲ್ಲ. ಆದರೆ ಒಂದು ಸಮಸ್ಯೆ ಇದೆ. ಅವರ ಹತ್ತಿರ ಕೋಟಿಗಟ್ಟಲೆ ಹಣವಿರಬಹುದು, ಆದರೆ ಆದಿತ್ಯ ಧಾರ್ ಅವರಂತಹ ಮೆದುಳನ್ನು ಎಲ್ಲಿಂದ ತರುತ್ತಾರೆ?’

ರಾಮ್ ಗೋಪಾಲ್ ವರ್ಮಾ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಿಲ್ಜೀತ್ ಮ್ಯಾಜಿಕ್: ಕೇವಲ 14 ಶೋ, 943 ಕೋಟಿ ಆದಾಯ, 114 ಕೋಟಿ ತೆರಿಗೆ

ಕೆಲ ತಿಂಗಳುಗಳ ಹಿಂದಷ್ಟೆ ನಟ, ಗಾಯಕ ದಿಲ್ಜೀತ್ ದೊಸ್ಸಾಂಜ್ (Diljit Dosanjh) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಲೈವ್ ಕಾನ್ಸರ್ಟ್​​ಗಳಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ಮೋದಿ ಸಹ ತಮ್ಮ ಭಾಷಣವೊಂದರಲ್ಲಿ ಎಲ್ಲ ರಾಜ್ಯಗಳೂ ಲೈವ್ ಕಾನ್ಸರ್ಟ್​​ಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿಕೊಡುವಂತೆ ಮನವಿ ಮಾಡಿದ್ದರು. ಇದೀಗ ಅದರ ಒಳಮರ್ಮ ತಿಳಿದು ಬರುತ್ತಿದೆ. ಗಾಯಕ ದಿಲ್ಜೀತ್ ದೊಸ್ಸಾಂಗ್ ಭಾರತದಲ್ಲೇ ಅತಿ ಹೆಚ್ಚು ಟಿಕೆಟ್ ಸೋಲ್ಡ್ ಮಾಡುವ ಲೈವ್ ಕಾರ್ನರ್ಟ್ ಕಲಾವಿದ ಸಹ ಆಗಿದ್ದು, ಅವರು ಕೇವಲ 14 ಶೋಗಳಿಗೆ ಬರೋಬ್ಬರಿ 943 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಈ 14 ಶೋಗಳನ್ನು ಕೆಲವೇ ತಿಂಗಳುಗಳಲ್ಲಿ ಮುಗಿಸಿದ್ದಾರೆ ದಿಲ್ಜೀತ್ ದೊಸ್ಸಾಂಜ್.

ಖ್ಯಾತ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಅವರ ‘ದಿಲ್-ಲುಮಿನಾಟಿ’ ಹೆಸರಿನ ಲೈವ್ ಕಾನ್ಸರ್ಟ್ ಪ್ರವಾಸ (ಟೂರ್) ಮಾಡಿದ್ದರು. ದೇಶದ 13 ನಗರಗಳಲ್ಲಿ 14 ಶೋಗಳನ್ನು ಅವರು ನೀಡಿದ್ದರು. ಕೆಲವು ವಿದೇಶಿ ಶೋಗಳನ್ನು ಸಹ ನೀಡಿದ್ದರು. ಈ 14 ಶೋಗಳಿಗೆ ಬರೋಬ್ಬರಿ 943 ಕೋಟಿ ರೂಪಾಯಿಗಳ ಆದಾಯವನ್ನು ದಿಲ್ಜೀತ್ ಸೃಷ್ಟಿಸಿದ್ದಾರೆ. ಇದರಿಂದ 114 ಕೋಟಿ ರೂಪಾಯಿ ತೆರಿಗೆ ಸರ್ಕಾರಕ್ಕೆ ಪಾವತಿ ಆಗಿದೆ. ಲೈವ್ ಕಾನ್ಸರ್ಟ್ ಕೇವಲ ಮನರಂಜನೆ ಮಾತ್ರವಲ್ಲ, ದೇಶದ ಆರ್ಥಿಕತೆಯ ಮೇಲೆ ಅಭೂತಪೂರ್ವ ಪ್ರಭಾವ ಬೀರಿದೆ ಎಂಬುದನ್ನು ಈ ಅಂಕಿ-ಸಂಖ್ಯೆ ಸಾರುತ್ತಿದೆ.

ದಿಲ್ಜೀತ್ ದೊಸ್ಸಾಂಗ್ ಅವರಿಂದ ಗಳಿಕೆ ಅಗಿರುವ 943 ಕೋಟಿ ರೂಪಾಯಿಗಳಲ್ಲಿ 276 ಕೋಟಿ ರೂಪಾಯಿ ನೇರ ಆದಾಯ ಅಂದರೆ ಟಿಕೆಟ್ ಮಾರಾಟ, ಪ್ರಾಯೋಜಕತ್ವದಿಂದ ಬಂದರೆ. ಉಳಿದ 553 ಕೋಟಿ ಪರೋಕ್ಷ ಆದಾಯವಾಗಿ ಬಂದಿದೆ. ಈ ಸಂಗೀತ ಕಾರ್ಯಕ್ರಮಗಳ ಸರಣಿಯು ಲೈವ್ ಈವೆಂಟ್ ಮತ್ತು ಇತರ ಪೂರಕ ವಲಯಗಳಲ್ಲಿ ಸುಮಾರು 1.18 ಲಕ್ಷ ಉದ್ಯೋಗವನ್ನು ಸೃಷ್ಟಿಸಿದೆ. ಇದರಲ್ಲಿ ಭದ್ರತೆ, ಲಾಜಿಸ್ಟಿಕ್ಸ್, ಉತ್ಪಾದನೆ, ಫ್ಯಾಷನ್ ಮತ್ತು ಹೋಟೆಲ್ ಉದ್ಯಮದ ಕೆಲಸಗಾರರು ಸಹ ಸೇರಿದ್ದಾರೆ.

ಈ ಲೈವ್ ಕಾನ್ಸರ್ಟ್​​ ಗಾಗಿ ಸುಮಾರು 38% ಪ್ರೇಕ್ಷಕರು ಈ ಕಾರ್ಯಕ್ರಮಕ್ಕಾಗಿ ಬೇರೆ ನಗರಗಳಿಂದ ಪ್ರಯಾಣ ಬೆಳೆಸಿದ್ದರು. ಅವರಲ್ಲಿ ಅರ್ಧದಷ್ಟು ಮಂದಿ ತಮ್ಮ ವಾಸ್ತವ್ಯವನ್ನು 5 ದಿನಗಳವರೆಗೆ ವಿಸ್ತರಿಸಿದ್ದು, ಇದು ಸ್ಥಳೀಯ ಹೋಟೆಲ್, ಸಾರಿಗೆ ಮತ್ತು ಆಹಾರೋದ್ಯಮಕ್ಕೆ ದೊಡ್ಡ ಲಾಭ ತಂದುಕೊಟ್ಟಿದೆ. ಈ ಕಾರ್ಯಕ್ರಮದಿಂದ ಸರ್ಕಾರಕ್ಕೆ ಜಿಎಸ್‌ಟಿ (GST) ಮತ್ತು ಇತರ ತೆರಿಗೆಗಳ ರೂಪದಲ್ಲಿ ಸುಮಾರು 114 ಕೋಟಿ ಆದಾಯ ಬಂದಿದೆ ಎಂದು ಆಡಿಟ್ ಸಂಸ್ಥೆಯಾಗಿರುವ ಈಸ್ಟರ್ನ್ ಆಂಡ್ ಯಂಗ್ ವರದಿ ನೀಡಿದೆ.

ಇದನ್ನೂ ಓದಿ:ಅಮಿತಾಬ್ ಬಚ್ಚನ್ ಕಾರಣಕ್ಕೆ ದಿಲ್ಜೀತ್​​ಗೆ ಬಂತು ಖಲಿಸ್ಥಾನಿಗಳ ಬೆದರಿಕೆ

ದೆಹಲಿ, ಜೈಪುರ, ಹೈದರಾಬಾದ್, ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ನಡೆದ 14 ಶೋಗಳಿಗೆ ಒಟ್ಟು 3.2 ಲಕ್ಷಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದಾರೆ. ದೆಹಲಿಯ ಒಂದೇ ಶೋನಲ್ಲಿ 55,000 ಅಭಿಮಾನಿಗಳು ಭಾಗವಹಿಸಿ ದಾಖಲೆ ನಿರ್ಮಿಸಿದ್ದರು. ಅದು ಮಾತ್ರವೇ ಅಲ್ಲದೆ ವರದಿಯ ಪ್ರಕಾರ, ಒಟ್ಟು ಪ್ರೇಕ್ಷಕರಲ್ಲಿ 49% ರಷ್ಟು ಜನರು ಮಧ್ಯಮ ಮತ್ತು ಸಣ್ಣ ನಗರಗಳಿಂದ ಬಂದವರಾಗಿದ್ದಾರೆ. ಇದು ಭಾರತದ ಸಣ್ಣ ನಗರಗಳಲ್ಲಿಯೂ ಲೈವ್ ಕಾರ್ಯಕ್ರಮಗಳಿಗೆ ಇರುವ ಭಾರೀ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ.

ಡಿಸೆಂಬರ್ 2024ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಭಾಷಾ ವಿವಾದವೊಂದು ಸೃಷ್ಟಿಯಾಗಿತ್ತು. ಬೆಂಗಳೂರಿನಲ್ಲಿ ಶೋ ನಡೆದಾಗ ಸ್ಥಳೀಯ ಅಭಿಮಾನಿಯೊಬ್ಬರು ಮತ್ತೊಬ್ಬ ಪ್ರೇಕ್ಷಕನಿಗೆ ಕನ್ನಡದಲ್ಲಿ ಮಾತನಾಡಲು ಒತ್ತಾಯಿಸಿದ್ದ ಎಂದು ಹೇಳಿದ್ದು ಸುದ್ದಿ ಆಗಿತ್ತು. ಇದು ಆ ಸಮಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಭಾರತದ ಹೊರತಾಗಿ, ಈ ಪ್ರವಾಸವು ಅಮೆರಿಕ, ಕೆನಡಾ ಮತ್ತು ಯುರೋಪ್‌ನಲ್ಲೂ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು, ಜಾಗತಿಕವಾಗಿ ಸುಮಾರು 137 ಮಿಲಿಯನ್ ಡಾಲರ್ ನೇರ ಆದಾಯ ಗಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆರು ವರ್ಷ ಬಳಿಕ ಲಿಪುಲೇಖ ಪಾಸ್ ಮೂಲಕ ಭಾರತ-ಚೀನಾ ಟ್ರೇಡಿಂಗ್ ಪುನಾರಂಭ; ಆದರೆ, ನೇಪಾಳದಿಂದ ಆಕ್ಷೇಪ ಯಾಕೆ?

ನವದೆಹಲಿ, ಮಾರ್ಚ್ 20: ಭಾರತ ಮತ್ತು ಚೀನಾ ನಡುವೆ ಹಿಮಾಲಯದ ತಪ್ಪಲಲ್ಲಿ ಇರುವ ಮೂರು ಕಣಿವೆ ಮಾರ್ಗಗಳು ಇದೇ ಜೂನ್ ತಿಂಗಳಲ್ಲಿ ಪುನಾರಂಭಗೊಳ್ಳಲಿವೆ. ಇದರಲ್ಲಿ ಉತ್ತರಾಖಂಡ್​ನ ಪಿತ್ತೋರಗಡ್​ನ ಲಿಪುಲೇಖ್ ಪಾಸ್ (Lipulekh Pass) ಅಥವಾ ಲಿಪುಲೇಖ ಕಣಿವೆಯೂ ಒಂದು. ಹಾಗೆಯೇ, ಹಿಮಾಚಲದಲ್ಲಿರುವ ಶಿಪಕಿ ಲಾ (Shipki La Pass) ಮತ್ತು ಸಿಕ್ಕಿಂನಲ್ಲಿರುವ ನಾಥು ಲಾ ಪಾಸ್​ಗಳೂ (Nathu La Pass) ಕೂಡ ಮುಕ್ತಗೊಳ್ಳಲಿವೆ. ಕಳೆದ ವರ್ಷ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ನಡೆಸಿದ ಉನ್ನತ ಮಟ್ಟದ ಸಭೆಯ ಪ್ರತಿಫಲ ಎನ್ನಲಾಗಿದೆ.

ಆರು ವರ್ಷಗಳ ಬಳಿಕ ಈ ಕಣಿವೆ ಮಾರ್ಗಳು ತೆರೆಯಲ್ಪಡುತ್ತಿವೆ. 2020ರಲ್ಲಿ ಗಾಲ್ವನ್ ಬಳಿ ಭಾರತೀಯ ಸೈನಿಕರ ಮೇಲೆ ಚೀನೀ ಸೈನಿಕರು ಭೀಕರವಾಗಿ ಹಲ್ಲೆ ಎಸಗಿದ ಘಟನೆ ಬಳಿಕ ಭಾರತವು ಈ ಮಾರ್ಗಗಳನ್ನು ಬಂದ್ ಮಾಡಿತ್ತು. ಅದಕ್ಕೂ ಮುನ್ನ ಈ ಮಾರ್ಗಗಳಲ್ಲಿ ಎರಡೂ ದೇಶಗಳ ಗಡಿಭಾಗದ ಜನರ ನಡುವೆ ಕೊಡುಕೊಳ್ಳುವಿಕೆಯ ವ್ಯವಹಾರ ನಡೆಯುತ್ತಿತ್ತು. ಈಗ ಅದು ಪುನರಾರಂಭಗೊಳ್ಳುತ್ತದೆ.

ಎಲ್ಲಿದೆ ಲಿಪುಲೇಖ್ ಪಾಸ್?

ಉತ್ತರಾಖಂಡ್​ನ ಪಿತೋರಗಡ್ ಜಿಲ್ಲೆಯಲ್ಲಿನ ಕುಮಾವೋನ್ ಪ್ರದೇಶದಲ್ಲಿ 17,500 ಅಡಿ ಎತ್ತರದ ಹಿಮಾಲಯದಲ್ಲಿ ಲಿಪುಲೇಖ್ ಪಾಸ್ ಇದೆ. ಉತ್ತರಾಖಂಡ್, ಟಿಬೆಟ್ ಮತ್ತು ನೇಪಾಳ ಗಡಿಗಳು ಕೂಡಿಕೊಳ್ಳುವ ಸ್ಥಳ ಇದು. ಟಿಬೆಟ್​ನ ಪ್ರಮುಖ ವ್ಯಾಪಾರ ಪಟ್ಟಣಗಳಲ್ಲಿ ಒಂದಾಗಿರುವ ಟಕ್ಲಾಕೋಟ್ ಸಮೀಪದಲ್ಲಿ ಲಿಪುಲೇಖ್ ಪಾಸ್ ಬರುತ್ತದೆ.

ಇದನ್ನೂ ಓದಿ: ಸುಮ್ನೆ ಇರೋಕಾಗ್ದೆ ಭಾರತ-ಇರಾನ್ ನಡುವೆ ಬೆಂಕಿ ಹಚ್ಚಲು ಕುತಂತ್ರ ನಡೆಸಿದ ಪಾಕ್

ಭಾರತದ ಗಡಿಯೊಳಗೆ ಧರಚುಲಾದಿಂದ ಈ ಲಿಪುಲೇಖ್ ಪಾಸ್​ವರೆಗೆ 80 ಕಿಮೀ ರಸ್ತೆ ನಿರ್ಮಿಸಲಾಗಿದೆ. 2020ರಲ್ಲಿ ಇದು ಪೂರ್ಣಗೊಂಡಿತು. ರಸ್ತೆ ನಿರ್ಮಾಣಕ್ಕೆ ಮುನ್ನ ಈ ದುರ್ಗಮ ಕಣಿವೆಯಲ್ಲಿ ಗಡಿಭಾಗದ ಗ್ರಾಮಸ್ಥರು ಪಶುಗಳ ಮೂಲಕ ಸರಕುಗಳ ಸಾಗಣೆ ಮಾಡುತ್ತಿದ್ದರು.

ಟಿಬೆಟ್​ನ ಕೈಲಾಸ ಪರ್ವತ ಮತ್ತು ಮಾನಸರೋವರಕ್ಕೆ ಹೋಗಲು ಈ ಮಾರ್ಗದ ಬಳಕೆ ಮಾಡಲಾಗುತ್ತದೆ. ಮೋಟಾರು ರಸ್ತೆ ನಿರ್ಮಾಣ ಮಾಡಿರುವುದರಿಂದ ಪ್ರಯಾಣ ಅವಧಿ ಗಣನೀಯವಾಗಿ ಕಡಿಮೆ ಆಗುತ್ತದೆ.

ಲಿಪುಲೇಖ್ ಪಾಸ್​ನಲ್ಲಿ ಯಾವ್ಯಾವ ಸರಕುಗಳ ವ್ಯಾಪಾರ ನಡೆಯುತ್ತದೆ…?

ಭಾರತ, ಟಿಬೆಟ್, ನೇಪಾಳ ಗಡಿಭಾಗದಲ್ಲಿರುವ ಬುಡಕಟ್ಟು ಸಮುದಾಯದ ಜನರು ತಮ್ಮ ಸರಕುಗಳನ್ನು ಮಾರಲು ಮತ್ತು ಕೊಳ್ಳಲು ಈ ಮಾರ್ಗದ ಬಳಕೆ ಮಾಡುತ್ತಾರೆ. ಭಾರತದ ಭಾಗದ ಜನರು ಬೆಲ್ಲ, ಮಸಾಲೆ, ತಂಬಾಕು ಇತ್ಯಾದಿ ಉತ್ಪನ್ನಗಳನ್ನು ರಫ್ತು ಮಾಡುತ್ತಾರೆ. ಟಿಬೆಟ್​ನಿಂದ ಕುರಿಯ ಉಣ್ಣೆ, ಮೇಕೆ, ರೇಷ್ಮೆ ಇತ್ಯಾದಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 400 ಮಂದಿ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ!

ಈ ಪಾಸ್ ಬಳಿ ಭಾರತದ ಆಡಳಿತವು ಗುಂಜಿ ಎಂಬಲ್ಲಿ ಸುಂಕ ಕೇಂದ್ರವನ್ನು ಸ್ಥಾಪಿಸಿದೆ. ಪೊಲೀಸ್ ಚೆಕ್ ಪೋಸ್ಟ್, ಎಸ್​ಬಿಐ ಬ್ಯಾಂಕ್ ಕಚೇರಿ ಇತ್ಯಾದಿ ಸೌಲಭ್ಯಗಳನ್ನು ತೆರೆಯಲಾಗಿದೆ.

ನೇಪಾಳದ ಆಕ್ಷೇಪ ಏನು?

ಲಿಪುಲೇಖ್ ಪಾಸ್ ಮೂಲಕ ಭಾರತ ಮತ್ತು ಚೀನಾ ಮಧ್ಯೆ ವ್ಯಾಪಾರ ನಡೆಯುವುದಕ್ಕೆ ನೇಪಳ ಮೊದಲಿಂದಲೂ ತಗಾದೆ ಎತ್ತುತ್ತಿದೆ. ಲಿಪುಲೇಖ್ ಎಂಬುದು ತನಗೆ ಸೇರಿದ ಪ್ರದೇಶ ಎಂದು ನೇಪಾಳ ಹೇಳಿಕೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version