Headlines

ನೀವಂದುಕೊಂಡತಿಲ್ಲ ‘ಟಾಕ್ಸಿಕ್’, ಕಾಣುವುದೇ ಒಂದು, ಇರುವುದೇ ಒಂದು ಎಂದ ಯಶ್ – Kannada News | Yash talks about Toxic movie says it is not normal gangster movie

ಯಶ್ (Yash) ನಟನೆಯ ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಮಾರ್ಚ್ 19ರಂದೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಯುದ್ಧ ಭೀತಿಯ ಕಾರಣ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಜೂನ್ 04 ರಂದು ಅದ್ಧೂರಿಯಾಗಿ ‘ಟಾಕ್ಸಿಕ್’ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಸಿನಿಮಾದ ಪ್ರಚಾರವನ್ನು ಸಕ್ರಿಯವಾಗಿ ಯಶ್ ಇನ್ನೂ ಪ್ರಾರಂಭಿಸಿಲ್ಲವಾದರೂ, ಇದೀಗ ಲಾಸ್ ಏಂಜಲ್ಸ್​​ನಲ್ಲಿ ನಡೆದ ಸಿನಿಮಾಕಾನ್ 2026 ನಲ್ಲಿ ‘ರಾಮಾಯಣ’ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿ, ಅಲ್ಲಿಯೇ ‘ಟಾಕ್ಸಿಕ್’ ಸಿನಿಮಾ ಬಗ್ಗೆಯೂ ಅಪರೂಪದ ವಿಷಯಗಳನ್ನು ಯಶ್ ಹಂಚಿಕೊಂಡಿದ್ದಾರೆ. ಹಾಲಿವುಡ್​​ನ…

Read More

KKR ಇತಿಹಾಸದಲ್ಲೇ ಕಪ್ಪು ಚುಕ್ಕೆ: ಗೆಲುವಿಲ್ಲದೆ ದಾಖಲೆ ಬರೆದ ನೈಟ್ ರೈಡರ್ಸ್! – Kannada News | For the first time in history, KKR remain winless after the first 5 matches

IPL 2026: ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್ (KKR), 2026ರ ಸೀಸನ್‌ನಲ್ಲಿ ಎಂದೂ ಕಂಡಿರದಂತಹ ಹೀನಾಯ ಸ್ಥಿತಿಗೆ ತಲುಪಿದೆ. ಸೀಸನ್ ಆರಂಭವಾಗಿ 5 ಪಂದ್ಯಗಳು ಕಳೆದಿದ್ದರೂ, ಕೆಕೆಆರ್ ಖಾತೆಯಲ್ಲಿ ಈವರೆಗೆ ಒಂದೂ ಗೆಲುವು ದಾಖಲಾಗಿಲ್ಲ. ಇದು ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಇತಿಹಾಸದಲ್ಲೇ ಅತ್ಯಂತ ಕಳಪೆ ಆರಂಭ ಎಂಬುದು ವಿಶೇಷ. ಇತಿಹಾಸದಲ್ಲಿ ಇದೇ ಮೊದಲು! ಹಿಂದಿನ ಸೀಸನ್‌ಗಳಲ್ಲಿ ಕೆಕೆಆರ್ ಸತತ ಸೋಲುಗಳನ್ನು ಕಂಡಿದ್ದ ನಿದರ್ಶನಗಳಿವೆ (ಉದಾಹರಣೆಗೆ 2009ರಲ್ಲಿ ಸತತ 9…

Read More

ಸಮಂತಾ ಫಿಟ್ ಆಗಿರಲು ಇದೇ ಕಾರಣ; ಈ ಟಿಪ್ಸ್ ಅನುಸರಿಸಿ

ಸಮಂತಾ ಮೊದಲಿನಷ್ಟು ವೇಗವಾಗಿ ಸಿನಿಮಾ ಮಾಡುತ್ತಿಲ್ಲವಾದರೂ ಅವರ ಬಗೆಗಿನ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಅವರು ಸುಮಾರು 16 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಚಲನಚಿತ್ರಗಳ ಜೊತೆಗೆ, ಮೊದಲಿನಿಂದಲೂ ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತಿದ್ದಾರೆ. ಇತ್ತೀಚೆಗೆ, ಮೈಯೋಸಿಟಿಸ್ ಇರುವುದು ಪತ್ತೆಯಾದ ನಂತರ, ಅವರು ಫಿಟ್‌ನೆಸ್ ಅನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದಲ್ಲದೆ, ಸ್ವತಃ ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದರು. ಸಮಂತಾ ಅವರು ಪಾಡ್‌ಕ್ಯಾಸ್ಟ್‌ಗಳನ್ನು ಮಾಡುತ್ತಿದ್ದಾರೆ. ಅವರು ಇತರ ಜನರ ಪಾಡ್‌ಕ್ಯಾಸ್ಟ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಫಿಟ್‌ನೆಸ್‌ನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈಗ ಸಮಂತಾ…

Read More

Video: ಟರ್ಕಿಯ ಹೈಸ್ಕೂಲ್ ಒಳಗೆ ಗುಂಡಿನ ದಾಳಿ, 16 ಮಂದಿಗೆ ಗಂಭೀರ ಗಾಯ, ಶಾಲಾ ಅಂಗಳದಲ್ಲೇ ದಾಳಿಕೋರ ಆತ್ಮಹತ್ಯೆ – Kannada News | Gunman opens fire at high school in S. Türkiye, injures 16

ಟರ್ಕಿ, ಏಪ್ರಿಲ್ 15: ಆಗ್ನೇಯ ಟರ್ಕಿಯ ಶಾನ್ಲಿಯುರ್ಫಾ ಪ್ರಾಂತ್ಯದ ಪ್ರೌಢಶಾಲೆಯೊಂದು ಮಂಗಳವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಉದ್ದನೆಯ ಬ್ಯಾರೆಲ್ ಆಯುಧ ಹಿಡಿದು ಶಾಲೆಗೆ ನುಗ್ಗಿದ ಯುವಕನೊಬ್ಬ ನಡೆಸಿದ ಮನಬಂದಂತೆ ಗುಂಡಿನ ದಾಳಿಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 16 ಜನರು ಗಾಯಗೊಂಡಿದ್ದಾರೆ. ಸಿವೆರೆಕ್ ಜಿಲ್ಲೆಯ ಅಹ್ಮೆತ್ ಕೊಯುಂಕು ವೃತ್ತಿಪರ ಮತ್ತು ತಾಂತ್ರಿಕ ಅನಟೋಲಿಯನ್ ಪ್ರೌಢಶಾಲೆಯಲ್ಲಿ ಬೆಳಗ್ಗೆ ತರಗತಿಗಳು ಆರಂಭವಾಗುವ ಹೊತ್ತಿಗೆ ಈ ಘಟನೆ ನಡೆದಿದೆ. ಸುಮಾರು 17-18 ವರ್ಷದ ಅಪರಿಚಿತ ಯುವಕನೊಬ್ಬ ಮಾರಕಾಸ್ತ್ರದೊಂದಿಗೆ ಶಾಲಾ…

Read More

ರಣ್​​ಬೀರ್ ಕಪೂರ್ ಜೊತೆ ನಟನೆ, ಯಶ್ ಹೇಳಿದ್ದೇನು? – Kannada News | Yash talks about chemistry with Ranbir Kapoor in Ramayana movie

‘ರಾಮಾಯಣ’ (Ramayana) ಸಿನಿಮಾ ಭಾರತದ ಅತಿ ದೊಡ್ಡ ಬಜೆಟ್​​ನ ಸಿನಿಮಾ ಎನಿಸಿಕೊಂಡಿದ್ದು. ವಿಶ್ವ ಚಿತ್ರರಂಗಕ್ಕಾಗಿ ಭಾರತದಿಂದ ನಿರ್ಮಾಣ ಆಗಿರುವ ಸಿನಿಮಾ ಇದಾಗಿದೆ. ಸಿನಿಮಾವನ್ನು ಭಾರತದಲ್ಲಿ ಮಾತ್ರವಲ್ಲದೆ ಹಾಲಿವುಡ್​​ನಲ್ಲೂ ಪ್ರಚಾರ ಮಾಡಲಾಗುತ್ತಿದೆ. ಇತ್ತೀಚೆಗಷ್ಟೆ ನಟ ಯಶ್ ಅವರು ‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಲಾಸ್ ಏಂಜಲ್ಸ್​​ನಲ್ಲಿ ನಡೆದ ಸಿನಿಮಾಕಾನ್ 2026 ನಲ್ಲಿ ಭಾಗಿ ಆಗಿದ್ದರು. ಅಲ್ಲಿ ಹಾಲಿವುಡ್ ಟಿವಿ ಒಂದಕ್ಕೆ ಸಂದರ್ಶನ ನೀಡಿರುವ ನಟ ಯಶ್ ಅವರು, ‘ರಾಮಾಯಣ’ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ಅವರೊಟ್ಟಿಗೆ…

Read More

ಕರ್ನಾಟಕ ಹವಾಮಾನ ವರದಿ: ರಾಯಚೂರು, ಕೊಪ್ಪಳ ಸೇರಿದಂತೆ ಕರಾವಳಿಯಲ್ಲಿ ಹೆಚ್ಚಾಯ್ತು ಬಿಸಿಲ ಧಗೆ! 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News | Karnataka Weather Forecast: Heat wave alert all over Karnataka, Yellow alert for 9 districts

ರಾಯಚೂರು, ಕೊಪ್ಪಳ ಸೇರಿದಂತೆ ಕರಾವಳಿಯಲ್ಲಿ ಹೆಚ್ಚಾಯ್ತು ಬಿಸಿಲ ಧಗೆ! ಬೆಂಗಳೂರು, ಏಪ್ರಿಲ್ 15: ಬೆಂಗಳೂರು ಸೇರಿದಂತೆ ಇಂದು ಹಲವು ಜಿಲ್ಲೆಗಳಲ್ಲಿ ಶುಷ್ಕ  (Weather Forecast) ವಾತಾವರಣವಿರಲಿದ್ದು, ಕೆಲ ಜಿಲ್ಲೆಗಳಲ್ಲಿ ಇಂದೂ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಇಂದು ತಾಪಮಾನ ಹೆಚ್ಚಳದ ಸಾಧ್ಯತೆಯಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದೆ. ಇನ್ನುಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆಯ ಜೊತೆಗೆ ಕೆಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. ಒಟ್ಟಾರೆ 9 ಜಿಲ್ಲೆಗಳಿಗೆ…

Read More

IPL 2026: SRH ತಂಡಕ್ಕೆ ಎಡಗೈ ವೇಗಿ ಎಂಟ್ರಿ..!

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯ ಮಧ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಬೌಲಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಈ ಬದಲಾವಣೆಯೊಂದಿಗೆ ಎಸ್​ಆರ್​ಹೆಚ್ ತಂಡಕ್ಕೆ ಲಂಕಾ ವೇಗಿ ಎಂಟ್ರಿ ಕೊಟ್ಟಿದ್ದಾರೆ. ಮಾರ್ಚ್ 28 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಇಂಗ್ಲೆಂಡ್ ಆಟಗಾರ ಬ್ರೈಡನ್ ಕಾರ್ಸ್‌ ಅವರ ಕೈಗೆ ಬಲವಾದ ಗಾಯವಾಗಿತ್ತು. ಈ ಗಾಯದ ಕಾರಣ ಇದೀಗ ಕಾರ್ಸ್ ಇದೀಗ ಐಪಿಎಲ್​ನಿಂದ ಹೊರಗುಳಿದಿದ್ದಾರೆ….

Read More

Karnataka SSLC Results: ಎಸ್‌ಎಸ್‌ಎಲ್‌ಸಿ ರಿಸಲ್ಟ್ ಇಂದು ಬರುತ್ತಾ? ವಿದ್ಯಾರ್ಥಿಗಳಿಗೆ KSEAB ಹೇಳಿದ್ದೇನು? – Kannada News | Karnataka SSLC Results 2026: Official Update and Expected Release Date

ಬೆಂಗಳೂರು, ಏ.15: ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ. ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಮಂಡಳಿ ಮನವಿ ಮಾಡಿದೆ. ಯಾವುದೇ ಕಾರಣಕ್ಕೂ ಇಂದು ಫಲಿತಾಂಶ ಪ್ರಕಟ ಮಾಡಲ್ಲ ಎಂದು ಮಂಡಳಿ ಹೇಳಿದೆ. ಇನ್ನು ಫಲಿತಾಂಶ ತಯಾರಿಗಳು ನಡೆಯುತ್ತಿದೆ ಎಂದು ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಿಬಿಡುತ್ತಿರುವ ಸುಳ್ಳು ಸುದ್ದಿಗಳಿಗೆ…

Read More

Horoscope Today: ಇಂದು ಈ ರಾಶಿಯವರಿಗೆ ಅನಾರೋಗ್ಯ ಕಾಡಬಹುದು!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 15, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಪೂರ್ವಭಾದ್ರ ನಕ್ಷತ್ರ, ಬ್ರಹ್ಮಯೋಗ ಮತ್ತು ಗರಜಕರಣಗಳಿಂದ ಕೂಡಿದ ಈ ದಿನದ ರಾಹುಕಾಲ ಮಧ್ಯಾಹ್ನ 12:29 ರಿಂದ 1:52ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ, ಶುಭಕಾಲ ಬೆಳಗ್ಗೆ 10:46 ರಿಂದ 12:19ರವರೆಗೆ ಇದೆ ಎಂದು…

Read More

ದೆಹಲಿಯ ಗೋದಾಮಿನಲ್ಲಿ ಅಗ್ನಿ ದುರಂತ, ಪಕ್ಕದ ಗುಡಿಸಲುಗಳಿಗೆ ತಗುಲಿದ ಬೆಂಕಿ, ಒಂದು ಮಗು ಸೇರಿ ಮೂವರು ಸಜೀವದಹನ – Kannada News | Blaze Turns Deadly in Rohini: Three Killed as Fire Sweeps Through Shanties

ನವದೆಹಲಿ, ಏಪ್ರಿಲ್ 15: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಅಗ್ನಿ ದುರಂತ(Fire Accident) ಸಂಭವಿಸಿದೆ. ಮಂಗೇರಾಮ್ ಪಾರ್ಕ್‌ನಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ, ಅಲ್ಲಿಯೇ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಆಹುತಿ ಪಡೆದಿದೆ. ಈ ಘೋರ ಘಟನೆಯಲ್ಲಿ ಮಗುವೂ ಸೇರಿದಂತೆ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದಾರೆ. ಬುದ್ಧ ವಿಹಾರ್ ಬಳಿಯ ಸುಮಾರು 400 ಚದರ ಗಜಗಳಷ್ಟು ವಿಸ್ತೀರ್ಣದ ಜಾಗದಲ್ಲಿ ಈ ಅನಾಹುತ ಸಂಭವಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿಡಲಾಗಿತ್ತು ಮತ್ತು ಅದರ ಪಕ್ಕದಲ್ಲೇ…

Read More