ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಮರುನಿಗದಿ! ನೋಂದಣಿಗೆ ಏಪ್ರಿಲ್ 17ರವರೆಗೆ ಅವಕಾಶ – Kannada News | 2nd PUC Exam 2 2026 Dates Rescheduled: Register by April 17th!

ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಮರುನಿಗದಿ! ನೋಂದಣಿಗೆ ಏಪ್ರಿಲ್ 17ರವರೆಗೆ ಅವಕಾಶ
Image Credit source: The Hindu

ಬೆಂಗಳೂರು, ಏಪ್ರಿಲ್ 15: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ (2nd PUC) ಮಹತ್ವದ ಅವಕಾಶವನ್ನು ಕಲ್ಪಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿರುವಂತೆ ಪರೀಕ್ಷೆ-2ಕ್ಕೆ ನೋಂದಣಿ ಪ್ರಕ್ರಿಯೆ ಏಪ್ರಿಲ್ 9ರಿಂದ ಪ್ರಾರಂಭವಾಗಿ ಏಪ್ರಿಲ್ 17ರವರೆಗೆ ನಡೆಯಲಿದೆ.

ನೋಂದಾಯಿಸಿಕೊಳ್ಳುವುದು ಎಲ್ಲಿ?

2026ರಲ್ಲಿ ರೆಗ್ಯೂಲರ್ ಫ್ರೆಶ್ (Regular Fresh) ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ (Not Completed) ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಬಹುದು. ವಿದ್ಯಾರ್ಥಿಗಳು ನೀಡಿರುವ ಆನ್‌ಲೈನ್ ಲಿಂಕ್ (http://tinyurl.com/mvp9k6es) ಮೂಲಕ ಅಥವಾ ತಮ್ಮ ಸಂಬಂಧಿತ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಿಯು ಎಕ್ಸಾಮ್ ಪೋರ್ಟಲ್​ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದಲ್ಲದೆ, ಮೊದಲನೇ ಪರೀಕ್ಷೆಯಲ್ಲಿ ಗೈರುಹಾಜರಾಗಿದ್ದ ಅಥವಾ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ತಮ್ಮ ಲಾಗಿನ್ ಮೂಲಕ ನೇರವಾಗಿ ನೋಂದಾಯಿಸಲು ಅವಕಾಶ ನೀಡಲಾಗಿದೆ. ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ಮಂಡಳಿ ಸೂಚಿಸಿದೆ.

ಯಾವಾಗ ನಡೆಯಲಿದೆ ಪರೀಕ್ಷೆ?

ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಪ್ರವೇಶಪತ್ರಗಳನ್ನು ನಿಗದಿತ ಸಮಯದಲ್ಲಿ ಸಂಬಂಧಿತ ಕಾಲೇಜುಗಳ ಪ್ರಾಂಶುಪಾಲರ ಲಾಗಿನ್ ಮೂಲಕ ಲಭ್ಯಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಪರೀಕ್ಷೆಯ ವೇಳಾಪಟ್ಟಿಯನ್ನು ಮರುನಿಗದಿ ಮಾಡಲಾಗಿದ್ದು, ಪರೀಕ್ಷೆಗಳು 30 ಏಪ್ರಿಲ್ 2026ರಿಂದ ಆರಂಭವಾಗಲಿವೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಪ್ರಶ್ನೆ ಕೋಶ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉಪಯೋಗಿಸಿಕೊಂಡು ಶಾಂತ ಮನಸ್ಥಿತಿಯಲ್ಲಿ ಸಿದ್ಧತೆ ನಡೆಸಿ ಪರೀಕ್ಷೆಗೆ ಹಾಜರಾಗುವಂತೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Eka Devopasana: ಏಕದೇವೋಪಾಸನೆ ಎಂದರೇನು? ಇದರ ಮಹತ್ವ ಇಲ್ಲಿ ತಿಳಿಯಿರಿ – Kannada News | Eka Devopasana: The Spiritual Path to a Meaningful Life

ಏಕದೇವೋಪಾಸನೆಯ ಆಳವಾದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳ ಆರಾಧನೆಗೆ ಅವಕಾಶವಿದ್ದರೂ, ಒಬ್ಬ ದೇವರಲ್ಲಿ ದೃಢವಾದ ಭಕ್ತಿಯನ್ನು ಕೇಂದ್ರೀಕರಿಸುವುದು ಜೀವನಕ್ಕೆ ಮಹತ್ತರವಾದ ಸಾರ್ಥಕತೆಯನ್ನು ತರುತ್ತದೆ. ವ್ಯಾಪಾರ, ವ್ಯವಹಾರ, ಶಾಸ್ತ್ರ ಚಿಕಿತ್ಸೆ ಮುಂತಾದ ವಿವಿಧ ಕ್ಷೇತ್ರಗಳಿಗೆ ಆಯಾ ದೇವರುಗಳನ್ನು ಪೂಜಿಸುವುದು ರೂಢಿಯಲ್ಲಿದ್ದರೂ, ಏಕದೇವೋಪಾಸನೆಯು ಸಮಗ್ರ ಶುಭವನ್ನು ನೀಡುತ್ತದೆ.

“ಸರ್ವದೇವ ನಮಸ್ಕಾರಾಃ ಕೇಶವಂ ಪ್ರತಿಗಚ್ಛತಿ” ಎಂಬ ಮಾತಿನಂತೆ, ಎಲ್ಲಾ ದೇವರುಗಳಿಗೆ ನಮಸ್ಕರಿಸಿದರೂ, ಒಬ್ಬ ದೇವರನ್ನು ಹೃದಯದಲ್ಲಿ ಶಾಶ್ವತವಾಗಿ ಸ್ಥಾಪಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಇದು ನಮ್ಮ ಆಧ್ಯಾತ್ಮಿಕ ಪಯಣದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಏಕದೇವೋಪಾಸನೆಯು ಏಕಂ ಸತ್ ವಿಪ್ರಬಹುದ ವದಂತಿ ಎಂಬ ಮಾತಿಗೆ ಸಮಾನವಾಗಿದ್ದು, ಸತ್ಯ ಒಂದೇ, ಆದರೆ ಅದನ್ನು ಜ್ಞಾನಿಗಳು ಅನೇಕ ಹೆಸರುಗಳಿಂದ ಕರೆಯುತ್ತಾರೆ ಎಂಬುದನ್ನು ಸೂಚಿಸುತ್ತದೆ. ಇದರಿಂದ ನಮ್ಮಲ್ಲಿ ಏಕಾಗ್ರತೆ, ನಂಬಿಕೆ ವೃದ್ಧಿಯಾಗಿ, ಬರುವ ಕಂಟಕಗಳು ಹಾಗೂ ಕರ್ಮಗಳು ಸರಿಪಡಿಸಲು ದಾರಿ ಸಿಗುತ್ತದೆ.

ಯಾವುದೇ ದೇವರನ್ನು – ಗಣಪತಿ, ಸುಬ್ರಮಣ್ಯ, ಶಿವ, ವಿಷ್ಣು, ವೆಂಕಟೇಶ್ವರ, ದತ್ತಾತ್ರೇಯ ಇರಬಹುದು – ನಿಮ್ಮ ಕುಲದೇವರು ಅಥವಾ ಇಷ್ಟದೇವರನ್ನಾಗಿ ಆಯ್ಕೆ ಮಾಡಿಕೊಂಡು, ಅವರ ನಾಮಸ್ಮರಣೆ, ದರ್ಶನ, ಪೂಜೆಯನ್ನು ನಿರಂತರವಾಗಿ ಮತ್ತು ಯಥಾವಿಧಿಯಾಗಿ ಆಚರಿಸಬೇಕು. “ಯದ್ಭಾವಂ ತದ್ಭವತಿ” ಎಂಬ ಮಾತಿನಂತೆ, ಒಂದೇ ದೇವರ ಜಪ ಮತ್ತು ಪೂಜೆಯನ್ನು ಹೆಚ್ಚಾಗಿ ಮಾಡುವುದು ಉತ್ತಮ. ಎಲ್ಲಾ ದೇವರುಗಳ ದರ್ಶನ, ತೀರ್ಥ ಸೇವನೆ ಮಾಡಬಹುದಾದರೂ, ಒಬ್ಬ ದೇವರಲ್ಲಿ ತಾಯಿ ಮಗುವಿನ ಸಂಬಂಧದಂತೆ ದೃಢ ಭಕ್ತಿ ಇಡುವುದು ಅಗತ್ಯ. ಇದು ರಾಜಕೀಯ ಪಕ್ಷಗಳ ಬದಲಾವಣೆಯಂತೆ ಒಂದು ವರ್ಷ ಒಂದು ದೇವರು, ಇನ್ನೊಂದು ವರ್ಷ ಇನ್ನೊಂದು ದೇವರನ್ನು ಪೂಜಿಸುವುದಲ್ಲ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ದೈವದೂಷಣೆ, ದೈವಾಪರಾಧಗಳಿಂದ ದೂರವಿರಬೇಕು. ನಮ್ಮ ಕರ್ಮಫಲಗಳು ನಮ್ಮ ಜೀವನವನ್ನು ರೂಪಿಸುತ್ತವೆ. ಇಂದಿನ ದಾನ, ತ್ಯಾಗಗಳು ತಕ್ಷಣ ಫಲ ನೀಡದಿದ್ದರೂ, ಮುಂದಕ್ಕೆ ಅವು ನಮಗೆ ಬೆಂಬಲ ನೀಡುತ್ತವೆ ಮತ್ತು ನಮ್ಮ ಕರ್ಮಫಲಗಳನ್ನು ಕಡಿಮೆ ಮಾಡುತ್ತವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು, “ಅನನ್ಯಶ್ಚಿಂತಯಂತೋ ಮಾಂ” ಎಂದು ಹೇಳುತ್ತಾ, ತನ್ನನ್ನು ನಂಬಿದವರ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾನೆ. ಒಂದೇ ಮಂತ್ರವನ್ನು ಸತತವಾಗಿ ಜಪಿಸುವುದರಿಂದ, ಆ ಮಂತ್ರದ ಅಧಿದೇವತೆ ಎಲ್ಲವನ್ನು ಬೆಂಬಲಿಸುತ್ತದೆ. ಓಂ ನಮಃಶಿವಾಯ, ಓಂ ಮಹಾಲಕ್ಷ್ಮಿ ನಮಃ, ಓಂ ನಮೋ ವೆಂಕಟೇಶಾಯ ಮುಂತಾದ ಮಂತ್ರಗಳ ನಿರಂತರ ಜಪದಿಂದ ಆ ದೇವಿಯ ಕೃಪೆಗೆ ಪಾತ್ರರಾಗಬಹುದು.

ಪರಮಹಂಸರ ಮಾತು “ಆತ್ಮಾನೋಂ ಮೋಕ್ಷಾರ್ಥಂ ಜಗದ್ದಿತಾಯಚ” ಎಂಬುದನ್ನು ನೆನಪಿಸಿಕೊಳ್ಳಬೇಕು. ಹತ್ತಾರು ಗುಂಡಿಗಳನ್ನು ಒಂದೇ ಜಾಗದಲ್ಲಿ ತೋಡಿದರೆ ನೀರು ಸಿಗುವುದಿಲ್ಲ. ಆದರೆ ಒಂದೇ ಗುಂಡಿಯನ್ನು ಆಳವಾಗಿ ತೋಡಿದರೆ ನೀರು ಸಿಕ್ಕೇ ಸಿಗುತ್ತದೆ. ಅದೇ ರೀತಿ, ಒಂದೇ ದೋಣಿಯಲ್ಲಿ ಪ್ರಯಾಣಿಸಿದಂತೆ, ಒಬ್ಬ ದೇವರಲ್ಲಿ ನಿಷ್ಠೆಯಿಂದ ಭಕ್ತಿ ಇಡುವುದರಿಂದ ಮುಕ್ತಿ ಪಡೆಯಲು ಸಾಧ್ಯ. ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತನಾದ ಭಗವಂತ ಯಾರಿಗೂ ಅನ್ಯಾಯ ಮಾಡುವುದಿಲ್ಲ. ನಿಮಗೆ ಅನುಕೂಲವಾದ ದೇವರ ಸ್ಮರಣೆಯನ್ನು ಶಾಶ್ವತವಾಗಿ ಮಾಡಿಕೊಂಡು ಹೋಗಿ, ಒಳಿತಾಗುತ್ತದೆ ಮತ್ತು ಮುಕ್ತಿ ಸಿಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್​ವೆಲ್ – Kannada News | Glenn Maxwell completes 11,000 Runs in T20s

ಪಾಕಿಸ್ತಾನ್ ಸೂಪರ್ ಲೀಗ್​ನ 21ನೇ ಪಂದ್ಯದಲ್ಲಿ 21 ರನ್​ ಸಿಡಿಸುವ ಮೂಲಕ ಗ್ಲೆನ್ ಮ್ಯಾಕ್ಸ್​​ವೆಲ್ (Glenn Maxwell) ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ದಾಖಲೆ ಬರೆದಿದ್ದಾರೆ. ಈ ದಾಖಲೆಯೊಂದಿಗೆ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

Source link

ಐಪಿಎಲ್ ಪಂದ್ಯ ನೋಡೋದು ಬಿಟ್ಟು ಸ್ಟೇಡಿಯಂನಲ್ಲಿ ರೀಲ್ಸ್ ಮಾಡಲು ಹೋಗಿ 70 ಸಾವಿರ ರೂ. ಬೆಲೆಯ ಉಂಗುರ ಕಳೆದುಕೊಂಡ ಮಹಿಳೆ – Kannada News | Reel Gone Wrong: Woman Loses Rs70K Ring While Filming at IPL Stadium

ಪಂಜಾಬ್, ಏಪ್ರಿಲ್ 15: ಹವ್ಯಾಸ ಹಿತವಾಗಿದ್ದರೆ ಚೆಂದ, ಅದು ಮಿತಿ ಮೀರಿದರೆ ವಿಷಾದವೇ ಗತಿ ಎಂಬ ಮಾತಿಗೆ ಪಂಜಾಬ್‌ನ ಐಪಿಎಲ್ ಮೈದಾನ ಸಾಕ್ಷಿಯಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ರೋಮಾಂಚಕ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಮಾಡಬಾರದ ಸಾಹಸಕ್ಕೆ ಕೈ ಹಾಕಿ ಈಗ ಬೆಲೆಬಾಳುವ ಉಂಗುರ ಕಳೆದುಕೊಂಡು ಕಂಗಾಲಾಗಿದ್ದಾರೆ.

ಏನಿದು ಘಟನೆ?
ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರಿಗೆ ಪಂದ್ಯಕ್ಕಿಂತ ‘ರೀಲ್ಸ್’ ಮಾಡುವುದರಲ್ಲಿ ನಿರತರಾಗಿದ್ದರು. ತಮ್ಮ ಬೆರಳಿನಲ್ಲಿದ್ದ 70,000 ರೂಪಾಯಿ ಮೌಲ್ಯದ ಉಂಗುರವನ್ನು ಎಸೆದು ವಿಡಿಯೋ ಮಾಡಲು ಮುಂದಾದರು.

ವಿಡಿಯೋದಲ್ಲಿ ಉಂಗುರವು ಗಾಳಿಯಲ್ಲಿ ತೇಲುವಂತೆ ಸೆರೆಹಿಡಿಯುವುದು ಅವರ ಉದ್ದೇಶವಾಗಿತ್ತು. ಆದರೆ ಕ್ಯಾಮೆರಾ ಆಂಗಲ್ ಸೆಟ್ ಮಾಡುವ ಭರದಲ್ಲಿ, ಉಂಗುರ ಕೈಜಾರಿತ್ತು. ಮಹಿಳೆಯ ಕೈಗೆ ಸಿಗದೆ ಸ್ಟೇಡಿಯಂನ ಮೆಟ್ಟಿಲುಗಳ ನಡುವೆ ಬಿದ್ದಿತ್ತು. ಒಂದು ಕ್ಷಣ ಏನಾಯಿತು ಎಂದು ತಿಳಿಯದೆ ಮಹಿಳೆ ದಿಗ್ಭ್ರಮೆಗೊಂಡು ಕುಳಿತ ದೃಶ್ಯ ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.

ಮಧುಪ್ರಿಯಾ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಉಂಗುರ ಹುಡುಕಿಕೊಡುವಂತೆ ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ. ಆದರೆ ಸಹಾಯ ಮಾಡುವ ಬದಲು ಜನರು ಮಹಿಳೆಯ ನಡೆಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಅವರಿಗೆ ಆ ಉಂಗುರ ಅಷ್ಟು ಇಷ್ಟವಿದ್ದಿದ್ದರೆ ನಕಲಿ ಉಂಗುರ ಬಳಸಿ ರೀಲ್ ಮಾಡಬೇಕಿತ್ತು ಎಂದು ಒಬ್ಬರು ಹೇಳಿದ್ದಾರೆ. ಕಳೆದುಹೋದ ಉಂಗುರ ಎಷ್ಟೇ ಹುಡುಕಿದರೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ, ಐಪಿಎಲ್‌ನ ಸಿಕ್ಸರ್-ಬೌಂಡರಿಗಳಿಗಿಂತ ಈ ಮಹಿಳೆಯ ‘ಉಂಗುರ ಪುರಾಣ’ವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಸಿಬಿಸಿ ಚರ್ಚೆಯ ವಿಷಯವಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಾವನ ಜೊತೆ ಸೇರಿ ಧ್ರುವ್ ರಾಠಿಗೆ ಟಾಂಗ್ ಕೊಟ್ಟ ರಣ್ವೀರ್ ಸಿಂಗ್ – Kannada News | Ranveer Singh’s new advertisement with Prakash Padukone took dig at Dhruv Rathee

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಭರ್ಜರಿ ಹಿಟ್ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿದೆ. ಆದರೆ ಕೆಲವರು ಈ ಸಿನಿಮಾವನ್ನು ಪ್ರಪೊಗಾಂಡ ಸಿನಿಮಾ ಎಂದು. ಒಂದು ರಾಜಕೀಯ ಪಕ್ಷಕ್ಕೆ ಸಹಾಯ ಮಾಡಲೆಂದು ನಿರ್ಮಿಸಲಾದ ಸಿನಿಮಾ ಎಂದು ಆರೋಪಿಸಿದ್ದಾರೆ. ಸಿನಿಮಾದಲ್ಲಿರುವ ಕೆಲ ತಪ್ಪುಗಳನ್ನು ಎತ್ತಿ ತೋರಿಸಿ ಟೀಕಿಸಿದ್ದಾರೆ. ವಿಶೇಷವಾಗಿ ಪ್ರಮುಖ ಯೂಟ್ಯೂಬರ್ ಧ್ರುವ್ ರಾಠಿ ಈ ಸಿನಿಮಾವನ್ನು ಟೀಕೆ ಮಾಡಿದ್ದು, ಇದೀಗ ಪರೋಕ್ಷವಾಗಿ ನಟ ರಣ್ವೀರ್ ಸಿಂಗ್, ‘ಧ್ರುವ್ ರಾಠಿ’ಗೆ ಟಾಂಗ್ ನೀಡಿದ್ದಾರೆ.

ಧ್ರುವ್ ರಾಠಿ ತಮ್ಮ ವಿಡಿಯೋ ಒಂದರಲ್ಲಿ ‘ಧುರಂಧರ್’ ಅನ್ನು ಟೀಕೆ ಮಾಡುತ್ತಾ ಸಿನಿಮಾವನ್ನು ‘ಭವಂಧರ್’ ಎಂದು ಕರೆದಿದ್ದರು. ಇದೀಗ ರಣ್ವೀರ್ ಸಿಂಗ್ ಅವರ ಹೊಸ ಜಾಹೀರಾತೊಂದು ಬಿಡುಗಡೆ ಆಗಿದ್ದು, ಜಾಹೀರಾತಿನಲ್ಲಿ ನಟ ರಣ್ವೀರ್ ಸಿಂಗ್ ಅವರು ಇದನ್ನೇ ಇರಿಸಿಕೊಂಡು ಧ್ರುವ್ ರಾಠಿಗೆ ಟಾಂಗ್ ನೀಡಿದ್ದಾರೆ. ಇದೀಗ ಆ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಟ್ರೆಂಡ್ ಸಹ ಆಗುತ್ತಿದೆ.

ನಟ ರಣವೀರ್ ಸಿಂಗ್ ತಮ್ಮ ಮಾವ, ಖ್ಯಾತ ಬ್ಯಾಡ್​​ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರೊಂದಿಗೆ ನಟಿಸಿರುವ ಹೊಸ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸ್ವದೇಶಿ ಹಣ ಪಾವತಿ ಸೇವಾ ಆ್ಯಪ್ (RuPay) ಹೊಸ ಜಾಹೀರಾತಿನಲ್ಲಿ ರಣವೀರ್ ಸಿಂಗ್ ಮತ್ತು ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್ ಹಾಗೂ ದೀಪಿಕಾ ಪಡುಕೋಣೆಯ ತಂದೆ ಪ್ರಕಾಶ್ ಪಡುಕೋಣೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ರಣವೀರ್ ಅವರು ಪ್ರಕಾಶ್ ಪಡುಕೋಣೆ ಅವರನ್ನು ‘ಪಪ್ಪಾ’ ಎಂದು ಕರೆಯುವುದು ಮತ್ತು ಬ್ಯಾಡ್ಮಿಂಟನ್ ಆಡುವ ದೃಶ್ಯಗಳು ಅಭಿಮಾನಿಗಳ ಮನ ಗೆದ್ದಿವೆ.

ಇದನ್ನೂ ಓದಿ:ಹೊಟ್ಟೆಗೆ ಕ್ಲಿಪ್ ಹಾಕಿಕೊಂಡು ನಟನೆ: ರಣ್ವೀರ್ ಸಿಂಗ್ ಡೆಡಿಕೇಷನ್ ಎಂಥಹದ್ದು ಗೊತ್ತೆ?

ಅದೇ ಜಾಹೀರಾತಿನ ಹಿನ್ನೆಲೆಯಲ್ಲಿ ಕಾಣಿಸುವ ಒಂದು ಪೋಸ್ಟರ್ ಈಗ ಚರ್ಚೆಗೆ ಕಾರಣವಾಗಿದೆ. ಆ ಪೋಸ್ಟರ್‌ನಲ್ಲಿ ‘ಭವಂದರ್: ದಿ ಟೊರ್ನಾಡೋ’ ಎಂಬ ಹೆಸರಿನ ಸಿನಿಮಾದ ಪೋಸ್ಟರ್ ಇದೆ. ಧ್ರುವ್ ರಾಠಿ, ಈ ಹಿಂದೆ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸರಣಿಯನ್ನು ಟೀಕಿಸಿದ್ದರು. ಆ ಸಿನಿಮಾಗಳನ್ನು ರಾಜಕೀಯ ಪ್ರೇರಿತ ಎಂದು ಕರೆದಿದ್ದ ಅವರು, ತಮ್ಮ ವಿಡಿಯೋವೊಂದರಲ್ಲಿ ‘ಆಪರೇಷನ್ ಭವಂದರ್’ ಎಂಬ ಕಾಲ್ಪನಿಕ ಚಿತ್ರದ ಹೆಸರನ್ನು ಉಲ್ಲೇಖಿಸಿ ಟೀಕೆ ಮಾಡಿದ್ದರು. ಈಗ ಜಾಹೀರಾತಿನಲ್ಲಿ ಅದೇ ಹೆಸರಿನ ಪೋಸ್ಟರ್ ಬಳಸಿದ್ದು, ಧ್ರುವ್ ರಾಠಿಗೆ ಟಾಂಗ್ ನೀಡಲೆಂದೇ ಹೀಗೆ ಮಾಡಲಾಗಿರುವುದು ಸ್ಪಷ್ಟ.

ಟೀಕೆಗಳ ನಡುವೆಯೂ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಭಾರತೀಯ ಚಿತ್ರರಂಗದ ಎಲ್ಲ ದಾಖಲೆಗಳನ್ನು ಅಳಿಸಿಹಾಕಿದೆ. ಈ ಚಿತ್ರ ಸರಣಿಯು ವಿಶ್ವಾದ್ಯಂತ ಸುಮಾರು 1700 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ. ಭಾರತದ ಅತಿಹೆಚ್ಚು ಮೊತ್ತ ಗಳಿಸಿದ ಸಿನಿಮಾಗಳಾದ ‘ಪುಷ್ಪ 2’, ‘ಬಾಹುಬಲಿ 2’ ಸಿನಿಮಾಗಳ ದಾಖಲೆಯನ್ನು ಅಳಿಸುವ ಹೊಸ್ತಿಲಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಗೆದ್ದರೂ ಚಿಂತೆಗೀಡಾದ ಚೆನ್ನೈ ಸೂಪರ್ ಕಿಂಗ್ಸ್​ – Kannada News | 8 drop catches by CSK so far joint most with SRH in this season

IPL 2026: ಕ್ರಿಕೆಟ್​ ಅಂಗಳದಲ್ಲಿ ‘ಕ್ಯಾಚಸ್ ವಿನ್ ಮ್ಯಾಚಸ್’ ಎಂಬ ಮಾತೊಂದಿದೆ. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಈ ಮಾತು ಮರೀಚಿಕೆಯಾದಂತಿದೆ.  ಚುರುಕಾದ ಫೀಲ್ಡಿಂಗ್‌ಗೆ ಹೆಸರಾಗಿದ್ದ ಧೋನಿ ಪಡೆಯ ಉತ್ತರಾಧಿಕಾರಿಗಳು, ಈ ಬಾರಿ ಮೈದಾನದಲ್ಲಿ ಕ್ಯಾಚ್‌ಗಳನ್ನು ಕೈಬಿಡುವುದರಲ್ಲೇ ದಾಖಲೆ ಬರೆಯುವ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.

ಅಂಕಿ-ಅಂಶಗಳ ಆಘಾತ:

ಪ್ರಸಕ್ತ ಸೀಸನ್‌ನಲ್ಲಿ ಇದುವರೆಗೆ ಸಿಎಸ್‌ಕೆ ಆಟಗಾರರು ಬರೋಬ್ಬರಿ 8 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಅತಿ ಹೆಚ್ಚು ಕ್ಯಾಚ್‌ಗಳನ್ನು ಬಿಟ್ಟ ತಂಡಗಳ ಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಜೊತೆಗೆ ಸಿಎಸ್‌ಕೆ ಜಂಟಿಯಾಗಿ ಅಗ್ರಸ್ಥಾನದಲ್ಲಿದೆ.

ಅಷ್ಟೇ ಅಲ್ಲದೆ ಕೇವಲ 68% ರಷ್ಟು ಕ್ಯಾಚಿಂಗ್ ದಕ್ಷತೆಯನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯ ಐಪಿಎಲ್​ನಲ್ಲಿ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡುತ್ತಿರುವ ತಂಡವಾಗಿ ಗುರುತಿಸಿಕೊಂಡಿದೆ.

ಪ್ರಮುಖ ಆಟಗಾರರಿಂದಲೇ ತಪ್ಪು:

ಮಂಗಳವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ನಡೆದ ಪಂದ್ಯದಲ್ಲಿ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರೇ ಸುನಿಲ್ ನರೈನ್ ನೀಡಿದ ಸುಲಭ ಕ್ಯಾಚ್ ಕೈಬಿಟ್ಟಿದ್ದರು. ಇವರ ಜೊತೆಗೆ ಡೆವಾಲ್ಡ್ ಬ್ರೆವಿಸ್ ಮತ್ತು ಸರ್ಫರಾಝ್ ಖಾನ್ ಅವರಂತಹ ಯುವ ಆಟಗಾರರು ಕೂಡ ಫೀಲ್ಡಿಂಗ್‌ನಲ್ಲಿ ಎಡವುತ್ತಿದ್ದಾರೆ.

ಪಂದ್ಯದ ಮೇಲೆ ಪರಿಣಾಮ:

ಕಳೆದ ಐದು ಮ್ಯಾಚ್​ಗಳ ಮೂಲಕ ಸಿಎಸ್​ಕೆ ಆಟಗಾರರು 8 ಕ್ಯಾಚ್​ಗಳನ್ನು ಕೈ ಬಿಟ್ಟಿರುವುದು ಇದೀಗ ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಪ್ರತಿ ಪಂದ್ಯದಲ್ಲೂ ಕ್ಯಾಚ್‌ಗಳನ್ನು ಬಿಡುವ ಮೂಲಕ ಎದುರಾಳಿಗಳಿಗೆ ಜೀವದಾನ ನೀಡುತ್ತಿರುವುದು ತಂಡದ ಬೌಲರ್‌ಗಳ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತಿದೆ.

ಇದೇ ವೇಳೆ ರಾಜಸ್ಥಾನ್ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ವಿಶೇಷ ಎಂದರೆ ಈ ಎರಡು ತಂಡಗಳೇ ಇದೀಗ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದೆ.

8ನೇ ಸ್ಥಾನದಲ್ಲಿ ಸಿಎಸ್​ಕೆ:

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಕ್ಯಾಚ್ ಚೆಲ್ಲುತ್ತಿರುವುದು ಕೂಡ ಪಂದ್ಯದ ಸೋಲಿಗೆ ಕಾರಣ. ಇದರ ಪರಿಣಾಮ ಕಳೆದ ಐದು ಮ್ಯಾಚ್​ಗಳಲ್ಲಿ ಮೂರಲ್ಲಿ ಸೋತಿದೆ. ಈ ಸೋಲು-ಗೆಲುವುಗಳೊಂದಿಗೆ ಸಿಎಸ್​ಕೆ ತಂಡವು ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: RCB vs LSG ಪಂದ್ಯಕ್ಕೆ 4 ಆಟಗಾರರು ಅಲಭ್ಯ..!

ಇದೀಗ ಟೂರ್ನಿಯು ಮೊದಲಾರ್ಧದ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ದ್ವಿತೀಯಾರ್ಧವು ಪಂದ್ಯಗಳು ನಿರ್ಣಾಯಕವಾಗಿರುವುದರಿಂದ ಸಿಎಸ್‌ಕೆ ತನ್ನ ಫೀಲ್ಡಿಂಗ್ ವಿಭಾಗದಲ್ಲಿ ದೊಡ್ಡ ಸುಧಾರಣೆ ಮಾಡಿಕೊಳ್ಳಬೇಕಿದೆ. ಅನುಭವಿ ಆಟಗಾರರಿಂದ ಕೂಡಿದ ತಂಡವು ಈ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ, ಮುಂದಿನ ಪಂದ್ಯಗಳಲ್ಲಿ ಭಾರೀ ಬೆಲೆ ತೆರಬೇಕಾಗಿ ಬರಬಹುದು.

Published On – 10:03 am, Wed, 15 April 26

Source link

‘ನನಗೆ ಬದುಕಲು ದಾರಿ ಇಲ್ಲದಿದ್ದರೆ ದಯಾಮರಣ ನೀಡಿ’ಎಂದಿದ್ದ ಮಹಿಳೆಗೆ ಸಿಕ್ಕಿತು ಗೃಹ ಸಚಿವರ ಆಸರೆ – Kannada News | Shira Woman Rabia Gets Hope: Dr. Parameshwara Assures Housing, Rent and Ration Support

ತುಮಕೂರು, ಏ.15 : ವಸತಿಗಾಗಿ ಆಗ್ರಹಿಸಿ ಸಚಿವರ ಎದುರೇ ದಯಾಮರಣ ಬೇಡಿದ್ದ ಶಿರಾ ತಾಲೂಕಿನ ಮಹಿಳೆ ರಾಬಿಯಾ ಅವರ ಕಣ್ಣೀರಿಗೆ ಕೊನೆಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಂದಿಸಿದ್ದಾರೆ. ಮಹಿಳೆಯ ಮುಂದಿನ ಆರು ತಿಂಗಳ ಬಾಡಿಗೆ ಮತ್ತು ರೇಷನ್ ವೆಚ್ಚವನ್ನು ಭರಿಸುವುದರ ಜೊತೆಗೆ ಮನೆ ಕೊಡಿಸುವ ಭರವಸೆಯನ್ನ ನೀಡಿದ್ದಾರೆ.

ಕಳೆದ ಏಪ್ರಿಲ್ 8ರಂದು ತುಮಕೂರು ನಗರದ ಗ್ರಂಥಾಲಯ ಸಂಕೀರ್ಣದಲ್ಲಿ ನಡೆದಿದ್ದ ಜನಸಂಪರ್ಕ ಸಭೆಯಲ್ಲಿ ರಾಬಿಯಾ ಎಂಬ ಮಹಿಳೆ ವೇದಿಕೆ ಮೇಲೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದರು. “ಎರಡು ವರ್ಷಗಳ ಹಿಂದೆಯೇ ಭರವಸೆ ನೀಡಿದ್ದರೂ ನನಗೆ ಮನೆ ನೀಡಿಲ್ಲ, ನನಗೆ ಬದುಕಲು ದಾರಿ ಇಲ್ಲದಿದ್ದರೆ ದಯಾಮರಣ ನೀಡಿ” ಎಂದು ಸಚಿವರ ಎದುರೇ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ; ಆಸ್ಪತ್ರೆಗೆ ತಲುಪುವಷ್ಟರಲ್ಲಿ ವ್ಯಕ್ತಿ ಸಾವು

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಮಸ್ಯೆ ಆಲಿಸಲಿ ಎಂದು ವೇದಿಕೆ ಮೇಲೆಯೇ ಹಾಡು ಹಾಡುವ ಮೂಲಕ ರಾಬಿಯಾ ಎಲ್ಲರ ಗಮನ ಸೆಳೆದಿದ್ದರು.ನಿನ್ನೆ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಆಗಮಿಸಿದ್ದ ಸಚಿವರನ್ನು ರಾಬಿಯಾ ಅವರು ಪ್ರವಾಸಿ ಮಂದಿರದಲ್ಲಿ (IB) ಭೇಟಿ ಮಾಡಿದ್ದರು. ಈ ವೇಳೆ ರಾಬಿಯಾಳ ಕಷ್ಟ ಆಲಿಸಿದ ಸಚಿವರು, ಆಕೆಯ ವಾಸದ ಮನೆಯ ಆರು ತಿಂಗಳ ಬಾಡಿಗೆ ಹಾಗೂ ಮನೆಗೆ ಬೇಕಾದ ರೇಷನ್ (ದಿನಸಿ) ವೆಚ್ಚವನ್ನು ತಾವೇ ಭರಿಸುವುದಾಗಿ ತಿಳಿಸಿದ್ದಾರೆ. ಮುಂದಿನ ಆರು ತಿಂಗಳ ಒಳಗಾಗಿ ಶಿರಾದಲ್ಲಿ ರಾಬಿಯಾಗೆ ಒಂದು ನಿವೇಶನ ಅಥವಾ ಮನೆ ಕೊಡಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ; ಪ್ರೀತಿಸಿದವನ ಜೊತೆ ಹೋಗಿದ್ದಕ್ಕೆ ವಿಷ ಹಾಕಿದ ಅಣ್ಣ! – Kannada News | Belagavi Honor Killing: Family Poisons Woman, Burns Body Over Love Affair

ಪ್ರೀತಿಸಿದವನ ಜೊತೆ ಹೋಗಿದ್ದಕ್ಕೆ ವಿಷ ಹಾಕಿದ ಅಣ್ಣ!
Image Credit source: google

ಬೆಳಗಾವಿ, ಏಪ್ರಿಲ್ 15: ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಿ ಪ್ರದೇಶದಲ್ಲಿ ನಡೆದ ಮರ್ಯಾದೆ ಹತ್ಯೆ (Honor Killing) ಪ್ರಕರಣವು ರಾಜ್ಯದಾದ್ಯಂತ ಆತಂಕ ಮೂಡಿಸಿದೆ. ಸತ್ತೆವ್ವಾ ಹೆಳವರ್ (25) ಎಂಬ ಯುವತಿಯನ್ನು ಕುಟುಂಬಸ್ಥರೇ ವಿಷ ನೀಡಿ ಹತ್ಯೆ ಮಾಡಿ, ಬಳಿಕ ಸಾಕ್ಷಿ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಮದುವೆಯ ಬಳಿಕವೂ ಪ್ರಿಯಕರನ ಜೊತೆ ಸಂಪರ್ಕ

ಸತ್ತೆವ್ವಾ ನದಿಗುಡಿ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಸಂಬಂಧ ಕುಟುಂಬಕ್ಕೆ ತಿಳಿದ ನಂತರ, ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೆಳವಿ ಜೊತೆ ವಿವಾಹ ಮಾಡಲಾಗಿತ್ತು. ಆದಾಗ್ಯೂ, ಮದುವೆಯಾದ ಬಳಿಕವೂ ಸತ್ತೆವ್ವಾ ತನ್ನ ಪ್ರಿಯಕರ ಕೃಷ್ಣಾ ಜೊತೆ ಸಂಪರ್ಕದಲ್ಲಿದ್ದು, 17 ಫೆಬ್ರವರಿ 2026ರಂದು ಇಬ್ಬರೂ ಮನೆ ಬಿಟ್ಟು ಓಡಿ ಹೋಗಿ, ಸವದತ್ತಿ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಮನೆಗೆ ಕರೆಸಿ ವಿಷ ಹಾಕಿದ ಸಂಬಂಧಿಕರು

ಸುಮಾರು ಹದಿನೈದು ದಿನಗಳ ಹಿಂದೆ ಕುಟುಂಬಸ್ಥರು ಅವರನ್ನು ಪತ್ತೆಹಚ್ಚಿ ಮನೆಗೆ ಕರೆತಂದಿದ್ದರು. ಬಳಿಕ ಎರಡು ಕುಟುಂಬಗಳ ನಡುವೆ ರಾಜಿ ಸಂಧಾನವೂ ನಡೆದಿತ್ತು. ಕೃಷ್ಣನನ್ನು ಮರೆಯುವಂತೆ ಸತ್ತೆವ್ವಾಳ ಮೇಲೆ ಒತ್ತಡ ಹಾಕಲಾಗಿತ್ತು. ಆಕೆ ಒಪ್ಪದ ಹಿನ್ನೆಲೆಯಲ್ಲಿ, ಮೊದಲಿಗೆ ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಲಾಯಿತು. ಅಲ್ಲಿಯೂ ಒತ್ತಡ ಮುಂದುವರೆದ ಹಿನ್ನೆಲೆಯಲ್ಲಿ, ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮಕ್ಕೆ ಕರೆದುಕೊಂಡು ಹೋಗಿ ಮಾರ್ಚ್ 21ರಂದು ವಿಷ ನೀಡಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಸತ್ತೆವ್ವಾಳ ಅಣ್ಣ ಶಾನೂರ ಹೆಳವರ್, ಚಿಕ್ಕಪ್ಪ ಪ್ರಕಾಶ್ ಹೆಳವರ್ ಮತ್ತು ಸಂಬಂಧಿ ಮಾಯಪ್ಪ ಹೆಳವಿ ಈ ಕೃತ್ಯವನ್ನೆಸಗಿದ್ದು, ಬಳಿಕ ಶವವನ್ನು ಸ್ಮಶಾನದಲ್ಲಿ ಸುಟ್ಟು ಹಾಕಿ, ಹಾಸಿಗೆ ಬಟ್ಟೆ ಸೇರಿಸಿ ಸಾಕ್ಷಿ ನಾಶಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ ಛತ್ತೀಸ್‌ಗಢದ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ; 9 ಕಾರ್ಮಿಕರು ಸಾವು, 15 ಜನರಿಗೆ ಗಾಯ

ಆರೋಪಿಗಳು ಅರೆಸ್ಟ್

ಸತ್ತೆವ್ವಾ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪ್ರಿಯಕರ ಕೃಷ್ಣಾ, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಸತ್ತೆವ್ವಾಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೃಷ್ಣಾ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

World Art Day 2026: ಏಪ್ರಿಲ್‌ 15 ರಂದೇ ಏಕೆ ವಿಶ್ವ ಕಲಾ ದಿನವನ್ನು ಆಚರಿಸುವುದು ಗೊತ್ತಾ? – Kannada News | World Art Day 2026: Do you know why World Art Day is celebrated on April 15th?

ಕಲೆಗಳು (Art) ನಮ್ಮ ಸಂಸ್ಕೃತಿಯ ಜೀವಂತಿಕೆಯಾಗಿದ್ದು, ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವ ಈ  ಕಲೆಗಳು ಜನಜೀವನದೊಂದಿಗೆ ಬೆರೆತು ಹೋಗಿವೆ. ಅಲ್ಲದೆ ಕಲೆಗಳು ಮಾನವನ ಭಾವನೆ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಪ್ರಮುಖ ಮಾಧ್ಯಮವೂ ಹೌದು. ಈ ಜಗತ್ತಿನಾದ್ಯಂತ ಅನೇಕಾರು ಕಲಾ ಪ್ರಕಾರಗಳಿವೆ. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ, ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳು ಕ್ಷೀಣಿಸುತ್ತಾ ಬರುತ್ತಿದೆ. ಹಾಗಾಗಿ ಸಾಮಾಜಿಕ ಅಭಿವೃದ್ಧಿಯಲ್ಲಿ ಕಲೆಯ ಮಹತ್ವವನ್ನು ಉತ್ತೇಜಿಸಲು, ಕಲೆ ಹಾಗೂ ಕಲಾವಿದರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಏಪ್ರಿಲ್‌ 15 ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನ್ು‌ ತಿಳೀಯೋಣ ಬನ್ನಿ.

ವಿಶ್ವ ಕಲಾ ದಿನದ ಇತಿಹಾಸವೇನು?

ಅಂತರಾಷ್ಟ್ರೀಯ ಕಲಾ ಸಂಘದ ಸಾಮಾನ್ಯ ಸಭೆಯಲ್ಲಿ ವಿಶ್ವ ಕಲಾ ದಿನವನ್ನು ಆಚರಿಸುವುದಾಗಿ ಅಧಿಕೃತವಾಗಿ ಘೋಷಿಸಲಾಯಿತು. ಮೊದಲ ಬಾರಿಗೆ  2012 ರಲ್ಲಿ ವಿಶ್ವ ಕಲಾದಿನವನ್ನು ಆಚರಿಸಲಾಯಿತು.  ವಿವಿಧ ಕಲಾ ವರ್ಗಗಳಿಂದ ಸುಮಾರು 150 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ವಿಭಾಗಗಳ ಕಲೆಗಾರರ ಭಾವನೆಗಳಿಗೆ  ಗೌರವ ಸಲ್ಲಿಸಲಾಯಿತು ಮತ್ತು ಅವರ ಕೆಲಸಕ್ಕೆ ಪ್ರೋತ್ಸಾಹ ನೀಡಲಾಯಿತು.

ಏಪ್ರಿಲ್ 15 ರಂದೇ ವಿಶ್ವ ಕಲಾ ದಿನವನ್ನು ಆಚರಿಸುವುದೇಕೆ?

ಮಹಾನ್ ಇಟಾಲಿಯನ್ ವರ್ಣಚಿತ್ರಕಾರ ಲಿಯೊನಾರ್ಡೊ ಡಾ ವಿನ್ಸಿ ಅವರ ಜನ್ಮ ದಿನದ ಸವಿ ನೆನಪಿಗಾಗಿ ಏಪ್ರಿಲ್‌ 15 ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಲಿಯೊನಾರ್ಡೊ ಡಾ ವಿನ್ಸಿ ಒಬ್ಬ ಪ್ರಸಿದ್ಧ ಇಟಾಲಿಯನ್ ವರ್ಣಚಿತ್ರಕಾರ, ಶಿಲ್ಪಿ, ವಾಸ್ತುಶಿಲ್ಪಿ, ಸಂಗೀತಗಾರ, ನುರಿತ ಮೆಕ್ಯಾನಿಕ್, ಎಂಜಿನಿಯರ್ ಮತ್ತು ವಿಜ್ಞಾನಿಯಾಗಿದ್ದರು. ಅವರು ತಮ್ಮ ಕಲೆಯಲ್ಲಿನ ಪ್ರಾವೀಣ್ಯತೆಯಿಂದಲೇ ಪ್ರಪಂಚದಾದ್ಯಂತ ಖ್ಯಾತಿಯನ್ನು ಪಡೆದವರು. ಇಂತಹ ಮಹಾನ್‌ ಕಲಾವಿದನ ಜನ್ಮ ದಿನದ ಸವಿ ನೆನಪಿಗಾಗಿ 2012 ರಲ್ಲಿ ವಿಶ್ವ ಕಲಾ ದಿನವನ್ನು ಆಚರಣೆಯನ್ನು ಪ್ರಾರಂಭಿಸಲಾಯಿತು.   ವಿಶ್ವ ಕಲಾ ದಿನದ ಅಧಿಕೃತ ಆಚರಣೆಯನ್ನು 2015 ರಲ್ಲಿ ಅಮೆರಿಕದ  ಲಾಸ್ ಏಂಜಲೀಸ್‌ನಲ್ಲಿ ನಡೆಸಲಾಯಿತು. ನಂತರ 2019 ರಲ್ಲಿ  ಯುನೆಸ್ಕೋ ಅಧಿಕೃತವಾಗಿ ವಿಶ್ವ ಕಲಾದಿನವನ್ನು ಆಚರಿಸಲು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಏಪ್ರಿಲ್‌ 15 ರಂದು ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸುವುದೇಕೆ ಗೊತ್ತಾ?

ವಿಶ್ವ ಕಲಾ ದಿನದ ಮಹತ್ವವೇನು?

  • ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಪ್ರಕಾರ, ವಿಶ್ವ ಕಲಾ ದಿನದ ಗುರಿ ಸಮಾಜದಲ್ಲಿ ಕಲಾತ್ಮಕ ಅಭಿವ್ಯಕ್ತಿಗಳನ್ನು ದೃಢವಾಗಿ ಸಂಯೋಜಿಸುವುದು. ಇದಲ್ಲದೆ, ಸಾಮಾಜಿಕ ಅಭಿವೃದ್ಧಿಗೆ ಕಲೆಯ ಮಹತ್ವ ಮತ್ತು ಕೊಡುಗೆಯನ್ನು ಎತ್ತಿ ತೋರಿಸುವ ಗುರಿಯನ್ನು ಸಹ ಇದು ಹೊಂದಿದೆ.
  • ಈ ದಿನ ಕಲೆ ಮಾತ್ರವಲ್ಲದೆ ಕಲಾವಿದರ ಕೊಡುಗೆಗಳು ಕೂಡಾ ನಮ್ಮ ಸಂಸ್ಕೃತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ ಎಂಬುದನ್ನು ನೆನಪಿಸುತ್ತದೆ. ಈ ನಿಟ್ಟಿನಲ್ಲಿ ಕಲಾವಿದರು ಹಾಗೂ ಕಲೆಗೆ ಗೌರವವನ್ನು ಸಲ್ಲಿಸಬೇಕು ಎಂಬ ಉದ್ದೇಶದಿಂದ ವಿಶ್ವ ಕಲಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
  • ವಿಶ್ವ ಕಲಾ ದಿನದ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮ್ಮೇಳನಗಳು, ಪ್ರದರ್ಶನಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳು ಮತ್ತು ಯುವಕರನ್ನು ಕಲೆಯಲ್ಲಿ ತೊಡಗಿಸಿಕೊಳ್ಳಲು, ಕಲೆಯ ಮೇಲಿನ ಅವರ ಆಸಕ್ತಿಯನ್ನು ಹೆಚ್ಚಿಸಲು  ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ; ಆಸ್ಪತ್ರೆಗೆ ತಲುಪುವಷ್ಟರಲ್ಲಿ ವ್ಯಕ್ತಿ ಸಾವು – Kannada News | Tumakuru: KSRTC Bus Passenger Suffers Fatal Heart Attack Near Madhugiri

Jagadisha B | Edited By: ಅಕ್ಷಯ್​ ಪಲ್ಲಮಜಲು​​|

Updated on:Apr 15, 2026 | 9:32 AM

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಾಸರಹಳ್ಳಿ ಬಳಿ ಬೆಂಗಳೂರಿನಿಂದ ಪಾವಗಡಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕ ಪ್ರಭಾಕರ್ (45) ಅವರಿಗೆ ಹೃದಯಾಘಾತ ಸಂಭವಿಸಿದೆ. ತೀವ್ರ ಎದೆನೋವಿನಿಂದ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತರಾಗಿದ್ದಾರೆ. ಈ ಘಟನೆ ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಪ್ರಕರಣ ದಾಖಲಾಗಿದೆ.

Published on: Apr 15, 2026 09:30 AM

Source link

Exit mobile version