Headlines

World Blood Donor Day 2026: ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗಿ – Kannada News | World Blood Donor Day 2026: What is the significance of World Blood Donor Day?

ವಿಶ್ವ ರಕ್ತದಾನಿಗಳ ದಿನImage Credit source: png magic ರಕ್ತದಾನವು (Blood donation) ಮಹಾದಾನ ಮಾತ್ರವಲ್ಲ ಇದು ಮಾನವೀಯತೆಯ ಅಮೂಲ್ಯವಾದ ಅಭಿವ್ಯಕ್ತಿಯೂ ಹೌದು. ಅಪಘಾತಕ್ಕೀಡಾದವರಿಗೆ, ಕ್ಯಾನ್ಸರ್‌ ರೋಗಿಗಳಿಗೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಗಳಿಗೆ ಹೀಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ರಕ್ತ ಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾವು ರಕ್ತ ದಾನವನ್ನು ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ.  ರಕ್ತದಾನದ ಈ ಮಹತ್ವವನ್ನು ಸಾರಲು, ರಕ್ತದಾನ ಮಾಡುವಂತೆ ಜನರನ್ನು ಪ್ರೋತ್ಸಾಹಿಸಲು ಹಾಗೂ ರಕ್ತದಾನಿಗಳನ್ನು ಗೌರವಿಸಲು ಪ್ರತಿವರ್ಷ ಜೂನ್‌ 14 ರಂದು…

Read More

ವೃದ್ಧೆಗೂ ಇಲ್ಲ ಭದ್ರತೆ; ಕಣ್ಣು ಕಾಣದ 70 ವರ್ಷದ ದೆಹಲಿಯ ಮಹಿಳೆ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯಕ್ಕೆ ಯತ್ನ – Kannada News | Delhi 70 year old blind woman assaulted and attempted to physically harassment

ನವದೆಹಲಿ, ಜೂನ್ 13: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತಹ ಅಮಾನವೀಯ ಘಟನೆಯೊಂದು ನಡೆದಿದೆ. ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ 70 ವರ್ಷದ ಕಣ್ಣು ಕಾಣದ ವೃದ್ಧೆಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ (Delhi Crime News) ಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಮಯೂರ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ದೃಷ್ಟಿ ದೋಷ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವೃದ್ಧೆ ಕಳೆದ ಸುಮಾರು 35 ವರ್ಷಗಳಿಂದ…

Read More

IND vs AFG: ಸಿಕ್ಸರ್ ಬಾರಿಸಿ 16 ಸಾವಿರ ರನ್​ಗಳ ಗಡಿ ದಾಟಿದ ರೋಹಿತ್ ಶರ್ಮಾ

ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಎರಡೆರಡು ವಿಶೇಷ ದಾಖಲೆಗಳನ್ನು ನಿರ್ಮಿಸಿದರು. ಧರ್ಮಶಾಲಾದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಭಾರತದ ಪರ ಏಕದಿನ ಪಂದ್ಯವನ್ನಾಡಿದ ಅತ್ಯಂತ ಹಿರಿಯ ಆಟಗಾರನೆಂಬ ದಾಖಲೆ ನಿರ್ಮಿಸಿದರು (PC-PTI). ಆ ನಂತರ ಬ್ಯಾಟಿಂಗ್​ಗೆ ಬಂದ ರೋಹಿತ್ ಶರ್ಮಾ 6 ರನ್ ಪೂರೈಸಿದ ಕೂಡಲೇ ಆರಂಭಿಕನಾಗಿ 16,000 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದರು. ಈ ವಿಶೇಷ ಸಾಧನೆಯೊಂದಿಗೆ, ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ…

Read More

ಧರ್ಮಸ್ಥಳ ಕೇಸ್​: ಬುರುಡೆ ಗ್ಯಾಂಗ್ ಸಂಪರ್ಕ ಮಾಡಿದ್ದ ಸ್ವಾಮೀಜಿ ರಹಸ್ಯ ರಿವೀಲ್ – Kannada News | Dharmasthala Case: New Revelations Surface Over Swamiji’s Reported Meeting With Burude Gang

ಮಂಗಳೂರು, ಜೂನ್​ 13: ಧರ್ಮಸ್ಥಳದ (Dharmasthala Case) ವಿರುದ್ಧ ಹೆಣೆದಿದ್ದ ಕರಾಳ ಷಡ್ಯಂತ್ರ ಬಯಲಾಗುತ್ತಿದೆ. ಧರ್ಮಸ್ಥಳದಲ್ಲಿ ಶವ ಸಿಗುತ್ತೆ ಅಂತಾ SIT ಅಧಿಕಾರಿಗಳಿಂದ ಗುಂಡಿ ತೋಡಿಸಿದ್ದ ಮಾಸ್ಕ್​ಮ್ಯಾನ್ ಚಿನ್ನಯ್ಯ, ಹೈಕೋರ್ಟ್​​​​​​ನಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ತಮ್ಮದೇ ಬುರುಡೆ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದಾನೆ.  ನಿನ್ನೆ ಯಾರು ಪ್ರೊಡ್ಯೂಸರ್? ಎಷ್ಟು ಕೋಟಿ ಫಂಡಿಂಗ್? ಅನ್ನೋದೆಲ್ಲ ರಿವೀಲ್ ಆಗಿತ್ತು. ಜೊತೆ ನಟ ಪ್ರಕಾಶ್​​ರಾಜ್ ಹೆಸರನ್ನು ಉಲ್ಲೇಖಿಸಿದ್ದ. ಆದರೆ ಇಂದು ಧರ್ಮಸ್ಥಳ ಬುರುಡೆ ರಹಸ್ಯದ ಹಿಂದೆ ಸ್ವಾಮೀಜಿ ಸಂಪರ್ಕ ಇರುವುದು…

Read More

ಜೂನ್ 17ರಂದು ಫ್ರಾನ್ಸ್​ನಲ್ಲಿ ಟ್ರಂಪ್-ಮೋದಿ ನಡುವೆ ಮಹತ್ವದ ಮಾತುಕತೆ – Kannada News | PM Modi and Donald Trump To Hold Bilateral Meeting in France G7 Summit On June 17

ನವದೆಹಲಿ, ಜೂನ್ 13: ಫ್ರಾನ್ಸ್‌ನಲ್ಲಿ ಮುಂದಿನ ವಾರ ನಡೆಯಲಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೂನ್ 17ರಂದು ಮುಖಾಮುಖಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ವೈಟ್‌ಹೌಸ್ ಅಧಿಕೃತವಾಗಿ ಖಚಿತಪಡಿಸಿದೆ. 2024ರ ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆದ್ದ ನಂತರ, 2025ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಾಗೆ ಭೇಟಿ ನೀಡಿದ್ದರು. ಅದಾದ ಬಳಿಕ ಉಭಯ ನಾಯಕರ ನಡುವೆ ನಡೆಯುತ್ತಿರುವ ಮೊದಲ…

Read More

IND vs AFG: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಹರ್ಷ್ ದುಬೆ, ಗುರ್ನೂರ್ ಬ್ರಾರ್ – Kannada News | Gurnoor Brar and Harsh Dubey Shine: India vs Afghanistan ODI Debutants Take 3 Wickets Each

ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೊದಲ ಏಕದಿನ ಪಂದ್ಯವನ್ನು ಮಳೆಯಿಂದಾಗಿ ತಲಾ 25 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ 195 ರನ್​ಗಳ ಗುರಿ ನೀಡಿತು. ಅದಾಗ್ಯೂ ಅಫ್ಘನ್ ತಂಡವನ್ನು ಆರಂಭದಲ್ಲಿ ಮತ್ತು ಡೆತ್ ಓವರ್​ಗಳಲ್ಲಿ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಇದರಲ್ಲಿ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ ಗುರ್ನೂರ್ ಬ್ರಾರ್ (Gurnoor Brar) ಮತ್ತು ಹರ್ಷ್​ ದುಬೆ (Harsh Dubey) ಅವರ…

Read More

ಸಂಬಂಧದಲ್ಲಿ ಅತಿಯಾಗಿ ಅನುಮಾನಿಸುವುದು ರಿಲೇಷನ್‌ಶಿಪ್ ಒಸಿಡಿಯ ಲಕ್ಷಣವೇ? ಹೇಗಿರುತ್ತದೆ ಈ ಡಿಸಾರ್ಡರ್ ಲಕ್ಷಣ? – Kannada News | ROCD Explained: Why Constant Doubts Can Destroy Healthy Relationships

ದಾಂಪತ್ಯ ಅಥವಾ ಪ್ರೀತಿಯಲ್ಲಿರುವವರಿಗೆ ಒಬ್ಬರ ಮೇಲೆ ಒಬ್ಬರಿಗೆ ಸಣ್ಣಪುಟ್ಟ ಅನುಮಾನಗಳು ಬರುವುದು ಸಾಮಾನ್ಯ. ಆದರೆ ಅದೇ ಅನುಮಾನ ದಿನೇದಿನೇ ಹೆಚ್ಚಾಗಿ, ಮನಸ್ಸಿನಲ್ಲಿ ನಿರಂತರ ಆತಂಕ ಹಾಗೂ ಗೊಂದಲ ಉಂಟುಮಾಡಿದರೆ ಅದನ್ನು ‘ರಿಲೇಷನ್‌ಶಿಪ್ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್’ (Relationship OCD ಅಥವಾ ROCD) ಎಂದು ಕರೆಯಲಾಗುತ್ತದೆ. ಇದು ಮಾನಸಿಕ ಆರೋಗ್ಯಕ್ಕೆ (Mental Health) ಸಂಬಂಧಿಸಿದ ಒಂದು ಸಮಸ್ಯೆಯಾಗಿದ್ದು, ಸಂಬಂಧಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾದರೆ ಏನಿದು ರಿಲೇಷನ್‌ಶಿಪ್ ಒಸಿಡಿ, ಈ ರೀತಿ ಸಮಸ್ಯೆಯನ್ನು…

Read More

‘ಲಗಾನ್’ ಸಿನಿಮಾಕ್ಕೆ 25ರ ಸಂಭ್ರಮ, ಮತ್ತೆ ಜೊತೆಯಾದ ಹಳೆಯ ‘ತಂಡ’ – Kannada News | 25 years for Lagaan, movie re release in many cities

ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾ ‘ಲಗಾನ್’ (Lagaan). ಆಸ್ಕರ್​​ಗೆ ನಾಮಿನೇಟ್ ಆಗಿದ್ದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಪೂರ್ಣಗೊಂಡಿವೆ. ಇದೇ ಖುಷಿಯಲ್ಲಿ ‘ಲಗಾನ್’ ಸಿನಿಮಾ ಮರು ಬಿಡುಗಡೆ ಆಗಿದೆ. ಮುಂಬೈ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಿದ್ದು, ಅಭಿಮಾನಿಗಳು ತಂಡೋಪತಂಡವಾಗಿ ಸಿನಿಮಾಕ್ಕೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ಮರು ಬಿಡುಗಡೆ ಖುಷಿಯಲ್ಲಿ ‘ಲಗಾನ್’ ಚಿತ್ರತಂಡವೂ ಸಹ ಮತ್ತೆ ಒಂದಾಗಿ ಸಂವಾದ ನಡೆಸಿದೆ. ಆಮಿರ್…

Read More

W,W,W..ಆಂಗ್ಲರ ನೆಲದಲ್ಲೂ ಮಿಂಚಿದ ಮಾನವ್ ಸುತಾರ್

ಅಫ್ಘಾನಿಸ್ತಾನ ವಿರುದ್ಧದ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಈಗ ಇಂಗ್ಲಿಷ್ ಪಿಚ್‌ನಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಆಡುತ್ತಿರುವ ಸುತಾರ್, ವಾರ್ವಿಕ್‌ಷೈರ್ ತಂಡದ ಪರ 3 ವಿಕೆಟ್ ಪಡೆದು ಮಿಂಚಿದರು (PC-PTI). ವಾಸ್ತವವಾಗಿ ಜೂನ್ 6 ರಂದು ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ ಸುತಾರ್, ಈ ಪಂದ್ಯದಲ್ಲಿ ಏಳು…

Read More

ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್​​​ ಖಡಕ್​ ಸೂಚನೆ

ಬೆಂಗಳೂರು, ಜೂನ್​ 13: ಸಿಎಂ ಡಿಕೆ ಶಿವಕುಮಾರ್​​ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಡಿಸಿ, ಎಸ್​​ಪಿ ಮತ್ತು ಸಿಇಒಗಳ ಜೊತೆ ಮಹತ್ವದ ಸಭೆ ಮಾಡಿದರು. ಸುಮಾರು ಏಳು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಭಾಗವಹಿಸುವ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ರಾಜ್ಯದ ಜನರು ನಮ್ಮ ಮೇಲೆ ಬಹಳ ನಿರೀಕ್ಷೆಗಳನ್ನಿಟ್ಟಿದ್ದಾರೆ. ಕಚೇರಿಗಳಿಗೆ ಬಂದ ಜನರಿಗೆ ಅಧಿಕಾರಿಗಳು ಸ್ಪಂದಿಸಬೇಕು. ಹಾಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು…

Read More