ಕೊಹ್ಲಿ, ದ್ರಾವಿಡ್ ಅಲ್ಲ! ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ನ ಹೆಸರಿಸಿದ ಅಖ್ತರ್! – Kannada News | Shoaib Akhtar Names His GOAT Batsman

ಕ್ರಿಕೆಟ್ ಜಗತ್ತಿನಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ (GOAT) ಯಾರು ಎಂಬ ಚರ್ಚೆ ಇನ್ನೂ ಮುಂದುವರಿದಿದೆ. ಈ ಚರ್ಚೆಯ ನಡುವೆ ಪಾಕಿಸ್ತಾನದ ಮಾಜಿ ವೇಗಿ, ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಖ್ಯಾತಿಯ ಶೊಯೆಬ್ ಅಖ್ತರ್ “ಸರ್ವ ಶ್ರೇಷ್ಠ ಬ್ಯಾಟ್ಸ್‌ಮನ್” ಯಾರೆಂಬುದನ್ನು ತಿಳಿಸಿದ್ದಾರೆ.

ಶೊಯೆಬ್ ಅಖ್ತರ್ ಅವರ ಪ್ರಕಾರ, ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೇ ಕ್ರಿಕೆಟ್ ಜಗತ್ತು ಕಂಡ ಗ್ರೇಟೆಸ್ಟ್​ ಬ್ಯಾಟ್ಸ್​ಮನ್. ಹೀಗಾಗಿಯೇ ಸಚಿನ್ ತೆಂಡೂಲ್ಕರ್ ಅವರನ್ನು ಅಖ್ತರ್ ಗ್ರೇಟೆಸ್ಟ್​ ಆಫ್ ಆಲ್ ಟೈಮ್ (GOAT) ಎಂದು ಬಣ್ಣಿಸಿದ್ದಾರೆ.

ಕೊಹ್ಲಿಗಿಂತ ಸಚಿನ್ ಯಾಕೆ ಶ್ರೇಷ್ಠ?

ವಿರಾಟ್ ಕೊಹ್ಲಿ ಅವರ ಆಟ, ಫಿಟ್‌ನೆಸ್ ಹಾಗೂ ಆಕ್ರಮಣಕಾರಿ ಶೈಲಿಯನ್ನು ಶೊಯೆಬ್ ಅಖ್ತರ್ ಸದಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ, ಸಚಿನ್ ತೆಂಡೂಲ್ಕರ್ ಅವರ ಸ್ಥಾನವನ್ನು ಯಾರೂ ತಲುಪಲು ಸಾಧ್ಯವಿಲ್ಲ ಎನ್ನುವುದಕ್ಕೆ ಅಖ್ತರ್ ಕೆಲವು ಪ್ರಮುಖ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಶೊಯೆಬ್ ಅಖ್ತರ್, ವಾಸಿಂ ಅಕ್ರಮ್, ಗ್ಲೆನ್ ಮೆಕ್‌ಗ್ರಾತ್, ಶೇನ್ ವಾರ್ನ್ ಮತ್ತು ಕರ್ಟ್ಲಿ ಆಂಬ್ರೋಸ್ ಅವರಂತಹ ಜಗತ್ತಿನ ಅತ್ಯಂತ ಭೀಕರ ಹಾಗೂ ಮಾರಕ ಬೌಲರ್‌ಗಳನ್ನು ಎದುರಿಸಿ ರನ್ ಗಳಿಸಿದ್ದಾರೆ. ಆದರೆ ಇಂದಿನ ಯುಗದಲ್ಲಿ ಅಂತಹ ಗುಣಮಟ್ಟದ ಬೌಲಿಂಗ್ ಕೊರತೆಯಿದೆ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ  ಸಚಿನ್ ಆಡುತ್ತಿದ್ದ ಕಾಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಚೆಂಡನ್ನು ಬಳಸಲಾಗುತ್ತಿತ್ತು. ಇದರಿಂದ ಬೌಲರ್‌ಗಳಿಗೆ ರಿವರ್ಸ್ ಸ್ವಿಂಗ್ ಮಾಡಲು ಸುಲಭವಾಗುತ್ತಿತ್ತು ಮತ್ತು ಬೌಂಡರಿ ಗೆರೆಗಳು ದೊಡ್ಡದಾಗಿದ್ದವು. ಆದರೆ ಇಂದಿನ ನಿಯಮಗಳು ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಪೂರಕವಾಗಿವೆ (ಎರಡು ಹೊಸ ಚೆಂಡುಗಳು, ಪವರ್‌ಪ್ಲೇ ನಿಯಮಗಳು). ಹೀಗಾಗಿ ಇಂದಿನ ಕಾಲದಲ್ಲಿ ರನ್ ಗಳಿಸುವುದು ಸಚಿನ್ ಕಾಲಕ್ಕಿಂತ ಸುಲಭವಾಗಿದೆ ಎಂಬುದು ಅಖ್ತರ್ ವಾದ.

ಇನ್ನು ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮದಂತೆ ನೋಡುವ ಕಾಲದಲ್ಲಿ, ನೂರು ಕೋಟಿಗೂ ಅಧಿಕ ಜನರ ನಿರೀಕ್ಷೆಯ ಭಾರವನ್ನು ಹೆಗಲ ಮೇಲೆ ಹೊತ್ತು ಸಚಿನ್ 100 ಅಂತರರಾಷ್ಟ್ರೀಯ ಶತಕಗಳನ್ನು ಹಾಗೂ 34,000ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಈ ಸಾಧನೆ ನಿಜಕ್ಕೂ ಅಪ್ರತಿಮ ಎನ್ನುತ್ತಾರೆ ಶೊಯೆಬ್ ಅಖ್ತರ್.

ಈ ಎಲ್ಲಾ ಕಾರಣಗಳಿಂದಾಗಿಯೇ ವಿರಾಟ್ ಕೊಹ್ಲಿಗಿಂತ ಸಚಿನ್ ತೆಂಡೂಲ್ಕರ್ ಶ್ರೇಷ್ಠ. ಹೀಗಾಗಿಯೇ ನಾನು ಸಚಿನ್ ತೆಂಡೂಲ್ಕರ್ ಅವರನ್ನು ಅಖ್ತರ್ ಗ್ರೇಟೆಸ್ಟ್​ ಆಫ್ ಆಲ್ ಟೈಮ್ (GOAT) ಎಂದು ಪರಿಗಣಿಸುತ್ತೇನೆ ಎಂದು ಶೊಯೆಬ್ ಅಖ್ತರ್ ತಿಳಿಸಿದ್ದಾರೆ.

ಕೊಹ್ಲಿಗೂ ಗೌರವ!

ಸಚಿನ್ ಅವರನ್ನು ಮೊದಲ ಸ್ಥಾನದಲ್ಲಿರಿಸಿದರೂ, ವಿರಾಟ್ ಕೊಹ್ಲಿ ಸಾಧನೆಯನ್ನು ಅಖ್ತರ್ ಎಲ್ಲೂ ಕಡೆಗಣಿಸಿಲ್ಲ. ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗಲೂ ಅಖ್ತರ್ ಅವರ ಬೆನ್ನಿಗೆ ನಿಂತಿದ್ದರು. ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನ ಮುಗಿಸುವ ಮುನ್ನ ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಮುರಿಯಬೇಕು ಎಂಬುದು ತನ್ನ ಆಸೆ ಎಂದು ಅಖ್ತರ್ ಹೇಳಿದ್ದಾರೆ.

ಇದನ್ನೂ ಓದಿ: ದ್ರಾವಿಡ್ ‘ಗೋಡೆ’ಗೆ ಹೊಸ ವಾರಸುದಾರ: ಗಾಲೆಯಲ್ಲಿ ಪಡಿಕ್ಕಲ್ ಹೊಸ ಇತಿಹಾಸ!

ಒಟ್ಟಾರೆಯಾಗಿ ಹೇಳುವುದಾದರೆ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಮ್ಮದೇ ಆದ ಯುಗದಲ್ಲಿ ಕ್ರಿಕೆಟ್ ಜಗತ್ತನ್ನು ಆಳಿದ ಧ್ರುವತಾರೆಗಳು. ಬದಲಾದ ನಿಯಮಗಳು ಮತ್ತು ಇಂದಿನ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ನಡುವೆಯೂ ಕೊಹ್ಲಿ ದಾಖಲೆಗಳ ಶಿಖರ ಏರುತ್ತಿದ್ದಾರೆ. ಆದರೆ, ಶೊಯೆಬ್ ಅಖ್ತರ್ ಸೇರಿದಂತೆ ಹಲವು ಮಾಜಿ ದಂತಕಥೆಗಳ ಪ್ರಕಾರ, ಕಠಿಣ ಪರಿಸ್ಥಿತಿ ಹಾಗೂ ಮಾರಕ ಬೌಲಿಂಗ್‌ ಎದುರಿಸಿ ಅಧಿಪತ್ಯ ಸ್ಥಾಪಿಸಿದ ಸಚಿನ್ ಅವರೇ ಎಂದಿಗೂ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್.

Source link

Video: ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ – Kannada News | Weekly Horoscope: Dr. Basavaraj Gurujis Astrological Insights for 17th 23rd August 2026

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ 2026ರ ಆಗಸ್ಟ್ 17ರಿಂದ 23ರವರೆಗಿನ ವಾರ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ವಾರವು ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ, ವರ್ಷ ಋತು ಮತ್ತು ಶುಕ್ಲ ಪಕ್ಷವನ್ನು ಒಳಗೊಂಡಿದೆ.

ಈ ವಾರದಲ್ಲಿ ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ ತಿಥಿಗಳಿವೆ. ನಾಗ ಪಂಚಮಿ, ಗರುಡ ಪಂಚಮಿ, ಮಂಗಳಗೌರಿ ವ್ರತ ಮತ್ತು ವರಮಹಾಲಕ್ಷ್ಮಿ ಹಬ್ಬದಂತಹ ಪ್ರಮುಖ ಆಚರಣೆಗಳು ಈ ವಾರದಲ್ಲಿ ನಡೆಯಲಿವೆ. ಸಿಂಹ ಸಂಕ್ರಮಣದ ಮೂಲಕ ರವಿ ಗ್ರಹವು ಸಿಂಹ ರಾಶಿಗೆ ಪ್ರವೇಶಿಸಲಿದ್ದು, ಬುಧಾದಿತ್ಯ ಯೋಗವೂ ಸಹ ಈ ವಾರದಲ್ಲಿ ರೂಪುಗೊಳ್ಳಲಿದೆ. ಗ್ರಹಗಳ ಸ್ಥಾನಮಾನಗಳು ಬದಲಾಗುವ ಈ ವಾರದಲ್ಲಿ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ಮತ್ತು ತುಲಾ ಸೇರಿದಂತೆ ದ್ವಾದಶ ರಾಶಿಗಳ ಮೇಲಾಗುವ ಪರಿಣಾಮಗಳನ್ನು ಗುರೂಜಿ ವಿವರಿಸಿದ್ದಾರೆ. ಪ್ರತಿಯೊಂದು ರಾಶಿಗೂ ಆರ್ಥಿಕ ಸ್ಥಿತಿ, ಕುಟುಂಬ ಸಂಬಂಧಗಳು, ಆರೋಗ್ಯ ಮತ್ತು ಉದ್ಯೋಗದ ಕುರಿತು ಮಹತ್ವದ ಸಲಹೆಗಳನ್ನು ನೀಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Source link

ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್ – Kannada News | Crazy Star Ravichandran House sale rumours clarified by fan Dil Se Dileep

ಒಂದು ಕಾಲದಲ್ಲಿ ನಟ ರವಿಚಂದ್ರನ್ (Ravichandran) ಅವರು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದರು. ಸಾವಿರಾರು ಜನರಿಗೆ ಅವರು ಕೆಲಸ ನೀಡಿದ್ದರು. ಸಿನಿಮಾಗಾಗಿ ಲೆಕ್ಕವೇ ಇಲ್ಲದಷ್ಟು ಹಣ ಖರ್ಚು ಮಾಡುತ್ತಿದ್ದ ನಟ, ನಿರ್ದೇಶಕ, ನಿರ್ಮಾಪಕ ಅವರು. ಆದರೆ ಇತ್ತೀಚಿನ ವರ್ಷಗಳಲ್ಲಿ ರವಿಚಂದ್ರನ್ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆಯಾ ಎಂಬ ಪ್ರಶ್ನೆ ಹಲವರಿಗೆ ಇದೆ. ಅಲ್ಲದೇ, ಅವರು ಮನೆ ಮಾರಿಕೊಂಡಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಅವರನ್ನು ಹತ್ತಿರದಿಂದ ಕಂಡ ಅಪ್ಪಟ ಅಭಿಮಾನಿ ದಿಲ್ ಸೇ ದಿಲೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಅದೆಲ್ಲ ಸುಳ್ಳು. ವದಂತಿ ಇದ್ದೇ ಇರುತ್ತದೆ. ರವಿಚಂದ್ರನ್ ಅವರು ಮನೆ ಮಾರಿಲ್ಲ. ಅವರು ಏನನ್ನೂ ಕಳೆದುಕೊಂಡಿಲ್ಲ. ಯೂಟ್ಯೂಬ್, ಫೇಸ್​ಬುಕ್​ನಲ್ಲಿ ಇರುವವರು ಮಾರಿದ್ದಾರೆ. ರವಿಚಂದ್ರನ್ ಸರ್ ಹೆಸರಲ್ಲಿ ಇರುವುದನ್ನು ಇವರೆಲ್ಲಾ ಸೈನ್ ಹಾಕಿ ಮಾಡಿದ್ದಾರೆ’ ಎಂದು ದಿಲ್ ಸೇ ದಿಲೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಡಬ ತಾಲೂಕಿನ ಕೋಲ್ಪೆಯಲ್ಲಿ ನೈತಿಕ ಪೊಲೀಸ್​​ಗಿರಿ: 9 ಜನರ ವಿರುದ್ಧ FIR ದಾಖಲು – Kannada News | Moral Policing in Kadaba: FIR Registered Against 9 People for Assaulting Woman and Family

ಮಂಗಳೂರು, ಆಗಸ್ಟ್​​ 16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ಪ್ರಕರಣ ವರದಿಯಾಗಿದ್ದು, ಆಗಸ್ಟ್ 12ರಂದು ಕಡಬ ತಾಲೂಕಿನ ಕೋಲ್ಪೆ ಎಂಬಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿಯರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ಗುಂಪೊಂದು ಹಲ್ಲೆ ನಡೆಸಿದ್ದು, ಸಂತ್ರಸ್ತೆ ನೀಡಿದ ದೂರಿನನ್ವಯ 9 ಜನರ ವಿರುದ್ಧ FIR ದಾಖಲಾಗಿದೆ. ಮೆಲ್ಕಾರ್​ನಲ್ಲಿ ಕೆಲಸ ಮಾಡಿತ್ತಿದ್ದ ಕೋಲ್ಪೆಯ 18 ವರ್ಷದ ಯುವತಿ, ಆಗಸ್ಟ್ 12ರಂದು ಕೆಲಸ ಮುಗಿಸಿ ಅಂಗಡಿ ಮಾಲೀಕ ಜಹೀರ್ ಸ್ನೇಹಿತ ಸಿಪ್ಪಾನ್ ಕಾರಿನಲ್ಲಿ, ತಾಯಿ ಸಫಿಯಾ ಜೊತೆ ತೆರಳಿದ್ದರು. ಯುವತಿಯನ್ನು ಮನೆ ಬಳಿ ಬಿಟ್ಟು, ಬೈಕ್​​ ಮತ್ತು ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ಕೋಲ್ಪೆ ಎಂಬಲ್ಲಿ ಅವರನ್ನು ಅಡ್ಡಗಟ್ಟಿ ಪುಂಡರು ನೈತಿಕ ಪೊಲೀಸ್​ಗಿರಿ ನಡೆಸಿದ್ದಾರೆ ಎನ್ನಲಾಗಿದೆ.

ಕಪಾಳಕ್ಕೆ ಹೊಡೆದು ಪ್ರಾಣ ಬೆದರಿಕೆ

ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಯುವತಿ ಕಪಾಳಕ್ಕೆ ಹೊಡೆದು ಪ್ರಾಣ ಬೆದರಿಕೆ ಹಾಕಿದ್ದ ಪುಂಡರು ಜಗಳ ಬಿಡಿಸಲು ಬಂದಿದ್ದ ಜಮಾಲ್​​ರ್​ರನ್ನು ತಳ್ಳಿ ಹಲ್ಲೆ ನಡೆಸಿದ್ದರು. ಪ್ರಜ್ಞೆತಪ್ಪಿ ಬಿದ್ದಿದ್ದ ಅಕ್ಕನನ್ನು ಮೇಲೆತ್ತಲು ಬಂದ ಸಹೋದರಿ ಫಾಸಿಲಾ ಕಪಾಳಕಕ್ಕೂ ಹೊಡೆದು ದೂಡಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ವೇಳೆಯೇ ಈ ಸಂಬಂಧ ಸಂತ್ರಸ್ತೆ ವಿಡಿಯೋ ಹರಿಬಿಟ್ಟಿದ್ದರು. ಸಂತ್ರಸ್ತೆ ದೂರಿನ ಅನ್ವಯ ಉಪ್ಪಿನಂಗಡಿ ಠಾಣೆಯಲ್ಲಿ ಆರೋಪಿಗಳಾದ ಜಾಬಿರ್, ಸಿದ್ದಿಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು ಅಲಿಯಾಸ್ ಅಶ್ರಫ್, ಅಶ್ರಫ್ ಕೋಲ್ಪೆ ವಿರುದ್ಧ BNS ಸೆಕ್ಷನ್ 115(2), 126(2), 189(2), 190, 191(2), 351(2), 352)ರ ಅಡಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಯಂತ್ರದಲ್ಲಿ ಸಿಲುಕಿದ ಅಡುಗೆ ಸಿಬ್ಬಂದಿಯ ಕೈಬೆರಳು: ಭಾರೀ ಅವಘಡ ತಪ್ಪಿಸಿದ ವಿದ್ಯಾರ್ಥಿ; ಎಲ್ಲೆಡೆ ಮೆಚ್ಚುಗೆ

ಸಂತ್ರಸ್ತ ಯುವತಿ ಹೇಳಿದ್ದೇನು?

ರಾತ್ರಿ ತಡವಾದ ಕಾರಣ ಘಟನೆ ನಡೆದ ದಿನ ಕಾರಿನಲ್ಲಿ ಬಂದಿದ್ದೆ. ನಾನು ಮತ್ತು ನನ್ನ ತಂಗಿಯ ಖಾಸಗಿ ಭಾಗದ ಮೇಲೆಯೂ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ನಮ್ಮ ಕುಟುಂಬಸ್ಥರ ಮೇಲೆಯೂ ದಾಳಿ ನಡೆದಿದೆ. ಅವರು ಹಲ್ಲೆ ನಡೆಸಿದ ತೀವ್ರತೆಗೆ ನಾವು ರಸ್ತೆಯಲ್ಲಿ ಬಿದ್ದಿದ್ದು, ಆರೋಪಿಗಳು ತೀವ್ರ ಅಮಾನುಷವಾಗಿ ವರ್ತಿಸಿದ್ದಾರೆ. ತೀರಾ ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸಿದ್ದಾರೆ ಎಂದು ಸಂತ್ರಸ್ತ ಯುವತಿ ಅಲವತ್ತುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Namma Metro: ನಮ್ಮ ಮೆಟ್ರೋ ಬ್ಲೂ ಲೈನ್ ಕಾರ್ಯಾಚರಣೆ ಮತ್ತಷ್ಟು ವಿಳಂಬ: 2027ಕ್ಕೆ ಗಡುವು! – Kannada News | Namma Metro Blue Line Deadline Pushed to Mid 2027: Details Here

ನಮ್ಮ ಮೆಟ್ರೋ ಬ್ಲೂ ಲೈನ್ ಕಾರ್ಯಾಚರಣೆ ಮತ್ತಷ್ಟು ವಿಳಂಬ

ಬೆಂಗಳೂರು, ಆಗಸ್ಟ್ 16: ನಗರದ ಅತ್ಯಂತ ದಟ್ಟಣೆಯ ಔಟರ್ ರಿಂಗ್ ರೋಡ್ (ORR) ಮತ್ತು ಐಟಿ ಕಾರಿಡಾರ್‌ಗಳನ್ನು ಜೋಡಿಸುವ ಬಹುನಿರೀಕ್ಷಿತ ನಮ್ಮ ಮೆಟ್ರೋದ ‘ಬ್ಲೂ ಲೈನ್’ (ಸಿಲ್ಕ್ ಬೋರ್ಡ್‌ – ಕೆ.ಆರ್. ಪುರ) ವಾಣಿಜ್ಯ ಕಾರ್ಯಾಚರಣೆಯ ಗಡುವು ಮತ್ತಷ್ಟು ವಿಳಂಬವಾಗಿದೆ. 2026ರ ಕೊನೆಯ ವೇಳೆಗೆ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಗುರಿ ಹೊಂದಿತ್ತು. ಆದರೆ ಸಿವಿಲ್ ಮತ್ತು ಸಿಸ್ಟಮ್ ಕಾಮಗಾರಿಗಳು ಬಾಕಿ ಇರುವ ಕಾರಣ, ವಾಣಿಜ್ಯ ಸಂಚಾರವು 2027ರ ಆರಂಭಕ್ಕೆ ಅಥವಾ ಮಧ್ಯಭಾಗಕ್ಕೆ ಮುಂದೂಡಲ್ಪಡುವ ಸಾಧ್ಯತೆಯಿದೆ.

ವಿಳಂಬಕ್ಕೆ ಪ್ರಮುಖ ಕಾರಣಗಳೇನು?

  • ಬೈಯಪ್ಪನಹಳ್ಳಿ ಡಿಪೋ ಕಾಮಗಾರಿ: ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಅತ್ಯಗತ್ಯವಾಗಿರುವ ಬೈಯಪ್ಪನಹಳ್ಳಿ ಡಿಪೋಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
  • ಫ್ಲೈಓವರ್ ಮತ್ತು ವಯಾಡಕ್ಟ್ ಬಾಕಿ: ಮರಾಠಹಳ್ಳಿ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ಗಳಲ್ಲಿ ಮೆಟ್ರೋ ಮೇಲ್ಸೇತುವೆ (ವಯಾಡಕ್ಟ್) ನಿರ್ಮಾಣ ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ.
  • ತಾಂತ್ರಿಕ ಸವಾಲುಗಳು: ಇಬ್ಲೂರಿನಲ್ಲಿ ಹೈ-ಪ್ರೆಷರ್ ಗೇಲ್ (GAIL) ಗ್ಯಾಸ್ ಪೈಪ್‌ಲೈನ್, ಕಾವೇರಿ ನೀರು ಪೂರೈಕೆ ಪೈಪ್‌ಲೈನ್ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳ ಸವಾಲಿನಿಂದಾಗಿ ನಿಲ್ದಾಣದ ಕಾಮಗಾರಿ ತಡವಾಗಿ ಆರಂಭವಾಗಿದೆ.
  • ಸಿಲ್ಕ್ ಬೋರ್ಡ್‌ನಲ್ಲಿ ವಿಳಂಬ: ಬಿಎಂಆರ್‌ಸಿಎಲ್‌ಗೆ ಸಂಚಾರ ಪೊಲೀಸರು ಹಾಗೂ ನಾಗರಿಕ ಸಂಸ್ಥೆಗಳಿಂದ ಪಿಲ್ಲರ್ ನಿರ್ಮಾಣಕ್ಕೆ ತಡವಾಗಿ ಅನುಮತಿ ಸಿಕ್ಕಿದ್ದು ಕಾಮಗಾರಿಗೆ ತೊಡಕಾಗಿದೆ.

ಸಂಚಾರ ದಟ್ಟಣೆ ಹೆಚ್ಚುವ ಆತಂಕ

ಕೆ.ಆರ್. ಪುರ ಮತ್ತು ಎಚ್‌ಎಸ್‌ಆರ್ ಲೇಔಟ್ ನಡುವೆ 2026ರ ಅಕ್ಟೋಬರ್‌ ವೇಳೆಗೆ ಟ್ರಯಲ್ ರನ್ ಆರಂಭಿಸಲು ಬಿಎಂಆರ್‌ಸಿಎಲ್ ಪ್ರಯತ್ನಿಸುತ್ತಿದೆ. ಆದರೆ ವಾಣಿಜ್ಯ ಕಾರ್ಯಾಚರಣೆ 2026ರಲ್ಲಿ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಔಟರ್ ರಿಂಗ್ ರೋಡ್‌ನಲ್ಲಿ 450 ಕೋಟಿ ರೂ. ವೆಚ್ಚದ ‘ವೈಟ್ ಟಾಪಿಂಗ್’ ಕಾಮಗಾರಿಯನ್ನು 2026ರ ಅಕ್ಟೋಬರ್‌ನಿಂದ ಆರಂಭಿಸಲು ಯೋಜನೆ ರೂಪಿಸಿದೆ. ಮೆಟ್ರೋ ಬ್ಲೂ ಲೈನ್ ಆರಂಭವಾಗುವ ಮುನ್ನವೇ ರಸ್ತೆ ಕಾಮಗಾರಿ ಆರಂಭವಾದರೆ, ಐಟಿ ಕಾರಿಡಾರ್‌ನಲ್ಲಿ ನಿತ್ಯ ಸಂಚರಿಸುವ 8 ರಿಂದ 10 ಲಕ್ಷ ಉದ್ಯೋಗಿಗಳು ಹಾಗೂ ವಾಹನ ಸವಾರರು ತೀವ್ರ ಟ್ರಾಫಿಕ್ ಕಿರಿಕಿರಿ ಎದುರಿಸಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಕಂಪನಿಗಳಿಗೆ ಶೇ. 50ರಷ್ಟು ‘ವರ್ಕ್ ಫ್ರಮ್ ಹೋಮ್’ (WFH) ನೀಡುವ ಕುರಿತು ಚರ್ಚಿಸಲು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

August Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ – Kannada News | August Weekly Horoscope 2026: Planetary Positions Impact All 12 Zodiac Signs

ಆಗಷ್ಟ್ ನ ಈ ವಾರದಲ್ಲಿ ​ಸಿಂಹ ರಾಶಿಯಲ್ಲಿ ಸೂರ್ಯ, ಮೌಢ್ಯ ಬುಧ, ಕೇತು, ​ಕನ್ಯಾದಲ್ಲಿ ನೀಚ ಶುಕ್ರ,​ಮಿಥುನದಲ್ಲಿ ಮಂಗಳ, ​ಕರ್ಕಾಟಕದಲ್ಲಿ ಉಚ್ಚ ಗುರು, ಮೀನದಲ್ಲಿ ವಕ್ರ ಶನಿ, ​ಕುಂಭದಲ್ಲಿ ವಕ್ರ ರಾಹು ಇದ್ದು ಅನೇಕ ಶುಭಫಲಗಳನ್ನು ಅನುಭವಿಸಬಹುದು. ಎಲ್ಲರಿಗೂ ಶುಭವಾಗಲಿ…

​ಮೇಷ ರಾಶಿ:

ಐದನೇ ಮನೆಯಲ್ಲಿ ಸೂರ್ಯ, ಬುಧ, ಕೇತು ಹಾಗೂ ೩ನೇ ಮನೆಯಲ್ಲಿ ಮಂಗಳ ಇರುವ ಕಾರಣ ಧೈರ್ಯ ಮತ್ತು ಪ್ರಭಾವ ಹೆಚ್ಚಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಒದಗಿಬರಲಿವೆ. ಆದರೆ ಸಂತಾನ ಅಥವಾ ಶಿಕ್ಷಣದ ವಿಷಯದಲ್ಲಿ ತುಸು ಗೊಂದಲವಿರಬಹುದು.

​ವೃಷಭ ರಾಶಿ:

ಎರಡನೇ ಮನೆಯಲ್ಲಿ ಮಂಗಳ ಮತ್ತು ೩ನೇ ಮನೆಯಲ್ಲಿ ಉಚ್ಚ ಗುರು ಇರುವುದರಿಂದ ಆರ್ಥಿಕವಾಗಿ ಲಾಭದಾಯಕ ದಿನಗಳು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ೫ನೇ ಮನೆಯ ಶುಕ್ರನಿಂದ ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

​ಮಿಥುನ ರಾಶಿ:

ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಕೋಪ ಮತ್ತು ಆತುರದ ನಿರ್ಧಾರಗಳನ್ನು ತಡೆಯುವುದು ಒಳಿತು. ೨ನೇ ಮನೆಯ ಉಚ್ಚ ಗುರು ಧನಲಾಭ ತರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲೇ ಉಚ್ಚ ಗುರುವಿರುವುದರಿಂದ ಅತ್ಯಂತ ಶುಭ ಫಲ. ಆಲೋಚನೆಗಳಲ್ಲಿ ಸ್ಪಷ್ಟತೆ, ಸಮಾಜದಲ್ಲಿ ಗೌರವ ಮತ್ತು ಆರೋಗ್ಯ ಸುಧಾರಿಸಲಿದೆ. ೧೨ನೇ ಮನೆಯಲ್ಲಿರುವ ಸೂರ್ಯ-ಕೇತು ವೆಚ್ಚಗಳನ್ನು ಹೆಚ್ಚಿಸಬಹುದು, ಜಾಗರೂಕರಾಗಿರಿ.

​ಸಿಂಹ ರಾಶಿ:

ನಿಮ್ಮ ರಾಶಿಯಲ್ಲಿ ಸೂರ್ಯ, ಬುಧ (ಅಸ್ತಂಗತ) ಮತ್ತು ಕೇತು ಸೇರಿರುವುದರಿಂದ ತಲೆನೋವು, ಮಾನಸಿಕ ಒತ್ತಡ ಉಂಟಾಗಬಹುದು. ೧೧ನೇ ಮನೆಯ ಮಂಗಳ ಹಾಗೂ ೧೨ನೇ ಮನೆಯ ಉಚ್ಚ ಗುರು ಲಾಭ ಮತ್ತು ಧಾರ್ಮಿಕ ಕಾರ್ಯಗಳಿಗೆ ಹಾದಿ ಮಾಡಿಕೊಡಲಿದ್ದಾರೆ.

​ಕನ್ಯಾ ರಾಶಿ :

ರಾಶ್ಯಾಧಿಪತಿ ಬುಧ ೧೨ನೇ ಮನೆಯಲ್ಲಿರುವುದರಿಂದ ಆಲಸ್ಯ ಕಾಡಬಹುದು. ಆದರೆ ನಿಮ್ಮ ರಾಶಿಯಲ್ಲೇ ಇರುವ ಶುಕ್ರ ಮತ್ತು ೧೧ನೇ ಮನೆಯ ಗುರು ಆರ್ಥಿಕ ಸಂಕಟಗಳನ್ನು ದೂರ ಮಾಡಿ ವೃತ್ತಿಯಲ್ಲಿ ಯಶಸ್ಸು ನೀಡಲಿದ್ದಾರೆ.

​ತುಲಾ ರಾಶಿ:

ಹತ್ತನೇ ಮನೆಯಲ್ಲಿ ಉಚ್ಚ ಗುರು ಹಾಗೂ ೯ನೇ ಮನೆಯಲ್ಲಿ ಮಂಗಳನಿರುವುದರಿಂದ ವೃತ್ತಿಜೀವನದಲ್ಲಿ ಅತ್ಯುತ್ತಮ ಬೆಳವಣಿಗೆ ಇರಲಿದೆ. ೧೧ನೇ ಮನೆಯಲ್ಲಿ ಸೂರ್ಯ-ಕೇತು ಇರುವುದರಿಂದ ಹಠಾತ್ ಧನಲಾಭ ಮತ್ತು ಕಾರ್ಯಸಿದ್ಧಿ ಸಾಧ್ಯ.

​ವೃಶ್ಚಿಕ ರಾಶಿ:

ಒಂಭತ್ತನೇ ಮನೆಯಲ್ಲಿ ಉಚ್ಚ ಗುರು ಹಾಗೂ ೫ನೇ ಮನೆಯಲ್ಲಿ ವಕ್ರ ಶನಿ ಇರುವುದರಿಂದ ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಬೆಂಬಲ ಸಿಗಲಿದೆ. ಪ್ರಯಾಣದಿಂದ ಅನುಕೂಲವಾಗಲಿದೆ.

​ಧನು ರಾಶಿ:

ನಿಮ್ಮ ರಾಶಿಯಲ್ಲಿ ಚಂದ್ರ ಹಾಗೂ ೮ನೇ ಮನೆಯಲ್ಲಿ ಉಚ್ಚ ಗುರು ಇರುವುದರಿಂದ ಸತ್ಫಲಗಳು ದೊರೆಯಲಿವೆ. ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾದರೂ ಧನಾಗಮನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ

​ಮಕರ ರಾಶಿ :

೭ನೇ ಮನೆಯಲ್ಲಿ ಉಚ್ಚ ಗುರು ಮತ್ತು ೬ನೇ ಮನೆಯಲ್ಲಿ ಮಂಗಳನಿರುವುದರಿಂದ ಶತ್ರುಗಳ ಮೇಲೆ ಜಯ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭದಾಯಕ ವಾತಾವರಣವಿರುತ್ತದೆ. ವೃತ್ತಿಯಲ್ಲಿ ಬಡ್ತಿ ಸಾಧ್ಯತೆ ಇದೆ.

​ಕುಂಭ ರಾಶಿ :

ರಾಶಿಯಲ್ಲಿ ರಾಹು ಮತ್ತು ೬ನೇ ಮನೆಯಲ್ಲಿ ಉಚ್ಚ ಗುರು ಇರುವುದರಿಂದ ಕಠಿಣ ಸವಾಲುಗಳನ್ನು ಸುಲಭವಾಗಿ ಎದುರಿಸುತ್ತೀರಿ. ೫ನೇ ಮನೆಯ ಮಂಗಳ ಬುದ್ಧಿಶಕ್ತಿಯನ್ನು ಹೆಚ್ಚಿಸಲಿದ್ದು, ಸಾಲದ ಬಾಧೆಯಿಂದ ಮುಕ್ತಿ ಸಿಗಲಿದೆ.

​ಮೀನ ರಾಶಿ:

ನಿಮ್ಮ ರಾಶಿಯಲ್ಲೇ ಲಗ್ನ ಮತ್ತು ವಕ್ರ ಶನಿ ಇರುವುದರಿಂದ ಜವಾಬ್ದಾರಿಗಳು ಹೆಚ್ಚಾಗಲಿವೆ. ಆದರೆ ೫ನೇ ಮನೆಯಲ್ಲಿರುವ ಉಚ್ಚ ಗುರು ಬುದ್ಧಿಮತ್ತೆ, ಸಂತಾನ ಸೌಖ್ಯ ಮತ್ತು ಉತ್ತಮ ಆದಾಯವನ್ನು ತಂದುಕೊಡಲಿದ್ದಾನೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದ್ರಾವಿಡ್ ‘ಗೋಡೆ’ಗೆ ಹೊಸ ವಾರಸುದಾರ: ಗಾಲೆಯಲ್ಲಿ ಪಡಿಕ್ಕಲ್ ಹೊಸ ಇತಿಹಾಸ! – Kannada News | Devdutt Padikkal Scripts History with Majestic Maiden Test Century

ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಕನ್ನಡಿಗ ದೇವದತ್ ಪಡಿಕ್ಕಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಡಿಕ್ಕಲ್ 134 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಸೆಂಚುರಿಯೊಂದಿಗೆ ಕಳೆದ 30 ವರ್ಷಗಳಲ್ಲಿ ವಿದೇಶಿ  ಟೆಸ್ಟ್ ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ ಭಾರತದ ಗಣ್ಯ ಬ್ಯಾಟರ್‌ಗಳ ಗಣ್ಯ ಪಟ್ಟಿಗೆ ಪಡಿಕ್ಕಲ್ ಕೂಡ ಸೇರ್ಪಡೆಯಾಗಿದ್ದಾರೆ. ಅದು ಸಹ 6ನೇ ಬ್ಯಾಟರ್ ಆಗಿ ಎಂಬುದು ವಿಶೇಷ.

  • ಕ್ರಿಕೆಟ್ ಜಗತ್ತಿನಲ್ಲಿ ರಾಹುಲ್ ದ್ರಾವಿಡ್ ಅವರನ್ನು ‘ದಿ ವಾಲ್’ (ಗೋಡೆ) ಎಂದೇ ಕರೆಯಲಾಗುತ್ತದೆ.
  • ಭಾರತ ತಂಡದ 3ನೇ ಕ್ರಮಾಂಕಕ್ಕೆ ರಾಹುಲ್ ದ್ರಾವಿಡ್ ಅಸಲಿ ವಾರಸುದಾರರಾಗಿದ್ದರು.
  • ಈಗ ಅದೇ 3ನೇ ಕ್ರಮಾಂಕದಲ್ಲಿ ಬಂದು ದೇವದತ್ ಪಡಿಕ್ಕಲ್ ಇತಿಹಾಸ ಬರೆದಿದ್ದಾರೆ.

ದಿಗ್ಗಜರ ಸಾಲಿನಲ್ಲಿ ಪಡಿಕ್ಕಲ್:

ಟೀಮ್ ಇಂಡಿಯಾ ಪರ ಕಳೆದ 30 ವರ್ಷಗಳಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸೆಂಚುರಿ ಸಿಡಿಸಿರುವುದು ಕೇವಲ 6 ಬ್ಯಾಟರ್​ಗಳು ಮಾತ್ರ. ಅಂದರೆ ಪಡಿಕ್ಕಲ್​ಗೂ ಮುನ್ನ ಕೇವಲ ಐವರು ಮಾತ್ರ ಈ ಸಾಧನೆ ಮಾಡಿದ್ದರು. ಆ ಬ್ಯಾಟರ್​ಗಳು ಯಾರೆಂದರೆ…

  1. ರಾಹುಲ್ ದ್ರಾವಿಡ್: ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್‌ಗಳಲ್ಲಿ ಭಾರತದ ತಡೆಗೋಡೆಯಾಗಿ ನಿಂತು ಭರ್ಜರಿ ಶತಕಗಳನ್ನು ಸಿಡಿಸಿದ ಮಾಸ್ಟರ್ ಕ್ಲಾಸ್ ಬ್ಯಾಟರ್.
  2. ಚೇತೇಶ್ವರ್ ಪೂಜಾರ: ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಶ್ರೀಲಂಕಾಗಳಲ್ಲಿ ಮ್ಯಾರಥಾನ್ ಇನ್ನಿಂಗ್ಸ್ ಆಡಿ ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವುಗಳನ್ನು ತಂದುಕೊಟ್ಟ ಆಧುನಿಕ ತಡೆಗೋಡೆ.
  3. ಸೌರವ್ ಗಂಗೂಲಿ: ತಮ್ಮ ಆರಂಭಿಕ ಟೆಸ್ಟ್ ವೃತ್ತಿಜೀವನದಲ್ಲಿ ವಿದೇಶಿ ನೆಲದಲ್ಲಿ 3ನೇ ಕ್ರಮಾಂಕದಲ್ಲಿ ಬಂದು ಸ್ಮರಣೀಯ ರನ್ ಕಲೆಹಾಕಿದ ಬ್ಯಾಟರ್​.
  4. ವಿ.ವಿ.ಎಸ್. ಲಕ್ಷ್ಮಣ್: ಸಿಡ್ನಿಯಂತಹ ಕಠಿಣ ಪಿಚ್‌ಗಳಲ್ಲಿ 3ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದು ಅತ್ಯದ್ಭುತ ಶತಕ ಬಾರಿಸಿದ ಕಲಾತ್ಮಕ ದಾಂಡಿಗ.
  5. ಅಜಿಂಕ್ಯ ರಹಾನೆ: ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ನ್ಯೂಝಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ 3ನೇ ಕ್ರಮಾಂಕದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಕ್ಲಾಸ್ ಆಟಗಾರ.
  6. ದೇವದತ್ ಪಡಿಕ್ಕಲ್: ಗಾಲೆ ಮೈದಾನದಲ್ಲಿ ಲಂಕಾ ಬೌಲರ್‌ಗಳನ್ನು ಕಾಡಿ ಬೇಡಿ ಅಜೇಯ 131* ರನ್ ಸಿಡಿಸಿ ಈ ದಿಗ್ಗಜರ ಪಟ್ಟಿಗೆ ಸೇರಿದ ಧ್ರುವ ತಾರೆ.

ಅಂದರೆ ಕಳೆದ ಮೂರು ದಶಕಗಳಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸೆಂಚುರಿ ಬಾರಿಸಿದ 6ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ದೇವದತ್ ಪಡಿಕ್ಕಲ್ ತಮ್ಮದಾಗಿಸಿಕೊಂಡಿದ್ದಾರೆ.

ಪಡಿಕ್ಕಲ್ ಹೆಸರಿಗೆ ವಿಶೇಷ ದಾಖಲೆ:

ದೇವದತ್ ಪಡಿಕ್ಕಲ್ ಅವರ ಈ ಇನ್ನಿಂಗ್ಸ್ ಕೇವಲ ಶತಕಕ್ಕೆ ಸೀಮಿತವಾಗಿರಲಿಲ್ಲ, ಅದರ ಜೊತೆಗೆ ಹಲವು ಅಪರೂಪದ ದಾಖಲೆಗಳು ಸೃಷ್ಟಿಯಾದವು:

  • ಸ್ವಾತಂತ್ರ್ಯ ದಿನದ ಶತಕ: ಆಗಸ್ಟ್ 15 ರಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಡಿಕ್ಕಲ್ ಪಾತ್ರರಾಗಿದ್ದಾರೆ.
  • 21ನೇ ಶತಮಾನದ ಅಪರೂಪದ ಎಡಗೈ ಸಾಧನೆ: 21ನೇ ಶತಮಾನದಲ್ಲಿ ಭಾರತದ ಪರ 3ನೇ ಕ್ರಮಾಂಕದಲ್ಲಿ ವಿದೇಶಿ ನೆಲದಲ್ಲಿ ಶತಕ ಬಾರಿಸಿದ ಕೇವಲ ಎರಡನೇ ಎಡಗೈ ಬ್ಯಾಟರ್ ಪಡಿಕ್ಕಲ್. ಇದಕ್ಕೂ ಮುನ್ನ 2002 ರಲ್ಲಿ ಸೌರವ್ ಗಂಗೂಲಿ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ: ಮಹಾತ್ಮ ಗಾಂಧಿ ಸ್ಮರಣೆಗಾಗಿ ಬದಲಾಗಲಿದೆ ‘ವಿಶ್ವಕಪ್‌’ ಮುಹೂರ್ತ!

ಒಟ್ಟಾರೆಯಾಗಿ ಹೇಳುವುದಾದರೆ, ದೇವದತ್ ಪಡಿಕ್ಕಲ್ ಅವರ ಈ ಅದ್ಭುತ ಇನ್ನಿಂಗ್ಸ್ ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಯುಗದ ಆರಂಭವನ್ನು ಸಾರಿದೆ. ಕಳೆದ ಎರಡು ವರ್ಷಗಳಿಂದ ಮೂರನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟರ್ ಸಿಗದೆ ಪರದಾಡುತ್ತಿದ್ದ ಭಾರತ ತಂಡಕ್ಕೆ, ಈ ಕನ್ನಡಿಗ ತನ್ನ ಚೊಚ್ಚಲ ಶತಕದ ಮೂಲಕ ಅತ್ಯಂತ ಭರವಸೆಯ ಉತ್ತರ ನೀಡಿದ್ದಾರೆ.

Source link

ಚಾಮರಾಜನಗರದಲ್ಲಿ ಗುಂಡಿನ ದಾಳಿ: ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ! – Kannada News | Chamarajanagara Shootout: Forest Officials Face Charges Amid Public Protests

ಚಾಮರಾಜನಗರ, ಆಗಸ್ಟ್​​ 16: ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣ ಸಂಬಂಧ ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಹನೂರು ಪೊಲೀಸ್ ಠಾಣೆ ಎದುರು ರಾತ್ರಿಯಿಡೀ ಪ್ರತಿಭಟನೆ ನಡೆಸಲಾಗಿದೆ. ಮೂವರನ್ನು ಹತ್ಯೆಗೈದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಹತ್ಯೆಯಾದವರ ಕುಟುಂಬ ಸದಸ್ಯರು, ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಸಂಬಂಧ ಚಾಮರಾಜನಗರ ಜಿಲ್ಲೆ ಹನೂರು ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ. ಬಿಎನ್‌ಎಸ್‌ ಸೆಕ್ಷನ್‌ 103(1)ರಡಿ ಕೇಸ್​​ ಮಾಡಲಾಗಿದೆಯಾದರೂ ನಿರ್ದಿಷ್ಟ ಹೆಸರು ನಮೂದಿಸದೇ ಅರಣ್ಯ ಅಧಿಕಾರಿಗಳು ಅಂತಾ ಮೊಕದ್ದಮೆ ದಾಖಲಿಸಿರೋದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಹಸುಗಳನ್ನು ಹುಡುಕಿಕೊಂಡು ಅರಣ್ಯಕ್ಕೆ ಹೋಗಿದ್ದಾಗ ಕೊಲೆ ಎಂದು ಮೃತ ಌಂಟನಿಸ್ವಾಮಿ ಪತ್ನಿ ಲೂರ್ದಾಮೇರಿ ದೂರು ನೀಡಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದ್ರಾವಿಡ್ ‘ಗೋಡೆ’ಗೆ ಹೊಸ ವಾರಸುದಾರ: ಗಾಲೆಯಲ್ಲಿ ಪಡಿಕ್ಕಲ್ ಹೊಸ ಇತಿಹಾಸ! – Kannada News | Devdutt padikkal scripts history with majestic maiden test century

ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಕನ್ನಡಿಗ ದೇವದತ್ ಪಡಿಕ್ಕಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಡಿಕ್ಕಲ್ 134 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಸೆಂಚುರಿಯೊಂದಿಗೆ ಕಳೆದ 30 ವರ್ಷಗಳಲ್ಲಿ ವಿದೇಶಿ  ಟೆಸ್ಟ್ ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ ಭಾರತದ ಗಣ್ಯ ಬ್ಯಾಟರ್‌ಗಳ ಗಣ್ಯ ಪಟ್ಟಿಗೆ ಪಡಿಕ್ಕಲ್ ಕೂಡ ಸೇರ್ಪಡೆಯಾಗಿದ್ದಾರೆ. ಅದು ಸಹ 6ನೇ ಬ್ಯಾಟರ್ ಆಗಿ ಎಂಬುದು ವಿಶೇಷ.

  • ಕ್ರಿಕೆಟ್ ಜಗತ್ತಿನಲ್ಲಿ ರಾಹುಲ್ ದ್ರಾವಿಡ್ ಅವರನ್ನು ‘ದಿ ವಾಲ್’ (ಗೋಡೆ) ಎಂದೇ ಕರೆಯಲಾಗುತ್ತದೆ.
  • ಭಾರತ ತಂಡದ 3ನೇ ಕ್ರಮಾಂಕಕ್ಕೆ ರಾಹುಲ್ ದ್ರಾವಿಡ್ ಅಸಲಿ ವಾರಸುದಾರರಾಗಿದ್ದರು.
  • ಈಗ ಅದೇ 3ನೇ ಕ್ರಮಾಂಕದಲ್ಲಿ ಬಂದು ದೇವದತ್ ಪಡಿಕ್ಕಲ್ ಇತಿಹಾಸ ಬರೆದಿದ್ದಾರೆ.

ದಿಗ್ಗಜರ ಸಾಲಿನಲ್ಲಿ ಪಡಿಕ್ಕಲ್:

ಟೀಮ್ ಇಂಡಿಯಾ ಪರ ಕಳೆದ 30 ವರ್ಷಗಳಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸೆಂಚುರಿ ಸಿಡಿಸಿರುವುದು ಕೇವಲ 6 ಬ್ಯಾಟರ್​ಗಳು ಮಾತ್ರ. ಅಂದರೆ ಪಡಿಕ್ಕಲ್​ಗೂ ಮುನ್ನ ಕೇವಲ ಐವರು ಮಾತ್ರ ಈ ಸಾಧನೆ ಮಾಡಿದ್ದರು. ಆ ಬ್ಯಾಟರ್​ಗಳು ಯಾರೆಂದರೆ…

  1. ರಾಹುಲ್ ದ್ರಾವಿಡ್: ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್‌ಗಳಲ್ಲಿ ಭಾರತದ ತಡೆಗೋಡೆಯಾಗಿ ನಿಂತು ಭರ್ಜರಿ ಶತಕಗಳನ್ನು ಸಿಡಿಸಿದ ಮಾಸ್ಟರ್ ಕ್ಲಾಸ್ ಬ್ಯಾಟರ್.
  2. ಚೇತೇಶ್ವರ್ ಪೂಜಾರ: ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಶ್ರೀಲಂಕಾಗಳಲ್ಲಿ ಮ್ಯಾರಥಾನ್ ಇನ್ನಿಂಗ್ಸ್ ಆಡಿ ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವುಗಳನ್ನು ತಂದುಕೊಟ್ಟ ಆಧುನಿಕ ತಡೆಗೋಡೆ.
  3. ಸೌರವ್ ಗಂಗೂಲಿ: ತಮ್ಮ ಆರಂಭಿಕ ಟೆಸ್ಟ್ ವೃತ್ತಿಜೀವನದಲ್ಲಿ ವಿದೇಶಿ ನೆಲದಲ್ಲಿ 3ನೇ ಕ್ರಮಾಂಕದಲ್ಲಿ ಬಂದು ಸ್ಮರಣೀಯ ರನ್ ಕಲೆಹಾಕಿದ ಬ್ಯಾಟರ್​.
  4. ವಿ.ವಿ.ಎಸ್. ಲಕ್ಷ್ಮಣ್: ಸಿಡ್ನಿಯಂತಹ ಕಠಿಣ ಪಿಚ್‌ಗಳಲ್ಲಿ 3ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದು ಅತ್ಯದ್ಭುತ ಶತಕ ಬಾರಿಸಿದ ಕಲಾತ್ಮಕ ದಾಂಡಿಗ.
  5. ಅಜಿಂಕ್ಯ ರಹಾನೆ: ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ನ್ಯೂಝಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ 3ನೇ ಕ್ರಮಾಂಕದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಕ್ಲಾಸ್ ಆಟಗಾರ.
  6. ದೇವದತ್ ಪಡಿಕ್ಕಲ್: ಗಾಲೆ ಮೈದಾನದಲ್ಲಿ ಲಂಕಾ ಬೌಲರ್‌ಗಳನ್ನು ಕಾಡಿ ಬೇಡಿ ಅಜೇಯ 131* ರನ್ ಸಿಡಿಸಿ ಈ ದಿಗ್ಗಜರ ಪಟ್ಟಿಗೆ ಸೇರಿದ ಧ್ರುವ ತಾರೆ.

ಅಂದರೆ ಕಳೆದ ಮೂರು ದಶಕಗಳಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸೆಂಚುರಿ ಬಾರಿಸಿದ 6ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ದೇವದತ್ ಪಡಿಕ್ಕಲ್ ತಮ್ಮದಾಗಿಸಿಕೊಂಡಿದ್ದಾರೆ.

ಪಡಿಕ್ಕಲ್ ಹೆಸರಿಗೆ ವಿಶೇಷ ದಾಖಲೆ:

ದೇವದತ್ ಪಡಿಕ್ಕಲ್ ಅವರ ಈ ಇನ್ನಿಂಗ್ಸ್ ಕೇವಲ ಶತಕಕ್ಕೆ ಸೀಮಿತವಾಗಿರಲಿಲ್ಲ, ಅದರ ಜೊತೆಗೆ ಹಲವು ಅಪರೂಪದ ದಾಖಲೆಗಳು ಸೃಷ್ಟಿಯಾದವು:

  • ಸ್ವಾತಂತ್ರ್ಯ ದಿನದ ಶತಕ: ಆಗಸ್ಟ್ 15 ರಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಡಿಕ್ಕಲ್ ಪಾತ್ರರಾಗಿದ್ದಾರೆ.
  • 21ನೇ ಶತಮಾನದ ಅಪರೂಪದ ಎಡಗೈ ಸಾಧನೆ: 21ನೇ ಶತಮಾನದಲ್ಲಿ ಭಾರತದ ಪರ 3ನೇ ಕ್ರಮಾಂಕದಲ್ಲಿ ವಿದೇಶಿ ನೆಲದಲ್ಲಿ ಶತಕ ಬಾರಿಸಿದ ಕೇವಲ ಎರಡನೇ ಎಡಗೈ ಬ್ಯಾಟರ್ ಪಡಿಕ್ಕಲ್. ಇದಕ್ಕೂ ಮುನ್ನ 2002 ರಲ್ಲಿ ಸೌರವ್ ಗಂಗೂಲಿ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ: ಮಹಾತ್ಮ ಗಾಂಧಿ ಸ್ಮರಣೆಗಾಗಿ ಬದಲಾಗಲಿದೆ ‘ವಿಶ್ವಕಪ್‌’ ಮುಹೂರ್ತ!

ಒಟ್ಟಾರೆಯಾಗಿ ಹೇಳುವುದಾದರೆ, ದೇವದತ್ ಪಡಿಕ್ಕಲ್ ಅವರ ಈ ಅದ್ಭುತ ಇನ್ನಿಂಗ್ಸ್ ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಯುಗದ ಆರಂಭವನ್ನು ಸಾರಿದೆ. ಕಳೆದ ಎರಡು ವರ್ಷಗಳಿಂದ ಮೂರನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟರ್ ಸಿಗದೆ ಪರದಾಡುತ್ತಿದ್ದ ಭಾರತ ತಂಡಕ್ಕೆ, ಈ ಕನ್ನಡಿಗ ತನ್ನ ಚೊಚ್ಚಲ ಶತಕದ ಮೂಲಕ ಅತ್ಯಂತ ಭರವಸೆಯ ಉತ್ತರ ನೀಡಿದ್ದಾರೆ.

Source link

Onam 2026: ರಾಜ ಮಹಾಬಲಿಯ ಸ್ವಾಗತಕ್ಕೆ ಸಜ್ಜಾದ ಕೇರಳ; ಇಂದಿನಿಂದ 10 ದಿನಗಳ ವರೆಗೆ ಓಣಂ ಸಂಭ್ರಮ – Kannada News | Onam: Kerala’s Vibrant Harvest Festival History, Traditions and Celebrations

ದಕ್ಷಿಣ ಭಾರತದ ಕರಾವಳಿ ರಾಜ್ಯವಾದ ಕೇರಳದಲ್ಲಿ ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವ ಪ್ರಮುಖ ಸುಗ್ಗಿ ಹಬ್ಬವೇ ಓಣಂ. ಮಲಯಾಳಂ ಪಂಚಾಂಗದ ‘ಚಿಂಗಂ’ ಮಾಸದಲ್ಲಿ ಬರುವ ಈ ಹಬ್ಬವು ಧರ್ಮ, ಜಾತಿ ಅಥವಾ ವರ್ಗಗಳ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಜಾನಪದ ಹಾಗೂ ಸಾಂಸ್ಕೃತಿಕ ಮಹೋತ್ಸವವಾಗಿದೆ. ನಾಡಿನ ಸಮೃದ್ಧಿ, ಸೌಹಾರ್ದತೆ ಮತ್ತು ಸಾಂಪ್ರದಾಯಿಕ ಪರಂಪರೆಯನ್ನು ಎತ್ತಿಹಿಡಿಯುವ ಈ ಸಂಭ್ರಮವು ಒಟ್ಟು ಹತ್ತು ದಿನಗಳ ಕಾಲ ವಿಜೃಂಭಿಸುತ್ತದೆ.

‘ಅಥಂ’ ನಕ್ಷತ್ರದೊಂದಿಗೆ ಓಣಂ ಸಂಭ್ರಮಕ್ಕೆ ಅಧಿಕೃತ ಚಾಲನೆ:

ಕೇರಳದ ಅತ್ಯಂತ ದೊಡ್ಡ ಹಾಗೂ ವರ್ಣರಂಜಿತ ಸುಗ್ಗಿ ಹಬ್ಬವಾದ ಓಣಂ ಆಚರಣೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಸಾಂಪ್ರದಾಯಿಕ ‘ಅಥಂ’ (ಹಸ್ತಾ ನಕ್ಷತ್ರ) ನಕ್ಷತ್ರದ ಆಗಮನದೊಂದಿಗೆ ಆಗಸ್ಟ್ 16ರಿಂದ ರಾಜ್ಯಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿದೆ.

10 ದಿನಗಳ ಸಂಭ್ರಮಕ್ಕೆ ಚಾಲನೆ ನೀಡಿದ ಕೇರಳ ಪ್ರವಾಸೋದ್ಯಮ:

ಕೇರಳ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಆಗಸ್ಟ್ 16ರ ಅಥಂ ದಿನದಿಂದ ಪ್ರಾರಂಭವಾಗುವ ಈ ಆಚರಣೆಯು 10 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಈ ಹಬ್ಬದ ಆಚರಣೆಯು ಆಗಸ್ಟ್ 26ರಂದು ನೆರವೇರಲಿರುವ ಪ್ರಮುಖ ದಿನವಾದ ‘ತಿರುಓಣಂ’ (Thiruvonam) ನೊಂದಿಗೆ ಸಮಾಪ್ತಿಯಾಗಲಿದೆ.

ಪೌರಾಣಿಕ ಹಿನ್ನೆಲೆ: ಪ್ರಜಾವತ್ಸಲ ಚಕ್ರವರ್ತಿ ಮಹಾಬಲಿಯ ಕಥೆ:

ಓಣಂ ಹಬ್ಬದ ಹಿಂದೆ ಪ್ರಜಾವತ್ಸಲ ಹಾಗೂ ದಯಾಳುವಾಗಿದ್ದ ಅಸುರ ರಾಜ ಮಹಾಬಲಿಯ ಪೌರಾಣಿಕ ಕಥೆಯಿದೆ. ಮಹಾಬಲಿಯ ಆಡಳಿತದಲ್ಲಿ ಪ್ರಜೆಗಳು ಅತ್ಯಂತ ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ಬಾಳುತ್ತಿದ್ದರು. ಆತನ ಕೀರ್ತಿ ಮತ್ತು ಪ್ರಭಾವ ಹೆಚ್ಚಾಗುತ್ತಿದ್ದಂತೆ, ದೇವತೆಗಳ ವಿನಂತಿಯ ಮೇರೆಗೆ ಭಗವಾನ್ ವಿಷ್ಣುವು ವಾಮನ ರೂಪ ತಾಳಿ ಬಂದನು. ವಾಮನನು ದಾನವಾಗಿ ಮೂರು ಹೆಜ್ಜೆ ಜಾಗವನ್ನು ಕೇಳಿ, ಭೂಮಿ ಮತ್ತು ಆಕಾಶವನ್ನು ಆವರಿಸಿದಾಗ ಮೂರನೇ ಹೆಜ್ಜೆಗೆ ಮಹಾಬಲಿ ತನ್ನ ತಲೆಯನ್ನೇ ಒಡ್ಡಿದನು. ವಾಮನನು ಮಹಾಬಲಿಯನ್ನು ಪಾತಾಳಕ್ಕೆ ತಳ್ಳಿದರೂ, ಆತನ ಭಕ್ತಿಗೆ ಮೆಚ್ಚಿ ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ನೋಡಲು ಭೂಮಿಗೆ ಬರಲು ವರ ನೀಡಿದನು. ಈ ರೀತಿ ರಾಜ ಮಹಾಬಲಿ ಮರಳಿ ತಮ್ಮ ರಾಜ್ಯಕ್ಕೆ ಬರುವ ನೆನಪಿಗಾಗಿಯೇ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ಹತ್ತು ದಿನಗಳ ಸಾಂಪ್ರದಾಯಿಕ ಪಯಣ:

ಓಣಂ ಆಚರಣೆಯು ‘ಅಥಂ’ ನಕ್ಷತ್ರದಿಂದ ಪ್ರಾರಂಭವಾಗಿ 10ನೇ ದಿನದ ‘ತಿರುಓಣಂ’ ನಕ್ಷತ್ರದವರೆಗೆ ಸಾಗುತ್ತದೆ. ಮೊದಲ ದಿನ ಮನೆಗಳ ಅಂಗಳದಲ್ಲಿ ಸಣ್ಣದಾಗಿ ‘ಪೂಕಳಂ’ (ಹೂವಿನ ರಂಗೋಲಿ) ರಚಿಸಲು ಆರಂಭಿಸಲಾಗುತ್ತದೆ. ನಂತರದ ದಿನಗಳಲ್ಲಿ ಮನೆ ಸ್ವಚ್ಛಗೊಳಿಸಿ, ರಂಗೋಲಿಗೆ ಮತ್ತಷ್ಟು ಹೂವುಗಳನ್ನು ಸೇರಿಸುತ್ತಾ ಹಬ್ಬದ ಹೊಸ ಉಡುಪುಗಳನ್ನು (ಓಣಕೋಡಿ) ಖರೀದಿಸಲಾಗುತ್ತದೆ. ದಿನ ಕಳೆಯುತ್ತಿದ್ದಂತೆ ಅಡುಗೆಗೆ ತಯಾರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿ, 10ನೇ ದಿನವಾದ ‘ತಿರುಓಣಂ’ ನಂದು ರಾಜ ಮಹಾಬಲಿಯನ್ನು ಮಹಾ ಸಂಭ್ರಮದಿಂದ ಸ್ವಾಗತಿಸಲಾಗುತ್ತದೆ.

ಓಣಂ ಹಬ್ಬದ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಗಳು:

ಓಣಂ ಬರಿ ಆಚರಣೆಯಷ್ಟೇ ಅಲ್ಲ, ಅದು ಕೇರಳದ ವಿವಿಧ ಸಾಂಪ್ರದಾಯಿಕ ಕಲೆ ಹಾಗೂ ಸಂಸ್ಕೃತಿಯ ಸಂಗಮವಾಗಿದೆ. ಹತ್ತು ದಿನಗಳ ಕಾಲ ಪ್ರತಿಯೊಂದು ಮನೆಯ ಅಂಗಳದಲ್ಲೂ ಹೊಸ ಬಣ್ಣ ಬಣ್ಣದ ಹೂವುಗಳಿಂದ ಸಿದ್ಧಪಡಿಸುವ ‘ಪೂಕಳಂ’ ಹೂವಿನ ರಂಗೋಲಿ ಕಂಗೊಳಿಸುತ್ತದೆ. ಜೊತೆಗೆ ಬಾಳೆ ಎಲೆಯಲ್ಲಿ ಬಡಿಸುವ ಸಾಂಪ್ರದಾಯಿಕ ಸಸ್ಯಾಹಾರಿ ಊಟವಾದ ‘ಓಣಂ ಸದ್ಯ’, ಪಂಪಾ ನದಿಯಲ್ಲಿ ನಡೆಯುವ ಜಗತ್ಪ್ರಸಿದ್ಧ ‘ಸರ್ಪ ದೋಣಿ ಓಟ’ (ವಲ್ಲಂಕಳಿ) ಮತ್ತು ತೃಶ್ಶೂರ್‌ನಲ್ಲಿ ನಡೆಯುವ ಸಾಂಪ್ರದಾಯಿಕ ‘ಹುಲಿ ವೇಷ’ (ಪುಲಿಕಳಿ) ನೃತ್ಯಗಳು ಈ ಹಬ್ಬದ ಮುಖ್ಯ ಆಕರ್ಷಣೆಗಳಾಗಿವೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version