IPL 2026: RCB ಗ್ರೀನ್ ಜೆರ್ಸಿ ಧರಿಸಿ ಕಣಕ್ಕಿಳಿಯುವುದೇಕೆ? ಇಲ್ಲಿದೆ ಉತ್ತರ – Kannada News | Why RCB wear green jersey in ipl

IPL 2026: ಐಪಿಎಲ್ ಅಂದಾಕ್ಷಣ ಕಣ್ಣಮುಂದೆ ಬರುವುದು ಕೆಂಪು ಮತ್ತು ಬಂಗಾರದ ಬಣ್ಣದ ಜೆರ್ಸಿಯಲ್ಲಿ ಮಿಂಚುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಆದರೆ, ಪ್ರತಿ ವರ್ಷ ಒಂದು ಪಂದ್ಯದಲ್ಲಿ ಆರ್‌ಸಿಬಿ ತನ್ನ ಸಾಂಪ್ರದಾಯಿಕ ಬಣ್ಣವನ್ನು ಬದಿಗಿಟ್ಟು ‘ಹಸಿರು’ ಉಡುಗೆಯಲ್ಲಿ ಕಣಕ್ಕಿಳಿಯುತ್ತದೆ. ಇದು ಕೇವಲ ಫ್ಯಾಷನ್ ಅಥವಾ ಆಕರ್ಷಣೆಗೆ ಅಲ್ಲ, ಬದಲಾಗಿ ಇದೊಂದು ಗ್ರೋ ಗ್ರೀನ್ ಅಭಿಯಾನ. ಏನಿದು ಅಭಿಯಾನ? ಇದರ ಉದ್ದೇಶವೇನು? ಇಲ್ಲಿದೆ ಮಾಹಿತಿ

ಏನಿದು ಗೋ ಗ್ರೀನ್ ಅಭಿಯಾನ?

2011ರಿಂದ ಆರ್‌ಸಿಬಿ ಆರಂಭಿಸಿದ ಈ ‘ಗೊ ಗ್ರೀನ್’ (Go Green) ಅಭಿಯಾನವು ಪರಿಸರ ಸಂರಕ್ಷಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಈ ಜೆರ್ಸಿಯು ಕೇವಲ ಬಣ್ಣದಿಂದ ಮಾತ್ರ ಹಸಿರಲ್ಲ, ಅದರ ತಯಾರಿಕೆಯಲ್ಲೂ ಪರಿಸರ ಸ್ನೇಹಿ ತಂತ್ರಜ್ಞಾನ ಅಡಗಿದೆ.

ಮರುಬಳಕೆಯ ಜೆರ್ಸಿ: ಈ ಬಾರಿಯ ಹಸಿರು ಜೆರ್ಸಿಯನ್ನು ಮೈದಾನ ಮತ್ತು ಸುತ್ತಮುತ್ತ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಹಳೆಯ ಬಟ್ಟೆಗಳನ್ನು ಮರುಬಳಕೆಮಾಡಿ ತಯಾರಿಸಲಾಗಿದೆ. ಇದು ‘ತ್ಯಾಜ್ಯದಿಂದ ಸಂಪತ್ತು’ ಎಂಬ ಸಂದೇಶ ಸಾರುತ್ತಿದೆ.

ಸಸಿಗಳನ್ನು ನೀಡುವ ಸಂಪ್ರದಾಯ: ಟಾಸ್ ವೇಳೆ ಆರ್‌ಸಿಬಿ ನಾಯಕ ಎದುರಾಳಿ ತಂಡದ ನಾಯಕನಿಗೆ ಸ್ಮರಣಿಕೆಯ ಬದಲು ಸಣ್ಣ ಸಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಹಸಿರೀಕರಣಕ್ಕೆ ಒತ್ತು ನೀಡುತ್ತಾರೆ.

ಕಾರ್ಬನ್ ನ್ಯೂಟ್ರಲ್ ತಂಡ: ಆರ್‌ಸಿಬಿ ಜಗತ್ತಿನ ಮೊದಲ ‘ಕಾರ್ಬನ್ ನ್ಯೂಟ್ರಲ್’ ಟಿ20 ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ರೀಡಾಂಗಣದಲ್ಲಿ ಬಳಸುವ ಸೌರಶಕ್ತಿ ಮತ್ತು ತ್ಯಾಜ್ಯ ವಿಲೇವಾರಿ ಕ್ರಮಗಳು ಇದಕ್ಕೆ ಸಾಕ್ಷಿ.

ಅಭಿಮಾನಿಗಳಿಗೆ ಕರೆ: ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳು ಸಾರ್ವಜನಿಕ ಸಾರಿಗೆ (ಮೆಟ್ರೋ ಅಥವಾ ಬಸ್) ಬಳಸಿ ಇಂಧನ ಉಳಿಸುವಂತೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ತಂಡವು ಮನವಿ ಮಾಡಿದೆ.

ಇದನ್ನೂ ಓದಿ: ಗ್ರೀನ್​ ಸಿಕ್ಸ್​ಗೆ ಕಾರ್ ಡೆಂಟ್: ಸಿಕ್ತು 5 ಲಕ್ಷ ರೂ. ದೇಣಿಗೆ..!

ಮೈದಾನದಲ್ಲಿ ಹಸಿರು ಪಡೆ:

ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಆಟಗಾರರು ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯವು ಸಂಜೆ 3.30 ಕ್ಕೆ ಶುರುವಾಗಲಿದ್ದು, ಟಾಸ್ ಪ್ರಕ್ರಿಯೆ 3 ಗಂಟೆಗೆ ನಡೆಯಲಿದೆ. ಇದೇ ವೇಳೆ ಗೋ ಗ್ರೀನ್ ಅಭಿಯಾನದ ಭಾಗವಾಗಿ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಿಗೆ ಸಸಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ.

Source link

ಗ್ರೀನ್​ ಸಿಕ್ಸ್​ಗೆ ಕಾರ್ ಡೆಂಟ್: ಸಿಕ್ತು 5 ಲಕ್ಷ ರೂ. ದೇಣಿಗೆ..! – Kannada News | Cameron Green’s SIX Puts TATA Sierra Car Dent

IPL 2026: ಐಪಿಎಲ್ ಅಂಗಳದಲ್ಲಿ ಕೊನೆಗೂ ಕ್ಯಾಮರೋನ್ ಗ್ರೀನ್ ಅವರ ಬ್ಯಾಟ್ ಸದ್ದು ಮಾಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್​ ವಿರುದ್ಧದ ಪಂದ್ಯದಲ್ಲಿ ಗ್ರೀನ್ ಸಿಡಿಸಿದ ಸಿಕ್ಸರ್ ಕೇವಲ ಬೌಂಡರಿ ಗೆರೆ ದಾಟಲಿಲ್ಲ, ಬದಲಿಗೆ ಕ್ರೀಡಾಂಗಣದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಹೊಸ ಟಾಟಾ ಸಿಯೆರಾ ಕಾರಿನ ಮೇಲೆಯೇ ಬಿದ್ದಿದೆ! ಈ ಅಮೋಘ ಸಿಕ್ಸರ್‌ನಿಂದಾಗಿ 5 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ.

ಈ ಪಂದ್ಯದ 13ನೇ ಓವರ್‌ನಲ್ಲಿ ಗುಜರಾತ್ ವೇಗಿ ಅಶೋಕ್ ಶರ್ಮಾ ಎಸೆದ ಎಸೆತವನ್ನು ಕೆಕೆಆರ್ ದಾಂಡಿಗ ಕ್ಯಾಮರೋನ್ ಗ್ರೀನ್ ಅದ್ಭುತವಾಗಿ ಡೀಪ್ ಮಿಡ್-ವಿಕೆಟ್ ಕಡೆಗೆ ಫ್ಲಿಕ್ ಮಾಡಿದರು. ಗಾಳಿಯಲ್ಲಿ ತೇಲಿಬಂದ ಚೆಂಡು ನೇರವಾಗಿ ಬೌಂಡರಿ ಲೈನ್‌ ಆಚೆಗಿದ್ದ ಕಾರಿನ ಡೋರಿನ ಭಾಗಕ್ಕೆ ಅಪ್ಪಳಿಸಿತು. ಈ ಹೊಡೆತದ ತೀವ್ರತೆಗೆ ಕಾರಿನ ಬಾಡಿ ಮೇಲೆ ಗುಳಿ ಬಿದ್ದಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

₹5 ಲಕ್ಷ ದೇಣಿಗೆ:

ಈ ಒಂದು ಸಿಕ್ಸರ್​ನಿಂದ 5 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ ಎಂದರೆ ನಂಬಲೇಬೇಕು. ಹೌದು,  ಟಾಟಾ ಕಂಪನಿಯು, ಬ್ಯಾಟರ್‌ಗಳು ಹೊಡೆಯುವ ಚೆಂಡು ನೇರವಾಗಿ ಕಾರಿಗೆ ಬಡಿದರೆ, ತಳಮಟ್ಟದ ಕ್ರಿಕೆಟ್ ಅಭಿವೃದ್ಧಿಗಾಗಿ  5 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವುದಾಗಿ ತಿಳಿಸಿದೆ. ಅದರಂತೆ ಇದೀಗ ಗ್ರೀನ್ ಅವರ ಈ ಭರ್ಜರಿ ಸಿಕ್ಸರ್​ನಿಂದ ತಳಮಟ್ಟದ ಕ್ರಿಕೆಟ್ ಅಭಿವೃದ್ಧಿಗೆ 5 ಲಕ್ಷ ರೂ. ಸಿಗಲಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 180 ರನ್ ಕಲೆಹಾಕಿದ್ದರು. ಈ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡವು 19.4 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಜಯ ಸಾಧಿಸಿದೆ.

Source link

ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ ದೋಖಾ! ‘ಕ್ರಿಸ್ಟಲ್ ಎಐ’ ಕಂಪನಿಯ ಎಂ.ಡಿ ರಾಜೇಶ್ ಕಾಮತ್ ಪೊಲೀಸರ ವಶಕ್ಕೆ – Kannada News | Robot Trading Scam Bengaluru: Crystal AI MD Rajesh Kamath Busted in hundred of crore Rs Scam

ಕ್ರಿಸ್ಟಲ್ ಎಐ ಕಂಪನಿಯ ಎಂ.ಡಿ ರಾಜೇಶ್ ಕಾಮತ್

ಬೆಂಗಳೂರು, ಏಪ್ರಿಲ್ 18: ನಗರದಲ್ಲಿ ಟ್ರೇಡಿಂಗ್ (Trading) ಕಂಪನಿ ಹೆಸರಿನಲ್ಲಿ ಭಾರೀ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಕ್ರಿಸ್ಟಲ್ ಎಐ (Crystal AI)ಎಂಬ ಸಂಸ್ಥೆಯ ಮೂಲಕ ನೂರಾರು ಹೂಡಿಕೆದಾರರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹಣ ಡಬಲ್ ಮಾಡಿಕೊಡುತ್ತೇವೆ ಅಂತಾ ಟೋಪಿ!

ಈ ಪ್ರಕರಣ ಸಂಬಂಧ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್​ರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರೋಬೋಟ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹೂಡಿಕೆ ಮಾಡಿದ ಹಣವನ್ನು ಡಬಲ್ ಮಾಡಿಕೊಡಲಾಗುತ್ತದೆ ಎಂದು ನಂಬಿಸಿ ಜನರನ್ನು ಬಲೆಗೆ ಬೀಳಿಸಿರವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಕಮಿಷನರ್ ಕಚೇರಿಯಲ್ಲಿ ಸಿಸಿಬಿ ಪೊಲೀಸರಿಂದ ವಿಚಾರಣೆ ನಡೆಯುತ್ತಿದ್ದು, 5 ರಿಂದ 6 ಕೋಟಿಗೂ ಅಧಿಕ ಹಣ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ನಿಜವಾಗಿಯೂ ವಂಚಿಸಿರುವ ಮೊತ್ತ ನೂರಾರು ಕೋಟಿಗಳಿಗೆ ತಲುಪಿರುವ ಶಂಕೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ KSCA ಸದಸ್ಯನಿಂದಲೇ IPL ಬ್ಲಾಕ್ ಟಿಕೆಟ್ ದಂಧೆ! ಚಿನ್ನಸ್ವಾಮಿ ಸ್ಟೇಡಿಯಂ ಹೋಟೆಲ್ ಕ್ಯಾಪ್ಟನ್ ಜೊತೆ ಸೇರಿ ಕೃತ್ಯ

ಅಂತರರಾಷ್ಟ್ರೀಯ ಮಟ್ಟದಲ್ಲೂ ವಂಚನೆಯ ಜಾಲ

ಅಲ್ಲದೆ ಆರೋಪಿಗಳು ದುಬೈನಲ್ಲಿ ಕಚೇರಿ ತೆರೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ವಂಚನೆ ಜಾಲ ವಿಸ್ತರಿಸಿರುವ ಮಾಹಿತಿ ಲಭ್ಯವಾಗಿದ್ದು, ರಾಜೇಶ್ ಕಾಮತ್ ಸೇರಿದಂತೆ ಮೂವರು ಆರೋಪಿಗಳು ಸಂಘಟಿತ ಸಂಚು ರೂಪಿಸಿ ಹೂಡಿಕೆದಾರರನ್ನು ಮೋಸಗೊಳಿಸಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs DC: ಬೆಂಗಳೂರಿನಲ್ಲಿ ಐಪಿಎಲ್, ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ, ಪಾರ್ಕಿಂಗ್ ಮಾಹಿತಿ ಇಲ್ಲಿದೆ – Kannada News | IPL 2026: RCB vs Delhi Match in Chinnaswamy Stadium Bengaluru Today; Traffic Advisory, Parking Areas, Security Details

ಬೆಂಗಳೂರು, ಏಪ್ರಿಲ್ 18: ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಐಪಿಎಲ್ (IPL 2026) ಪಂದ್ಯಾವಳಿಯ ರೋಚಕ ಹಣಾಹಣಿ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂದ್ಯದ ಯಶಸ್ವಿ ನಿರ್ವಹಣೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರು ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ಪೊಲೀಸ್ ಬಂದೋಬಸ್ತ್ ಮತ್ತು ಬಿಗಿ ಕ್ರಮ

ಪಂದ್ಯದ ಭದ್ರತೆಗಾಗಿ ಸುಮಾರು 2000 ಪೊಲೀಸರನ್ನು ನಿಯೋಜಿಸಲಾಗಿದೆ. ಕ್ರೀಡಾಂಗಣದ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ವಿಶೇಷವಾಗಿ ಬ್ಲ್ಯಾಕ್ ಟಿಕೆಟ್ ಮಾರಾಟ ಜಾಲವನ್ನು ಭೇದಿಸಲು 7 ವಿಶೇಷ ತಂಡಗಳನ್ನು ರಚಿಸಲಾಗಿದೆ. ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿ ಗುಂಪು ಸೇರುವುದನ್ನು ನಿಷೇಧಿಸಲಾಗಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಪ್ರೇಕ್ಷಕರು ತಮ್ಮ ಮೊಬೈಲ್ ಫೋನ್, ಪರ್ಸ್ ಮತ್ತು ಚಿನ್ನಾಭರಣಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.

ವಾಹನ ನಿಲುಗಡೆ ಎಲ್ಲೆಲ್ಲಿ?

  • ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ
  • ಸೆಂಟ್ ಜೋಸೆಫ್ ಯುರೋಪಿಯನ್ ಶಾಲಾ ಮೈದಾನ
  • ಫ್ರೀಡಂ ಪಾರ್ಕ್ (MLCP ಪಾರ್ಕಿಂಗ್)
  • ಕಂಠೀರವ ಕ್ರೀಡಾಂಗಣ (ಹೊಸದಾಗಿ ಸೇರ್ಪಡೆ)
  • ಯು.ಬಿ. ಸಿಟಿ ಮತ್ತು ಗರುಡ ಮಾಲ್ ಪಾರ್ಕಿಂಗ್
  • ಶಿವಾಜಿನಗರ ಬಸ್ ನಿಲ್ದಾಣ (1ನೇ ಮಹಡಿ)

ವಾಹನ ನಿಲುಗಡೆ ನಿಷೇಧಿತ ರಸ್ತೆಗಳು

ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ), ಕಬ್ಬನ್ ರಸ್ತೆ, ರಾಜಭವನ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಲಾವೆಲ್ಲೆ ರಸ್ತೆ, ವಿಟ್ಟಲ್ ಮಲ್ಯ ರಸ್ತೆ ಮತ್ತು ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಓಲಾ/ಉಬರ್/ಆಟೋ ಪಿಕ್-ಅಪ್ ಪಾಯಿಂಟ್

  • ಬಿಆರ್‌ವಿ ಮೈದಾನ (ಗೇಟ್ ನಂ. 06ರ ಬಳಿ)
  • ಮಾಣಿಕ್ ಶಾ ಪರೇಡ್ ಮೈದಾನ (ಗೇಟ್ ನಂ. 03ರ ಬಳಿ)
  • ಕ್ರೀಡಾಂಗಣದ ಪ್ರವೇಶ ದ್ವಾರಗಳ ವಿವರ:
  • ಲಿಂಕ್ ರಸ್ತೆ ಕಡೆಯಿಂದ: ಗೇಟ್ ನಂ. 11 ರಿಂದ 17 ರವರೆಗೆ ಪ್ರವೇಶಕ್ಕೆ ಅವಕಾಶವಿದೆ.
  • ಕಬ್ಬನ್ ರಸ್ತೆ ಕಡೆಯಿಂದ: ಗೇಟ್ ನಂ. ಇ-1 ರಿಂದ ಇ-3 ಮತ್ತು ಇ-18, 19, 22, 23 ರ ಮೂಲಕ ಪ್ರವೇಶಿಸಬಹುದು.
  • ಕ್ವೀನ್ಸ್ ರಸ್ತೆ ಕಡೆಯಿಂದ: ಗೇಟ್ ನಂ. ಇ-5 ಮತ್ತು ಇ-8 ಪ್ರವೇಶಕ್ಕೆ, ಹಾಗೂ ಗೇಟ್ ನಂ. 9 ಮತ್ತು 9ಎ ನಿರ್ಗಮನಕ್ಕೆ ಮಾತ್ರ ಮೀಸಲಿದೆ.
  • ವಿಐಪಿ ಪ್ರವೇಶ: ಗೇಟ್ ನಂ. ಇ-10 ರ ಮೂಲಕ ಆಟಗಾರರು ಮತ್ತು ಗಣ್ಯರಿಗೆ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಭೂತ್ ಬಂಗ್ಲ’ ಚಿತ್ರಕ್ಕೆ ಹೀನಾಯ ಗಳಿಕೆ; ಅಕ್ಷಯ್ ಯಾವುದೇ ಸಿನಿಮಾ ಮಾಡಿದರೂ ಫಲಿತಾಂಶ ಒಂದೇ – Kannada News | Akshay Kumar’s Bhoot Bungla Flops? Why His Films Struggle at the Box Office

ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಭೂತ್ ಬಂಗ್ಲ’ ಸಿನಿಮಾ ಏಪ್ರಿಲ್ 17ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಾಮಿಡಿ ಹೈಲೈಟ್ ಎಂದು ತಂಡ ಹೇಳಿತ್ತು. ಆದರೆ, ಹಾಸ್ಯ ಗಮನ ಸೆಳೆಯಲು ವಿಫಲವಾಗಿದೆ ಎಂಬ ಮಾತು ವ್ಯಕ್ತವಾಗಿದೆ. ಈ ಚಿತ್ರದ ಮೊದಲ ದಿನದ ಗಳಿಕೆ ಲೆಕ್ಕ ಸಿಕ್ಕಿದೆ. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 12 ಕೋಟಿ ರೂಪಾಯಿ ಮಾತ್ರ. ಚಿತ್ರದ ಬಜೆಟ್ 120 ಕೋಟಿ ರೂಪಾಯಿ ಆಗಿರುವುದರಿಂದ ಸಿನಿಮಾಗೆ ದೊಡ್ಡ ಓಪನಿಂಗ್​​ನ ಅಗತ್ಯ ಇತ್ತು.

ಅಕ್ಷಯ್ ಕುಮಾರ್ ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಇತ್ತೀಚೆಗೆ ಎಡವುತ್ತಿದ್ದಾರೆ. ಅವರು ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿ ಬರುತ್ತಿಲ್ಲ. ಇದು ಅವರಿಗೂ ಹಾಗೂ ಅವರ ಅಭಿಮಾನಿಗಳಿಗೂ ಸಾಕಷ್ಟು ಬೇಸರ ಮೂಡಿಸಿದೆ. ಅವರು ಗಂಭೀರ ಸಿನಿಮಾಗಳನ್ನೇ ಮಾಡುತ್ತಿದ್ದರು. ಆದರೆ, ಈಗ ಮತ್ತೆ ಹಾಸ್ಯದ ಕಡೆ ಮುಖ ಮಾಡಿದ್ದಾರೆ. ‘ಭೂತ್ ಬಂಗ್ಲ’ ಸಿನಿಮಾ ಕಾಮಿಡಿ ಹಾರರ್ ಚಿತ್ರವಾಗಿದೆ. ಆದಾಗ್ಯೂ ಸಿನಿಮಾ ಕೈ ಹಿಡಿಯುವ ಸೂಚನೆ ಇಲ್ಲ.

‘ಭೂತ್ ಬಂಗ್ಲ’ ನೋಡಿದ ಅನೇಕ ವಿಮರ್ಶಕರು ಸಿನಿಮಾ ಟೀಕೆ ಮಾಡಿದ್ದಾರೆ. ಹಾಸ್ಯ ಕೆಲಸ ಮಾಡಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಸಿನಿಮಾ ಮೇಲೆ ನಿರೀಕ್ಷೆ ಇದ್ದಿದ್ದರಿಂದ ಅಕ್ಷಯ್ ಅಭಿಮಾನಿಗಳು ಮೊದಲ ದಿನ ಸಿನಿಮಾ ನೋಡಿದ್ದಾರೆ. ಹೀಗಾಗಿ ಚಿತ್ರದ ಗಳಿಕೆ 12 ಕೋಟಿ ರೂಪಾಯಿ ಆಗಿದೆ.

ಶನಿವಾರ ಹಾಗೂ ಭಾನುವಾರ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗುವ ನೀರೀಕ್ಷೆ ಇದೆ. ಆದರೆ, ಭಾನುವಾರ ಸಂಜೆ ವೇಳೆಗೆ ಚಿತ್ರದ ಸರಿಯಾದ ವಿಮರ್ಶೆ ಸಿಕ್ಕಿರುತ್ತದೆ. ಆ ಬಳಿಕ ಸಿನಿಮಾದ ಕಲೆಕ್ಷನ್ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸತತ ಸೋಲಿನ ಸುಳಿಯಲ್ಲಿರುವ ಅಕ್ಷಯ್ ಕುಮಾರ್ ಸಂಭಾವನೆಯಲ್ಲಿ ಭಾರೀ ಕಡಿತ

‘ಭೂತ್ ಬಂಗ್ಲ’ ಸಿನಿಮಾದ ಬಜೆಟ್ ದೊಡ್ಡದಿದೆ. ಹೀಗಾಗಿ, ಚಿತ್ರ ಲಾಭ ಕಾಣಬೇಕು ಎಂದರೆ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಅನಿವಾರ್ಯತೆ ಇದೆ. ಆದರೆ, ಸಿನಿಮಾದ ವೇಗ ನೋಡಿದರೆ ಚಿತ್ರ 100 ಕೋಟಿ ರೂಪಾಯಿ ತಲುಪಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ! – Kannada News | Bengaluru Welcomes 4 Cheetahs to Bannerghatta Zoo

ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!
Image Credit source: Eshwar Khandre Facebook account

ಬೆಂಗಳೂರು, ಏಪ್ರಿಲ್ 18: ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ನಾಲ್ಕು ಚೀತಾಗಳನ್ನು (Cheetah) ಸ್ವಾಗತಿಸಿದ್ದಾರೆ. ಕಲ್ಬುರ್ಗಿ ಕಾರ್ಯಕ್ರಮ ಮುಗಿಸಿ ಹೈದರಾಬಾದ್ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ ಸಚಿವರು, ನೇರವಾಗಿ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಬನ್ನೇರುಘಟ್ಟ ಮೃಗಾಲಯಕ್ಕೆ ತರಲಾಗಿರುವ ಈ ವಿದೇಶಿ ಅತಿಥಿಗಳನ್ನು ಬರಮಾಡಿಕೊಂಡಿದ್ದಾರೆ.

ಚೀತಾಗಳಿಗೆ ಹಾನಿಯಾಗದಂತೆ ವಿಶೇಷ ಕಾಳಜಿ

ಚೀತಾಗಳಿಗೆ ಹವಾಮಾನ ಮತ್ತು ಪರಿಸರ ಬದಲಾವಣೆಯಿಂದ ಯಾವುದೇ ತೊಂದರೆ ಆಗದಂತೆ ವಿಶೇಷ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವ ಖಂಡ್ರೆ, ಕ್ವಾರಂಟೈನ್ ವ್ಯವಸ್ಥೆ, 30 ದಿನಗಳ ನಿಯೋಜಿತ ಆಹಾರ, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಶುವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಜೀವ ವೈವಿಧ್ಯ ಉದ್ಯಾನಕ್ಕೆ ಸಾಗಿಸುವ ವ್ಯವಸ್ಥೆಯನ್ನೂ ಸಚಿವರು ಪರಿಶೀಲಿಸಿದ್ದಾರೆ.

ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿ ಕಾಣಿಸಿಕೊಂಡಿದ್ದ ಚೀತಾಗಳು ಈಗ ಸಂಪೂರ್ಣವಾಗಿ ಅಳಿದು ಹೋಗಿವೆ. ಕನಿಷ್ಠ ಮೃಗಾಲಯಗಳಲ್ಲಾದರೂ ಜನತೆಗೆ ಈ ಅಪರೂಪದ ವನ್ಯಜೀವಿಗಳನ್ನು ನೋಡುವ ಅವಕಾಶ ದೊರಕಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಮ್ಮ ಫೆಸ್ಬುಕ್ ಖಾತೆಯಲ್ಲಿ ಸಚಿವರು ಪೋಸ್ಟ್ ಮಾಡಿಕೊಂಡಿದ್ದಾರೆ. ಚೀತಾಗಳ ಸಂರಕ್ಷಣೆ ಮತ್ತು ಸುರಕ್ಷತೆಗೆ ಅತ್ಯಂತ ಆದ್ಯತೆ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

 ‘ಪ್ರಾಜೆಕ್ಟ್ ಚೀತಾ’

ಭಾರತಕ್ಕೆ ಆಫ್ರಿಕನ್ ಚೀತಾಗಳನ್ನು ತರುವುದು ಇದೇ ಮೊದಲಲ್ಲ. 2022ರಲ್ಲಿ ಕೇಂದ್ರ ಸರ್ಕಾರದ ‘ಪ್ರಾಜೆಕ್ಟ್ ಚೀತಾ’ ಅಡಿಯಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚೀತಾಗಳನ್ನು ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್ಗೆ ತರಲಾಗಿತ್ತು. ಆದರೆ, ರೇಡಿಯೋ ಕಾಲರ್‌ಗಳಿಂದಾದ ಚರ್ಮದ ಸೋಂಕು (Septicemia), ತೀವ್ರ ಉಷ್ಣಾಂಶ ಮತ್ತು ಹವಾಮಾನ ವೈಪರೀತ್ಯ ಹಾಗೂ ಪರಸ್ಪರ ಕಾಳಗಗಳಿಂದಾಗಿ ಮರಿಗಳೂ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಚೀತಾಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿಯೇ ವೈಫಲ್ಯಗಳಿಂದ ಪಾಠ ಕಲಿತಿರುವ ಕರ್ನಾಟಕ ಅರಣ್ಯ ಇಲಾಖೆ, ಬನ್ನೇರುಘಟ್ಟದಲ್ಲಿ ಚೀತಾಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

14 ತಂಡಗಳಿಗೆ ಸಾಧ್ಯವಾಗದೇ ಇರುವುದನ್ನು ಸಾಧಿಸಿ ತೋರಿಸಿದ ಪಂಜಾಬ್ ಕಿಂಗ್ಸ್ – Kannada News | Ipl 2026: Punjab Kings Creates New Record in IPL History

ಅಂದರೆ  ಐಪಿಎಲ್​ ಯಾವುದೇ ತಂಡ 2 ಬಾರಿ ಮೊದಲ ಐದು ಪಂದ್ಯಗಳಲ್ಲಿ ಸೋಲು ಕಾಣದೇ ಟೂರ್ನಿ ಆರಂಭಿಸಿದ ಚರಿತ್ರೆ ಇಲ್ಲ. ಇದೀಗ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್​ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಡೆಕ್ಕನ್ ಚಾರ್ಜರ್ಸ್, ಕೊಚ್ಚಿನ ಟಸ್ಕರ್ಸ್​ ಕೇರಳ, ಪುಣೆ ವಾರಿಯರ್ಸ್ ಇಂಡಿಯಾ, ಗುಜರಾತ್ ಲಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡಗಳಿಗೆ ಸಾಧ್ಯವಾಗದೇ ಇರುವುದನ್ನು ಪಂಜಾಬ್ ಕಿಂಗ್ಸ್ ಸಾಧಿಸಿ ತೋರಿಸಿದೆ. 

Source link

‘ನಾನು ಮತ್ತೊಂದು ಮದುವೆ ಆಗ್ತೀನಿ’; ರಣಬೀರ್ ಕಪೂರ್ ಹೇಳಿಕೆಗೆ ಟೀಕೆ – Kannada News | Ranbir Kapoor’s ‘Marry Again’ Remark Ignites Ramayana Role Controversy

ರಾಮನ ಪಾತ್ರ ಮಾಡೋದು ಎಂದರೆ ಅದು ಸಣ್ಣ ಮಾತಲ್ಲ. ಪಾತ್ರ ಮಾಡುವುದು ಚಾಲೆಂಜ್ ಅಲ್ಲ, ಆದರೆ, ಅದರ ಸುತ್ತಲೂ ಹುಟ್ಟಿಕೊಳ್ಳುವ ವಿವಾದ ತಣ್ಣಗಾಗಿಸುವುದು ದೊಡ್ಡ ಚಾಲೆಂಜ್. ಈಗ ರಣಬೀರ್ ಕಪೂರ್ (Ranbir Kapoor) ಅದೇ ರೀತಿಯ ಚಾಲೆಂಜ್​ ಎದುರಿಸುತ್ತಿದ್ದಾರೆ. ಅವರು ಅನೇಕ ನಟಿಯರ ಜೊತೆ ಸುತ್ತಾಡಿದ್ದಾರೆ. ಎಣ್ಣೆ ಪಾರ್ಟಿ ಮಾಡಿದ್ದಾರೆ. ಈಗ ಇದೆಲ್ಲವನ್ನೂ ತಂದು ಟೀಕೆ ಮಾಡಲಾಗುತ್ತಿದೆ. ಅದೇ ರೀತಿ ಅವರು ಈ ಮೊದಲು ನೀಡಿದ್ದ, ‘ಮತ್ತೊಂದು ಮದುವೆ ಆಗ್ತೀನಿ’ ಎಂಬ ಹೇಳಿಕೆಯನ್ನು ಮುನ್ನೆಲೆಗೆ ತರಲಾಗಿದೆ. ‘ಇವರಿಗೆಲ್ಲ ರಾಮನ ಪಾತ್ರ ನೀಡಲಾಗಿದೆಯಲ್ಲ’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ರಣಬೀರ್ ಕಪೂರ್ ಅವರು ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಅದರ ಲುಕ್ ರಿಲೀಸ್ ಆಗಿ ಗಮನ ಸೆಳೆದಿದೆ. ಅವರು ರಾಮನ ಪಾತ್ರಕ್ಕೆ ಆಯ್ಕೆ ಆದಾಗಿನಿಂದಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ. ರಣಬೀರ್ ಈ ಚಿತ್ರಕ್ಕಾಗಿ ಮದ್ಯ ಹಾಗೂ ನಾನ್ ವೆಜ್ ಸೇವನೆ ಬಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಇದನ್ನು ಒಪ್ಪಲು ಅನೇಕರು ರೆಡಿ ಇದ್ದಾರೆ. ಜನ ಸಾಮಾನ್ಯರಿಂದ ಹಿಡಿದು ಕಂಗನಾ ರಣಾವತ್ ರೀತಿಯ ಸೆಲೆಬ್ರಿಟಿಗಳು ರಣಬೀರ್ ಆಯ್ಕೆ ಅನ್ನು ಟೀಕಿಸಿದ್ದಾರೆ. ಅವರು ಸ್ತ್ರೀ ಲೋಲ ಎಂದು ಕರೆದಿರುವ ಅನೇಕರು, ರಾಮನ ಪಾತ್ರದ ಪಾವಿತ್ರ್ಯತೆ ಹಾಳು ಮಾಡಲಾಗಿದೆ ಎಂದು ಟೀಕಿಸಿದ್ದಾರೆ.

ಹೀಗಿರುವಾಗಲೇ ಒಂದು ವಿಡಿಯೋ ವೈರಲ್ ಆಗಿದೆ. ಇದು 2022ರ ಸಂದರ್ಶನದಲ್ಲಿ ನೀಡಿದ ವಿಡಿಯೋ. ‘ಶಂಶೇರ’ ಹೆಸರಿನ ಸಿನಿಮಾನ ರಣಬೀರ್ ಕಪೂರ್ ಮಾಡಿದ್ದರು. ಈ ಚಿತ್ರದ ಸಂದರ್ಶನದಲ್ಲಿ ಆ್ಯಂಕರ್ ಅವರು, ನಿಮ್ಮ ಮದುವೆಯಲ್ಲಿ ಸಮೋಸಾ-ಚಟ್ನಿ ಉತ್ತಮವಾಗಿರಲಿಲ್ಲ ಎಂದರು. ಆಗ ರಣಬೀರ್ ಕಪೂರ್ ಅವರು, ‘ನಾನು ಇನ್ನೊಂದು ಮದುವೆ ಆಗುತ್ತೇನೆ. ಆಗ ಒಳ್ಳೆಯ ಪಾರ್ಟಿ ಕೊಡುತ್ತೇನೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್​ಗಿಂತ ಉತ್ತಮ ನಟ ಯಾರೂ ಇಲ್ಲ: ನಮಿತ್ ಮಲ್ಹೋತ್ರಾ

ನಾಲ್ಕು ವರ್ಷಗಳ ಬಳಿಕ ಈ ವಿಡಿಯೋನ ಮತ್ತೆ ವೈರಲ್ ಮಾಡಲಾಗಿದೆ. ಅನೇಕರು ರಾಮನ ಪಾತ್ರಕ್ಕೆ ರಣಬೀರ್ ಆಯ್ಕೆಯನ್ನು ಟೀಕಿಸುವ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:27 am, Sat, 18 April 26

Source link

RCB vs DC ಪಂದ್ಯಕ್ಕೆ 4 ಆಟಗಾರರು ಅಲಭ್ಯ..!

Source link

Bengaluru Air Quality: ಇಂದು ಬೆಳಗಾವಿಯ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ! – Kannada News | Bangalore Air Pollution Crisis: Bengaluru Air Quality is getting better in Belagavi

ಇಂದು ಬೆಳಗಾವಿಯ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ!

ಬೆಂಗಳೂರು, ಏಪ್ರಿಲ್ 18: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಕಳೆದ ಕೆಲ ದಿನಗಳಿಂದ ಸುಧಾರಣೆ ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಕಲಬುರ್ಗಿ, ಉಡುಪಿಯಲ್ಲಿ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 135ಕ್ಕೆ ತಲುಪಿದೆ. ಕಲಬುರ್ಗಿ ಮತ್ತು ಉಡುಪಿಯ AQI 150 ದಾಟಿದ್ದು, ಆತಂಕ ಸೃಷ್ಟಿಸಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 135
  • ಮಂಗಳೂರು-82
  • ಮೈಸೂರು –64
  • ಬೆಳಗಾವಿ – 44
  • ಕಲಬುರ್ಗಿ-114
  • ಶಿವಮೊಗ್ಗ –99
  • ಬಳ್ಳಾರಿ – 161
  • ಹುಬ್ಬಳ್ಳಿ- 57
  • ಉಡುಪಿ –89
  • ವಿಜಯಪುರ –93

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version