Headlines

ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಹಿಂದೂ ಪತ್ನಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ: ಭದ್ರಾವತಿಯಲ್ಲೊಂದು ವಿಚಿತ್ರ ಕೇಸ್ – Kannada News | A Husband complaint against wife Who forced conversion To Christian from Hindu at Shivamogga

ಶಿವಮೊಗ್ಗ, (ಫೆಬ್ರವರಿ 08): ಮಹಿಳೆಯೊಬ್ಬರು ಹಿಂದೂ ಧರ್ಮವನ್ನು ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು, ಬಳಿಕ ಪತಿ ಹಾಗೂ ಮಕ್ಕಳನ್ನೂ ಸಹ ಮತಾಂತರಗೊಳ್ಳುವಂತೆ ಮಾನಸಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿಯಾದ ಬಿ. ವಿನಯ್ ಎಂಬುವವರು ತಮ್ಮ ಪತ್ನಿ ಪ್ರಿಯತಾ ಆರ್. ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈಗ ನನ್ನನ್ನೂ ಹಾಗೂ ನನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನೂ ಮತಾಂತರಗೊಳ್ಳುವಂತೆ ಒತ್ತಾಯಿಸಿ…

Read More

T20 World Cup: 2ನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ – Kannada News | Team India Squad Changes for Namibia T20 WC: Sundar’s Comeback & Bumrah’s Fitness Update

ಅಮೆರಿಕ ವಿರುದ್ಧದ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ 2026 ರ ಟಿ20 ವಿಶ್ವಕಪ್ (T20 World Cup 2026) ಅಭಿಯಾನವನ್ನು ಆರಂಭಿಸಿರುವ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಫೆಬ್ರವರಿ 12 ರಂದು ನಮೀಬಿಯಾ (India vs Namibia) ವಿರುದ್ಧ ಆಡಲಿದೆ. ಮೊದಲ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆಗಳಾಗಿದ್ದವು. ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ ಹಾಗೂ ಸಂಜು ಸ್ಯಾಮ್ಸನ್ ಪ್ಲೇಯಿಂಗ್​ 11 ನಿಂದ ಹೊರಬಿದ್ದಿದ್ದರು. ಇದೀಗ ಎರಡನೇ ಪಂದ್ಯಕ್ಕೂ ಭಾರತದ ಆಡುವ 11 ರ ಬಳಗದಲ್ಲಿ ಬದಲಾವಣೆಯಾಗುವ…

Read More

ಕೋಲಾರ: ಬೊಲೆರೊ ಪಲ್ಟಿಯಾಗಿ ಮೂವರು ಸಾವು; 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಗಾಯ – Kannada News | Kolar Bolero Accident: 3 Laborers Dead, 10 Injured

ಪಲ್ಟಿಯಾಗಿರುವ ಬೊಲೆರೊ Image Credit source: tv9 kannada ಕೋಲಾರ, ಫೆಬ್ರವರಿ 08: ಬೊಲೆರೊ ಪಲ್ಟಿಯಾಗಿ (Bolero Overturns) ಮೂವರು ಕಾರ್ಮಿಕರು ಸಾವನ್ನಪ್ಪಿರುವಂತಹ (death) ಘಟನೆ  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಾಲೋನಿ ಗೇಟ್​​ ಬಳಿ ನಡೆದಿದೆ. ಆಂಧ್ರದ ಮುನಿಯಮ್ಮ, ವೆಂಕಟಪ್ಪ ಹಾಗೂ ಮತ್ತೊಬ್ಬರು ಮೃತಪಟ್ಟಿದ್ದಾರೆ. ಹುಣಸೆಹಣ್ಣು ಬಿಡಿಸುವ ಕೆಲಸ ಮುಗಿಸಿಕೊಂಡು ಹೋಗುವಾಗ ದುರಂತ ಸಂಭವಿಸಿದೆ. ದುರಂತದಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಶ್ರೀನಿವಾಸಪುರ ಮತ್ತು ಆಂಧ್ರದ ಮದನಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…

Read More

ಡ್ರಿಂಕ್ಸ್ ಅಂದ್ಕೊಂಡು ಸ್ಪಿರಿಟ್ ಕುಡಿದ್ರಾ? ಐವರು ಸ್ನೇಹಿತರ ಪೈಕಿ ಇಬ್ಬರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ – Kannada News | Koppal Tragedy: Friends Party Kills Two, One Critical; Survivors Under Suspicion

ಕೊಪ್ಪಳ, ಫೆಬ್ರವರಿ 08: ಅವರೆಲ್ಲಾ ಒಂದೇ ಗ್ರಾಮದವರು. ಅದರಲ್ಲೂ ಐವರು ಸ್ನೇಹಿತರು. ನಾಲ್ಕು ದಿನಗಳ ಹಿಂದೆ ಪಾರ್ಟಿ ಮಾಡಿದ್ದರು. ಐವರಲ್ಲಿ ಇಬ್ಬರು ಸಾವನ್ನಪ್ಪಿದ್ದರೆ (death), ಇನ್ನೊಬ್ಬ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಬಣ್ಣಕ್ಕೆ ಮಿಕ್ಸ್ ಮಾಡುವ ಸ್ಪಿರಿಟ್‌ (Spirit) ಕುಡಿದಿದ್ದಾರೆ ಎನ್ನಲಾಗುತ್ತಿದೆ. ಮತ್ತಿಬ್ಬರು ಅರೆಸ್ಟ್ ಆಗಿದ್ದಾರೆ. ಪಾರ್ಟಿಯಲ್ಲಿ ಇಬ್ಬರು ಸ್ಪಿರಿಟ್ ಕುಡಿಯದಿರುವುದು ಸದ್ಯ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಅಮರಯ್ಯ ಹಿರೇಮಠ, ರಮೇಶ್ ಹೊಸಹಳ್ಳಿ, ಶರಣಪ್ಪ ಹಂಚಿನಾಳ, ಮಾರುತಿ ಬಂಡಿ…

Read More

ಈಗ ನನಗೆ ಜ್ಞಾನೋದಯವಾಗಿದೆ, ಇನ್ಮೇಲೆ ನಾನು ಕೊಡೋದೆ ಬೇರೆ: ಆರ್ ಚಂದ್ರು – Kannada News | R Chandru talks about his realization and upcoming movies

ಆರ್ ಚಂದ್ರು (R Chandru) ಕನ್ನಡದ ಜನಪ್ರಿಯ ನಿರ್ದೇಶಕ. ‘ತಾಜ್ ಮಹಲ್’, ‘ಕಬ್ಜ’ ಸೇರಿದಂತೆ ಕೆಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೆ ಆರ್ ಚಂದ್ರು ಅವರು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಚಂದ್ರು, ‘ನಾನು ನಿರ್ದೇಶಕ ಆಗಿರುವ ಜೊತೆಗೆ ಕೃಷಿಕ ಸಹ ಹೌದು. ದಾಳಿಂಬೆ, ದ್ರಾಕ್ಷಿ, ರೇಷ್ಮೆ ಇನ್ನೂ ಕೆಲವು ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಕೃಷಿಯ ಜೊತೆಗೆ ಸಿನಿಮಾ ಅನ್ನೂ ಸಹ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ಇಷ್ಟು ದಿನ ಬೇರೆಯವರಿಂದ ಕಲಿಯುತ್ತಿದ್ದೆ, ಈಗ…

Read More

ENG vs NEP: ಕೊನೆಯ 3 ಓವರ್​ಗಳಲ್ಲಿ ಆಂಗ್ಲರನ್ನು ನಡುಗಿಸಿದ ನೇಪಾಳ – Kannada News | Nepal’s Thrilling 4 Run Loss to England in 2026 T20 World Cup Shocker

2026 ರ ಟಿ20 ವಿಶ್ವಕಪ್‌ನ (T20 World Cup 2026) ಐದನೇ ಪಂದ್ಯದಲ್ಲಿ ನೇಪಾಳ ತಂಡ ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್‌ (Nepal vs England) ತಂಡಕ್ಕೆ ಕಠಿಣ ಸವಾಲು ನೀಡಿತು. ಇಂಗ್ಲೆಂಡ್ ನೀಡಿದ 185 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನೇಪಾಳ, ಕೊನೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಡಿತು. ಆದರೆ, ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ನ ಬಿಗಿಯಾದ ಬೌಲಿಂಗ್‌ನಿಂದ ನೇಪಾಳ 4 ರನ್‌ಗಳಿಂದ ಸೋಲಬೇಕಾಯಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬ್ಯಾಟಿಂಗ್…

Read More

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರಸ್ತೆ ಅಪಘಾತ: ಒಂದೇ ದಿನ 8 ಜನ ಬಲಿ, ಹಲವರಿಗೆ ಗಾಯ – Kannada News | 8 death, several Injured In Road Accident at various districts In Karnataka On February 8th

ಬೀದರ್/ತಮಕೂರು, (ಫೆಬ್ರವರಿ 08): ಬ್ರಿಡ್ಜ್​​ಗೆ ಬೈಕ್​ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಬೀದರ್​  (Bidar) ಜಿಲ್ಲೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ-ಬಿ ಬಳಿಯ ನಾಗಣ್ಣ ಕ್ರಾಸ್ ಹತ್ತಿರ ನಡೆದಿದೆ. ರಾಜೇಶ್ವರ ಗ್ರಾಮದ ವೆಂಕಟ್ ಕರಟ್ಮಲ್(40) ಹಾಗೂ ಪತ್ನಿ ಶಿಲ್ಪಾ(35), ಪುತ್ರಿ ರಕ್ಷಿತಾ(12) ಸ್ಥಳದಲ್ಲೇ ಸಾವನ್ನಪ್ಪಿದ್ದು,ಮಗ ದಿಗಂಬರ್(15) ಎಂಬುವವನ ಸ್ಥಿತಿ ಚಿಂತಾಜನಕವಾಗಿದೆ. ನಾಲ್ವರೂ ಒಂದೇ ಬೈಕ್​​ನಲ್ಲಿ ಬೀದರ್‌ನಿಂದ ರಾಜೇಶ್ವರ ಗ್ರಾಮಕ್ಕೆ ತೆರಳುತ್ತಿರುವಾಗ ರಸ್ತೆ ಪಕ್ಕದ ಬ್ರಿಡ್ಜ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ತುಮಕೂರಿನಲ್ಲಿ ಸರಣಿ…

Read More

ಗುಡ್​​ನ್ಯೂಸ್: ಕೇಂದ್ರದ ಒಂದೇ ಸೂಚನೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ BMRCL – Kannada News | Bengaluru: Relief for Metro commuters as BMRCL drops ticket fare hike following Central government order

ಬೆಂಗಳೂರು, ಫೆಬ್ರವರಿ 08: ರಾಜ್ಯ ಸರ್ಕಾರ ಹಾಗೂ ಕೇಂದ್ರದ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದ್ದ ಮೆಟ್ರೋ (Metro) ಟಿಕೆಟ್ ದರ ಏರಿಕೆ ಜಟಾಪಟಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ನಾಳೆಯಿಂದ ಅಂದರೆ ಫೆಬ್ರವರಿ 09ರಿಂದ ಮೆಟ್ರೋ ಟಿಕೆಟ್​​​​ ದರ ಏರಿಸಲು ಮುಂದಾಗಿದ್ದ ಬಿಎಂಆರ್​ಸಿಎಲ್​ (BMRCL) ಇದೀಗ ಆ ನಿರ್ಧಾರವನ್ನು ಕೈಬಿಟ್ಟಿದೆ. ದರ ಏರಿಕೆ ಮಾಡದಂತೆ ಬಿಎಂಆರ್​ಸಿಎಲ್​ ಎಂಡಿಗೆ ಕೇಂದ್ರದಿಂದ ಇ-ಮೇಲ್ ರವಾನೆ ಬೆನ್ನಲ್ಲೇ​ ದರ ಏರಿಕೆಗೆ ಬ್ರೇಕ್ ಬಿದ್ದಿದೆ. ಮುಂದಿನ ಆದೇಶದವರೆಗೆ ದರ ಏರಿಕೆ ತಾತ್ಕಾಲಿಕ ಸ್ಥಗಿತವಾಗಿದೆ. ಹಾಗಾಗಿ…

Read More

ಕಟ್ಟಪ್ಪನ ಜೀವನದ ಕಹಿ: ಜೀವಂತ ಶವವಾಗಿರೊ ಪತ್ನಿ, ಆದರೂ ಮರೆತಿಲ್ಲ ನಗು – Kannada News | Bahubali actor Sathyaraj wife is in Coma for last six years

‘ಬಾಹುಬಲಿ’ (Bahubali) ಸಿನಿಮಾನಲ್ಲಿ ಬಾಹುಬಲಿ, ಬಲ್ಲಾಳ ದೇವನಷ್ಟೆ ಕಟ್ಟಪ್ಪನ ಪಾತ್ರವೂ ಜನಪ್ರಿಯ. ಆ ಪಾತ್ರದಲ್ಲಿ ನಟಿಸಿದ್ದು ತಮಿಳಿನ ಹಿರಿಯ ನಟ ಸತ್ಯರಾಜ್. ಕನ್ನಡಿಗರ ಪಾಲಿಗೆ ಸತ್ಯರಾಜ್ ಅಪ್ಪಟ ವಿಲನ್. ನಟನಾಗಿರುವ ಜೊತೆಗೆ ಮಾಜಿ ರಾಜಕಾರಣಿಯೂ ಆಗಿರುವ ಸತ್ಯರಾಜ್, ಕನ್ನಡಿಗರ ವಿರುದ್ಧ ಕಟು ಪದಗಳಲ್ಲಿ ಈ ಹಿಂದೆಲ್ಲ ಮಾತನಾಡಿದ್ದಿದೆ. ಆದರೆ ‘ಬಾಹುಬಲಿ’ ಬಿಡುಗಡೆ ಸಂದರ್ಭದಲ್ಲಿ ಇದಕ್ಕೆ ವಿಷಾಧವನ್ನೂ ಸಹ ಅವರು ವ್ಯಕ್ತಪಡಿಸಿದ್ದರು. ಸಿನಿಮಾಗಳಲ್ಲಿ ಕಠಿಣ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಸತ್ಯರಾಜ್, ನಿಜ ಜೀವನದಲ್ಲಿ ಪ್ರತಿ ದಿನ ನೋವುಣ್ಣುತ್ತಿದ್ದಾರೆ. ಸತ್ಯರಾಜ್, ಮಹೇಶ್ವರಿ…

Read More

U19 World Cup 2026: ಭಾರತಕ್ಕೆ ಬಂದ ಯುವ ಚಾಂಪಿಯನ್ಸ್​ಗೆ ಅದ್ಧೂರಿ ಸ್ವಾಗತ – Kannada News | U19 World Cup 2026 Champions: India Beats England, Grand Welcome in Mumbai

ಫೆಬ್ರವರಿ 6, ಶುಕ್ರವಾರದಂದು ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ಯುವ ತಂಡವು ಇಂಗ್ಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸುವ ಮೂಲಕ 2026 ರ ಅಂಡರ್-19 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತವು 19 ವರ್ಷದೊಳಗಿನವರ ಚಾಂಪಿಯನ್ ಆಗಿದ್ದು ಇದು ಆರನೇ ಬಾರಿ. ಈ ಐತಿಹಾಸಿಕ ಗೆಲುವಿನ 2 ದಿನಗಳ ನಂತರ, ನಾಯಕ ಆಯುಷ್ ಮ್ಹಾತ್ರೆ ಮತ್ತು ಭಾರತೀಯ ತಂಡದ ಆಟಗಾರರು ತವರಿಗೆ ಮರಳಿದ್ದಾರೆ. ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಂದಿಳಿದ ಯುವ ಚಾಂಪಿಯನ್ ಪಡೆಗೆ ಭವ್ಯ ಸ್ವಾಗತ ನೀಡಲಾಯಿತು. ಯುವ…

Read More