Headlines

ಥಿಯೇಟರ್​​​ ಬಿಸ್ನೆಸ್​ಗೆ ಎಂಟ್ರಿ ಕೊಡಲು ಸಜ್ಜಾದ ರಾಮ್ ಚರಣ್-ಎನ್​ಟಿಆರ್? – Kannada News | Ram Charan And Jr NTR Venture Into Multiplex Business; Hyderabad Theater Market Becomes Highly Competitive

ಟಾಲಿವುಡ್‌ನ ಸ್ಟಾರ್ ನಟರು ಬಣ್ಣದ ಲೋಕದ ಜೊತೆಗೆ ಈಗ ಬ್ಯುಸಿನೆಸ್ ಕ್ಷೇತ್ರದಲ್ಲೂ ಭರ್ಜರಿ ಪೈಪೋಟಿಗೆ ಇಳಿದಿದ್ದಾರೆ. ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಾಗಲೇ ಸ್ವಂತ ಚಿತ್ರಮಂದಿರಗಳನ್ನು ಓಪನ್ ಮಾಡುತ್ತಿರುವುದು ಸಿನಿರಸಿಕರಿಗೆ ನಿಜಕ್ಕೂ ಖುಷಿಯ ಸುದ್ದಿಯಾಗಿದೆ. ಈಗ ಇದೇ ಸಾಲಿಗೆ ಆರ್‌ಆರ್‌ಆರ್ ಖ್ಯಾತಿಯ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹೊಸದಾಗಿ ಸೇರ್ಪಡೆಗೊಂಡಿದ್ದು, ಹೈದರಾಬಾದ್‌ನ ಮಲ್ಟಿಪ್ಲೆಕ್ಸ್ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ ಎಂದು ವರದಿ ಆಗಿದೆ. ಏಷ್ಯನ್ ಸಿನಿಮಾಸ್ ಜೊತೆ ರಾಮ್ ಚರಣ್ ಅವರು ಪ್ರಸಿದ್ಧ ‘ಏಷ್ಯನ್…

Read More

ಹೊಸ ಎಲೆಕ್ಟ್ರಾನಿಕ್ಸ್ ಬ್ಯುಸಿನೆಸ್​ಗಳಲ್ಲಿ ಎಲ್ ಅಂಡ್ ಟಿಯಿಂದ 5,000 ಕೋಟಿ ರೂ ಹೂಡಿಕೆ; 45,000 ಕೋಟಿ ರೂ ಮಾರುಕಟ್ಟೆ ಮೇಲೆ ಕಣ್ಣು – Kannada News | Larsen Toubro India to invest Rs 5,000 crore in new electronics business in next 5 years

ನವದೆಹಲಿ, ಜುಲೈ 31: ಭಾರತದ ಮೂಲಸೌಕರ್ಯ ಮತ್ತು ಎಂಜಿನಿಯರಿಂಗ್ ದೈತ್ಯ ಸಂಸ್ಥೆಯಾದ ಲಾರ್ಸನ್ ಅಂಡ್ ಟೂಬ್ರೊ (L&T) ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಬೃಹತ್ ಹೆಜ್ಜೆ ಇಟ್ಟಿದ್ದು, ₹5,000 ಕೋಟಿ ಹೂಡಿಕೆ ಯೊಂದಿಗೆ ಹೊಸ ಎಲೆಕ್ಟ್ರಾನಿಕ್ಸ್ ವ್ಯವಹಾರವನ್ನು ಪ್ರಾರಂಭಿಸಿದೆ. ತನ್ನ ‘L&T ಎಲೆಕ್ಟ್ರಾನಿಕ್ ಪ್ರೊಡಕ್ಟ್ಸ್ ಅಂಡ್ ಸಿಸ್ಟಮ್ಸ್ (EPS)’ ವಿಭಾಗದ ಅಡಿಯಲ್ಲಿ ಮುಂದಿನ 5 ವರ್ಷಗಳಲ್ಲಿ ಈ ಹೂಡಿಕೆ ಮಾಡಲಿದೆ. ಈ ಬಂಡವಾಳವನ್ನು ಅತ್ಯಾಧುನಿಕ ತಯಾರಿಕಾ ಘಟಕಗಳು (Manufacturing Hubs), ಸಂಶೋಧನೆ ಮತ್ತು ಅಭಿವೃದ್ಧಿ (R&D), ಪರೀಕ್ಷಾ ಮೂಲಸೌಕರ್ಯ ಹಾಗೂ…

Read More

ಪಟ್ಟದ ಕಲ್ಲಿನ ಸೌಂದರ್ಯಕ್ಕೆ ಮಾರು ಹೋದ ನಟಿ ಮನ್ನಿಕಾ ವಿಶ್ವಕರ್ಮ – Kannada News | Actress Mannika Vishwakarma talks about beauty of Pattadakal

ಸಿಪಿ ಯೋಗೀಶ್ವರ್ (CP Yogeshwar) ಅವರ ಪುತ್ರ ಧ್ಯಾನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಒಟ್ಟಿಗೆ ಎರಡು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದೀಗ ಅವರ ನಟನೆಯ ‘ಕರ್ಣಾಟ ಬಲಂ’ ಸಿನಿಮಾದ ಚಿತ್ರೀಕರಣ ಪಟ್ಟದಕಲ್ಲಿನಲ್ಲಿ ನಡೆಯುತ್ತಿದೆ. ಹಾಡಿನ ಚಿತ್ರೀಕರಣವನ್ನು ಅದ್ಧೂರಿಯಾಗಿ ಪಟ್ಟದಕಲ್ಲಿನಲ್ಲಿ ಮಾಡಲಾಗುತ್ತಿದೆ. ಈ ವೇಳೆ ಸಿನಿಮಾದ ನಾಯಕಿ ಮನ್ನಿಕಾ ವಿಶ್ವಕರ್ಮ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ಪಟ್ಟದಕಲ್ಲಿನ ಅಂದಕ್ಕೆ ತಾವು ಮಾರು ಹೋಗಿರುವುದಾಗಿ ಹೇಳಿದ್ದಾರೆ. ನಟಿ ಮನ್ನಿಕಾ ವಿಶ್ವಕರ್ಮ ಹೇಳಿದ್ದೇನು? ವಿಡಿಯೋ ಇಲ್ಲಿದೆ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More

“ನಮ್ಮ ಶಾಲೆಗೆ ರಸ್ತೆ ಮಾಡಿಸಿಕೊಡಿ”: ಯಡ್ರಾಮಿಯಲ್ಲಿ ಅಧಿಕಾರಿಗಳ ವಿರುದ್ಧ ಶಾಲಾ ಮಕ್ಕಳ ಆಕ್ರೋಶ – Kannada News | Vastari School Road Negligence: Kalaburagi Students Face Muddy Nightmare, Seek Solution

ಕಲಬುರಗಿ, ಜು.31: ಕತ್ತೆತ್ತಿ ಸಾಧನೆ ಮಾಡಬೇಕಾದ ವಯಸ್ಸಿನಲ್ಲಿ, ಕಾಲಿಡಲು ಸೂಕ್ತ ರಸ್ತೆಯಿಲ್ಲದೆ ಶಾಲಾ ಮಕ್ಕಳು ಕೆಸರಿನ ಹಾದಿಯಲ್ಲೇ ಸರ್ಕಸ್ ಮಾಡುತ್ತಾ ಶಾಲೆಗೆ ತೆರಳುತ್ತಿರುವ ಆಕ್ರೋಶಜನಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ವಸ್ತಾರಿ ಗ್ರಾಮದಲ್ಲಿ ಸೂಕ್ತ ರಸ್ತೆ ಸೌಕರ್ಯವಿಲ್ಲದೆ, ವಿದ್ಯಾರ್ಥಿಗಳು ಪ್ರತಿದಿನ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಮುಖದಲ್ಲಿ ಬೇಸರ ಹೊತ್ತು ಕೆಸರಿನಲ್ಲೇ ನಡೆದುಕೊಂಡು ಶಾಲೆಗೆ ತೆರಳುವ ದುಸ್ಥಿತಿ ನಿರ್ಮಾಣವಾಗಿದೆ. ವಸ್ತಾರಿ ಗ್ರಾಮದ ಹೊರವಲಯದಲ್ಲಿ ಇತ್ತೀಚೆಗಷ್ಟೇ ನೂತನವಾಗಿ ಪ್ರೌಢಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ…

Read More

2027 ರ ಏಕದಿನ ವಿಶ್ವಕಪ್​ಗೆ 12 ನಗರಗಳ ಆತಿಥ್ಯ; ಐಸಿಸಿ ಅಧಿಕೃತ ಪ್ರಕಟಣೆ – Kannada News | 2027 ODI Cricket World Cup Venues: SA, Zim, Namibia Host Cities Revealed!

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಮೂರು ದೇಶಗಳು ಆತಿಥ್ಯವಹಿಸುತ್ತಿವೆ ಎಂಬುದು ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಈ ಮೂರು ದೇಶಗಳ ಯಾವ್ಯಾವ ನಗರಗಳು ಈ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಆತಿಥ್ಯವಹಿಸುತ್ತಿವೆ ಎಂಬುದನ್ನು ಐಸಿಸಿ ಇಂದು ಬಹಿರಂಗಪಡಿಸಿದೆ. ಮುಂದಿನ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದ ಮೂರು ದೇಶಗಳಾದ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯುತ್ತಿದೆ. ಈ ಮೂರು ದೇಶಗಳ ಒಟ್ಟು 12 ನಗರಗಳಲ್ಲಿ 54 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಅತಿ ಹೆಚ್ಚು ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ…

Read More

ಕೆಂಪು ಬಾರ್ಡರ್​ನ ಬಿಳಿ ಸೀರೆ, ಹಣೆಯ ಮೇಲೆ ಬಿಂದಿ, ಮುಖದಲ್ಲಿ ನಗು, 19 ವರ್ಷಗಳ ಬಳಿಕ ಕೋಲ್ಕತ್ತಾಗೆ ಬಂದ ತಸ್ಲೀಮಾ ನಸ್ರೀನ್ – Kannada News | Taslima Nasreen Returns to Kolkata After 19 Years: A Fight for Freedom of Speech

ಕೋಲ್ಕತ್ತಾ, ಜುಲೈ 31: ಪ್ರಸಿದ್ಧ ಬಾಂಗ್ಲಾದೇಶಿ ಲೇಖಕಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ (Taslima Nasreen) ಅವರು ಸುಮಾರು 19 ವರ್ಷಗಳ ನಂತರ ಕೋಲ್ಕತ್ತಾಗೆ ಮರಳಿದ್ದಾರೆ. 2007 ರಲ್ಲಿ ಅವರ ‘ದ್ವಿಖಂಡಿತೋ’ ಪುಸ್ತಕದ ವಿರುದ್ಧ ಭಾರಿ ಪ್ರತಿಭಟನೆ ಹಾಗೂ ಬೆದರಿಕೆಗಳು ವ್ಯಕ್ತವಾದ ನಂತರ ಅವರು ನಗರವನ್ನು ತೊರೆಯಬೇಕಾಗಿತ್ತು. ಇದೀಗ ಪಶ್ಚಿಮ ಬಂಗಾಳದಲ್ಲಿ ಸನ್ನಿವೇಶ ಬದಲಾದ ಬೆನ್ನಲ್ಲೇ, ಆ ಆಗಸ್ಟ್ 1 ರಂದು ಕೋಲ್ಕತ್ತಾದ ರವೀಂದ್ರ ಸದನದಲ್ಲಿ ನಡೆಯಲಿರುವ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಆಗಮಿಸಿದ್ದು,…

Read More

37 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಈ ವರ್ಷ ಅಡ್ಮಿಷನೇ ಆಗಿಲ್ಲ! 57 ಕಾಲೇಜುಗಳಲ್ಲಿ ಒಂದಂಕಿ ದಾಖಲಾತಿ – Kannada News | 37 Karnataka Government PU Colleges Record Zero Admissions This Year

ಸರ್ಕಾರಿ ಕಾಲೇಜು (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಜುಲೈ 31: ಕರ್ನಾಟಕದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ (PU College) ಬಗ್ಗೆ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿರುವುದು ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 37 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಮತ್ತೊಂದೆಡೆ, 57 ಕಾಲೇಜುಗಳಲ್ಲಿ 1ರಿಂದ 10ರೊಳಗೆ, ಅಂದರೆ ಒಂದಂಕಿ ದಾಖಲಾತಿ ಮಾತ್ರ ವರದಿಯಾಗಿದೆ. ವಿದ್ಯಾರ್ಥಿಗಳನ್ನು ಸರ್ಕಾರಿ ಪಿಯು ಕಾಲೇಜುಗಳತ್ತ ಸೆಳೆಯುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ…

Read More

KRS ಬಳಿ ಭಾರಿ ಹೈಡ್ರಾಮಾ: ಡ್ಯಾಂ ಮುತ್ತಿಗೆಗೆ ಯತ್ನಿಸಿದ ಬಿಜೆಪಿಗರು ಪೊಲೀಸ್​​ ವಶಕ್ಕೆ

ಮಂಡ್ಯ, ಜುಲೈ 31: ತಮಿಳುನಾಡಿಗೆ ನೀರು ಹರಿಸುವಂತೆ CWMA ಆದೇಶ ಖಂಡಿಸಿ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಲಾಶಯಕ್ಕೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, ಎಲ್ಲರನ್ನೂ ವಾಹನದಲ್ಲಿ ತುಂಬಿಸಿ ಕರೆದೊಯ್ದಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ವಿಪಕ್ಷ ನಾಯಕ ಆರ್​.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ​ಸೇರಿ ಪ್ರಮುಖರು ಭಾಗಿಯಾಗಿದ್ದರು. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source…

Read More

ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ – Kannada News | Sarvam building 1 trillion parameter AI model, eyes beyond foundational model

ಇತ್ತೀಚೆಗೆ ನಡೆದ ಎಐ ಕಾರ್ಯಕ್ರಮವೊಂದರಲ್ಲಿ ಸರ್ವಂ ಪ್ರಸ್ತುತಿ ವೀಕ್ಷಿಸಿದ ಪ್ರಧಾನಿ ಮೋದಿImage Credit source: PTI ನವದೆಹಲಿ, ಜುಲೈ 31: ಭಾರತೀಯ ಎಐ ಸ್ಟಾರ್ಟ್‌ಅಪ್ ಸರ್ವಂ (Sarvam AI) ತನ್ನ ‘Epoch 2026’ ಎಐ ಸಮ್ಮೇಳನದಲ್ಲಿ ಹಲವು ಪ್ರಮುಖ ತಂತ್ರಜ್ಞಾನ ನವೀಕರಣಗಳು ಮತ್ತು ಹೊಸ ಎಐ ಮಾಡೆಲ್‌ಗಳನ್ನು ಘೋಷಿಸಿದೆ. ಭಾರತದಲ್ಲೇ ಸಂಪೂರ್ಣವಾಗಿ 1 ಟ್ರಿಲಿಯನ್‌ಗಿಂತಲೂ ಹೆಚ್ಚು (1 Trillion+) ಪ್ಯಾರಾಮೀಟರ್ ಹೊಂದಿರುವ ಬೃಹತ್ ಎಐ ಮಾಡೆಲ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಸರ್ವಂ ಸಂಸ್ಥೆ ಘೋಷಿಸಿದೆ. ಇದು ಕೋಡಿಂಗ್, ಸೈಬರ್…

Read More

ಪಾಕ್​ನ ಬ್ರಾಡ್ ಪೀಕ್‌ನಲ್ಲಿ ಹಿಮಪಾತ: ಓಮನ್‌ನ ಪ್ರಸಿದ್ಧ ಪರ್ವತಾರೋಹಿ ನಾಧಿರಾ ಸೇರಿ ಇಬ್ಬರು ಸಾವು, ನಿರ್ಮಲ್ ಪುರ್ಜಾ ನಾಪತ್ತೆ – Kannada News | Broad Peak Avalanche Kills Two, Nirmal Purja and Team Missing: Pakistan Tragedy

ಇಸ್ಲಾಮಾಬಾದ್, ಜುಲೈ 31: ಪಾಕಿಸ್ತಾನ(Pakistan)ದ ಕಾರಕೋರಂ ಪರ್ವತ ಶ್ರೇಣಿಯಲ್ಲಿರುವ ವಿಶ್ವದ 12 ನೇ ಅತಿ ಎತ್ತರದ ಶಿಖರ ‘ಬ್ರಾಡ್ ಪೀಕ್’ ಏರುವ ವೇಳೆ ಭೀಕರ ಹಿಮಪಾತ ಸಂಭವಿಸಿದ್ದು, ಕನಿಷ್ಠ ಇಬ್ಬರು ಪರ್ವತಾರೋಹಿಗಳು ಶವವಾಗಿ ಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲದೆ, ಜಗತ್ಪ್ರಸಿದ್ಧ ನೇಪಾಳಿ ಪರ್ವತಾರೋಹಿ ನಿರ್ಮಲ್ ‘ನಿಮ್ಸ್‌ದೈ’ ಪುರ್ಜಾ ನೇತೃತ್ವದ 10 ಪರ್ವತಾರೋಹಿಗಳ ತಂಡವು ಕಾಣೆಯಾಗಿದ್ದು, ಜಾಗತಿಕ ಪರ್ವತಾರೋಹಣ ಸಮುದಾಯ ತೀವ್ರ ಆತಂಕದಲ್ಲಿದೆ. ಪಾಕಿಸ್ತಾನ ಆಲ್ಪೈನ್ ಕ್ಲಬ್ ಗುರುವಾರ ಮಧ್ಯಾಹ್ನ ಸಂಭವಿಸಿದ ಈ ಅನಾಹುತವನ್ನು ದೃಢಪಡಿಸಿದ್ದು, ಮೃತಪಟ್ಟ ಇಬ್ಬರು ಪ್ರಮುಖ…

Read More