RRB Recruitment: ರೈಲ್ವೆ ನೇಮಕಾತಿ; 312 ಪ್ರತ್ಯೇಕ ವರ್ಗದ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | RRB Recruitment 2025: 312 Specialist Posts – Apply Online!

ರೈಲ್ವೆ ನೇಮಕಾತಿ ಮಂಡಳಿ (RRB) ದೇಶಾದ್ಯಂತ ರೈಲ್ವೆ ಪ್ರದೇಶಗಳಲ್ಲಿ ಪ್ರತ್ಯೇಕ ವರ್ಗದ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ, ಮುಖ್ಯ ಕಾನೂನು ಸಹಾಯಕ, ಸಾರ್ವಜನಿಕ ಅಭಿಯೋಜಕ, ಜೂನಿಯರ್ ಅನುವಾದಕ, ಹಿರಿಯ ಪ್ರಚಾರ ನಿರೀಕ್ಷಕ, ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕ, ವೈಜ್ಞಾನಿಕ ಸಹಾಯಕ ತರಬೇತಿ ಇತ್ಯಾದಿ ಒಟ್ಟು 312 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳನ್ನು ಬೆಂಗಳೂರು, ಅಹಮದಾಬಾದ್, ಅಜ್ಮೀರ್, ಭೋಪಾಲ್, ಭುವನೇಶ್ವರ, ಬಿಲಾಸ್ಪುರ್, ಚಂಡೀಗಢ, ಚೆನ್ನೈ, ಗುವಾಹಟಿ, ಗೋರಖ್‌ಪುರ, ಕೋಲ್ಕತ್ತಾ, ಮುಂಬೈ, ಪಾಟ್ನಾ, ಪ್ರಯಾಗ್‌ರಾಜ್.. RRB ಪ್ರದೇಶಗಳಲ್ಲಿ ಭರ್ತಿ ಮಾಡಲಾಗುತ್ತದೆ.

ಪೋಸ್ಟ್ ವಿವರಗಳು:

  • ಮುಖ್ಯ ಕಾನೂನು ಸಹಾಯಕ ಹುದ್ದೆಗಳ ಸಂಖ್ಯೆ: 22
  • ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳ ಸಂಖ್ಯೆ: 07
  • ಜೂನಿಯರ್ ಟ್ರಾನ್ಸ್‌ಲೇಟರ್ ಹುದ್ದೆಗಳ ಸಂಖ್ಯೆ: 202
  • ಹಿರಿಯ ಪ್ರಚಾರ ನಿರೀಕ್ಷಕರ ಹುದ್ದೆಗಳ ಸಂಖ್ಯೆ: 15
  • ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರ ಹುದ್ದೆಗಳ ಸಂಖ್ಯೆ: 24
  • ವೈಜ್ಞಾನಿಕ ಸಹಾಯಕ/ತರಬೇತಿ ಹುದ್ದೆಗಳ ಸಂಖ್ಯೆ: 02
  • ಪ್ರಯೋಗಾಲಯ ಸಹಾಯಕ ಗ್ರೇಡ್-3 ಹುದ್ದೆಗಳ ಸಂಖ್ಯೆ: 39
  • ವೈಜ್ಞಾನಿಕ ಮೇಲ್ವಿಚಾರಕ/ದಕ್ಷತಾಶಾಸ್ತ್ರ ಮತ್ತು ತರಬೇತಿ ಹುದ್ದೆಗಳ ಸಂಖ್ಯೆ: 01

ಆರ್‌ಆರ್‌ಬಿ ಪ್ರತ್ಯೇಕಿತ ವರ್ಗದ ಹುದ್ದೆಗಳ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಟರ್ಮೀಡಿಯೇಟ್, ಕಾನೂನು ಪದವಿ, ಸಂಬಂಧಿತ ವಿಭಾಗಗಳಲ್ಲಿ ಡಿಪ್ಲೊಮಾ, ಪಿಜಿ ಡಿಪ್ಲೊಮಾ, ಎಂಬಿಎ, ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ವಯಸ್ಸಿನ ಮಿತಿ ಜನವರಿ 1, 2026 ಕ್ಕೆ 18 ವರ್ಷಗಳು. ಈ ಅರ್ಹತೆಗಳನ್ನು ಹೊಂದಿರುವವರು ಜನವರಿ 29, 2026 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕದ ಭಾಗವಾಗಿ, ಸಾಮಾನ್ಯ ಅಭ್ಯರ್ಥಿಗಳು ರೂ. 500, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕರು, ಇಬಿಸಿ, ಅಲ್ಪಸಂಖ್ಯಾತ ಅಭ್ಯರ್ಥಿಗಳು ತಲಾ ರೂ. 250 ಪಾವತಿಸಬೇಕಾಗುತ್ತದೆ. ಅಂತಿಮ ಆಯ್ಕೆಯು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಅನುವಾದ ಪರೀಕ್ಷೆಯನ್ನು ಆಧರಿಸಿರುತ್ತದೆ. ಆಯ್ಕೆಯಾದವರಿಗೆ ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳಿಗೆ ರೂ. 19,000, ಜೂನಿಯರ್ ಟ್ರಾನ್ಸ್‌ಲೇಟರ್, ಇನ್ಸ್‌ಪೆಕ್ಟರ್‌ಗಳು ಮತ್ತು ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ರೂ. 35,400 ಮತ್ತು ಇತರ ಹುದ್ದೆಗಳಿಗೆ ರೂ. 44,900 ಮಾಸಿಕ ವೇತನವನ್ನು ನೀಡಲಾಗುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

VHT 2025-26: ವರ್ಷದ ಕೊನೆಯ ದಿನ ಸಿಡಿದವು ಬರೋಬ್ಬರಿ 13 ಶತಕಗಳು

Source link

ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಮರ್ಡರ್​​ ರಹಸ್ಯ ಬಿಚ್ಚಿಟ್ಟಿದ್ದು ಹೆತ್ತಮ್ಮ! – Kannada News | Property Dispute Between Brothers: Mother Reveals Son’s Murder in Chikkodi

ಚಿಕ್ಕೋಡಿ, ಜನವರಿ 01: ಆಸ್ತಿ ವಿಚಾರಕ್ಕೆ ಒಡ ಹುಟ್ಟಿದವನನ್ನೇ ಕೊಂದಿದ್ದಲ್ಲದೆ ಆತ ಮೃತಪಟ್ಟಿರೋದು ಆಕಸ್ಮಿಕ ಸಾವಿನಿಂದ ಎಂದು ಬಿಂಬಿಸಿದ್ದ ಖತರ್ನಾಕ್​​ ವ್ಯಕ್ತಿಯನ್ನು ಸಿನಿಮೀಯ ಮಾದರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಸಲಿಂಗ ರಾಮಾಪುರೆ (38) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಸಹೋದರ ಸಿದ್ದಪ್ಪ ರಾಮಾಪುರೆಯೇ ಆರೋಪಿ ಎಂಬುದು ತನಿಖೆ ವೇಳೆ ಪೊಲೀಸರು ಬಯಲು ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ಡಿ.18ರಂದು ಬಸಲಿಂಗ ರಾಮಾಪುರೆ ಮೃತಪಟ್ಟಿದ್ದ. ಹಂಚು ಹಾಕುವಾಗ ಬಿದ್ದು ಆತ ಮೃತಪಟ್ಟಿರೋದಾಗಿ ಕುಟುಂಬಸ್ಥರು ತಿಳಿಸಿದ್ದರು. ಆದರೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಈ ಬಗ್ಗೆ ಅನುಮಾನ ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೂ ಕೂಡ ತಲೆಗೆ ಬಲವಾಗಿ ಪೆಟ್ಟುಬಿದ್ದ ಕಾರಣ ವ್ಯಕ್ತಿ ಮೃತಪಟ್ಟಿರೋದಾಗಿ ತಿಳಿಸಿದ್ದರು. ಹೀಗಾಗಿ ಬಸಲಿಂಗ ಕುಟುಂಬಸ್ಥರನ್ನು ಪೊಲೀಸರು ಮತ್ತೊಮ್ಮೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ತಾಯಿ ರತ್ನವ್ವ ಬಳಿ ಸಿಬ್ಬಂದಿ ಭಾವನಾತ್ಮಕವಾಗಿ ಮಾತಾಡಿದಾಗ ಆಕೆ ಕೊಲೆಯ ರಹಸ್ಯ ಬಿಚ್ಚಿಟ್ಟಿದ್ದಾಳೆ.

ಇದನ್ನೂ ಓದಿ: ಮನೆಯೊಳಗೆ ಗುಂಡಿಕ್ಕಿ ಆಭರಣ ವ್ಯಾಪಾರಿ ಮತ್ತವರ ಪತ್ನಿಯ ಹತ್ಯೆ

ನಾಲ್ಕು ಎಕರೆ ಜಮೀನಿಗಾಗಿ ಬಸಲಿಂಗ ಮತ್ತು ಸಿದ್ದಪ್ಪ ನಡುವೆ ಗಲಾಟೆ ನಡೆದಿತ್ತು. ಆಸ್ತಿ ಬಗ್ಗೆ ತಮ್ಮ ಬಸಲಿಂಗ ಅಣ್ಣನ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಹೀಗಾಗಿ ದನದ ಕೊಟ್ಟಿಗೆಯಲ್ಲಿ ಆತನ ಮೇಲೆ ಸಿದ್ದಪ್ಪ ಹಲ್ಲೆ ನಡೆಸಿದ್ದ. ಕಟ್ಟಿಗೆ ಮತ್ತು ಕಲ್ಲಿನಿಂದ ದಾಳಿ ನಡೆಸಿದ ಪರಿಣಾಮ ಬಸಲಿಂಗ ಮೃತಪಟ್ಟಿದ್ದ. ತಾಯಿ ರತ್ನವ್ವ ಮತ್ತು ಬಸಲಿಂಗನ ಪತ್ನಿ ವೀಣಾ ಎದುರೇ ಈ ಘಟನೆ ನಡೆದಿತ್ತು. ಬಳಿಕ ವೀಣಾಗೆ ಜೀವ ಬೆದರಿಕೆ ಹಾಕುವ ಮೂಲಕ ಸಿದ್ದಪ್ಪ ಪ್ರಕರಣ ಮುಚ್ಚಿಹಾಕಿದ್ದ. ಆದರೆ ಆತನ ತಾಯಿಯೇ ಈಗ ಮಗನ ಕೊಲೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ತನಿಖೆ ವೇಳೆ ರತ್ನವ್ವ ನೀಡಿರುವ ಮಾಹಿತಿ ಹಿನ್ನೆಲೆ ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಸಿದ್ದಪ್ಪನನ್ನು ಪೊಲೀಸರು ಬಂಧಿಸಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ತಮ್ಮನ ಕೊಂದು ಬಚಾವ್​ ಆಗಲು ಆರೋಪಿ ನಡೆಸಿದ್ದ ಸರ್ವ ಪ್ರಯತ್ನಗಳೂ ವಿಫಲವಾಗಿದ್ದು, ಕಂಬಿ ಹಿಂದೆ ನಿಲ್ಲಲೇ ಬೇಕಾದ ಸ್ಥಿತಿ ಸಿದ್ದಪ್ಪಗೆ ಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Himachal Pradesh Blast: ಹಿಮಾಚಲ ಪ್ರದೇಶದ ಪೊಲೀಸ್ ಸ್ಟೇಷನ್ ಬಳಿ ಭಾರೀ ಸ್ಫೋಟ – Kannada News | Blast near Himachal Pradesh police station near by windows cracked

ಶಿಮ್ಲಾ, ಜನವರಿ 1: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ನಲಗಢದ ಪೊಲೀಸ್ ಠಾಣೆ ಬಳಿ ಇಂದು ಭಾರೀ ಸ್ಫೋಟ (Blast) ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಮತ್ತು ಸ್ಫೋಟದ ಕಾರಣವನ್ನು ಗುರುತಿಸಲು ತನಿಖೆ ಆರಂಭಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ನಲಗಢ ಪೊಲೀಸ್ ಠಾಣೆ ಬಳಿಯ ಲೇನ್‌ನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮವು ಎಷ್ಟು ಬಲವಾಗಿತ್ತು ಎಂದರೆ ಈ ಸ್ಥಳದಿಂದ ನೂರಾರು ಮೀಟರ್ ದೂರದಲ್ಲಿರುವ ಸೇನಾ ಕ್ಯಾಂಟೀನ್ ಸೇರಿದಂತೆ ಹತ್ತಿರದ ಕಟ್ಟಡಗಳ ಕಿಟಕಿಗಳು ಬಿರುಕು ಬಿಟ್ಟಿವೆ.

ಸ್ಥಳೀಯರು ಹೇಳುವಂತೆ 400ರಿಂದ 500 ಮೀಟರ್‌ಗಳ ದೂರದಿಂದ ಜೋರಾದ ಶಬ್ದ ಕೇಳಿಬಂದಿತು. 16 ಎಂಎಂ ದಪ್ಪದ ಗಾಜುಗಳು ಸಹ ಒಡೆದುಹೋಗಿವೆ. ಸುತ್ತಲಿನ ಕಟ್ಟಡಗಳೆಲ್ಲವೂ ನಡುಗಿದವು ಎಂದು ಹತ್ತಿರದಲ್ಲಿ ಕುಳಿತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಇಂದು ಬೆಳಿಗ್ಗೆ 9.40ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ವಿಧಿವಿಜ್ಞಾನ ತಂಡವು ವಿವಿಧ ಸ್ಥಳಗಳಿಂದ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯ ರೈಲುಗಳ ಬೋಗಿಗಳು ವಿಭಿನ್ನ ಬಣ್ಣಗಳನ್ನು ಹೊಂದಿರುವುದೇಕೆ?

ಯಾವುದೇ ಇ-ಮೇಲ್ ಅಥವಾ ಬೆದರಿಕೆ ಕರೆ ಬಂದಿಲ್ಲ. ಪ್ರಾಥಮಿಕವಾಗಿ ಸ್ಫೋಟಕಗಳನ್ನು ಒಳಗೊಂಡ ಯಾವುದೇ ದುಷ್ಕೃತ್ಯ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಪ್ರದೇಶದಲ್ಲಿ ಬಹಳಷ್ಟು ಸ್ಕ್ರ್ಯಾಪ್‌ಗಳು ಕೂಡ ರಾಶಿ ಬಿದ್ದಿವೆ.

ಈ ಸ್ಫೋಟದ ನಂತರ ಹಿಮಾಚಲ ಪ್ರದೇಶ ಪೊಲೀಸರು ಕಾರ್ಯಪ್ರವೃತ್ತರಾದರು ಮತ್ತು ಸ್ಫೋಟದ ಕುರಿತು ಹೆಚ್ಚಿನ ತನಿಖೆಗಾಗಿ ಆ ಪ್ರದೇಶದಲ್ಲಿ ತಕ್ಷಣವೇ ಬ್ಯಾರಿಕೇಡ್ ಹಾಕಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:34 pm, Thu, 1 January 26

Source link

Guddattu Vinayaka Temple: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ – Kannada News | Guddattus Jalahivasa Ganapathi: The Worlds Only Water Immersed Deity

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಡಿಭಾಗದಲ್ಲಿರುವ ಗುಡ್ಡಟ್ಟು ಗ್ರಾಮವು ಶ್ರೀ ವಿನಾಯಕ ದೇವಸ್ಥಾನದಿಂದಾಗಿ ಪ್ರಪಂಚದಾದ್ಯಂತ ಗಮನ ಸೆಳೆದಿದೆ. ಈ ದೇವಸ್ಥಾನವು ಹಲವು ಅಪರೂಪದ ವೈಶಿಷ್ಟ್ಯಗಳನ್ನು ಹೊಂದಿದ್ದು, ಗಣಪತಿ ಭಕ್ತರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ದೇವಸ್ಥಾನವು ಶಿರಿಹಾರ-ಗುಡ್ಡಟ್ಟು ರಸ್ತೆಯಲ್ಲಿದೆ. ಇಲ್ಲಿನ ವಿನಾಯಕ ದೇವರ ಮೂರ್ತಿಯು ಸ್ವಯಂಭೂ ರೂಪವಾಗಿದೆ. ಅಂದರೆ, ಇದನ್ನು ಯಾವುದೇ ಶಿಲ್ಪಿಯು ಕೆತ್ತದೆ, ಸಾವಿರಾರು ವರ್ಷಗಳ ಹಿಂದೆ ತಾನಾಗಿಯೇ ಕಲ್ಲಿನಿಂದ ಉದ್ಭವಿಸಿದೆ. ಇತರ ಸ್ವಯಂಭೂ ವಿಗ್ರಹಗಳಂತೆ ಇದು ಕೇವಲ ಬಂಡೆಯ ಆಕಾರದಲ್ಲಿಲ್ಲ, ಬದಲಾಗಿ ಸ್ಪಷ್ಟವಾದ ಗಣಪತಿಯ ಆಕಾರವನ್ನು ಹೊಂದಿದೆ. ಒಂದು ಕಾಲು ಮಡಚಿ, ಇನ್ನೊಂದು ಕಾಲು ಕೆಳಗೆ ಬಿಟ್ಟುಕೊಂಡು, ದಕ್ಷಿಣಕ್ಕೆ ಮುಖ ಮಾಡಿರುವ ಪೂರ್ವಾಸನದಲ್ಲಿ ಕುಳಿತಂತೆ ಕಾಣುತ್ತದೆ. ತಲೆಯಿಂದ ಕೆಳಗಿನವರೆಗೂ ಮೂಲ ಬಂಡೆಗೆ ಸೇರಿಕೊಂಡಿದ್ದು, ಸ್ಪಷ್ಟವಾದ ಸ್ವರೂಪದಿಂದ ಭಕ್ತರನ್ನು ಆಕರ್ಷಿಸುತ್ತದೆ.

ಪ್ರಪಂಚದ ಏಕೈಕ ಜಲಾಧಿವಾಸ ಗಣಪ:

ಈ ದೇವಸ್ಥಾನದ ಅತ್ಯಂತ ಮಹತ್ವದ ಮತ್ತು ವಿಶ್ವದಲ್ಲಿಯೇ ಏಕೈಕ ವಿಶಿಷ್ಟತೆಯೆಂದರೆ “ಜಲಾಧಿವಾಸ”. ಇಲ್ಲಿನ ಗಣಪತಿ ವಿಗ್ರಹವು ವರ್ಷದ 365 ದಿನಗಳೂ, ದಿನದ 24 ಗಂಟೆಯೂ ಕುತ್ತಿಗೆಯವರೆಗೂ ನೀರಿನಲ್ಲಿ ಮುಳುಗಿರುತ್ತದೆ. ಜಲಾಧಿವಾಸ ಗಣಪತಿಯ ಪರಿಕಲ್ಪನೆಯು ಪ್ರಪಂಚದಲ್ಲಿ ಬೇರೆಲ್ಲೂ ಕಂಡುಬರುವುದಿಲ್ಲ. ಮೂರನೆಯ ವಿಶಿಷ್ಟತೆಯೆಂದರೆ, ಇದು ಬಲಮುರಿ ಗಣಪತಿ. ಸೊಂಡಿಲು ಬಲಕ್ಕೆ ತಿರುಗಿರುವ ಗಣಪತಿಯನ್ನು ಬಲಮುರಿ ಗಣಪತಿ ಎಂದು ಕರೆಯಲಾಗುತ್ತದೆ.

ಪುರಾಣ ಕಥೆ:

ಪುರಾಣದ ಪ್ರಕಾರ, ತ್ರಿಪುರಾಸುರ ಸಂಹಾರದ ಸಮಯದಲ್ಲಿ ಈಶ್ವರನು ಗಣಪತಿಯನ್ನು ಪ್ರಾರ್ಥಿಸದೆ ಯುದ್ಧಕ್ಕೆ ತೆರಳುತ್ತಾನೆ. ವಿಘ್ನನಿವಾರಕನಾದ ಗಣಪತಿಯನ್ನು ಸ್ಮರಿಸದೆ ಹೋದ ಕಾರಣ ಈಶ್ವರನಿಗೆ ಹಿನ್ನಡೆಯಾಗುತ್ತದೆ. ಇದರಿಂದ ಕೋಪಗೊಂಡ ಈಶ್ವರನು ಗಣಪತಿಯ ಮೇಲೆ ಅಗ್ನೇಯಾಸ್ತ್ರ ಪ್ರಯೋಗಿಸುತ್ತಾನೆ. ಆದರೆ ಗಣಪತಿಯನ್ನು ಯಾವ ಅಸ್ತ್ರವೂ ಬಾಧಿಸಲಾಗದ ಕಾರಣ, ಈಶ್ವರನ ಅಸ್ತ್ರವು ಹುಸಿಯಾಗದೆ ಮಧುಸಾಗರದಲ್ಲಿ ಬೀಳುತ್ತದೆ. ಗಣಪತಿಗೆ ಜೇನು ಇಷ್ಟವಾದುದರಿಂದ, ಮಧುಸಾಗರದಲ್ಲಿ ಯಥೇಚ್ಛ ಜೇನನ್ನು ಸೇವಿಸುತ್ತಾನೆ. ಅತಿಯಾದ ಮಧುಪಾನದಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿಯಿಂದ ನರಳುತ್ತಾನೆ. ಇದನ್ನು ಕಂಡ ಈಶ್ವರನು ಪಕ್ಕದಲ್ಲಿರುವ ನರಸಿಂಹ ತೀರ್ಥ ಎಂಬ ಹೊಳೆಯ ಸಮೀಪ, ಜಲಾಧಿವಾಸಿ ಯಾಗಿರುವಂತೆ ಗಣಪತಿಗೆ ಸೂಚಿಸುತ್ತಾನೆ. ಈಶ್ವರನ ಈ ಸೂಚನೆಯ ಮೇರೆಗೆ ಗಣಪತಿಯು ತನ್ನ ಉರಿ ಶಮನಕ್ಕಾಗಿ ನಿರಂತರವಾಗಿ ನೀರಿನಲ್ಲಿ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ. ನರಸಿಂಹ ತೀರ್ಥದ ನೀರು ರೋಗನಾಶಕವೆಂದು ನಂಬಲಾಗಿದೆ.

ಇದನ್ನೂ ಓದಿ: ಸಾಮಾನ್ಯ ಜನರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಬಾರದು ಯಾಕೆ?

ಗಣಪನಿಗೆ ‘ಆಯಿರ ಕೊಡ ಸೇವೆ’ ಇಲ್ಲಿನ ವಿಶೇಷ:

ಇಲ್ಲಿನ ಪ್ರಮುಖ ಮತ್ತು ವಿಶೇಷ ಪೂಜೆಯು ಆಯಿರ ಕೊಡ ಸೇವೆ (ಸಹಸ್ರ ಕುಂಭಾಭಿಷೇಕ) ಎಂದರೆ ಸಾವಿರ ಕೊಡಗಳಲ್ಲಿ (ಕುಡಿಕೆಗಳಲ್ಲಿ) ನೀರು ಅಥವಾ ಪವಿತ್ರ ದ್ರವ್ಯಗಳನ್ನು ತಂದು ಗಣಪತಿಗೆ ಅಭಿಷೇಕ ಮಾಡುವ ವಿಶೇಷ ಪೂಜಾ ವಿಧಾನವಾಗಿದೆ. ಗಣಪತಿಯ ಜಲಾಧಿವಾಸದ ನೀರು ಪರಿಸರದ ಉಷ್ಣತೆಯಿಂದ ಬಿಸಿಯಾಗುವುದರಿಂದ, ಉಷ್ಣತೆ ಕಡಿಮೆ ಮಾಡಲು ಈ ಸೇವೆಯನ್ನು ಮಾಡಲಾಗುತ್ತದೆ. ಆಯಿರ ಕೊಡ ಸೇವೆಯಲ್ಲಿ, ಹಳೆಯ ನೀರನ್ನು ಕೈಯಿಂದಲೇ ತೆಗೆದು, ದೇವರಿಗೆ ತೈಲಾಭ್ಯಂಜನ ಮತ್ತು ರುದ್ರಾಭಿಷೇಕ ಮಾಡಲಾಗುತ್ತದೆ. ನಂತರ ಗರ್ಭಗುಡಿಯನ್ನು ಸಂಪೂರ್ಣವಾಗಿ ಒರೆಸಿ, ಶುದ್ಧಗೊಳಿಸಲಾಗುತ್ತದೆ. ಈ ಪ್ರಕ್ರಿಯೆಗೆ ಸುಮಾರು ಮುಕ್ಕಾಲು ಗಂಟೆ ಬೇಕಾಗುತ್ತದೆ. ನಂತರ ಋಗ್ವೇದದ ಮಂತ್ರಗಳನ್ನು ಪಠಿಸುತ್ತಾ ದೀಪ ಬೆಳಗಿಸಿ ದೇವರಿಗೆ ಕಲ್ಪೋಕ್ತ ಪೂಜೆ, ನೈವೇದ್ಯ, ಮಂಗಳಾರತಿ, ಮಂತ್ರಪುಷ್ಪ ಸಮರ್ಪಿಸಲಾಗುತ್ತದೆ. ಬಳಿಕ ಶುದ್ಧವಾದ ತಂಪಾದ ನೀರನ್ನು ಸಾವಿರಾರು ಕೊಡಗಳಲ್ಲಿ ಗರ್ಭಗುಡಿಗೆ ಸುರಿಯಲಾಗುತ್ತದೆ. ಗಣಪತಿಯ ಕಂಠಪ್ರಮಾಣದವರೆಗೂ ನೀರು ತುಂಬಿದ ನಂತರ ಮತ್ತೊಂದು ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಮಾಡಲಾಗುತ್ತದೆ. ಈ ಸೇವೆಯಲ್ಲಿ ಎರಡು ರುದ್ರಾಭಿಷೇಕ ಮತ್ತು ಒಂದು ಪವಮಾನ ಅಭಿಷೇಕ ಸೇರಿದಂತೆ ಸಾವಿರಾರು ಕೊಡ ನೀರು ಬಳಕೆಯಾಗುವುದರಿಂದ ಇದನ್ನು “ಆಯಿರ ಕೊಡ ಸೇವೆ” ಎಂದು ಕರೆಯಲಾಗುತ್ತದೆ.

ಮೊದಲು ದಿನಕ್ಕೆ ಒಂದು ಸೇವೆ ಮಾತ್ರ ನಡೆಯುತ್ತಿತ್ತು. ಆದರೆ 2007ರಿಂದ ದಿನಕ್ಕೆ ಎರಡು ಸೇವೆಗಳು ನಡೆಯುತ್ತಿವೆ. ಆದರೂ ಈ ಸೇವೆಗೆ ಅಗಾಧ ಬೇಡಿಕೆಯಿದ್ದು, ಈಗ ಕಾಯ್ದಿರಿಸಿದರೆ 2041ರ ವೇಳೆಗೆ ದಿನಾಂಕ ಲಭ್ಯವಾಗುವಷ್ಟು ಜನಪ್ರಿಯವಾಗಿದೆ. ಇಲ್ಲಿ ಪ್ರತಿದಿನ ಅನ್ನಸಂತರ್ಪಣೆ ಇರುತ್ತದೆ. ಮಧ್ಯಾನ ಪೂಜೆ ಮುಗಿದ ನಂತರ ಪ್ರಸಾದ ವಿತರಣೆ ಮಾಡಲಾಗುತ್ತದೆ. ದೇವಸ್ಥಾನವು ಅರಣ್ಯ ಪ್ರದೇಶದ ಮಧ್ಯೆ, ಸುಂದರ ಹಸಿರು ಪರಿಸರದಲ್ಲಿದ್ದು, ಯಾವುದೇ ಗದ್ದಲವಿಲ್ಲದ ಶಾಂತ ವಾತಾವರಣವನ್ನು ಹೊಂದಿದೆ. ಕುಂದಾಪುರದಿಂದ ಸುಮಾರು 30 ನಿಮಿಷಗಳ ಪ್ರಯಾಣದಲ್ಲಿ ಈ ಕ್ಷೇತ್ರವನ್ನು ತಲುಪಬಹುದು. ಗಣಪತಿ ಭಕ್ತರು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪವಿತ್ರ ಕ್ಷೇತ್ರವಿದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Name Change: ಗೆಜೆಟ್ ಮೂಲಕ ಹೆಸರು ಬದಲಾಯಿಸುವುದು ಹೇಗೆ?; ಇಲ್ಲಿದೆ 3 ಹಂತಗಳ ನಾಮ ಬದಲಾವಣೆ ಪ್ರಕ್ರಿಯೆ – Kannada News | Easy steps to officially change a person’s name and get published in e Gazette

ನಾನಾ ಕಾರಣಗಳಿಂದ ಹೆಸರು ಬದಲಾವಣೆ (Name Change) ಮಾಡಬೇಕಾಗಬಹುದು. ನಾವೇ ಹೆಸರು ಬದಲಾಯಿಸಿಕೊಳ್ಳಲು ಆಗುವುದಿಲ್ಲ. ಗೆಜೆಟ್​ನಲ್ಲಿ ನಿಮ್ಮ ಹೊಸ ಹೆಸರು ಮುದ್ರಿತವಾಗಬೇಕು. ಆಗ ಮಾತ್ರ ಅಧಿಕೃತವಾಗಿ ಹೆಸರು ಬದಲಾದಂತೆ. ಇದಕ್ಕೆ ಮೂರ್ನಾಲ್ಕು ಹಂತಗಳಿವೆ. ಅಫಿಡವಿಟ್ ಮಾಡುವುದು, ಜಾಹೀರಾತು ಕೊಡುವುದು, ಗೆಜೆಟ್​ನಲ್ಲಿ ಮುದ್ರಿಸುವುದು ಅತ್ಯಗತ್ಯ. ಇದನ್ನು ಹೇಗೆ ಮಾಡುವುದು, ಈ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.

ಹೆಸರು ಬದಲಾವಣೆಯ ಅಫಿಡವಿಟ್

ಮೊದಲ ಹಂತ ಎಂದರೆ ಅಫಿಡವಿಟ್ ರಚಿಸುವುದು. ಸ್ಟ್ಯಾಂಪ್ ಪೇಪರ್​ನಲ್ಲಿ ನಿಮ್ಮ ಈಗಿನ ಹೆಸರು, ಹೊಸ ಹೆಸರು, ತಂದೆ ಅಥವಾ ಗಂಡನ ಹೆಸರು, ಪೂರ್ಣ ವಿಳಾಸ, ಹಾಗು ಹೆಸರು ಬದಲಾವಣೆಗೆ ಏನು ಕಾರಣ, ಇವೆಲ್ಲ ಅಂಶಗಳನ್ನು ಸೇರಿಸಿ ಅಫಿಡವಿಟ್ ರಚಿಸಬೇಕು.

ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ

ಈ ದಾಖಲೆಗೆ ನಿಮ್ಮ ಹಾಗೂ ಇಬ್ಬರು ಸಾಕ್ಷಿಗಳ ಸಹಿ ಬೇಕು. ಇದಾದ ಬಳಿಕ ಅಫಿಡವಿಟ್​ಗೆ ಪಬ್ಲಿಕ್ ನೋಟರಿ ಅಥವಾ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಂದ ನೋಟರೈಸ್ ಅಗಬೇಕು. ಸ್ಟ್ಯಾಂಪ್ ಪೇಪರ್​ಗೆ 20 ರೂ, ಹಾಗೂ ನೋಟರಿ ಫೀ ಸುಮಾರು 200ರಿಂದ 400 ರೂ ಆಗಬಹುದು. ಇದು ನಿಮ್ಮ ಹೆಸರು ಬದಲಾವಣೆಯ ಮೊದಲ ಹಂತ.

ಸುದ್ದಿಪತ್ರಿಕೆಗಳಲ್ಲಿ ಜಾಹೀರಾತು

ನೋಟರಿಯಿಂದ ಅಫಿಡವಿಟ್​ಗೆ ಸೀಲು, ಸಹಿ ಬಿದ್ದ ಬಳಿಕ ನೀವು ಕನಿಷ್ಠ ಎರಡು ಸುದ್ದಿಪತ್ರಿಕೆಯಲ್ಲಿ ನಿಮ್ಮ ಹೆಸರು ಬದಲಾವಣೆಯನ್ನು ಪ್ರಕಟಿಸಬೇಕು. ಒಂದು, ಇಂಗ್ಲೀಷ್, ಇನ್ನೊಂದು ಕನ್ನಡ (ಅಥವಾ ಸ್ಥಳೀಯ ಭಾಷೆ) ಪತ್ರಿಕೆಯಲ್ಲಿ ಈ ಜಾಹೀರಾತು ಪ್ರಕಟವಾಗಬೇಕು. ಇದರಲ್ಲಿ ನಿಮ್ಮ ಹಳೆಯ ಹೆಸರು, ಹೊಸ ಹೆಸರು, ತಂದೆ ಅಥವಾ ಪತಿಯ ಹೆಸರು, ವಿಳಾಸ, ಹಾಗೂ ಅಫಿಡವಿಟ್ ಆದ ದಿನಾಂಕ ಈ ವಿವರ ಇರಬೇಕು. ಸುದ್ದಿಪತ್ರಿಕೆಯಲ್ಲಿ ಇದಕ್ಕೆಂದೇ ಒಂದು ಫಾರ್ಮ್ಯಾಟ್​ನ ಅರ್ಜಿ ನಮೂನೆ ಇರುತ್ತದೆ. ಅದನ್ನು ಭರ್ತಿ ಮಾಡಿ ಕೊಟ್ಟರೆ, ಪತ್ರಿಕೆಯಲ್ಲಿ ಒಂದೆಡೆ ಜಾಹೀರಾತು ಪ್ರಕಟವಾಗುತ್ತದೆ. ಇದಕ್ಕೆ ಸುಮಾರು 500 ರೂನಿಂದ 1,000 ರೂ ಆಗಬಹುದು.

ಇದನ್ನೂ ಓದಿ: ಬದಲಾಗುತ್ತಿದೆ ಭಾರತ; 2025ರಲ್ಲಿ ಮಹಾಪರಿವರ್ತನೆ; ಜಿಎಸ್​ಟಿಯಿಂದ ಹಿಡಿದು ಜಿ ರಾಮ್ ಜಿವರೆಗೆ ಹಲವು ಆರ್ಥಿಕ ಸುಧಾರಣೆಗಳು

ಗೆಜೆಟ್​ನಲ್ಲಿ ಮುದ್ರಣ

ಗೆಜೆಟ್ ಪತ್ರಿಕೆಯಲ್ಲಿ ಹೆಸರು ಬದಲಾವಣೆ ಆಗಿರುವುದನ್ನು ಮುದ್ರಿಸಬೇಕು. ಅದಕ್ಕಾಗಿ ಕೇಂದ್ರ ಸರ್ಕಾರದ ಇಗೆಜೆಟ್ ಪೋರ್ಟಲ್ ಬಳಸಬಹುದು. ಅಥವಾ ಕರ್ನಾಟಕದ ಇರಾಜ್ಯಪತ್ರ ಪೋರ್ಟಲ್ (eRajyapatra) ಅನ್ನು ಬಳಸಬಹುದು. ಇಲ್ಲಿ ಅರ್ಜಿ ಪಡೆದು ಭರ್ತಿ ಮಾಡಬೇಕು. ಅರ್ಜಿ ಜೊತೆಗೆ ನೋಟರಿಯಾದ ಅಫಿಡವಿಟ್, ಸುದ್ದಿಪತ್ರಿಕೆಯ ಕ್ಲಿಪಿಂಗ್, ಫೋಟೋ, ಐಡಿ ಪ್ರೂಫ್ ದಾಖಲೆಗಳನ್ನು ಸಲ್ಲಿಸಬೇಕು. ನಂತರ ಶುಲ್ಕ (2,000 ರೂ ಒಳಗೆ) ಪಾವತಿಸಬೇಕು.

ಇದಾದ ಬಳಿಕ ಇ-ಗಜೆಟ್​ನಲ್ಲಿ ನಿಮ್ಮ ಹೊಸ ಹೆಸರು ಮುದ್ರಿತವಾಗುತ್ತದೆ. ಅಗ ನಿಮ್ಮ ಹೆಸರು ಬದಲಾವಣೆ ಅಧಿಕೃತ ಎನಿಸುತ್ತದೆ. ಆಧಾರ್, ಪಾಸ್​ಪೋರ್ಟ್, ಬ್ಯಾಂಕ್ ಅಕೌಂಟ್, ಪ್ಯಾನ್ ಕಾರ್ಡ್ ಇತ್ಯಾದಿ ಬೇರೆ ಬೇರೆ ನಾಗರಿಕ ಸೇವೆ ದಾಖಲೆಗಳಲ್ಲಿ ಗೆಜೆಟ್ ಪ್ರತಿಯನ್ನು ಬಳಸಿ ಹೆಸರು ಬದಲಾಯಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:34 pm, Thu, 1 January 26

Source link

2026 ರ ಕ್ರೀಡಾ ಕ್ಯಾಲೆಂಡರ್; ಯಾವೆಲ್ಲಾ ಪ್ರಮುಖ ಕ್ರೀಡಾಕೂಟಗಳು ನಡೆಯಲಿವೆ ಗೊತ್ತಾ? – Kannada News | Global Sports Calendar 2026: FIFA WC, Cricket, Chess and India’s Hope

2025 ಕ್ಕೆ ಅದ್ಧೂರಿಯಾಗಿ ವಿದಾಯ ಹೇಳಿರುವ ಕ್ರೀಡಾಲೋಕ ಇದೀಗ 2026 ರಲ್ಲಿ (Sports Calendar 2026) ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಲು ಸಜ್ಜಾಗುತ್ತಿದೆ. ಈ ವರ್ಷ ಕ್ರೀಡಾ ಅಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸಲಿದೆ. ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಪ್ರಮುಖ ಕ್ರೀಡಾಕೂಟಗಳು ಈ ವರ್ಷ ಜರುಗಲಿವೆ. ಕ್ರಿಕೆಟ್‌ನಲ್ಲಿ ಐಸಿಸಿ (ICC) ಈವೆಂಟ್​ಗಳು ನಡೆಯಲಿದ್ದರೆ, 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಪ್ರಯಾಣವೂ ಪ್ರಾರಂಭವಾಗಲಿದೆ. ಕ್ರಿಕೆಟ್‌ನಿಂದ ಚೆಸ್, ಬ್ಯಾಡ್ಮಿಂಟನ್ ಮತ್ತು ಅಥ್ಲೆಟಿಕ್ಸ್‌ವರೆಗೆ, ಪ್ರತಿಯೊಂದು ಕ್ಷೇತ್ರವು ವರ್ಷದ ಮೊದಲ ತಿಂಗಳಿನಿಂದಲೇ ಅಭಿಮಾನಿಗಳನ್ನು ರಂಜಿಸಲಿದೆ.

ಕ್ರಿಕೆಟ್‌ನಲ್ಲಿ 2 ಪ್ರಮುಖ ಈವೆಂಟ್ಸ್

ಈ ವರ್ಷ ಕ್ರಿಕೆಟ್‌ನೊಂದಿಗೆ ಆರಂಭವಾಗಲಿದೆ. ಜನವರಿ 15 ರಿಂದ ಫೆಬ್ರವರಿ 6 ರವರೆಗೆ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಅಂಡರ್-19 ವಿಶ್ವಕಪ್ ನಡೆಯಲಿದ್ದು, ಅಲ್ಲಿ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಅವರಂತಹ ಯುವ ತಾರೆಯರು ಮಿಂಚುವ ಅವಕಾಶವನ್ನು ಹೊಂದಿದ್ದಾರೆ. ಮುಂದೆ, ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಪುರುಷರ ಟಿ20 ವಿಶ್ವಕಪ್ ನಡೆಯಲಿದ್ದು, ಅಲ್ಲಿ ಭಾರತ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಲಿದೆ. ಟೆನಿಸ್‌ನಲ್ಲಿ, ಆಸ್ಟ್ರೇಲಿಯನ್ ಓಪನ್ ಜನವರಿಯಲ್ಲಿ ನಡೆಯಲಿದ್ದು, ಮಾರ್ಚ್‌ನಲ್ಲಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪಿವಿ ಸಿಂಧು ಅವರಂತಹ ಆಟಗಾರ್ತಿಯರು ಕಣಕ್ಕಿಳಿಯಲಿದ್ದಾರೆ. ಫುಟ್‌ಬಾಲ್ ಅಭಿಮಾನಿಗಳಿಗೆ, ಭಾರತೀಯ ಮಹಿಳಾ ತಂಡವು ದೀರ್ಘ ವಿರಾಮದ ನಂತರ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ನಲ್ಲಿ ಭಾಗವಹಿಸಲಿದೆ.

ಚೆಸ್, ಬ್ಯಾಡ್ಮಿಂಟನ್ ಮತ್ತು ಮಹಿಳಾ ಕ್ರಿಕೆಟ್

ಏಪ್ರಿಲ್‌ನಲ್ಲಿ ಸೈಪ್ರಸ್‌ನಲ್ಲಿ ನಡೆಯುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಹಾಲಿ ಚಾಂಪಿಯನ್ ಡಿ. ಗುಕೇಶ್ ಸೇರಿದಂತೆ ಪ್ರಜ್ಞಾನಂದ, ವೈಶಾಲಿ, ಕೊನೆರೂ ಹಂಪಿ ಮತ್ತು ದಿವ್ಯಾ ಅವರಂತಹ ಚೆಸ್ ಚತುರರು ಭಾಗವಹಿಸಲಿದ್ದಾರೆ. ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಮಂಗೋಲಿಯಾದಲ್ಲಿ ನಡೆಯಲಿದೆ. ಏತನ್ಮಧ್ಯೆ, ಭಾರತೀಯ ತಂಡಗಳು ಅಹಮದಾಬಾದ್‌ನಲ್ಲಿ ನಡೆಯುವ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್, ಥಾಮಸ್-ಉಬರ್ ಕಪ್ ಬ್ಯಾಡ್ಮಿಂಟನ್ ಮತ್ತು ಲಂಡನ್‌ನಲ್ಲಿ ನಡೆಯುವ ವಿಶ್ವ ತಂಡ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ಗಳಿಗೆ ಅರ್ಹತೆ ಪಡೆದಿವೆ.

ಇದರ ನಂತರ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಜೂನ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿದೆ. ಅಥ್ಲೆಟಿಕ್ಸ್‌ನಲ್ಲಿ ಡೈಮಂಡ್ ಲೀಗ್ ಆರಂಭವಾಗಲಿದ್ದು, ನೀರಜ್ ಚೋಪ್ರಾ ಪದಕ ಗೆಲ್ಲುವ ಇರಾದೆಯಲಿದ್ದಾರೆ. ಇದಲ್ಲದೆ, ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್‌ಗಳು, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಸಹ ಈ ಅವಧಿಯಲ್ಲಿ ನಡೆಯಲಿವೆ. ಪ್ರಮುಖ ಫಿಫಾ ವಿಶ್ವಕಪ್ ಜೂನ್‌ನಲ್ಲಿ ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ ಮತ್ತು ಕೆನಡಾದಲ್ಲಿ ನಡೆಯಲಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಏಷ್ಯನ್ ಕ್ರೀಡಾಕೂಟದವರೆಗೆ

ಜುಲೈ-ಆಗಸ್ಟ್‌ನಲ್ಲಿ, ಕಾಮನ್‌ವೆಲ್ತ್ ಕ್ರೀಡಾಕೂಟವು ಗ್ಲ್ಯಾಸ್ಗೋದಲ್ಲಿ ನಡೆಯಲಿದ್ದು, ಅಲ್ಲಿ ಭಾರತವು ವಿಶೇಷವಾಗಿ ಅಥ್ಲೆಟಿಕ್ಸ್, ಬಾಕ್ಸಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಪದಕ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿದೆ. ಆದರೆ ಈ ಕ್ರೀಡಾಕೂಟದಿಂದ ಶೂಟಿಂಗ್, ಕುಸ್ತಿ ಮತ್ತು ಹಾಕಿಯಂತಹ ಕ್ರೀಡೆಗಳನ್ನು ಹೊರಗಿಟ್ಟಿರುವುದು ಭಾರತಕ್ಕೆ ಬರುವ ಪದಕಗಳ ಸಂಖ್ಯೆಯನ್ನು ಕಡಿಮೆ ಮಾಡಲಿದೆ. ಏತನ್ಮಧ್ಯೆ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗಳು ದೆಹಲಿಯಲ್ಲಿ, ಹಾಕಿ ವಿಶ್ವಕಪ್ (ಪುರುಷರ ತಂಡ ಅರ್ಹತಾ ಪಂದ್ಯಗಳು, ಮಹಿಳಾ ಅರ್ಹತಾ ಪಂದ್ಯಗಳು) ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ಮತ್ತು ಭುವನೇಶ್ವರದಲ್ಲಿ ಅಥ್ಲೆಟಿಕ್ಸ್ ಪ್ರವಾಸ ನಡೆಯಲಿದೆ. ಮುಂದೆ, ಸೆಪ್ಟೆಂಬರ್‌ನಲ್ಲಿ, ಜಪಾನ್‌ನಲ್ಲಿ ಏಷ್ಯನ್ ಕ್ರೀಡಾಕೂಟ ನಡೆಯಲಿದೆ. ಡೈಮಂಡ್ ಲೀಗ್ ಫೈನಲ್ಸ್ ಮತ್ತು ಚೆಸ್ ಒಲಿಂಪಿಯಾಡ್ ಸಹ ಈ ಸಮಯದಲ್ಲಿ ನಡೆಯಲಿದೆ.

ವರ್ಷಾಂತ್ಯ ಹೀಗಿರಲಿದೆ

ವರ್ಷದ ಕೊನೆಯ ತಿಂಗಳುಗಳಲ್ಲಿ ಬಹ್ರೇನ್‌ನಲ್ಲಿ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌, ವೇಟ್‌ಲಿಫ್ಟಿಂಗ್ ವಿಶ್ವ ಚಾಂಪಿಯನ್‌ಶಿಪ್‌, ದೋಹಾದಲ್ಲಿ ISSF ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ ಮತ್ತು ಡಿಸೆಂಬರ್‌ನಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ (ದಿನಾಂಕಗಳು ಮತ್ತು ಸ್ಥಳ ಇನ್ನೂ ನಿರ್ಧರಿಸಲಾಗಿಲ್ಲ) ನಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:42 pm, Thu, 1 January 26

Source link

ಸಿಗರೇಟ್, ಗುಟ್ಕಾ ಬಳಸುತ್ತೀರಾ? ಮುಂದಿನ ತಿಂಗಳಿಂದ ನಿಮ್ಮ ಜೇಬಿಗೆ ಕತ್ತರಿ ಗ್ಯಾರಂಟಿ – Kannada News | Cigarette, Pan Masala and tobacco products To get Costlier From Feb 1 With New Tax

ನವದೆಹಲಿ, ಜನವರಿ 1: ಫೆಬ್ರವರಿ 1ರಿಂದ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೊಸ ಸೆಸ್ ಲೆವಿಗಳನ್ನು ಜಾರಿ ಮಾಡಲಾಗುತ್ತಿದೆ. ಹೀಗಾಗಿ, ಸಿಗರೇಟ್ (cigarettes), ಬೀಡಿ, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚು ದುಬಾರಿಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಸೂಚಿಸಿದ ಹೊಸ ತೆರಿಗೆ ನೀತಿ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಇದು ಆಯ್ದ ಉತ್ಪನ್ನಗಳಿಗೆ ಬೆಲೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಇದೀಗ ಅಸ್ತಿತ್ವದಲ್ಲಿರುವ ಜಿಎಸ್‌ಟಿ ಜೊತೆಗೆ ನಿರ್ದಿಷ್ಟ ಅಬಕಾರಿ ಸುಂಕವನ್ನು ಪರಿಚಯಿಸುವುದರಿಂದ ಸಿಗರೇಟ್‌ಗಳು ಹೆಚ್ಚಿನ ತೆರಿಗೆ ಹೊರೆಯನ್ನು ಅನುಭವಿಸುತ್ತವೆ. ಸಿಗರೇಟ್ ಉದ್ದವನ್ನು ಆಧರಿಸಿ ಸುಂಕವು ಬದಲಾಗುತ್ತದೆ. ಸರ್ಕಾರದ ಪರಿಷ್ಕೃತ ತೆರಿಗೆ ರಚನೆಯು ಬೀಡಿಗಳ ಮೇಲೂ ಪರಿಣಾಮ ಬೀರುತ್ತದೆ. ಜಿಎಸ್‌ಟಿ ಅನ್ವಯವಾಗುತ್ತಲೇ ಇದ್ದರೂ ಹೆಚ್ಚುವರಿ ಸುಂಕವನ್ನು ಪರಿಚಯಿಸುವುದರಿಂದ ಈ ಉತ್ಪನ್ನಗಳ ಮೇಲಿನ ಒಟ್ಟಾರೆ ತೆರಿಗೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ, ಬೀಡಿ ಕೂಡ ಗ್ರಾಹಕರಿಗೆ ದುಬಾರಿಯಾಗಬಹುದು.

ಇದನ್ನೂ ಓದಿ: ತಂಬಾಕು ತ್ಯಜಿಸುವುದರಿಂದ 20 ನಿಮಿಷದಿಂದ 20 ವರ್ಷದವರಗೆ ಆರೋಗ್ಯವಾಗಿರಬಹುದು

ಇದರ ಜೊತೆಗೆ, ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದು. ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುತ್ತದೆ. ಈ ಸೆಸ್ ಒಮ್ಮೆ ಜಾರಿಗೆ ಬಂದ ನಂತರ ಅನೇಕ ವಸ್ತುಗಳ ಬೆಲೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಗುಟ್ಕಾ, ಜರ್ದಾ, ಖೈನಿ ಮತ್ತು ಇತರ ರೀತಿಯ ಜಗಿಯುವ ತಂಬಾಕಿನಂತಹ ಉತ್ಪನ್ನಗಳು ಹೊಸ ಅಬಕಾರಿ ಸುಂಕ ಮತ್ತು ಸೆಸ್ ಚೌಕಟ್ಟಿನ ಅಡಿಯಲ್ಲಿ ಬರುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 4:05 pm, Thu, 1 January 26

Source link

ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ – Kannada News | Bigg Boss Kannada: Again Dhruvanth engaged fight with Gilli Nata

ಬಿಗ್​​ಬಾಸ್ (Bigg Boss) ಮನೆಯಲ್ಲಿ ಹೊಸ ವರ್ಷಾಚರಣೆ ನಡೆಯುತ್ತಿದೆ. ಬಿಗ್​​ಬಾಸ್ ಮನೆ ಮಂದಿಗೆ ಟಾಸ್ಕ್ ನೀಡಿದ್ದು, ಮನೆ ಸದಸ್ಯರ ಬಗ್ಗೆ ಹಾಡು ಕಟ್ಟಿ ಹಾಡುವಂತೆ ಸೂಚಿಸಿದ್ದಾರೆ. ಅದರಂತೆ ಆಶುಕವಿ ಗಿಲ್ಲಿ ಮನೆ ಮಂದಿಯನ್ನು, ಅವರ ವ್ಯಕ್ತಿತ್ವವನ್ನು ಇರಿಸಿಕೊಂಡು ಹಾಡು ಕಟ್ಟುತ್ತಿದ್ದಾರೆ ಆದರೆ ಗಿಲ್ಲಿಯ ಹಾಡಿಗೆ ಧ್ರುವಂತ್ ಅಪಸ್ವರ ಎತ್ತಿದ್ದಾರೆ. ನನ್ನ ಬಗ್ಗೆ ನಿನ್ನ ಹಾಡಿನಲ್ಲಿ ಏನೂ ಬರೆಯುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ಗಿಲ್ಲಿಯ ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಗಿಲ್ಲಿ ಸಹ ಕೋಪಿಸಿಕೊಂಡಿದ್ದು, ‘ಉಗುರಲ್ಲೇ ನಿನ್ನ ಕೊಂದು ಹಾಕುವೆ’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂ ಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್!

ರಾಮನಗರ, ಜನವರಿ 01: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ತಡರಾತ್ರಿ ಭಯಾನಕ ಘಟನೆಯೊಂದು ನಡೆದಿದೆ. ಗ್ರಾಮದ ಮಧ್ಯದಲ್ಲಿ ವಾಮಾಚಾರ ಮಾಡಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನರಿಗೆ ಆಘಾತ ಎದುರಾಗಿದೆ. ರಸ್ತೆಯಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು, ದೀಪ ಇಟ್ಟು ಪೂಜೆ ಮಾಡಲಾಗಿದೆ. ತಮಾಷೆಗೆ ಮಾಡಿದ್ದಾರಾ ಅಥವಾ ಉದ್ದೇಶ ಪೂರ್ವಕವಾಗಿ ಮಾಡಿದ್ದಾರಾ ಎಂಬುವುದು ತಿಳಿದುಬಂದಿಲ್ಲ. ಸದ್ಯ ಇದರಿಂದಾಗಿ ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಪೊಲೀಸ್​​ ತನಿಖೆಗೆ ಜನರು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

 

Source link

Exit mobile version