ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ? – Kannada News | New Bengaluru Mangaluru Vande Bharat Train: Faster Travel for Karnataka

ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ ವಂದೇ ಭಾರತ್ ರೈಲು ಬೆಂಗಳೂರು ಮತ್ತು ಮಂಗಳೂರು ಸಂಚಾರಿಸಲಿದೆ. ಈ ಮೂಲಕ ಕರಾವಳಿ ಪ್ರದೇಶಗಳ ಪುಣ್ಯಕ್ಷೇತ್ರಕ್ಕೆ ಹೋಗುವವರಿಗೆ ಇದು ಒಳ್ಳೆಯ ಪ್ರಯಾಣ ನೀಡಲಿದೆ.

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿ.ಮೀ ಘಾಟ್ ವಿಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಈ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದೆ. ಅದಷ್ಟು ಬೇಗ ಈ ರೈಲು ಸಂಚಾರ ಮಾಡಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಸೆಮಿ ಹೈ-ಸ್ಪೀಡ್ ರೈಲು ಸಂಪೂರ್ಣವಾಗಿ ವಿದ್ಯುತ್ ಶಕ್ತಿಯಿಂದ ಚಲಿಸುವ ಕಾರಣ, ಇದು ಪ್ರಯಾಣದ ವೇಗವನ್ನು ಹೆಚ್ಚಿಸುತ್ತದೆ. ಜತೆಗೆ, ಸ್ವಚ್ಛವಾದ ಗಾಳಿ, ಮಾಲಿನ್ಯರಹಿತ ಪರಿಸರವನ್ನು ಉಂಟು ಮಾಡುತ್ತದೆ. ಜತೆಗೆ ಇಂಧನ ಬಳಕೆಯನ್ನು ಕಡಿಮೆ ಮಾಡುತ್ತದೆ.

ಮಂಗಳೂರು ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿರುವ ವಂದೇ ಭಾರತ್ ರೈಲು ಓಡಾಟ ಆರಂಭಿಸುವ ಸಮಯ ಹತ್ತಿರವಾಗಿದೆ ಎಂದು ಅವರು ಎಕ್ಸ್​​ನಲ್ಲಿ ಪೋಸ್ಟ್​​​ ಮಾಡಿದ್ದಾರೆ.

ಸಾಮಾನ್ಯ ರೈಲುಗಳು ಈ ಮಾರ್ಗವನ್ನು ಕ್ರಮಿಸಲು ಸರಿಸುಮಾರು 9 ರಿಂದ 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ವಂದೇ ಭಾರತ್ ರೈಲು ಅದನ್ನು ಕೇವಲ 5 ಗಂಟೆಗಳವರೆಗೆ ಕಡಿಮೆ ಮಾಡಬಹುದು, ಇದು ವ್ಯಾಪಾರ ಪ್ರಯಾಣಿಕರು ಮತ್ತು ರಜಾದಿನಗಳಲ್ಲಿ ಈ ರೈಲು ಹೆಚ್ಚು ಸಹಾಯವಾಗಲಿದೆ.

ಸೆಮಿ ಹೈ-ಸ್ಪೀಡ್ ಸೇವೆಯು ದೈನಂದಿನ ಪ್ರಯಾಣಿಕರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ, ಪ್ರವಾಸೋದ್ಯಮ, ವ್ಯಾಪಾರ ಪ್ರವಾಸಗಳಿಗೆ ಇದೊಂದು ಉತ್ತಮ ಆಯ್ಕೆಯಾಗಿರುತ್ತದೆ

ಬೆಂಗಳೂರು, ತುಮಕೂರು, ಹಾಸನ ಮತ್ತು ಮಂಗಳೂರು ಎಂಬ ನಾಲ್ಕು ಜಿಲ್ಲೆಗಳಿಗೆ ಇದು ಅನುಕೂಲವಾಗಲಿದೆ. ಇದಕ್ಕೆ 50,000 ಕೋಟಿ ರೂ. ಬಜೆಟ್ ನೀಡಲಾಗಿದೆ

Published On – 11:32 am, Thu, 1 January 26

Source link

Video: ನಮ್ಗೆ ಪುರುಷ ಮ್ಯಾನೇಜರ್ ಸಾಕು, ಮಹಿಳಾ ಮ್ಯಾನೇಜರ್ ಬೇಡ್ವೇ ಬೇಡ; ಪ್ರಾಮಾಣಿಕ ಉತ್ತರ ನೀಡಿದ ಉದ್ಯೋಗಿಗಳು – Kannada News | No need for a female manager; Noida employees give honest answers

ಪುರುಷರು ಅಥವಾ ಮಹಿಳೆಯ ಉದ್ಯೋಗಿಗಳೇ ಇರಲಿ, ಮ್ಯಾನೇಜರ್ ಯಾರಿರಬೇಕೆಂದು ಕೇಳಿದಾಗ ಪುರುಷರೇ ಮ್ಯಾನೇಜರ್ (female manager) ಇರಬೇಕೆಂದು ಬಯಸುತ್ತಾರೆ. ಹೌದು, ನೋಯ್ಡಾದ (Noida) ಖಾಸಗಿ ಕಂಪನಿಯೊಂದರ ಉದ್ಯೋಗಿಗಳ ಅಭಿಪ್ರಾಯವು ಅದೇ ಆಗಿದೆ. ಆದರೆ ಇದೀಗ ನೋಯ್ಡಾ ಮೂಲದ ‘ಕ್ಲೌಡ್ ಸೈನ್ಸ್ ಲ್ಯಾಬ್ಸ್’ ಕಂಪನಿಯ ಉದ್ಯೋಗಿಗಳ ಸಮೀಕ್ಷೆಯ ವಿಡಿಯೋ ಸದ್ಯ ವೈರಲ್ ಆಗಿದೆ. ಇಲ್ಲಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳು ಪುರುಷರೇ ಬಾಸ್ ಆಗಿ ಇರಬೇಕೆಂದು ಪ್ರಾಮಾಣಿಕ ಉತ್ತರ ನೀಡಿದ್ದಾರೆ. ಈ ವಿಡಿಯೋ ಸದ್ಯ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ನ್ಯೂಸ್ ಅಲ್ಗೆಬ್ರಾ (News algebra) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ತಮಾಷೆ ವಿಡಿಯೋ ಇದಾಗಿದೆ. ಈ ವಿಡಿಯೋಗೆ ನೋಯ್ಡಾದ ಖಾಸಗಿ ಕಂಪನಿಯ ಉದ್ಯೋಗಿಗಳು ಮಹಿಳಾ ಬಾಸ್‌ಗಳಿಗಿಂತ ಪುರುಷ ಬಾಸ್ ಗಳನ್ನೇ ಆಯ್ಕೆ ಮಾಡಿಕೊಂಡರು. “ಇದು ಅಥವಾ ಅದು” ಈ ಸಮೀಕ್ಷೆಯಲ್ಲಿ ಭಾಗವಹಿಸುವವರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗುತ್ತದೆ. ಆದರೆ ಆಶ್ಚರ್ಯಕರವಾಗಿ ಎಲ್ಲರೂ ಪುರುಷ ಮ್ಯಾನೇಜರ್ ರನ್ನೇ ಆಯ್ಕೆ ಮಾಡಿದರು. ಇದರಲ್ಲಿ ಮಹಿಳಾ ಉದ್ಯೋಗಿಗಳೂ ಸೇರಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಉದ್ಯೋಗಿಗಳಿಗೆ ಕಂಪನಿಯ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇದಕ್ಕೆ ಅನುಸಾರವಾಗಿ ಉದ್ಯೋಗಿಗಳು ತಮ್ಮ ಆಯ್ಕೆಯ ಮುಂದೆ ನಿಲ್ಲಬೇಕು. ಅದರಂತೆ ಆಫೀಸ್ ಟ್ರಿಪ್ – ಲಾಂಗ್ ವೀಕೆಂಡ್, ಅರ್ಲಿ ಲಾಗ್ ಇನ್, ಲೇಟ್ ಲಾಗ್ ಔಟ್, ವರ್ಕ್ ಫ್ರಮ್ ಹೋಮ್, ವರ್ಕ್ ಫ್ರಮ್ ಆಫೀಸ್ ಹೀಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ಇದರಲ್ಲಿ ಒಂದು ಪ್ರಮುಖ ಪ್ರಶ್ನೆಯೆಂದರೆ ‘ನೀವು ಮಹಿಳಾ ಮ್ಯಾನೇಜರ್ ಬಯಸುತ್ತೀರಾ ಅಥವಾ ಪುರುಷ ಮ್ಯಾನೇಜರ್ ರನ್ನು ಬಯಸುತ್ತೀರಾ? ಎನ್ನುವುದಾಗಿದ್ದು, ಎಲ್ಲಾ ಉದ್ಯೋಗಿಗಳು ‘ಪುರುಷ ಮ್ಯಾನೇಜರ್’ ಆಯ್ಕೆಯನ್ನು ಆರಿಸಿಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ತಿಂಗಳಿಗೆ 4 ಲಕ್ಷ ರೂ ಸಂಪಾದನೆ ಮಾಡಿದ್ರೂ ಖುಷಿ ಅನ್ನೋದೇ ಇಲ್ಲ ಎಂದ ಉದ್ಯಮಿ

ಜನವರಿ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪ್ರಸ್ತುತ ಮ್ಯಾನೇಜರ್ ಪುರುಷರೇ ಆಗಿರುವುದರಿಂದ ಈ ರೀತಿ ಆಯ್ಕೆ ಮಾಡಲಾಯಿತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಕೆಲಸದ ಸ್ಥಳದಲ್ಲಿ ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳ ಒಂದು ಗಮನಾರ್ಹ ಚಿತ್ರಣ – ಲಿಂಗ ಸಮಾನತೆ ಇನ್ನೂ ಹಲವು ಮೈಲಿಗಳಷ್ಟು ದೂರ ಸಾಗಬೇಕಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮಹಿಳೆಯರು ಕೂಡ ಪುರುಷ ಬಾಸ್‌ಗಳನ್ನು ಆಯ್ಕೆ ಮಾಡುತ್ತಾರೆ. ಪಕ್ಷಪಾತವು ಆಳವಾಗಿ ಬೇರೂರಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿಭಟನೆ ವೇಳೆ ಪಿಎಸ್​​ಐಗೆ ಸ್ವಾಮೀಜಿಯಿಂದ ಕಪಾಳಮೋಕ್ಷ: ಅಷ್ಟಕ್ಕೂ ಆಗಿದ್ದೇನು? – Kannada News | Vijayapura Protest: Swamiji Slaps PSI Over Medical College Row

ವಿಜಯಪುರ, ಜನವರಿ 01: ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮಫ್ತಿಯಲ್ಲಿದ್ದ ಪಿಎಸ್​ಐಗೆ ಸ್ವಾಮೀಜಿ ಕಪಾಳಮೋಕ್ಷ ಮಾಡಿರುವ ಘಟನೆ ವಿಜಯಪುರ- ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ. ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್​​ ನಿವಾಸಕ್ಕೆ ಮುತ್ತಿಗೆ ಯತ್ನ ನಡೆಸಿದ್ದು, ಈ ವೇಳೆ ಪೊಲೀಸರು ಸ್ವಾಮೀಜಿ ಬೊಬೈಲ್​​ ಕಸಿದುಕೊಂಡಿದ್ದಾರೆ. ಇದರಿಂದ ಸಿಟ್ಟಾದ ಅವರು ಪೊಲೀಸ್​​ ಅಧಿಕಾರಿ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.

ಘಟನೆ ಏನು?

ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ಸ್ಥಾಪನೆಗೆ ವಿರೋಧಿಸಿ ಕಳೆದ ನೂರಾರು ದಿನಗಳಿಂದ ಹೋರಾಟ ನಡೆದುಕೊಂಡುಬಂದಿದೆ. ಇದರ ಭಾಗವಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹೋರಾಟ ಸಮಿತಿ ಮತ್ತು ಇತರ ಸಂಘಟನೆಗಳು ಇಂದು ಉಸ್ತುವಾರಿ ಸಚಿವರ ಮನೆ ಮುತ್ತಿಗೆ ಯತ್ನ ನಡೆಸಿವೆ. ಈ ವೇಳೆ ಹೋರಾಟಗಾರರನ್ನು ವಿಜಯಪುರ-ಸೊಲ್ಲಾಪುರ ರಸ್ತೆಯಲ್ಲಿಯೇ ಪೊಲೀಸರು ತಡೆದಿದ್ದು, ರಸ್ತೆ ಮಧ್ಯ ಹೋರಾಟ ಮಾಡದಂತೆ ಮನವಿ ಮಾಡಿದ್ದಾರೆ. ಜೊತೆಗೆ ಹೋರಾಟದಲ್ಲಿ ಭಾಗಿಯಾಗಿದ್ದ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಸಂಗನಬಸವ ಸ್ವಾಮೀಜಿ ಮೊಬೈಲ್​​ ಕಸಿದಿದ್ದಾರೆ. ಇದರಿಂದ ಕೋಪಗೊಂಡ ಸ್ವಾಮೀಜಿ ಪೊಲೀಸ್​​ ಯೂನಿಫಾರ್ಮ್​​ ಧರಿಸಿರದ ಪಿಎಸ್​ಐ ಸೀತಾರಾಮ್ ಲಮಾಣಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ನಾನು ತಪ್ಪು ಮಾಡಿಲ್ಲ, ಕರೆ ಮಾಡುತ್ತೇನೆಂದರೂ ಮೊಬೈಲ್ ಕಸಿದರು ಎಂದು ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ. ಆದರೆ ಶ್ರೀಗಳನ್ನು ಎಳೆದು ತಮ್ಮ ವಾಹನದಲ್ಲಿ ಪೊಲೀಸರು ಕೂರಿಸಿದ್ದಾರೆ. ಕರ್ತವ್ಯ ನಿರತ ಅಧಿಕಾರಿ ಮೇಲೆ ಸ್ವಾಮೀಜಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದು, ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಬಳಿಕ ಎಲ್ಲ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!

ಬೆಂಗಳೂರು, ಜ.1: ತಂದೆ, ತಾಯಿ ಪ್ರೀತಿ ಸಿಗುತ್ತಿಲ್ಲವೆಂದು ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ (ಡಿ.31) ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಲೇಖನಾ(17) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲೇಖನಾ 10ನೇ ತರಗತಿ ಫೇಲ್​​​ ಆಗಿ ಮನೆಯಲ್ಲಿಯೇ ಇದ್ದಳು, ಪ್ರತಿದಿನ ಮನೆಯಲ್ಲಿ ಜಗಳ, ಇದರಿಂದ ಅಪ್ಪ-ಅಮ್ಮ ಇಬ್ಬರು ದೂರುವಾಗಿದ್ದರು. ತಂದೆ ಬೇರೆ ಕಡೆ ವಾಸಿಸುತ್ತಿದ್ದರು. ಲೇಖನಾ ತಾಯಿ‌ ಜೊತೆಗೆ ವಾಸವಾಗಿದ್ದಾಳು. ಇದರಿಂದ ಮನನೊಂದು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ನನಗೆ ತಂದೆ-ತಾಯಿ‌ ಪ್ರೀತಿ ಸಿಗುತ್ತಿಲ್ಲ. ನಾನು ಒಂಟಿ ಎಂಬ ಭಾವನೆ ಕಾಡುತ್ತಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಇದು ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

New Year 2026: ವಿಧಾನಸಭಾ ಚುನಾವಣಾ ಕದನ, ಒಂದು ರಾಷ್ಟ್ರ, ಒಂದು ಚುನಾವಣೆ, ಜನಗಣತಿ ಈ ವರ್ಷ ಏನೆಲ್ಲಾ ನಡೀಬಹುದು? – Kannada News | A Politically Packed Year Ahead: Elections, Census and Big Reforms in 2026

ನವದೆಹಲಿ, ಜನವರಿ 01: ಇಂದು ಹೊಸ ವರ್ಷ(New Year)ಕ್ಕೆ ಕಾಲಿಟ್ಟಿದ್ದೇವೆ. ಈ ವರ್ಷ ಹೊಸ ಬೆಳವಣಿಗೆಗಳಿಗೆ ದೇಶ ಸಾಕ್ಷಿಯಾಗಲಿದೆ. 2026 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳ ಬಗ್ಗೆ ಮಾತನಾಡುವುದಾದರೆ, ಪೂರ್ವ ಭಾರತದಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಮತ್ತು ದಕ್ಷಿಣ ಭಾರತದಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಮಾರ್ಚ್-ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ರಾಜ್ಯಗಳಲ್ಲಿ ರಾಜಕೀಯ ಬಿಸಿ ಏರತೊಡಗಿದೆ.

ಈ ರಾಜ್ಯಗಳಲ್ಲಿರುವ ಪ್ರಸ್ತುತ ರಾಜ್ಯ ಸರ್ಕಾರಗಳು ಸಹ ಪರೀಕ್ಷೆಯನ್ನು ಎದುರಿಸಲಿವೆ. ಚುನಾವಣಾ ಆಯೋಗವು ಇನ್ನೂ ವಿಧಾನಸಭಾ ಚುನಾವಣೆಗಳನ್ನು ಘೋಷಿಸಿಲ್ಲ. ಮುಂದಿನ ವರ್ಷದ ಆರಂಭದ ತಿಂಗಳುಗಳಲ್ಲಿ ಚುನಾವಣಾ ದಿನಾಂಕಗಳನ್ನು ಘೋಷಿಸುವ ಸಾಧ್ಯತೆಯಿದೆ. ಮಾರ್ಚ್-ಏಪ್ರಿಲ್‌ನಲ್ಲಿ ಚುನಾವಣೆಗಳು ನಡೆಯುವ ನಿರೀಕ್ಷೆಯಿದ್ದು, ಹಲವಾರು ಹಂತಗಳಲ್ಲಿ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸರ್ಕಾರ ಒಂದೂವರೆ ದಶಕಗಳಿಂದ ಅಧಿಕಾರದಲ್ಲಿದೆ ಮತ್ತು ಅಸ್ಸಾಂನಲ್ಲಿ ಬಿಜೆಪಿ ಎರಡು ಅವಧಿಗೆ ಅಧಿಕಾರದಲ್ಲಿದೆ .

ಡಿಎಂಕೆ ನಾಯಕ ಸ್ಟಾಲಿನ್ ತಮಿಳುನಾಡಿನಲ್ಲಿ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಕೇರಳದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ಗೆದ್ದಿರುವ ಎಡರಂಗವು ಯುಡಿಎಫ್‌ನಿಂದಲೂ ಸವಾಲನ್ನು ಎದುರಿಸುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದಲ್ಲಿ ಮೂರನೇ ಬಾರಿಗೆ ಚುನಾವಣೆಯಲ್ಲಿ ಯಶಸ್ವಿಯಾದರೆ, ಅದು ರಾಜ್ಯದ ಇತಿಹಾಸದಲ್ಲಿ ದಾಖಲೆಯನ್ನು ಸ್ಥಾಪಿಸುತ್ತದೆ.

ಮತ್ತಷ್ಟು ಓದಿ: New Year 2026: ಹೊಸ ವರ್ಷದ ಶುಭಾಶಯ ತಿಳಿಸಿ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ ಪ್ರಧಾನಿ ಮೋದಿ

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 7, 2026 ರಂದು ಕೊನೆಗೊಳ್ಳುತ್ತದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯು ಮೇ 10, 2026 ರಂದು ಕೊನೆಗೊಳ್ಳುತ್ತದೆ. 140 ಸದಸ್ಯ ಬಲದ ಕೇರಳ ವಿಧಾನಸಭೆಯ ಪ್ರಸ್ತುತ ಅವಧಿ ಮೇ 24, 2021 ರಿಂದ ಮೇ 23, 2026 ರವರೆಗೆ ಇರುತ್ತದೆ.

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯ ಪ್ರಸ್ತುತ ಅವಧಿ ಮೇ 20, 2026 ರಂದು ಮತ್ತು 30 ಸದಸ್ಯ ಬಲದ ಪುದುಚೇರಿ ವಿಧಾನಸಭೆಯು ಜೂನ್ 15, 2026 ರಂದು ಕೊನೆಗೊಳ್ಳುತ್ತದೆ.

ವಿವಿಧ ರಾಜಕೀಯ ಪಕ್ಷಗಳ ನಾಯಕರ ಹೇಳಿಕೆಗಳು ಮತ್ತು ಬಂಪರ್ ಯೋಜನೆಗಳಿಂದಾಗಿ, ಹೊಸ ವರ್ಷದ ಆರಂಭಕ್ಕೂ ಮೊದಲೇ ಈ ರಾಜ್ಯಗಳಲ್ಲಿ ಚುನಾವಣಾ ವಾತಾವರಣ ಸೃಷ್ಟಿಯಾಗಿದೆ. ರಾಜಕಾರಣಿಗಳ ಹೇಳಿಕೆಗಳು ಚಳಿಗಾಲದಲ್ಲೇ ಚುನಾವಣಾ ತಾಪಮಾನವನ್ನು ಹೆಚ್ಚಿಸಿವೆ. ಮುಂಬರುವ ಚುನಾವಣೆಗಳು ಹಲವು ವಿಧಗಳಲ್ಲಿ ಹೆಚ್ಚು ಮುಖ್ಯವಾಗಿವೆ.

ಮತದಾರರ ಪಟ್ಟಿ ವಿಶೇಷ ಪರಿಷಗಕರಣೆ(SIR) ನಂತರ ನಡೆಯುವ ಈ ಚುನಾವಣೆಗಳ ಮೇಲೆ ಎಲ್ಲರ  ಚಿತ್ತ ಇರಲಿದೆ. ಭಾರತೀಯ ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ, ಈ ರಾಜ್ಯಗಳಲ್ಲಿ ಎಸ್​ಐಆರ್ ನಂತರ ಇಲ್ಲಿ ಮತದಾನ ನಡೆಯಲಿದೆ. ಈಗ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಸರದಿ, ಅಲ್ಲಿ ಎಸ್​ಐಆರ್ ದೊಡ್ಡ ಮತ್ತು ಗಂಭೀರ ಸಮಸ್ಯೆಯಾಗಿ ಉಳಿದಿದೆ.

ಮೊದಲ ಪರೀಕ್ಷೆಯು ಜನವರಿ 15 ರಂದು ಮಹಾರಾಷ್ಟ್ರದಾದ್ಯಂತ 28 ಇತರ ಪುರಸಭೆಗಳ ಜೊತೆಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗಳ ರೂಪದಲ್ಲಿ ಬರಲಿದೆ.

ಜನಗಣತಿ
ಭಾರತದ ದಶಕದ ಜನಗಣತಿಯು ಅಂತಿಮವಾಗಿ 2026 ರಲ್ಲಿ ಪ್ರಾರಂಭವಾಗಲಿದೆ. ಇದು ದೇಶದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿಯಾಗಿದ್ದು, ಸ್ವಾತಂತ್ರ್ಯದ ನಂತರ ಜಾತಿ ಎಣಿಕೆಯನ್ನು ಒಳಗೊಂಡ ಮೊದಲನೆಯದು. ಆರಂಭಿಕ ಮನೆ ಪಟ್ಟಿ ಹಂತವು ಏಪ್ರಿಲ್ ನಿಂದ ಸೆಪ್ಟೆಂಬರ್ 2026 ರವರೆಗೆ ನಡೆಯುತ್ತದೆ, ನಂತರ ಫೆಬ್ರವರಿ 2027 ರಲ್ಲಿ ಜನಸಂಖ್ಯಾ ಎಣಿಕೆ ನಡೆಯಲಿದೆ. ಜನಗಣತಿ ವಿಳಂಬವು ಈಗಾಗಲೇ ವಿವಿಧ ವಿವಾದಗಳಿಗೆ ಕಾರಣವಾಗಿದ್ದು, 2026 ರ ಜನಗಣತಿಯ ನಂತರ ಕಡ್ಡಾಯಗೊಳಿಸಲಾದ ಗಡಿ ನಿರ್ಣಯದ ವಿಷಯವು ರಾಜಕೀಯ ಉದ್ವಿಗ್ನತೆಗೆ ಕಾರಣವಾಗುವ ನಿರೀಕ್ಷೆಯಿದೆ.

ಬಿಜೆಪಿಗೆ ನೂತನ ಅಧ್ಯಕ್ಷರು
2026ರ ಮೊದಲಾರ್ಧದಲ್ಲಿ ಬಿಜೆಪಿ ತನ್ನ ಹೊಸ ಅಧ್ಯಕ್ಷರನ್ನು ಔಪಚಾರಿಕವಾಗಿ ನೇಮಕ ಮಾಡಲಿದೆ.ಬಿಹಾರ ಸಚಿವ ಮತ್ತು ಐದು ಬಾರಿ ಶಾಸಕರಾಗಿರುವ, ಪಕ್ಷದ ಹೊಸದಾಗಿ ನೇಮಕಗೊಂಡ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ರಾಜ್ಯಸಭಾ ಚುನಾವಣೆಗಳು
ಏಪ್ರಿಲ್ ಮತ್ತು ಜೂನ್‌ನಲ್ಲಿ 17 ರಾಜ್ಯಗಳ 59 ಸ್ಥಾನಗಳಿಗೆ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗಳು ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಅಲ್ಪ ಪ್ರಮಾಣದಲ್ಲಿ ಲಾಭ ತರುವ ಸಾಧ್ಯತೆಯಿದೆ, ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ವಿಧಾನಸಭಾ ಫಲಿತಾಂಶದ ಆಧಾರದ ಮೇಲೆ ಆಡಳಿತಾರೂಢ ಎನ್‌ಡಿಎ ಹೆಚ್ಚಿನ  ಮತ ಗಳಿಸುವ ನಿರೀಕ್ಷೆ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:26 pm, Thu, 1 January 26

Source link

ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷಾಚರಣೆ ಸಂಪ್ರದಾಯ ಹುಟ್ಟಿದ್ದು, ಯಾವಾಗ ಮತ್ತು ಹೇಗೆ ಮತ್ತು ಎಲ್ಲಿ? – Kannada News | New Year Origins: English Calendar History and Gregorian Calendar Explained

ನವದೆಹಲಿ, ಜನವರಿ 01:  ಹೊಸವರ್ಷ(New Year) ಎಂದಕೂಡಲೇ ಬಹಳಷ್ಟು ಮಂದಿಯ ತಲೆಯಲ್ಲಿ ಬರುವುದು ಈ ಜನವರಿ ಪ್ರಾರಂಭ ಹಾಗೂ ಡಿಸೆಂಬರ್ ಅಂತ್ಯದ ಲೆಕ್ಕಾಚಾರಗಳೆಲ್ಲ ಪಾಶ್ಚಾತ್ಯ ಇಂಗ್ಲಿಷ್ ವ್ಯವಸ್ಥೆ. ನಾವು ಆಚರಿಸುವುದರಲ್ಲೇ ಗುಲಾಮಿತನ ಇದೆ ಎಂಬುದರಿಂದ ಹಿಡಿದು, ಯುಗಾದಿಗೆ ಹೊಸವರ್ಷ ಆಚರಿಸುವುದು ಎಷ್ಟು ಅರ್ಥಪೂರ್ಣ ಎನ್ನುವ ವಿಚಾರಗಳವರೆಗೂ ಒಮ್ಮೆಲೆ ನಮ್ಮ ತಲೆಗೆ ಬಂದು ಹೋಗುತ್ತದೆ.

ಈ ಜನವರಿಯಿಂದ ಡಿಸೆಂಬರಿನವರೆಗಿನ ಹನ್ನೆರಡು ತಿಂಗಳುಗಳ ಕ್ಯಾಲೆಂಡರ್ ಅನ್ನು ಗ್ರೆಗೊರಿಯನ್ ಕ್ಯಾಲೆಂಡರ್ ಎನ್ನುತ್ತೇವೆ. ಅದರ ಬಗ್ಗೆ ಮಾಹಿತಿ ತಡಕಾಡಿದರೆ ಕ್ರೈಸ್ತ ಮತದ ಬಾಗಿಲಿಗೇ ಹೋಗಿ ನಿಲ್ಲುವುದು ಹೌದು. 1582ರಲ್ಲಿ ಪೋಪ್ ಆಗಿದ್ದ ಹದಿಮೂರನೇ ಗ್ರೆಗೊರಿ, ಜನವರಿ ಒಂದನ್ನೇ ಹೊಸವರ್ಷ ಎಂದು ಘೋಷಿಸಿ, ಆವರೆಗೆ ಅಸ್ತಿತ್ವದಲ್ಲಿದ್ದ ಜುಲಿಯನ್ ಕ್ಯಾಲೆಂಡರ್ ಅನ್ನೇ ಪರಿಷ್ಕೃತಗೊಳಿಸಿದೆ.

ಆದರೆ ಚರ್ಚಿನ ಈ ಆದೇಶವನ್ನು ಪಾಲಿಸಿದ್ದು ಇಟಲಿ, ಸ್ಪೇನ್, ಪೋರ್ಚುಗಲ್, ಫ್ರಾನ್ಸ್. ಅವತ್ತಿನ ಪ್ರಮುಖ ಶಕ್ತಿ ಇಂಗ್ಲೆಂಡ್ ಜನವರಿ ಒಂದನ್ನು ಹೊಸವರ್ಷ ಎಂದು ಒಪ್ಪಿಕೊಂಡಿದ್ದು, 1752ರಲ್ಲಿ. ರಷ್ಯ ಆ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದು 1918ರಲ್ಲಿ.

ಹೊಸ ವರ್ಷವನ್ನು ಆಚರಿಸುವ ಸಂಪ್ರದಾಯವು ಮೊದಲ ಪ್ರಾಚೀನ ರೋಮ್‌ನಲ್ಲಿ ಮೊದಲು ಹುಟ್ಟಿಕೊಂಡಿತು. ಮೊದಲ ಹೊಸ ವರ್ಷಾಚರಣೆಯನ್ನು ರೋಮನ್ನರು ಕ್ರಿ.ಪೂ 153 ರ ಸುಮಾರಿಗೆ ಪ್ರಾರಂಭಿಸಿದರು. ಆ ಸಮಯದಲ್ಲಿ, ಜನವರಿ 1 ಅನ್ನು ಹೊಸ ವರ್ಷದ ದಿನವೆಂದು ಪರಿಗಣಿಸಲಾಗಿತ್ತು ಏಕೆಂದರೆ ಆ ದಿನ ರೋಮನ್ ಕಾನ್ಸುಲ್‌ಗಳು (ಸರ್ಕಾರಿ ಅಧಿಕಾರಿಗಳು) ಅಧಿಕಾರ ವಹಿಸಿಕೊಂಡರು. ಇವರೆಲ್ಲ ಪ್ರಾರಂಭದಲ್ಲಿ ಜನವರಿ ಒಂದನ್ನು ಹೊಸವರ್ಷವಾಗಿ ಆಚರಿಸುವುದಕ್ಕೆ ವಿರೋಧಿಸಿದ್ದರು.

ಮತ್ತಷ್ಟು ಓದಿ: New Year 2026: ವಿಧಾನಸಭಾ ಚುನಾವಣಾ ಕದನ, ಒಂದು ರಾಷ್ಟ್ರ, ಒಂದು ಚುನಾವಣೆ, ಜನಗಣತಿ ಈ ವರ್ಷ ಏನೆಲ್ಲಾ ನಡೀಬಹುದು?

ಜನವರಿ 1 ಅನ್ನು ಏಕೆ ಆಯ್ಕೆ ಮಾಡಲಾಯಿತು?

ಜನವರಿ ತಿಂಗಳು ರೋಮನ್ ದೇವರು ಜಾನಸ್ನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಜಾನಸ್ ಅನ್ನು ಆರಂಭ ಮತ್ತು ಅಂತ್ಯಗಳ ದೇವರು ಮತ್ತು ಭೂತ ಮತ್ತು ಭವಿಷ್ಯದ ದರ್ಶಕ ಎಂದು ಪರಿಗಣಿಸಲಾಗಿತ್ತು. ಜಾನಸ್‌ಗೆ ಎರಡು ಮುಖಗಳಿದ್ದವುಒಂದು ಹಿಂದಕ್ಕೆ ಮತ್ತು ಇನ್ನೊಂದು ಮುಂದಕ್ಕೆ ಈ ಸಂಕೇತವು ಹೊಸ ಆರಂಭಕ್ಕಾಗಿ ಜನವರಿ 1 ಅನ್ನು ಆಯ್ಕೆ ಮಾಡಲು ಕಾರಣವಾಯಿತು.

ಜೂಲಿಯನ್ ಕ್ಯಾಲೆಂಡರ್ ಮತ್ತು ಹೊಸ ವರ್ಷ

ಜೂಲಿಯಸ್ ಸೀಸರ್ ಕ್ರಿ.ಪೂ 46ರಲ್ಲಿ ಜೂಲಿಯನ್ ಕ್ಯಾಲೆಂಡರ್ ಅನ್ನು ಜಾರಿಗೆ ತಂದರು. ಈ ಕ್ಯಾಲೆಂಡರ್‌ನಲ್ಲಿ, ಜನವರಿ 1 ಅನ್ನು ಅಧಿಕೃತವಾಗಿ ಹೊಸ ವರ್ಷದ ದಿನವೆಂದು ಘೋಷಿಸಲಾಯಿತು. ರೋಮನ್ ಸಾಮ್ರಾಜ್ಯದ ವಿಸ್ತರಣೆಯೊಂದಿಗೆ, ಈ ಸಂಪ್ರದಾಯವು ಯುರೋಪಿಗೆ ಹರಡಿತು.

ಮಧ್ಯಯುಗದಲ್ಲಿ ಬದಲಾವಣೆಗಳು

ಮಧ್ಯಯುಗದಲ್ಲಿ, ಕ್ರಿಶ್ಚಿಯನ್ ಚರ್ಚ್ ಮಾರ್ಚ್ 25, ಈಸ್ಟರ್ ಮುಂತಾದ ವಿಭಿನ್ನ ದಿನಾಂಕಗಳಲ್ಲಿ ಹೊಸ ವರ್ಷದ ದಿನವನ್ನು ಆಚರಿಸಲು ಪ್ರಾರಂಭಿಸಿತು. ಆದ್ದರಿಂದ, ವಿವಿಧ ಯುರೋಪಿಯನ್ ದೇಶಗಳಲ್ಲಿ ವಿಭಿನ್ನ ಹೊಸ ವರ್ಷದ ದಿನಾಂಕಗಳು ಪ್ರಚಲಿತವಾದವು.

ಗ್ರೆಗೋರಿಯನ್ ಕ್ಯಾಲೆಂಡರ್ ಮತ್ತು ಇಂದಿನ ಹೊಸ ವರ್ಷ

1582 ರಲ್ಲಿ, ಪೋಪ್ ಗ್ರೆಗೊರಿ XIII ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಜಾರಿಗೆ ತಂದರು. ಜನವರಿ 1 ಅನ್ನು ಮತ್ತೆ ಹೊಸ ವರ್ಷದ ದಿನವೆಂದು ಘೋಷಿಸಲಾಯಿತು. ಕ್ರಮೇಣ, ಯುರೋಪ್ ಮತ್ತು ನಂತರ ಇಡೀ ಜಗತ್ತು ಈ ಕ್ಯಾಲೆಂಡರ್ ಅನ್ನು ಒಪ್ಪಿಕೊಂಡಿತು.

ಭಾರತೀಯ ಚಲನಚಿತ್ರಗಳಲ್ಲಿ ಹೊಸ ವರ್ಷದ ಆಚರಣೆಗಳು

ರಾಜ್ ಕಪೂರ್ ಮತ್ತು ದೇವ್ ಆನಂದ್ ಯುಗಗಳ ಚಲನಚಿತ್ರಗಳಲ್ಲಿ ಹೊಸ ವರ್ಷದ ಪಾರ್ಟಿಗಳು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ನೋಟಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. 1960 ರ ದಶಕದಲ್ಲಿ ಹಿಂದಿ ಚಲನಚಿತ್ರಗಳಲ್ಲಿ ಹೊಸ ವರ್ಷದ ಆಚರಣೆಗಳನ್ನು ನಗರ ಉತ್ಸವವಾಗಿ ಚಿತ್ರಿಸಲು ಪ್ರಾರಂಭಿಸಲಾಯಿತು.

ಭಾರತೀಯ ಸಂಸ್ಕೃತಿಯಲ್ಲಿ, ವೈಜ್ಞಾನಿಕ ಆಧಾರದ ಮೇಲೆ ಮತ್ತು ನೈಸರ್ಗಿಕ ಬದಲಾವಣೆಗಳ ಆಧಾರದ ಮೇಲೆ, ಮುಂಬರುವ ಹೊಸ ವರ್ಷವನ್ನು ವರ್ಷದ ವಿವಿಧ ಸಮಯಗಳಲ್ಲಿ ಆಚರಿಸಲಾಗುತ್ತದೆ, ಉದಾಹರಣೆಗೆ ಚೈತ್ರ ಪ್ರತಿಪದ, ಬೈಸಾಖಿ, ಯುಗಾದಿ ಮತ್ತು ಪೊಯಿಲಾ ಬೋಯಿಶಾಖ. ಇವು ಪ್ರಕೃತಿಯಲ್ಲಿ ಬದಲಾವಣೆಗಳು ಮತ್ತು ಗ್ರಹಗಳ ಚಲನೆ ಸಂಭವಿಸುವ ಸಮಯಗಳು, ಗೋಡೆಯ ಮೇಲೆ ನೇತಾಡುವ ಕ್ಯಾಲೆಂಡರ್‌ನಲ್ಲಿನ ಬದಲಾವಣೆಯ ಮೇಲೆ ಮಾತ್ರವಲ್ಲದೆ, ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.

ಹೋಟೆಲ್‌ಗಳಿಂದ ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳವರೆಗೆ, ಹೊಸ ವರ್ಷದ ಆಚರಣೆಗಳು ಗೋಚರಿಸುತ್ತಿದ್ದವು. ಧಾರ್ಮಿಕ ದೃಷ್ಟಿಕೋನದಿಂದ, ಜನವರಿ 1 ರಂದು ಹೊಸ ವರ್ಷವನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರ ಮಹತ್ವದ್ದಾಗಿದೆ ಅಥವಾ ಕಡ್ಡಾಯವೆಂದು ಪರಿಗಣಿಸಲಾಗುತ್ತದೆ, ಆದರೆ ಇತರ ಎಲ್ಲಾ ಧರ್ಮಗಳಿಗೆ ಅಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್

ಕಿಚ್ಚ ಸುದೀಪ್ ಅವರು ‘ಮಾರ್ಕ್’ ಸಿನಿಮಾ ವೀಕ್ಷಣೆಗೆ ಮೈಸೂರಿನ ಸಂಗಮ ಚಿತ್ರಮಂದಿರಕ್ಕೆ ತೆರಳಿದ್ದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸುದೀಪ್, ಅಭಿಮಾನಿಗಳಿಗೆ ಹೊಸ ವರ್ಷದ ವಿಶ್ ತಿಳಿಸಿದರು. ‘ನಗ್ತಾ ಇರಿ, ಖುಷಿ ಖುಷಿಯಿಂದ ಇರಿ’ ಎಂದು ಕೋರಿದ್ದಾರೆ. ಅವರ ವಿಶ್​​ಗೆ ಫ್ಯಾನ್ಸ್ ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು, ಭಾವನಾತ್ಮಕ ಪತ್ರ ಬರೆದ ಪ್ರಧಾನಿ ಮೋದಿ – Kannada News | Thiruvananthapuram BJP Victory: PM Modi’s Emotional Letter to New Mayor

ತಿರುವನಂತಪುರಂ, ಜನವರಿ 01: ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಸಾಧಿಸಿ ಮೇಯರ್ ಹುದ್ದೆಗೇರಿದ ಬಿಜೆಪಿ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಹೃದಯ ಪೂರ್ವಕ ಭಾವನಾತ್ಮಕ ಪತ್ರ ಬರೆದಿದ್ದಾರೆ. 2026ರ ಹೊಸ ವರ್ಷದ ಸುಸಂದರ್ಭದಲ್ಲಿ ಮೇಯರ್ ಆಗಿ ನೇಮಕವಾಗಿರುವ ವಿವಿ ರಾಜೇಶ್ ಹಾಗೂ ಉಪ ಮೇಯರ್ ಆಶಾ ಮಾತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ ಈ ಅಭೂತಪೂರ್ವ ಜಯಕ್ಕೆ ಕಾರಣವಾದ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೇರಳದ ಜತೆಗಿನ ನಂಟನ್ನು ಸ್ಮರಿಸಿಕೊಂಡಿರುವ ನರೇಂದ್ರ ಮೋದಿ, ತಿರುವನಂತಪುರಂನೊಂದಿಗಿನ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ. ಪದ್ಮನಾಭ ಸ್ವಾಮಿಯ ಅನುಗ್ರಹ ಪಡೆದಿರುವ ನನಗೆ ಕೇರಳದ ಈ ನೆಲಸ ಮೇಲೆ ವಿಶೇಷ ಅಭಿಮಾನವಿದೆ ಎಂದಿದ್ದಾರೆ.

ಹಾಗೆಯೇ ತಿರುವನಂತಪುರ ನಗರವು ಹಲವಾರು ನಾಯಕರು, ಸಮಾಜ ಸುಧಾರಕರು, ಕಲಾವಿದರು, ಕವಿಗಳು, ಸಂಗೀತಗಾರರು , ಸಾಂಸ್ಕೃತಿಕ ಧಿಗ್ಗಜರು, ಸಂತರನ್ನು ಹೊಂದಿರುವ ನಾಡಾಗಿದೆ. ಇಂಥಾ ನಗರವು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿರುವುದು ಹೆಮ್ಮೆಯ ವಿಚಾರ.

ಮತ್ತಷ್ಟು ಓದಿ: New Year 2026: ವಿಧಾನಸಭಾ ಚುನಾವಣಾ ಕದನ, ಒಂದು ರಾಷ್ಟ್ರ, ಒಂದು ಚುನಾವಣೆ, ಜನಗಣತಿ ಈ ವರ್ಷ ಏನೆಲ್ಲಾ ನಡೀಬಹುದು?

ಈ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿಗೆ ನಮ್ಮ ನಾಯಕತ್ವವು ಶ್ರಮಿಸಲಿದೆ. ನಮ್ಮ ಪಕ್ಷವು ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ರಾಜ್ಯಗಳಲ್ಲಿ ಮಾಡಿರುವ ಅಭಿವೃದ್ಧಿ ಪಥವನ್ನು ಬಯಸಿ ಇಲ್ಲಿಯ ಜನರು ಆಶೀರ್ವಾದ ಮಾಡಿದ್ದಾರೆ ಎಂದುಕೊಂಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಬರೆದ ಪತ್ರ

ಕೇರಳ ಹಾಗೂ ದೇಶದ ಅಗಣಿತ ಬಿಜೆಪಿ ಕಾರ್ಯಕರ್ತರ ಪರವಾಗಿ ಈ ಹೆಮ್ಮೆಯ ವಿಚಾರವನ್ನು ಹೇಳಿಕೊಳ್ಳಲು ಖುಷಿಯಾಗುತ್ತದೆ. ತಿರುವನಂತಪುರಂ ಜನತೆಯ ಈ ತೀರ್ಪು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ವಿಚಾರವಾಗಿದೆ ಎಂದು ಮೋದಿ ಹೇಳಿದ್ದಾರೆ.

ದಶಕಗಳ ಕಾಲ ಕೇರಳದಲ್ಲಿನ ಬಿಜೆಪಿ ಕಾರ್ಯಕರ್ತರು ಕಠಿಣ ಹಾದಿಯನ್ನು ಸವೆಸಿ ಬಂದಿದ್ದಾರೆ. ಕೇರಳದ ಎಲ್​ಡಿಎಫ್ ಹಾಗೂ ಯುಡಿಎಫ್ ಮೈತ್ರಿಕೂಟದ ದುರಾಡಳಿವನ್ನು ವರ್ಷಗಳ ಕಾಲ ಇಲ್ಲಿನ ಜನರು ನೋಡಿದ್ದಾರೆ.ಇನ್ನೊಂದೆಡೆ ಕೇರಳದ ಸಂಸ್ಕೃತಿಯನ್ನು ನಾಶಪಡಿಸುವ ಪ್ರಯತ್ನವನ್ನು ಈ ಕೂಡ ಮಾಡುವುದರ ಜತೆಗೆ ದುರಾಡಳಿತ ಹಾಗೂ ಭ್ರಷ್ಟಾಚಾರದ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಲಾಗಿದೆ.

ಬಿಜೆಪಿ ಸಂಘಟನೆಯ ಮೇಲಿನ ನಿರಂತರ ಹಿಂಸಾಚಾರದ ಬಳಿಕವು ಕಾರ್ಯಕತರ್ರು ಪಕ್ಷಕ್ಕಾಗಿ ಧೈರ್ಯದಿಂದ ಎದೆ ತಟ್ಟಿ ನಿಂತಿದ್ದಾರೆ, ಜನರ ಧ್ವನಿಯಾಗಿ ಪಕ್ಷವ ಬಾವುಟವನ್ನು ಹಿಡಿದು ಧೈರ್ಯದಿಂದ ನಿಂತಿದ್ದಾರೆ ಎಂದು ಮೋದಿ ಕೊಂಡಾಡಿದ್ದಾರೆ. ಇಂದು ಭಾರತ ಮೊದಲು ಎನ್ನುವ ನಮ್ಮ ಸಿದ್ಧಾಂತದೊಂದಿಗೆ ನಿಂತು ಹೋರಾಡಿದ ಹಲವು ಕಾರ್ಯಕರ್ತರು ಇಂದು ನಮ್ಮೊಂದಿಗೆ ಇಲ್ಲ ಆದಾಗ್ಯೂ ಈ ಗೆಲುವು ಅವರಿಗೆ ಖುಷಿ ತರಿಸಲಿದೆ ಎಂದು ಮೋದಿ ಭಾವುಕ ನುಡಿಗಳನ್ನು ಬರೆದಿದ್ದಾರೆ.

ತಿರುವನಂತಪುರಂನ ಈ ಗೆಲುವು ಕೇರಳ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಮುನ್ನುಡಿಯಾಗಲಿದೆ , ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಹಾಗೂ ಪಕ್ಷ ಕೆಲಸ ಮುಂದುವರೆಸಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:12 pm, Thu, 1 January 26

Source link

Wednesday Donations: ಬುಧವಾರದಂದು ತಪ್ಪಿಯೂ ಈ ವಸ್ತು ದಾನ ಮಾಡಲೇಬೇಡಿ; ಗ್ರಹ ದೋಷಕ್ಕೆ ಕಾರಣವಾಗಬಹುದು! – Kannada News | Wednesday Donations: Avoid These Items to Strengthen Budha Graha

ಸನಾತನ ಧರ್ಮದಲ್ಲಿ, ಪ್ರತಿ ದಿನವೂ ಒಂದೊಂದು ದೇವತೆ ಅಥವಾ ಗ್ರಹಕ್ಕೆ ಮೀಸಲಾಗಿದೆ. ಅದರಂತೆ ಬುಧವಾರ ಗಣೇಶನನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸ ಆಚರಿಸಲಾಗುತ್ತದೆ. ಈ ದಿನವನ್ನು ಗ್ರಹಗಳ ರಾಜ ಬುಧನಿಗೆ ಸಹ ಮೀಸಲಾದ ದಿನ. ಈ ದಿನದಂದು ಪೂರ್ಣ ವಿಧಿವಿಧಾನಗಳೊಂದಿಗೆ ಗಣೇಶನನ್ನು ಪೂಜಿಸುವ ಪ್ರತಿಯೊಬ್ಬರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಜಾತಕದಲ್ಲಿ ಬುಧ ಗ್ರಹದ ಸ್ಥಾನವು ಬಲವಾಗಿರಬೇಕಾದರೆ ಬುಧವಾರ ಪೂಜೆ ಮತ್ತು ಪ್ರಾರ್ಥನೆಗಳ ಜೊತೆಗೆ ದಾನವನ್ನು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ದಾನ ಮಾಡಲು ಶುಭವೆಂದು ಪರಿಗಣಿಸಲಾದ ಕೆಲವು ವಿಷಯಗಳಿವೆ, ಆದರೆ ಬುಧವಾರ ದಾನ ಮಾಡುವುದು ಅಶುಭವೆಂದು ಪರಿಗಣಿಸಲಾದ ಕೆಲವು ವಿಷಯಗಳಿವೆ. ಹಾಗಾದರೆ, ಬುಧವಾರ ಯಾವ ವಸ್ತುಗಳನ್ನು ದಾನ ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬುಧವಾರ ಈ ವಸ್ತುಗಳನ್ನು ದಾನ ಮಾಡಬೇಡಿ:

ಹೆಸರು ಬೇಳೆ:

ಜ್ಯೋತಿಷ್ಯದಲ್ಲಿ ಬುಧವಾರ ಬುಧ ಗ್ರಹಕ್ಕೆ ಮೀಸಲಾಗಿದೆ. ಆದ್ದರಿಂದ, ಈ ದಿನ ಹೆಸರುಕಾಳು ದಾನ ಮಾಡುವುದನ್ನು ತಪ್ಪಿಸಿ. ಹಸಿರು ಬಣ್ಣವು ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ. ಈ ದಿನ ಹೆಸರುಕಾಳು ದಾನ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಬುಧ ಗ್ರಹ ದುರ್ಬಲಗೊಳ್ಳಬಹುದು. ಆರ್ಥಿಕ ಸಮಸ್ಯೆಗಳು ಉದ್ಭವಿಸಬಹುದು.

ಇದನ್ನೂ ಓದಿ: ಸಾಮಾನ್ಯ ಜನರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಬಾರದು ಯಾಕೆ?

ಅಕ್ಕಿ:

ಜ್ಯೋತಿಷ್ಯದ ಪ್ರಕಾರ, ಅಕ್ಕಿಯು ಚಂದ್ರ ದೇವರಿಗೆ ಸಂಬಂಧಿಸಿದೆ, ಆದ್ದರಿಂದ ಬುಧವಾರದಂದು ಅಕ್ಕಿಯನ್ನು ದಾನ ಮಾಡಬೇಡಿ. ಈ ದಿನ ಅಕ್ಕಿಯನ್ನು ದಾನ ಮಾಡುವುದರಿಂದ ನಿಮ್ಮ ಜನ್ಮ ಕುಂಡಲಿಯಲ್ಲಿ ಚಂದ್ರನ ಸ್ಥಾನ ದುರ್ಬಲಗೊಳ್ಳುತ್ತದೆ. ಇದು ವ್ಯಾಪಾರ ನಷ್ಟದ ಅಪಾಯವನ್ನು ಸಹ ಒಡ್ಡುತ್ತದೆ.

ಕಪ್ಪು ಎಳ್ಳು:

ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವು ಬುದ್ಧಿಶಕ್ತಿ, ಮಾತು ಮತ್ತು ವ್ಯವಹಾರಕ್ಕೆ ಕಾರಣ. ಆದ್ದರಿಂದ, ಈ ದಿನ ಕಪ್ಪು ಎಳ್ಳನ್ನು ದಾನ ಮಾಡುವುದನ್ನು ತಪ್ಪಿಸಿ, ಏಕೆಂದರೆ ಅದು ಶನಿ ದೇವರಿಗೆ ಸಂಬಂಧಿಸಿದೆ. ಈ ದಿನ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಬುದ್ಧಿಶಕ್ತಿ, ಮಾತು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chikkamagaluru: ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​; ವಿಡಿಯೋ ವೈರಲ್​ – Kannada News | Youth Dances With Dog at New Year Party in Chikkamagaluru; Video Goes Viral

ಚಿಕ್ಕಮಗಳೂರು, ಜನವರಿ 01: ಹೊಸ ವರ್ಷದ ಹಿನ್ನೆಲೆ ರಾಜ್ಯಾದ್ಯಂತ ಪಾರ್ಟಿಗಳು ಜೋರಾಗಿಯೇ ನಡೆದಿವೆ. ಅತಿಯಾದ ಮದ್ಯ ಸೇವನೆ ಕಾರಣ ಹಲವರು ರಸ್ತೆಯಲ್ಲಿಯೇ ತೂರಾಟ ಕೂಡ ನಡೆಸಿದ್ದಾರೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡಿದ ಮತ್ತಲ್ಲಿದ್ದ ಯುವಕನೋರ್ವ ಬೀದಿ ನಾಯಿ ಜೊತೆ ಡ್ಯಾನ್ಸ್​​ ಮಾಡಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ನ್ಯೂ ಇಯರ್​​ ಹಿನ್ನೆಲೆ ಕಣತಿ‌ ಗ್ರಾಮದ ಸಂದೀಪ್ ಮತ್ತು ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಬೀದಿ ನಾಯಿಯ ಮುಂಬದಿ ಕಾಲುಗಳನ್ನು ಹಿಡಿದುಕೊಂಡು ಸಂದೀಪ್​​ ಡ್ಯಾನ್ಸ್​​ ಮಾಡಿದ್ದಾರೆ. ವಿಡಿಯೋ ನೋಡಿದ ಕೆಲವರು ನಾಯಿ ಜೊತೆಗೆ ಯುವಕನ ಡ್ಯಾನ್ಸ್​​ಗೆ ಖುಷಿ ಪಟ್ಟಿದ್ದರೆ, ಇನ್ನು ಕೆಲವರು ಕುಡಿದ ಮತ್ತಿನಲ್ಲಿ ಬೀದಿ ನಾಯಿಗೆ ಹಿಂಸೆ ನೀಡಲಾಗಿದೆ ಎಂದು ದೂರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version