ಲಿಸ್ಟ್ ಎ ಕ್ರಿಕೆಟ್ನಲ್ಲಿ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ ಭಾರತದ ನಾಲ್ವರು ಶತಕ ಸಿಡಿಸಿದ್ದಾರೆ. ಈ ನಾಲ್ವರಲ್ಲಿ ಮೂವರು ಒಂದೇ ದಿನ ಈ ಸಾಧನೆ ಮಾಡಿರುವುದು ವಿಶೇಷ. ಅದು ಕೂಡ ಡಿಸೆಂಬರ್ 24ರ ಮಧ್ಯಾಹ್ನದೊಳಗೆ ಈ ವಿಸ್ಫೋಟಕ ಸೆಂಚುರಿಗಳು ಮೂಡಿಬಂದಿರುವುದು ಮತ್ತೊಂದು ವಿಶೇಷ.
ಲಿಸ್ಟ್ ಎ ಕ್ರಿಕೆಟ್ನಲ್ಲಿ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ ಭಾರತದ ನಾಲ್ವರು ಶತಕ ಸಿಡಿಸಿದ್ದಾರೆ. ಈ ನಾಲ್ವರಲ್ಲಿ ಮೂವರು ಒಂದೇ ದಿನ ಈ ಸಾಧನೆ ಮಾಡಿರುವುದು ವಿಶೇಷ. ಅದು ಕೂಡ ಡಿಸೆಂಬರ್ 24ರ ಮಧ್ಯಾಹ್ನದೊಳಗೆ ಈ ವಿಸ್ಫೋಟಕ ಸೆಂಚುರಿಗಳು ಮೂಡಿಬಂದಿರುವುದು ಮತ್ತೊಂದು ವಿಶೇಷ.
ಬೆಂಗಳೂರು, ಡಿಸೆಂಬರ್ 25: ಅಮೂಲ್ಯ ಲೋಹಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಏರುವುದು ನಿಂತಿಲ್ಲ. ಚಿನ್ನ, ಬೆಳ್ಳಿ ಬೆಲೆಗಳ ಏರಿಕೆಗೆ ವಿಶ್ರಾಂತಿ ಸಿಕ್ಕಂತಿಲ್ಲ. ಇಂದು ಗುರುವಾರ ಇವೆರಡೂ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಏರಿವೆ. ನಿನ್ನೆ ಗ್ರಾಮ್ಗೆ 30 ರೂ ಏರಿದ್ದ ಚಿನ್ನದ ಬೆಲೆ (gold rate) ಇವತ್ತೂ ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ನಿನ್ನೆ 10 ರೂ ಜಿಗಿದಿತ್ತು. ಇವತ್ತು ಒಂದು ರೂ ಹೆಚ್ಚಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಅಲ್ಪ ಹೆಚ್ಚಳ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,27,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,39,250 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,27,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 23,400 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: ಅಂತಿಮ ಡೆಡ್ಲೈನ್; ಆಧಾರ್ಗೆ ಲಿಂಕ್ ಆಗದ ಪ್ಯಾನ್ ಜನವರಿ 1ರಿಂದ ಡೆಡ್; ಹಣಕಾಸು ತೊಂದರೆಗಳೇನಾಗಬಹುದು?
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
‘ಮಾರ್ಕ್’ ಸಿನಿಮಾ ಇಂದು (ಡಿಸೆಂಬರ್ 25) ರಿಲೀಸ್ ಆಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಚಿತ್ರ ಹೇಗಿದೆ ಎಂಬುದರ ಬಗ್ಗೆ ರಿಯಾಕ್ಷನ್ ಕೊಡುತ್ತಾ ಇದ್ದಾರೆ. ‘ಈ ಚಿತ್ರ 10 ಬಾರಿ ಸಿನಿಮಾ ನೋಡಿದರೂ ಬೇಸರ ಬರಲ್ಲ’ ಎಂದಿದ್ದಾರೆ. ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್ಗಳು ಇವೆ ಎಂದು ಕೂಡ ಸುದೀಪ್ ಅಭಿಮಾನಿಗಳು ಅಭಿಪ್ರಾಯ ಹೊರಹಾಕಿದ್ದಾರೆ. ಈ ಚಿತ್ರ ಒಟ್ಟಾರೆ ಗಮನ ಸೆಳೆಯುವ ರೀತಿಯಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ನಲ್ಲಿ ಈ ಮೊದಲು ‘ಮ್ಯಾಕ್ಸ್’ ಸಿನಿಮಾ ಬಂದಿತ್ತು. ಈಗ ಅದೇ ಕಾಂಬಿನೇಷನ್ನಲ್ಲಿ ‘ಮಾರ್ಕ್’ ಸಿನಿಮಾ (Mark Movie) ಮಾಡಲಾಗಿದೆ. ಡಿಸೆಂಬರ್ 25ರಂದು ಬಿಡುಗಡೆ ಆಗಿರುವ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇತ್ತು. ಹಾಗಾದರೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ‘ಮಾರ್ಕ್’ ಚಿತ್ರ ಮೂಡಿಬಂದಿದೆಯಾ? ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಯಾವ ರೀತಿಯ ಮನರಂಜನೆ ಸಿಗಲಿದೆ? ಈ ವಿಮರ್ಶೆಯಲ್ಲಿದೆ ಉತ್ತರ..
‘ಮಾರ್ಕ್’ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗ ಈ ಚಿತ್ರದ ಕಥೆ ಏನು ಎಂಬ ಬಗ್ಗೆ ಸುಳಿವು ಸಿಕ್ಕಿತ್ತು. ಈ ಬಾರಿ ಕೂಡ ಕಿಚ್ಚ ಸುದೀಪ್ ಮತ್ತು ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್’ ರೀತಿಯ ಸಿನಿಮಾವನ್ನೇ ಮಾಡಿರಬಹುದು ಎಂಬ ಅಭಿಪ್ರಾಯ ಮೂಡಿತ್ತು. ಅದು ನಿಜವಾಗಿದೆ. ‘ಮಾರ್ಕ್’ ಕೂಡ ‘ಮ್ಯಾಕ್ಸ್’ ರೀತಿಯೇ ಇದೆ. ಆರಂಭದಿಂದ ಕೊನೇ ತನಕ ಎರಡೂ ಸಿನಿಮಾಗಳ ನಡುವೆ ಸಾಮ್ಯತೆ ಕಾಣುತ್ತದೆ.
ನೀವು ‘ಮ್ಯಾಕ್ಸ್’ ನೋಡಿ ಇಷ್ಟಪಟ್ಟ ಪ್ರೇಕ್ಷಕರಾಗಿದ್ದರೆ ನಿಮಗೆ ‘ಮಾರ್ಕ್’ ಕೂಡ ಇಷ್ಟ ಆಗುತ್ತದೆ. ಬಹುತೇಕ ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯನ್ನು ‘ಮ್ಯಾಕ್ಸ್’ ಚಿತ್ರದಲ್ಲಿ ತೋರಿಸಲಾಗಿತ್ತು. ಈಗ ಒಂದೂವರೆ ದಿನದಲ್ಲಿ ನಡೆಯುವ ಕಥೆಯನ್ನು ‘ಮಾರ್ಕ್’ ಸಿನಿಮಾ ತೆರೆದಿಟ್ಟಿದೆ. ಕಲಾವಿದರು ಬೇರೆ ಆದರೂ ಬಹುತೇಕ ಅದೇ ತಂತ್ರಜ್ಞರು ಎರಡೂ ಸಿನಿಮಾಗೆ ಕೆಲಸ ಮಾಡಿರುವುದರಿಂದ ಒಂದೇ ರೀತಿಯ ಫೀಲ್ ಮುಂದುವರಿದಿದೆ.
‘ಮಾರ್ಕ್’ ಮತ್ತು ‘ಮ್ಯಾಕ್ಸ್’ ಸಿನಿಮಾಗಳಿಗೆ ಹೋಲಿಸಿದರೆ ‘ಮಾರ್ಕ್’ ಕಥೆ ಹೊಸದಾಗಿದೆ. ಆದರೆ ಪ್ಯಾಟರ್ನ್ ಒಂದೇ ರೀತಿ ಇದೆ. ಡ್ರಗ್ಸ್ ಮಾಫಿಯಾ, ರಾಜಕೀಯದ ಪಿತೂರಿ ಹಾಗೂ ಮಕ್ಕಳ ಅಪಹರಣದ ಗ್ಯಾಂಗ್. ಈ ಮೂರು ಅಂಶಗಳು ಪೊಲೀಸ್ ಇಲಾಖೆಗೆ ಸವಾಲಾಗುತ್ತದೆ. ಅದನ್ನು ಎದುರಿಸಲು ಕಥಾನಾಯಕನಿಗೆ ಕೆಲವೇ ಗಂಟೆಗಳ ಸಮಯ ಇರುತ್ತದೆ. ಅಂತಿಮವಾಗಿ ಅವನು ದುಷ್ಟರ ವಿರುದ್ಧ ಹೇಗೆಲ್ಲ ಹೋರಾಡುತ್ತಾನೆ? ಒಳ್ಳೆಯವರನ್ನು ಹೇಗೆ ಕಾಪಾಡುತ್ತಾನೆ ಎಂಬುದೇ ‘ಮಾರ್ಕ್’ ಕಥೆಯ ಸಾರಾಂಶ.
ಕಿಚ್ಚ ಸುದೀಪ್ ಅವರು ‘ಮಾರ್ಕ್’ ಸಿನಿಮಾದಲ್ಲಿ ಸಂಪೂರ್ಣ ಮಾಸ್ ಅವತಾರ ತಾಳಿದ್ದಾರೆ. ಅವರ ಗೆಟಪ್ ಬದಲಾಗಿದೆ. ಸಸ್ಪೆಂಡ್ ಆಗಿರುವ ಪೊಲೀಸ್ ಅಧಿಕಾರಿಯ ಪಾತ್ರವನ್ನು ಅವರು ಮಾಡಿದ್ದಾರೆ. ಆ ಪಾತ್ರಕ್ಕೆ ತನ್ನದೇ ಆದ ಇತಿಮಿತಿಗಳಿವೆ. ಅವುಗಳ ನಡುವೆ ಸುದೀಪ್ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ಹೊಡಿಬಡಿ ದೃಶ್ಯಗಳಿಂದ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಅಲ್ಲಲ್ಲಿ ಮಾಸ್ ಡೈಲಾಗ್ ಹೇಳುತ್ತಾ ಅಬ್ಬರಿಸಿದ್ದಾರೆ.
‘ಮಾರ್ಕ್’ ಸಿನಿಮಾದಲ್ಲಿ ಕಲಾವಿದರ ದಂಡು ಇದೆ. ಸುದೀಪ್ ಜೊತೆ ಗೋಪಾಲಕೃಷ್ಣ ದೇಶಪಾಂಡೆ, ರೋಶಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್ ಮುಂತಾದವರು ಅಭಿನಯಿಸಿದ್ದಾರೆ. ವಿಲನ್ ಗ್ಯಾಂಗ್ನಲ್ಲಿ ನವೀನ್ ಚಂದ್ರ, ಗುರು ಸೋಮಸುಂದರಂ, ವಿಕ್ರಾಂತ್, ಯೋಗಿ ಬಾಬು, ಶೈನ್ ಟಾಮ್ ಚಾಕೋ ಮುಂತಾದ ಕಲಾವಿದರು ನಟಿಸಿದ್ದಾರೆ. ಎಲ್ಲ ಪಾತ್ರಗಳು ಗಮನ ಸೆಳೆಯುವಂತಿವೆ.
ತಾಂತ್ರಿಕವಾಗಿ ‘ಮಾರ್ಕ್’ ಚೆನ್ನಾಗಿದೆ. ಕಲಾ ನಿರ್ದೇಶಕ ಶಿವಕುಮಾರ್ ಅವರ ಕೆಲಸ ಎದ್ದು ಕಾಣುತ್ತದೆ. ಸಂಗೀತ ನಿರ್ದೇಶನ ಅಜನೀಶ್ ಲೋಕನಾಥ್ ಅವರು ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತದಿಂದಲೂ ಸಿನಿಮಾದ ಮೆರುಗು ಹೆಚ್ಚಿಸಲು ಸಾತ್ ನೀಡಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಕೂಡ ಗಮನ ಸೆಳೆಯುತ್ತದೆ.
ಕಾಮಿಡಿ, ರೊಮ್ಯಾನ್ಸ್ ಇತ್ಯಾದಿ ಅಂಶಗಳು ಈ ಸಿನಿಮಾದಲ್ಲಿ ಇಲ್ಲ. ಹಾಗಾಗಿ ಎಲ್ಲಿಯೂ ಸಮಯ ವ್ಯರ್ಥ ಮಾಡದೇ ಕಥೆ ಪಟಪಟನೆ ಸಾಗುವಂತೆ ನೋಡಿಕೊಂಡಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ. ಅದು ಈ ಸಿನಿಮಾಗೆ ಪ್ಲಸ್ ಆಗಿದೆ. ಅನೇಕ ಕಡೆಗಳಲ್ಲಿ ಲಾಜಿಕ್ ಇಲ್ಲದಿದ್ದರೂ ಕೂಡ ಆ ಬಗ್ಗೆ ಆಲೋಚಿಸಲು ಪ್ರೇಕ್ಷಕರಿಗೆ ಸಮಯವನ್ನೇ ನೀಡದಂತೆ ಕಥೆ ಮುಂದೆ ಸಾಗುತ್ತದೆ. ಮುಂದೇನು ಎಂಬ ಕುತೂಹಲವನ್ನು ಪ್ರತಿ ದೃಶ್ಯದಲ್ಲೂ ಮೂಡಿಸುವ ಗುಣ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್?
ಒಂದಷ್ಟು ಮೈನಸ್ ಅಂಶಗಳು ಕೂಡ ‘ಮಾರ್ಕ್’ ಸಿನಿಮಾದಲ್ಲಿವೆ. ಒಟ್ಟಾರೆ ಕಥೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಡುವಂತಹ ಎಮೋಷನ್ ಮಿಸ್ ಆಗಿದೆ ಎನಿಸುತ್ತದೆ. ಸೂಪರ್ ಹೀರೋ ರೀತಿಯಲ್ಲಿ ಕಥಾನಾಯಕನ ಪಾತ್ರವನ್ನು ತೋರಿಸಲಾಗಿದೆ. ಅದರಿಂದಾಗಿ ನೈಜತೆಯ ಫೀಲ್ ಕಾಣೆಯಾಗಿದೆ. ‘ಮ್ಯಾಕ್ಸ್’ ಚಿತ್ರಕ್ಕಿಂತಲೂ ಏನೋ ಭಿನ್ನವಾಗಿದ್ದು ಬೇಕು ಎಂದು ಬಯಸುವ ಅಭಿಮಾನಿಗಳಿಗೆ ‘ಮಾರ್ಕ್’ ಕೊಂಚ ನಿರಾಸೆ ಮಾಡಬಹುದು. ಆದರೆ ಅಪ್ಪಟ ಸುದೀಪ್ ಅಭಿಮಾನಿಗಳಿಗೆ ಈ ಸಿನಿಮಾ ಖಂಡಿತ ಇಷ್ಟ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಚಿತ್ರದುರ್ಗ, ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಡಿಕ್ಕಿಯಾಗಿ ಖಾಸಗಿ ಸ್ಲೀಪರ್ ಕೋಚ್ ಬಸ್ಗೆ ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹಲವರು ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದಾಗ, ಪಕ್ಕದಲ್ಲೇ ಶಾಲೆ ಮಕ್ಕಳ ಪ್ರವಾಸಕ್ಕೆ ಹೊರಟಿದ್ದ ಬಸ್ಸಿನ ಚಾಲಕ ಸಚಿನ್ ಘಟನೆಯನ್ನು ಕಣ್ಣಾರೆ ಕಂಡಿದ್ದಾರೆ.
‘ಟಿವಿ9’ ಜೊತೆ ಮಾತನಾಡಿರುವ ಸಚಿನ್, ಸುಮಾರು ಎರಡು ಗಂಟೆ ಸುಮಾರಿಗೆ ಲಾರಿಯೊಂದು ಡಿವೈಡರ್ ಹಾರಿ ಬಂದು ಸ್ಲೀಪರ್ ಬಸ್ಸಿನ ಡೀಸೆಲ್ ಟ್ಯಾಂಕ್ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಬೆಂಕಿ ಕಾಣಿಸಿಕೊಂಡಿದ್ದು, ಸ್ಫೋಟವೂ ಸಂಭವಿಸಿತು. ಶಾಲಾ ಬಸ್ಸನ್ನು ಪಕ್ಕಕ್ಕೆ ಸರಿಸಿ ಅಪಘಾತಕ್ಕೀಡಾದ ಬಸ್ಸಿನಲ್ಲಿದ್ದ 7 ಜನರ ರಕ್ಷಣೆಗೆ ಮುಂದಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ತಮ್ಮ ಬಸ್ಗೆ ಸ್ವಲ್ಪ ಹಾನಿಯಾಗಿದ್ದರೂ, ಅದೃಷ್ಟವಶಾತ್ ಮಕ್ಕಳಾಗಲೀ, ಶಿಕ್ಷಕರಾಗಲೀ ಯಾರಿಗೂ ಗಾಯಗಳಾಗಿಲ್ಲ. ಗಾಯಗೊಂಡವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಮತ್ತು ಶಿರಾ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಯಶಸ್ಸನ್ನು ಬಯಸುತ್ತಾರೆ, ಆದರೆ ಕೆಲವೊಮ್ಮೆ, ಕಠಿಣ ಪರಿಶ್ರಮದ ಹೊರತಾಗಿಯೂ, ಅಪೇಕ್ಷಿತ ಫಲಿತಾಂಶಗಳು ಅಥವಾ ಪ್ರಗತಿಯನ್ನು ಸಾಧಿಸಲಾಗುವುದಿಲ್ಲ, ಇದು ನಿರಾಶೆಗೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರವು ಕಚೇರಿ ಕೇವಲ ಕೆಲಸ ಮಾಡುವ ಸ್ಥಳವಲ್ಲ, ಆದರೆ ವ್ಯಕ್ತಿಯ ವೃತ್ತಿಪರ ಶಕ್ತಿ ಮತ್ತು ಉತ್ಪಾದಕತೆಯ ಕೇಂದ್ರವಾಗಿದೆ ಎಂದು ಹೇಳುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಕಚೇರಿ ಮೇಜಿನ ಮೇಲೆ ಇಡುವುದರಿಂದ ಪ್ರಗತಿ, ಆರ್ಥಿಕ ಲಾಭ ಮತ್ತು ಮಾನಸಿಕ ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ವಾಸ್ತುವಿನ ಆಧಾರದ ಮೇಲೆ, ಯಾವ ವಸ್ತುಗಳನ್ನು ಕಚೇರಿ ಮೇಜಿನ ಮೇಲೆ ಇಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವಾಸ್ತು ಶಾಸ್ತ್ರದ ಪ್ರಕಾರ, ಬಳಸಿದ ಪಾತ್ರೆಗಳನ್ನು ಅಥವಾ ಉಳಿದ ಆಹಾರವನ್ನು ಕಚೇರಿ ಮೇಜಿನ ಮೇಲೆ ಎಂದಿಗೂ ಬಿಡಬಾರದು. ಹಾಗೆ ಮಾಡುವುದನ್ನು ವಾಸ್ತು ಮತ್ತು ನೈರ್ಮಲ್ಯದ ದೃಷ್ಟಿಕೋನದಿಂದ ಅನಾರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಬಳಸಿದ ಕಪ್, ತಟ್ಟೆಗಳು ಅಥವಾ ಉಳಿದ ಆಹಾರವನ್ನು ಮೇಜಿನ ಮೇಲೆ ಇಡುವುದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ, ಸುತ್ತಮುತ್ತಲಿನ ಶಕ್ತಿಯನ್ನು ಕಲುಷಿತಗೊಳಿಸುತ್ತದೆ ಮತ್ತು ಏಕಾಗ್ರತೆಗೆ ಅಡ್ಡಿಯಾಗುತ್ತದೆ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ನಿಮ್ಮ ಕಚೇರಿಯ ಮೇಜಿನ ಮೇಲೆ ಹಿಂಸಾತ್ಮಕ ಚಿತ್ರಗಳು, ಕಾಡು ಪ್ರಾಣಿಗಳ ಆಕ್ರಮಣಕಾರಿ ಪ್ರತಿಮೆಗಳು ಅಥವಾ ಯಾವುದೇ ಯುದ್ಧ ಸಂಬಂಧಿತ ಪ್ರದರ್ಶನ ಸಾಮಗ್ರಿಗಳನ್ನು ಇಡುವುದನ್ನು ತಪ್ಪಿಸಿ. ಇದು ನಕಾರಾತ್ಮಕ ಆಲೋಚನೆಗಳಿಗೆ ಕಾರಣವಾಗಬಹುದು, ಒತ್ತಡವನ್ನು ಹೆಚ್ಚಿಸಬಹುದು ಮತ್ತು ಸಹೋದ್ಯೋಗಿಗಳೊಂದಿಗಿನ ಸಂಬಂಧವನ್ನು ಕೆಡಿಸಬಹುದು.
ಒಣಗಿದ ಅಥವಾ ಒಣಗಿದ ಹೂವುಗಳು ಅಥವಾ ಸಸ್ಯಗಳನ್ನು ನಿಮ್ಮ ಕಚೇರಿಯ ಮೇಜಿನ ಮೇಲೆ ಎಂದಿಗೂ ಇಡಬೇಡಿ. ಒಣಗಿದ ಅಥವಾ ಒಣಗಿದ ಹೂವುಗಳು ಮತ್ತು ಸಸ್ಯಗಳನ್ನು ನಕಾರಾತ್ಮಕತೆ ಮತ್ತು ಸಾವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗೆ ಮಾಡುವುದರಿಂದ ಶಕ್ತಿಯನ್ನು ಬರಿದುಮಾಡುತ್ತದೆ ಮತ್ತು ಹತಾಶೆಯನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ: ಮನಿ ಪ್ಲಾಂಟ್ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ
ನಿಮ್ಮ ಕಚೇರಿಯ ಮೇಜಿನ ಮೇಲೆ ಹಳೆಯ ಬಿಲ್ಗಳು, ತ್ಯಾಜ್ಯ ಕಾಗದ ಅಥವಾ ಬಳಕೆಯಾಗದ ದಾಖಲೆಗಳನ್ನು ಇಡಬೇಡಿ. ಅಂತಹ ವಸ್ತುಗಳು ವೃತ್ತಿಜೀವನದ ನಿಶ್ಚಲತೆಗೆ ಕಾರಣವಾಗಬಹುದು ಮತ್ತು ಹೊಸ ಅವಕಾಶಗಳನ್ನು ತಡೆಯಬಹುದು.
ಮುರಿದ ಅಥವಾ ಹರಿದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ, ಆದ್ದರಿಂದ ಮುರಿದ ಪೆನ್ನು, ಶೋಪೀಸ್, ಮುರಿದ ಕಂಪ್ಯೂಟರ್ ಮೌಸ್ ಅಥವಾ ಯಾವುದೇ ಇತರ ಮುರಿದ ಅಥವಾ ಹರಿದ ವಸ್ತುವನ್ನು ಕಚೇರಿ ಮೇಜಿನ ಮೇಲೆ ಇಡಬಾರದು. ಇದು ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು ಮತ್ತು ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:41 am, Thu, 25 December 25
ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಬಿಸಿ ಚಹಾ (Tea) ಕುಡಿಯುವುದು ಹಲವರ ಅಭ್ಯಾಸ. ಚಹಾ ಕೇವಲ ಪಾನೀಯವಲ್ಲ, ಅದು ಒಂದು ಭಾವನೆ. ಆದರೆ ಈ ಚಹಾವೇ ಆರೋಗ್ಯಕ್ಕೆ ದೊಡ್ಡ ಬೆದರಿಕೆಯಾಗುತ್ತಿದೆ ಎಂದು ತಜ್ಞರು ಈಗ ಎಚ್ಚರಿಸುತ್ತಿದ್ದಾರೆ. ಹೌದು, ನಿರ್ದಿಷ್ಟವಾಗಿ ಹೇಳುವುದಾದರೆ, ಇತ್ತೀಚಿನ ಅಧ್ಯಯನಗಳು ಚಹಾ ತಯಾರಿಸಿದ 15 ರಿಂದ 20 ನಿಮಿಷಗಳ ಒಳಗೆ ಸೇವಿಸಬೇಕು. ಅದರ ನಂತರ ಚಹಾ ಕುಡಿಯುವುದರಿಂದ ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂದು ಹೇಳುತ್ತವೆ. ನೀವು ಕೂಡ ತಣ್ಣಗಾದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತೀರಾ… ಈ ಅಭ್ಯಾಸ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿದರೆ ನೀವೆಂದೂ ಈ ಕೆಲಸ ಮಾಡುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಯಾಕೆ ಈ ಅಭ್ಯಾಸ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಒಮ್ಮೆ ಚಹಾ ಮಾಡಿದ ನಂತರ ಉಳಿದದ್ದು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಜಪಾನ್ ಮತ್ತು ಚೀನಾದಂತಹ ದೇಶಗಳಲ್ಲಿ, ಸಂಗ್ರಹಿಸಿದ ಚಹಾವನ್ನು ವಿಷದಷ್ಟೇ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಹೌದು, ಜಪಾನಿನ ಜನ 24 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿದ ಚಹಾ ಸೇವನೆ ಹಾವು ಕಡಿತಕ್ಕಿಂತ ಅಪಾಯಕಾರಿ ಎಂದು ಹೇಳುತ್ತಾರೆ. ಚೀನಾದಲ್ಲಿಯೂ ಸಂಗ್ರಹಿಸಿಟ್ಟ ಚಹಾವನ್ನು ಸೇವನೆ ಮಾಡುವುದಿಲ್ಲ.
ಸಾಮಾನ್ಯವಾಗಿ ಹಾಲು ಬೇಗನೆ ಹಾಳಾಗುತ್ತದೆ. ಹಾಲಿನಿಂದ ಮಾಡಿದ ಚಹಾವನ್ನು ಕೋಣೆಯ ಉಷ್ಣಾಂಶದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು. ಫ್ರಿಜ್ನಲ್ಲಿ ಇರಿಸಿದರೆ, ಅದನ್ನು ಒಂದರಿಂದ ಮೂರು ದಿನಗಳವರೆಗೆ ಸಂಗ್ರಹಿಸಬಹುದು, ಆದರೆ ಅದನ್ನು ಮತ್ತೆ ಬಿಸಿ ಮಾಡುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ. ಅಷ್ಟೇ ಅಲ್ಲ, ಇದು ಆಮ್ಲೀಯತೆಯನ್ನು ಕೂಡ ಹೆಚ್ಚಿಸುತ್ತದೆ.
ಹಾಲಿಲ್ಲದೆ ಶುಂಠಿ ಚಹಾ ಸೇವನೆ ಮಾಡುವುದು ಸುರಕ್ಷಿತ. ಫ್ರಿಡ್ಜ್ನಲ್ಲಿ ಸಂಗ್ರಹಿಸಿಟ್ಟರೆ, ಅದು ಮೂರರಿಂದ ಐದು ದಿನಗಳವರೆಗೆ ಇರುತ್ತದೆ. ಆದರೆ ಅದನ್ನು ಕುಡಿಯುವ ಮೊದಲು ಚೆನ್ನಾಗಿ ಕುದಿಸಬೇಕು. ಚಹಾ ಬಣ್ಣ ಬದಲಾದರೆ ಅಥವಾ ವಾಸನೆ ಬಂದರೆ, ಅದನ್ನು ಕುಡಿಯಬಾರದು. ಆದರೆ ದಿನಕ್ಕೆ 4 ರಿಂದ 5 ಗ್ರಾಂ ಗಿಂತ ಹೆಚ್ಚು ಶುಂಠಿಯನ್ನು ಸೇವಿಸುವುದರಿಂದ ಕೆಲವರಲ್ಲಿ ಎದೆಯುರಿ ಉಂಟಾಗುತ್ತದೆ.
ಇದನ್ನೂ ಓದಿ: ಈ 7 ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಾರದು ಎಚ್ಚರ!
ಸಂಗ್ರಹಿಸಿದ ಅಥವಾ ಮತ್ತೆ ಬಿಸಿ ಮಾಡಿದ ಚಹಾವು ದೇಹದಲ್ಲಿ ವಿಷವನ್ನು ಉತ್ಪಾದಿಸುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಚಹಾವನ್ನು ಪದೇ ಪದೇ ಕುದಿಸುವುದರಿಂದ ಅದರಲ್ಲಿರುವ ಪ್ರೋಟೀನ್ಗಳು ನಾಶವಾಗುತ್ತದೆ, ಹಾಗಾಗಿ ಆಮ್ಲೀಯತೆ ಮತ್ತು ಸುಡುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಚಹಾ ಕುಡಿಯುವ ಮನಸ್ಸಾದರೆ ಪ್ರತಿ ಬಾರಿಯೂ ತಾಜಾವಾಗಿ ಚಹಾ ತಯಾರಿಸಿ ಕುಡಿಯುವುದು ಬಹಳ ಆರೋಗ್ಯಕರ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ (online shopping) ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕುಳಿತಲ್ಲಿಂದಲೇ ತಮಗೆ ಬೇಕಾದ್ದನ್ನು ಆರ್ಡರ್ ಮಾಡುತ್ತಾರೆ. ಹೀಗಾಗಿ ಬ್ಲಿಂಕಿಟ್, ಜೆಪ್ಟೊ ಅಥವಾ ಸ್ವಿಗ್ಗಿಯ ಇನ್ಸ್ಟಾಮಾರ್ಟ್ ಹೀಗೆ ಹತ್ತಾರು ಅಪ್ಲಿಕೇಶನ್ ಗಳನ್ನು ಅವಲಂಬಿಸಿಕೊಂಡವರೇ ಹೆಚ್ಚು. ಹೀಗಿರುವಾಗ ಪ್ರತಿ ವರ್ಷದಂತೆ ಈ ವರ್ಷವ ಸ್ವಿಗ್ಗಿಯ ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ ಆಗಿರುವ ಇನ್ಸ್ಟಾಮಾರ್ಟ್ನ (Instamarts) 2025ರ ವರದಿಯನ್ನು ಬಿಡುಗಡೆ ಮಾಡಿದೆ. ಆದರೆ ಚೆನ್ನೈನ ವ್ಯಕ್ತಿಯೊಬ್ಬ ಈ ಅಪ್ಲಿಕೇಶನ್ ಮೂಲಕ ಇಡೀ ವರ್ಷದಲ್ಲಿ ಕಾಂಡೋಮ್ ಗಾಗಿ ಒಂದು ಲಕ್ಷ ರೂ ಖರ್ಚು ಮಾಡಿದ್ದಾನೆಯಂತೆ.
ಭಾರಧ್ವಜ್ ರಂಗನ್ (bharadwaj rangan) ಹೆಸರಿನ ಖಾತೆಯಲ್ಲಿ ಇನ್ಸ್ಟಾಮಾರ್ಟ್ ವರದಿ ಕುರಿತಾದ ಪೋಸ್ಟ್ ಹಂಚಿಕೊಳ್ಳಲಾಗಿದೆ. 2025ರ ಇನ್ಸ್ಟಾಮಾರ್ಟ್ ವರದಿ ಪ್ರಕಾರ, ಚೆನ್ನೈನ ವ್ಯಕ್ತಿಯೂ ಇಡೀ ವರ್ಷದಲ್ಲಿ ಕಾಂಡೋಮ್ಗಳಿಗಾಗಿ 1,06,398 ರೂ.ಗಳನ್ನು ಖರ್ಚು ಮಾಡಿದ್ದಾನೆ.
ಇದನ್ನೂ ಓದಿ:ಸತತ 10 ವರ್ಷಗಳಿಂದ ಬಿರಿಯಾನಿಗೆ ಅಗ್ರಸ್ಥಾನ: ಸ್ವಿಗ್ಗಿಯಲ್ಲಿ 93 ಮಿಲಿಯನ್ ಬಿರಿಯಾನಿ ಆರ್ಡರ್
ಅದಲ್ಲದೇ, ವರ್ಷ ಪೂರ್ತಿ 228 ವಿಭಿನ್ನ ಆರ್ಡರ್ಗಳನ್ನು ಮಾಡಿದ್ದಾನೆ ಎನ್ನುವ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಅಂದರೆ, ಪ್ರತಿ ತಿಂಗಳು ಸರಾಸರಿ 19 ಆರ್ಡರ್ಗಳನ್ನು ಮಾಡಿದ್ದಾನೆ ಎನ್ನಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟಿ20 ಕ್ರಿಕೆಟ್ ಅಂದರೆ ಹೊಡಿಬಡಿಯಾಟ… ಅದರಲ್ಲೂ ಕಡಿಮೆ ಮೊತ್ತದ ಟಾರ್ಗೆಟ್ ಸಿಕ್ಕರೆ ಬ್ಯಾಟರ್ಗಳು ಅಬ್ಬರಿಸುವುದು ವಾಡಿಕೆ. ಆದರೆ ದುಬೈನಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಪಂದ್ಯದಲ್ಲಿ ಸ್ಲೋ ಇನಿಂಗ್ಸ್ ಆಡಿದ ಜೋರ್ಡನ್ ಕಾಕ್ಸ್ ಸುದ್ದಿಯಾಗಿದ್ದಾರೆ.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಶಾರ್ಜಾ ವಾರಿಯರ್ಸ್ ಹಾಗೂ ದುಬೈ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಶಾರ್ಜಾ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
135 ರನ್ಗಳ ಗುರಿ ಬೆನ್ನತ್ತಿದ ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಶಯಾನ್ ಜಹಾಂಗೀರ್ ಉತ್ತಮ ಆರಂಭ ಒದಗಿಸಿದ್ದರು. 39 ಎಸೆತಗಳನ್ನು ಎದುರಿಸಿದ ಶಯಾನ್ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 51 ರನ್ ಬಾರಿಸಿದ್ದರು.
ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋರ್ಡನ್ ಕಾಕ್ಸ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದರು. ಬರೋಬ್ಬರಿ 50 ಎಸೆತಗಳನ್ನು ಎದುರಿಸಿದ ಜೋರ್ಡನ್ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 61 ರನ್ ಕಲೆಹಾಕಿದರು.
ಕಾಕ್ಸ್ ಅವರ ಈ ನಿಧಾನಗತಿಯ ಬ್ಯಾಟಿಂಗ್ ಪರಿಣಾಮ 135 ರನ್ಗಳ ಗುರಿ ತಲುಪಲು ದುಬೈ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 19.1 ಓವರ್ಗಳನ್ನು ತೆಗೆದುಕೊಂಡಿತು. ಅಂದರೆ ಕೊನೆಯ ಓವರ್ನಲ್ಲಿ 6 ವಿಕೆಟ್ಗಳ ಜಯ ದಕ್ಕಿಸಿಕೊಂಡಿದ್ದರು.
ಅಂದಹಾಗೆ ಜೋರ್ಡನ್ ಕಾಕ್ಸ್ ಮುಂಬರುವ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಮಿಜಿ ಹರಾಜಿನ ಮೂಲಕ ಕಾಕ್ಸ್ ಅವರನ್ನು ಆರ್ಸಿಬಿ 75 ಲಕ್ಷ ರೂ.ಗೆ ಖರೀದಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಜನಪ್ರಿಯತೆ ಪಡೆದಿದ್ದಾರೆ. ಅವರು ಈ ಮೊದಲು ಅಶ್ವಿನಿ ಹಾಗೂ ಜಾನ್ವಿಗೆ ಬಳಕೆ ಮಾಡಿದ್ದ ‘ದೊಡ್ಡವ್ವ..’ ಡೈಲಾಗ್ನ ಹಾಡು ಮಾಡಲಾಯಿತು. ಈ ಹಾಡನ್ನು ಅಶ್ವಿನಿ ತಾಯಿ ಅವರು ಬಿಗ್ ಬಾಸ್ ಮನೆಯಲ್ಲೇ ಹಾಡಿದ್ದಾರೆ ಎಂದರೆ ನೀವು ನಂಬಲೇಬೇಕು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.