ಬೆಂಗಳೂರಿನಲ್ಲಿ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್, ವಿಡಿಯೋ ನೋಡಿ – Kannada News | Full traffic jam In Bengaluru Hosur Road For national highway collapsed near Attibele

ಆನೇಕಲ್ (ಬೆಂಗಳೂರು) (ಫೆಬ್ರವರಿ.04): ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾದ ಬೆಂಗಳೂರು-ಹೊಸೂರು (Bengaluru Hosur Road) ರಾಷ್ಟ್ರೀಯ ಹೆದ್ದಾರಿ ದಿಢೀರ್ ಕುಸಿದುಬಿದ್ದಿದ್ದು, ಫುಲ್ ಟ್ರಾಫಿಕ್ ಜಾಮ್  (traffic jam) ಉಂಟಾಗಿದೆ. ಹೆದ್ದಾರಿ ಕಾಮಗಾರಿ ನಡೆಯುತ್ತಿರುವಾಗಲೇ ಹಳೇ ಚಂದಾಪುರದ ಬಳಿ ರಸ್ತೆ ಸುಮಾರು 20 ಅಡಿ ಆಳಕ್ಕೆ ಕುಸಿದಿದ್ದು, ಚಂದಾಪುರದಿಂದ ಕರ್ನಾಟಕದ ಗಡಿ ಅತ್ತಿಬೆಲೆವರೆಗೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ರೋಗಿಗಳು, ಶಾಲಾ ಮಕ್ಕಳು ಸಕಾಲಕ್ಕೆ ತಲುಪಲು ಪರದಾಡಿದರು.

ಹಳೇ ಚಂದಾಪುರದ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ. ಇದೇ ವೇಳೆ ಸಮೀಪದ ಲೇಔಟ್‌ಗಳಿಂದ ಹರಿದು ಬರುತ್ತಿರುವ ಸ್ಯಾನಿಟರಿ ನೀರು ರಸ್ತೆಯ ಅಡಿಭಾಗಕ್ಕೆ ನುಗ್ಗಿದ್ದು, ಮಣ್ಣು ಸಡಿಲಗೊಂಡು ಬೃಹತ್ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

U19 World Cup: ಸೆಮಿಫೈನಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ – Kannada News | U19 World Cup Semifinal: Vaibhav Suryavanshi’s Blazing Fifty Powers India’s 311 Run Chase

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ (India U19 vs Afghanistan U19) ನಡುವೆ 2026 ರ ಅಂಡರ್-19 ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ (U19 World Cup Semifinal) ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಭಾರತಕ್ಕೆ 311 ರನ್‌ಗಳ ಬೃಹತ್ ಗುರಿ ನೀಡಿದೆ. ಇದೀಗ ಈ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾಕ್ಕೆ ಆರಂಭಿಕ ಜೋಡಿ ಅಬ್ಬರದ ಪ್ರಾರಂಭ ನೀಡಿದೆ. ಆರಂಭಿಕರಾದ ಆರನ್ ಜಾರ್ಜ್​ ಹಾಗೂ ವೈಭವ್ ಸೂರ್ಯವಂಶಿ ಮೊದಲ ವಿಕೆಟ್​ಗೆ 90 ರನ್​ಗಳ ಜೊತೆಯಾಟ ನೀಡಿದರು. ವೈಭವ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆದಾಗ್ಯೂ ಔಟಾಗುವುದಕ್ಕೂ ಮುನ್ನ ವೈಭವ್ ತಂಡಕ್ಕೆ ತನ್ನಿಂದ ಬೇಕಾಗಿದ್ದುದ್ದನ್ನು ನೀಡಿ ಪೆವಿಲಿಯನ್​ಗೆ ಮರಳಿದರು.

24 ಎಸೆತಗಳಲ್ಲಿ ಅರ್ಧಶತಕ

ಬ್ಯಾಟಿಂಗ್‌ ಆರಂಭಿಸಿದ ಜಾರ್ಜ್​ ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆ ಬಳಿಕ ಸ್ಟ್ರೈಕ್​ಗೆ ಬಂದ ವೈಭವ್ ಕೂಡ ಎಂದಿನಂತೆ ಎದುರಿಸಿದ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ ಅಫ್ಘಾನಿಸ್ತಾನದ ಬೌಲರ್‌ಗಳನ್ನು ಹೈರಾಣಾಗಿಸಿದರು. ಇದರ ಪರಿಣಾಮವಾಗಿ ವೈಭವ್ ಕೇವಲ 24 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ ಅರ್ಧಶತದ ಗಡಿ ಮುಟ್ಟಿದರು. 216.66 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ವೈಭವ್ ತಂಡಕ್ಕೆ ಬೇಕಾದ ಆರಂಭ ಒದಗಿಸಿಕೊಟ್ಟರು. ಆದಾಗ್ಯೂ, ಇನ್ನಿಂಗ್ಸ್‌ನ ಆರಂಭದಲ್ಲಿಯೇ ವೈಭವ್​ಗೆ ಜೀವದಾನ ಸಿಕ್ಕಿತು. ಆಫ್ಘನ್ ತಂಡ ನೀಡಿದ ಜೀವದಾನವನ್ನು ವೈಭವ್ ಸೂರ್ಯವಂಶಿ ಸಂಪೂರ್ಣವಾಗಿ ಬಳಸಿಕೊಂಡರು.

33 ಎಸೆತಗಳಲ್ಲಿ 68 ರನ್

ಆದರೆ ಅರ್ಧಶತಕ ಬಾರಿಸಿದ ನಂತರ ವೈಭವ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. 33 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 68 ರನ್ ಕಲೆಹಾಕಿ ವೈಭವ್ ಔಟಾದರು. ಔಟಾಗುವುದಕ್ಕೂ ಮುನ್ನ ಸೂರ್ಯವಂಶಿ, ಆರನ್ ಜಾರ್ಜ್ ಅವರೊಂದಿಗೆ 90 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು. ಗಮನಾರ್ಹ ವಿಷಯವೆಂದರೆ ಈ ಇಬ್ಬರು ಆಟಗಾರರು ಕೇವಲ 9.3 ಓವರ್‌ಗಳಲ್ಲಿ ತಂಡವನ್ನು 90 ರನ್‌ಗಳಿಗೆ ಕೊಂಡೊಯ್ದರು.

ಸತತ 2 ಜೀವದಾನ ಸಿಕ್ಕರೂ ಪಾಕ್ ವಿರುದ್ಧ ಮುಗ್ಗರಿಸಿದ ವೈಭವ್ ಸೂರ್ಯವಂಶಿ

ಭಾರತಕ್ಕೆ 311 ರನ್​ಗಳ ಗುರಿ

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ಅಫ್ಘಾನಿಸ್ತಾನದ ಪರ ಉಜೈರುಲ್ಲಾ ನಿಯಾಜೈ ಮತ್ತು ಫೈಸಲ್ ಶಿನೋಜಾಡಾ ಶತಕದ ಇನ್ನಿಂಗ್ಸ್ ಆಡಿದರು. ನಿಯಾಜೈ 86 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಅಜೇಯ 101 ರನ್ ಬಾರಿಸಿದರೆ, ಫೈಸಲ್ 93 ಎಸೆತಗಳಲ್ಲಿ 15 ಬೌಂಡರಿಗಳ ಸಹಾಯದಿಂದ 110 ರನ್ ಕಲೆಹಾಕಿದರು. ಭಾರತದ ಪರ ದೀಪೇಶ್ ದೇವೇಂದ್ರನ್ ಮತ್ತು ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:21 pm, Wed, 4 February 26

Source link

ಚಿಕ್ಕಪ್ಪನಿಗಾಗಿ ‘ಪೆದ್ದಿ’ ಸಿನಿಮಾ ಬಿಡುಗಡೆ ಮುಂದೂಡಿದರೇ ರಾಮ್ ಚರಣ್? – Kannada News | Ram Charan starrer Peddi movie release date announce

ರಾಮ್ ಚರಣ್ (Ram Charan) ಇತ್ತೀಚೆಗಷ್ಟೆ ಮತ್ತೆ ತಂದೆ ಆಗಿದ್ದಾರೆ. ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ತಂದೆ ಆಗಿದ್ದ ರಾಮ್ ಚರಣ್ ಈಗ ಮತ್ತೊಮ್ಮೆ ಅವಳಿ ಮಕ್ಕಳಿಗೆ ತಂದೆ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ರಾಮ್ ಚರಣ್​ ಪತ್ನಿ ಉಪಾಸನಾಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದೆ. ಅದೇ ಖುಷಿಯಲ್ಲಿ ಇದೀಗ ರಾಮ್ ಚರಣ್ ಹೊಸ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ.

‘ಆರ್​​ಆರ್​​ಆರ್’ ಸಿನಿಮಾದ ಬಳಿಕ ಸತತ ಎರಡು ದೊಡ್ಡ ಸೋಲು ಕಂಡ ರಾಮ್ ಚರಣ್ ಅವರ ಎಲ್ಲ ನಿರೀಕ್ಷೆಗಳು ಅವರ ಹೊಸ ಸಿನಿಮಾ ‘ಪೆದ್ದಿ’ಯ ಮೇಲಿದೆ. ಇದೀಗ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ‘ಪೆದ್ದಿ’ ಸಿನಿಮಾವು ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿದೆ. ಅಸಲಿಗೆ ಈ ಸಿನಿಮಾ ಮಾರ್ಚ್ ತಿಂಗಳಲ್ಲೇ ಬಿಡುಗಡೆ ಆಗಬೇಕಿತ್ತು. ಮಾರ್ಚ್ 10ರಂದು ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಪವನ್ ಕಲ್ಯಾಣ್ ಇಂದಾಗಿ ‘ಪೆದ್ದಿ’ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ.

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 10ಕ್ಕೆ ಬಿಡುಗಡೆ ಆಗಲಿಕ್ಕಿತ್ತು. ಆದರೆ ಈಗ ದಿನಾಂಕ ಬದಲಿಸಿ, ಮಾರ್ಚ್ 26ಕ್ಕೆ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಮಾರ್ಚ್ 19 ರಂದು ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣಕ್ಕೆ ಸಿನಿಮಾದ ಬಿಡುಗಡೆಯನ್ನು ತುಸು ತಡ ಮಾಡಲಾಗಿದೆ. ಇದರ ಪರಿಣಾಮವಾಗಿ ‘ಪೆದ್ದಿ’ ಸಿನಿಮಾದ ಬಿಡುಗಡೆಯನ್ನು ಇನ್ನಷ್ಟು ತಡ ಮಾಡಲಾಗಿದ್ದು, ಏಪ್ರಿಲ್ 30ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:ಅಭಿಮಾನಿಗಳು ಗದ್ದಲ ಮಾಡಿದರೂ ಸಿಹಿ ಕೊಟ್ಟು ಕಳುಹಿಸಿದ ರಾಮ್ ಚರಣ್

‘ಪೆದ್ದಿ’ ಸಿನಿಮಾವು ಹಳ್ಳಿಯ ಕ್ರಿಕೆಟ್ ಆಟಗಾರನೊಬ್ಬನ ಕತೆಯನ್ನು ಒಳಗೊಂಡಿದೆ. ಈ ರೂರಲ್ ಆಕ್ಷನ್ ಡ್ರಾಮಾ ಸಿನಿಮಾಕ್ಕೆ ಬಾಲಿವುಡ್ ನಟಿ ಜಾನ್ಹವಿ ಕಪೂರ್ ನಾಯಕಿ. ಸಿನಿಮಾದ ವಿಶೇಷ ಮತ್ತು ಪವರ್​​ಫುಲ್ ಪಾತ್ರದಲ್ಲಿ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಸಹ ನಟಿಸುತ್ತಿದ್ದಾರೆ. ‘ಪೆದ್ದಿ’ ಸಿನಿಮಾವನ್ನು ಬುಚ್ಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು ಸೂಪರ್ ಹಿಟ್ ಸಿನಿಮಾ ‘ಉಪ್ಪೆನ’ ನಿರ್ದೇಶಿಸಿದ್ದರು. ‘ಪುಷ್ಪ’ ಖ್ಯಾತಿಯ ಸುಕುಮಾರ್ ಅವರ ಅಪ್ಪಟ ಶಿಷ್ಯನಾಗಿರುವ ಬುಚ್ಚಿ ಬಾಬು ಸನಾ, ‘ಪೆದ್ದಿ’ ಸಿನಿಮಾವನ್ನು ಅದ್ಧೂರಿಯಾಗಿ ಚಿತ್ರೀಕರಿಸಿದ್ದಾರೆ ಎನ್ನಲಾಗುತ್ತಿದೆ.

‘ಪೆದ್ದಿ’ ಸಿನಿಮಾವನ್ನು ವೃದ್ಧಿ ಸಿನಿಮಾಸ್ ಮತ್ತು ಐವಿವೈ ಎಂಟರ್ಟೈನ್​​ಮೆಂಟ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿವೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಈಗಾಗಲೇ ಬಿಡುಗಡೆ ಆಗಿರುವ ‘ಚಿಕಿರಿ-ಚಿಕಿರಿ’ ಹಾಡು ಸಖತ್ ಹಿಟ್ ಆಗಿದೆ. ಸಿನಿಮಾನಲ್ಲಿ ಬಾಲಿವುಡ್ ನಟ ಬೊಮನ್ ಇರಾನಿ, ತೆಲುಗಿನ ಖ್ಯಾತ ನಟ ಜಗಪತಿ ಬಾಬು ಸಹ ನಟಿಸಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ಅವರುಗಳು ವಿತರಣೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Bengaluru Metro: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ, ಎಷ್ಟು ಹೆಚ್ಚಳ? – Kannada News | Karnataka Governmnet Green Signal to bengaluru Namma Metro ticket Price Hike, here Is How Much Jump

ಬೆಂಗಳೂರು, (ಫೆಬ್ರವರಿ 04): ಸಿಲಿಕಾನ್ ಸಿಟಿ ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೊನ್ನೆ ಅಷ್ಟೇ ಬೋರ್ಡ್​​ ಮೀಟಿಂಗ್​ನಲ್ಲಿ ಶೇಕಡಾ 5ರಷ್ಟು ಮೆಟ್ರೋ ದರ ಏರಿಕೆ ಒಪ್ಪಿಗೆ ಬಳಿಕ ಬಿಎಂಆರ್​ಸಿಎಲ್ ಸಲ್ಲಿಸಿದ್ದ ಪ್ರಸ್ತಾವನೆಗೆ ಇಂದು (ಫೆಬ್ರವರಿ 04) ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.  ಹೀಗಾಗಿ ಇದೇ ಫೆಬ್ರವರಿ 9ರಿಂದ ಶೇಕಡಾ 5ರಷ್ಟು ನಮ್ಮ ಮೆಟ್ರೋ ಟಿಕೆಟ್​ ದರ ಹೆಚ್ಚಳವಾಗಲಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಎಂಆರ್​​​ಸಿಎಲ್ ಅಧಿಕೃತ ಆದೇಶ ಹೊರಡಿಸಲಿದೆ.

ಕಳೆದ ವರ್ಷ ಮೆಟ್ರೋ ಟಿಕೆಟ್ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ಏರ್ಪಟ್ಟಿತ್ತು, ರಾಜ್ಯ ಸರ್ಕಾರವೇ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದು ಎಂದು ಬಿಜೆಪಿ ನಾಯಕರು ಹೇಳಿದ್ರೆ, ಇತ್ತ ಕಾಂಗ್ರೆಸ್​​ನವರು ಕೇಂದ್ರವೇ ಹೆಚ್ಚಳ ಮಾಡಿದೆ ಎಂದು ಆರೋಪ ಪ್ರತ್ಯಾರೋಪ ಮಾಡಿದ್ದರು. ಆದ್ರೆ, ಈ ಬಾರಿ ಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರವೇ ಒಪ್ಪಿಗೆ ಸೂಚಿಸಿದೆ.

ಇದನ್ನೂ ಓದಿ: Namma Metro: ವಿರೋಧದ ನಡುವೆಯು BMRCL ಬೋರ್ಡ್​ನಿಂದ ಮೆಟ್ರೋ ದರ ಏರಿಕೆಗೆ ಅಸ್ತು; ಹೆಚ್ಚಳ ಎಷ್ಟು?

ಎಲ್ಲಿಗೆ ಎಷ್ಟು ಟಿಕೆಟ್ ದರ ಹೆಚ್ಚಳ?

ಮೆಟ್ರೋದಲ್ಲಿ ಮೆಜೆಸ್ಟಿಕ್​ನಿಂದ ವೈಟ್​ಫೀಲ್ಡ್​ಗೆ ಪ್ರಸ್ತುತ 80 ರೂ. ಇದ್ದು, ಶೇ. 5% ಹೆಚ್ಚಳ ಬಳಿಕ 80 ರೂ.ನಿಂದ 84ರೂ. ಆಗುತ್ತೆ. 10 ರೂ. ಇರುವ ಟಿಕೆಟ್ ದರ ಶೇ 5ರಷ್ಟು ಹೆಚ್ಚಳವಾದರೆ 11 ರೂ. ಆಗಲಿದೆ. 90 ರೂ. ಇರುವ ಟಿಕೆಟ್ ದರ 95 ರೂ. ಆಗಲಿದೆ. ಮೆಜೆಸ್ಟಿಕ್​ನಿಂದ ಬೊಮ್ಮಸಂದ್ರಕ್ಕೆ 80 ರೂ.ನಿಂದ 84 ರೂ.ಗೆ ಹೆಚ್ಚಳ. ಮೆಜೆಸ್ಟಿಕ್​ನಿಂದ ಚಲ್ಲಘಟ್ಟಕ್ಕೆ 60 ರೂ. ಟು 63 ರೂ.

ಕಳೆದ ವರ್ಷ ಫೆಬ್ರವರಿ 9ರಂದು ಮೆಟ್ರೋ ಟಿಕೆಟ್ ದರವನ್ನು ಶೇ.101.5ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಬಳಿಕ ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಎಂಆರ್​ಸಿಎಲ್​​, ಶೇಕಡಾ 71.5ಕ್ಕೆ ದರ ಇಳಿಕೆ ಮಾಡಿತ್ತು. ಆದರೂ ಸಹ ನಮ್ಮ ಮೆಟ್ರೋ ಈಗ ಭಾರತದಲ್ಲಿಯೇ ಅತ್ಯಂತ ದುಬಾರಿ ಮೆಟ್ರೋ ಎನ್ನುವ ಬಿರುದುಕೊಂಡಿದ್ದು, ಇದೀಗ ಮತ್ತೆ ಶೇ.5ರಷ್ಟು ಟಿಕೆಟ್ ದರ ಹೆಚ್ಚಳವಾಗಿದ್ದರಿಂದ ಪ್ರಯಾಣಿಕರ ಮತ್ತಷ್ಟು ಹೊರೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುಂಭ ರಾಶಿಯಲ್ಲಿ ಶುಕ್ರ–ರಾಹು ಸಂಯೋಗ.. ಯಾರಿಗೆಲ್ಲ ಏನೆಲ್ಲ ಲಾಭ? – Kannada News | Venus rahu conjunction in aquarius feb 6 mar 2 zodiac impact and predictions

ಕುಂಭ ರಾಶಿಯಲ್ಲಿ ಶುಕ್ರ ಮತ್ತು ರಾಹುಗಳ ಸಂಯೋಗವು ಜ್ಯೋತಿಷ್ಯದಲ್ಲಿ ಬಹಳ ವಿಶಿಷ್ಟವಾದ ಯೋಗ. ಈ ಯೋಗ ಫೆಬ್ರವರಿ 6ರಿಂದ ಮಾರ್ಚ್ 02 ವರೆಗೆ ಇರಲಿದೆ. ಕುಂಭವು ಶನಿಯ ರಾಶಿಯಾಗಿ ವಾಯು ತತ್ತ್ವದ ಸೂಚಿಸುತ್ತಿದ್ದು ಸಮಾಜ, ಸಮೂಹ ಚಿಂತನೆ, ವಿಜ್ಞಾನ, ಹೊಸ ಆಲೋಚನೆಗಳು ಹಾಗೂ ಭವಿಷ್ಯದ ದಿಕ್ಕನ್ನು ತೋರಿಸುತ್ತದೆ.

ಶುಕ್ರನು ಭೋಗ, ಪ್ರೀತಿ, ಸೌಂದರ್ಯ, ಹಣಕಾಸು ಮತ್ತು ಸಂಬಂಧಗಳ ಕಾರಕ. ರಾಹು ಆಸೆ, ಮೋಹ, ಮಿತಿಲಂಘನೆ, ವಿದೇಶಿ ಸಂಸ್ಕೃತಿ ಮತ್ತು ಅಸಾಧಾರಣತೆಯನ್ನು ಪ್ರತಿನಿಧಿಸುತ್ತಾನೆ. ಈ ಇಬ್ಬರೂ ಕುಂಭದಲ್ಲಿ ಸೇರಿದಾಗ ಮಾನವನ ಆಸೆ ಮತ್ತು ಬುದ್ಧಿ ಹೊಸ ದಿಕ್ಕಿನಲ್ಲಿ ಸಾಗುವ ಪ್ರವೃತ್ತಿ ಹೆಚ್ಚುತ್ತದೆ.

ಈ ಯೋಗದ ಪ್ರಮುಖ ಲಕ್ಷಣವೆಂದರೆ ಸಾಂಪ್ರದಾಯಿಕ ಮೌಲ್ಯಗಳನ್ನು ಮೀರಿ ಆಧುನಿಕ, ವಿಭಿನ್ನ ಹಾಗೂ ಪ್ರಯೋಗಾತ್ಮಕ ಬದುಕಿನತ್ತ ಒಲವು. ಪ್ರೀತಿ ಮತ್ತು ಹಣ ಎರಡೂ ಕ್ಷೇತ್ರಗಳಲ್ಲಿ ಅತಿಯಾದ ಆಕರ್ಷಣೆ, ನಿರೀಕ್ಷೆ ಹಾಗೂ ಅಸಮಾಧಾನ ಒಟ್ಟಿಗೆ ಕಾಣಿಸಿಕೊಳ್ಳಬಹುದು.

ಕುಂಭ ರಾಶಿ:

ಈ ಸಂಯೋಗವು ಸ್ವರಾಶಿಯಲ್ಲಿ ನಡೆಯುವುದರಿಂದ ಪರಿಣಾಮ ಅತ್ಯಂತ ತೀವ್ರ. ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ. ಸಮಾಜದಲ್ಲಿ ಗುರುತಿಸಿಕೊಳ್ಳುವ ಅವಕಾಶ, ಹೊಸ ಸ್ನೇಹ ವಲಯ, ವಿಭಿನ್ನ ಪ್ರೇಮ ಅನುಭವಗಳು ಸಾಧ್ಯ. ಆದರೆ ರಾಹುವಿನ ಪ್ರಭಾವದಿಂದ ಸಂಬಂಧಗಳಲ್ಲಿ ನೈತಿಕ ಮಿತಿ ತಪ್ಪಿದರೆ ಅಪವಾದ, ಗೊಂದಲ ಹಾಗೂ ಮನಸ್ಸಿನ ಅಶಾಂತಿ ಎದುರಾಗಬಹುದು. ಹಣದ ಹರಿವು ಹೆಚ್ಚಿದರೂ ಅತಿಯಾದ ಭೋಗಾಸಕ್ತಿ ತೊಂದರೆ ಕೊಡಬಹುದು.

ಮಿಥುನ ಮತ್ತು ತುಲಾ ರಾಶಿ

ಶುಕ್ರನಿಗೆ ಸ್ವಾಭಾವಿಕವಾಗಿ ಅನುಕೂಲವಾದ ರಾಶಿಗಳಾದ್ದರಿಂದ ಈ ಯೋಗವು ಕ್ರಿಯೇಟಿವಿಟಿ, ಕಲೆ, ಮೀಡಿಯಾ, ಬರವಣಿಗೆ, ವ್ಯಾಪಾರ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರಗಳಲ್ಲಿ ಲಾಭ ನೀಡುತ್ತದೆ. ಪ್ರೇಮ ಜೀವನದಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ. ಆದರೆ ಸಂಬಂಧಗಳು ದೀರ್ಘಕಾಲ ಉಳಿದುಕೊಳ್ಳಲು ಪರಸ್ಪರ ನಂಬಿಕೆ ಅಗತ್ಯ. ವಿದೇಶಿ ಸಂಪರ್ಕಗಳು, ಹೊಸ ಯೋಜನೆಗಳು ಫಲಕೊಡಬಹುದು.

ಮೇಷ ಮತ್ತು ಸಿಂಹ ರಾಶಿ

ಸ್ನೇಹ ವಲಯ ವಿಸ್ತಾರವಾಗುತ್ತದೆ. ಹೊಸ ಜನರ ಪರಿಚಯದಿಂದ ಅವಕಾಶಗಳು ಬರುತ್ತವೆ. ಆದರೆ ದಾಂಪತ್ಯ ಅಥವಾ ಪ್ರೇಮದಲ್ಲಿ ಅನುಮಾನ, ಅಹಂಕಾರ ಹಾಗೂ ಅತಿಯಾದ ನಿರೀಕ್ಷೆ ಸಮಸ್ಯೆ ತರಬಹುದು. ಮಾತು ಮತ್ತು ವರ್ತನೆಯಲ್ಲಿ ಸಂಯಮ ಇರಬೇಕು.

ವೃಷಭ ಮತ್ತು ಮಕರ ರಾಶಿ

ಹಣಕಾಸು ಮತ್ತು ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಏರುಪೇರು. ಹೊಸ ಆದಾಯದ ಮೂಲಗಳು ಕಾಣಿಸಿಕೊಳ್ಳುವುದು. ಆದರೆ ಅತಿಯಾದ ಖರ್ಚು, ಲಕ್ಸುರಿ ಜೀವನದತ್ತ ಒಲವು ಸಾಲ ಅಥವಾ ಒತ್ತಡಕ್ಕೆ ಕಾರಣವಾಗಬಹುದು. ಹಿರಿಯರೊಂದಿಗೆ ಅಥವಾ ಅಧಿಕಾರಿಗಳೊಂದಿಗೆ ವಿವಾದ ಸಂಭವಿಸುವ ಸಾಧ್ಯತೆ ಇದೆ.

ಕರ್ಕಾಟಕ, ಕನ್ಯಾ, ವೃಶ್ಚಿಕ ಮತ್ತು ಮೀನ ರಾಶಿ

ಈ ರಾಶಿಗಳಿಗೆ ಈ ಯೋಗ ಸ್ವಲ್ಪ ಎಚ್ಚರಿಕೆ ಸೂಚಿಸುವುದು. ಮನಸ್ಸಿನ ಅಸ್ಥಿರತೆ, ಗುಪ್ತ ಚಿಂತೆ, ಸಂಬಂಧಗಳಲ್ಲಿ ಗೊಂದಲ, ತಪ್ಪು ನಿರ್ಧಾರಗಳು ಸಂಭವಿಸಬಹುದು. ಕೆಲವರಿಗೆ ಮೋಸ, ತಪ್ಪು ಆಕರ್ಷಣೆ ಅಥವಾ ಗುಪ್ತ ಶತ್ರುಗಳಿಂದ ತೊಂದರೆ ಎದುರಾಗಬಹುದು. ಆರೋಗ್ಯದ ಕಡೆಗೂ ಗಮನ ಅಗತ್ಯ.

ಧನು ರಾಶಿ

ಹೊಸ ಕಲಿಕೆ, ತಂತ್ರಜ್ಞಾನ, ದೂರ ಪ್ರಯಾಣ, ವಿದೇಶಿ ಅವಕಾಶಗಳಿಂದ ಲಾಭ ಸಾಧ್ಯ. ಆದರೆ ಗುರುತತ್ವ ದುರ್ಬಲವಾದರೆ ದಾರಿತಪ್ಪುವ ನಿರ್ಧಾರಗಳ ಸಾಧ್ಯತೆಯೂ ಇದೆ. ಮಾರ್ಗದರ್ಶನ ಮತ್ತು ಶಿಸ್ತು ಇದ್ದರೆ ಈ ಯೋಗ ಶುಭಕಾರಕವಾಗುತ್ತದೆ.

ಕುಂಭದಲ್ಲಿನ ಶುಕ್ರ–ರಾಹು ಸಂಯೋಗವು ಸಂಪೂರ್ಣವಾಗಿ ಶುಭ ಅಥವಾ ಸಂಪೂರ್ಣ ಅಶುಭ ಎಂದು ನಿರ್ಧರಿಸಲಾಗದು. ಇದು ಆಸೆಗಳನ್ನು ಹೆಚ್ಚಿಸುವ ಯೋಗ. ವಿವೇಕ, ನೈತಿಕತೆ ಮತ್ತು ಶಿಸ್ತಿನೊಂದಿಗೆ ಬಳಸಿಕೊಂಡರೆ ಈ ಯೋಗ ಸಮಾಜದಲ್ಲಿ ಹೆಸರು, ಹಣ ಮತ್ತು ಆಕರ್ಷಣೆ ನೀಡುತ್ತದೆ. ಅತಿರೇಕಕ್ಕೆ ಹೋಗಿದರೆ ಅದೇ ಯೋಗ ಗೊಂದಲ, ಅಪವಾದ ಮತ್ತು ಮನಶ್ಶಾಂತಿಯ ಕೊರತೆಗೆ ಕಾರಣವಾಗುತ್ತದೆ.

– ಲೋಹಿತ ಹೆಬ್ಬಾರ್

Source link

ಮಂಗಳೂರಿನಲ್ಲಿ ಬೋಟ್ ಆಂಬ್ಯುಲೆನ್ಸ್ ಲೋಕಾರ್ಪಣೆ: 16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ, ಏನೆಲ್ಲಾ ಸೌಲಭ್ಯವಿದೆ ಗೊತ್ತಾ? – Kannada News | Mangaluru Fishermen Build Karnataka First Boat Ambulance for Coastal Emergency Rescue

ಮಂಗಳೂರು, ಫೆಬ್ರವರಿ 04: ನದಿ, ಕಡಲಿಗೆ ದೋಣಿ ಇಳಿಸಿ, ಅಬ್ಬರದ ತೆರೆಗಳ ನಡುವೆ ಸಾಗಿ ಬಲೆ ಬೀಸಿ ಮೀನು ಹಿಡಿಯುವ ಸಾಹಸ ಪ್ರವೃತ್ತಿ ಮೀನುಗಾರಿಕೆ (fishing). ತಮ್ಮ ಬದುಕಿಗಾಗಿ ಜೀವವನ್ನೇ ಒತ್ತೆಯಿಟ್ಟು ವೃತ್ತಿ ನಡೆಸುವ ಈ ಮೀನುಗಾರರನ್ನು ತುರ್ತು ಸಂದರ್ಭದಲ್ಲಿ ರಕ್ಷಣೆ ಮಾಡುವುದಕ್ಕೆ ಮೀನುಗಾರರೆ ಮಾದರಿ ಕಾರ್ಯವೊಂದನ್ನು ಮಾಡಿದ್ದಾರೆ. ಬೋಟ್ ಆಂಬ್ಯುಲೆನ್ಸ್ (Boat Ambulance) ನಿರ್ಮಾಣ ಮಾಡುವ ಮೂಲಕ ತಮ್ಮ ರಕ್ಷಣೆಗೆ ತಾವೇ ಮುಂದಾಗಿದ್ದಾರೆ.

ರಾಜ್ಯ ಕರಾವಳಿಯ 320 ಕಿ.ಮೀ. ವ್ಯಾಪ್ತಿಯಲ್ಲಿ 5 ಲಕ್ಷಕ್ಕೂ ಅಧಿಕ ಕುಟುಂಬಗಳು ಇಂದಿಗೂ ಮೀನುಗಾರಿಕೆ ವೃತ್ತಿಯನ್ನು‌ ಅವಲಂಬಿಸಿವೆ. ಸಾಕಷ್ಟು ಸವಾಲಿನ ಸನ್ನಿವೇಶವನ್ನು ಎದುರಿಸಬೇಕಾದ ಈ ವೃತ್ತಿಯಲ್ಲಿ ಯಾವಾಗ ಅವಘಡ ಸಂಭವಿಸುತ್ತೆ ಅಂತಾ ಊಹಿಸುವುದಕ್ಕೆ ಸಾಧ್ಯವಿಲ್ಲ. ಹವಾಮಾನ ವೈಪರೀತ್ಯ, ಏಕಾಏಕಿ ಸಮುದ್ರದಲ್ಲಿ ಏರುಪೇರು ಅಥವಾ ತಾಂತ್ರಿಕ ದೋಷಗಳಿಂದ ಸಮುದ್ರದಲ್ಲಿ ಬೋಟ್ ಪಲ್ಟಿಯಾಗಿ‌ ಈವರೆಗೆ ಸಾಕಷ್ಟು ಜೀವಗಳು ಬಲಿಯಾಗಿವೆ.

ಇದನ್ನೂ ಓದಿ: ಕರಾವಳಿಯಲ್ಲಿ ಮೊದಲ ಬೋಟ್ ಆಂಬ್ಯುಲೆನ್ಸ್, ತಮ್ಮ‌ ರಕ್ಷಣೆಗೆ ತಾವೇ ನಿರ್ಮಿಸಿಕೊಂಡ ಮೀನುಗಾರರು

ಈ ರೀತಿಯ ಅವಘಡ ಸಂಭವಿಸಿದಾಗ ಅಥವಾ ಮೀನುಗಾರಿಕೆ ನಡೆಸುವ ವೇಳೆ ಮೀನುಗಾರ‌‌ ಅನಾರೋಗ್ಯಕ್ಕೆ ತುತ್ತಾದರೆ, ಕ್ಷ್ರಿಪ್ರವಾಗಿ ಅವರ ರಕ್ಷಣೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರಾಜ್ಯ ಕರಾವಳಿಯಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಬೋಟ್ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಲಾಗಿದೆ. ಉಳ್ಳಾಲ ವಲಯದ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರ‌ ಸಂಘದವರು ಒಟ್ಟು ಸೇರಿ ಈ ಬೋಟ್ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದ್ದಾರೆ.

16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ

ಸರ್ಕಾರ ಈ ಹಿಂದೆ ಬೋಟ್ ಆಂಬ್ಯುಲೆನ್ಸ್ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರೂ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ನಿರಾಸೆಗೊಂಡ ಮೀನುಗಾರರು ಸರ್ಕಾರಕ್ಕೆ ಸೆಡ್ಡು ಹೊಡೆದು ತಮ್ಮ ಜೀವ ರಕ್ಷಣೆಗೆ ತಾವೇ ಮುಂದಾಗಿದ್ದು, ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿದ್ದಾರೆ. ಸುಮಾರು 16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಈ ಬೋಟ್ ಆಂಬ್ಯುಲೆನ್ಸ್ ದಾನಿಗಳ ಸಹಾಯದಿಂದ ಸಾಕಾರಗೊಂಡಿದೆ.

 

ತುರ್ತು ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಈ ಬೋಟ್‌ನಲ್ಲಿ ಅಳವಡಿಸಲಾಗಿದೆ. ಈ ಬೋಟ್‌ನಲ್ಲಿ 30 ಮಂದಿ ಪ್ರಯಾಣಿಸುವಷ್ಟು ಅವಕಾಶವಿದ್ದು, ಸಂಪೂರ್ಣವಾಗಿ ತುರ್ತು ಸಂದರ್ಭಗಳಲ್ಲಿ ಮೀನುಗಾರರ ಜೀವ ರಕ್ಷಣೆಗೆ ಬಳಸಲಾಗುತ್ತದೆ.

ಬೋಟ್ ಆಂಬ್ಯುಲೆನ್ಸ್​​ನಲ್ಲಿ ಏನೆಲ್ಲಾ ಸೌಲಭ್ಯ

ಉಳ್ಳಾಲ ಜೆಟ್ಟಿಯನ್ನು ಕೇಂದ್ರವಾಗಿರಿಸಿಕೊಂಡು ಬೋಟ್ ಆಂಬ್ಯುಲೆನ್ಸ್ ಕಾರ್ಯಾಚರಣೆ ನಡೆಯಲಿದೆ. ಇದಕ್ಕಾಗಿ ಚಾಲಕರನ್ನು ಒಳಗೊಂಡಂತೆ 15 ಜನರ ನುರಿತ ತಂಡ ಸಜ್ಜಾಗಿದೆ.‌ ಬೋಟ್‌ನಲ್ಲಿ ಸೈರನ್, ಎಮರ್ಜೆನ್ಸಿ ಕೆಂಪು ದೀಪ, ಸ್ಟ್ರೆಚರ್, ಆಮ್ಲಜನಕ ವ್ಯವಸ್ಥೆ, ವೈದ್ಯಕೀಯ ಉಪಕರಣಗಳು, ಪ್ರಥಮ ಚಿಕಿತ್ಸೆ ಕಿಟ್ ಹಾಗೂ ಲೈಫ್ ಜಾಕೆಟ್‌ಗಳಂತಹ ಸೌಲಭ್ಯಗಳಿವೆ. ಜೊತೆಗೆ ನುರಿತ ಆರೋಗ್ಯ ಸಿಬ್ಬಂದಿ ಇರಲಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾರ್ಖಾನೆಗೆ ಒಡಿಶಾ ಕಂಪನಿ ಹೆಸರು: ಸಿಡಿದೆದ್ದ ಮಂಗಳೂರಿಗರು

ಸರ್ಕಾರದ ನೆರವಿಗಾಗಿ ಕಾಯದೆ ಮೀನುಗಾರರೇ ಕೈಗೊಂಡ ಈ ಮಾನವೀಯ ಕಾರ್ಯ ಇದೀಗ ರಾಜ್ಯದ ಗಮನ ಸೆಳೆಯುತ್ತಿದೆ. ಈ ಮೂಲಕ ಕರಾವಳಿಯಲ್ಲಿ ಮೀನುಗಾರರ ಜೀವ ರಕ್ಷಣೆಯ ಭರವಸೆ ಮೂಡಿಸಿದೆ. ಮೀನುಗಾರರ ಈ ಕಾರ್ಯದಿಂದ ಸರ್ಕಾರ ಇನ್ನಾದರೂ ಪ್ರೇರಣೆ ಪಡೆಯಲಿ‌ ಎಂಬುದೇ ನಮ್ಮ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಂಗಾತಿಯಲ್ಲಿ ಈ ಬದಲಾವಣೆಗಳು ಕಂಡುಬಂದರೆ ನೀವು ಪ್ರೀತಿಯಲ್ಲಿ ಮೋಸ ಹೋಗ್ತಿದ್ದೀರಿ ಎಂದರ್ಥ – Kannada News | These changes in your partner can lead to a breakup

ಎಲ್ಲರ ಪ್ರೀತಿ ಸಕ್ಸಸ್‌ ಆಗೋದಿಲ್ಲ, ಕೆಲವೊಬ್ಬರು ಪದೇ ಪದೇ ಪ್ರೀತಿಯಲ್ಲಿ (love) ಮೋಸ ಹೋಗ್ತಾರೆ. ಜಗಳಗಳೇ ಬ್ರೇಕಪ್‌ಗೆ ಮೂಲ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದ್ರೆ ಇದ್ದಕ್ಕಿದ್ದಂತೆ ಬ್ರೇಕಪ್‌ ಆಗೋದಿಲ್ಲ, ಬ್ರೇಕಪ್‌ಗೂ ಸ್ವಲ್ಪ ಸಮಯ ಮುನ್ನ ಸಂಗಾತಿಯಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬರುತ್ತವೆ. ಈ ಬದಲಾವಣೆಗಳು ನಿಮ್ಮ ಸಂಗಾತಿಗೆ ನಿಮಗೆ ಮೋಸ ಮಾಡುತ್ತಿದ್ದಾರೆ ಎಂಬುದರ ಎಚ್ಚರಿಕೆಯ ಸಂಕೇತವಾಗಿದೆ. ಈ ಬದಲಾವಣೆ, ಎಚ್ಚರಿಕೆಯ ಸಂಕೇತವನ್ನು ನಿರ್ಲಕ್ಷಿಸಿದರೆ ಖಂಡಿತವಾಗಿಯೂ ಮುಂದೊಂದು ದಿನ ಪ್ರೇಮ ವೈಫಲ್ಯಕ್ಕೆ ಕಾರಣವಾಗಬಹುದು. ಹಾಗಿದ್ರೆ ಯಾವ ಬದಲಾವಣೆಗಳು ಬ್ರೇಕಪ್‌ನ ಸಂಕೇತ ಎಂಬುದನ್ನು ನೋಡೋಣ ಬನ್ನಿ.

ಸಂಗಾತಿಯಲ್ಲಿನ ಈ ಬದಲಾವಣೆಗಳು ಬ್ರೇಕಪ್‌ಗೆ ಕಾರಣವಾಗಬಹುದು‌:

  • ಸಂಗಾತಿ ಪ್ರೇಮ ಸಂಬಂಧದಿಂದ ದೂರ ಸರಿಯಲು ಪ್ರಾರಂಭಿಸಿದಾಗ, ನೀವು ಮೊದಲು ಗಮನಿಸುವುದು ಆಕೆ/ಆತ ಮಾತನಾಡುವ ವಿಧಾನದಲ್ಲಿನ ಬದಲಾವಣೆ. ಪ್ರೀತಿಯಿಂದ ಕೂಡಿದ್ದ ಸಂಭಾಷಣೆಗಳು ಕ್ರಮೇಣ ಔಪಚಾರಿಕವಾಗುತ್ತದೆ, ಪ್ರತಿಯೊಂದು ಸಂಭಾಷಣೆಯಲ್ಲೂ ಚುಚ್ಚು ಮಾತುಗಳಿರುತ್ತವೆ. ಈ ಬದಲಾವಣೆ ಖಂಡಿತವಾಗಿಯೂ ಬ್ರೇಕಪ್‌ಗೆ ಕಾರಣವಾಗುತ್ತದೆ.
  • ಮೊದಲೆಲ್ಲಾ ನಿಮ್ಮ ಬಳಿ ಗಂಟೆಗಟ್ಟಲೆ ಮಾತನಾಡುತ್ತಿದ್ದ ನಿಮ್ಮ ಪ್ರೇಮಿ ಇದ್ದಕ್ಕಿದ್ದಂತೆ ಮಾತನಾಡುವುದು ಕಡಿಮೆ ಮಾಡಿದರೆ ಅಥವಾ ನೀವು ಕರೆ ಮಾಡಿದಾಗಲೆಲ್ಲಾ ನಾನು ಬ್ಯುಸಿ ಇದ್ದೇನೆ, ಫೋನ್‌ನಲ್ಲಿ ಮಾತನಾಡಲು ಸಮಯವಿಲ್ಲ ಎಂದೆಲ್ಲಾ ಉಡಾಫೆಯ ಮಾತನಾಡಿದರೆ, ನಿಮ್ಮ ಪ್ರೇಮಿಗೆ ನಿಮ್ಮ ಮೇಲೆ ಪ್ರೀತಿ ಕಡಿಮೆಯಾಗುತ್ತಿದೆ ಎಂದರ್ಥ.
  • ವ್ಯಂಗ್ಯ, ಚುಚ್ಚುವ ಮಾತುಗಳು ಮತ್ತು ನಿಮ್ಮ ಭಾವನೆಗಳನ್ನು ಲಘುವಾಗಿ ಪರಿಗಣಿಸುವುದು ಇವೆಲ್ಲವೂ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಕಡಿಮೆಯಾಗಿದೆ ಎಂಬುದರ ಸಂಕೇತವಾಗಿದೆ.
  • ಸಮಯವಿಲ್ಲ, ಕೆಲಸ ಇದೆ ಹೀಗೆಲ್ಲಾ ಪದೇ ಪದೇ ನೆಪಗಳನ್ನು ಹೇಳಿ ನಿಮ್ಮಿಂದ ದೂರ ಸರಿಯಲು ಪ್ರಾಯಂಭಿಸಿದರೆ, ನಿಮಗೆ ಟೈಮ್‌ ಕೊಡುವುದನ್ನು ನಿಲ್ಲಿಸಿದರೆ ಖಂಡಿತವಾಗಿಯೂ ನಿಮ್ಮ ಸಂಗಾತಿಗೆ ಪ್ರೀತಿ ಕಡಿಮೆಯಾಗುತ್ತಿದೆ ಎಂದರ್ಥ. ನಿಮ್ಮಿಂದ ದೂರ ಸರಿಯುವ ಸಲುವಾಗಿಯೇ ಈ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ.  ಅದನ್ನು ಬಹಿರಂಗವಾಗಿ ಹೇಳುವುದಿಲ್ಲ.
  • ಪದೇ ಪದೇ ಸುಳ್ಳು ಹೇಳಲು ಪ್ರಾರಂಭಿಸುವುದು, ಜೀವನಶೈಲಿಯಲ್ಲಿನ ಬದಲಾವಣೆಗಳು, ವಿಷಯಗಳನ್ನು ನಿಮ್ಮಿಂದ ಮುಚ್ಚಿಡುವುದು ಇವೆಲ್ಲವೂ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಇಂಟರೆಸ್ಟ್‌ ಕಡಿಮೆಯಾಗಿದೆ ಎಂಬುದರ ಸೂಚನೆಯಾಗಿದೆ.
  • ಸಂಗಾತಿ ಎಲ್ಲದರ ಬಗ್ಗೆಯೂ ಅಸಡ್ಡೆ ತೋರಲು ಪ್ರಾರಂಭಿಸಿದಾ, ನಿಮ್ಮ ಮೇಲಿನ ಕಾಳಜಿ ಕಡಿಮೆಯಾಗುವುದು, ಸ್ವಾರ್ಥಿ ನಡವಳಿಕೆಗಳನ್ನು ಪ್ರದರ್ಶಿಸುವುದು ಈ ಎಲ್ಲಾ ನಡವಳಿಕೆಗಳು ಬ್ರೇಕಪ್‌ನ ಮುನ್ಸೂಚನೆಯಾಗಿದೆ. ಮುಂದೊಂದು ದಿನ ಈ ಬದಲಾವಣೆಗಳು ಬ್ರೇಕಪ್‌ಗೆ ಮೂಲ ಕಾರಣವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

100, 200, 500 ರೂ.ನಲ್ಲಿ ಈ ಮಾರ್ಕ್​ ಇರುವುದೇಕೆ ಗೊತ್ತಾ? ಇಲ್ಲಿದೆ ರಹಸ್ಯ ಮಾಹಿತಿ – Kannada News | RBI Currency Notes: Bleed Marks Guide for Blind Financial Inclusion by Design

ಡಿಜಿಟಲ್​​​ ಯುಗದಲ್ಲೂ ಭಾರತದಲ್ಲಿ ಇಂದಿಗೂ ನೋಟು ಬಳಕೆ ಮಾಡಲಾಗುತ್ತದೆ. ಆದರೆ ಈ ನೋಟುಗಳಲ್ಲಿ ಇರುವ ಕೆಲವೊಂದು ವಿಶೇಷ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲೇಬೇಕು. ಇಂದಿಗೂ ನೀರಿನಂತೆ ಖರ್ಚು ಮಾಡುವ ಅದೆಷ್ಟೋ ಜನರಿಗೆ ನೋಟುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಂದಿನ ದಿನಗಳಲ್ಲಿ ನಾವು ಯುಪಿಐ (UPI) ಮೂಲಕ ಹಣ ಪಾವತಿಸುವುದು ಹೆಚ್ಚಾಗಿರಬಹುದು, ಆದರೆ ನೂರಾರು ವರ್ಷಗಳಿಂದ ಚಲಾವಣೆಯಲ್ಲಿರುವ ನೋಟುಗಳ ವಿನ್ಯಾಸದ ಹಿಂದೆ ಒಂದು ವಿಶೇಷ ಉದ್ದೇಶವಿದೆ. ನೋಟುಗಳ ಅಂಚಿನಲ್ಲಿರುವ ಆ ಸಣ್ಣ ಕಪ್ಪು ಗೆರೆಗಳನ್ನು ‘ಬ್ಲೀಡ್ ಮಾರ್ಕ್ಸ್’ (Bleed Marks) ಎಂದು ಕರೆಯಲಾಗುತ್ತದೆ.

ಬ್ಲೀಡ್ ಮಾರ್ಕ್ಸ್ ಎಂದರೇನು?

ಈ ಗೆರೆಗಳನ್ನು ಮುಖ್ಯವಾಗಿ ದೃಷ್ಟಿಹೀನರಿಗಾಗಿ (Blind People) ವಿನ್ಯಾಸಗೊಳಿಸಲಾಗಿದೆ. ದೃಷ್ಟಿ ದೋಷವುಳ್ಳವರು ನೋಟನ್ನು ಕೈಯಿಂದ ಮುಟ್ಟಿದಾಗ (ಸ್ಪರ್ಶಿಸಿದಾಗ), ಆ ಗೆರೆಗಳ ಸಂಖ್ಯೆಯನ್ನು ಆಧರಿಸಿ ಅದು ಎಷ್ಟು ರೂಪಾಯಿಯ ನೋಟು ಎಂದು ಸುಲಭವಾಗಿ ಗುರುತಿಸಲು ಇದು ಸಹಾಯ ಮಾಡುತ್ತದೆ.

ಯಾವ ನೋಟಿನ ಮೇಲೆ ಎಷ್ಟು ಗೆರೆಗಳಿರುತ್ತವೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರತಿಯೊಂದು ನೋಟಿಗೆ ವಿಭಿನ್ನ ಸಂಖ್ಯೆಯ ಗೆರೆಗಳನ್ನು ನೀಡಿದೆ. 100 ರೂಪಾಯಿ ನೋಟು ರಡೂ ಅಂಚುಗಳಲ್ಲಿ ನಾಲ್ಕು (4) ಗೆರೆಗಳಿರುತ್ತವೆ. ಇವು ಸ್ವಲ್ಪ ಉಬ್ಬಿರುವುದರಿಂದ ಮುಟ್ಟಿದಾಗ ತಕ್ಷಣ ತಿಳಿಯುತ್ತದೆ. 200 ರೂಪಾಯಿ ನೋಟಿನಲ್ಲಿ ಇದರ ಎರಡೂ ಕಡೆ ನಾಲ್ಕು ಗೆರೆಗಳ ಜೊತೆಗೆ ಮಧ್ಯದಲ್ಲಿ ಎರಡು ಸಣ್ಣ ವೃತ್ತಾಕಾರದ (Circles) ಗುರುತುಗಳಿರುತ್ತವೆ. ಇದು 100 ಮತ್ತು 200ರ ನಡುವಿನ ವ್ಯತ್ಯಾಸ ತಿಳಿಯಲು ಸಹಾಯ ಮಾಡುತ್ತದೆ. 500 ರೂಪಾಯಿ ನೋಟಿನಲ್ಲಿ ಈ ನೋಟಿನ ಪ್ರತಿ ಬದಿಯಲ್ಲಿ ಐದು (5) ಗೆರೆಗಳಿರುತ್ತವೆ.

ಇದನ್ನೂ ಓದಿ: ಪುಣ್ಯಕೋಟಿ ಗೋವಿನ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ

ಆರ್ಥಿಕ ಸ್ವತಂತ್ರಕ್ಕಾಗಿ ಈ ವಿನ್ಯಾಸ

ಸಾಮಾನ್ಯ ಜನರಿಗೆ ಈ ಗೆರೆಗಳು ಕೇವಲ ವಿನ್ಯಾಸದಂತೆ ಕಂಡರೂ, ದೃಷ್ಟಿಹೀನರಿಗೆ ಇವು ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತವೆ. ಯಾರ ಸಹಾಯವೂ ಇಲ್ಲದೆ ತಾವು ನೀಡುತ್ತಿರುವ ಅಥವಾ ಪಡೆಯುತ್ತಿರುವ ಹಣ ಸರಿಯಾಗಿದೆಯೇ ಎಂದು ಅವರು ಖಚಿತಪಡಿಸಿಕೊಳ್ಳಬಹುದು. ನೋಟಿನ ಮೌಲ್ಯ ಹೆಚ್ಚಾದಂತೆ ಈ ಗೆರೆಗಳ ಸಂಖ್ಯೆ ಅಥವಾ ವಿನ್ಯಾಸವು ಬದಲಾಗುತ್ತಾ ಹೋಗುತ್ತದೆ.ಕೇವಲ ಗೆರೆಗಳಷ್ಟೇ ಅಲ್ಲದೆ, ನೋಟಿನ ಮೇಲಿರುವ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಮತ್ತು ಅಶೋಕ ಸ್ತಂಭದ ಚಿಹ್ನೆಯನ್ನು ಕೂಡ ಉಬ್ಬು ಮುದ್ರಣದ (Intaglio Printing) ಮೂಲಕ ಮುದ್ರಿಸಲಾಗುತ್ತದೆ, ಇದನ್ನು ಮುಟ್ಟಿ ನೋಡುವುದರಿಂದ ನೋಟು ಅಸಲಿಯೇ ಅಥವಾ ನಕಲಿಯೇ ಎಂದು ಕೂಡ ಪತ್ತೆಹಚ್ಚಬಹುದು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೂಟಿಂಗ್ ಸ್ಪರ್ಧೆ: 57ನೇ ವಯಸ್ಸಿನಲ್ಲಿ ಬೆಳ್ಳಿ ಪದಕ ಗೆದ್ದ ಪರಿಮಳಾ ಜಗ್ಗೇಶ್ – Kannada News | Jaggesh wife Parimala wins Silver medal in shooting competition

ನಟ ಜಗ್ಗೇಶ್ (Jaggesh) ಅವರ ಪತ್ನಿ ಪರಿಮಳಾ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರಿಗೆ 57 ವರ್ಷ ವಯಸ್ಸು. ‘ವಯಸ್ಸು ಕೇವಲ ಮನುಷ್ಯನ ಮನಸ್ಸಿನ ಮಿತಿಯಷ್ಟೇ ಹೊರತು ಸಾಧನೆಯ ಹಾದಿಗಲ್ಲ’ ಎಂಬುದನ್ನು ಅವರೀಗ ಸಾಬೀತುಪಡಿಸಿದ್ದಾರೆ ಆಹಾರ ತಜ್ಞೆಯೂ ಆಗಿರುವ ಪರಿಮಳಾ ಜಗ್ಗೇಶ್ (Parimala Jaggesh) ಅವರು ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇತ್ತೀಚೆಗೆ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ ನಡೆಯಿತು. ಅದರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ (KSRA) ವತಿಯಿಂದ ಬೆಂಗಳೂರಿನ ‘ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ (SAI) ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘3ನೇ ನಾಗರಾಜ ರಾವ್ ಜಗದಾಳೆ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್-2026’ರಲ್ಲಿ ಪರಿಮಳಾ ಜಗ್ಗೇಶ್ ಅವರು ಪಾಲ್ಗೊಂಡಿದ್ದರು. 10 ಮೀಟರ್ ಏರ್ ಪಿಸ್ತೂಲ್ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಅವರು ಸ್ಪರ್ಧಿಸಿದರು. ಮಾಸ್ಟರ್ ವಿಮೆನ್ ಇಂಡಿವಿಜುವಲ್ ವಿಭಾಗದಲ್ಲಿ 342-4x ಸ್ಕೋರ್ ಮಾಡುವ ಮೂಲಕ ಬೆಳ್ಳಿ ಪದಕ ಗೆದ್ದರು.

1994ರಿಂದಲೂ ಮಧುಮೇಹದಿಂದ (Type 2 Diabetes) ಪರಿಮಳಾ ಅವರು ಬಳಲುತ್ತಿದ್ದಾರೆ. ಅವರಿಗೆ ಕ್ರೀಡಾ ಕ್ಷೇತ್ರಕ್ಕೆ ಕಾಲಿಡುವುದು ಸುಲಭದ ಮಾತಾಗಿರಲಿಲ್ಲ. ಶೂಟಿಂಗ್ ಎನ್ನುವುದು ಏಕಾಗ್ರತೆ ಹಾಗೂ ದೈಹಿಕ ಸ್ಥಿರತೆ ಬೇಡುವ ಕ್ರೀಡೆ. ದೇಹದಲ್ಲಿ ಸಕ್ಕರೆ ಪ್ರಮಾಣ ಏರುಪೇರಾದಾಗ ಕೈಗಳು ನಡುಗುವ ಸಾಧ್ಯತೆ ಇರುತ್ತದೆ. ಇಂತಹ ದೈಹಿಕ ಸವಾಲನ್ನು ಗೆಲ್ಲಲು ಅವರು ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ ‘ರಿಕವರಿ ಪ್ಲಾನ್’ ರೂಪಿಸಿಕೊಂಡು ಅಭ್ಯಾಸ ಮಾಡಿದ್ದರು.

ಇದನ್ನೂ ಓದಿ: ಹಳೆಯ ದಿನಗಳ ನೆನೆಯುತ್ತಾ ಪತ್ನಿಯೊಟ್ಟಿಗೆ ರಾಯರ ದರ್ಶನಕ್ಕೆ ತೆರಳಿದ ಜಗ್ಗೇಶ್

ಪರಿಮಳಾ ಜಗ್ಗೇಶ್ ಅವರು ಈ ಸ್ಪರ್ಧೆಯಲ್ಲಿ ಗೆಲ್ಲಲು ಶಿಸ್ತಿನಿಂದ ತರಬೇತಿ ಪಡೆದುಕೊಂಡಿದ್ದರು. ಗೋಲ್ಡನ್ ಏಸ್ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಕೋಚ್ ಸಂತೋಷ್ ಬಿ.ಎನ್. ಅವರಿಂದ ಕೇವಲ ಕೆಲವೇ ತಿಂಗಳುಗಳ ಹಿಂದೆ ತರಬೇತಿ ಆರಂಭಿಸಿದ್ದರು. ಒಬ್ಬ ಉದ್ಯಮಿಯಾಗಿ ಸಂಸ್ಥೆಯ ಜವಾಬ್ದಾರಿ ಮತ್ತು ಕುಟುಂಬದ ನಿರ್ವಹಣೆಯ ನಡುವೆಯೂ, ಪ್ರತಿದಿನ ಬೆಳಗ್ಗೆ 4 ಗಂಟೆಗೆ ಎದ್ದು ಶೂಟಿಂಗ್ ರೇಂಜ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಅವರ ಈ ನಿರಂತರ ಪರಿಶ್ರಮದಿಂದ ಬೆಳ್ಳಿ ಪದಕ ಗೆಲ್ಲುವಂತಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ

ಅರುಣ್ ಸಾಗರ್ ಪ್ರಸಾದ್, ಸಾಯಿ ಕುಮಾರ್ (Sai Kumar) ಇನ್ನೂ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ‘ಘಾರ್ಗ’ ಸಿನಿಮಾದ ಟ್ರೈಲರ್ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ‘ಜೋಗಿ’ ಸಿನಿಮಾದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಅವರ ಪುತ್ರನೇ ಸಿನಿಮಾದ ನಾಯಕ. ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡಿನ ರೀಮಿಕ್ಸ್ ವರ್ಷನ್ ಬಳಸಿದ್ದು ಸಖತ್ ಚರ್ಚೆ ಆಗಿತ್ತು. ಇದೀಗ ಸಿನಿಮಾದ ನಿರ್ದೇಶಕ ಎಂ ಶಶಿಧರ್ ಈ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version