Headlines

ಸ್ವಚ್ಛತಾ ಕಾರ್ಮಿಕೆ ಪದ್ಮಮ್ಮನ ಸನ್ಮಾನಿಸಿದ ರಜನೀಕಾಂತ್: ಕಾರಣ? – Kannada News | Rajinikanth felicitate A Sanitation Worker With A Gold Chain

ಮೇ 1ರಂದು ಅಥವಾ ಯಾವುದಾದರೂ ವಿಶೇಷ ದಿನದ ಹೊರತಾಗಿ ಸ್ವಚ್ಛತಾ ಕಾರ್ಮಿಕರನ್ನು ನೆನಪಿಸಿಕೊಳ್ಳುವುದೇ ಇಲ್ಲ. ಸಿನಿಮಾ ಸೆಲೆಬ್ರಿಟಿಗಳು ತಮಗೆ ಪ್ರಚಾರ ಬೇಕಾದಾಗ ಅಥವಾ ತಮ್ಮ ಸಿನಿಮಾಕ್ಕೆ ಪ್ರಚಾರ ಬೇಕಾದಾಗ ಮಾತ್ರ ಸ್ವಚ್ಛತಾ ಕಾರ್ಮಿಕರನ್ನು ಹುಡುಕಿಕೊಂಡು ಹೋಗಿ ಅವರಿಗೆ ಸನ್ಮಾನ ಮಾಡಿ ಫೋಟೊ ತೆಗೆಸಿಕೊಳ್ಳುತ್ತಾರೆ. ಇದೀಗ ಸೂಪರ್ ಸ್ಟಾರ್ ರಜನೀಕಾಂತ್ ಅವರು ಸ್ವಚ್ಛತಾ ಮಹಿಳಾ ಕಾರ್ಮಿಕರಾಗಿರುವ ಪದ್ಮ ಎಂಬುವರನ್ನು ಮನೆಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಆದರೆ ಇದು ಪ್ರಚಾರಕ್ಕಾಗಿ ಮಾಡಿದ್ದಲ್ಲ, ಸನ್ಮಾನದ ಹಿಂದೆ ಕಾರಣವಿದೆ. ಚೆನ್ನೈನಲ್ಲಿ ಸ್ವಚ್ಛತಾ ಕಾರ್ಮಿಕೆಯಾಗಿ…

Read More

WPL 2026: ಗುಜರಾತ್ ಕನಸು ಭಗ್ನ; ಸತತ 4ನೇ ಬಾರಿಗೆ ಫೈನಲ್​ಗೇರಿದ ಡೆಲ್ಲಿ – Kannada News | WPL 2026 Eliminator: Delhi Capitals Beat Gujarat Giants, Secure Final Berth

2026 ರ ಮಹಿಳಾ ಪ್ರೀಮಿಯರ್ ಲೀಗ್​ನ ಎಲಿಮಿನೇಟರ್ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆಯಿತು. ಎರಡೂ ತಂಡಗಳು ಇದುವರೆಗೆ ಪ್ರಶಸ್ತಿ ಗೆಲ್ಲದ ಕಾರಣ ಯಾವ ತಂಡ ಫೈನಲ್​ಗೇರಲಿದೆ ಎಂಬುದು ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಡೆಲ್ಲಿ ತಂಡ ಗುಜರಾತ್​ ತಂಡದ ಮೊದಲ ಫೈನಲ್ ಕನಸನ್ನು ಭಗ್ನಗೊಳಿಸಿ ಸತತ ನಾಲ್ಕನೇ ಬಾರಿಗೆ ಫೈನಲ್​ಗೆ ಟಿಕೆಟ್ ಪಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 167 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ…

Read More

ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ – ಇಂಡಿಗೋ ಡಿಕ್ಕಿ: ತಪ್ಪಿದ ಭಾರೀ ಅನಾಹುತ – Kannada News | CSMIA Incident: Air India and IndiGo Wing Tips Collide, Flights Grounded

ಮುಂಬೈ, ಫೆ.3: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳೆರಡು ಡಿಕ್ಕಿ ಹೊಡೆದುಕೊಂಡಿದೆ. ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ (AI 2732) ಮತ್ತು ಇಂಡಿಗೋ (6E 791) ವಿಮಾನಗಳ ನಡುವೆ ಡಿಕ್ಕಿ ಹೊಡೆದುಕೊಂಡಿದೆ. ಕೊಯಮತ್ತೂರಿಗೆ ಹೊರಡಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನ ಟ್ಯಾಕ್ಸಿ ಮಾಡುತ್ತಿದ್ದಾಗ, ಹೈದರಾಬಾದ್‌ನಿಂದ ಬಂದಿಳಿದ ಇಂಡಿಗೋ ವಿಮಾನ ಅದೇ ಹಾದಿಯಲ್ಲಿ ಬರುತ್ತಿತ್ತು. ಈ ಚಲನೆಯ ಸಮಯದಲ್ಲಿ, ಎರಡೂ ವಿಮಾನಗಳ ಬಲಪಕ್ಕದ ರೆಕ್ಕೆಗಳ ತುದಿಗಳು (Wing tips) ಪರಸ್ಪರ ಸ್ಪರ್ಶಿಸಿವೆ….

Read More

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್​ಗೇರಿದ ಇಂಗ್ಲೆಂಡ್‌ – Kannada News | U19 World Cup Semi Final: England Beats Australia by 27 Runs to Reach Final

ಅಂಡರ್ 19 ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸೂಪರ್ ಸಿಕ್ಸ್ ಹಂತ ಮುಗಿದಿದ್ದು, ಸೆಮಿಫೈನಲ್‌ ಸುತ್ತು ಕೂಡ ಆರಂಭವಾಗಿದೆ. ಅದರಂತೆ ಇಂದು ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಇಂಗ್ಲೆಂಡ್‌ ತಂಡ 27 ರನ್​ಗಳೊಂದಿಗೆ ಗೆದ್ದುಕೊಳ್ಳುವ ಮೂಲಕ ಫೈನಲ್​ಗೇರಿದೆ. ಇದರ ಜೊತೆಗೆ ಇಂಗ್ಲೆಂಡ್‌ 28 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸುವ ಅವಕಾಶವನ್ನು ಪಡೆದುಕೊಂಡಿದೆ. ಇತ್ತ ಸತತ ಎರಡನೇ ಪ್ರಶಸ್ತಿಯನ್ನು ಗೆಲ್ಲುವ ಆಸ್ಟ್ರೇಲಿಯಾದ ಕನಸ ಛಿದ್ರಗೊಂಡಿದೆ….

Read More

2026 ರ ಐಪಿಎಲ್​ಗೆ ಜೆರ್ಸಿ ಬದಲಿಸಿದ ಆರ್​ಸಿಬಿ; ಹೊಸ ಜೆರ್ಸಿಯ ವಿಡಿಯೋ ನೋಡಿ – Kannada News | RCB New IPL Jersey: Star for First Trophy, Nothing Sponsor Revealed

ಟಿ20 ವಿಶ್ವಕಪ್ ಮುಗಿದ ಕೂಡಲೇ 2026 ರ ಐಪಿಎಲ್ ಕೂಡ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಆರ್​ಸಿಬಿ ಈ ಆವೃತ್ತಿಯಲ್ಲೂ ತನ್ನ ಟ್ರೋಫಿ ಉಳಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಆದರೆ ಆರ್​ಸಿಬಿ ತನ್ನ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ಇಲ್ಲಿಯವರೆಗೆ ಖಚಿತವಾಗಿಲ್ಲ. ಒಂದೆಡೆ ಕೆಎಸ್​ಸಿಎ, ಆರ್​ಸಿಬಿ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಆರ್​ಸಿಬಿ ಮ್ಯಾನೇಜ್​ಮೆಂಟ್ ಮಾತ್ರ ತನ್ನ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ನೋಡುತ್ತಿದೆ. ಇದೆಲ್ಲದರ ನಡುವೆ ಆರ್​ಸಿಬಿ ಫ್ರಾಂಚೈಸಿ ಮುಂಬರುವ ಐಪಿಎಲ್​ಗೆ ತನ್ನ ತಂಡದ ನೂತನ…

Read More

ಹೈ ವೋಲ್ಟೇಜ್ ತಂತಿ ತಗುಲಿ ಯುವಕ ಸಾವು; ಇಲ್ಲಿದೆ ವಿಡಿಯೋ – Kannada News | Punjab moga young man died after touching high voltage wires

ಮೋಗಾ, ಫೆಬ್ರವರಿ 3: ಪಂಜಾಬ್​ನ ಮೋಗಾ ಜಿಲ್ಲೆಯ ಬೂತಾರ್ ಗ್ರಾಮದಲ್ಲಿ ಹೈ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಯುವಕ ಮೃತಪಟ್ಟಿದ್ದಾನೆ. ಸತ್ನಮ್ ಸಿಂಗ್ ಎಂಬುವವರ ಮನೆಯಲ್ಲಿ ನಿರ್ಮಾಣ ಹಂತದ ಕೆಲಸದ ಸಮಯದಲ್ಲಿ, ಯುವಕನೊಬ್ಬ ಪ್ಲಂಬಿಂಗ್ ಕೆಲಸ ಮಾಡಲು ಟೆರೇಸ್ ಮೇಲೆ ಹತ್ತಿದ್ದ. ಆತ ಆಗ ಆಕಸ್ಮಿಕವಾಗಿ ಕೆಳಗೆ ನೇತಾಡುತ್ತಿದ್ದ ಹೈ-ವೋಲ್ಟೇಜ್ ತಂತಿಗಳು ತಾಗಿ ಕೆಳಗೆ ಬಿದ್ದ. ಮೋಗಾ ಜಿಲ್ಲೆಯ ಬೂತಾರ್ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾಗ 11,000 ಕೆವಿ ಹೈಟೆನ್ಷನ್ ಲೈನ್‌ಗೆ ವಿದ್ಯುತ್ ಸ್ಪರ್ಶಿಸಿ 22 ವರ್ಷದ ಯುವಕ…

Read More

ಬೆಂಗಳೂರಿನ ಈ ಊರಿನಲ್ಲಿ ನಡೆಯುತ್ತೇ ಅಪರೂಪದ ವಜ್ರಾಭರಣಗಳ ಜಾತ್ರೆ – Kannada News | Kempegowda’s Heritage: Devanahalli’s Grand Kote Venugopala Swamy Festival and Rare VajrabharaNa

ಬೆಂಗಳೂರು, ಫೆ.3: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಕೋಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಅದ್ದೂರಿ ರಥೋತ್ಸವ (Devanahalli Ratha Utsav) ಮತ್ತು ಅಪರೂಪದ ವಜ್ರಾಭರಣಗಳ ಜಾತ್ರೆ. ದೇವನಹಳ್ಳಿ ಎಂದರೆ ಕೇವಲ ವಿಮಾನ ನಿಲ್ದಾಣ ಮಾತ್ರವಲ್ಲ, ಶತಮಾನಗಳ ಇತಿಹಾಸವಿರುವ ರಾಜ-ಮಹಾರಾಜರ ಕಾಲದ ವೈಭವಕ್ಕೂ ಸಾಕ್ಷಿ. ನಾಡಪ್ರಭು ಕೆಂಪೇಗೌಡರ ಪೂರ್ವಿಕರು ಈ ದೇವಾಲಯಕ್ಕೆ ಬೆಲೆಕಟ್ಟಲಾಗದ ವಜ್ರಾಭರಣಗಳನ್ನು ಕಾಣಿಕೆಯಾಗಿ ನೀಡಿದ್ದರು. ರಾಜರ ಕಾಲ ಮುಗಿದ ನಂತರ ಈ ಆಭರಣಗಳು ಸರ್ಕಾರದ ಖಜಾನೆ ಸೇರಿವೆ. ವರ್ಷಕ್ಕೊಮ್ಮೆ ನಡೆಯುವ ಈ…

Read More

SSLC ಫಲಿತಾಂಶ ಸುಧಾರಣೆಗೆ ಹೊಸ ಕ್ರಮ: ನಿತ್ಯ 2 ಗಂಟೆ ಮೊಬೈಲ್, ಟಿವಿ ಆಫ್ ಮಾಡಿಸುವಂತೆ ಟಾಸ್ಕ್ – Kannada News | Karnataka School education Task To Teachers For switch off Mobile And TV In Village For SSLC Examinations

ಬೆಂಗಳೂರು, (ಫೆಬ್ರವರಿ 03): ಎಸ್ಸೆಸ್ಸೆಲ್ಸಿ ಪರೀಕ್ಷಾ ಪಲಿತಾಂಶದಲ್ಲಿ  (SSLC Result) ಸುಧಾರಣೆ ತರುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಕಾರ‍್ಯಕ್ರಮಗಳನ್ನು ಹಮ್ಮಿಳ್ಳುತ್ತಿದೆ. ಈ ಮೂಲಕ ಈ ಬಾರಿ ಎಸ್​​ಎಸ್​​ಎಲ್​ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಸಂಬಂಧ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಾನಾ ಟಾಸ್ಕ್​​​ಗಳನ್ನು ನೀಡುತ್ತಿದೆ. ಇದೀಗ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆಯೇ ಹೊಸದಾಗಿ ಮತ್ತೊಂದು ಟಾಸ್ಟ್​ ನೀಡಿದ್ದು, ಪ್ರತಿ ದಿನ ಸಂಜೆ 7 ಗಂಟೆಯಿಂದ 9ರವರೆಗೆ ಎರಡು ಗಂಟೆ ಮೊಬೈಲ್ ಮತ್ತು ಟಿವಿ…

Read More

ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ – Kannada News | Bengaluru’s Hindi Imposition Debate: Social Media Fuels North South Language Conflict

ಸಾಮಾಜಿಕ ಜಾಲತಾಣದಲ್ಲಿ ಭಾಷಾವಾರು (India language) ಗಲಾಟೆ ನಡೆಯತ್ತ ಇರುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಡುವೆ ಭಾಷೆಯ ವಿಷಯವಾಗಿ ಭಾರೀ ಜಗಳಗಳು ನಡೆದಿದೆ. ಬೆಂಗಳೂರಿನಲ್ಲೂ ಕೂಡ ಹಿಂದಿ ಏರಿಕೆ ಆಗುತ್ತಿದೆ ಎಂಬ ಕೂಗು ಕೂಡ ಕೇಳಿ ಬರುತ್ತಿದೆ. ಇದರ ನಡುವೆ ಎಕ್ಸ್​ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್​​ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಇದು ದಕ್ಷಿಣ ಹಾಗೂ ಉತ್ತರ ಭಾರತ ನಡುವಿನ ಭಾಷೆ ವಿಚಾರವಾಗಿ ಹೊಸ ವಿವಾದವನ್ನು ಹುಟ್ಟು ಹಾಕಿದೆ. ಈ ಪೋಸ್ಟ್​​ ಸಾಮಾಜಿಕ ಜಾಲತಾಣಗಳಲ್ಲಿ…

Read More

ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿ, ಕಳ್ಳತನ; ಭಾರತದಿಂದ ಖಂಡನೆ – Kannada News | Mahatma Gandhi statue cut stolen in Australia India condemns

ನವದೆಹಲಿ, ಫೆಬ್ರವರಿ 3: ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕತ್ತರಿಸಿ ಕದಿಯಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಭಾರತ ಒತ್ತಾಯಿಸಿದೆ. ಮೆಲ್ಬೋರ್ನ್‌ನ ರೌವಿಲ್ಲೆಯಲ್ಲಿರುವ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್‌ನಲ್ಲಿರುವ ಮಹಾತ್ಮ ಗಾಂಧಿಯವರ (Mahatma Gandhi) ಕಂಚಿನ ಪ್ರತಿಮೆಯನ್ನು ಕದಿಯಲಾಗಿದೆ. ಈ ಘಟನೆಗೆ ಭಾರತದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತವು ಈ ವಿಷಯವನ್ನು ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಚರ್ಚಿಸಿದೆ. ಪ್ರತಿಮೆಯನ್ನು ಕಳ್ಳತನ ಮಾಡಿದವರನ್ನು ತಕ್ಷಣ ಹುಡುಕಲು ಒತ್ತಾಯಿಸಲಾಗಿದೆ. ದಿ ಆಸ್ಟ್ರೇಲಿಯಾ ಟುಡೇ ಪ್ರಕಾರ, ಈ ಪ್ರತಿಮೆಯನ್ನು ನವದೆಹಲಿಯ…

Read More