ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ – Kannada News | Gilli Nata Singer Mangli Shivarajkumar and others attend Kanakotsava

ಅದ್ದೂರಿಯಾಗಿ ‘ಕನಕೋತ್ಸವ’ (Kanakotsava) ನಡೆಯಿತು. ಕನಕಪುರದಲ್ಲಿ ನಡೆದ ಈ ಉತ್ಸವದ ವೇದಿಕೆಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ, ಗಾಯಕಿ ಮಂಗ್ಲಿ, ಗಾಯಕ ವಿಜಯ್ ಪ್ರಕಾಶ್ ಮುಂತಾದವರು ಕಾಣಿಸಿಕೊಂಡರು. ಅನುಶ್ರೀ ಅವರ ಕಾಲಿಗೆ ಬಿದ್ದ ಗಿಲ್ಲಿ, ‘ಇವರೇ ನನ್ನ ಗಾಡ್ ಮದರ್’ ಎಂದು ಹೇಳಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಎದುರಲ್ಲಿ ಗಿಲ್ಲಿ ನಟ (Gilli Nata) ಅವರು ಭರ್ಜರಿ ಡೈಲಾಗ್ ಹೇಳಿ ರಂಜಿಸಿದರು. ಅನಾರೋಗ್ಯ ಪೀಡಿತ ಮಗುವಿನ ಜೊತೆ ಅವರು ಆ ವೇದಿಕೆಯಲ್ಲೇ ವಿಡಿಯೋ ಕಾಲ್ ಮೂಲಕ ಮಾತನಾಡಿದರು. ಆ ಕ್ಷಣ ಬಹಳ ಎಮೋಷನಲ್ ಆಗಿತ್ತು. ವಿಜಯ್ ಪ್ರಕಾಶ್ ಅವರ ಹಾಡುಗಳನ್ನು ಕೇಳಿ ಜನರು ಎಂಜಾಯ್ ಮಾಡಿದರು. ತೆಲುಗು ಬೆಡಗಿ ಮಂಗ್ಲಿ (Singer Mangli) ಅವರು ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..’ ಗೀತೆಯನ್ನು ಹಾಡಿ ವೇದಿಕೆಯ ಮೆರುಗು ಹೆಚ್ಚಿಸಿದರು. ರಚಿತಾ ರಾಮ್, ಶಿವರಾಜ್​ಕುಮಾರ್, ಮೇಘಾ ಶೆಟ್ಟಿ ಮುಂತಾದ ಸೆಲೆಬ್ರಿಟಿಗಳು ಕೂಡ ಕನಕೋತ್ಸವದಲ್ಲಿ ಭಾಗಿಯಾಗಿ ಸಿಕ್ಕಾಪಟ್ಟೆ ಮನರಂಜನೆ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಹಿಳೆಯ ಮಾಂಗಲ್ಯ ಸರ ಕದ್ದು ಎಸ್ಕೇಪ್​! – Kannada News | Bengaluru Chain Snatching: Mangalsutra Stolen After Diverting Woman’s Attention

ನೆಲಮಂಗಲ, ಫೆಬ್ಬರವರಿ 02: ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ನಿರಂತರವಾಗಿ ಹೆಚ್ಚಾಗುತ್ತಿದೆ. ಮಾದನಾಯಕನಹಳ್ಳಿಯ ದಾಸನಪುರದಲ್ಲಿ ಇಂತಹದೇ ಒಂದು ಘಟನೆ ನಡೆದಿದ್ದು, ಟೀ ಮತ್ತು ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದ ವ್ಯಕ್ತಿಯೋರ್ವ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಹಳದಿ ಬೋರ್ಡ್​ ಕಾರಿನಲ್ಲಿ ಇಬ್ಬರು ಬಂದಿದ್ದು, ಆ ಪೈಕಿ ಒಬ್ಬ ಕಾರಿನಿಂದ ಇಳಿದು ಅಂಗಡಿಗೆ ಬಂದು ಟೀ ಮತ್ತು ಸಿಗರೇಟ್ ಬೇಕು ಎಂದು ಕೇಳಿದ್ದಾನೆ. ನಂತರ ಫೋನ್ ಪೇ ಮೂಲಕ ಹಣ ಪಾವತಿಸುವುದಾಗಿ ಹೇಳಿ, ಕ್ಯೂಆರ್​​ ಕೋಡ್​​  ಕೇಳಿದ್ದಾನೆ. ಅಂಗಡಿಯಲ್ಲಿದ್ದ ನಾಗರತ್ನಮ್ಮ ಅವರು ತಮ್ಮ ಮೊಬೈಲ್‌ನಲ್ಲಿ ಸ್ಕ್ಯಾನರ್ ತೆಗೆಯಲು ಸಿದ್ಧರಾದಾಗ, ಆತ ಅವರ ಗಮನವನ್ನು ಬೇರೆಡೆ ಸೆಳೆದು ಏಕಾಏಕಿ ಕತ್ತಿಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಓಡಿಹೋಗಿದ್ದಾನೆ. ಸಿಸಿಟಿವಿ ಕ್ಯಾಮರಾದಲ್ಲಿ ಘಟನೆ ಸಂಪೂರ್ಣವಾಗಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Chanakya Niti: ಸ್ನೇಹಿತರು, ಸಂಬಂಧಿಕರಿಗೆ ಹಣ ಸಾಲ ನೀಡುವ ಮುನ್ನ ನೀವು ಈ ಪ್ರಶ್ನೆಗಳನ್ನು ಕೇಳಲೇಬೇಕು – Kannada News | Chanakya Niti: Chanakya says you should ask these questions before lending money to friends and relatives

ಇಂದಿನ ಕಾಲದಲ್ಲಿ, ಹಣ ಸಂಪಾದಿಸುವುದು ಎಷ್ಟು ಕಷ್ಟಕರವೋ, ಅದನ್ನು ಉಳಿಸುವುದು ಮತ್ತು ಬುದ್ಧಿವಂತಿಕೆಯಿಂದ ಬಳಸುವುದು ಇನ್ನೂ ಹೆಚ್ಚು ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಣದ (money) ವಿಚಾರವಾಗಿ ತುಂಬಾನೇ ಜಾಗರೂಕರಾಗಿರಬೇಕು. ಅದರಲ್ಲೂ ನಿಮ್ಮ ಫ್ರೆಂಡ್ಸ್‌ ಮತ್ತು ಸಂಬಂಧಿಕರು ಆರ್ಥಿಕ ಸಹಾಯವನ್ನು ಕೇಳಿದಾಗ, ನೀವು ವೃತ್ತಿಪರವಾಗಿ ನಡೆದುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇವರು ತಮ್ಮ ನೀತಿಶಾಸ್ತ್ರದಲ್ಲಿ ಹಣಕಾಸಿನ ವಹಿವಾಟುಗಳ ಕುರಿತು ಸ್ಪಷ್ಟ ಮತ್ತು ಕಠಿಣ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಅದರಲ್ಲಿ ಹತ್ತಿರದವರಿಗೆ ಸಾಲ ನೀಡುವ ಮೊದಲು ಏನೆಲ್ಲಾ ಪ್ರಶ್ನೆ ಕೇಳಬೇಕು ಎಂಬುದು ಕೂಡ ಒಂದು.  ಈ ಪ್ರಶ್ನೆಗಳನ್ನು ಕೇಳುವುದರಿಂದ ನಿಮ್ಮ ಹಣ ಮಾತ್ರವಲ್ಲದೆ ಸಂಬಂಧವೂ ಸುರಕ್ಷಿತವಾಗಿರುತ್ತದೆ. ಹಾಗಿದ್ರೆ ಆ ಪ್ರಶ್ನೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಹತ್ತಿರದವರಿಗೆ ಸಾಲ ನೀಡುವ ಮುನ್ನ ನೀವು ಕೇಳಬೇಕಾದ ಪ್ರಶ್ನೆಗಳಿವು:

ಹಣದ ಅವಶ್ಯಕತೆಗೆ ನಿಜವಾದ ಕಾರಣವೇನು? (ಸಾಲದ ಉದ್ದೇಶ)

ಸಂಬಂಧಿಕರು ನಿಮ್ಮಿಂದ ಹಣ ಕೇಳಿದರೆ, ನೀವು ಮೊದಲು ಕೇಳಬೇಕಾದ ಪ್ರಶ್ನೆ ಸಾಲ ಕೇಳಿದ ಉದ್ದೇಶ ಏನು ಎಂಬುದು. ಅನಾರೋಗ್ಯ, ಶಿಕ್ಷಣ ಬಹಳ ಮುಖ್ಯವಾದ ಕಾರಣಕ್ಕಾಗಿ ಹಣದ ಅಗತ್ಯವಿದ್ದಾಗ ಸಾಲ ಕೇಳಿದರೆ, ಅಂತಹ ಸಂದರ್ಭದಲ್ಲಿ ಸಹಾಯ ಮಾಡುವುದು ಧರ್ಮ ಎಂದು ಚಾಣಕ್ಯ ಹೇಳುತ್ತಾರೆ. ಅದೇ ಯಾರಾದರೂ ತಮ್ಮ ಸ್ವಂತ ಸೌಕರ್ಯಗಳಿಗಾಗಿ, ದುಂದುವೆಚ್ಚ, ಶೋಕಿಗಾಗಿ ಹಣವನ್ನು ಸಾಲ ಕೇಳಿದರೆ, ಅಂತಹವರಿಗೆ ಹಣ ನೀಡುವ ಮುನ್ನ ಜಾಗರೂಕರಾಗಿರಬೇಕು. ಇಂತಹ ವ್ಯಕ್ತಿಗಳಿಗೆ  ಹಣವನ್ನು ಸಾಲವಾಗಿ ನೀಡುವುದು ನಿಮ್ಮ ಸ್ವಂತ ಹಣವನ್ನು ಸುಟ್ಟುಹಾಕಿದಂತೆ ಎಂದು ಚಾಣಕ್ಯರು ಹೇಳಿದ್ದಾರೆ.

ಹಣ ಯಾವಾಗ ವಾಪಾಸ್‌ ನೀಡುತ್ತೀರಿ?

ಇದು ಸ್ವಲ್ಪ ಕಠಿಣವಾಗಿ ಕಂಡರೂ ನೀವು ಈ ಪ್ರಶ್ನೆಯನ್ನು ಕೇಳಲೇಬೇಕು. ಯಾರಿಗಾದರೂ ಸಾಲ ನೀಡುತ್ತೀರಿ ಎಂದಾದರೆ ಅವರು ಯಾವ ಮೂಲದಿಂದ ಮತ್ತು ಯಾವಾಗ ಹಣವನ್ನು ಹಿಂದಿರುಗಿಸುತ್ತಾರೆ ಎಂಬ ಪ್ರಶ್ನೆಯನ್ನು ಕೇಳಬೇಕು. ಸಾಲ ಮರುಪಾವತಿಗೆ ಗಡುವನ್ನು ನಿಗದಿಪಡಿಸಲೇಬೇಕು.   ಸ್ಪಷ್ಟ ಯೋಜನೆ ಇಲ್ಲದೆ ಸಾಲ ನೀಡುವುದರಿಂದ ಭವಿಷ್ಯದಲ್ಲಿ ನಿಮಗೆ ತೊಂದರೆ ಉಂಟಾಗಬಹುದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ವಹಿವಾಟನ್ನು ನಾವು ಲಿಖಿತವಾಗಿ ದಾಖಲಿಸಬಹುದೇ?

ಇಂದಿನ ಕಾಲದಲ್ಲಿ ಯಾರನ್ನೂ ಸಹ ಕುರುಡಾಗಿ ನಂಬಬಾರದು. ಅದರಲ್ಲೂ ಸಾಲ ಕೊಡುವ ಮುನ್ನ ಲಿಖಿತ ಪುರಾವೆ ಬಹಳ ಮುಖ್ಯ . ಅದು ನಿಮ್ಮ ಸ್ವಂತ ಸಹೋದರನಾಗಿದ್ದರೂ ಸಹ, ದೊಡ್ಡ ವಹಿವಾಟುಗಳು ಯಾವಾಗಲೂ ಲಿಖಿತ ದಾಖಲೆಗಳೊಂದಿಗೆ ಇರಲೇಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಇದು ನಿಮಗಾಗುವ ಮೋಸವನ್ನು ತಪ್ಪಿಸಲು, ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು  ರಕ್ಷಿಸಲು ಇದು ತುಂಬಾನೇ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಬಹುದು… ಎಚ್ಚರ!

 ಇದು ನನ್ನ ಸ್ವಂತ ಆರ್ಥಿಕ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಈ ಪ್ರಶ್ನೆಯನ್ನು ನಿಮ್ಮನ್ನು ನೀವೇ ಕೇಳಿಕೊಳ್ಳಬೇಕು. ನಿಮ್ಮ ಬಳಿ ಸಾಕಷ್ಟು ಹಣವಿದ್ದರೆ ಮಾತ್ರ ಇತರರಿಗೆ ಸಾಕ ನೀಡಿ. ನಿಮ್ಮ ತುರ್ತು ನಿಧಿಯನ್ನು ಎಂದಿಗೂ ಇತರರಿಗೆ ಸಾಲವಾಗಿ ನೀಡಬಾರದು ಎಂದು ಚಾಣಕ್ಯ ಹೇಳುತ್ತಾರೆ. ನೀವು ನಿಮ್ಮ ಅಗತ್ಯಕ್ಕಾಗಿ ಕೂಡಿಟ್ಟ ಹಣವನ್ನು ಇನ್ನೊಬ್ಬರಿಗೆ ನೀಡುವುದು ದೊಡ್ಡ ಮೂರ್ಖತನ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತತ್​ಕ್ಷಣದ ಪರಿಹಾರ ಮತ್ತು ಭವಿಷ್ಯದ ಪ್ರಗತಿ ಮಧ್ಯೆ ನೀತಿ ಸೇತುವಾಗಿರುವ ಬಜೆಟ್ 2026 – Kannada News | Union Budget 2026: Driving India’s Manufacturing, AI & Economic Future

ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತಪಡಿಸಿದ ಕೇಂದ್ರ ಬಜೆಟ್ 2026 (Union Budget) ಅನ್ನು ಭಾರತದ ಹಿಂದಿನ ಸಾಧನೆಗಳು ಹಾಗೂ ಭವಿಷ್ಯದ ಆಶೋತ್ತರಗಳ ನಡುವೆ ಕೊಂಡಿಯಾಗುವ ‘ನೀತಿ ಸೇತು’ (Policy Bridge) ಎಂದು ಬಣ್ಣಿಸಲಾಗುತ್ತಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಎಐ ಸನ್ನದ್ಧತೆ (AI preparedness) ಮೇಲೆ ಗಮನ ಹರಿಸುತ್ತಾ ಪ್ರಗತಿಗೆ ಪುಷ್ಟಿ ಕೊಡುವ ಈ ಬಜೆಟ್, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುವ ಆರ್ಥಿಕತೆ ಎನ್ನುವ ಸ್ಥಾನ ಭಾರತಕ್ಕೆ ಮುಂದುವರಿಯುವಂತೆ ಮಾಡುತ್ತದೆ. ಈ ಬಜೆಟ್​ನಲ್ಲಿ ನೀತಿ ಮುಂದುವರಿಕೆ (ಶೇ. 60-70) ಹೆಚ್ಚಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳಲು ವಿನೂತನವೆನಿಸುವ ನಿರ್ದಿಷ್ಟ ಸ್ಕೀಮ್​ಗಳನ್ನು ತರುವ ಮೂಲಕ ಕೋವಿಡ್ ನಂತರದ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಈ ಬಜೆಟ್ ಅನುವು ಮಾಡಿಕೊಡುತ್ತದೆ.

ಸಾಬೀತಾದ ನೀತಿಗಳ ಮುಂದುವರಿಕೆ ಮತ್ತು ಉನ್ನತೀಕರಣ

2026ರ ಬಜೆಟ್ನಲ್ಲಿ ಹೆಚ್ಚಿನ ಭಾಗವು ಹಿಂದಿನ ವರ್ಷಗಳಲ್ಲಿ ಹಾಕಲಾದ ರಚನಾತ್ಮಕ ತಳಹದಿಗಳ ಮೇಲೆ ನಿರ್ಮಿತವಾಗಿದೆ. ವಿತ್ತೀಯ ಶಿಸ್ತು, ಮೂಲಸೌಕರ್ಯ ಮತ್ತು ಸ್ಥಿರತೆ ಮೇಲೆ ಗಮನ ಕೊಡುತ್ತದೆ.

ವಿತ್ತೀಯ ಸ್ಥಿರತೆ: ಕೋವಿಡ್ ನಂತರ 2021ರಲ್ಲಿ ವಿತ್ತೀಯ ಶಿಸ್ತು ತರಲು ಶುರು ಆದ ಪ್ರಕ್ರಿಯೆ ಈ ಬಜೆಟ್​ನಲ್ಲೂ ಮುಂದುವರಿದಿದೆ. 2026-27ರಲ್ಲಿ ವಿತ್ತೀಯ ಕೊರತೆಗೆ ಜಿಡಿಪಿಯ ಶೇ. 4.3 ಗುರಿ ಹಾಕಲಾಗಿದೆ. 2030-31ರಲ್ಲಿ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 50ಕ್ಕೆ ಇಳಿಯಬೇಕೆಂಬ ದೂರಗಾಮಿ ಗುರಿಯೊಂದಿಗೆ ಬಜೆಟ್ ಹೆಜ್ಜೆ ಹಾಕಿದೆ. ಹಾಗೆಯೇ, ತೆರಿಗೆ ನಿಯಮಗಳನ್ನು ಸರಳಗೊಳಿಸಲಾಗಿರುವ 2025ರ ಇನ್ಕಮ್ ಟ್ಯಾಕ್ಸ್ ಕಾಯ್ದೆಯನ್ನು ಜಾರಿಗೆ ತಂದು ತೆರಿಗೆ ಸ್ಥಿರತೆ ಕಾಯ್ದುಕೊಂಡಿದೆ ಈ ಬಜೆಟ್. ಕಾರ್ಪೊರೇಟ್ ಟ್ಯಾಕ್ಸಲ್ಲಾಗಲೀ, ವೈಯಕ್ತಿಕ ಇನ್ಕಮ್ ಟ್ಯಾಕ್ಸಲ್ಲಾಗಲೀ ಬದಲಾವಣೆ ಮಾಡದೆಯೇ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಇನ್​ಫ್ರಾಸ್ಟ್ರಕ್ಚರ್ ಶಕ್ತಿ: ಸಾರ್ವಜನಿಕ ಬಂಡವಾಳ ವೆಚ್ಚವನ್ನು ದಾಖಲೆಯ 12.2 ಲಕ್ಷ ಕೋಟಿ ರೂಗೆ (ಜಿಡಿಪಿಯ ಶೇ. 3.1) ಏರಿಸಲಾಗಿದೆ. ಸರಕು ಸಾಗಣೆ ಕಾರಿಡಾರ್​ಗಳ ವಿಸ್ತರಣೆ, 20 ಹೊಸ ಜಲಮಾರ್ಗ, ಏಳು ಹೈಸ್ಪೀಡ್ ರೈಲ್ ಕಾರಿಡಾರ್​ಗಳು ಈ ಬಂಡವಾಳ ವೆಚ್ಚದಲ್ಲಿ ಒಳಗೊಂಡಿವೆ.

ಟೆಕ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಹೆಚ್ಚಿಸುವುದು: 2021ರಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಚಾಲನೆ ಮಾಡಲಾಯಿತು. ಈ ಬಜೆಟ್​ನಲ್ಲಿ ಸೆಮಿಕಂಡಕ್ಟರ್ ಮಿಷನ್ 2.0 ಘೋಷಣೆಯಾಗಿದೆ. ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್​ಗಳ ಉತ್ಪಾದನೆಯ ಸ್ಕೀಮ್​ಗೆ ಬಜೆಟ್ ಅಲೋಕೇಶನ್ 40,000 ಕೋಟಿ ರೂಗೆ ಏರಿಸಲಾಗಿದೆ.

ಎಂಎಸ್​ಎಂಇ ಮತ್ತು ಗ್ರಾಮೀಣ ನೆರವು: 2015ರ ಸ್ಕಿಲ್ ಇಂಡಿಯಾ ಮಿಷನ್ ಮತ್ತು 2023ರ ಕ್ರೆಡಿಟ್ ಗ್ಯಾರಂಟೀ ಸ್ಕೀಮ್​ಗಳ ನೆರವಿನೊಂದಿಗೆ ದೇಶದ ವಿವಿಧೆಡೆ 200 ಕೈಗಾರಿಕಾ ಕ್ಲಸ್ಟರ್​ಗಳ ಮರುಚೇತರಿಕೆಗೆ ಬಜೆಟ್​ನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಎರಡನೇ ಮತ್ತು ಮೂರನೇ ಸ್ತರದ ಪಟ್ಟಣಗಳಲ್ಲಿ ಬ್ಯುಸಿನೆಸ್ ನಿಯಮಗಳನ್ನು ಸರಳಗೊಳಿಸಲು ‘ಕಾರ್ಪೊರೇಟ್ ಮಿತ್ರಾಸ್’ ಯೋಜನೆ ತರಲಾಗಿದೆ. ಅಧಿಕ ಮೌಲ್ಯದ ಬೆಳೆಗಳಿಗೆ ಒತತು ಕೊಡುವ ಮೂಲಕ ಮತ್ತು ನ್ಯಾಷನಲ್ ಫೈಬರ್ ಸ್ಕೀಮ್ ಮೂಲಕ ರೈತರ ಕಲ್ಯಾಣಕ್ಕೆ ನೆರವಾಗುತ್ತಿದೆ.

ಇದನ್ನೂ ಓದಿ: ಭಾರತದ ಬಗ್ಗೆ ಇಲಾನ್ ಮಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು

ಮುಂದಿ ದಶಕಕ್ಕೆ ಸಜ್ಜಾಗಲು ಬೇಕಾದ ನಾವೀನ್ಯತೆ

ಜಾಗತಿಕ ಪೂರೈಕೆ ಸರಪಳಿ ಮತ್ತು ಹೈಟೆಕ್ ಸೆಕ್ಟರ್​ಗಳಲ್ಲಿ ಭಾರತದ ಸ್ಥಾನ ಭದ್ರಪಡಿಸುವಂತಹ ಹೊಸ ಉಪಕ್ರಮಗಳನ್ನು ಈ ಬಜೆಟ್​ನಲ್ಲಿ ಜಾರಿ ಮಾಡಲಾಗಿದೆ:

ಸಂಪನ್ಮೂಲ ಭದ್ರತೆ: ಒಡಿಶಾ, ಕೇರಳ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳನ್ನು ಒಳಗೊಂಡ ರೇರ್ ಅರ್ಥ್ ಕಾರಿಡಾರ್​ಗಳನ್ನು ಸ್ಥಾಪಿಸಲಾಗುತ್ತಿದೆ. ಮೈನಿಂಗ್ ಮತ್ತು ಸಂಶೋಧನೆಯಲ್ಲಿ ಪೂರೈಕೆ ಸರಪಳಿಯನ್ನು ಬಲಪಡಿಸಲು ಇದು ನೆರವಾಗುತ್ತದೆ.

ವಿಜ್ಞಾನದಲ್ಲಿ ಹೊಸ ಸಾಹಸ: ಬಯೋಫಾರ್ಮಾ ನಾವೀನ್ಯತೆ ಮತ್ತು ಕ್ಲಿನಿಕಲ್ ಟ್ರಯಲ್​ಗಳಿಗೆ ಭಾರತವು ಜಾಗತಿಕ ಅಡ್ಡೆಯಾಗಿಸುವಂತಹ ಗುರಿಯೊಂದಿಗೆ 10,000 ಕೋಟಿ ರೂ ಅನುದಾನದಲ್ಲಿ ಬಯೋಫಾರ್ಮಾ ಶಕ್ತಿ ಯೋಜನೆಯನ್ನು ಬಜೆಟ್​ನಲ್ಲಿ ಘೋಷಿಸಲಾಗಿದೆ.

ಹಣಕಾಸು ಪರಿವರ್ತನೆ: ಹೂಡಿಕೆಗಳಿಗೆ ರಿಸ್ಕ್ ಕಡಿಮೆ ಮಾಡಲು ಹೊಸ ಇನ್​ಫ್ರಾಸ್ಟ್ರಕ್ಚರ್ ರಿಸ್ಕ್ ಗ್ಯಾರಂಟಿ ಫಂಡ್ ರಚಿಸಲಾಗಿದೆ. ಹಾಗೆಯೇ, ವಿಕಸಿತ ಭಾರತದ ನಿರ್ಮಾಣಕ್ಕೆ ನೆರವಾಗುವ ಬ್ಯಾಂಕಿಂಗ್ ಅನ್ನು ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿಯನ್ನೂ ರಚಿಸಲಾಗಿದೆ. ಎಸ್​ಎಂಇ ಗ್ರೋತ್ ಫಂಡ್​ನಿಂದ ಎಂಎಸ್​ಎಂಇಗಳಿಗೆ ಲಾಭವಾಗಲಿದೆ. TReDS ಸೆಕ್ಯೂರಿಟೈಸೇಶನ್ ಮೂಲಕ ಇನ್ವಾಯ್ಸ್​ಗಳಿಗೆ ಸೆಕೆಂಡರಿ ಮಾರ್ಕೆಟ್ ನಿರ್ಮಿತವಾಗಿದ್ದು, ಇದರಿಂದಲೂ ಎಂಎಸ್​ಎಂಇಗಳಿಗೆ ಲಾಭವಾಗಲಿದೆ.

ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ತತ್​ಕ್ಷಣದ ಲಾಭಗಳು: ಇವತ್ತಿನ ಆರ್ಥಿಕ ಹೊರೆ ಇಳಿಸುವುದು

ಬಜೆಟ್​ನಲ್ಲಿ ಭವಿಷ್ಯದ ದೃಷ್ಟಿ ಜೊತೆ ಜೊತೆಗೆ ಉದ್ದಿಮೆಗಳು ಮತ್ತು ಜನಸಾಮಾನ್ಯರಿಗೆ ತತ್​ಕ್ಷಣಕ್ಕೆ ಖುಷಿ ಕೊಡುವ ಸಂಗತಿಗಳೂ ಇವೆ:

ಕುಟುಂಬಗಳಿಗೆ ನೇರ ಪರಿಹಾರ: ವಿದೇಶಗಳಲ್ಲಿ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ಪ್ರವಾಸ ಪ್ಯಾಕೇಜ್​ಗಳಿಗೆ ಮಾಡುವ ವೆಚ್ಚಕ್ಕೆ ವಿಧಿಸುವ ಟಿಸಿಎಸ್ ತೆರಿಗೆಯನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಲಾಗಿರುವುದು ಗಮನಾರ್ಹ. ಇದರಿಂದ ಭಾರತೀಯ ಕುಟುಂಬಗಳಿಗೆ ಹಣದ ಹೊರೆ ಕಡಿಮೆ ಆಗುತ್ತದೆ. ಅಂತಾರಾಷ್ಟ್ರೀಯ ಶಿಕ್ಷಣ ವೆಚ್ಚ ಸ್ವಲ್ಪ ಕಡಿಮೆ ಆಗಲು ಸಾಧ್ಯವಾಗುತ್ತದೆ.

ಆರೋಗ್ಯಪಾಲನೆ ಮತ್ತು ಅನುಭೋಗ ವೆಚ್ಚ ಕಡಿಮೆ: 17 ಪ್ರಮುಖ ಔಷಧಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ. ವೈಯಕ್ತಿಕ ಆಮದು ಸುಂಕಗಳನ್ನು ಶೇ. 20ರಿಂದ ಶೇ. 10ಕ್ಕೆ ಇಳಿಸಲಾಗಿದೆ.

ನಿಯಮ ಬದ್ಧತೆ: ಸಣ್ಣ ತಪ್ಪುಗಳನ್ನು ಅಪರಾಧೀಕರಣ ಮಾಡುವುದನ್ನು ತಪ್ಪಿಸಲಾಗುತ್ತದೆ. ಪೆನಾಲ್ಟಿ ಕ್ರಮಗಳನ್ನು ಮಿಳಿತಗೊಳಿಸಲಾಗುತ್ತದೆ. ಇದರಿಂದ ತೆರಿಗೆ ಪಾವತಿದಾರರಲ್ಲಿ ಇರುವ ಆತಂಕವನ್ನು ಈ ಬಜೆಟ್ ಕಡಿಮೆ ಮಾಡುತ್ತದೆ. ಐಟಿಆರ್ ಪರಿಷ್ಕರಣೆ ಮತ್ತು ನಾನ್-ಆಡಿಟ್ ಬ್ಯುಸಿನೆಸ್ ಫೈಲಿಂಗ್​ಗಳಿಗೆ ಡೆಡ್​ಲೈನ್ ಅನ್ನು ವಿಸ್ತರಿಸಲಾಗಿದೆ.

ಕಾರ್ಮಿಕ ವರ್ಗಕ್ಕೆ ಶಕ್ತಿ: ಮಹಿಳಾ ನೇತೃತ್ವದ ಉದ್ದಿಮೆಗಳಿಗೆ ಒತ್ತು ಕೊಡಲಾಗಿದ್ದು, ಜೆಂಡರ್ ಬಜೆಟ್​ಗೆ ಅನುದಾನವನ್ನು 5 ಲಕ್ಷ ಕೋಟಿ ರೂಗೆ ಏರಿಸಲಾಗಿದೆ.

ತತ್​ಕ್ಷಣದ ಕ್ರಮಗಳ ಬದಲು ದೀರ್ಘಾವಧಿ ಪರಿಹಾರಗಳಿಗೆ ಬಜೆಟ್​ನಲ್ಲಿ ಒತ್ತುಕೊಡಲಾಗಿದೆ. ದೇಶೀಯ ಮೌಲ್ಯ ಸರಪಳಿಯನ್ನು ಬಲಪಡಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಬಹುಕೌಶಲ್ಯ ಉದ್ಯೋಗ ಸೃಷ್ಟಿಸಲು, ಹಾಗೂ ಕಂಪನಿಗಳಿಗೆ ಕಾರ್ಯಾಚರಣೆ ಸಂಘರ್ಷ ಕಡಿಮೆಗೊಳಿಸಲು ಈ ಬಜೆಟ್​ನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಭಾರತದ ಪ್ರಗತಿಗೆ ಪೂರಕವಾಗಿದೆ ಈ ಬಜೆಟ್: ಅಪೋಲೋ ಹಾಸ್ಪಿಟಲ್ಸ್ ಮುಖ್ಯಸ್ಥ ಡಾ. ಪ್ರತಾಪ್ ಸಿ. ರೆಡ್ಡಿ

ಬಜೆಟ್ 2026: ಪ್ರಮುಖ ಘೋಷಣೆಗಳು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು – Kannada News | Kolar Land Grab: Shivarapattana 80 Cr Zero Bin Zero Scam Exposed

ಕೋಲಾರ, ಫೆಬ್ರವರಿ 02: ಅದು ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೈಗಾರಿಕಾ ಪ್ರದೇಶ. ಅಲ್ಲಿ ಭೂಮಿಗೆ (Land) ಬಂಗಾರದ ಬೆಲೆ ಇದೆ. ಅಂಥ ಜಾಗದಲ್ಲಿ ಯಾರೂ ವಾರಸುದಾರರಿಲ್ಲದ ಭೂಮಿ ಇದೆ ಎಂದಾಗ ಭೂಗಳ್ಳರು, ಪ್ರಭಾವಿಗಳು ಸುಮ್ಮನೆ ಬಿಡುತ್ತಾರಾ, ಸಾಧ್ಯವೇ ಇಲ್ಲ. ಇಂಥಾದೊಂದು ಜಾಗ ಇದೇ ಅಂಥ ಗೊತ್ತಾಗಿದ್ದೇ ನೋಡಿ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಕೋಟ್ಯಂತರ ರೂ. ಭೂಮಿಯನ್ನು ತಿಂದು ತೇಗಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣ ಶಿಲ್ಪಿಗಳ ತವರೂರು. ಇದಕ್ಕೆ ಇಂಥದೊಂದು ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಶಿವಾರಪಟ್ಟಣ ಗ್ರಾಮದಲ್ಲಿನ ಜನರು ವಿವಿಧ ಶಿಲ್ಪಕಲೆಗಳಿಂದಲೇ ಇಡೀ ದೇಶವಿದೇಶದಲ್ಲಿ ಹೆಸರು ಮಾಡಿದ್ದಾರೆ. ಆದರೆ ಇಂದಿಗೆ ಇದೇ ಶಿವಾರಪಟ್ಟಣ ಗ್ರಾಮದ ಬಳಿ ಹೊಸದಾಗಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗುತ್ತಿದೆ. ಜೊತೆಗೆ ನರಸಾಪುರ ಕೈಗಾರಿಕಾ ಪ್ರದೇಶವೂ ಶಿವಾರಪಟ್ಟಣ ಗ್ರಾಮದವರೆಗೂ ವಿಸ್ತಾರಗೊಂಡಿದೆ. ಪರಿಣಾಮ ಈ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಎಕರೆ ಭೂಮಿಗೆ ಸುಮಾರು 4 ರಿಂದ 5 ಕೋಟಿ ರೂ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಯ ಜಾಗ ಕಬಳಿಸಿ ನಿರ್ಮಾಣವಾಗ್ತಿದೆ ಮಸೀದಿ! ಮುಳಬಾಗಿಲು ಗುಂಡ್ಲಹಳ್ಳಿ ಗ್ರಾಮದಲ್ಲಿ ಭಾರಿ ವಿವಾದ

ಇಂಥ ಪ್ರದೇಶದಲ್ಲಿ ಭೂಗಳ್ಳರು ಹಾಗೂ ಕೆಲವು ಪ್ರಭಾವಿ ರಾಜಕಾರಣಿಗಳ ಮಕ್ಕಳಿಗೆ ಜೀರೋ ಬಿನ್ ಜೀರೋ ಹೆಸರಿನಲ್ಲಿ ಪಹಣಿಯಲ್ಲಿ ಯಾವುದೇ ವಾರಸುದಾರರಿಲ್ಲದ ಸುಮಾರು 49 ಎಕರೆಯಷ್ಟು ಭೂಮಿ ಇರುವ ವಿಷಯ ತಿಳಿದ ಹಿನ್ನೆಲೆಯಲ್ಲಿ ಆ ಭೂಮಿಯನ್ನು ಕಬಳಿಕೆ ಮಾಡಲು ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಸುಮಾರು 16 ಎಕರೆಯಷ್ಟು ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ನಕಲಿ ವ್ಯಕ್ತಿಯ ಹೆಸರಿಗೆ ಭೂಮಿಯ ದಾಖಲೆಗಳನ್ನು ಸಿದ್ದಮಾಡಿಕೊಂಡು ಅವರಿಂದ ಭೂಮಿಯನ್ನು ಖರೀದಿ ಮಾಡಿದಂತೆ ಮಾಡಿ ಕೋಟ್ಯಂತರ ರೂ ಬೆಲೆ ಬಾಳುವ ಭೂಮಿಯನ್ನು ಲಪಾಟಾಯಿಸಿದ್ದಾರೆ ಎನ್ನುವುದು ಸಾಮಾಜಿಕ ಕಾರ್ಯಕರ್ತ ನವೀನ್​ ಅವರ ಆರೋಪವಾಗಿದೆ.

ಏನಿದು ಜೀರೋ ಬಿನ್ ಜೀರೋ?

ಕಂದಾಯ ಇಲಾಖೆಯ ದಾಖಲಾತಿಗಳಲ್ಲಿ ಹಲವು ವರ್ಷಗಳಿಂದ ತೆರಿಗೆ ಪಾವತಿಯಾಗದ ಹಾಗೂ ಸ್ವಾಧೀನದಲ್ಲಿ ಇಲ್ಲದ ಭೂಮಿಯ ಪಹಣಿಯಲ್ಲಿ ಜೀರೋ ಬಿನ್ ಜೀರೋ ಎಂದು ಸೇರಿಸಲಾಗಿರುತ್ತದೆ. ಶಿವಾರಪಟ್ಟಣದ ಬಹಳ ಹಿಂದೆ ಇದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದಂತೆ ಕೆಲವು ಕುಟುಂಬಸ್ಥರು ವಲಸೆ ಹೋದವರು ಮತ್ತೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿ ಶಿವಾರಪಟ್ಟಣ ಸರ್ವೆ ನಂ-151 ರಿಂದ 172 ರವರೆಗೆ ವಿವಿಧ ಸರ್ವೆ ನಂಬರ್​ಗಳಲ್ಲಿ ಸುಮಾರು 49 ಎಕರೆ ಭೂಮಿ ಇದೆ. ಅದೆಲ್ಲವೂ ಪಹಣಿಯಲ್ಲಿ ಇಂದಿಗೂ ಜೀರೋ ಬಿನ್​ ಜೀರೋ ಅಥವಾ ಡಾಟ್ ಎಂದು ಬರುತ್ತಿದೆ.

ಅಧಿಕಾರಿಗಳು ಶಾಮೀಲು?

ಈ ವಿಷಯ ತಿಳಿದ ಮಾಲೂರಿನ ಒಬ್ಬ ಪ್ರಭಾವಿ  ರಾಜಕಾರಣಿಯೊಬ್ಬರ ಸಂಬಂಧಿಕರು ಹಾಗೂ ಮಕ್ಕಳು ಕೋಲಾರದ ಕೆಲವು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಮೂಲ ಕಂದಾಯ ಕರ್ದಾ ದಾಖಲೆಯಲ್ಲಿ ಸೈಯದ್ ಇಬ್ರಾಹಿಂ ಸಾಬ್ ಹೆಸರನ್ನು ಖಾಜಿ ಸೈಯದ್ ಇಬ್ರಾಹಿಂ ಎಂದು ತಿದ್ದಿ ಆ ಹೆಸರಿನ ನಕಲಿ ವ್ಯಕ್ತಿಗಳಿಂದ ಭೂಮಿ ನಮ್ಮದು ನಮ್ಮ ಹೆಸರಿಗೆ ಮಾಡಿಕೊಡುವಂತೆ ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿ, ನಂತರ ಅದನ್ನು ಅರ್ಜಿದಾರರ ಹೆಸರಿಗೆ ಮಾಡಿ, ಪಹಣಿಯಲ್ಲಿ ಅವರ ಹೆಸರು ನಮೂದಾಗುತ್ತಿದ್ದಂತೆ ಕೂಡಲೇ ಆ ಭೂಮಿಯನ್ನು ಪ್ರಭಾವಿಗಳು ಖರೀದಿ ಮಾಡಿದಂತೆ ತೋರಿಸಲಾಗಿದೆ.

ಸದ್ಯ ಶಿವಾರಪಟ್ಟಣ ಸರ್ವೆ ನಂ-168 ರಲ್ಲಿ 8.32 ಎಕರೆ, 170 ರಲ್ಲಿ 4.5 ಎಕರೆ ಹಾಗೂ 171 ರಲ್ಲಿ 1.32 ಎಕರೆ ಭೂಮಿಯನ್ನು ಖಾಜಿ ಸೈಯದ್ ಇಬ್ರಾಹಿಂ ಹೆಸರಿಗೆ ಮಾಡಿ ಅವರ ವಂಶಸ್ಥರು ಎಂದು ವಂಶವೃಕ್ಷ ಸೃಷ್ಟಿ ಮಾಡಿ ಸುಮಾರು 80 ಕೋಟಿ ರೂ ಬೆಲೆ ಬಾಳುವ ಭೂಮಿಯನ್ನು ಲಪಟಾಯಿಸಲಾಗಿದೆ. ವಾರಸುದಾರರಿಲ್ಲದ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕಿತ್ತು ಅಥವಾ ಈ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶಕ್ಕೆ ನೀಡಬಹುದಾಗಿದ್ದ ಬಂಗಾರದ ಬೆಲೆ ಬಾಳುವ ಭೂಮಿ ಇಂದು ಪ್ರಭಾವಿಗಳ ಪಾಲಾಗಿದೆ. ಸದ್ಯ ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ನಾಮಕಾವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಭೈರತಿ ಸುರೇಶ್​ ತನಿಖೆ ಮಾಡಿಸುವ ಭರವಸೆ ನೀಡುತ್ತಿದ್ದಾರೆ. ಆದರೆ ಸರ್ಕಾರಿ ಭೂಮಿಯನ್ನು ಉಳಿಸಬೇಕು ಎನ್ನುವ ಕೂಗು ಜಿಲ್ಲೆಯಲ್ಲಿ ಕೇಳಿಬಂದಿದೆ.

ಇದನ್ನೂ ಓದಿ: ಕೋಗಿಲು ಬೆನ್ನಲ್ಲೇ ನಾಗವಾರ ಬಳಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: 30ಕ್ಕೂ ಹೆಚ್ಚು ಮನೆ, ಶೆಡ್, ಗ್ಯಾರೇಜ್ ಧ್ವಂಸ

ಕಂದಾಯ ಇಲಾಖೆ ಅಧಿಕಾರಿಗಳು ಕೈಜೋಡಿಸಿದರೆ ಜೀರೋಯಿಂದ ಕೋಟಿ ಕೋಟಿ ರೂ. ಹಣ ಮಾಡೋದು ಹೇಗೆ ಅನ್ನೋದು ಈ ಪ್ರಕರಣದಲ್ಲಿ ತಿಳಿದುಬಂದಿದೆ. ಸದ್ಯ 16 ಎಕರೆಯಷ್ಟು ಭೂಮಿಗೆ ಈಗಾಗಲೇ ದಾಖಲಾತಿಗಳನ್ನು ಸೃಷ್ಟಿಸಿದ್ದು, ಉಳಿದ ಭೂಮಿ ಕಬಳಿಕೆ ಮಾಡುವ ಕೆಲಸ ನಡೆಯುತ್ತಿದೆ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸರ್ಕಾರಿ ಭೂಮಿಯನ್ನು ಉಳಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Viral Video: ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ಸೆರೆಹಿಡಿದ ತಂದೆ, ವೈರಲ್‌ ಆಯ್ತು ದೃಶ್ಯ – Kannada News | Viral Video | Father records video of daughter dancing on stage with keypad mobile phone

ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಇತ್ತ ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೆಗಿಂತ ದೊಡ್ಡ ಪ್ರಪಂಚ ಮತ್ತೊಂದಿಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಗಣರಾಜ್ಯೋತ್ಸವ ದಿನ ತನ್ನ ಮಗಳು ಸ್ಟೇಜ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ, ಇತ್ತ ತಂದೆ ಕೀಪ್ಯಾಡ್ ಫೋನ್‌ನಲ್ಲಿ ರೆಕಾರ್ಡ್ ಮಾಡಲು ನಿಂತುಕೊಂಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಜಿತೇಂದರ್ ಸರಸ್ವತ್ (Jitendar Sarswat) ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾಳೆ. ಮಕ್ಕಳ ಗುಂಪಿನ ನಡುವೆ ನಿಂತಿರುವ ವ್ಯಕ್ತಿಯೂ ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ತನ್ನ ಬಳಿ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಮಗಳ ಡ್ಯಾನ್ಸ್ ಅನ್ನು ಸೆರೆ ಹಿಡಿಯಬೇಕೆನ್ನುವ ತಂದೆಯ ಪ್ರಯತ್ನವು ಈ ವಿಡಿಯೋದಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕೆಟ್ಟ ಅಭ್ಯಾಸಗಳಿಗೆ ಅಪ್ಪನ ಹಣವೆಲ್ಲಾ ಖರ್ಚು ಮಾಡಿ, ತಂದೆಯನ್ನೇ ನಿರ್ದಯಿಯಾಗಿ ಥಳಿಸಿದ ಮಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮಗಳ ಖುಷಿಯಲ್ಲಿ ಅಡಗಿದೆ ತಂದೆಯ ನಗು ಎಂದಿದ್ದಾರೆ. ಇನ್ನೊಬ್ಬರು, ಇರುವುದರಲ್ಲಿ ಖುಷಿ ಕಾಣುವುದು ಅಂದ್ರೆ ಇದೇನೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತಂದೆಗೆ ಮಗಳೇ ಪ್ರಪಂಚವಾಗಿರುತ್ತಾಳೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:24 pm, Mon, 2 February 26

Source link

ಮತ್ತೆ ನಿಫಾ ಟೆನ್ಷನ್​: ಕರ್ನಾಟಕದಲ್ಲಿ ಹೈ ಅಲರ್ಟ್​, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ರಿಲೀಸ್​ – Kannada News | Nipah Virus Alert: Karnataka on High Watch Amid Rising Cases

ಬೆಂಗಳೂರು, ಫೆಬ್ರವರಿ 02: ದೇಶದ ವಿವಿಧ ರಾಜ್ಯಗಳಲ್ಲಿ ನಿಫಾ ವೈರಸ್​​ ಮತ್ತೆ ಸದ್ದು ಮಾಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಫುಲ್​​ ಅಲರ್ಟ್​​ ಆಗಿದೆ. ಈ ವೈರಸ್​ ಸೋಂಕಿತ ಬಾವಲಿಗಳು ತಿಂದಿರು ಹಣ್ಣುಗಳನ್ನು ತಿಂದರೆ ಅಥವಾ ಹಂದಿಗಳ ಮಾಂಸವನ್ನು ಸೇವನೆ ಮಾಡುವುದರಿಂದ ಹೆಚ್ಚಾಗಿ ಹರಡಲಿದೆ. ಮನುಷ್ಯರಿಂದ ಮನುಷ್ಯರಿಗೂ ಕೆಲವವೊಮ್ಮೆ ಇದು ವರ್ಗಾವಣೆ ಆಗಬಹುದು ಎನ್ನಲಾಗಿದೆ. ಅತ್ಯಂತ ಭಯಾನಕ ಅಂಶವೆಂದರೆ ನಿಫಾ ವೈರಸ್ ಸೋಂಕಿತರ ಮರಣ ಪ್ರಮಾಣ ಶೇ. 60-75 ರಷ್ಟಿರುವ ಕಾರಣ, ಈ ವೈರಸ್​​ ರಾಜ್ಯದಲ್ಲಿ ಕಾಲಿಡದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಶಂಕಿತ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಆರೋಗ್ಯಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.

ನಿಫಾ ಸೋಂಕಿನ ಲಕ್ಷಣಗಳೇನು?

  • ಜ್ವರ
  • ಮೈ ಕೈ ನೋವು
  • ಸುಸ್ತು
  • ತಲೆನೋವು
  • ಶೀತ
  • ಗಂಟಲು ಕೆರೆತ ಅಥವಾ ಗಂಟಲಿನಲ್ಲಿ ನೋವು
  • ತಲೆನೋವು
  • ಕುತ್ತಿಗೆಯ ಹಿಂದಿನ ಭಾಗದಲ್ಲಿ ಸೆಳೆತ

ಇದನ್ನೂ ಓದಿ: ನಿಫಾ ವೈರಸ್ ಸೋಂಕಿತರಲ್ಲಿ ಮರಣ ಪ್ರಮಾಣ ಕೋವಿಡ್​ಗಿಂತಲೂ ಹೆಚ್ಚು; ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದ ಐಸಿಎಂಆರ್

ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ನಿಫಾ ವೈರಸ್​​ ಆತಂಕ ಮನೆ ಮಾಡಿರುವ ಹಿನ್ನೆಲೆ ಸೋಂಕಿನ ಗುಣ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಟ ಬೇಡ, ಮರಗಳಿಂದ ತಯಾರಿಸುವ ನೀರಾಗಳ ಸೇವನೆಯಿಂದ ಸದ್ಯಕ್ಕೆ ದೂರವಿರಿ. ಜೊತೆಗೆ ಬಾವಲಿಗಳು ತಿಂದ ಹಣ್ಣುಗಳನ್ನ ಸೇವಿಸದಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಏನು ಮಾಡಬೇಕು?

  • ಹಣ್ಣುಗಳನ್ನ ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು
  • ಕುದಿಸಿ ಆರಿಸಿದ ನೀರನ್ನ ಕುಡಿಯಬೇಕು
  • ಸಾಕು ಪ್ರಾಣಿಗಳ ಆಹಾರವು ಬಾವಲಿಗಳ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು
  • ಪ್ರಾಣಿಗಳನ್ನ ಸಂಪರ್ಕಿಸುವಾಗ ರಕ್ಷಣಾತ್ಮಕ ಉಡುಪುಗಳನ್ನ ಧರಿಸಬೇಕು
  • ಮರಗಳಿಂದ ತೆಗೆಯುವ ಹಣ್ಣಿನ ರಸದ ಸಂಪರ್ಕಕ್ಕೆ ಬಾವಲಿಗಳು ಬಾರದಂತೆ ನೋಡಿಕೊಳ್ಳಬೇಕು
  • ಸೊಂಕಿತ ವ್ಯಕ್ತಿಗಳನ್ನ ಸಂಪರ್ಕಿಸುವಾಗ ರಕ್ಷಣಾತ್ಮಕ ಕ್ರಮ ವಹಿಸಬೇಕು

ಏನು ಮಾಡಬಾರದು?

  • ಮರದಿಂದ ಬಿದ್ದ ಹಾಗೂ ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನ ತಿನ್ನಬಾರದು
  • ತೆರೆದ ಪಾತ್ರೆಗಳಲ್ಲಿ ಇಟ್ಟ ಪಾನೀಯಗಳನ್ನ ಸೇವಿಸಬಾರದು
  • ನಿಫಾ ಬಂದಿರುವ ವ್ಯಕ್ತಿಯ ಸಂಪರ್ಕ ಮಾಡಬಾರದು
  • ಖಾಯಿಲೆ ಬಂದ ಅಥ್ವಾ ಸತ್ತ ಪ್ರಾಣಿಗಳ ಹತ್ತಿರ ಹೋಗಬಾರದು
  • ಬಾವಲಿಗಳ ಸಂಪರ್ಕದಿಂದ ದೂರ ಇರಬೇಕು

ಇನ್ನು ನಿಫಾ ವೈರಸ್​​ನ ರೋಗ ಲಕ್ಷಣಗಲು ತಕ್ಷಣಕ್ಕೆ ಗೋಚರಿಸುವುದಿಲ್ಲ. ಸಾಮಾನ್ಯವಾಗಿ 4 ರಿಂದ 14 ದಿನಗಳಲ್ಲಿ ಇವು ಗಮನಕ್ಕೆ ಬರಲಿದ್ದು, ಆರೋಗ್ಯ ಇಲಾಖೆಯ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಸೋಂಕಿತರು ಕಂಡುಬಂದಲ್ಲಿ ಅಂತವರ ಚಿಕಿತ್ಸೆಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

33 ವರ್ಷದ ಸಂಪಾದನೆ ಹೋಯ್ತು: 18 ಕೋಟಿ ರೂ. ಮೌಲ್ಯದ ಚಿನ್ನ ಕಳೆದುಕೊಂಡ ಬೆಂಗಳೂರಿನ ಬಿಲ್ಡರ್​​ನ ಕಣ್ಣೀರಿನ ಕಥೆ – Kannada News | Builder Shivakumar Tears afer Nepali couple Loots Valuables Worth Rs 18 Crore From Bengaluru House

ಚಿನ್ನ ಕಳೆದುಕೊಂಡ ಉದ್ಯಮಿ ಶಿವಕುಮಾರ್

ಬೆಂಗಳೂರು, (ಫೆಬ್ರವರಿ 02): ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಯಲ್ಲಿ ಉದ್ಯಮಿ ಶಿವಕುಮಾರ್ ಎನ್ನುವ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರವಣ ಕಳ್ಳತನವಾಗಿದ್ದು, ಮನೆಗೆಲಸ ಮಾಡುತ್ತಿದ್ದ ನೇಪಾಳಿ ದಂಪತಿಯೇ ದೋಚಿಕೊಂಡು ಹೋಗಿದೆ ಎಂದು ಪೊಲೀಸರ ತನಿಖೆಯನ್ನು ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು, ನೇಪಾಳಿ ದಂಪತಿ ಬಂಧನಕ್ಕೆ ಬಲೆ ಬೀಸಿದೆ. ಇನ್ನು ತಮ್ಮ 33 ವರ್ಷದ ಸಂಪಾದನೆಯನ್ನು ದೋಚಿದ್ದಾರೆ ಎಂದು ಉದ್ಯಮಿ ಕಣ್ಣೀರಿಟ್ಟಿದ್ದಾರೆ. ಕಳವಾದ ಚಿನ್ನ ನಾನು ಹೇಗಾದರೂ ಮತ್ತೆ ಸಂಪಾದನೆ ಮಾಡುತ್ತೇನೆ. ಆದ್ರೆ, ನನ್ನ ತಾಯಿ‌ಯ ಕಿವಿಯೋಲೆ ಮತ್ತು ಸರ ಕಳವಾಗಿದ್ದಕ್ಕೆ ದುಃಖವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕಳವಾದ ಚಿನ್ನ ನೆನೆದು ಬಿಲ್ಡರ್ ಕಣ್ಣೀರು

33 ವರ್ಷದ ನನ್ನ ಸಂಪಾದನೆಯನ್ನ ಕಳ್ಳತನ ಮಾಡಿದ್ದಾರೆ. 1988 ಸೆಪ್ಟೆಂಬರ್ 12 ರಂದು ನನ್ನ ಜೀವನದಲ್ಲಿ ದೊಡ್ಡ ದುರಂತವಾಗಿತ್ತು. ಹೆಮ್ಮಲೂರು ಬಳಿ ನಾವು ವಾಸವಿದ್ದ ಮನೆ ಮಳೆಯಿಂದ ಕುಸಿತವಾಗಿತ್ತು. ಮನೆ ಕುಸಿದಾದ ನನ್ನ ಕುಟುಂಬದ ಐದು ಜನ ಸಾವನ್ನಪ್ಪಿದ್ರು. ಮನೆಯಿಲ್ಲದೆ ಕೋಳಿ ಫಾರ್ಮ್ ನಲ್ಲಿ ಮಲಗಿಕೊಂಡಿದ್ವಿ. 1989 ಮೇ 31ಕ್ಕೆ ಮಾಲಿನ ಅವ್ರನ್ನ ನಾನು ಮದುವೆ ಆದೆ. ಆಗ ನನ್ನ ಬಳಿ ಊಟಕ್ಕೂ ದುಡ್ಡಿಲ್ಲದ ಪರಿಸ್ಥಿತಿ ಇತ್ತು. ಆದರೂ ಮಾಲಿನಿ ಅವರ ತಂದೆ ನನಗೆ ಮಗಳನ್ನ ಮದುವೆ ಮಾಡಿ ಕೊಟ್ರು. ಮದುವೆಯಾದ ಮರುದಿನವೇ ಸಾಲಕೊಟ್ಟವರು ಮನೆ ಬಳಿಗೆ ಬಂದಿದ್ರು. ಆಗ ನನ್ನ ಪತ್ನಿ ಬಳಿಯಿದ್ದ ಚಿನ್ನ ಅಡವಿಟ್ಟು ಸಾಲ ತೀರಿಸಿದ್ದೆ.ಆಗ ನನ್ನ ತಾಯಿ 15 ದಿನವಾದ್ರೂ ನಾವು ಸ್ವಂತ ಮನೆಯಲ್ಲಿ ಇರ್ಬೆಕು ಮಗ ಅಂದಿದ್ರು. ನಂತರ ನಾನು ಬಡವರಿಗೆ ಕಂತಿನ ರೂಪದಲ್ಲಿ ಮನೆ ಜಾಗ ನೀಡುವ‌ ಕೆಲಸ ಮಾಡಿದ್ದೆ‌. ಈಗ ಸಾವಿರಾರು ಜನ ಬಡವರು ಸ್ವಂತ ಮನೆಯಲ್ಲಿ ಜೀವನ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ದಂಪತಿಗೆ ಬಲೆ ಬೀಸಿದ ಪೊಲೀಸರು!

ಕಳವಾದ ಚಿನ್ನ ನಾನು ಹೇಗಾದ್ರೂ ಮತ್ತೆ ಸಂಪಾದನೆ ಮಾಡುತ್ತೇನೆ. ಆದ್ರೆ ನನ್ನ ತಾಯಿ‌ಯ ಕಿವಿಯೋಲೆ ಮತ್ತು ಸರ ಕಳವಾಗಿದ್ದಕ್ಕೆ ದುಃಖವಾಗಿದೆ.ನನ್ನ ಮಕ್ಕಳ ಮತ್ತು ಪತ್ನಿಯ ಎಲ್ಲಾ ಚಿನ್ನವನ್ನ ಕಳ್ಳತನ ಮಾಡಿದ್ದಾರೆ. ನಮ್ಮ ಮನೆಯಲ್ಲಿ ಹಿಂದೆ ನೇಪಾಳಿ ಕುಟುಂಬ ಕೆಲಸ ಮಾಡುತ್ತಿತ್ತು. ಹೊಸ ಮನೆ ಗೃಹ ಪ್ರವೇಶ ವೇಳೆ ಎಲ್ಲವನ್ನ ಅವರು ಗಮನಿಸಿದ್ದಾರೆ. ಮನೆಯ ಲಾಕರ್ ಮತ್ತು ಬಳಿಯಿರುವ ಚಿನ್ನದ ಬಗ್ಗೆ ನೋಡಿಕೊಂಡಿದ್ದರು. ನಂತರ ನಾವು ಕೆಲಸ ಬಿಡುತ್ತೇವೆ ಎಂದು ನನ್ನ ಬಳಿ ಹೇಳಿದ್ದರು.ಆಗ ಬೇರೆ ಯಾರನ್ನಾದ್ರೂ ಸೇರಿಸಿ ಹೋಗು ಅಂತ ಹೇಳಿದ್ದೆ. ಆಗ ದಿನೇಶ್ ಮತ್ತು ಕಮಲಾಳನ್ನ ಕರೆತಂದು ಬಿಟ್ಟಿದ್ದ. ಇವರೆಲ್ಲ ಮೊದಲೇ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ನನಗೆ ಗೊತ್ತಾಗಲಿಲ್ಲ ಎಂದು ಘಟನೆ ನೆನೆದು ಬೇಸರ ಹೊರಹಾಕಿದ್ದಾರೆ.

ದಂಪತಿ ದರೋಡೆ ಪ್ಲ್ಯಾನ್ ಬಿಚ್ಚಿಟ್ಟ ಉದ್ಯಮಿ

ನಾನು ದಿನೇಶ್ ಹಾಗು ಕಮಲಾಳ ಆಧಾರ್ ಕಾರ್ಡ್ ಕೊಡಲು ಹೇಳಿದ್ದೆ‌.ಹಳೆ ಮಾಲೀಕರಿಗೆ ನಾವು ಹಣ ಕೊಡಬೇಕಿರುವುದರಿಂದ ಅವರ ಬಳಿ ಇದೆ. ಒಂದು ತಿಂಗಳು ಬಿಟ್ಟು ಕೊಡುತ್ತೇವೆ ಎಂದು ಹೇಳಿದ್ದರು. 20 ದಿನ ನಮ್ಮ ಮನೆಯಲ್ಲಿ ಹೇಳಿದ ಕೆಲಸ ಮಾಡಿಕೊಂಡಿದ್ದರು. ನಾನು ಸ್ನೇಹಿತರ ಜೊತೆ ಫಾರಿನ್ ಟ್ರಿಪ್ ಹೋದಾಗ ಇವರು ಪ್ಲಾನ್ ಮಾಡಿದ್ದರು. ಬೇರೆಡೆಯಿಂದ ನಾಲ್ಕು ಜನರನ್ನ ಮನೆಗೆ ಕರೆಸಿಕೊಂಡು ನಮ್ಮ ಮನೆಕೆಲಸದವಳನ್ನು ಕಮಲಾ ಬೇಕಂತಲೆ ಅಂಗಡಿಗೆ ಕರೆದೊಯ್ದಿದ್ಲು. ಆಗ 35 ನಿಮಿಷದಲ್ಲಿ ಲಾಕ್ ಒಡೆದು ಚಿನ್ನ ಕಳ್ಳತನ ಮಾಡಿದ್ದಾರೆ. ಮನೆಕೆಲಸದವಳನ್ನು ಅಂಗಡಿಯಲ್ಲೇ ಬಿಟ್ಟು ಕಮಲಾ ಹೋಗಿದ್ದಳು. ಬಿಲ್ ಕೊಡಲು ಹಣವಿಲ್ಲದೆ ಆಕೆ ಅಲ್ಲಿಂದ ನಡೆದು ಮನೆಗೆ ಬಂದಾಗ ಕಳ್ಳತನ ಗೊತ್ತಾಗಿತ್ತು. ನಂತರ ನನಗೆ ಕರೆ ಮಾಡಿ ಕಳ್ಳತನ ಆಗಿರೊ ಬಗ್ಗೆ ಹೇಳಿದ್ದಳು ಎಂದು ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕಳವಾದ ಎಲ್ಲಾ ಚಿನ್ನಕ್ಕೂ ಬಿಲ್ ಇದೆ


ಕಳ್ಳತನ ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣ ನಾನು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ರಿಗೆ ಕರೆ ಮಾಡಿ ತಿಳಿಸಿದ್ದೆ. ಅವರು ಕೂಡಲೇ ವೈಟ್ ಫಿಲ್ಡ್ ಡಿಸಿಪಿ ಎಸಿಪಿಯವರಿಗೆ ತಿಳಿಸಿದ್ದರು. ಪೊಲೀಸರು ಮೂರು ಗಂಟೆಗೆ ಮನೆ ಬಳಿ ಬಂದು ತನಿಖೆ ನಡೆಸಿದ್ದರು. ನನಗೆ ಪೊಲೀಸರ ಮೇಲೆ ಸಂಪೂರ್ಣ ನಂಬಿಕೆ ಇದೆ. ಆದಷ್ಟು ಬೇಗ ಕಳ್ಳರನ್ನ ಪತ್ತೆ ಮಾಡುತ್ತಾರೆ. ಕಳವಾದ ಎಲ್ಲಾ ಚಿನ್ನಕ್ಕೂ ನಮ್ಮ ಬಳಿ ಬಿಲ್ ಇದೆ. ಒಂದಷ್ಟು ಅಮ್ಮನ ಕಾಲದ ಚಿನ್ನಾಭರಣ ಇದೆ‌. ಹಾಗೇ ಎಲ್ಲದಕ್ಕೂ ನಾನು ಟ್ಯಾಕ್ಸ್ ಕಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಗರೇಟ್ ಮೇಲೆ ಹೊಸ ಅಬಕಾರಿ ಸುಂಕ; ಧೂಮಪಾನಿಗಳಿಗೆ ಮತ್ತಷ್ಟು ದುಬಾರಿ ಜೀವನ – Kannada News | Budget 2026, additional excise duty on Cigarette, prices surge upto Rs 55 per pack

ಧೂಮಪಾನದ ಸಾಂದರ್ಭಿಕ ಚಿತ್ರImage Credit source: TV9 Network

ನವದೆಹಲಿ, ಫೆಬ್ರುವರಿ 2: ಹೆಚ್ಚವರಿ ಅಬಕಾರಿ ಸುಂಕ (Excise duty) ಜಾರಿಗೆ ತಂದ ಬೆನ್ನಲ್ಲೇ ಸಿಗರೇಟ್ ಬೆಲೆ (Cigarettes prices) ಪ್ಯಾಕ್​ಗೆ 22 ರೂನಿಂದ 55 ರೂವರೆಗೂ ಏರಿಕೆ ಆಗಿದೆ. ಸರ್ಕಾರ ಸುಂಕ ಹೇರಿಕೆ ಹಾಕಿದ ಬೆನ್ನಲ್ಲೇ ವಿತರಕರು (distributors) ತಮ್ಮಲ್ಲಿರುವ ಹಳೆಯ ಸಿಗರೇಟು ಪ್ಯಾಕ್​ಗಳಿಗೆ ನಿನ್ನೆ ಭಾನುವಾರದಿಂದಲೇ ಹೊಸ ದರ ಇಟ್ಟು ರೀಟೇಲ್ ಮಾರಾಟಗಾರರಿಗೆ ಮಾರತೊಡಗಿದ್ದಾರೆ. ಸಿಗರೇಟು ತಯಾರಕರು ಇಂದಿನಿಂದ ಹೊಸ ಎಂಆರ್​ಪಿ ದರದ ಸಿಗರೇಟು ಪ್ಯಾಕುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು.

84 ಎಂಎಂ ಉದ್ದದ ಐಟಿಸಿ ಕಿಂಗ್, ಗೋಲ್ಡ್ ಫ್ಲೇಕ್ ಲೈಟ್ಸ್, ವಿಲ್ಸ್ ಕ್ಲಾಸಿಕ್, ಮೈಲ್ಡ್ಸ್ ಇತ್ಯಾದಿ ಸಿಗರೇಟ್​ಗಳ ಪ್ಯಾಕ್ ಬೆಲೆ 170 ರೂನಿಂದ 220-225 ರೂಗೆ ಏರುವ ನಿರೀಕ್ಷೆ ಇದೆ. 97 ಮಿಲಿಮೀಟರ್ ಉದ್ದದ ಕ್ಲಾಸಿಕ್ ಕನೆಕ್ಟ್​ನಂತಹ ಸ್ಲಿಮ್ ಸ್ಇಗರೇಟ್​ಗಳ ಬೆಲೆ 300 ರೂನಿಂದ 350 ರೂಗೆ ಏರುವ ನಿರೀಕ್ಷೆ ಇದೆ. 76ಎಂಎಂ ಉದ್ದದ ವಿಲ್ಸ್ ನೇವಿ ಕಟ್​ನ ಬೆಲೆ ಒಂದು ಪ್ಯಾಕ್​ಗೆ 95 ರೂನಿಂದ 120 ರೂಗೆ ಏರುವ ನಿರೀಕ್ಷೆ ಇದೆ.

ಇದನ್ನು ಓದಿ: ಟ್ಯಾಕ್ಸ್ ಪಾಲು ಕರ್ನಾಟಕಕ್ಕೆ ಅತಿಹೆಚ್ಚು ಏರಿಕೆ ಆಗಿದ್ದು ಯಾಕೆ? ಇಲ್ಲಿದೆ ಕಾರಣ, ಮತ್ತು ವಿವಿಧ ರಾಜ್ಯಗಳ ತೆರಿಗೆ ಪಟ್ಟಿ

ಸಣ್ಣ ಅಂಗಡಿಗಳಿಗೆ ತೊಂದರೆ…

ಭಾರತದಲ್ಲಿ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳಿಗೆ ಸುಮಾರು 8,000-9,000 ಸ್ಟಾಕಿಸ್ಟ್ಸ್ ಇದ್ದಾರೆ. 4.5 ಲಕ್ಷ ವಿತರಕರು, 1.3 ಕೋಟಿ ರೀಟೇಲ್ ಮಾರಾಟಗಾರರಿದ್ದಾರೆ. ಹೆಚ್ಚಿನ ಸಣ್ಣ ಅಂಗಡಿಗಳಿಗೆ ಸಿಗರೇಟ್ ಮಾರಾಟವೇ ಪ್ರಮುಖ ಆದಾಯ ಮೂಲವಾಗಿದೆ. ಸರ್ಕಾರವು ಸಿಗರೇಟು ಹಾಗು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದರೆ ನಕಲಿ ಮಾಲುಗಳು ಅಥವಾ ಕಳ್ಳ ಮಾಲುಗಳು ಮಾರುಕಟ್ಟೆ ಪ್ರವೇಶಿಸುವ ಅಪಾಯ ಇರುತ್ತದೆ. ಇದರಿಂದ ರೀಟೇಲ್ ವ್ಯಾಪಾರಿಗಳ ಬದುಕಿಗೆ ತೊಂದರೆ ಆಗಬಹುದು ಎಂದು ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟವಾದ ಎಐಸಿಪಿಡಿಎಫ್ ಆತಂಕ ವ್ಯಕ್ತಪಡಿಸಿದೆ.

ಸಿಗರೇಟ್ ಮೇಲೆ ಎಷ್ಟಿದೆ ಟ್ಯಾಕ್ಸ್?

ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳನ್ನು ಸಿನ್ ಗೂಡ್ಸ್ ಅಥವಾ ಪಾಪದ ಸರಕುಗಳೆಂದು ಪರಿಗಣಿಸಲಾಗುತ್ತದೆ. ಹಳೆಯ ಜಿಎಸ್​ಟಿ ವ್ಯವಸ್ಥೆಯಲ್ಲಿ ಪಾಪದ ಸರಕುಗಳಿಗೆ ಶೇ. 28 ಜಿಎಸ್​ಟಿ ಹಾಗೂ ಹೆಚ್ಚುವರಿ ಸೆಸ್, ಅಬಕಾರಿ ಸುಂಕಗಳನ್ನು ವಿಧಿಸಲಾಗುತ್ತಿತ್ತು. ಹೊಸ ಜಿಎಸ್​ಟಿ ಸಿಸ್ಟಂನಲ್ಲಿ ತಂಬಾಕು ಉತ್ಪನ್ನಗಳಿಗೆ ಶೇ. 40ರಷ್ಟು ಜಿಎಸ್​ಟಿ ಹಾಗೂ ಹೆಚ್ಚುವರಿ ಅಬಕಾರಿ ಸುಂಕ ಹಾಕಾಗುತ್ತದೆ.

ಇದನ್ನೂ ಓದಿ: ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಈ ವರ್ಷ 18 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್

ಫಿಲ್ಟರ್​ಲೆಸ್ ಸಿಗರೇಟುಗಳಿಗೆ ಒಂದು ಸಿಗರೇಟ್​ಗೆ 2.05ರಷ್ಟು ಹೆಚ್ಚುವರಿ ಸುಂಕ ಇರುತ್ತದೆ. ಚಿಕ್ಕ ಫಿಲ್ಟರ್ ಸಿಗರೇಟ್​ಗೆ ಒಂದಕ್ಕೆ 2.10 ರೂ ಅಬಕಾರಿ ಸುಂಕ ಹಾಕಲಾಗುತ್ತಿದೆ. ಇನ್ನೂ ದೊಡ್ಡ ಸಿಗರೇಟುಗಳಿಗೆ 3.6 ರೂನಿಂದ 8.50 ರೂವರೆಗೆ ಅಬಕಾರಿ ಸುಂಕ ಇರುತ್ತದೆ. ಇದು ಶೇ 40 ಜಿಎಸ್​ಟಿಗೆ ಹೆಚ್ಚುವರಿಯಾಗಿ ವಿಧಿಸುವ ಸುಂಕ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆ ಇದೆ ಎಂಬುದನ್ನು ದೇಹ ನೀಡುವ ಈ 6 ಲಕ್ಷಣಗಳ ಮೂಲಕ ತಿಳಿಯಬಹುದು! – Kannada News | Protein Deficiency: How Diet Can Help

ಸಾಮಾನ್ಯವಾಗಿ ಪ್ರೋಟೀನ್ (Protein) ದೇಹದ ಬಿಲ್ಡಿಂಗ್ ಬ್ಲಾಕ್ ಆಗಿ ಕೆಲಸ ಮಾಡುತ್ತದೆ ಎಂಬುದು ಕೆಲವರಿಗೆ ತಿಳಿದಿರುವುದಿಲ್ಲ. ಹೌದು, ಮನೆ ಕಟ್ಟಲು ಇಟ್ಟಿಗೆಗಳು ಬೇಕಾದಂತೆ, ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಪ್ರೋಟೀನ್ ಅಗತ್ಯವಿದೆ. ಆದರೆ ನಮ್ಮಲ್ಲಿ ಅನೇಕರು ಪ್ರೋಟೀನ್‌ಗಿಂತ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನಿಂದ ಸಮೃದ್ಧವಾಗಿರುವ ಆಹಾರಗಳಿಗೆ ಆದ್ಯತೆ ನೀಡುತ್ತಾರೆ. ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆಯಾದರೆ, ಸ್ನಾಯುಗಳು ಮಾತ್ರವಲ್ಲದೆ ರೋಗನಿರೋಧಕ ಶಕ್ತಿ, ಮಾನಸಿಕ ಸ್ಥಿತಿ ಮತ್ತು ಅಂತಿಮವಾಗಿ ನಿಮ್ಮ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ದೇಹದಲ್ಲಿ ಪ್ರೋಟೀನ್ ಕಡಿಮೆ ಆದಾಗ ಕಂಡುಬರುವ ಲಕ್ಷಣಗಳನ್ನು ಸರಿಯಾಗಿ ಗುರುತಿಸಿ ಆಹಾರಕ್ರಮಗಳನ್ನು ಬದಲಾಯಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಪ್ರೋಟೀನ್ ಕಡಿಮೆ ಆದಾಗ ಕಂಡುಬರುವ ಲಕ್ಷಣಗಳು:

ದೇಹವು ಆಹಾರದಿಂದ ಅಗತ್ಯವಿರುವ ಪ್ರೋಟೀನ್ ಪಡೆದುಕೊಳ್ಳಲು ಸಾಧ್ಯವಾಗದಿದ್ದಾಗ, ಅದು ಸ್ನಾಯುಗಳಲ್ಲಿ ಸಂಗ್ರಹವಾಗಿರುವ ಪ್ರೋಟೀನ್ ಅನ್ನು ಬಳಸಲು ಪ್ರಾರಂಭಿಸುತ್ತದೆ. ಆಗ ಸ್ನಾಯುಗಳು ದುರ್ಬಲಗೊಳ್ಳುತ್ತದೆ. ಅದರಲ್ಲಿಯೂ ವಯಸ್ಸಾದವರು ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಸೇವಿಸದಿದ್ದರೆ, ದೇಹದಲ್ಲಿನ ಶಕ್ತಿ ಕಡಿಮೆಯಾಗುತ್ತದೆ ಮತ್ತು ಬೇಗನೆ ದಣಿವಾಗುತ್ತದೆ. ಅಷ್ಟೇಅಲ್ಲ, ದೇಹದಲ್ಲಿ ರೋಗಗಳ ವಿರುದ್ಧ ಹೋರಾಡುವುದಕ್ಕೆ ಪ್ರತಿಕಾಯಗಳು ಸಹ ಪ್ರೋಟೀನ್‌ನಿಂದ ಮಾಡಲ್ಪಟ್ಟಿದ್ದು ಇದರ ಕೊರತೆಯಾದಾಗ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಪರಿಣಾಮವಾಗಿ, ಆಗಾಗ ಶೀತ, ಕೆಮ್ಮು ಮತ್ತು ಸೋಂಕುಗಳು ಕಂಡುಬರುತ್ತದೆ. ಸಣ್ಣ ಗಾಯಗಳಾದರೆ ಗುಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.

ಮೂಳೆಗಳ ವಿಷಯಕ್ಕೆ ಬಂದರೆ, ಎಲ್ಲರೂ ಕ್ಯಾಲ್ಸಿಯಂ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರೋಟೀನ್ ತುಂಬಾ ಮುಖ್ಯವಾಗುತ್ತದೆ. ಜೊತೆಗೆ ಚರ್ಮ, ಕೂದಲು ಮತ್ತು ಉಗುರುಗಳು ಕೆರಾಟಿನ್ ಮತ್ತು ಕಾಲಜನ್ ನಂತಹ ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿದ್ದು, ಆಹಾರದಲ್ಲಿ ಪ್ರೋಟೀನ್ ಕೊರತೆಯಾದರೆ ಕೂದಲು ದುರ್ಬಲವಾಗುವುದು, ಬಣ್ಣ ಬದಲಾವಣೆ, ಒಣ ಚರ್ಮ ಮತ್ತು ಬಿರುಕುಗಳು ಕಾಣಿಸಿಕೊಳ್ಳುವಂತಹ ಲಕ್ಷಣಗಳು ಕಂಡುಬರುತ್ತವೆ. ಉಗುರುಗಳು ಸಹ ಸುಲಭವಾಗಿ ಮುರಿಯುತ್ತವೆ. ಪ್ರೋಟೀನ್ ನಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ತಿಂದ ಸ್ವಲ್ಪ ಸಮಯದ ನಂತರ ನಿಮಗೆ ಮತ್ತೆ ಹಸಿವಾದರೆ ಅಥವಾ ಸಿಹಿತಿಂಡಿಗಳ ಹಂಬಲವಾದರೆ, ನಿಮ್ಮ ದೇಹಕ್ಕೆ ಸಾಕಷ್ಟು ಪ್ರೋಟೀನ್ ಸಿಗುತ್ತಿಲ್ಲ ಎಂದರ್ಥ. ನೀವು ಬಹಳಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದಾಗ ಈ ಸಮಸ್ಯೆ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೆಲ್ಲದರ ಜೊತೆಗೆ ಆಲಸ್ಯ ಹೆಚ್ಚಾಗುವುದಕ್ಕೂ ಕೂಡ ಇದೆ ಕಾರಣ.

ಇದನ್ನೂ ಓದಿ: ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ, ಇದರ ಆರಂಭಿಕ ಲಕ್ಷಣಗಳು ಯಾವುವು?

ಯಾವ ಆಹಾರದಲ್ಲಿ ಪ್ರೋಟೀನ್ ಅಂಶ ಅಧಿಕವಾಗಿರುತ್ತದೆ?

ಚಿಯಾ ಬೀಜ, ಕುಂಬಳಕಾಯಿ ಬೀಜಗಳು, ಹಾಲು ಮತ್ತು ಮೊಸರು ಸೇವನೆ ಮಾಡುವುದರಿಂದ ಪ್ರೋಟೀನ್ ಕೊರತೆಯನ್ನು ನೀಗಿಸಿಕೊಳ್ಳಬಹುದು. ಇವು ನೈಸರ್ಗಿಕವಾಗಿ ನಮಗೆ ಶಕ್ತಿಯನ್ನು ಒದಗಿಸುತ್ತವೆ. ನಮ್ಮ ಆರೋಗ್ಯ ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಪ್ರೋಟೀನ್ ಕೊರತೆಯನ್ನು ಕೇವಲ ಸಮಸ್ಯೆಯಾಗಿ ಮಾತ್ರವಲ್ಲದೆ ದೇಹದ ಮೂಲಭೂತ ಅವಶ್ಯಕತೆಯಾಗಿ ಗುರುತಿಸಬೇಕು. ಇಂದಿನಿಂದಲೇ ನಿಮ್ಮ ಊಟದಲ್ಲಿ ಪ್ರೋಟೀನ್ ಸೇರಿಸಲು ಪ್ರಾರಂಭಿಸಿ. ಆರೋಗ್ಯ ಹಾಳಾಗುವುದನ್ನು ತಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version