ವಿಚ್ಛೇದನ ಪ್ರಕರಣದಲ್ಲಿ ಪತಿಯ ಕಂಪನಿ ಮಾಲೀಕರಿಗೆ ಹೆಂಡತಿ ಪತ್ರ ಬರೆಯುವುದೇಕೆ? ಸುಪ್ರೀಂ ಕೋರ್ಟ್ ತರಾಟೆ – Kannada News | Why wife involve her husbands employer in Divorce Case? Supreme Court calls it as worst practice

ನವದೆಹಲಿ, ಜುಲೈ 21: ದಂಪತಿಗಳ ನಡುವಿನ ವೈವಾಹಿಕ ವಿವಾದ ಅಥವಾ ವಿಚ್ಛೇದನ ಪ್ರಕರಣಗಳ ಸಂದರ್ಭದಲ್ಲಿ ಪತಿಯ ಉದ್ಯೋಗದಾತ ಕಂಪನಿ ಅಥವಾ ಮೇಲಧಿಕಾರಿಗಳಿಗೆ ಪತ್ನಿ ದೂರು ಪತ್ರ ಬರೆಯುವ ಇತ್ತೀಚಿನ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ದೂರುಗಳಿಂದ ಪತಿಯ ಕೆಲಸವೇ ಹೊರಟುಹೋಗಬಹುದು. ಇದರಿಂದ ಪತ್ನಿಗೆ ಸಿಗಬೇಕಾದ ಜೀವನಾಂಶದ ಮೇಲೆ ಕೂಡ ತೀವ್ರ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಏನಿದು ಪ್ರಕರಣ? ಪತ್ನಿ ದೂರು ನೀಡಿದ್ದೇಕೆ? ಎಂಬ ಕುರಿತಾದ ಮಾಹಿತಿ ಇಲ್ಲಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಪೀಠವು ಈ ಬಗ್ಗೆ ವಿಚಾರಣೆ ನಡೆಸಿದೆ. ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗರತ್ನ ಅವರು, “ವೈವಾಹಿಕ ವಿವಾದಗಳ ಸಂದರ್ಭದಲ್ಲಿ ಪತಿಯ ಉದ್ಯೋಗದಾತರಿಗೆ ದೂರಿನ ಪತ್ರ ಬರೆಯುವುದು ಪತ್ನಿ ಮಾಡುವ ಅತ್ಯಂತ ಕೆಟ್ಟ ಕೆಲಸಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ. ವಿಚ್ಛೇದನ ಕೋರುವುದು ಕಾನೂನಾತ್ಮಕ ಹಕ್ಕು. ಆದರೆ ಪತಿಯ ಜೀವನೋಪಾಯವನ್ನೇ ಕಸಿದುಕೊಳ್ಳುವುದು ಅಥವಾ ಆತನ ಉದ್ಯೋಗಕ್ಕೆ ಕಂಟಕ ತರುವುದು ಅತ್ಯಂತ ಅಪಾಯಕಾರಿ ನಡವಳಿಕೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ಎಚ್ಚರಿಕೆ:

ಪತಿ ಕೆಲಸ ಮಾಡುವ ಕಂಪನಿ ಅಥವಾ ಇಲಾಖೆಗೆ ದೂರು ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, “ವೈವಾಹಿಕ ವಿವಾದದ ಸಮಯದಲ್ಲಿ ಪತಿಯ ಉದ್ಯೋಗದಾತರಿಗೆ ಪತ್ರ ಬರೆಯುವುದು ಪತ್ನಿ ಮಾಡಬಹುದಾದ ಅತ್ಯಂತ ಕೆಟ್ಟ ಕೆಲಸಗಳಲ್ಲಿ ಒಂದಾಗಿದೆ. ಇದರಿಂದ ಗಂಡ ತನ್ನ ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆ. ಗಂಡನಿಗೆ ಕೆಲಸವೇ ಇಲ್ಲದಿದ್ದರೆ ಭವಿಷ್ಯದಲ್ಲಿ ಆತನಿಂದ ಪಡೆಯಬಹುದಾದ ಜೀವನಾಂಶಕ್ಕೂ ಯಾವುದೇ ಆಧಾರ ಉಳಿಯುವುದಿಲ್ಲ. ಇದರಿಂದ ಪತ್ನಿಗೇ ತೊಂದರೆಯಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ನ್ಯಾಯಾಲಯದ ದಾರಿ ತಪ್ಪಿಸಬೇಡಿ’; ಕಾಮಿಡಿಯನ್ ಸಮಯ್ ರೈನಾಗೆ 3 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್!

ಇದಕ್ಕೆ ಸ್ಪಷ್ಟನೆ ನೀಡಿದ ಮಹಿಳೆಯ ವಕೀಲರು, “ವಾಯುಪಡೆಗೆ ಸೇರಿದ ಹೆಲ್ಮೆಟ್ ಅನ್ನು ಪತ್ನಿ ಮತ್ತು ಆಕೆಯ ಸಹೋದರ ಕದ್ದಿದ್ದಾರೆ ಎಂದು ಪತಿಯು ಈ ಹಿಂದೆ ಸುಳ್ಳು ದೂರು ನೀಡಿದ್ದನು. ಆ ಹೆಲ್ಮೆಟ್ ಎಲ್ಲಿದೆ ಎಂದು ತಿಳಿಯುವ ಉದ್ದೇಶದಿಂದಷ್ಟೇ ವಾಯುಪಡೆಗೆ ಪತ್ರ ಬರೆಯಲಾಗಿತ್ತು” ಎಂದು ವಾದಿಸಿದರು.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದಂಪತಿಯ ನಡುವಿನ ಎಲ್ಲಾ ವಿವಾದಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸಲು ಪ್ರಕರಣವನ್ನು ‘ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ’ ಉಲ್ಲೇಖಿಸಿದೆ. ಅಲ್ಲದೆ, ಎಲ್ಲಾ ಆರೋಪಗಳನ್ನು ಹಿಂಪಡೆದು ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಮಹಿಳೆಗೆ ಸಲಹೆ ನೀಡುವಂತೆ ಆಕೆಯ ಪರ ವಕೀಲರಿಗೆ ನ್ಯಾಯಪೀಠ ಸೂಚಿಸಿದೆ.

ಇದನ್ನೂ ಓದಿ: 9ನೇ ತರಗತಿಯಿಂದಲೇ ಏಕೆ?; ಸಿಬಿಎಸ್​ಇ ತ್ರಿಭಾಷಾ ನೀತಿಗೆ ಸುಪ್ರೀಂ ಕೋರ್ಟ್ ಆಕ್ಷೇಪ

ಈ ಪ್ರಕರಣದ ಹಿನ್ನೆಲೆ ಏನು?:

ಅಸ್ಸಾಂನಲ್ಲಿ ಪತಿಯ ಸ್ನೇಹಿತ ತನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ವರ್ಗಾಯಿಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಪ್ರಸಂಗ ನಡೆಯಿತು. ಅಸ್ಸಾಂನಲ್ಲಿ ಪತಿಯ ಸ್ನೇಹಿತ ತನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ವರ್ಗಾಯಿಸುವಂತೆ ಕೋರಿ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಾನು ಈಗಾಗಲೇ ಗಾಜಿಯಾಬಾದ್‌ನಲ್ಲಿ ಪತಿಯ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿರುವುದಾಗಿ ಆಕೆ ವಾದಿಸಿದ್ದರು.

ಅರ್ಜಿದಾರ ಮಹಿಳೆಯ ಪತಿ ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದು, ಅವರು ಸೇವಾ ನಿಯಮಗಳನ್ನು ಉಲ್ಲಂಘಿಸಿ ಸ್ವತಂತ್ರ ಉದ್ಯಮ ನಡೆಸುತ್ತಿದ್ದಾರೆ ಎಂದು ಆ ಮಹಿಳೆಯು ದೆಹಲಿಯ ವಾಯುಪಡೆ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆಕೆಯ ಪತಿಯ ಸಹೋದ್ಯೋಗಿ ಹಾಗೂ ಸ್ನೇಹಿತ ಆ ಮಹಿಳೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಪುಟ ಸಭೆ ಅನುಮೋದನೆ; ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಅಸ್ತು! – Kannada News | Karnataka Cabinet Approves 15,000 Teacher Posts and Key Development Projects

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಒಟ್ಟು 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ರವಿವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳ ಕುರಿತು ಮಾಹಿತಿ ಹಂಚಿಕೊಂಡರು.

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) ಕೆಲವು ಬೋಧನಾ ಹುದ್ದೆಗಳಿಗೆ ನೇಮಕಾತಿ ನಿಯಮ-2026ರ ಕರಡು ಅಧಿಸೂಚನೆಯನ್ನು ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದ್ದು, ಅದರಂತೆ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದು ಅವರು ಪ್ರಕಟಿಸಿದರು.

ಸಂಪುಟ ಸಭೆಯ ಇತರೆ ಪ್ರಮುಖ ತೀರ್ಮಾನಗಳು:

  • ಬೆಂಗಳೂರಿನ ಲೋಕಭವನ ಆವರಣದಲ್ಲಿ ರಾಜ್ಯಪಾಲರ ಆಡಳಿತ ಕಚೇರಿ, ವಿಶೇಷ ಕಾರ್ಯದರ್ಶಿಗಳ ವಸತಿ ಗೃಹ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗಳಿಗೆ 27 ಕೋಟಿ ವೆಚ್ಚದ ಯೋಜನೆಯನ್ನು ಸಚಿವ ಸಂಪುಟ ಅನುಮೋದಿಸಿದೆ
  • ಅಲೆಮಾರಿ ಮತ್ತು ಅರೆ ಅಲೆಮಾರಿ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. 10 ಲಕ್ಷ ರೂ. ಘಟಕ ವೆಚ್ಚದಲ್ಲಿ 380 ಚದರ ಅಡಿಗಳ ವಿಸ್ತೀರ್ಣದ ಮನೆಗಳನ್ನು ನಿರ್ಮಿಸಿಕೊಡಲಾಗುವುದು.
  • ರಾಯಚೂರಿನಲ್ಲಿರುವ ರಾಯಚೂರು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಡಿ (IIIT) ಎಐ (AI) ಶ್ರೇಷ್ಠತಾ ಕೇಂದ್ರವನ್ನು 5 ವರ್ಷಗಳ ಅವಧಿಯಲ್ಲಿ ಸ್ಥಾಪಿಸಲು ಒಟ್ಟು 12 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
  • ಬೆಂಗಳೂರಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್ (MBBS) ಮತ್ತು ಬಿಡಿಎಸ್ (BDS) ವಿದ್ಯಾರ್ಥಿಗಳಿಗೆ ಬಾಲಕರ ವಸತಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 83.50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದಿಸಲಾಗಿದೆ.
  • 2025-26ನೇ ಸಾಲಿನ ಮುಖ್ಯಮಂತ್ರಿಯವರ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ SH-156 ಹಾಗೂ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು.
  • ಕಪಿಲಾ ನದಿಗೆ ನಂಜನಗೂಡು ನಗರ ವ್ಯಾಪ್ತಿಯ ಮಲಿನ ನೀರು ಸೇರದಂತೆ ಹಾಗೂ ಪ್ರವಾಹವನ್ನು ತಡೆಯಲು 70 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಹೋಬಳಿ ನೀರಾವರಿ ಜಲಮಂಡಳಿಯ 116 ಕೆರೆಗಳು ಹಾಗೂ ಗಾಯತ್ರಿ ಜಲಾಶಯದ ಕುಡಿಯುವ ನೀರು ತುಂಬಿಸುವ ಮತ್ತು ಅಂತರ್ಜಲ ಅಭಿವೃದ್ಧಿಪಡಿಸುವ 244 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ.

ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರನ್ನು ಅಮಾನತಿನಲ್ಲಿರಿಸಿರುವ ರಾಜ್ಯಪಾಲರ ಆದೇಶವನ್ನು ಸಂಪುಟ ಸಭೆಯು ಅನುಮೋದಿಸಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 3:22 pm, Tue, 21 July 26

Source link

Ramlingareddy Visit Almatti Dam: ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ – Kannada News | Water Resources Minister Ramlingareddy Inspects Almatti Dam Operations

ವಿಜಯಪುರ, ಜುಲೈ 21: ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನಲ್ಲಿರುವ ಐತಿಹಾಸಿಕ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಎಂದೂ ಕರೆಯಲ್ಪಡುವ ಈ ಅಣೆಕಟ್ಟಿನ ಪ್ರಸ್ತುತ ಸ್ಥಿತಿಗತಿಗಳನ್ನು ಮತ್ತು ಅದರ ಗೇಟ್‌ಗಳ ನಿರ್ವಹಣೆಯನ್ನು ಸಚಿವರು ವೀಕ್ಷಿಸಿದರು. ಅವರು ಡ್ಯಾಂ ಗೇಟ್‌ಗಳ ಮುಂಭಾಗದಲ್ಲಿ ನಿಂತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು.

ಸಚಿವರ ಸಮ್ಮುಖದಲ್ಲಿ ಜಲಾಶಯದಿಂದ ನೀರನ್ನು ಗೇಟ್‌ಗಳ ಮೂಲಕ ಹೊರಬಿಡುವ ಪ್ರಕ್ರಿಯೆ ನಡೆಯಿತು. ಈ ನೀರು ಬಿಡುಗಡೆಯ ಸಂಪೂರ್ಣ ಪ್ರಕ್ರಿಯೆಯನ್ನು ರಾಮಲಿಂಗಾರೆಡ್ಡಿ ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ, ಸ್ಥಳೀಯ ನಿವಾಸಿಗಳು ಮತ್ತು ರೈತರು ಸೇರಿದಂತೆ ಸಾರ್ವಜನಿಕರು ಸಚಿವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಮಂಡಿಸಿದರು. ಮುಖ್ಯಮಂತ್ರಿಯವರು ಈ ಹಿಂದೆ ನೀಡಿದ್ದ ಕೆಲವು ಭರವಸೆಗಳ ಬಗ್ಗೆ ಮತ್ತು ಅವುಗಳ ಅನುಷ್ಠಾನದ ಕುರಿತು ಚರ್ಚೆ ನಡೆಯಿತು. ಅಲ್ಲದೆ, ಸ್ಥಳೀಯರಿಗೆ ಕಾಲೇಜು ನಿರ್ಮಾಣದಂತಹ ಅಭಿವೃದ್ಧಿ ಬೇಡಿಕೆಗಳು ಮತ್ತು ನದಿಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಸಹ ಸಚಿವರ ಗಮನಕ್ಕೆ ತರಲಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಂಬಲ್ಡನ್ ಕೋರ್ಟ್‌ನಲ್ಲಿ ರಾರಾಜಿಸುವ ‘ಮೇಡ್ ಇನ್ ಇಂಡಿಯಾ’!

ಟೆನಿಸ್ ಲೋಕದ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಟೂರ್ನಿ ವಿಂಬಲ್ಡನ್, ತನ್ನದೇ ಆದ ಕೆಲವು ಕಟ್ಟುನಿಟ್ಟಿನ ರಾಜಮನೆತನದ ಸಂಪ್ರದಾಯಗಳಿಗೆ ಹೆಸರುವಾಸಿ. ಆಟಗಾರರು ಕಡ್ಡಾಯವಾಗಿ ಬಿಳಿ ಬಣ್ಣದ ಉಡುಪನ್ನೇ ಧರಿಸಬೇಕು ಎಂಬ ನಿಯಮದಿಂದ ಹಿಡಿದು, ಗ್ಯಾಲರಿಯಲ್ಲಿ ರಾಜಮನೆತನದ ಗಣ್ಯರ ಉಪಸ್ಥಿತಿಯವರೆಗೆ ಇಲ್ಲಿನ ಪ್ರತಿಯೊಂದು ಸಂಗತಿಯೂ ಇತಿಹಾಸದ ಪುಟಗಳಂತೆ ಭಾಸವಾಗುತ್ತದೆ. ಆದರೆ, ಈ ಐತಿಹಾಸಿಕ ಕ್ರೀಡಾಕೂಟದಲ್ಲಿ ಭಾರತದ ಹೆಜ್ಜೆಯ ಗುರುತೂ ಇದೆ ಎಂಬುದು ಎಷ್ಟು ಜನರಿಗೆ ಗೊತ್ತು?

ಹೌದು, ನೋವಾಕ್ ಜೊಕೊವಿಚ್, ಯಾನಿಕ್ ಸಿನ್ನರ್, ಕಾರ್ಲೋಸ್ ಅಲ್ಕರಾಝ್ ಅವರಂತಹ ಆಟಗಾರರು ಪಂದ್ಯದ ಮಧ್ಯೆ ಬೆವರು ಒರೆಸಿಕೊಳ್ಳಲು ಬಳಸುವ ಆ ಐಕಾನಿಕ್ ಹಸಿರು ಮತ್ತು ನೇರಳೆ ಬಣ್ಣದ ವಿಂಬಲ್ಡನ್ ಟವೆಲ್‌ಗಳು ಸಂಪೂರ್ಣವಾಗಿ ತಯಾರಾಗುವುದು ಭಾರತದ ಗುಜರಾತ್‌ನ ವಾಪಿ ಎಂಬ ನಗರದಲ್ಲಿ!

ಮ್ಯಾಂಚೆಸ್ಟರ್‌ನಿಂದ ಗುಜರಾತ್‌ಗೆ ಬೆಳೆದ ಇತಿಹಾಸ!

ಬ್ರಿಟನ್‌ನ ಐಷಾರಾಮಿ ಟೆಕ್ಸ್‌ಟೈಲ್ ಬ್ರಾಂಡ್ ಆದ ‘ಕ್ರಿಸ್ಟಿ’ 1987 ರಿಂದ ವಿಂಬಲ್ಡನ್ ಟೂರ್ನಿಗೆ ಅಧಿಕೃತ ಟವೆಲ್ ಪೂರೈಕೆದಾರರು. ಆದರೆ, 2006 ರಲ್ಲಿ ಭಾರತದ ಜವಳಿ ದೈತ್ಯ ‘ವೆಲ್ಸ್‌ಪನ್ ಲಿವಿಂಗ್ ಲಿಮಿಟೆಡ್’ ಸಂಸ್ಥೆಯು ಈ ಕ್ರಿಸ್ಟಿ ಬ್ರಾಂಡ್ ಅನ್ನು ಖರೀದಿಸಿತು.

ತದನಂತರ, 2010 ರಲ್ಲಿ ಟವೆಲ್ ಉತ್ಪಾದನಾ ಘಟಕವನ್ನು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಿಂದ ಗುಜರಾತ್‌ನ ವಾಪಿ ಮತ್ತು ಅಂಜಾರ್‌ಗೆ ಸಂಪೂರ್ಣವಾಗಿ ಸ್ಥಳಾಂತರಿಸಲಾಯಿತು. ಅಂದಿನಿಂದ ಇಂದಿನವರೆಗೆ, ವಿಂಬಲ್ಡನ್‌ನ ಪ್ರತಿಯೊಂದು ಅಧಿಕೃತ ಟವೆಲ್ ಕೂಡ ಭಾರತದಲ್ಲೇ ನೇಯಲಾಗುತ್ತಿದೆ.

ವಿನ್ಯಾಸ ಬ್ರಿಟನ್‌ನದ್ದು, ತಯಾರಿಕೆ ಭಾರತದ್ದು!

ಈ ಟವೆಲ್‌ಗಳ ವಿನ್ಯಾಸದ ಪ್ರಕ್ರಿಯೆಯು ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಕ್ರಿಸ್ಟಿ ಸ್ಟುಡಿಯೋದಲ್ಲಿ ನಡೆಯುತ್ತದೆ. ಆದರೆ ಅಲ್ಲಿಂದ ಮುಂದೆ ಹತ್ತಿ ಸಂಗ್ರಹಣೆ, ನೂಲು ತಯಾರಿಕೆ, ಅತ್ಯಾಧುನಿಕ ತಂತ್ರಜ್ಞಾನದ ನೇಯ್ಗೆ ಮತ್ತು ಅಂತಿಮ ಪ್ಯಾಕಿಂಗ್‌ವರೆಗೆ ಎಲ್ಲವೂ ಗುಜರಾತ್‌ನಲ್ಲೇ ನಡೆಯುತ್ತದೆ.

ಈ ಟವೆಲ್‌ಗಳನ್ನು ತಯಾರಿಸಲು ‘ಹೈಗ್ರೋ ಕಾಟನ್’ ಎಂಬ ವಿಶೇಷ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಟವೆಲ್‌ಗೆ ಗರಿಷ್ಠ ಮೃದುತ್ವ ಮತ್ತು ನೀರನ್ನು ಹೀರಿಕೊಳ್ಳುವ ಅದ್ಭುತ ಸಾಮರ್ಥ್ಯವನ್ನು ನೀಡುತ್ತದೆ. ಟೂರ್ನಿ ಆರಂಭವಾಗುವ 18 ತಿಂಗಳು ಮುಂಚಿತವಾಗಿಯೇ ಇದರ ಯೋಜನೆ ಮತ್ತು ಸಿದ್ಧತೆಗಳು ಭಾರತದಲ್ಲಿ ಆರಂಭವಾಗುತ್ತವೆ.

ಆಟಗಾರರ ನೆನಪಿನ ಕಾಣಿಕೆ:

ವಿಂಬಲ್ಡನ್ ಟವೆಲ್‌ಗಳು ಕೇವಲ ಬಳಸುವ ವಸ್ತುವಲ್ಲ, ಅವು ಜಾಗತಿಕ ಮಟ್ಟದ ‘ವಿಶೇಷ ಸಂಗ್ರಹ’ ವಸ್ತುವಾಗಿ ಮಾರ್ಪಟ್ಟಿದೆ. ಪಂದ್ಯ ಮುಗಿದ ನಂತರ ಆಟಗಾರರು ಈ ಟವೆಲ್‌ಗಳನ್ನು ತಮ್ಮ ಕಿಟ್ ಬ್ಯಾಗ್‌ನಲ್ಲಿ ಇಟ್ಟುಕೊಂಡು ಮನೆಗೆ ಕೊಂಡೊಯ್ಯುವುದು ಒಂದು ಸಂಪ್ರದಾಯವಾಗಿ ಬೆಳೆದಿದೆ. ಇದೇ ಕಾರಣಕ್ಕೆ ಟೂರ್ನಿಯ ಅವಧಿಯಲ್ಲಿ ಪ್ರತಿದಿನ ಸುಮಾರು ಟವೆಲ್‌ಗಳು ಕೋರ್ಟ್‌ನಿಂದ ಮಾಯವಾಗುತ್ತವೆ.

“ನಾನು ವಿಂಬಲ್ಡನ್‌ನಿಂದ ಈ ಟವೆಲ್‌ಗಳನ್ನು ಮನೆಗೆ ಕೊಂಡೊಯ್ಯಲೆಂದೇ ನನ್ನ ಬ್ಯಾಗ್‌ನಲ್ಲಿ ಹೆಚ್ಚುವರಿ ಜಾಗವನ್ನು ಇಟ್ಟುಕೊಂಡು ಬರುತ್ತೇನೆ. ನನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ಇದು ಅತ್ಯುತ್ತಮ ಉಡುಗೊರೆ” ಎಂದು ಈ ಹಿಂದೊಮ್ಮೆ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಚ್ ಹೇಳಿದ್ದರು. ಈ ಹೇಳಿಕೆಯಲ್ಲೇ ಭಾರತದಲ್ಲಿ ತಯಾರಾರುವ ಈ ಟವೆಲ್​ನ ಗುಣಮಟ್ಟ ಮತ್ತು ಮಹತ್ವ ಏನೆಂಬುದು ತಿಳಿಯಬಹುದು.

ಒಟ್ಟಾರೆಯಾಗಿ, ವಿಂಬಲ್ಡನ್‌ನ ಹಸಿರು ಹುಲ್ಲಿನ ಕೋರ್ಟ್‌ನಲ್ಲಿ ಜಗತ್ತಿನ ಶ್ರೇಷ್ಠ ಟೆನಿಸ್ ತಾರೆಯರು ಜಿದ್ದಾಜಿದ್ದಿನ ಪಂದ್ಯ ಆಡುವಾಗ, ಅವರ ಬೆವರಿನ ಹನಿಗಳನ್ನು ಒರೆಸುವ ಈ ಟವೆಲ್‌ಗಳು ಕೇವಲ ಒಂದು ಜವಳಿ ಉತ್ಪನ್ನವಲ್ಲ. ಅದು ಭಾರತದ ನುರಿತ ನೇಕಾರರ ಶ್ರಮ, ಗುಜರಾತ್‌ನ ಕೈಗಾರಿಕಾ ಕೌಶಲ್ಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉದ್ಯಮ ಸಾಧಿಸಿದ ಅಪ್ರತಿಮ ಯಶಸ್ಸಿನ ಸಂಕೇತ.

ಇದನ್ನೂ ಓದಿ: ಒಂದೇ ಒಂದು ಗೋಲು… ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್!

ಲಂಡನ್‌ನ ಪ್ರತಿಷ್ಠಿತ ಕ್ರೀಡಾಂಗಣದಲ್ಲಿ ಪ್ರತಿಬಾರಿಯೂ ಆಟಗಾರರು ಈ ಟವೆಲ್ ಬಳಸುವಾಗ, ವಾಪಿ ನಗರದ ಮಣ್ಣಿನ ಹೆಗ್ಗುರುತು ಅಲ್ಲಿ ರಾರಾಜಿಸುತ್ತಿರುತ್ತದೆ. ಇದು ಕೇವಲ ಬ್ರಾಂಡ್ ಒಂದರ ಬೆಳವಣಿಗೆಯಲ್ಲ, ಬದಲಿಗೆ ಜಾಗತಿಕ ಗುಣಮಟ್ಟಕ್ಕೆ ಭಾರತವೇ ಮುಂಚೂಣಿ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ!

Source link

ಮೂರು ದಿನ ಆ ಹೆಂಡತಿ ಮನೆ, ಮೂರು ದಿನ ಈ ಹೆಂಡತಿ ಮನೆ, ಅಂತೂ ಇಬ್ಬರು ಹೆಂಡತಿಯರ ಕಗ್ಗಂಟು ಸಡಿಲ – Kannada News | UP Panchayat’s Unique Two Wife Solution: Three Days Each, Financial Aid

ರಾಂಪುರ, ಜುಲೈ 21: ಪತಿ(Husband) ತನ್ನೊಂದಿಗಿರಬೇಕು, ತನ್ನೊಂದಿಗಿರಬೇಕು ಎಂದು ಇಬ್ಬರು ಹೆಂಡತಿಯರು ಪಟ್ಟು ಹಿಡಿದಿದ್ದು, ಗಂಡನಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಈ ಕಲಹ ಬಗೆಹರಿಸಲು ಗ್ರಾಮೀಣ ಪಂಚಾಯತಿ ನೀಡಿದ ತೀರ್ಪು ಇಡೀ ಉತ್ತರ ಪ್ರದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಾರದ ಏಳು ದಿನಗಳನ್ನು ಇಬ್ಬರು ಪತ್ನಿಯರ ನಡುವೆ ಹಂಚಿಕೆ ಮಾಡಿ ಪಂಚಾಯಿತಿ ಅಚ್ಚರಿಯ ‘ಸಮಪಾಲು-ಸಮಬಾಳು’ ಸೂತ್ರವನ್ನು ರೂಪಿಸಿದೆ.

ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ದಧಿಯಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆ ವ್ಯಕ್ತಿಗೆ ಸುಮಾರು 14 ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಪತ್ನಿಯ ಒಪ್ಪಿಗೆಯಿಲ್ಲದೆ ಆತ ಎರಡನೇ ಮದುವೆಯಾಗಿದ್ದ. ಎರಡನೇ ಪತ್ನಿಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಯುವಕ ಸಂಪೂರ್ಣವಾಗಿ ಮೊದಲ ಪತ್ನಿಯನ್ನು ನಿರ್ಲಕ್ಷಿಸಿ, ಹೆಚ್ಚಿನ ಸಮಯವನ್ನು ಎರಡನೇ ಹೆಂಡತಿಯೊಂದಿಗೇ ಕಳೆಯಲು ಪ್ರಾರಂಭಿಸಿದ. ಇದರಿಂದ ಬೇಸರ ಉಂಟಾಗಿ ಮೊದಲ ಪತ್ನಿ ತನಗೆ ಜೀವನ ನಿರ್ವಹಣೆಗೆ ಹಣ ಹಾಗೂ ಬೆಂಬಲ ಸಿಗುತ್ತಿಲ್ಲ ಎಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಳು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ ನಂತರ, ಗ್ರಾಮದ ಹಿರಿಯರು ಹಾಗೂ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಪಂಚಾಯಿತಿ ಕರೆಯಲಾಯಿತು. ಸುದೀರ್ಘ ಚರ್ಚೆಯ ನಂತರ ಪಂಚಾಯಿತಿ ಈ ಕೆಳಗಿನಂತೆ ಲಿಖಿತ ಒಪ್ಪಂದ ರೂಪಿಸಿತು. ಮೂರು ದಿನ ಒಂದು ಪತ್ನಿ ಜತೆ, ಮತೆತ ಮೂರು ದಿನ ಎರಡನೇ ಜತೆ ಕಳೆಯಬೇಕು ಎಂದು ತೀರ್ಪು ನೀಡಲಾಗಿದೆ.

ಮತ್ತಷ್ಟು ಓದಿ: ರೋಗಿಗಳ ಜೀವದ ಜೊತೆ ಚೆಲ್ಲಾಟ: ಪತಿ ಸರಕಾರಿ ವೈದ್ಯ, ಆದರೆ ಚಿಕಿತ್ಸೆ ನೀಡೋದು ಪತ್ನಿ!

ಭಾನುವಾರ ಆತನಿಗೆ ಸಂಪೂರ್ಣ ಸ್ವಾತಂತ್ರ್ಯ, ಅವರು ತನ್ನ ಇಷ್ಟದಂತೆ ಯಾರ ಜೊತೆಯಾದರೂ ಇರಬಹುದು ಅಥವಾ ಎಲ್ಲಿಗಾದರೂ ಹೋಗಬಹುದು ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೆ, ಮೊದಲ ಪತ್ನಿ ಮತ್ತು ಮಕ್ಕಳ ದಿನನಿತ್ಯದ ನಿರ್ವಹಣೆಗಾಗಿ ಪ್ರತಿ ತಿಂಗಳು ಪಡಿತರ ಹಾಗೂ ಸಾಪ್ತಾಹಿಕ ಖರ್ಚಿನ ಹಣವನ್ನು ಗಂಡ ಕಡ್ಡಾಯವಾಗಿ ನೀಡಬೇಕೆಂದು ಪಂಚಾಯಿತಿ ಆದೇಶಿಸಿದೆ. ಪಂಚಾಯಿತಿಯ ಈ ವಿಶಿಷ್ಟ ತೀರ್ಪಿಗೆ ಇಬ್ಬರೂ ಹೆಂಡತಿಯರು ಹಾಗೂ ಗಂಡ ಒಪ್ಪಿಗೆ ಸೂಚಿಸಿದ್ದಾರೆ. ಒಪ್ಪಂದದ ನಂತರ ಮೊದಲ ಪತ್ನಿ ಪೋಲಿಸ್ ಠಾಣೆಯಲ್ಲಿದ್ದ ತನ್ನ ದೂರನ್ನು ವಾಪಸ್ ಪಡೆದುಕೊಂಡಿದ್ದಾಳೆ. ಪ್ರಕರಣವು ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಲಭೆ, ಗೊಂದಲ, ಭ್ರಷ್ಟಾಚಾರ: ತೆಲುಗು ಸಿನಿಮಾ ಡ್ಯಾನ್ಸರ್​​ಗಳ ಪ್ರತಿಭಟನೆ – Kannada News | Tollywood dance association members protest against Jani Master

ತೆಲುಗು ಸಿನಿಮಾಗಳಲ್ಲಿ (Tollywood) ಡ್ಯಾನ್ಸ್​​ಗೆ ಬಹಳ ಪ್ರಧಾನ್ಯತೆ, ಇತರೆ ಸಿನಿಮಾ ರಂಗಗಳಿಗೆ ಹೋಲಿಸಿದರೆ ತೆಲುಗು ಸಿನಿಮಾಗಳಲ್ಲಿ ಡ್ಯಾನ್ಸ್ ಹೆಚ್ಚು ಗುಣಮಟ್ಟದಿಂದಲೂ ಕೂಡಿರುತ್ತದೆ. ‘ಆರ್​​ಆರ್​​ಆರ್’ ಸಿನಿಮಾದ ಡ್ಯಾನ್ಸು ಆಸ್ಕರ್ ವೇದಿಕೆಯಲ್ಲೂ ಮಿಂಚಿದ್ದು ನೆನಪಿರಬಹುದು. ಆದರೆ ಇದೀಗ ತೆಲುಗು ಚಿತ್ರರಂಗದ ಡ್ಯಾನ್ಸರ್​​ಗಳು ಸಮಸ್ಯೆಗೆ ಸಿಲುಕಿದ್ದಾರೆ. ಇದಾಗಲೇ ಡ್ಯಾನ್ಸ್ ಅಸೋಷಿಯೇಷನ್ ಒಡೆದು ಎರಡು ಭಾಗವಾಗಿದ್ದು, ಇತ್ತೀಚೆಗಷ್ಟೆ ತೆಲುಗು ಸಿನಿಮಾ ಮತ್ತು ಟಿವಿ ಡ್ಯಾನ್ಸರ್ ಅಸೋಸಿಯೇಷನ್ ಸದಸ್ಯರು ಜಾನಿ ಮಾಸ್ಟರ್ ಮತ್ತು ಅವರ ಪತ್ನಿ ಹಾಗೂ ಅಸೋಷಿಯೇಷನ್ ಅಧ್ಯಕ್ಷೆ ಸುಮಲತಾ ವಿರುದ್ಧ ಪ್ರತಿಭಟನೆ ಸಹ ಮಾಡಿದ್ದಾರೆ.

ಈಗಾಗಲೇ ತೆಲುಗು ಡ್ಯಾನ್ಸರ್​​ಗಳಲ್ಲಿಯೇ ಎರಡು ಬಣವಾಗಿದ್ದು ಜಾನಿ ಮಾಸ್ಟರ್ ಅವರದ್ದು ಒಂದು ಬಣವಾದರೆ ಶೇಖರ್ ಮಾಸ್ಟರ್ ಅವರದ್ದು ಇನ್ನೊಂದು ಬಣವಾಗಿದೆ. ಇತ್ತೀಚೆಗಷ್ಟೆ ಅಸೋಸಿಯೇಷನ್​ ಸದಸ್ಯರು, ಜಾನಿ ಮಾಸ್ಟರ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಅಸೋಸಿಯೇಷನ್ ನಿಯಮಗಳನ್ನು ಗಾಳಿಗೆ ತೂರಿ, ತೆಲುಗು ಡ್ಯಾನ್ಸರ್​​ಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸ್ಥಳೀಯ ಡ್ಯಾನ್ಸರ್ಸ್​​ಗಳಿಗೆ ಅವಕಾಶ ನೀಡದೆ ಮುಂಬೈನಿಂದ ಡ್ಯಾನ್ಸರ್​​ಗಳನ್ನು ಕರೆದುಕೊಂಡು ಬರುತ್ತಿರುವ ಬಗ್ಗೆ ಡ್ಯಾನ್ಸರ್​​ಗಳು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಡ್ಯಾನ್ಸರ್​​ಗಳಿಗೆ ಸೂಕ್ತವಾಗಿ ಹಣ ನೀಡುತ್ತಿಲ್ಲ. ಡ್ಯಾನ್ಸರ್​​ಗಳಿಗೆ ತಲುಪಬೇಕಿರುವ ಮೊತ್ತವನ್ನು ದಲ್ಲಾಳಿಗಳು ತೆಗೆದುಕೊಳ್ಳುತ್ತಿರುವ ಬಗ್ಗೆ ಹಾಗೂ ಅಸೋಸಿಯೇಷನ್​​ನಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯ ವಿರುದ್ಧ ಹೀಗೆ ಹಲವು ವಿಷಯಗಳನ್ನು ಇರಿಸಿಕೊಂಡು ಡ್ಯಾನ್ಸರ್​​ಗಳು ಪ್ರತಿಭಟನೆ ನಡೆಸಿದ್ದರು. ವಿಶೇಷವಾಗಿ ಜಾನಿ ಮಾಸ್ಟರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:‘ಡ್ರ್ಯಾಗನ್’ಗೂ ಮುನ್ನ ಪ್ರಶಾಂತ್ ನೀಲ್ ಹೊಸ ಸಾಹಸ; ಹಾರರ್ ಸಿನಿಮಾ ಪ್ರೆಸೆಂಟರ್ ಆದ ನಿರ್ದೇಶಕ

ಆಂಧ್ರ ಫಿಲಂ ಎಂಪ್ಲಾಯೀಸ್ ಅಸೋಸಿಯೇಷನ್ ಮಧ್ಯ ಪ್ರವೇಶಿಸಿ, ಡ್ಯಾನ್ಸ್ ಅಸೋಸಿಯೇಷನ್ ಸದಸ್ಯರೊಡನೆ ಮಾತುಕತೆ ನಡೆಸಿದೆ. ಸಮಸ್ಯೆಗಳನ್ನು ಬಗೆಹರಿಸುವುದಾಗಿಯೂ ಹೇಳಿದೆ. ಮಾತ್ರವಲ್ಲದೆ, ಫಿಲಂ ಎಂಪ್ಲಾಯೀಶ್ ಅಸೋಸಿಯೇಷನ್, ಜಾನಿ ಮಾಸ್ಟರ್​ ವಿರುದ್ಧ ಅಸಹಕಾರ ಘೋಷಣೆ ಮಾಡಿದ್ದು, ಪರೋಕ್ಷವಾಗಿ ನಿಷೇಧವನ್ನು ಹೇರಿದೆ.

ಆದರೆ ತಮ್ಮ ಮೇಲೆ ಬಂದಿರುವ ಆರೋಪಗಳನ್ನು ಜಾನಿ ಮಾಸ್ಟರ್ ಅಲ್ಲಗಳೆದದ್ದು, ತಮ್ಮ ವಿರುದ್ಧ ವೈಯಕ್ತಿಕ ದ್ವೇಷದಿಂದಾಗಿ ಅಸಹಕಾರ ಘೋಷಕ್ಷಣೆ ಮಾಡಲಾಗಿದೆ ಎಂದಿದ್ದಾರೆ. ಅಲ್ಲದೆ, ತಾವು ನಿರ್ಮಾಪಕರ ಒತ್ತಡದಿಂದಲೇ ಬೇರೆ ಕಡೆಯಿಂದ ಡ್ಯಾನ್ಸರ್​​ಗಳನ್ನು ಕರೆದುಕೊಂಡು ಬರುತ್ತಿದ್ದುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ 26.6 ಕೋಟಿ ಡ್ರಗ್ಸ್, ನಕಲಿ ನೋಟು ಪ್ರಿಂಟಿಂಗ್ ಜಾಲ ಭೇದಿಸಿದ ಪೊಲೀಸರು – Kannada News | CCB Cracks Down on Bengaluru Drug Mafia: 27 Cr MDMA, Cocaine, Heroin and Fake Notes

ಬೆಂಗಳೂರು, ಜು.21: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಮಾದಕ ವಸ್ತು ಜಾಲದ ವಿರುದ್ಧ ಪೊಲೀಸರು ಸಮರ ಸಾರಿದ್ದು, ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಕೋರಮಂಗಲ ಹಾಗೂ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಹಾಗೂ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಚೂಡಿದಾರ್‌ಗಳ ಒಳಗೆ ಹಾಕಿಕೊಂಡು ಅತ್ಯಂತ ಚಾಣಾಕ್ಷತನದಿಂದ ಎಂಡಿಎಂಎ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಭೇದಿಸಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹೀಲ್ ಕುಮಾರ್, ಸತ್ಯಂ, ಕಲೀಮ್ ಹಾಗೂ ಕನ್ನಯ್ಯ ಎಂಬ ವ್ಯಕ್ತಿಗಳನ್ನು ಬಂಧನ ಮಾಡಲಾಗಿದೆ.

ದೆಹಲಿಯಲ್ಲಿದ್ದ ನೈಜೀರಿಯಾ ಮೂಲದ ವ್ಯಕ್ತಿಯಿಂದ ಮಾದಕ ವಸ್ತು ಪಡೆದು ಬೆಂಗಳೂರಿನಲ್ಲಿದ್ದ ಮುಖ್ಯ ಆರೋಪಿ ಸಾಹೀಲ್ ಕುಮಾರ್‌ಗೆ ತಲುಪಿಸಲು ಸತ್ಯಂ, ಕಲೀಮ್ ಮತ್ತು ಕನ್ನಯ್ಯ ಯತ್ನಿಸುತ್ತಿದ್ದರು. ಈ ಹಿಂದೆ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ವಿಕ್ಟರ್ ಹಾಗೂ ಮೋಸಸ್ ನೀಡಿದ ಮಹತ್ವದ ಸುಳಿವು ಆಧರಿಸಿ ಸಿಸಿಬಿ ಪೊಲೀಸರು ಈ ಯಶಸ್ವಿ ದಾಳಿ ನಡೆಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 26.6 ಕೋಟಿ ರೂಪಾಯಿ ಮೌಲ್ಯದ 12 ಕೆಜಿ 925 ಗ್ರಾಂ ಎಂಡಿಎಂಎ ಹಾಗೂ 60 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ.

ಕೋರಮಂಗಲದಲ್ಲಿ ಅಸ್ಸಾಂ ಮೂಲದ ಪೆಡ್ಲರ್ ಅರೆಸ್ಟ್: 34 ಲಕ್ಷದ ಹೆರಾಯಿನ್ ಜಪ್ತಿ

ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಡ್ರಗ್ಸ್ ಕಾರ್ಯಾಚರಣೆ ನಡೆದಿದ್ದು, ಅಸ್ಸಾಂನಿಂದ ಬೆಂಗಳೂರಿಗೆ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದ ಪೆಡ್ಲರ್‌ನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಹೀದ್ ಹುಸ್ಸೇನ್ (ಅಸ್ಸಾಂ ಮೂಲದವನು) ಎಂಬುವವರನ್ನು ಬಂಧಿಸಿದ್ದಾರೆ.

ಅಸ್ಸಾಂನಿಂದ ನಗರಕ್ಕೆ ಹೆರಾಯಿನ್ ಸಾಗಿಸಿ ಅಕ್ರಮವಾಗಿ ಪೆಡ್ಲಿಂಗ್ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿಯಿಂದ 34 ಲಕ್ಷ ರೂಪಾಯಿ ಮೌಲ್ಯದ 157 ಗ್ರಾಂ ಹೆರಾಯಿನ್ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ: ಬೃಹತ್​​ ಪ್ರತಿಭಟನೆ

ಕುಂಬಳಗೋಡಿನಲ್ಲಿ ನಕಲಿ ನೋಟು ಪ್ರಿಂಟ್ ಮಾಡ್ತಿದ್ದ ಜಾಲ ಅಂದರ್:

ಕುಂಬಳಗೋಡು ಠಾಣಾ ವ್ಯಾಪ್ತಿಯ ಕಣಮಿಣಿಕೆಯಲ್ಲಿ ಮನೆ ಬಾಡಿಗೆಗೆ ಪಡೆದು ನಕಲಿ ನೋಟು (ಖೋಟಾನೋಟು) ಪ್ರಿಂಟ್ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಮೈಸೂರು ಮೂಲದ ಅರವಿಂದ್ ಹಾಗೂ ಚೆನ್ನೈ ಮೂಲದ ವೆಂಕಟ ಸುಬ್ರಹ್ಮಣಿ ಎಂಬುವವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಣಮಿಣಿಕೆ ವ್ಯಾಪ್ತಿಯಲ್ಲಿದ್ದ ಬಾಡಿಗೆ ಮನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

1,69,000 ರೂ. ಮೌಲ್ಯದ ನಕಲಿ ಖೋಟಾನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಲ್ಯಾಪ್‌ಟಾಪ್​​ಗಳನ್ನು ಕೂಡ ವಶ ಪಡೆಯಲಾಗಿದೆ. ಇನ್ನು ಸಾಗಾಟಕ್ಕೆ ಬಳಸುತ್ತಿದ್ದ 1.60 ಲಕ್ಷ ರೂ. ಮೌಲ್ಯದ ಒಂದು ಕಾರು ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಡ್ರಗ್ಸ್ ಸಾಗಾಟ ಅಥವಾ ಖೋಟಾನೋಟು ಅಕ್ರಮಗಳ ಕುರಿತು ಯಾವುದೇ ಅನುಮಾನಾಸ್ಪದ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ‘112’ ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Dengue Vaccine Approved in India: ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!

ಬೆಂಗಳೂರು, ಜುಲೈ 21: ಭಾರತದಲ್ಲಿ ಮಾರಕ ಡೆಂಗೀ ಜ್ವರಕ್ಕೆ ಮೊದಲ ಅಧಿಕೃತ ನಿರ್ದಿಷ್ಟ ಲಸಿಕೆ ಕ್ಯುಡೆಂಗಾ ಮಾರಾಟಕ್ಕೆ ಅನುಮೋದನೆ ದೊರೆತಿದೆ. ಜಪಾನ್‌ನ ಟಕೇಡಾ ಬಯೋ ಫಾರ್ಮಾಟಿಕಲ್ಸ್ ಅಭಿವೃದ್ಧಿಪಡಿಸಿರುವ ಈ ಲಸಿಕೆಗೆ ಡಿಸಿಜಿಐ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್) ಸಮ್ಮತಿ ಸೂಚಿಸಿದೆ. 4 ರಿಂದ 60 ವರ್ಷ ವಯೋಮಾನದವರಿಗೆ ಈ ಲಸಿಕೆ ನೀಡಬಹುದಾಗಿದೆ.

ಕ್ಯುಡೆಂಗಾ ಲಸಿಕೆಯು ಡೆಂಗಿಯ ನಾಲ್ಕೂ ವಿಧದ ವೈರಸ್‌ಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಎರಡು ಡೋಸ್‌ಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ. ಮೊದಲ ಡೋಸ್ ಪಡೆದ ಮೂರು ತಿಂಗಳ ನಂತರ ಎರಡನೇ ಡೋಸ್ ನೀಡಲಾಗುತ್ತದೆ. ಇದು ಸೋಂಕು ಪೀಡಿತರು ಅಥವಾ ಸೋಂಕು ರಹಿತರಾದರೂ ಪಡೆಯಬಹುದು. ಈ ಲಸಿಕೆ ಸುಮಾರು ನಾಲ್ಕರಿಂದ ಐದು ವರ್ಷಗಳ ಕಾಲ ರಕ್ಷಣೆ ಮತ್ತು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ಕ್ಲಿನಿಕಲ್ ಪ್ರಯೋಗಗಳು ತೋರಿಸಿವೆ.

ಈ ಕ್ಯುಡೆಂಗಾ ಲಸಿಕೆಯ ಉತ್ಪಾದನೆಗಾಗಿ ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಸ್ತುತ 43 ದೇಶಗಳಲ್ಲಿ ಅನುಮೋದನೆ ಪಡೆದಿರುವ ಈ ಲಸಿಕೆ, ಸೊಳ್ಳೆ ಕಾಟ ಹೆಚ್ಚಿರುವ ಮಳೆಗಾಲದ ಸಂದರ್ಭದಲ್ಲಿ ಭಾರತಕ್ಕೆ ದೊರೆತಿರುವುದು ನೆಮ್ಮದಿಯ ಸಂಗತಿಯಾಗಿದೆ. ಬೂಸ್ಟರ್ ಡೋಸ್‌ಗಳ ಬಗ್ಗೆ ಸಂಶೋಧನೆಗಳು ಪ್ರಗತಿಯಲ್ಲಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅವಳ ನಗುವೇ ತಂದೆಯ ಶಕ್ತಿ; ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಸೈಕಲ್ ತುಳಿಯುತ್ತಾ ಸ್ಕೂಲ್‌ನತ್ತ ತಂದೆ – Kannada News | A father set off towards the school, cycling with his daughter seated on his shoulders.

ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಪ್ಪ ಮಗಳ (father – daughter) ಬಾಂಧವ್ಯ ಸಾರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆಯುತ್ತದೆ. ಇದೀಗ ಇಂತಹದ್ದೇ ದೃಶ್ಯ ವೈರಲ್ ಆಗಿದ್ದು, ಅಪ್ಪನೊಬ್ಬ ಮಗಳನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡಿದ್ದಾನೆ. ತಾನು ಸೈಕಲ್ ತುಳಿಯುತ್ತಾ ಶಾಲೆಗೆ ಕಳುಹಿಸಲು ಹೋಗುತ್ತಿದ್ದಾನೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮೀನಾಕ್ಷಿ (Meenakshi) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಂದೆ ಮಗಳ ಬಾಂಧವ್ಯದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ ತಂದೆಯೊಬ್ಬ ತನ್ನ ಅಂಬಾರಿ ಮೇಲೆ ಕೂರಿಸಿಕೊಂಡು ಶಾಲೆಗೆ ಕಳುಹಿಸಲು ಹೊರಟಿರುವ ದೃಶ್ಯ ಕಾಣಬಹುದು. ಇಲ್ಲಿ ತಂದೆಯ ಹೆಗಲ ಮೇಲೆ ಕುಳಿತ ಪುಟ್ಟ ಹುಡುಗಿಯು ಖುಷಿಯಿಂದಲೇ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಮಗಳ ಖುಷಿಯಲ್ಲಿ ತನ್ನ ಖುಷಿ ಕಾಣುವ ತಂದೆಯು ಸೈಕಲ್ ತುಳಿಯುತ್ತ ಸ್ಕೂಲ್ ನತ್ತ ಹೋಗುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳ ಮಾರ್ಗದರ್ಶನದಲ್ಲಿ ಅಮೆಜಾನ್‌ನಲ್ಲಿ ಆರ್ಡರ್ ಮಾಡುವುದನ್ನು ಕಲಿತ ತಾಯಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತಂದೆ ಕನಸು ಆತನ ಹೆಗಲ ಮೇಲಿದೆ ಎಂದಿದ್ದಾರೆ. ಇನ್ನೊಬ್ಬರು ಅಪ್ಪನಿಗೆ ಮಗಳೇ ಪ್ರಪಂಚ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕಿಸುವ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

UPI without Internet: ಟ್ಯಾಪ್ ಟು ಪೇ, ಹೊಸ ಯುಪಿಐ ಫೀಚರ್; ಇಂಟರ್ನೆಟ್ ಇಲ್ಲದ ಫ್ಲೈಟ್, ಅಂಡರ್​ಗ್ರೌಂಡ್ ಮೆಟ್ರೋಗೂ ಹಣ ಪಾವತಿಸಿ – Kannada News | Tap to pay for flights, underground trains without internet connection, NPCI new UPI feature

ನವದೆಹಲಿ, ಜುಲೈ 21: ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಯುಪಿಐ (UPI) ಮೂಲಕ ಹಣ ಪಾವತಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ. ವಿಮಾನ ಪ್ರಯಾಣದ ವೇಳೆ (In-flight), ಅಂಡರ್​ಗ್ರೌಂಡ್ ಮೆಟ್ರೋ ರೈಲುಗಳಲ್ಲಿ ಮತ್ತು ಇಂಟರ್ನೆಟ್ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲಿಯೂ ಸುಲಭವಾಗಿ ಪಾವತಿ ಮಾಡಲು ಈ ಸೌಲಭ್ಯ ನೆರವಾಗಲಿದೆ.

ಟ್ಯಾಪ್ ಟು ಪೇ: ಇಂಟರ್ನೆಟ್ ಇಲ್ಲದೆ ₹2,000 ವರೆಗಿನ ವಹಿವಾಟುಗಳನ್ನು ನಡೆಸಲು ಅವಕಾಶ ನೀಡುವಂತೆ ಯೋಜಿಸಲಾಗಿದೆ. ಎನ್​ಎಫ್​ಸಿ ಅಥವಾ ನಿಯರ್ ಫೀಲ್ಡ್ ಕಮ್ಯುನಿಕೇಶನ್ (NFC) ತಂತ್ರಜ್ಞಾನದ ಮೂಲಕ ಈ ಸೇವೆ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ ಅನ್ನು ಪಾಯಿಂಟ್ ಆಫ್ ಸೇಲ್ (PoS) ಯಂತ್ರಕ್ಕೆ ಸ್ಪರ್ಶಿಸುವ (Tap) ಮೂಲಕ ಪಾವತಿಸಬಹುದು. ಇದು ‘UPI Lite’ ವಾಲೆಟ್ ಆಧಾರಿತ ವ್ಯವಸ್ಥೆಯಾಗುವುದರಿಂದ, ವಹಿವಾಟಿಗೆ ಯುಪಿಐ ಪಿನ್ (UPI PIN) ನಮೂದಿಸುವ ಅಗತ್ಯವಿರುವುದಿಲ್ಲ.

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ಇಂಟರ್ನೆಟ್ ಇಲ್ಲದೆ ಯುಪಿಐ ಹೇಗೆ ಕೆಲಸ ಮಾಡುತ್ತದೆ?

ಇಂಟರ್ನೆಟ್ ಇರುವಾಗ ಬಳಕೆದಾರರು ತಮ್ಮ UPI Lite ವಾಲೆಟ್‌ಗೆ ಹಣವನ್ನು ತುಂಬಿಕೊಳ್ಳಬೇಕು. ಇಂಟರ್ನೆಟ್ ಇಲ್ಲದಿದ್ದಾಗ, NFC ಬೆಂಬಲಿಸುವ ಸ್ಮಾರ್ಟ್‌ಫೋನ್ ಅನ್ನು ವ್ಯಾಪಾರಿಯ PoS ಯಂತ್ರಕ್ಕೆ ಟ್ಯಾಪ್ ಮಾಡಿದರೆ ವಹಿವಾಟು ಪೂರ್ಣಗೊಳ್ಳುತ್ತದೆ.

PoS ಯಂತ್ರವು ಈ ಪಾವತಿಯ ವಿವರವನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ ಮತ್ತು ಇಂಟರ್ನೆಟ್ ಸಂಪರ್ಕ ಸಿಕ್ಕ ತಕ್ಷಣ ನೆಟ್‌ವರ್ಕ್‌ನೊಂದಿಗೆ ಸಿಂಕ್ ಮಾಡಿಕೊಳ್ಳುತ್ತದೆ.

ಇದನ್ನೂ ಓದಿ: ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು

ಎರಡ್ಮೂರು ವರ್ಷಗಳ ಹಿಂದೆ ಎನ್​ಪಿಸಿಐನಿಂದ ಯುಪಿಐ ಲೈಟ್ ಎಕ್ಸ್ ಫೀಚರ್ ಬಿಡುಗಡೆಯಾಗಿತ್ತು. ಇದು ಮೊಬೈಲ್ ಕನೆಕ್ಟಿವಿಟಿ ಇಲ್ಲದೆಯೇ ಆಫ್​ಲೈನ್​ನಲ್ಲಿ ಯುಪಿಐ ಲೈಟ್ ಮೂಲಕ ಪಾವತಿಸಬಹುದು. ಇಲ್ಲಿ ಪಾವತಿಸುವವರು ಮತ್ತು ಸ್ವೀಕರಿಸುವವರು, ಎರಡೂ ಕಡೆಯಲ್ಲೂ ಎನ್​ಎಫ್​ಸಿ ಎನೇಬಲ್ ಆಗಿರಬೇಕು.

ಈಗ ಎನ್​ಪಿಸಿಐನವರು ಇದೇ ಫೀಚರ್ ಅನ್ನು ಪಿಒಎಸ್​ಗಳಿಗೂ ವಿಸ್ತರಿಸುತ್ತಿದ್ದಾರೆ. ಅಂದರೆ, ಎನ್​ಎಫ್​ಸಿ ಎನೇಬಲ್ ಆಗಿರುವ ಪಿಒಎಸ್​ಗಳಲ್ಲಿ ಇಂಟರ್ನೆಟ್ ಇಲ್ಲದೆಯೇ ಯುಪಿಐ ಲೈಟ್ ಮೂಲಕ ಹಣ ಪಾವತಿಸಬಹುದು. ಇಲ್ಲಿ ಪಿಒಎಸ್ ಮತ್ತು ಮೊಬೈಲ್ ಎರಡೂ ಕಡೆ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದರೂ ಕೂಡ ಎನ್​ಎಫ್​ಸಿ ಸಹಾಯದಿಂದ ಪಾವತಿ ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version