ಚಾಮರಾಜನಗರ, (ಏಪ್ರಿಲ್ 08): ಹುಲಿ (Tiger) ಸೆರೆಗೆ ಇಟ್ಟಿದ್ದ ಬೋನ್ನಲ್ಲಿ ಚಿರತೆ ಬಂದು ಲಾಕ್ ಆಗಿದೆ. ಚಾಮರಾಜನಗರ (Chamarajnagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಬಳಿ ಇತ್ತೀಚೆಗೆ ಹುಲಿ ಕಾಣಿಸಿಕೊಂಡಿತ್ತು. ಹೀಗಾಗಿ ಸುತ್ತಮುತ್ತಲಿನ ಜನ ಆತಂಕಗೊಂಡಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಹೀಗಾಗಿ ಅರಣ್ಯ ಇಲಾಖೆಯವರು ಬಂದು ಗ್ರಾಮದ ಬಳಿ ಹುಲಿ ಸರೆ ಹಿಡಿಯಲು ಬೋನು ಇಟ್ಟಿದ್ದರು. ಆದ್ರೆ, ಅಚ್ಚರಿ ಎಂಬಂತೆ ಈ ಬೋನಿಗೆ ನಾಲ್ಕು ವರ್ಷದ ಚಿರತೆ ಬಂದು ಬಿದ್ದಿದೆ. ಇದನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಇನ್ನು ಚಿರತೆ ಬೋನಿಗೆ ಬಿದ್ದರೂ ಸಹ ಗ್ರಾಮಸ್ಥರಲ್ಲಿ ಹುಲಿ ಆತಂಕ ಮನೆ ಮಾಡಿದೆ.
‘ಮ್ಯಾಟ್ರಿಕ್ಸ್ ಮೂವೀ ಮೇಕರ್ಸ್’ ಸಂಸ್ಥೆಯಿಂದ ಒಂದೇ ದಿನ ಮೂರು ಸಿನಿಮಾಗಳ (Kannada Cinema) ಮುಹೂರ್ತವನ್ನು ಮಾಡಲಾಗಿದೆ. ಆ ಪೈಕಿ ‘ಸೀತಾ ರಾಮ ರಾಜು’ ಸಿನಿಮಾದಲ್ಲಿ ನಟ ಪಿ. ರವಿಶಂಕರ್ ಅವರು ಅಭಿನಯಿಸುತ್ತಿದ್ದಾರೆ. ಮುಹೂರ್ತದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರವಿಶಂಕರ್ ಅವರು ಮಾತನಾಡಿದರು. ಸಂತಸ ಹಂಚಿಕೊಂಡರು. ‘ಇಂದು ಸಿನಿಮಾ ಮಾಡುವುದೇ ತುಂಬ ಅಪರೂಪ. ಅಂಥದ್ದರಲ್ಲಿ ಒಂದೇ ದಿನ ಮೂರು ಸಿನಿಮಾಗಳ ಮುಹೂರ್ತ ಮಾಡಿದ್ದಾರೆ ಎಂದರೆ ನಿರ್ಮಾಪಕರಿಗೆ ಹ್ಯಾಟ್ಸ್ ಆಫ್. ನಿರ್ದೇಶಕ ಕೀರ್ತಿ ತುಂಬ ಹಾರ್ಡ್ ವರ್ಕ್ ಮಾಡುವ ಹುಡುಗ’ ಎಂದು ರವಿಶಂಕರ್ (P Ravishankar) ಅವರು ಹೊಗಳಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ.
ಬೆಂಗಳೂರು, ಏಪ್ರಿಲ್ 08: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ (Dr. Kruthika Reddy Murder Case) ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅಸಹಜ ಸಾವು ಎಂದುಕೊಂಡಿದ್ದ ಪ್ರಕರಣ ಮರಣೋತ್ತರ ಪರೀಕ್ಷೆ ಬಳಿಕ ದಿಕ್ಕನ್ನೇ ಬದಲಿಸಿದ್ದು, ಪತಿಯ ಕಳ್ಳಾಟ ಬಯಲು ಮಾಡಿತ್ತು. ಸದ್ಯ ಕೊಲೆಗೆ ಸಂಬಂಧಿಸಿದ ಪ್ರಬಲ ಸಾಕ್ಷಿ ಮೊಬೈಲ್ ರಿಟ್ರೀವ್ನಿಂದ ಬಯಲಾಗಿದೆ. ಆಸಾಮಿಯ ಫೋನ್ ಪೇ ಚಾಟಿಂಗ್ ಎಲ್ಲವನ್ನು ತೆರೆದಿಟ್ಟಿದೆ.
ಏಪ್ರಿಲ್ 2025ರಂದು ಮಾರತ್ತಹಳ್ಳಿಯಲ್ಲಿ ಚರ್ಮರೋಗ ವೈದ್ಯ ಕೃತಿಕಾ ರೆಡ್ಡಿ ಕೊಲೆಯಾಗಿತ್ತು. ಪತಿ ಮಹೇಂದ್ರ ರೆಡ್ಡಿಯೇ ಪ್ರೊಪೋಫೋಲ್ ಎಂಬ ಅನಸ್ತೇಶಿಯಾವನ್ನು ಐವಿ ಫ್ಲೂಯಿಡ್ ಮೂಲಕ ನೀಡಿ ಕೊಂದಿದ್ದ. ಮೊದಮೊದಲು ಕೃತಿಕಾ ರೆಡ್ಡಿ ಸಾವು ಸ್ವಾಭಾವಿಕ ಸಾವು ಎಂದುಕೊಳ್ಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಬಳಿಕ ದೇಹದಲ್ಲಿ ಅನಸ್ತೇಶಿಯಾ ನೀಡಿರುವುದು ಗೊತ್ತಾಗಿತ್ತು. ಹಾಗಾಗಿ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣ ಎಂದು ಬದಲಾಯಿಸಿಕೊಂಡು ಆರೋಪಿ ಪತಿಯನ್ನು ಬಂಧಿಸಲಾಗಿತ್ತು.
ಪ್ರಕರಣದ ತನಿಖೆ ಮುಂದುವರೆಸಿರುವ ಮಾರತ್ತಹಳ್ಳಿ ಪೊಲೀಸರು ಕೊಲೆಯ ಹಿಂದಿನ ಕಾರಣವನ್ನು ಬಯಲು ಮಾಡಿದ್ದಾರೆ. 2022ರಿಂದಲೇ ಪ್ರೀತಿಯಲ್ಲಿದ್ದ ಆಸಾಮಿ 2024ರಲ್ಲಿ ಕೃತಿಕಾ ರೆಡ್ಡಿ ವಿವಾಹವಾಗಿದ್ದ. ಹಣದಾಸೆಗೆ ಕೃತಿಕಾ ರೆಡ್ಡಿ ಕೊಂದು ಪ್ರೇಯಸಿ ಜೊತೆಗಿರಲು ಹೊಂಚು ಹಾಕಿದ್ದ. ಅದಕ್ಕೆ ಪೂರಕ ಎಂಬಂತೆ ಕೃತಿಕಾ ರೆಡ್ಡಿ ಕೊಲೆ ಬಳಿಕ ಮಹೇಂದ್ರ ರೆಡ್ಡಿ ಫೋನ್ ಪೇ ಮೂಲಕ ಪ್ರಿಯತಮೆಗೆ ಕಳುಸಿದ್ದ ಮೆಸೇಜ್ ಅನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ.
ಮೆಸೇಜ್ನಲ್ಲಿ ಏನಿದೆ?
ಮೆಸೇಜ್- 1:ಈ ಮೆಸೇಜ್ ನೋಡಿದ ನಂತರ ನನಗೆ ಎಲ್ಲಿಯೂ ಮೆಸೇಜ್ ಅಥವಾ ಕರೆ ಮಾಡಬೇಡ. ಎಲ್ಲವೂ ಸರಿಯಾದ ನಂತರ ನಾನು ನಿನಗೆ ಫೋನ್ ಮಾಡ್ತೇನೆ. ಪೊಲೀಸರು ನಮ್ಮ ಸಂಬಂಧದ ಬಗ್ಗೆ ಕೇಳಲು ನಿನ್ನನ್ನ ಕರೆಯಬಹುದು. ಆಗ ನಾವು ಸ್ನೇಹಿತರು ಅಂತಷ್ಟೇ ಹೇಳಿ. ನೀವು ಪದೇ ಪದೇ ನನಗೆ ಕರೆ ಮಾಡಿದ್ರಾ ಅಂತಾ ಕೇಳಿದರೆ ಹೌದು ಎಂತಾ ಹೇಳು. ನಾನು ಆಸ್ಪತ್ರೆಯ ಬಗ್ಗೆ ಸಹಾಯ ಕೇಳಿದೆ ಅಂತಾ ಹೇಳು.
ಮೆಸೇಜ್- 2: ನಾನು ಬೇಗ ಹೋಗಿ ನನ್ನ ಹೆತ್ತವರಿಗೆ ಮತ್ತು ಕೃತಿಕಾ ಹೆತ್ತವರಿಗೆ ಹೇಳುತ್ತೇನೆ. ನಾನು ಕೃತಿಕಾಳನ್ನು ಕೊಂದಿರುವ ಮತ್ತು ನನ್ನ ಬಳಿ ಪುರಾವೆ ಇಲ್ಲ ಅಂತಾ. ಅಲ್ಲದೆ ನಾನು ಕಂಬಿಗಳ ಹಿಂದೆ ಹೋಗುತ್ತೇನೆ, ಆಗ ನೀನೂ ಸೇರಿದಂತೆ ಎಲ್ಲರೂ ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ.
ಮೆಸೇಜ್- 3: ನಾನು ಇದನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ. ಹೋಗಿ ನಿನ್ನ ಜೀವನವನ್ನು ಆನಂದಿಸು. ನೀನು ಬಯಸಿದಂತೆ ನಾನು ದುಖಃದಿಂದ ಬಳಲುತ್ತೇನೆ. ಮತ್ತು ನೀನು ಬಯಸಿದಂತೆ ಸಾಯುತ್ತೇನೆ, ಕೊಲೆಗಾರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ಕೊಲೆಗಾರನಾಗಿಯೇ ಜೀವನವನ್ನು ನಡೆಸುತ್ತೇನೆ.
ಹೀಗೆ ಕೊಲೆ ಬಳಿಕ ಮಹೇಂದ್ರ ರೆಡ್ಡಿ ತನ್ನ ಪ್ರಿಯತಮೆಗೆ ಫೋನ್ ಪೇನಲ್ಲಿ ಮೆಸೇಜ್ ಮಾಡಿದ್ದ. ಸದ್ಯ ಮೊಬೈಲ್ ಎಫ್ಎಸ್ಎಲ್ಗೆ ಕಳುಹಿಸಿದ್ದ ಮಾರತ್ತಹಳ್ಳಿ ಪೊಲೀಸರು, ಈ ಎಲ್ಲಾ ಮೆಸೇಜ್ಗಳನ್ನು ರಿಟ್ರೀವ್ ಮಾಡಿದ್ದಾರೆ. ಇದು ಕೃತಿಕಾ ರೆಡ್ಡಿ ಕೊಲೆ ಪ್ರಮುಖ ಟೆಕ್ನಿಕಲ್ ಸಾಕ್ಷ್ಯವಾಗಿದೆ.
ಫೋನ್ ಪೇನಲ್ಲಿ 485 ಚಾಟ್ ಪತ್ತೆ
ಇನ್ನು ಇಷ್ಟೇ ಅಲ್ಲದೆ ಆರೋಪಿ ಮಹೇಂದ್ರ ರೆಡ್ಡಿ ಮೊಬೈಲ್ ರಿಟ್ರೀವ್ನಲ್ಲಿ 485 ಫೋನ್ ಪೇ ಚಾಟ್ ಪತ್ತೆಯಾಗಿದ್ದು, ಈ ಪೈಕಿ ಮೂರು ಮೆಸೇಜ್ಗಳನ್ನ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಆರೋಪಿ ಪ್ರೇಯಸಿ ನರ್ಸ್, ವೈದ್ಯೆ ಕೃತಿಕಾ ಹಾಗೂ ಮಹೇಂದ್ರ ಮೊಬೈಲ್ ರಿಟೀವ್ನಲ್ಲಿ ಒಟ್ಟು 10 ಲಕ್ಷ 34 ಸಾವಿರ ರೂ ದಷ್ಟು ಡಿಜಿಟಲ್ ಫೈಲ್ಗಳನ್ನ ರಿಟ್ರೀವ್ ಮಾಡಿರುವ ಪೊಲೀಸರು ಪ್ರಮುಖ ಫೈಲ್ಗಳನ್ನು ಹೆಚ್ಚುವರಿ ಚಾರ್ಜ್ ಶೀಟ್ನಲ್ಲಿ ಸಲ್ಲಿಸಲಿದ್ದಾರೆ.
ಗುಜರಾತ್ ಟೈಟಾನ್ಸ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಐಪಿಎಲ್ 2026 ರ 14ನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ, ತಮ್ಮ ಒಂಬತ್ತು ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಸ್ಫೋಟಕ ಅರ್ಧಶತಕ ಸಿಡಿಸಿದರು. ವಾಸ್ತವವಾಗಿ 2017 ರಿಂದ ಐಪಿಎಲ್ನಲ್ಲಿ ಆಡುತ್ತಿರುವ ಸುಂದರ್ ಎಂದಿಗೂ 50 ರನ್ಗಳ ಗಡಿಯನ್ನು ತಲುಪಿರಲಿಲ್ಲ. ಆದರೀಗ ಆ ಬರವನ್ನು ನೀಗಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವಾಷಿಂಗ್ಟನ್ ಸುಂದರ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡವು ದೊಡ್ಡ ಮೊತ್ತವನ್ನು ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಸುಂದರ್ 33 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್ಗಳ ಸಹಿತ 55 ರನ್ ಗಳಿಸಿದರು. ತಂಡವು 79 ರನ್ಗಳಿಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ ಬ್ಯಾಟಿಂಗ್ಗೆ ಬಂದ ಸುಂದರ್, ನಾಯಕ ಶುಭಮನ್ ಗಿಲ್ ಅವರೊಂದಿಗೆ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.
2017 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ವಾಷಿಂಗ್ಟನ್ ಸುಂದರ್ ತಮ್ಮ ಆಫ್-ಸ್ಪಿನ್ ಬೌಲಿಂಗ್ಗೆ ಹೆಸರುವಾಸಿಯಾಗಿದ್ದರು. ಅವರು ಬ್ಯಾಟಿಂಗ್ನಲ್ಲಿ ಹಲವಾರು ಉಪಯುಕ್ತ ಇನ್ನಿಂಗ್ಸ್ಗಳನ್ನು ಆಡಿದ್ದರು, ಆದರೆ ಒಮ್ಮೆಯೂ ಅರ್ಧಶತಕ ಗಳಿಸಿರಲಿಲ್ಲ. ಇದೀಗ ಅರ್ಧಶತಕಗಳ ಬರ ಇಂದು ಕೊನೆಗೊಂಡಿದೆ. ಕೇವಲ 17 ವರ್ಷ ವಯಸ್ಸಿನಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಸುಂದರ್ ಇಲ್ಲಿಯವರೆಗೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ನಾಲ್ಕು ವಿಭಿನ್ನ ತಂಡಗಳಿ ಪರ ಆಡಿದ್ದು ಒಟ್ಟು 69 ಪಂದ್ಯಗಳನ್ನು ಆಡಿದ್ದಾರೆ. ಈ 69 ಪಂದ್ಯಗಳಲ್ಲಿ ಒಟ್ಟು 588 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹುಬ್ಬಳ್ಳಿ, (ಏಪ್ರಿಲ್ 08): ಹುಬ್ಬಳ್ಳಿಯಲ್ಲಿ ಅನೇಕ ಲವ್ ಜಿಹಾದ್ (Hubballi Love Jihad Cases) ಆರೋಪ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ಇದೀಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ವಿವಾಹಿತ ಮುಸ್ಲಿಂ ವ್ಯಕ್ತಿ, ಹಿಂದೂ ಮಹಿಳೆಯನ್ನು (Hindu Woman) ಪುಸಲಾಯಿಸಿ ಕರೆದುಕೊಂಡು ಪರಾರಿಯಾಗಿದ್ದಾನೆ. ಎರಡು ವರ್ಷದ ಹಿಂದೆ ಧಾರವಾಡದ ಕೆಲಗೇರಿಯ ನಿವಾಸಿಯಾಗಿರಯವ 22 ವರ್ಷದ ತಂಗೆಮ್ಮಾ ಎನ್ನುವ ಮಹಿಳೆ, ಮನೆ ಮುಂದಿದ್ದ ಕಾರು ಡ್ರೈವರ್ ಜೊತೆ ಹೋಗಿದ್ದಾಳೆ. ಆದ್ರೆ, ಇತ್ತ ಮಹಿಳೆಯ ಕುಟುಂಬಸ್ಥರು ತಮ್ಮ ಮಗಳನ್ನು ಡ್ರೈವರ್ ಮುನ್ನಾ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ತಂಗೆಮ್ಮಾ ತಾಯಿ, ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.ತನ್ನ ಮಗಳನ್ನು ಮುಸ್ಲಿಂ ಧರ್ಮದ ವಿವಾಹಿತ ವ್ಯಕ್ತಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಜೊತಗೆ ಮನೆ ಖರೀದಿಸಲು ನೀಡಿದ್ದ ಹತ್ತು ಲಕ್ಷ ರೂ. ಹಣ ಕೂಡಾ ತಗೆದುಕೊಂಡು ಹೋಗಿದ್ದಾನೆ. ಇದೀಗ ಹಣವು ಇಲ್ಲ, ಮಗಳು ಇಲ್ಲ. ದಯವಿಟ್ಟು ಮಗಳನ್ನು ಹುಡುಕಿ ಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ. ಕಳೆದ ಎರಡು ವರ್ಷಗಳಿಂದ ಮಗಳಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಲೆಬನಾನ್, ಏಪ್ರಿಲ್ 8: ಕದನವಿರಾಮದ ಬಳಿಕವೂ ಲೆಬನಾನ್ ಮೇಲೆ ಇಸ್ರೇಲ್ (Israel) ಸೇನೆ ದಾಳಿ ನಡೆಸಿದೆ. ಇಸ್ರೇಲ್ ವಾಯುದಾಳಿಯಿಂದ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಲೆಬನಾನ್ ಮೇಲಿನ ದಾಳಿ ಹೀಗೆಯೇ ಮುಂದುವರಿಯುತ್ತದೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಹೇಳಿದ್ದಾರೆ. ಲೆಬನಾನ್ನಲ್ಲಿರುವ ಹಿಜಬೊಲ್ಲಾಹ ಉಗ್ರರ ಸರ್ವನಾಶವಾಗೋವರೆಗೆ ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಕದನ ವಿರಾಮ ಏರ್ಪಟ್ಟರೂ ಲೆಬನಾನ್ನ ಮೇಲಿನ ಇಸ್ರೇಲ್ ದಾಳಿಗೆ ಲೆಬನಾನ್ ಸರ್ಕಾರ ಹಾಗೂ ಹಿಜಬೊಲ್ಲಾಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ, ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಕದನ ವಿರಾಮದಲ್ಲಿ ಲೆಬನಾನ್ ಸೇರಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಲೆಬನಾನ್ನಲ್ಲಿರುವ ಹಿಜಬೊಲ್ಲಾಹ ಒಂದು ಉಗ್ರಸಂಘಟನೆಯಾಗಿರುವುದರಿಂದ ಲೆಬನಾನ್ ಕದನ ವಿರಾಮದ ವ್ಯಾಪ್ತಿಯಲ್ಲಿಲ್ಲ ಎಂದಿದ್ದಾರೆ. ಹೀಗಾಗಿ ಇಸ್ರೇಲ್ ಲೆಬನಾನ್ನಲ್ಲಿರುವ ಹಿಜಬೊಲ್ಲಾಹ್ ಮೇಲೆ ದಾಳಿ ಮುಂದುವರಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಐಪಿಎಲ್ 2026 (IPL 2026) ರ 15 ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (KKR vs LSG) ನಡುವೆ ನಡೆಯಲಿದೆ. ಈ ಆವೃತ್ತಿಯಲ್ಲಿ ಕೆಕೆಆರ್ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಎರಡು ಪಂದ್ಯಗಳನ್ನು ಸೋತಿದ್ದರೆ, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಕೆಕೆಆರ್ ತಂಡ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಇತ್ತ ಲಕ್ನೋ ತಂಡ ಎರಡು ಪಂದ್ಯಗಳನ್ನಾಡಿದ್ದು, ಒಂದು ಪಂದ್ಯದಲ್ಲಿ ಸೋತು, ಒಂದು ಪಂದ್ಯವನ್ನು ಗೆದ್ದಿದೆ.
ಹವಾಮಾನ ಹೇಗಿರಲಿದೆ?
ಕೋಲ್ಕತ್ತಾದ ಹವಾಮಾನದ ಬಗ್ಗೆ ಹೇಳುವುದಾದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯಕ್ಕೂ ಮುನ್ನ, ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಎರಡು ತಂಡಗಳ ಅಭ್ಯಾಸವು ರದ್ದಾಗಿದೆ. ಇದೀಗ ಪಂದ್ಯದ ದಿನ ಹವಾಮಾನ ಹೇಗಿರಲಿದೆ ಎಂಬುದನ್ನು ನೋಡುವುದಾದರೆ.. ಅಕ್ಯೂವೆದರ್ ಪ್ರಕಾರ, ಏಪ್ರಿಲ್ 9 ರಂದು ಬೆಳಿಗ್ಗೆ 11 ಗಂಟೆಗೆ ಕೋಲ್ಕತ್ತಾದಲ್ಲಿ ಮಳೆಯಾಗುವ ಸಾಧ್ಯತೆ ಶೇ. 66 ರಷ್ಟು ಇರುತ್ತದೆ. ಆದಾಗ್ಯೂ, ಸಂಜೆ ಪಂದ್ಯ ಪ್ರಾರಂಭವಾದ ನಂತರ, ಹವಾಮಾನವು ಸ್ಪಷ್ಟವಾಗಿರಲಿದ್ದು, ಮಳೆಯಾಗುವ ಸಾಧ್ಯತೆ ಬಹುತೇಕ ಇಲ್ಲ.
ಐಪಿಎಲ್ 2026 ರಲ್ಲಿ ಕೆಕೆಆರ್ ಹಾಗೂ ಲಕ್ನೋ ನಡುವಿನ ಪಂದ್ಯ ಯಾವಾಗ ನಡೆಯಲಿದೆ?
ಐಪಿಎಲ್ 2026 ರಲ್ಲಿ ಕೆಕೆಆರ್ ಹಾಗೂ ಲಕ್ನೋ ನಡುವಿನ ಪಂದ್ಯ ಏಪ್ರಿಲ್ 9, 2026 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಟಾಸ್ ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ನಡೆಯಲಿದ್ದು, ಪಂದ್ಯವು ಸಂಜೆ 7:30 ಗಂಟೆಗೆ ಪ್ರಾರಂಭವಾಗುತ್ತದೆ.
ಐಪಿಎಲ್ 2026 ರಲ್ಲಿ ಕೆಕೆಆರ್ ಹಾಗೂ ಲಕ್ನೋ ನಡುವಿನ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?
ಐಪಿಎಲ್ 2026 ರಲ್ಲಿ ಕೆಕೆಆರ್ ಹಾಗೂ ಲಕ್ನೋ ನಡುವಿನ ಪಂದ್ಯವನ್ನು OTT ಪ್ಲಾಟ್ಫಾರ್ಮ್ ಜಿಯೋಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಸ್ಟಾರ್ ಸ್ಪೋರ್ಟ್ಸ್ ಮೂಲಕ ಟಿವಿಯಲ್ಲಿಯೂ ವೀಕ್ಷಿಸಬಹುದು.
ನೇರ ಮಾತು ಹಾಗೂ ಗ್ಲಾಮರಸ್ ಶೈಲಿಯಿಂದಲೇ ಗುರುತಿಸಿಕೊಂಡಿರುವ ನಟಿ ಆಕಾಂಕ್ಷಾ ಪುರಿ, ಇತ್ತೀಚೆಗೆ ನಡೆದ ಫ್ಯಾಷನ್ ವೀಕ್ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡರು. ಸಾಂಪ್ರದಾಯಿಕ ಸೀರೆಗೆ ಬಿಕಿನಿ (Bikini) ಬ್ಲೌಸ್ ಧರಿಸಿ ಮಿಂಚಿದ್ದ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್ ಆದವು. ಆಕಾಂಕ್ಷಾ ಪುರಿ ಅವರ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಅವರ ಫ್ಯಾಷನ್ ಸೆನ್ಸ್ ಬಗ್ಗೆ ಕಿಡಿಕಾರಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಗೆಬಗೆಯ ಟೀಕೆಗಳು ವ್ಯಕ್ತವಾಗಿವೆ. ಅವುಗಳಿಗೆಲ್ಲ ಆಕಾಂಕ್ಷಾ ಪುರಿ (Akanksha Puri) ಅವರು ತಿರುಗೇಟು ನೀಡಿದ್ದಾರೆ.
ಖ್ಯಾತ ವಿನ್ಯಾಸಕ ರೋಹಿತ್ ವರ್ಮಾ ಅವರ ಶೋಗಾಗಿ ಆಕಾಂಕ್ಷಾ ಈ ವಿಶಿಷ್ಟ ಉಡುಪು ಧರಿಸಿದ್ದರು. ಮಹಾರಾಷ್ಟ್ರದ ಸಂಪ್ರದಾಯದ ಸಂಕೇತವಾಗಿರುವ ಪೈಠಣಿ ಸೀರೆಯನ್ನು ಬಿಕಿನಿ ಬ್ಲೌಸ್ ಜೊತೆ ಧರಿಸುವ ಮೂಲಕ ಅವರು ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡಿದ್ದರು.
ಟಿವಿ9 ಹಿಂದಿ ಡಿಜಿಟಲ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ ಆಕಾಂಕ್ಷಾ, ‘ನನಗೆ ಈ ಉಡುಪಿಗಾಗಿ ಸಾಕಷ್ಟು ಮೆಚ್ಚುಗೆಗಳು ಸಿಕ್ಕಿವೆ. ಹೊಗಳಿಕೆ ಇರುವಲ್ಲಿ ಟ್ರೋಲ್ಗಳು ಇರುವುದು ಸಹಜ. ನಾನು ನಕಾರಾತ್ಮಕ ವಿಚಾರಗಳಿಗಿಂತ ಸಕಾರಾತ್ಮಕತೆ ಮೇಲೆ ಹೆಚ್ಚು ಗಮನ ಹರಿಸುತ್ತೇನೆ’ ಎಂದು ಶಾಂತವಾಗಿಯೇ ಉತ್ತರಿಸಿದ್ದಾರೆ.
ಆಕಾಂಕ್ಷಾ ಪುರಿ ವೈರಲ್ ವಿಡಿಯೋ:
ಅಲ್ಲದೆ, ಈ ಉಡುಪಿನ ಆಯ್ಕೆಯ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ಇದು ಸಂಪೂರ್ಣವಾಗಿ ಡಿಸೈನರ್ ರೋಹಿತ್ ವರ್ಮಾ ಅವರ ಕಲ್ಪನೆಯಾಗಿತ್ತು. ರೋಹಿತ್ ಅವರ ಪ್ರತಿಭೆಯ ಮೇಲೆ ನನಗೆ ಅಪಾರ ನಂಬಿಕೆಯಿದೆ. ಅವರು ಏನನ್ನಾದರೂ ವಿನ್ಯಾಸಗೊಳಿಸಿದರೆ ಅದರ ಹಿಂದೆ ಒಂದು ಉದ್ದೇಶವಿರುತ್ತದೆ. ಒಬ್ಬ ಕಲಾವಿದೆಯಾಗಿ ಅವರ ವಿನ್ಯಾಸವನ್ನು ಗೌರವಿಸುವುದು ಮತ್ತು ಅದನ್ನು ಆತ್ಮವಿಶ್ವಾಸದಿಂದ ತೊಡುವುದು ನನ್ನ ಕೆಲಸ’ ಎಂದು ಆಕಾಂಕ್ಷಾ ಹೇಳಿದ್ದಾರೆ.
ಸದ್ಯ ಆಕಾಂಕ್ಷಾ ಅವರು ಅಶ್ಮಿತ್ ಪಟೇಲ್ ಜೊತೆಗಿನ ‘ಸಾಡಿ ಫರ್ಮಾಯಿಶ್’ ಹಾಡಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. 2023ರಲ್ಲಿ ಬಿಗ್ ಬಾಸ್ ಒಟಿಟಿ ಮೂಲಕವೂ ಅವರು ಸಾಕಷ್ಟು ಸುದ್ದಿಯಲ್ಲಿದ್ದರು. ಎಷ್ಟೇ ಟ್ರೋಲ್ ಆದರೂ ತಮ್ಮ ಫ್ಯಾಷನ್ ಆಯ್ಕೆಗಳ ಬಗ್ಗೆ ಅವರು ಎಂದಿಗೂ ಹಿಂಜರಿದಿಲ್ಲ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.
ನಿಮ್ಮ ಕಾರ್ಯನಿರತ ಜೀವನಶೈಲಿಯು ನೀವು ಎಷ್ಟು ಚೆನ್ನಾಗಿ ನಿದ್ರಿಸುತ್ತೀರಿ ಎಂಬುದರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನೀವು ಏನು ತಿನ್ನುತ್ತೀರಿ ಎಂಬುದು ನಿಮ್ಮ ನಿದ್ರೆ (sleep) ಮತ್ತು ಸಾಮಾನ್ಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ನಿದ್ರಿಸುವುದರಲ್ಲಿ ತೊಂದರೆ ಅನುಭವಿಸುವುದರಿಂದ ಮರುದಿನ ಜಂಕ್ ಫುಡ್ ಮತ್ತು ಅನಾರೋಗ್ಯಕರ ತಿಂಡಿಗಳನ್ನು ತಿನ್ನುವ ಹಂಬಲ ಹೆಚ್ಚಾಗುತ್ತದೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಆದ್ದರಿಂದ, ಮಲಗುವ ಮುನ್ನ ನಿಮ್ಮ ಆಹಾರವನ್ನು ಎಚ್ಚರಿಕೆಯಿಂದ ಆರಿಸಿ ಏಕೆಂದರೆ ಅದು ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಮುನ್ನ ಎಂದಿಗೂ ತಿನ್ನಬಾರದ ಕೆಲವು ಆಹಾರಗಳನ್ನು ಇಲ್ಲಿ ನಾವು ಪಟ್ಟಿ ಮಾಡುತ್ತಿದ್ದೇವೆ. ಈ ಲೇಖನದಲ್ಲಿ, ಮಲಗುವ ಮುನ್ನ ನೀವು ತಿನ್ನಬಹುದಾದ ಆಹಾರಗಳ ಬಗ್ಗೆಯೂ ನಾವು ಮಾತನಾಡುತ್ತಿದ್ದೇವೆ.
ಕೆಫೀನ್ ಪದಾರ್ಥಗಳು: ಹೆಚ್ಚು ಕೆಫೀನ್ ಸೇವಿಸುವುದರಿಂದ ನಿಮ್ಮ ಮೆದುಳು ಸಕ್ರಿಯವಾಗಿರುತ್ತದೆ ಮತ್ತು ಸರಿಯಾಗಿ ನಿದ್ರೆ ಮಾಡುವುದನ್ನು ತಡೆಯಬಹುದು. ನಿಮಗೆ ಪೂರ್ಣ, ಆಳವಾದ ನಿದ್ರೆ ಸಿಗುವುದಿಲ್ಲ. ಅದಕ್ಕಾಗಿಯೇ ನೀವು ಊಟದ ಸಮಯದಲ್ಲಿ ಕಾಫಿ, ಎನರ್ಜಿ ಡ್ರಿಂಕ್ಸ್ ಮತ್ತು ಕೆಫೀನ್ ಅಧಿಕವಾಗಿರುವ ಚೋಕೊಲೇಟ್ಗಳನ್ನು ಸೇವನೆ ಮಾಡಬಾರದು.
ನೀರಿನಾಂಶವಿರುವ ಆಹಾರಗಳು: ಹೆಚ್ಚಿನ ನೀರಿನ ಅಂಶ ಹೊಂದಿರುವ ಕಲ್ಲಂಗಡಿ, ಸೌತೆಕಾಯಿ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ರಾತ್ರಿ ಊಟದಲ್ಲಿ ಇವುಗಳನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ರಾತ್ರಿ ಪದೇ ಪದೇ ಮೂತ್ರ ವಿಸರ್ಜಿಸಬೇಕಾಗುತ್ತದೆ. ಇದು ನಿಮ್ಮ ನಿದ್ರೆಗೆ ಅಡ್ಡಿಪಡಿಸಬಹುದು.
ಮಸಾಲೆಯುಕ್ತ ಆಹಾರ: ರಾತ್ರಿಯಲ್ಲಿ ಮಸಾಲೆಯುಕ್ತ ಆಹಾರಗಳು ಅಥವಾ ಹುರಿದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಬಿಸಿಯಾಗಬಹುದು. ಇದು ಆಮ್ಲೀಯತೆ, ಎದೆಯುರಿ ಮತ್ತು ಎದೆಯಲ್ಲಿ ಭಾರವಾದ ಭಾವನೆಗೆ ಕಾರಣವಾಗಬಹುದು. ಇವೆಲ್ಲವೂ ದೇಹವು ವಿಶ್ರಾಂತಿ ಪಡೆಯಲು ಕಷ್ಟವಾಗುತ್ತದೆ ಮತ್ತು ನಿದ್ರೆಗೆ ಅಡ್ಡಿಪಡಿಸುತ್ತದೆ.
ಚಾಕೊಲೇಟ್: ಚಾಕೊಲೇಟ್ ರುಚಿಕರವಾಗಿರುತ್ತದೆ, ಆದರೆ ಮಲಗುವ ಮುನ್ನ ಇದು ಒಳ್ಳೆಯ ಆಯ್ಕೆಯಲ್ಲ. ಇದರಲ್ಲಿ ಕೆಫೀನ್ ಮತ್ತು ಸಕ್ಕರೆ ಎರಡೂ ಇರುವುದರಿಂದ ಇದು ಮೆದುಳನ್ನು ಸಕ್ರಿಯಗೊಳಿಸುತ್ತದೆ ಮತ್ತು ನಿದ್ರೆಯನ್ನು ತಡೆಯುತ್ತದೆ. ಡಾರ್ಕ್ ಚಾಕೊಲೇಟ್ನಲ್ಲಿ ಕೆಫೀನ್ ಇನ್ನೂ ಹೆಚ್ಚಾಗಿರುತ್ತದೆ.
ಸಕ್ಕರೆಯುಕ್ತ ಆಹಾರಗಳು: ರಾತ್ರಿಯಲ್ಲಿ ಸಕ್ಕರೆಯಂಶವಿರುವ ಕೇಕ್, ಪೇಸ್ಟ್ರೀ ಮತ್ತು ಸಿಹಿ ತಿಂಡಿಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಮತ್ತು ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಅದಕ್ಕಾಗಿಯೇ ನೀವು ರಾತ್ರಿಯಲ್ಲಿ ಸಕ್ಕರೆಯಂಶವಿರುವ ಆಹಾರಗಳನ್ನು ಸೇವನೆ ಮಾಡಬಾರದು.
ಆಮ್ಲೀಯ ವಸ್ತುಗಳು: ನಿಂಬೆ, ಕಿತ್ತಳೆ, ಸಿಹಿ ಗೆಣಸು, ಬಿಳಿ ವೈನ್ ಮತ್ತು ಟೊಮೆಟೋದಂತಹ ಆಮ್ಲೀಯ ಆಹಾರಗಳನ್ನು ರಾತ್ರಿ ಸೇವನೆ ಮಾಡುವುದರಿಂದ ಎದೆಯುರಿ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳು ಉಂಟಾಗಬಹುದು. ಇದು ನಿದ್ರಾಹೀನತೆಗೆ ಕಾರಣವಾಗಬಹುದು.
ಕ್ರೂಸಿಫೆರಸ್ ತರಕಾರಿಗಳು: ಬ್ರೋಕೊಲಿ, ಎಲೆಕೋಸು, ಹೂಕೋಸುಗಳಂತಹ ಕ್ರೂಸಿಫೆರಸ್ ತರಕಾರಿಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುತ್ತವೆ. ಅವು ಹೊಟ್ಟೆಯಲ್ಲಿ ಅನಿಲವನ್ನು ಉಂಟುಮಾಡಬಹುದು. ಅದು ನಿದ್ರೆ ಮಾಡಲು ಕಷ್ಟಕರವಾಗಬಹುದು, ಆದ್ದರಿಂದ ಅವುಗಳನ್ನು ರಾತ್ರಿ ಊಟದೊಂದಿಗೆ ತಿನ್ನುವುದನ್ನು ತಪ್ಪಿಸಿ.
ಭಾರವಾದ ಮತ್ತು ಹುರಿದ ಆಹಾರಗಳು: ರಾತ್ರಿಯಲ್ಲಿ ಪನೀರ್, ಚೋಲೆ-ಭಾತುರೆ, ಪಿಜ್ಜಾ, ಬರ್ಗರ್ಗಳು, ಡೀಪ್ ಫ್ರೈಡ್ ಆಹಾರಗಳು ಮತ್ತು ಮಟನ್, ಹಂದಿಮಾಂಸ ಸೇವಿಸುವುದರಿಂದ ಹೊಟ್ಟೆಯಲ್ಲಿ ಭಾರವಾದ ಭಾವನೆ ಉಂಟಾಗುತ್ತದೆ. ಅಲ್ಲದೆ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶವಿರುತ್ತದೆ. ಇವು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ನಿದ್ರೆಯ ಸಮಯದಲ್ಲಿಯೂ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳುತ್ತಲೇ ಇರುತ್ತದೆ. ಇದು ಆಳವಾದ ನಿದ್ರೆಯನ್ನು ತಡೆಯುತ್ತದೆ.
ಮದ್ಯ: ಮದ್ಯಪಾನ ಮಾಡುವುದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರಬಹುದು. ಆದರೆ ಅದು ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತದೆ. ನೀವು ರಾತ್ರಿಯಲ್ಲಿ ಮೂತ್ರ ವಿಸರ್ಜಿಸಲು ಅಥವಾ ಬಾಯಾರಿಕೆಯಾಗಲು ಎಚ್ಚರಗೊಳ್ಳಬಹುದು. ಇದು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಆದ್ದರಿಂದ ರಾತ್ರಿಯಲ್ಲಿ ಮದ್ಯಪಾನ ಮಾಡುವುದನ್ನು ತಪ್ಪಿಸಿ.
ವಿಜಯಪುರ, ಏಪ್ರಿಲ್ 08: ಕೆರೆಯಲ್ಲಿ ಮುಳುಗಿ ಬೆಂಗಳೂರು ಮೂಲದ ಮೂವರು ಸಾವನ್ನಪ್ಪಿರುವಂತಹ (death)ಘಟನೆ ವಿಜಯಪುರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ನಡೆದಿದೆ. ಮೊಹಮ್ಮದ್ ಹಯಾತ್(12), ಹೈದರ್ ಪಾಷಾ(32) ಮತ್ತು ಅಬ್ದುಲ್ ಖುದ್ದೂಸ್(35) ಮೃತರು. ಸದ್ಯ ಕೆರೆಯಿಂದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಡೆದಿದ್ದೇನು?
ಕುಟುಂಬ ಸಮೇತ ಒಟ್ಟು 14 ಜನರು ವಿಜಯಪುರಕ್ಕೆ ಪ್ರವಾಸಕ್ಕಾಗಿ ಆಗಮಿಸಿ ಭೂತನಾಳ ಕೆರೆಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಬಾಲಕ ಮಹಮ್ಮದ್ ಹಯಾತ್ ನೀರಿಗೆ ಇಳಿದಾಗ ಆಕಸ್ಮಿಕವಾಗಿ ಮುಳುಗಿದ್ದಾನೆ. ಬಾಲಕನನ್ನು ರಕ್ಷಿಸಲು ಹೈದರ್ ಪಾಶಾ ಹಾಗೂ ಅಬ್ದುಲ್ ಖುದ್ದುಸ್ ನೀರಿಗೆ ಇಳಿದಾಗ ಮೂವರು ಮುಳುಗಿ ಅನಾಹುತ ಸಂಭವಿಸಿದೆ.
ಬಾಲಕ ಮೊಹಮ್ಮದ್ ಹಯಾತ್ ಮತ್ತು ಹೈದರ್ ಕೆರೆಯಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಬ್ದುಲ್ ಖುದ್ದೂಸ್ ಸಾವನ್ನಪ್ಪಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯಾಗಿ ಮೃತದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಕ್ಯಾಬ್ ಚಾಲಕರ ಸಾವು
ಕೆರೆಯಲ್ಲಿ ಈಜಾಡಲು ಹೋಗಿ ಇಬ್ಬರು ಕ್ಯಾಬ್ ಚಾಲಕರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ರಾಮಸಮುದ್ರ ಕೆರೆಯಲ್ಲಿ ಇತ್ತೀಚೆಗೆ ನಡೆದಿತ್ತು. ಬೆಂಗಳೂರು ಮೂಲದ ಕಿಶೋರ್ ಹಾಗೂ ಗಿರೀಶ್ ಮೃತರು. ಕಿಶೋರ್ ಹಾಗೂ ಗಿರೀಶ್ ಸೇರಿದಂತೆ 8 ಜನ ಸ್ನೇಹಿತರು, ತಮ್ಮ ಎರಡು ಕಾರುಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿ ಗ್ರಾಮದ ಸ್ನೇಹಿತ ಜಗದೀಶ ಮನೆಗೆ ಜಾತ್ರೆಗೆ ಬಂದಿದ್ದರು.
ಜಾತ್ರೆಗೆ ಬಂದದವರು, ಕೆರೆಯಲ್ಲಿ ಈಜಾಡಲು ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಇಬ್ಬರ ಮೃತದೇಹಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಪೇರೆಸಂದ್ರ ಹಾಗೂ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.