Vastu Tips: ಮನೆಯಲ್ಲಿ ಕಸ ಗುಡಿಸುವಾಗ ಈ ತಪ್ಪು ಮಾಡಲೇಬೇಡಿ; ವಾಸ್ತು ತಜ್ಞರ ಸಲಹೆ ಇಲ್ಲಿದೆ

Vastu Tips: ಮನೆಯಲ್ಲಿ ಕಸ ಗುಡಿಸುವಾಗ ಈ ತಪ್ಪು ಮಾಡಲೇಬೇಡಿ; ವಾಸ್ತು ತಜ್ಞರ ಸಲಹೆ ಇಲ್ಲಿದೆ

ಕಸ ಗುಡಿಸುವುದು ಕೇವಲ ಸ್ವಚ್ಛತೆಯಲ್ಲ, ಅದು ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ಒಂದು ಪ್ರಮುಖ ಕ್ರಿಯೆಯಾಗಿದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಧನ ಸಂಪತ್ತು ನೆಲೆಸಲು ಕಸ ಗುಡಿಸುವ ದಿಕ್ಕು ಮತ್ತು ಸಮಯ ಅತ್ಯಂತ ಮಹತ್ವದ್ದಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ನಾಲ್ಕು ಮುಖ್ಯ ದಿಕ್ಕುಗಳು (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ಮತ್ತು ನಾಲ್ಕು ಉಪ ದಿಕ್ಕುಗಳು (ಈಶಾನ್ಯ, ಆಗ್ನೇಯ, ವಾಯುವ್ಯ, ನೈರುತ್ಯ) ಇರುತ್ತವೆ. ಬ್ರಹ್ಮಸ್ಥಾನದ ಜೊತೆಗೆ, ಈ ಎಲ್ಲಾ ದಿಕ್ಕುಗಳು ವಿಭಿನ್ನ ಧನಾಕರ್ಷಣ ಶಕ್ತಿಗಳನ್ನು ಹೊಂದಿರುತ್ತವೆ.

ಗುರೂಜಿಯವರು ಹೇಳುವಂತೆ, ಮನೆಯಲ್ಲಿ ಕಸ ಗುಡಿಸುವಾಗ ಈಶಾನ್ಯ (North-East) ದಿಕ್ಕಿನಿಂದ ಪ್ರಾರಂಭಿಸಬೇಕು. ನಂತರ ಆಗ್ನೇಯ (South-East) ದಿಕ್ಕಿಗೆ ಸಾಗಿ, ವಾಯುವ್ಯ (North-West) ದಿಕ್ಕಿನ ಮೂಲಕ ಕಸ ಗುಡಿಸುವುದನ್ನು ನೈರುತ್ಯ (South-West) ದಿಕ್ಕಿನಲ್ಲಿ ಪೂರ್ಣಗೊಳಿಸಬೇಕು. ಈ ನಿರ್ದಿಷ್ಟ ವಿಧಾನವು ಮನೆಗೆ ಅದೃಷ್ಟ, ನೆಮ್ಮದಿ, ಸುಖ, ಶಾಂತಿ ಮತ್ತು ಧನಯೋಗವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಮನೆಯ ಬಾಗಿಲು ಯಾವುದೇ ದಿಕ್ಕಿಗೆ ಇದ್ದರೂ, ಈಶಾನ್ಯದಿಂದ ಪ್ರಾರಂಭಿಸಿ ನೈರುತ್ಯದಲ್ಲಿ ಕಸ ಗುಡಿಸುವುದನ್ನು ಮುಗಿಸಬೇಕು. ಗುಡಿಸಿದ ಕಸವನ್ನು ಎಂದಿಗೂ ಮುಖ್ಯ ದ್ವಾರದ ಬಳಿ ಹಾಕಬಾರದು.

ಕಸ ಗುಡಿಸುವ ಸಮಯದ ಕುರಿತು ಸಹ ಶಾಸ್ತ್ರಗಳಲ್ಲಿ ನಿರ್ದಿಷ್ಟ ನಿಯಮಗಳಿವೆ. ಬೆಳಗಿನ ಜಾವ ಸೂರ್ಯೋದಯಕ್ಕೆ ಮುಂಚೆ ಕಸ ಗುಡಿಸುವುದು ಅತ್ಯಂತ ಶುಭ. ಸೂರ್ಯೋದಯದ ನಂತರ ಕಸ ಗುಡಿಸುವುದು ಅಷ್ಟು ಶುಭಕರವಲ್ಲ. ಹಾಗೆಯೇ, ಸಂಧ್ಯಾಕಾಲದಲ್ಲಿ, ಸೂರ್ಯಾಸ್ತದ ನಂತರ ಮನೆಯಲ್ಲಿ ಕಸ ಗುಡಿಸಬಾರದು. ಸಂಜೆ ಮಹಾಲಕ್ಷ್ಮಿಯು ಮನೆಗೆ ಆಗಮಿಸುವ ಸಮಯವೆಂದು ನಂಬಲಾಗಿದೆ. ಈ ಸಮಯದಲ್ಲಿ ಕಸ ಗುಡಿಸುವುದು ಒಳ್ಳೆಯದಲ್ಲ. ಅನಿವಾರ್ಯ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಈ ನಿಯಮಗಳನ್ನು ಸಡಿಲಗೊಳಿಸಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಪೊರಕೆಯ ಬಳಕೆ ಮತ್ತು ನಿರ್ವಹಣೆ ಕುರಿತು ಸಹ ಕೆಲವು ನಿಯಮಗಳಿವೆ. ಪೊರಕೆಯನ್ನು ಎಂದಿಗೂ ತುಳಿಯಬಾರದು. ಅದನ್ನು ಗೋಡೆಗೆ ಒರಗಿಸಿ ನಿಲ್ಲಿಸುವುದು ಅಥವಾ ಮೇಲ್ಮುಖವಾಗಿ ಇಡುವುದು ಶುಭವಲ್ಲ. ಬದಲಿಗೆ, ಪೊರಕೆಯನ್ನು ಅಡ್ಡಲಾಗಿ, ಯಾರಿಗೂ ಕಾಣಿಸದ ಸ್ಥಳದಲ್ಲಿ ಇಡಬೇಕು. ಅರ್ಧ ಮುರಿದ ಅಥವಾ ಹಳೆಯದಾದ ಪೊರಕೆಯನ್ನು ಬಳಸಿ ಕಸ ಗುಡಿಸುವುದು ಅಶುಭಕರ.

ವಾಸ್ತು ಪ್ರಕಾರ, ಸಾಮಾನ್ಯವಾಗಿ ಮನೆಯಲ್ಲಿ ನೀರು ಹರಿಯುವ ದಿಕ್ಕು (ನೈರುತ್ಯದಿಂದ ಈಶಾನ್ಯಕ್ಕೆ) ಅಥವಾ ಎತ್ತರದ ಪ್ರದೇಶಗಳು (ದಕ್ಷಿಣ ಮತ್ತು ಪಶ್ಚಿಮದಲ್ಲಿ ಹೆಚ್ಚು ಎತ್ತರ, ಉತ್ತರ ಮತ್ತು ಪೂರ್ವದಲ್ಲಿ ಕಡಿಮೆ ಎತ್ತರ) ಬೇರೆ ನಿಯಮಗಳನ್ನು ಹೊಂದಿದ್ದರೂ, ಕಸ ಗುಡಿಸುವ ವಿಷಯದಲ್ಲಿ ಈಶಾನ್ಯದಿಂದ ಪ್ರಾರಂಭಿಸಿ ನೈರುತ್ಯದಲ್ಲಿ ಪೂರ್ಣಗೊಳಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ಮುಕ್ತಗೊಳಿಸಲು ಬಿಗ್ ಪ್ಲಾನ್: 35 ಫ್ಲೈಓವರ್, 25 ಅಂಡರ್‌ಪಾಸ್

ಬೆಂಗಳೂರು, ಏ. 8: ಬೆಂಗಳೂರಿನ ರಸ್ತೆಗಳಲ್ಲಿ ಪ್ರತಿದಿನ ಸುಮಾರು 2,000 ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ಈ ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸಲು ಬೆಂಗಳೂರು ಸಂಚಾರ ಪೊಲೀಸರು 35 ಫ್ಲೈಓವರ್‌ಗಳು, 25 ಅಂಡರ್‌ಪಾಸ್‌ಗಳು ಮತ್ತು 101 ಸ್ಕೈವಾಕ್‌ಗಳನ್ನು ಒಳಗೊಂಡ ಬೃಹತ್ ಯೋಜನೆಯನ್ನು ಬೃಹತ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಸಲ್ಲಿಸಿದ್ದಾರೆ.

ಪೂರ್ವ ಬೆಂಗಳೂರಿನ ಮಹದೇವಪುರ ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ಅತಿ ಹೆಚ್ಚು ಟ್ರಾಫಿಕ್ ಒತ್ತಡವಿದ್ದು, ಇಲ್ಲಿ ಹೆಚ್ಚಿನ ಫ್ಲೈಓವರ್ ಮತ್ತು ಪಾದಚಾರಿ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದೆ. ಹೆಬ್ಬಾಳ, ಸಾರಕ್ಕಿ ಸರ್ಕಲ್ ಮತ್ತು ಬನ್ನೇರುಘಟ್ಟ ರಸ್ತೆಯ ದಾಲ್ಮಿಯಾ ಜಂಕ್ಷನ್ ಸೇರಿದಂತೆ 25 ಪ್ರಮುಖ ಜಂಕ್ಷನ್‌ಗಳನ್ನು ಅಂಡರ್‌ಪಾಸ್ ಮೂಲಕ ಸಿಗ್ನಲ್ ಮುಕ್ತಗೊಳಿಸಲು ಯೋಜಿಸಲಾಗಿದೆ.

ವರ್ತೂರು ಕೋಡಿ, ದೊಮ್ಮಸಂದ್ರ, ಗುಂಜೂರು, ಎಚ್‌ಎಎಲ್ ಹಳೇ ವಿಮಾನ ನಿಲ್ದಾಣ ರಸ್ತೆ ಮತ್ತು ಯಲಹಂಕ ಭಾಗಗಳಲ್ಲಿ ಹೊಸ ಫ್ಲೈಓವರ್‌ಗಳನ್ನು ಪ್ರಸ್ತಾಪಿಸಲಾಗಿದೆ. ನಗರದಲ್ಲಿ ವಾರ್ಷಿಕವಾಗಿ ಸುಮಾರು 200 ಪಾದಚಾರಿಗಳು ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಲು 101 ಹೊಸ ಸ್ಕೈವಾಕ್‌ಗಳು ಅನಿವಾರ್ಯ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇತರ ಸಣ್ಣ ಬದಲಾವಣೆಗಳು:

2,340 ಹೊಸ ಟ್ರಾಫಿಕ್ ಸೈನ್‌ಬೋರ್ಡ್‌ಗಳ ಅಳವಡಿಕೆ.

103 ಬಸ್ ನಿಲ್ದಾಣಗಳ ಸ್ಥಳಾಂತರ ಮತ್ತು 63 ಹೊಸ ಬಸ್ ಬೇಗಳ ನಿರ್ಮಾಣ.

ಅವೈಜ್ಞಾನಿಕವಾಗಿರುವ 84 ಸ್ಪೀಡ್ ಬ್ರೇಕರ್‌ಗಳ ತೆರವು.

ನೀರು ನಿಲ್ಲುವ 137 ಸ್ಥಳಗಳಲ್ಲಿ ಚರಂಡಿ ವ್ಯವಸ್ಥೆ ಸುಧಾರಣೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್: ಮೇ ತಿಂಗಳಿನಲ್ಲಿ ಓಪನ್ ಆಗಲ್ಲ ಪಿಂಕ್ ಲೈನ್! ವಿಳಂಬಕ್ಕೆ ಅಸಲಿ ಕಾರಣವೇನು?

ಬೃಹತ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾತನಾಡಿ, “ಇದು ಅತ್ಯಂತ ವಿವರವಾದ ಆಡಿಟ್ ವರದಿಯಾಗಿದೆ. ಆದರೆ ಇಷ್ಟೊಂದು ದೊಡ್ಡ ಮಟ್ಟದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಭೂಸ್ವಾಧೀನ ಮತ್ತು ಹಣಕಾಸಿನ ಯೋಜನೆ ಬಹಳ ಮುಖ್ಯ. ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ನಡೆಸಲಾಗುವುದು,” ಎಂದು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನ ಅಥವಾ ಚೀನಾ, ಅಮೆರಿಕ-ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮಾಡಿದ್ಯಾರು?

ಟೆಹ್ರಾನ್, ಏಪ್ರಿಲ್ 08: ಅಮೆರಿಕ-ಇರಾನ್(Iran) ಅಂತೂ ಕದನವಿರಾಮಕ್ಕೆ ಒಪ್ಪಿಗೆ ನೀಡಿವೆ. ಇದರ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯನ್ನೂ ತೆರೆಯಲಾಗಿದೆ. ದ್ವಿಪಕ್ಷೀಯ ಕದನ ವಿರಾಮದಿಂದಾಗಿ ಇರಾನ್ ಮೇಲಿನ ಸಂಭಾವ್ಯ ದಾಳಿಗಳನ್ನು ಎರಡು ವಾರಗಳ ಕಾಲ ತಡೆಹಿಡಿಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟ್ರಂಪ್ ಅವರ ನಿರ್ಧಾರಕ್ಕೆ ಅನುಗುಣವಾಗಿ ಅಮೆರಿಕ ಸೇನೆಯು ಇರಾನ್ ವಿರುದ್ಧದ ಎಲ್ಲಾ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.

ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಅಮೆರಿಕದೊಂದಿಗೆ ಕದನ ವಿರಾಮಕ್ಕೆ ದಾರಿ ಕಂಡುಕೊಳ್ಳಲು ಇರಾನ್‌ಗೆ ಪ್ರೋತ್ಸಾಹ ನೀಡಿವೆ. ಮಾತುಕತೆ ನಡೆಯುತ್ತಿರುವಾಗ ಚೀನಾದ ಅಧಿಕಾರಿಗಳು ಇರಾನಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ಸೂಚಿಸುತ್ತವೆ. ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಮಧ್ಯವರ್ತಿಗಳ ಮೂಲಕ ಚೀನಾ ಕೂಡ ಪ್ರಭಾವ ಬೀರಲು ಪ್ರಯತ್ನಿಸಿತು.

ಚೀನಾದ ವಿದೇಶಾಂಗ ಸಚಿವಾಲಯವು ಈ ವಿಷಯದ ಬಗ್ಗೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಮಪ್ ಪಾಕಿಸ್ತಾನದಿಂದಲೇ ನಾವು ಕದನ ವಿರಾಮಕ್ಕೆ ಒಪ್ಪಿಗೆ ನೀಡಿರುವುದಾಗಿ ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರವೇ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ಮತ್ತಷ್ಟು ಓದಿ: ಇನ್ನೆರಡು ದಿನ ಹೊರಗೆ ಬರಬೇಡಿ; ಇರಾನ್​ನಲ್ಲಿರುವ ಭಾರತೀಯರಿಗೆ ತುರ್ತು ಸೂಚನೆ ನೀಡಿದ ಭಾರತ

ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಮಧ್ಯವರ್ತಿಗಳ ಮೂಲಕ ಟೆಹ್ರಾನ್ ಅನ್ನು ಕದನ ವಿರಾಮದ ಹಾದಿಯತ್ತ ತಳ್ಳುವ ಮೂಲಕ ಚೀನಾ ಶಾಂತ ಆದರೆ ಪ್ರಭಾವಶಾಲಿ ಪಾತ್ರವನ್ನು ವಹಿಸಿದೆ. ಒಟ್ಟಾರೆಯಾಗಿ ತೆಗೆದುಕೊಂಡರೆ, ಕದನ ವಿರಾಮದ ಒತ್ತಡವು ಒಬ್ಬ ವ್ಯಕ್ತಿಯ ಪರಿಣಾಮವಾಗಿರಲಿಲ್ಲ, ಪಾಕಿಸ್ತಾನದ ಕೊನೆಯ ನಿಮಿಷದ ಮಧ್ಯಸ್ಥಿಕೆ, ಚೀನಾದ ಶಾಂತ ಒತ್ತಡದ ಪರಿಣಾಮ ಈಗೊಂದು ನಿರ್ಧಾರಕ್ಕೆ ಬರಲಾಗಿದೆ.

ಚೀನಾ ತನ್ನ ಒಳಗೊಳ್ಳುವಿಕೆಯ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸದಿದ್ದರೂ, ಇರಾನ್ ಮೇಲೆ ತನ್ನ ಪ್ರಭಾವವನ್ನು ಬಳಸಿಕೊಳ್ಳಲು ಬೀಜಿಂಗ್ ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಮಧ್ಯವರ್ತಿಗಳ ಮೂಲಕ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದರು.

ಇಲ್ಲಿಯವರೆಗೆ, ಚೀನಾದ ವಿದೇಶಾಂಗ ಸಚಿವಾಲಯವು ಬೀಜಿಂಗ್ ಪಾತ್ರದ ಕುರಿತು ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ ವಾಷಿಂಗ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿಯು, ಯುದ್ಧ ಪ್ರಾರಂಭವಾದಾಗಿನಿಂದ ಬೀಜಿಂಗ್ ಕೆಲಸ ಮಾಡುತ್ತಿದೆ ಎಂದು ಹೇಳಿದೆ.

ದೇಶದ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲಿನ ದಾಳಿಯ ಬೆದರಿಕೆಯಿಂದ ಟ್ರಂಪ್ ಹಿಂದೆ ಸರಿದಿದ್ದಾರೆ. ಮೂವರು ಇರಾನಿನ ಅಧಿಕಾರಿಗಳ ಪ್ರಕಾರ, ಇರಾನ್‌ನ ಪ್ರಮುಖ ಮಿತ್ರ ರಾಷ್ಟ್ರವಾದ ಚೀನಾದ ಕೊನೆಯ ಕ್ಷಣದ ಹಸ್ತಕ್ಷೇಪದ ನಂತರ ಇರಾನ್ ಪಾಕಿಸ್ತಾನದ ಎರಡು ವಾರಗಳ ಕದನ ವಿರಾಮ ಪ್ರಸ್ತಾಪವನ್ನು ಒಪ್ಪಿಕೊಂಡಿತು ಎಂದು ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮುಂಬೈ ಇಂಡಿಯನ್ಸ್ ಎಡವಿದ್ದು ಎಲ್ಲಿ? ಸೋಲಿಗೆ 6 ಕಾರಣಗಳು

IPL 2026: ಐಪಿಎಲ್ 2026ರ ಬಹುನಿರೀಕ್ಷಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವು ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 27 ರನ್‌ಗಳ ಸೋಲನುಭವಿಸಿದೆ. ಮಳೆಯ ಕಾರಣ ಕೇವಲ 11 ಓವರ್‌ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಬರೋಬ್ಬರಿ 150 ರನ್ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 11 ಓವರ್​ಗಳಲ್ಲಿ 123 ರನ್​ಗಳಿಸಿ, 27 ರನ್​ಗಳಿಂದ ಸೋಲೊಪ್ಪಿಕೊಂಡರು.

ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಐದಾರು ಎಸೆತಗಳನ್ನು ನಾವು ಉತ್ತಮವಾಗಿ ಎಸೆದಿದ್ದರೆ ಪಂದ್ಯ ಗೆಲ್ಲಬಹುದಿತ್ತು ಎಂದಿದ್ದರು. ಅಲ್ಲದೆ ಸೋಲಿಗೆ ಬೌಲರ್​ಗಳ ಕಳಪೆ ಪ್ರದರ್ಶನ ಕಾರಣ ಎಂದಿದ್ದರು. ಅಷ್ಟಕ್ಕೂ ಈ ಸೋಲಿಗೆ ಕಾರಣಗಳೇನು ಎಂದು ನೋಡುವುದಾದರೆ…

  1.  ಬೌಲಿಂಗ್ ವಿಭಾಗದ ಸಂಪೂರ್ಣ ವೈಫಲ್ಯ: ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗವು ಈ ಪಂದ್ಯದಲ್ಲಿ ಅತ್ಯಂತ ದುಬಾರಿಯಾಯಿತು. ಕೇವಲ 11 ಓವರ್‌ಗಳಲ್ಲಿ 150 ರನ್ ಬಿಟ್ಟುಕೊಟ್ಟಿದ್ದು (ಅಂದರೆ ಪ್ರತಿ ಓವರ್‌ಗೆ ಸರಾಸರಿ 13.63 ರನ್) ಸೋಲಿಗೆ ಮೊದಲ ಮತ್ತು ಮುಖ್ಯ ಕಾರಣ. ಜಸ್​ಪ್ರೀತ್ ಬುಮ್ರಾ ಅಂತಹ ಅನುಭವಿ ಬೌಲರ್ ಕೂಡ 3 ಓವರ್‌ಗಳಲ್ಲಿ 32 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾದರು. ದೀಪಕ್ ಚಹರ್ ಮತ್ತು ಟ್ರೆಂಟ್ ಬೌಲ್ಟ್ ತಮ್ಮ ತಲಾ ಒಂದು ಓವರ್‌ನಲ್ಲಿ 22 ರನ್‌ಗಳನ್ನು ಬಿಟ್ಟುಕೊಟ್ಟಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು.
  2.  ಪವರ್‌ಪ್ಲೇನಲ್ಲಿ ರಾಜಸ್ಥಾನ್ ಅಬ್ಬರ: ಪಂದ್ಯವು 11 ಓವರ್‌ಗಳಿಗೆ ಸೀಮಿತವಾಗಿದ್ದರಿಂದ ಮೊದಲ 3.2 ಓವರ್‌ಗಳು ಪವರ್‌ಪ್ಲೇ ಆಗಿತ್ತು. ಈ ಅವಧಿಯಲ್ಲಿ ರಾಜಸ್ಥಾನ್ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು 15 ವರ್ಷದ ವೈಭವ್ ಸೂರ್ಯವಂಶಿ ಮುಂಬೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 20 ಎಸೆತಗಳಲ್ಲಿ 59 ರನ್ ಚಚ್ಚಿದ ಈ ಜೋಡಿ, ಮುಂಬೈ ತಂಡವನ್ನು ಮಾನಸಿಕವಾಗಿ ಕುಗ್ಗಿಸಿತು.
  3. ಆರಂಭಿಕ ಬ್ಯಾಟಿಂಗ್ ಕುಸಿತ: 151 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ ತಂಡಕ್ಕೆ ಭರ್ಜರಿ ಆರಂಭದ ಅಗತ್ಯವಿತ್ತು. ಆದರೆ ಮುಂಬೈ ಇಂಡಿಯನ್ಸ್​ ತಂಡದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ (5), ಸೂರ್ಯಕುಮಾರ್ ಯಾದವ್ (6) ಮತ್ತು ರಯಾನ್ ರಿಕೆಲ್ಟನ್ (8) ಕೇವಲ 23 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದರು. ಈ ಆರಂಭಿಕ ಕುಸಿತದಿಂದಾಗಿ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚಾಯಿತು.
  4.  ದೊಡ್ಡ ಜೊತೆಯಾಟಗಳ ಕೊರತೆ: ಟಿ20 ಪಂದ್ಯಗಳಲ್ಲಿ ಕನಿಷ್ಠ ಒಂದು ದೊಡ್ಡ ಜೊತೆಯಾಟದ ಅಗತ್ಯವಿರುತ್ತದೆ. ಆದರೆ ಮುಂಬೈ ಇಂಡಿಯನ್ಸ್ ಪರ ಆರಂಭದಲ್ಲಿ ಅಂತಹ ಯಾವುದೇ ಜೊತೆಯಾಟ ಮೂಡಿಬಂದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ  ನಮನ್ ಧೀರ್ ಮತ್ತು ಶೆರ್ಫೇನ್ ರದರ್‌ಫೋರ್ಡ್ 17 ಎಸೆತಗಳಲ್ಲಿ 47 ರನ್ ಚಚ್ಚಿದ್ದರು. ಒಂದು ವೇಳೆ ಆರಂಭದಲ್ಲಿ ದೊಡ್ಡ ಜೊತೆಯಾಟ ಮೂಡಿಬಂದಿದ್ದರೆ ಅಂತಿಮ ಓವರ್​ಗಳ ವೇಳೆ ಕಡಿಮೆ ಗುರಿ ಪಡೆಯಬಹುದಿತ್ತು.
  5.  ರಾಜಸ್ಥಾನ್ ಬೌಲರ್‌ಗಳ ಶಿಸ್ತುಬದ್ಧ ದಾಳಿ: ಮುಂಬೈ ಇಂಡಿಯನ್ಸ್​ ಬ್ಯಾಟರ್‌ಗಳು ಒತ್ತಡದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್​ ಬೌಲರ್‌ಗಳು ಅದನ್ನು ಸಮರ್ಥವಾಗಿ ಬಳಸಿಕೊಂಡರು. ನಾಂಡ್ರೆ ಬರ್ಗರ್ (2/21) ಮತ್ತು ಸಂದೀಪ್ ಶರ್ಮಾ (2/26) ಅವರು ರನ್ ವೇಗಕ್ಕೆ ಕಡಿವಾಣ ಹಾಕಿದ್ದಲ್ಲದೆ, ಸಮಯಕ್ಕೆ ಸರಿಯಾಗಿ ವಿಕೆಟ್ ಪಡೆದರು. ರವಿ ಬಿಷ್ಣೋಯ್ ಅವರ ಸ್ಪಿನ್ ದಾಳಿಯು ಮುಂಬೈ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
  6. ಪವರ್​ ಇಲ್ಲದ ಪವರ್​ಪ್ಲೇ: ಈ ಪಂದ್ಯದಲ್ಲಿ ಪವರ್​ಪ್ಲೇ 3.2 ಓವರ್​ಗಳಿಗೆ ಸೀಮಿತವಾಗಿತ್ತು. ಇತ್ತ ರಾಜಸ್ಥಾನ್ ರಾಯಲ್ಸ್ ತಂಡವು ಪವರ್​ಪ್ಲೇನಲ್ಲಿ ಕಲೆಹಾಕಿದ್ದು ಬರೋಬ್ಬರಿ 58 ರನ್​ಗಳು. ಅದೇ ವೇಳೆ ಮುಂಬೈ ಇಂಡಿಯನ್ಸ್ ಕೇವಲ 34 ರನ್​ಗಳು ಮಾತ್ರ. ಅಷ್ಟೇ ಅಲ್ಲದೆ ಮೊದಲ 5 ಓವರ್​ಗಳಲ್ಲಿ ರಾಜಸ್ಥಾನ್ 80 ರನ್ ಗಳಿಸಿದರೆ, ಮುಂಬೈ ಇಂಡಿಯನ್ಸ್ ಕೇವಲ 46 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಅಂದರೆ ಮೊದಲ ಐದು ಓವರ್​ಗಳಲ್ಲಿನ ರನ್​ ವ್ಯತ್ಯಾಸವು ಮುಂಬೈ ಇಂಡಿಯನ್ಸ್ ಸೋಲಿಗೆ ಪ್ರಮುಖ ಕಾರಣವಾಯಿತು ಎಂದರೆ ತಪ್ಪಾಗಲಾರದು.

 

Source link

ಬೆಂಗಳೂರು: ಮೈಸೂರು ರಸ್ತೆಯಲ್ಲಿ ಭೀಕರ ಅಪಘಾತ, ಸಿಗ್ನಲಲ್ಲಿ ನಿಲ್ಲಿಸಿದ್ದ ಲಾರಿಗೆ ಗುದ್ದಿದ ಮತ್ತೊಂದು ಲಾರಿ, ಚಾಲಕ ಸಾವು

ಬೆಂಗಳೂರು, ಏಪ್ರಿಲ್ 8: ಬೆಂಗಳೂರಿನ ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್ ಬಳಿ ಬುಧವಾರ ಮುಂಜಾನೆ ಭೀಕರ ಲಾರಿ ಅಪಘಾತ ಸಂಭವಿಸಿದೆ. ಈಚರ್ ಲಾರಿ ಚಾಲಕ ವಿಜಯ್, ಕೆ.ಆರ್. ಮಾರ್ಕೆಟ್‌ನಿಂದ ಮೈಸೂರು ರಸ್ತೆಗೆ ಬರುವ ಮಾರ್ಗದಲ್ಲಿ ವೇಗವಾಗಿ ಚಲಿಸಿ ಸರಣಿ ಅಪಘಾತಗಳನ್ನು ಎಸಗಿದ್ದಾನೆ. ಫ್ಲೈಓವರ್ ಮೇಲೆ ಮೂರು ಬಾರಿ ಇದೇ ರೀತಿ ಅಪಘಾತಗಳನ್ನು ಮಾಡಿ ಬಂದ ಈ ಲಾರಿ, ಸಿಗ್ನಲ್‌ನಲ್ಲಿ ನಿಂತಿದ್ದ ಮತ್ತೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಅಪಘಾತದ ಪರಿಣಾಮವಾಗಿ ಈಚರ್ ಲಾರಿಯ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಚಾಲಕ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೀಡಾದ ಲಾರಿಗಳಲ್ಲಿ ಒಂದು ತರಕಾರಿ ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಯ ತೀವ್ರತೆಯಿಂದಾಗಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ.

ವರದಿ: ಅರುಣ್​ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ಬರ ಸಿಡಿಲಬ್ಬರ… ಮೊದಲ ಓವರ್​ನಲ್ಲೇ ಭರ್ಜರಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

Source link

‘ಟಾಕ್ಸಿಕ್’ ಎದುರು ಬರಲು ರೆಡಿ ಆಯ್ತು ಬಾಲಿವುಡ್​​ನ ಸ್ಟಾರ್ ನಟನ ಸಿನಿಮಾ

‘ಟಾಕ್ಸಿಕ್’ vs ‘ಧುರಂಧರ್ 2’ ಸಿನಿಮಾ ಮಧ್ಯೆ ಕ್ಲ್ಯಾಶ್ ಆಗಲಿದೆ ಎಂದು ಎಲ್ಲರೂ ನಂಬಿದ್ದರು. ಆದರೆ, ಅದು ಸುಳ್ಳಾಯಿತು. ‘ಟಾಕ್ಸಿಕ್’ ಸಿನಿಮಾ ತನ್ನ ರಿಲೀಸ್ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಿದೆ. ಈ ಮೂಲಕ ದೊಡ್ಡ ಕ್ಲ್ಯಾಶ್ ತಪ್ಪಿದೆ. ಹೀಗಿರುವಾಗಲೇ ‘ಟಾಕ್ಸಿಕ್’ ಸಿನಿಮಾ (Toxic Movie) ಎದುರು ಒಂದು ದೊಡ್ಡ ಸಿನಿಮಾ ತೆರೆಗೆ ಬರಲು ರೆಡಿ ಆಗಿದೆ. ಅದು ಬೇರೆ ಯಾವೂದು ಅಲ್ಲ,ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ ಚಿತ್ರ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಬಾರಿ ಈದ್​ಗೆ ‘ಮಾತೃಭೂಮಿ’ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರೀಶೂಟ್ ಕಾರಣಕ್ಕೆ ರಿಲೀಸ್ ಮುಂದಕ್ಕೆ ಹೋಯಿತು. ಈ ಚಿತ್ರದ ಟೈಟಲ್ (ಮೊದಲ ಟೈಟಲ್ ಬ್ಯಾಟಲ್ ಆಫ್ ಗಲ್ವಾನ್) ಹಾಗೂ ಕಥೆ ಬದಲಿಸಿ 40 ದಿನ ಮರುಚಿತ್ರೀಕರಣ ಮಾಡಲಾಗಿದೆ. ಮೇ 15ರಂದು ಚಿತ್ರ ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಈ ದಿನಾಂಕ ಕೂಡ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಮೇ 15 ಎಂದರೆ ಶಾಲಾ-ಕಾಲೇಜಿಗೆ ರಜೆ ಇರುತ್ತದೆ. ಆದರೆ. ಈ ರಜೆಯ ಲಾಭ ಪಡೆಯಲು ಸಲ್ಮಾನ್ ಖಾನ್ ಮುಂದಾಗಿದ್ದರು. ಆದರೆ, ಅದು ಅಸಾಧ್ಯ ಎಂಬ ರೀತಿಯಲ್ಲಿದೆ. ಇದು ಭಾರತ ಹಾಗೂ ಚೀನಾ ನಡುವಿನ ಗಲ್ವಾನ್ ಘರ್ಷಣೆಯ ವಿಷಯ. ಈ ವಿಷಯದಲ್ಲಿ ಕೊಂಚ ಎಡವಟ್ಟಾದರೂ ಭಾರತ ಹಾಗೂ ಚೀನಾ ಸಂಬಂಧ ಹದಗೆಡಬಹುದು. ಹೀಗಾಗಿ ಸೆನ್ಸಾರ್ ಮಂಡಳಿಯವರು ವಿಸ್ತೃತವಾಗಿ ಸಿನಿಮಾ ನೋಡುವ ಸಾಧ್ಯತೆ ಇದೆ.

ಸದ್ಯ ಪೋಸ್ಟ್ ಪ್ರೊಕಡ್ಷನ್ ಕೆಲಸಗಳು ನಡೆಯುತ್ತಿವೆ. ಸಿನಿಮಾ ಸಂಪೂರ್ಣವಾಗಿ ಸಿದ್ಧಗೊಳ್ಳಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ, ಸದ್ಯದ ಮಟ್ಟಿಗೆ ಮಾತೃಭೂಮಿ ಸಿನಿಮಾ ಮೇ 15ರಂದು ರಿಲೀಸ್ ಆಗಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ಯಾವ ಪಾತ್ರ? ಕೊನೆಗೂ ಮೌನ ಮುರಿದ ಟೊವಿನೋ ಥಾಮಸ್

ಈ ಎಲ್ಲಾ ಕಾರಣದಿಂದ ಸಿನಿಮಾ ರಿಲೀಸ್ ಜೂನ್​​ಗೆ ಹೋಗಿದೆ. ಜೂನ್ 4ರಂದು ‘ಟಾಕ್ಸಿಕ್’ ಸಿನಿಮಾ ಬರುತ್ತಿದೆ. ಈ ಸಂದರ್ಭದಲ್ಲೇ ‘ಮಾತೃಭೂಮಿ’ ಕೂಡ ರಿಲೀಸ್ ಆಗಬಹುದು ಎಂದು ಹೇಳಲಾಗುತ್ತಾ ಇದೆ. ಸಲ್ಮಾನ್​ ಖಾನ್​​ಗೆ ಬಾಲಿವುಡ್​​ನಲ್ಲಿ ಬೇಡಿಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಾಮರಾಜನಗರ: ಮಹಿಳೆಯರ ಒಳ ಉಡುಪುಗಳನ್ನೇ ಕದ್ದು ಧರಿಸುವ ಸೈಕೋ! ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಕೃತಿಯ ದೃಶ್ಯ

ಚಾಮರಾಜನಗರ, ಏಪ್ರಿಲ್ 8: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ವಿಚಿತ್ರ ಸೈಕೋಪಾತ್‌ ಒಬ್ಬನ ಕೈಚಳಕ ಮಹಿಳೆಯರಲ್ಲಿ ಭೀತಿ ಹುಟ್ಟಿಸಿದೆ. ಇಲ್ಲಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರ ಒಳ ಉಡುಪುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮನೆಗಳ ಮುಂದೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳು ಪದೇ ಪದೇ ನಾಪತ್ತೆಯಾಗುತ್ತಿದ್ದವು. ಇದರಿಂದ ಸಂಶಯಗೊಂಡ ನಿವಾಸಿಗಳು ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ತಡರಾತ್ರಿ ಮಹಿಳೆಯ ವೇಷದಲ್ಲಿ ಬರುವ ಈ ವ್ಯಕ್ತಿ, ಒಳ ಉಡುಪುಗಳನ್ನು ಕದ್ದು, ಸ್ಥಳದಲ್ಲೇ ಅವುಗಳನ್ನು ಧರಿಸಿಕೊಂಡು ವಿಕೃತಿ ಮೆರೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸೈಕೋಪಾತ್‌ನ ವಿಚಿತ್ರ ವರ್ತನೆಯಿಂದ ಕಾಲೋನಿಯ ಮಹಿಳೆಯರು ಆತಂಕಕ್ಕೊಳಗಾಗಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಚಿತ್ರದಲ್ಲಿ ಯಾವ ಪಾತ್ರ? ಕೊನೆಗೂ ಮೌನ ಮುರಿದ ಟೊವಿನೋ ಥಾಮಸ್

ಮಲಯಾಳಂ ನಟ ಟೊವಿನೋ ಥಾಮಸ್ ಅವರು (Tovino Thomas) ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಾ ಇದೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ‘ಟಾಕ್ಸಿಕ್’ ವಿಕಿಪೀಡಿಯಾ ಪೇಜ್​ ಅಲ್ಲೂ ಅವರ ಹೆಸರು ಇದೆ. ಈ ಬಗ್ಗೆ ಟೊವಿನೋ ಮಾತನಾಡಿದ್ದಾರೆ. ‘ಪಳ್ಳಿಚಟ್ಟಂಬಿ’ ಸಿನಿಮಾದಲ್ಲಿ ಟುವಿನೋ ನಟಿಸಿದ್ದಾರೆ. ಏಪ್ರಿಲ್ 15ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ತಂಡ ಬೆಂಗಳೂರಿಗೆ ಆಗಮಿಸಿತ್ತು. ಈ ವೇಳೆ ‘ಟಾಕ್ಸಿಕ್’ ಸಿನಿಮಾದ ಪಾತ್ರ ಯಾವುದು ಎಂಬ ಬಗ್ಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ.

‘ನನ್ನ ಬಳಿಯೇ ಆ ಬಗ್ಗೆ ಮಾಹಿತಿ ಇದ್ದರೆ ನಾನು ಖಂಡಿತ ಹೇಳುತ್ತೇನೆ. ಸಿನಿಮಾ ತಂಡದವರ ಬಳಿ ಎಕ್ಸ್​​ಕ್ಲೂಸಿವ್ ಸುದ್ದಿ ಇದ್ದರೆ ಖಂಡಿತವಾಗಿಯೂ ಅವರು ಅನೌನ್ಸ್ ಮಾಡುತ್ತಾರೆ. ವದಂತಿಗಳನ್ನು ನಂಬಬೇಡಿ. ನಾನು ನಿಜ ಹೇಳುತ್ತಿದ್ದೇನೆ. ನನಗೂ ಟಾಕ್ಸಿಕ್ ಅಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಗೀತು ಮೋಹನ್​ದಾಸ್ ಮಲಯಾಳಂನವರು. ಅವರು ನನಗೆ ಅಕ್ಕನ ರೀತಿ. ಅವರ ಪತಿ ನನಗೆ ತುಂಬಾನೇ ಆಪ್ತ’ ಎಂದರು ಟೊವಿನೋ ಥಮಾಸ್.

‘ಸೋಶಿಯಲ್ ಮೀಡಿಯಾದಲ್ಲಿ ಕಾಣೋದಲ್ಲ ನಿಜವಲ್ಲ. ಸಿನಿಮಾ ರಿಲೀಸ್ ಆದ ಬಳಿಕ ನಿಮಗೇ ಗೊತ್ತಾಗುತ್ತದೆ. ಆಗ ಸುಳ್ಳು ಸುದ್ದಿ ಹಬ್ಬಿಸೋರು ಯಾರು ಅಂತ ತಿಳಿಯುತ್ತದೆ. ಆಗ ಅವರನ್ನು ಬ್ಲ್ಯಾಕ್​​ಲಿಸ್ಟ್​​ಗೆ ಸೇರಿಸಿ. ಮತ್ತೆಂದಿಗೂ ಅವರನ್ನು ನಂಬ ಬೇಡಿ. ಈ ಜಗತ್ತಲ್ಲಿ ಹೀಗೆ ಬದುಕಬೇಕು’ ಎಂದರು ಅವರು.

‘ಸೋಶಿಯಲ್ ಮೀಡಿಯಾದವರು ಯಾರಿಗೂ ಹೆದರಬೇಕಿಲ್ಲ. ಅವರು ಯಾರಿಗೂ ಉತ್ತರಿಸಬೇಕಿಲ್ಲ. ಹೀಗಾಗಿ, ಅವರಿಗೆ ಸುಳ್ಳು ಸುದ್ದಿ ಕೊಟ್ಟರೂ ತೊಂದರೆ ಆಗಲ್ಲ. ಟಾಕ್ಸಿಕ್ ಸಿನಿಮಾದ ವಿಕಿಪೀಡಿಯಾ ಪೇಜ್​​ನಲ್ಲೂ ನನ್ನ ಹೆಸರು ಇದೆ. ವಿಕಿಪೀಡಿಯಾನ ಯಾರು ಬೇಕಾದರೂ ಎಡಿಟ್ ಮಾಡಬಹುದು. ಅವೆಂಜರ್ಸ್ ಸಿನಿಮಾದಲ್ಲಿ ನನ್ನ ಹೆಸರನ್ನು ಕೂಡ ಸೇರಿಸಿಕೊಳ್ಳಬಹುದು’ ಎಂದರು ಟೊವಿನೋ.

ಇದನ್ನೂ ಓದಿ: ರಾಜ್ ಬಿ. ಶೆಟ್ಟಿಗೆ ಕೇಳಿ ರಿಷಬ್ ಶೆಟ್ಟಿ ಫೋನ್ ನಂಬರ್ ತಗೊಂಡೆ: ಟೊವಿನೋ ಥಾಮಸ್

‘ನಾನು ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದರೆ ಹೇಳುತ್ತೇನೆ. ಅದನ್ನು ಹೇಳುತ್ತಿಲ್ಲ ಎಂದರೆ ಅದು ಸರ್​​ಪ್ರೈಸ್ ಇರಬಹುದಲ್ಲ. ಅದನ್ನು ಏಕೆ ಹಾಳು ಮಾಡುತ್ತೀರಿ? ದಯವಿಟ್ಟು ಕಾಯಿರಿ. ಹಾಗಂತ ನಾನು ಟಾಕ್ಸಿಕ್​ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದಲ್ಲ. ಬೇರೆ ಸಿನಿಮಾಗಳ ಬಗ್ಗೆ ನಾನು ಹೇಳಿದ್ದು’ ಎಂದು ಅವರು ಸ್ಪಷ್ಟನೆ ಕೊಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲೋಕಾಯುಕ್ತ ಭರ್ಜರಿ ಬೇಟೆ: ಮೀನುಗಾರಿಕೆ ಇಲಾಖೆ ಅಧಿಕಾರಿ ಮನೆಯಲ್ಲಿ ಸೈಟು, ಚಿನ್ನದ ರಾಶಿ! ಬೊಲೆರೋ ಗಾಡಿಯಲ್ಲೂ ರಹಸ್ಯ ಕಡತಗಳು!

ಬಳ್ಳಾರಿ, ಏಪ್ರಿಲ್ 8: ಗಣಿನಾಡು ಬಳ್ಳಾರಿಯಲ್ಲಿ (Ballari) ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ (Lokayukta Raid)  ಮುಂದುವರಿದಿದೆ. ಏಪ್ರಿಲ್ 7ರ ಮಂಗಳವಾರ ಬೆಳ್ಳಂಬೆಳಿಗ್ಗೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಅಕ್ರಮದ ಜಾಲವನ್ನು ಬಯಲಿಗೆಳೆದಿದ್ದಾರೆ.

ಶಿವಣ್ಣ ಕಳೆದ ಹತ್ತು ವರ್ಷಗಳಿಂದ ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಹತ್ತಕ್ಕೂ ಹೆಚ್ಚು ಭ್ರಷ್ಟಾಚಾರದ ದೂರುಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದವು. ಬಳ್ಳಾರಿ ನಗರದ ಹೊಸಪೇಟೆ ರಸ್ತೆಯಲ್ಲಿರುವ ಅವರ ನಿವಾಸ, ಕಚೇರಿ ಮತ್ತು ಅವರು ಬಳಸುವ ಸರ್ಕಾರಿ ಬೊಲೆರೋ ವಾಹನವನ್ನೂ ಅಧಿಕಾರಿಗಳು ಬಿಡದೆ ತಪಾಸಣೆ ನಡೆಸಿದ್ದಾರೆ. ಸುಮಾರು 12 ಗಂಟೆಗಳ ಸುದೀರ್ಘ ಪರಿಶೀಲನೆಯ ನಂತರ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಪತ್ತೆಯಾದ ಅಕ್ರಮ ಆಸ್ತಿಗಳ ವಿವರ

ಲೋಕಾಯುಕ್ತ ದಾಳಿಯ ವೇಳೆ ಅಧಿಕಾರಿಯ ಮನೆಯಲ್ಲಿ ಸಿಕ್ಕಿರುವ ಆಸ್ತಿಗಳ ಪಟ್ಟಿ ಬೆಚ್ಚಿಬೀಳಿಸುವಂತಿದೆ;

  • ಜಮೀನು: ವಿವಿಧೆಡೆ ಒಟ್ಟು 44 ಎಕರೆ ಕೃಷಿ ಭೂಮಿ.
  • ನಿವೇಶನಗಳು: ಬಳ್ಳಾರಿ ನಗರದಲ್ಲಿ 14 ಸೈಟ್‍ಗಳು.
  • ಮನೆಗಳು: ಬಳ್ಳಾರಿ ನಗರದಲ್ಲೇ 3 ಸುಸಜ್ಜಿತ ಮನೆಗಳು.
  • ನಗದು: ಮನೆಯಲ್ಲಿ 8.5 ಲಕ್ಷ ರೂ. ನಗದು ಮತ್ತು ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂ. ಹಣ.
  • ಚಿನ್ನಾಭರಣ: ಸುಮಾರು 600 ಗ್ರಾಂ ಬಂಗಾರ.
  • ವಾಹನಗಳು: ಮೂರು ದ್ವಿಚಕ್ರ ವಾಹನಗಳು.

ಇದನ್ನೂ ಓದಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ, ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಅಧಿಕಾರಿಗಳು

ಇದಲ್ಲದೆ, ಇನ್ನೂ ಹಲವು ಬೇನಾಮಿ ಆಸ್ತಿಗಳ ಬಗ್ಗೆ ದಾಖಲೆಗಳು ಸಿಕ್ಕಿದ್ದು, ಲೋಕಾಯುಕ್ತ ತಂಡವು ಹೆಚ್ಚಿನ ತನಿಖೆ ಮುಂದುವರಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version