ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ? – Kannada News | Know what happens to Mutual Fund and Equity assets if investor dies without mentioning nominee

ಪ್ರತಿಯೊಂದು ಹಣಕಾಸು ಸ್ಕೀಮ್​ಗೂ ನಾಮಿನಿ ಹೆಸರಿಸುವುದು ಕಡ್ಡಾಯ. ಬ್ಯಾಂಕ್ ಅಕೌಂಟ್​ಗೂ ನಾಮಿನಿ ಕೇಳಲಾಗುತ್ತದೆ. ಎಫ್​ಡಿ ಇತ್ಯಾದಿ ಯಾವುದೇ ಪ್ಲಾನ್​ಗಳಿಗೂ ನಾಮಿನಿ ಹೆಸರಿಸಬೇಕು. ಹಾಗೆಯೇ, ಮ್ಯೂಚುವಲ್ ಫಂಡ್ ಹೂಡಿಕೆದಾರರು (Mutual fund investors) ಮತ್ತು ಡೀಮ್ಯಾಟ್ ಖಾತೆದಾರರು ಕೂಡ ನಾಮಿನಿ ಹೆಸರಿಸಬೇಕು. ನಾಮಿನಿ ಬೇಡ ಎನಿಸಿದರೆ ಅದಕ್ಕೂ ಆಯ್ಕೆ ಇರುತ್ತದೆ. ಸೆಬಿ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ನಾಮಿನಿ ಕಾಲಂ ಅನ್ನು ಖಾಲಿ ಬಿಡುವಂತಿಲ್ಲ. ನಾಮಿನಿ ಹೆಸರಿಸಬೇಕು, ಅಥವಾ ನಾಮಿನಿ ಬೇಡವೆಂದು ನಮೂದಿಸಬೇಕು.

ನಾಮಿನಿ ಹೆಸರಿಸಿಲ್ಲವೆಂದರೆ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ಏನಾಗುತ್ತದೆ?

ಒಂದು ವೇಳೆ ಹೂಡಿಕೆದಾರನು ಸಾಯುವ ಮುನ್ನ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾಮಿನಿ ಹೆಸರಿಸಿಲ್ಲದಿದ್ದರೆ ಮ್ಯೂಚುವಲ್ ಫಂಡ್​ಗಳಿಗೆ ಏನಾಗುತ್ತದೆ ಎನ್ನುವ ಪ್ರಶ್ನೆ ಸಹಜ. ಈ ಆಸ್ತಿ ಹಾಗೆಯೇ ಉಳಿದಿರುತ್ತದೆ. ಹೂಡಿಕೆದಾರನ ವಾರಸುದಾರರಿಗೆ ಅದನ್ನು ವರ್ಗಾಯಿಸುವ ಅವಕಾಶ ಇರುತ್ತದೆ. ಅದರ ಪ್ರಕ್ರಿಯೆ ಸ್ವಲ್ಪ ಸಂಕೀರ್ಣವಾಗಿರುತ್ತದೆ. ಶೀಘ್ರದಲ್ಲಿ ಆಗುವ ಕೆಲಸ ಅಲ್ಲ.

ಇದನ್ನೂ ಓದಿ: ಆರೂವರೆ ವರ್ಷದಲ್ಲಿ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್

ವಾರಸುದಾರರು ಫಂಡ್ ವರ್ಗಾಯಿಸಿಕೊಳ್ಳಲು ಏನು ಮಾಡಬೇಕು?

ಹೂಡಿಕೆದಾರರು ಮೃತಪಟ್ಟಿದ್ದು, ಅವರ ಆಸ್ತಿಯನ್ನು ವರ್ಗಾಯಿಸಿಕೊಳ್ಳಬೇಕಾದರೆ, ತಾವು ಕಾನೂನು ರೀತ್ಯಾ ವಾರಸುದಾರರೆಂಬುದನ್ನು ನಿರೂಪಿಸಬೇಕು. ಸಕ್ಸಶನ್ ಸರ್ಟಿಫಿಕೇಟ್ ಇತ್ಯಾದಿ ದಾಖಲೆಗಳನ್ನು ನೀಡಬೇಕಾಗಬಹುದು. ಈ ಸಕ್ಸಶನ್ ಸರ್ಟಿಫಿಕೇಟ್ ಪಡೆಯಲು ತಿಂಗಳುಗಳೇ ಆಗಬಹುದು. ಅಲ್ಲಿಯವರೆಗೆ ಹೂಡಿಕೆ ಆಸ್ತಿಗಳು ಹಾಗೆಯೇ ಉಳಿದಿರುತ್ತವೆ.

ನಾಮಿನಿ ಇಲ್ಲದಿದ್ದ ಸಂದರ್ಭದಲ್ಲಿ ವಾರಸುದಾರರು ಡೆತ್ ಸರ್ಟಿಫಿಕೇಟ್ ಸಲ್ಲಿಸಬೇಕು. ತಮ್ಮ ಗುರುತಿನ ದಾಖಲೆ, ಹಾಗೂ ಮೃತರಿಗೆ ತಾನು ಯಾವ ಸಂಬಂಧಿ ಎಂಬುದನ್ನು ತೋರಿಸುವ ದಾಖಲೆ ಕೊಡಬೇಕು. ವಿಲ್ ಇದ್ದಾಗ ಅದಕ್ಕೆ ಕೋರ್ಟ್​ನಿಂದ ದೃಢೀಕರಣ ಪಡೆಯಬೇಕು. ವಿಲ್ ಇಲ್ಲದಿದ್ದಾಗ ಕೋರ್ಟ್​ನಿಂದಲೇ ಸಕ್ಸಶನ್ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ.

ಇದನ್ನೂ ಓದಿ: ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್

ಸಣ್ಣ ಮೊತ್ತದ ಹೂಡಿಕೆಯಾದರೆ ಕೆಲ ಮ್ಯೂಚುವಲ್ ಫಂಡ್ ಸಂಸ್ಥೆಗಳು ನೋಟರಿ ಮಾಡಿಸಿದ ಇನ್​ಡೆಮ್ನಿಟಿ ಬಾಂಡ್ ಮತ್ತು ಅಫಿಡವಿಟ್ ಸ್ವೀಕರಿಸಿ, ಆಸ್ತಿ ವರ್ಗಾವಣೆ ಮಾಡುವ ಅವಕಾಶ ಇರುತ್ತದೆ. ಆದರೆ, ಹೂಡಿಕೆ ಮೊತ್ತ ದೊಡ್ಡದಿದ್ದಾಗ ಎಲ್ಲಾ ಕಾನೂನು ಕ್ರಮಗಳನ್ನು ಅನುಸರಿಸಲೇಬೇಕಾಗುತ್ತದೆ. ಒಳ್ಳೆಯ ವಕೀಲರ ಮೂಲಕ ಕೋರ್ಟ್​ನಿಂದ ಅನುಮೋದನೆ ಪಡೆಯುವುದು ಅನಿವಾರ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗದಲ್ಲಿ ವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ ನೀರಾನೆ ಹಂಸಿನಿಯೂ ಸಾವು – Kannada News | Hippo hansini Dies In who killed Dr sameeksha reddy In Tyavarekoppa Safari camp

ಶಿವಮೊಗ್ಗ, (ಏಪ್ರಿಲ್ 14): ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ (Tyavarekoppa Safari) ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ ಹಂಸಿನಿ ಎಂಬ ನೀರಾನೆ ಸಾವನ್ನಪ್ಪಿದೆ. ಮಾರ್ಚ್ 19 ರಂದು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ಹಂಸಿನಿ ನೀರಾನೆ ದಾಳಿ ನಡೆಸಿ ಕೊಂದಿತ್ತು. ಇದಾದ ಬಳಿಕ ಹಂಸಿಣಿಯ ಗರ್ಭದಲ್ಲಿದ್ದ ಮರಿ ಸಾವನ್ನಪ್ಪಿತ್ತು. ಇದೀಗ ತಾಯಿ ಹಂಸಿನಿ ಸಹ ಮೃತಟ್ಟಿದೆ. ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿದ್ದ 12 ವರ್ಷದ ಹಂಸಿನಿ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಇಂದು (ಏಪ್ರಿಲ್ 14) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದೆ.

ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣವಾದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಹಂಸಿನಿ ಬಲಿ ಪಡೆದಿತ್ತು. ಇದಾದ ಬಳಿಕ ಹಂಸಿನಿಯ ಗರ್ಭದಲ್ಲೇ ಮರಿ ಸಾವನ್ನಪ್ಪಿತ್ತು. ಹೊಟ್ಟೆಯಲ್ಲೇ ಮರಿ ಸಾವನ್ನಪ್ಪಿದ್ದರಿಂದ ಸೋಂಕು ತಗುಲಿ ಹಂಸಿನಿ ಅನಾರೋಗ್ಯಕ್ಕೀಡಾಗಿದ್ದು, ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯಾಹ್ನ 3:08ಕ್ಕೆ ಹಂಸಿನಿ ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷನರ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಒತ್ತಡಕ್ಕೆ ಬಲಿಯಾಯಿತೇ ಮರಿ?: ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆಯ ಮರಿಯೂ ಗರ್ಭದಲ್ಲೇ ಸಾವು!

ಹಂಸಿನಿಯ ಜೀವನದ ನೋವಿನ ಕಥೆ

12 ವರ್ಷದ ಈ ಹಂಸಿನಿ ನೀರಾನೆ ಈ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಆ ಎರಡೂ ಮರಿಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದವು. ಈ ಬಾರಿ ಹಂಸಿನಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಳು. ಹೀಗಾಗಿ ಈ ಬಾರಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಂಸಿನಿ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆದರೂ ಸಹ ಈ ಬಾರಿಯೂ ಮರಿ ಕಣ್ಣು ಬಿಡುವ ಮೊದಲೇ ಗರ್ಭದಲ್ಲಿ ಸಾವನ್ನಪ್ಪಿತ್ತು. ಇದೀಗ ಕೊನೆಗೆ ತಾಯಿ ಹಂಸಿನಿ ಸಹ ಮೃತಪಟ್ಟಿದೆ.

ಪಶುವೈದ್ಯೆಯ ಬಲಿ ಪಡೆದಿದ್ದ ಹಂಸಿನಿ

ಇದೇ ನೀರಾನೆ ಹಂಸಿನಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರನ್ನ ಬಲಿಪಡೆದಿತ್ತು. ಮಾರ್ಚ್ 19 ರಂದು ಮಧ್ಯರಾತ್ರಿ ಹಂಸಿಣಿಗೆ ಚಿಕಿತ್ಸೆ ನೀಡುವಾಗ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ದಾಳಿ ಮಾಡಿತ್ತು. ಈ ಭೀಕರ ದಾಳಿಯಲ್ಲಿ ಡಾ. ಸಮೀಕ್ಷಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯ ನಂತರ ಅದೇನಾಯ್ತೋ ಏನೋ ಹಂಸಿನಿಯ ಗರ್ಭದಲ್ಲೇ ಮರಿ ಸಾವನ್ನಪ್ಪಿತ್ತು. ಬಳಿಕ ತಾಯಿ ಹಂಸಿನಿ ಆರೋಗ್ಯ ಸಹ ಹದಗೆಟ್ಟಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗಳು ಖಂಡಿತಾ 10ನೇ ತರಗತಿ ಫೇಲ್ ಆಗುತ್ತಾಳೆ ಎಂದುಕೊಂಡಿದ್ದ ಆಮಿರ್ ಖಾನ್; ಆದರೆ ಆಗಿದ್ದೇನು? – Kannada News | Aamir Khan funny throwback interview about daughter Ira Khan class 10 Results

ಸಿಬಿಎಸ್‌ಇ (CBSE) 10ನೇ ತರಗತಿಯ ಫಲಿತಾಂಶ ಶೀಘ್ರವೇ ಪ್ರಕಟವಾಗುವ ನಿರೀಕ್ಷೆಯಿದೆ. ಈ ಕುತೂಹಲದ ನಡುವೆ, ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ (Aamir Khan) ಅವರು ತಮ್ಮ ಮಗಳು ಇರಾ ಖಾನ್ (Ira Khan) ಅವರ ಹತ್ತನೇ ತರಗತಿಯ ರಿಸಲ್ಟ್ ಬಂದಾಗ ನಡೆದ ಒಂದು ಮೋಜಿನ ಘಟನೆಯನ್ನು ಈ ಹಿಂದೆ ಹಂಚಿಕೊಂಡಿದ್ದರು. ತಮ್ಮ ಮಗಳು ಫೇಲ್ ಆಗುತ್ತಾಳೆ ಎಂದು ಬಲವಾಗಿ ನಂಬಿದ್ದ ಆಮಿರ್‌ ಖಾನ್​ಗೆ, ಆಕೆಯ ಅಂಕಪಟ್ಟಿಯನ್ನು ನೋಡಿ ಅಕ್ಷರಶಃ ಶಾಕ್ ಆಗಿತ್ತಂತೆ! ಆ ಕುತೂಹಲಕಾರಿ ಘಟನೆಯ ವಿವರ ಇಲ್ಲಿದೆ.

ಈ ಹಿಂದೆ ‘ಬಾಲಿವುಡ್ ಹಂಗಾಮಾ’ ನಡೆಸಿದ ಸಂದರ್ಶನವೊಂದರಲ್ಲಿ ಆಮಿರ್ ಖಾನ್ ಅವರು ಈ ಬಗ್ಗೆ ಮಾತನಾಡಿದ್ದರು. ಪುತ್ರಿ ಇರಾ ಖಾನ್ ಐಸಿಎಸ್‌ಇ ಬೋರ್ಡ್ ಎಕ್ಸಾಂ ಫಲಿತಾಂಶ ಬಂದಾಗ ಆ ಸಂದರ್ಭ ಹೇಗಿತ್ತು ಎಂಬುದನ್ನು ಆಮಿರ್ ಖಾನ್ ನೆನಪಿಸಿಕೊಂಡಿದ್ದರು. ಇರಾ ಖಾನ್ ಅವರು ಹತ್ತನೇ ತರಗತಿಯಲ್ಲಿ ಶೇಕಡ 88.3 ಅಂಕಗಳನ್ನು ಗಳಿಸಿದ್ದರು. ಆದರೆ ಇದನ್ನು ಕೇಳಿದ ಆಮಿರ್‌ಗೆ ಮೊದಲು ನಂಬಲು ಸಾಧ್ಯವೇ ಆಗಲಿಲ್ಲ.

ಇರಾ ಅವರ ತಾಯಿ ರೀನಾ ದತ್ತಾ ಅವರು ಬಂದು ರಿಸಲ್ಟ್ ಹೇಳಿದಾಗ, ‘ಇದು ಖಂಡಿತಾ ಏನೋ ತಪ್ಪು ಇರಬೇಕು. ರೀನಾ ಮತ್ತೊಮ್ಮೆ ಚೆಕ್ ಮಾಡು’ ಎಂದು ಆಮಿರ್ ಖಾನ್ ಹೇಳಿದ್ದರಂತೆ. ರೀನಾ ಚೆಕ್ ಮಾಡಿದ ಮೇಲೂ ಆಮಿರ್‌ಗೆ ಸಮಾಧಾನವಾಗಲಿಲ್ಲ. ಕೊನೆಗೆ ತಾವೇ ಸ್ವತಃ ಆನ್‌ಲೈನ್‌ಗೆ ಹೋಗಿ, ಇರಾ ಅವರ ರೋಲ್ ನಂಬರ್ ಹಾಕಿ ರಿಸಲ್ಟ್ ನೋಡಿದಾಗ ಅಲ್ಲಿ ಶೇಕಡ 88.3 ಅಂಕಗಳು ಇರುವುದು ಖಚಿತವಾಯಿತು.

ಸಂದರ್ಶನದಲ್ಲಿ ಈ ಬಗ್ಗೆ ಹೇಳುತ್ತಾ ನಕ್ಕ ಆಮಿರ್ ಖಾನ್, ‘ನನಗೆ ಅವಳು ಫೇಲ್ ಆಗುತ್ತಾಳೆ ಎಂಬ ಪೂರ್ಣ ನಂಬಿಕೆಯಿತ್ತು. ಆದರೆ ಅವಳು 89ರ ಆಸುಪಾಸು ಅಂಕ ಗಳಿಸಿದಾಗ ನನಗೆ ತುಂಬಾ ಹೆಮ್ಮೆಯಾಯಿತು’ ಎಂದಿದ್ದಾರೆ. ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಲಿ ಎಂದು ಬಯಸುತ್ತಾರೆ, ಆದರೆ ಆಮಿರ್ ಅವರು ಮಗಳ ಓದಿನ ವಿಚಾರದಲ್ಲಿ ಇಷ್ಟು ತಮಾಷೆಯಾಗಿ ವರ್ತಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ‘ಲಗಾನ್’ ಶೂಟಿಂಗ್ ವೇಳೆ ಪ್ರತಿ ದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಆಮಿರ್ ಖಾನ್

ಸ್ಟಾರ್ ಕಲಾವಿದರ ಮಕ್ಕಳು ಚಿತ್ರರಂಗಕ್ಕೆ ಕಾಲಿಡುವುದು ಸಹಜ. ಆದರೆ ಐರಾ ಖಾನ್ ಅವರು ಚಿತ್ರರಂಗಕ್ಕೆ ಬಂದಿಲ್ಲ. ತಂದೆ ದೊಡ್ಡ ಸ್ಟಾರ್ ನಟ ಆಗಿದ್ದರೂ ಕೂಡ ಐರಾ ಖಾನ್ ಅವರು ಬಣ್ಣದ ಲೋಕದ ಹಾದಿಯನ್ನು ತುಳಿದಿಲ್ಲ. ಫಿಟ್ನೆಸ್ ಟ್ರೇನರ್ ನೂಪುರ್ ಶಿಕಾರೆ ಜೊತೆ ಇರಾ ಖಾನ್ ಮದುವೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೂದಿ ಮುಚ್ಚಿದ ಕೆಂಡವಾದ ರಾಯರ ಜಪದ ಕಟ್ಟೆ ವಿವಾದ: ಅರ್ಚಕರ ಕುಟುಂಬದಿಂದ ಕಾನೂನು ಹೋರಾಟದ ಚಿಂತನೆ – Kannada News | Mantralaya Rayaru Bichchali Land Dispute: Priest’s family considering legal action

ರಾಯರ ಜಪದ ಕಟ್ಟೆ ವಿವಾದImage Credit source: tv9 kannada

ರಾಯಚೂರು, ಏಪ್ರಿಲ್​ 14: ಮಂತ್ರಾಲಯ ರಾಯರು (Mantralaya Rayaru) ತಪಸ್ಸು ಮಾಡಿದ್ದ ಜಪದ ಕಟ್ಟೆ ಬಳಿಯ ಜಮೀನು ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ. ವ್ಯಾಪಕ ವಿರೋಧದ ಮಧ್ಯೆಯೂ ಜಿಲ್ಲಾಡಳಿತ ಸರ್ವೆ ಕಾರ್ಯ ಮುಗಿಸಿದೆ. ತಳ್ಳಾಟ, ನೂಕಾಟದ ಮಧ್ಯೆ ಭಾರೀ ಹೈಡ್ರಾಮಾಗೆ ಸಾಕ್ಷಿಯಾಗಿದ್ದ ವಿವಾದ ಸಂಬಂಧ ಹೈಕೋರ್ಟ್​ ಆದೇಶ ಪ್ರಶ್ನಿಸಿ, ಅರ್ಚಕರ ಕುಟುಂಬ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.

ಭಕ್ತರ ಆರಾಧ್ಯ ದೈವ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿರುವ ಜಪದ ಕಟ್ಟೆ ಸಮೀಪದ ಜಮೀನು ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ವಿವಾದ ಯಾವಾಗ ಬೇಕಾದರೂ ಮತ್ತೆ ಹೊಗೆಯಾಡುವ ಸಾಧ್ಯತೆ ಇದೆ. ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ರಾಯರ ಜಪದ ಕಟ್ಟೆ ಇದೆ. ಇದೇ ಜಪದ ಕಟ್ಟೆ ಪಕ್ಕದಲ್ಲೇ ತುಂಗಭದ್ರಾ ನದಿ ಕೂಡ ಹರಿಯುತ್ತೆ. ಬಿಚ್ಚಾಲಿ ಮೂಲದ ರಾಯರ ಶಿಷ್ಯ ಅಪ್ಪಣ್ಣಾಚಾರ್ಯರ ಜೊತೆ ರಾಯರು ಇದೇ ಜಪದ ಕಟ್ಟೆ ಸ್ಥಳದಲ್ಲಿ 13 ವರ್ಷ ತಪಸ್ಸು ಮಾಡಿದ್ರಂತೆ.

ಇದನ್ನೂ ಓದಿ: ಭುಗಿಲೆದ್ದ ಮಂತ್ರಾಲಯ ರಾಯರ ಜಪದ ಕಟ್ಟೆ ವಿವಾದ: ಸರ್ವೆ ವೇಳೆ ಹೈಡ್ರಾಮಾ, ರೈತರು ಪೊಲೀಸ್ ವಶಕ್ಕೆ

ಆ ಬಳಿಕ ನದಿ ದಾಟಿ ರಾಯರು ಮಂತ್ರಾಲಯಕ್ಕೆ ಹೋಗಿ ವೃಂದಾವನಸ್ಥರಾದರು. ಆ ಬಳಿಕ ರಾಯರು ಜ್ಯೋತಿ ರೂಪದಲ್ಲಿ ಅಪ್ಪಣ್ಣಾಚಾರ್ಯರಿಗೆ ದರ್ಶನ ನೀಡಿ, ನೀನು ನಿತ್ಯ ಮಂತ್ರಾಲಯಕ್ಕೆ ಬರಬೇಡ. ನಾನು ತಪಸ್ಸು ಮಾಡಿದ ಸ್ಥಳದಲ್ಲೇ ಬೃಂದಾವನ ನಿರ್ಮಿಸಿ ಅಲ್ಲೇ ಪೂಜೆ ಮಾಡು ಅಂತ ಹೇಳಿದ್ರಂತೆ. ಹಾಗಾಗಿ ಅದೇ ಸ್ಥಳದಲ್ಲಿ ರಾಯರ ಏಕಶಿಲಾ ಬೃಂದಾವನವನ್ನ ಅಪ್ಪಣ್ಣಾಚಾರ್ಯರು ನಿರ್ಮಿಸಿದ್ದರು. ಅದೇ ಅಪ್ಪಣ್ಣಾಚಾರ್ಯರ ವಂಶಸ್ಥರೇ ಇಲ್ಲಿ ಈಗ ಅರ್ಚಕರಾಗಿದ್ದಾರೆ.

ಜಪದ ಕಟ್ಟೆ ಪಕ್ಕದಲ್ಲಿರುವ ಸರ್ವೆ ನಂಬರ್ 35ರಲ್ಲಿ 1.2 ಎಕರೆ ಹಾಗೂ ಸರ್ವೆ ನಂಬರ್ 37ರಲ್ಲಿ 1.31 ಎಕರೆ ಸೇರಿ ಒಟ್ಟು 2 ಎಕರೆ 33 ಗುಂಟೆ ಜಮೀನನ್ನ ರಾಜ್ಯ ಸರ್ಕಾರ, ರಾಘವೇಂದ್ರ ಮಠ ನಂಜನಗೂಡು ಹಾಗೂ ಮಂತ್ರಾಲಯ ಕ್ಯಾಂಪ್ ಮಠಕ್ಕೆ ಮಂಜೂರು ಮಾಡಿ‌ ಆದೇಶಿಸಿತ್ತು. ರಾಘವೇಂದ್ರ ಸ್ವಾಮಿ ಚಾರಿತ್ರಿಕ ಸ್ಥಳಗಳನ್ನ ಅಭಿವೃದ್ಧಿ ಪಡಿಸಿ, ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನಾಗಿ ಅಭಿವೃದ್ಧಿ ಪಡೆಸುವ ಉದ್ದೇಶಕ್ಕೆ ಮಂಜೂರು ಮಾಡಲಾಗಿತ್ತು. ಆದರೆ ಸರ್ಕಾರದ ಆದೇಶವನ್ನ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಅರ್ಚಕರ ಕುಟುಂಬಸ್ಥರಾದ ಪಾಡದ ರಾಘವೇಂದ್ರ ಆಚಾರ್ಯ ಹಾಗೂ ಇತರರು ರಿಟ್ ಅರ್ಜಿ ಹಾಕಿದ್ದರು.

ವಿರೋಧದ ಮಧ್ಯೆ ಸರ್ವೆ ಕಾರ್ಯ ಅಂತ್ಯ

ಕಳೆದ ವಾರ ರಿಟ್ ಅರ್ಜಿ ವಜಾ ಆದ ಹಿನ್ನೆಲೆ ನಿನ್ನೆ ಅಧಿಕಾರಿಗಳ ತಂಡ ಸೂಕ್ತ ಬಿಗಿ ಭದ್ರತೆಯಲ್ಲಿ ಜಮೀನಿನ ಗಡಿ ಗುರುತಿಸಿ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಸಿದ್ದರು. ಆಗಲೇ ದೊಡ್ಡ ಹೈಡ್ರಾಮಾ ಕೂಡ ನಡೆದಿತ್ತು. ಸರ್ವೆ ಮಾಡಲು ಬಿಡಲ್ಲ ಅಂತ ಕೆಲ ಸಾಗುವಳಿದಾರರು ಕಿಡಿಕಾರಿದ್ದರು. ಆಗ ತಳ್ಳಾಟ, ನೂಕಾಟವಾಗಿ ರಂಪಾಟ ನಡೆದುಹೋಗಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲವರನ್ನ ವಶಕ್ಕೂ ಪಡೆದಿದ್ದರು. ಸದ್ಯ ವಿರೋಧದ ಮಧ್ಯೆಯೂ ಸರ್ವೆ ಕಾರ್ಯ ಮುಗಿದಿದೆ.

ಇದನ್ನೂ ಓದಿ: ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!

ಸರ್ವೆ ಕಾರ್ಯ ಮುಗಿಸಿ, ಪಂಚನಾಮೆ ಮಾಡಲಾಗಿದೆ. ಆದರೆ ಪಂಚನಾಮೆ ವೇಳೆ ಅರ್ಚಕರ ಕುಟುಂಬ ಸಹಿ ಹಾಕಲು ನಿರಾಕರಿಸಿ, ವಾಗ್ವಾದಕ್ಕೆ ಕಾರಣವಾಯ್ತು. ಕೂಡಲೇ ಸರ್ವೆಗೆ ಒಳಪಟ್ಟ ಕಟ್ಟಡಗಳನ್ನ ಖಾಲಿ ಮಾಡಲು ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. ನೋಟಿಸ್ ನೀಡಿ ಅತಿಕ್ರಮಣ ಸ್ಥಳ ತೆರುವುಗೊಳಿಸಲು ಅಧಿಕಾರಿಗಳ ತಂಡ ಸಿದ್ಧತೆ ನಡೆಸಿದೆ.

ಮಂತ್ರಾಲಯ ಮಠದ ವಿರುದ್ಧ ಅರ್ಚಕರ ಕುಟುಂಬ ಕಿಡಿ: ಕಾನೂನು ಹೋರಾಟಕ್ಕೆ ಸಜ್ಜ

ಇತ್ತ ಇಷ್ಟಕ್ಕೆ ಸುಮ್ಮನಾಗದ ಜಪದ ಕಟ್ಟೆ ಅರ್ಚಕರ ಕುಟುಂಬ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದೆ. ನಾವು ಮಂತ್ರಾಲಯ ರಾಯರ ಭಕ್ತರು. ಆದರೆ ಮಠದ ಆಡಳಿತದವರು ಹೀಗೆ ಮಾಡೋದು ಎಷ್ಟು ಸರಿ ಅಂತ ಮಂತ್ರಾಲಯ ಮಠದ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಮಂತ್ರಾಲಯದಲ್ಲಿ ಮೂಲ ರಾಮದೇವರ ವಿಗ್ರಹ ಕಳೆದು ಹೋದಾಗ, ನಮ್ಮ ಹಿರಿಯರು ಅದನ್ನ ಹುಡುಕಿ ಕೊಟ್ಟಿದ್ದರು. ಆಗ ಇದೇ ಶ್ರೀಮಠದವರು ನಮ್ಮ ಕುಟುಂಬ ಬಾಡಿ ಹೋಗಬಾರ್ದು ಅಂತ ಬಾಡದ ಕುಟುಂಬ ಅಂತ ತಾಮ್ರದ ಪತ್ರದ ಮೂಲಕ ಬಿರುದು ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷ ಇದೆ. ಆದರೆ ಈ ರೀತಿ ನಮ್ಮ ಕುಟುಂಬಕ್ಕೆ ಮಾಡೋದು ಸರಿಯಲ್ಲ ಅಂತ ಅರ್ಚಕರಾದ ಪವನ್ ಆಚಾರ್ಯ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾನೂನು ಹೋರಾಟಕ್ಕೆ ಜಪದ ಕಟ್ಟೆ ಅರ್ಚಕರ ಕಡೆಯವರು ಸಜ್ಜಾಗಿದ್ದಾರೆ.

ಸದ್ಯ ಭೂ ವಿವಾದ ಬೂದಿ ಮುಚ್ಚಿದ ಕೆಂಡವಾಗಿದ್ದು, ಇದು ಯಾವಾಗ ಬೇಕಾದ್ರೂ ಮತ್ತೆ ಕಿಡಿಹೊತ್ತುವ ಸಾಧ್ಯತೆ ಇದೆ. ಇತ್ತ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ತೀವ್ರ ನಿಗಾವಹಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತುಂಬಾ ಬೇಗ ಸುಸ್ತಾಗುವುದಕ್ಕೆ ಕಾರಣ ಏನ್ ಗೊತ್ತಾ? ಕಾರಣ ತಿಳಿದರೆ ಆಶ್ಚರ್ಯವಾಗುವುದು ಖಂಡಿತ

ಇತ್ತೀಚಿನ ದಿನಗಳಲ್ಲಿ ಹಲವರಿಗೆ ಯಾವುದೇ ರೀತಿಯ ಕೆಲಸ ಮಾಡದಿದ್ದರೂ ಕೂಡ ಸುಸ್ತಾಗುವುದನ್ನು (Fatigue) ನೋಡಿರಬಹುದು. ಯಾವುದೇ ರೀತಿಯ ದೇಹ ದಂಡಿಸುವ ಕೆಲಸ ಮಾಡದಿದ್ದರೂ ಕೂಡ ದಣಿವು, ದುರ್ಬಲತೆ ಮತ್ತು ನಿಷ್ಕ್ರಿಯತೆ ಕಂಡುಬರುತ್ತದೆ. ಆದರೆ ಈ ರೀತಿಯಾಗುವುದನ್ನು ಯಾರೂ ಕೂಡ ಅಷ್ಟಾಗಿ ಗಣನೆಗೆ ತೆಗದುಕೊಳ್ಳುವುದಿಲ್ಲ. ಸಾಮಾನ್ಯ ಸಮಸ್ಯೆಗಳಲ್ಲಿ ಒಂದೆಂದು ನಿರ್ಲಕ್ಷಿಸುತ್ತಾರೆ. ಆದರೆ ಆರೋಗ್ಯ ತಜ್ಞರು ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳುತ್ತಾರೆ. ಏಕೆಂದರೆ ಈ ರೀತಿ ಕಾರಣವಿಲ್ಲದೆ ದಣಿವಾಗುವುದಕ್ಕೆ ಬಹಳಷ್ಟು ಕಾರಣಗಳಿರಬಹುದು ಅವುಗಳಲ್ಲಿ ಪ್ರಮುಖವಾದದ್ದು ದೇಹದಲ್ಲಿ ಅಗತ್ಯವಿರುವ ವಿಟಮಿನ್ ಕೊರತೆಯಾಗಿದೆ.

ದಣಿವಿಗೆ ಕಾರಣವಾಗುವ ಲಕ್ಷಣಗಳು:

ನಿರಂತರವಾಗಿ ದೌರ್ಬಲ್ಯ, ಕೆಲಸ ಮಾಡಲು ಆಸಕ್ತಿ ಕಡಿಮೆ, ತಲೆಸುತ್ತು, ಸ್ನಾಯು ನೋವು, ಗಮನ ಕೇಂದ್ರೀಕರಣದಲ್ಲಿ ತೊಂದರೆ ಮತ್ತು ಬೇಗನೆ ದಣಿವು ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣಗಳು. ಕೆಲವರಿಗೆ ಮೆಟ್ಟಿಲೇರುವಾಗ ಉಸಿರಾಟ ತೊಂದರೆ, ಹೃದಯ ಬಡಿತ ಹೆಚ್ಚಾಗುವುದು ಅಥವಾ ತಲೆ ಭಾರವಾಗಿರುವ ಅನುಭವವೂ ಕಾಣಬಹುದು.

ಇದನ್ನೂ ಓದಿ: ಸಾಮಾನ್ಯ ವೈದ್ಯಕೀಯ ಪರೀಕ್ಷೆಗಳ ವರದಿ ನಾರ್ಮಲ್ ಇದ್ದರೂ ದಿನಪೂರ್ತಿ ದಣಿವೇ? ಈ 4 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಗಮನ

ಯಾವ ವಿಟಮಿನ್ ಮುಖ್ಯ?

ದಣಿವನ್ನು ಕಡಿಮೆ ಮಾಡಿಕೊಳ್ಳಲು ವಿಟಮಿನ್ ಬಿ12 ಅತ್ಯಂತ ಮುಖ್ಯವಾಗಿದೆ. ಇದು ರಕ್ತದ ಕೆಂಪು ರಕ್ತಕಣಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಮತ್ತು ನರಮಂಡಲದ ಕಾರ್ಯವನ್ನು ಸರಾಗವಾಗಿ ನಡೆಸುತ್ತದೆ. ಈ ವಿಟಮಿನ್ ಕೊರತೆಯಿಂದ ದೇಹದಲ್ಲಿ ಆಮ್ಲಜನಕ ಸರಬರಾಜು ಕಡಿಮೆಯಾಗುತ್ತದೆ, ಇದರಿಂದ ದಣಿವು ಹೆಚ್ಚಾಗುತ್ತದೆ. ಈ ವಿಟಮಿನ್ ಬಿ12ನ್ನು ಸರಿಯಾಗಿ ಪಡೆಯಲು ಹಾಲು, ಮೊಸರು, ಪನೀರ್, ಮೊಟ್ಟೆ, ಮೀನು ಮತ್ತು ಮಾಂಸಾಹಾರವನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಸಸ್ಯಾಹಾರಿಗಳು ಫೋರ್ಟ್‌ಫೈಡ್ ಆಹಾರಗಳನ್ನು ಆಯ್ಕೆ ಮಾಡಬಹುದು. ಕೆಲ ಸಂದರ್ಭಗಳಲ್ಲಿ ವೈದ್ಯರು ಸಪ್ಲಿಮೆಂಟ್ ಅಥವಾ ಇಂಜೆಕ್ಷನ್ ಸಲಹೆ ನೀಡಬಹುದು, ಆದರೆ ವೈದ್ಯರ ಸಲಹೆಯಿಲ್ಲದೆ ಅವನ್ನು ಬಳಸಬಾರದು.

ಜೀವನಶೈಲಿಯೂ ಮುಖ್ಯ:

ಸರಿಯಾದ ನಿದ್ರೆ, ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿಯಂತ್ರಣ ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಹೆಚ್ಚು ಸ್ಕ್ರೀನ್ ಟೈಮ್ ಕಡಿಮೆ ಮಾಡಿ, ದಿನದ ನಡುವೆ ವಿರಾಮ ತೆಗೆದುಕೊಳ್ಳುವುದು ಸಹ ಉಪಯುಕ್ತ. ನಿರಂತರ ದಣಿವು ಕೇವಲ ವಿಶ್ರಾಂತಿ ಕೊರತೆಯ ಕಾರಣವಲ್ಲ, ಅದು ವಿಟಮಿನ್ ಕೊರತೆಯ ಸೂಚನೆಯಾಗಿರಬಹುದು. ಹಾಗಾಗಿ ಸರಿಯಾದ ಆಹಾರ ಮತ್ತು ಜೀವನಶೈಲಿಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಮೀಸಲಾತಿಗೆ ವೇದಿಕೆ ಸಜ್ಜು; ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಏರಿಸಲು ಮೋದಿ ಸರ್ಕಾರ ಪ್ರಸ್ತಾಪ – Kannada News | Modi Government proposes increase of Lok Sabha seats from 543 to 850 setting stage for womens reservation

ನವದೆಹಲಿ, ಏಪ್ರಿಲ್ 14: ಮಹಿಳಾ ಮೀಸಲಾತಿ ಮಸೂದೆಯನ್ನು (Women’s Reservation Bill) ಜಾರಿಗೆ ತರಲು ವೇದಿಕೆ ಸಿದ್ಧವಾಗಿದೆ. ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಸ್ಥಾನಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ. ಈ ವಿಸ್ತರಣೆಯು ನಾರಿ ಶಕ್ತಿ ವಂದನ (Nari Shakti Vandana) ಅಧಿನಿಯಮ (ಮಹಿಳಾ ಮೀಸಲಾತಿ ಕಾಯ್ದೆ) ಅನುಷ್ಠಾನವನ್ನು ಜಾರಿಗೊಳಿಸುವ ಯೋಜನೆಯ ಭಾಗವಾಗಿದೆ. ಇದು ಕೆಳಮನೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಗುರಿಯನ್ನು ಹೊಂದಿದೆ.

ಈ ಕಾಯ್ದೆ ಸದನದ ಸುಮಾರು ಮೂರನೇ ಒಂದು ಭಾಗದಷ್ಟು ಅಥವಾ 273 ಸ್ಥಾನಗಳನ್ನು ಮಹಿಳಾ ಶಾಸಕರಿಗೆ ಮೀಸಲಿಡಲು ಅವಕಾಶ ಕಲ್ಪಿಸುತ್ತದೆ. ಮಹಿಳಾ ಮೀಸಲಾತಿ ಮಸೂದೆಯ ಜಾರಿಗೆ ಕೇಂದ್ರ ಸರ್ಕಾರವು ಏಪ್ರಿಲ್ 16ರಿಂದ 18ರವರೆಗೆ ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನವನ್ನು ನಿಗದಿಪಡಿಸಿದೆ. ಮಸೂದೆಯ ಪ್ರತಿಯನ್ನು ಇಂದು ಸಂಸದರೊಂದಿಗೆ ಹಂಚಿಕೊಳ್ಳಲಾಯಿತು.

ಈ ಪ್ರಸ್ತಾವನೆಯಡಿಯಲ್ಲಿ 815 ಸ್ಥಾನಗಳು ರಾಜ್ಯಗಳಿಗೆ ಮತ್ತು 35 ಕೇಂದ್ರಾಡಳಿತ ಪ್ರದೇಶಗಳಿಗೆ ಹೋಗಲಿದ್ದು, ಒಟ್ಟು ಬಲವನ್ನು 850ಕ್ಕೆ ಏರಿಸಲಾಗುವುದು. ಈ ಬದಲಾವಣೆಗಳು 2029ರ ಲೋಕಸಭಾ ಚುನಾವಣೆಯಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಮಹಿಳೆಯರಿಗೆ ಹಂಚಿಕೆಯಾಗುವ ಸ್ಥಾನಗಳನ್ನು ನಿರ್ಧರಿಸಲು ಡಿಲಿಮಿಟೇಶನ್ ಆಯೋಗವನ್ನು ರಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Explainer: ಸಂಸತ್​​ನಲ್ಲಿ ಅಂಗೀಕಾರವಾಗುತ್ತಾ ಮಹಿಳಾ ಮೀಸಲಾತಿ ಮಸೂದೆ? ಏನಿದರ ಮಹತ್ವ, ವಿಪಕ್ಷಗಳ ವಿರೋಧವೇಕೆ?

ನಾರಿ ಶಕ್ತಿ ವಂದನ ಅಧಿನಿಯಮವನ್ನು ಭಾರತೀಯ ಸಂಸತ್ ಸೆಪ್ಟೆಂಬರ್ 202 ರಲ್ಲಿ ಅಂಗೀಕರಿಸಿತು. ಇದನ್ನು ಸೆಪ್ಟೆಂಬರ್ 19, 2023ರಂದು ಲೋಕಸಭೆಯಲ್ಲಿ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪರಿಚಯಿಸಲಾಯಿತು. ಸೆಪ್ಟೆಂಬರ್ 20, 2023ರಂದು 454 ಮತಗಳ ಪರವಾಗಿ ಮತ್ತು 2 ಮತಗಳ ವಿರುದ್ಧವಾಗಿ ಅಂಗೀಕರಿಸಲಾಯಿತು. ರಾಜ್ಯಸಭೆಯು ಸೆಪ್ಟೆಂಬರ್ 21, 2023ರಂದು 214 ಮತಗಳೊಂದಿಗೆ ಸರ್ವಾನುಮತದಿಂದ ಈ ಮಸೂದೆಯನ್ನು ಅಂಗೀಕರಿಸಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 28, 2023ರಂದು ಇದನ್ನು ಕಾನೂನಾಗಿ ಪರಿವರ್ತಿಸಲು ಸಹಿ ಮಾಡಿದರು.

ಇದನ್ನೂ ಓದಿ: Women’s Reservation Bill 2026: ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಬೆಂಬಲ ಕೋರಿ ಸಂಸದರಿಗೆ ಪ್ರಧಾನಿ ಮೋದಿ ಪತ್ರ

ಇದರ ಪ್ರಕಾರ ಮಹಿಳೆಯರಿಗೆ 33% ಮೀಸಲಾತಿ: ನೀಡಲಾಗಿದ್ದು, ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಎಲ್ಲಾ ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮೀಸಲಿಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು? – Kannada News | Samrat Choudharys first reaction after being selected as Bihar Chief Minister

ಪಾಟ್ನಾ, ಏಪ್ರಿಲ್ 14: ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ (Samrat Chaudhary) ಇಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬುಧವಾರ (ಏಪ್ರಿಲ್ 15) ಬೆಳಿಗ್ಗೆ 11 ಗಂಟೆಗೆ ಅವರು ಬಿಹಾರ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ನಡೆದ ಶಾಸಕಾಂಗ ಸಭೆಯಲ್ಲಿ ಘೋಷಣೆಯಾದ ಕೂಡಲೇ ಸಾಮ್ರಾಟ್ ಚೌಧರಿ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮೇಲೆ ನಂಬಿಕೆ ಇರಿಸಿ ಬಿಹಾರ ಶಾಸಕಾಂಗ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ವಹಿಸಿದ್ದಕ್ಕಾಗಿ ಬಿಜೆಪಿ ಹೈಕಮಾಂಡ್​ಗೆ ಸಾಮ್ರಾಟ್ ಚೌಧರಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

“ನನ್ನ ಮೇಲೆ ನಂಬಿಕೆ ಇಟ್ಟು ಬಿಜೆಪಿ ಬಿಹಾರ ಶಾಸಕಾಂಗ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ಬಿಜೆಪಿ ಹೈಕಮಾಂಡ್​​ಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನನಗೆ, ಇದು ಕೇವಲ ಒಂದು ಹುದ್ದೆಯಲ್ಲ. ಇದು ಬಿಹಾರದ ಜನರಿಗೆ ಸೇವೆ ಸಲ್ಲಿಸಲು, ಅವರ ನಂಬಿಕೆ ಮತ್ತು ಕನಸುಗಳನ್ನು ನನಸಾಗಿಸಲು ಒಂದು ಪವಿತ್ರ ಅವಕಾಶ. ಪ್ರತಿಯೊಬ್ಬ ನಾಗರಿಕನ ನಿರೀಕ್ಷೆಗಳನ್ನು ಸಂಪೂರ್ಣ ಸಮಗ್ರತೆ, ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಪೂರೈಸಲು ನಾನು ಪ್ರತಿಜ್ಞೆ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಮಾರ್ಗದರ್ಶನದಲ್ಲಿ ಬಿಹಾರವನ್ನು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಮೃದ್ಧಿಯ ಹೊಸ ಆಯಾಮಗಳತ್ತ ಕೊಂಡೊಯ್ಯಲು ನಾನು ನಿರಂತರವಾಗಿ ಬದ್ಧನಾಗಿರುತ್ತೇನೆ. ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಬೆಂಬಲ ನನ್ನ ದೊಡ್ಡ ಶಕ್ತಿ. ಜೈ ಬಿಹಾರ, ಜೈ ಭಾರತ್!” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಯ್ಯಪ್ಪ ಮಾಲೆ ಧಾರಣೆ ಮಾಡುವುದೇಕೆ: ರಾಮ್ ಚರಣ್ ಕೊಟ್ಟರು ಉತ್ತರ – Kannada News | Ram Charan talks about Ayyappa Deeksha and why he take that

ಹಲವಾರು ನಟರು ಅಯ್ಯಪ್ಪ ಮಾಲೆ ಧಾರಣೆ ಮಾಡುತ್ತಾರೆ. ಆದರೆ ಮಾಲೆ ಧರಿಸಿದಾಗ ಹೊರಗೆ ಕಾಣಿಸಿಕೊಳ್ಳುವುದೇ ಇಲ್ಲ. ಬಹುತೇಕರು ಒಂದೇ ದಿನಕ್ಕೆ ಮಾಲೆ ಧರಿಸಿ, ಶಬರಿಮಲೆಗೆ ಹೊರಟು ಬಿಡುತ್ತಾರೆ. ಆದರೆ ನಟ ರಾಮ್ ಚರಣ್ ಹಾಗಲ್ಲ. ಅವರು ಹಲವು ದಿನಗಳ ಕಾಲ ಮಾಲೆ ಧರಿಸಿ, ನೇಮ-ನಿಷ್ಠೆಯಿಂದ ವೃತ ಪಾಲಿಸುತ್ತಾರೆ. ವರ್ಷದಲ್ಲಿ ಸುಮಾರು 80ಕ್ಕೂ ಹೆಚ್ಚು ದಿನಗಳು ಅವರು ವೃತದಲ್ಲಿ ಕಳೆಯುತ್ತಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ರಾಮ್ ಚರಣ್ ಅವರಿಗೆ ಪ್ರಶ್ನಿಸಲಾಗಿದ್ದು, ತಾವೇಕೆ ಪದೇ ಪದೇ ಮಾಲಧಾರಿ ಆಗುವುದೆಂದು ವಿವರಿಸಿದ್ದಾರೆ.

ಇತ್ತೀಚೆಗೆ ‘ಎಸ್ಕ್ವೈರ್ ಇಂಡಿಯಾ’ ಮ್ಯಾಗಜೀನ್​​ನ ಶೂಟಿಂಗ್​​ಗಾಗಿ ಹಾಂಕಾಂಗ್‌ಗೆ ಹೋಗಿದ್ದರು ರಾಮ್ ಚರಣ್. ಅಲ್ಲಿನ ಐಷಾರಾಮಿ ಹೋಟೆಲ್‌ನಲ್ಲಿ ಬರಿಗಾಲಿನಲ್ಲಿ ಓಡಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಆಧ್ಯಾತ್ಮಿಕ ಜೀವನ, ಮಾಲಧಾರಣೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

‘ನಾನು ಕಳೆದ 20 ವರ್ಷಗಳಿಂದ ಪ್ರತಿ ವರ್ಷ ಎರಡು ಬಾರಿ ತಪ್ಪದೇ ಅಯ್ಯಪ್ಪ ದೀಕ್ಷೆಯನ್ನು ಪಾಲಿಸುತ್ತಿದ್ದೇನೆ. ಈ 41 ದಿನಗಳ ಕಾಲ ಬರಿಗಾಲಿನಲ್ಲಿ ನಡೆಯುವುದು, ಕಪ್ಪು ವಸ್ತ್ರ ಧರಿಸುವುದು ಮತ್ತು ಸಾತ್ವಿಕ ಆಹಾರ ಸೇವಿಸುವುದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ನನಗೆ ಮಾನಸಿಕ ಶಾಂತಿ ಮತ್ತು ಶಿಸ್ತನ್ನು ನೀಡುತ್ತದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ ಸಿನಿಮಾ ಶೂಟಿಂಗ್ ಮುಗಿಯಿತೇ? ರಾಮ್ ಚರಣ್ ಕೊಟ್ಟರು ಉತ್ತರ

‘ನನ್ನ ತಂದೆಯ ಸಲಹೆಯ ಮೇರೆಗೆ ನಾನು 17 ನೇ ವಯಸ್ಸಿನಲ್ಲಿ ಅಯ್ಯಪ್ಪ ದೀಕ್ಷೆಯನ್ನು ಪ್ರಾರಂಭಿಸಿದೆ. ಈ ದೀಕ್ಷೆ ನನ್ನ ಜೀವನದಲ್ಲಿ ಶಿಸ್ತನ್ನು ಹೆಚ್ಚಿಸಿತು. ಇದು ನನ್ನ ಆಲೋಚನೆಗಳನ್ನು ನಿಯಂತ್ರಿಸಲು ಸಹಾಯ ಮಾಡಿತು. ಅನಗತ್ಯ ವಿಷಯಗಳಿಂದ ದೂರವಿರಲು ಮತ್ತು ಮಾನಸಿಕ ಶಾಂತಿಯನ್ನು ಪಡೆಯಲು ಇದು ನನಗೆ ಸಹಾಯ ಮಾಡಿತು ಎಂದಿದ್ದಾರೆ.

ತಮ್ಮ ತಂದೆ ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಮಾತನಾಡಿ, ‘ಅವರಿಂದ ಕಠಿಣ ಪರಿಶ್ರಮದ ಪಾಠವನ್ನು ನಾನು ಕಲಿತಿದ್ದೇನೆ. ‘ಉಳಿದವರೆಲ್ಲರೂ 50 ಗಂಟೆ ಕೆಲಸ ಮಾಡಿದರೆ, ನೀವು 100 ಗಂಟೆ ಕೆಲಸ ಮಾಡಬೇಕು’ ಎಂಬುದು ನನ್ನ ತಂದೆ ನನಗೆ ಕಲಿಸಿದ ತತ್ವ. ಅವರ ಪ್ರಭಾವ ನನ್ನ ಜೀವನದ ಮೇಲೆ ಸಾಕಷ್ಟಿದೆ’ ಎಂದಿದ್ದಾರೆ ರಾಮ್ ಚರಣ್.

ತಮ್ಮ ಪ್ರೀತಿಯ ಸಾಕುನಾಯಿ ‘ರೈಮ್’ ಬಗ್ಗೆ ಮಾತನಾಡುತ್ತಾ, ‘ರೈಮ್ ನನ್ನ ಮಗಳಿಗೆ ಒಬ್ಬಳು ಗದರಿಸುವ ಅಕ್ಕನಂತಿದ್ದಾಳೆ. ಕ್ಲಿನ್ ಕಾರಾ ಸ್ವಿಮ್ಮಿಂಗ್ ಪೂಲ್ ಹತ್ತಿರ ಹೋದಾಗಲೆಲ್ಲಾ ರೈಮ್ ಅವಳನ್ನು ತಡೆದು ನಿಲ್ಲಿಸುತ್ತಾಳೆ. ಅವಳ ಬುದ್ಧಿವಂತಿಕೆಯನ್ನು ಕಂಡು ನನಗೆ ಆಶ್ಚರ್ಯವಾಗುತ್ತದೆ’ ಎಂದು ಮಗಳ ಸುರಕ್ಷತೆಯ ಬಗ್ಗೆ ರೈಮ್ ವಹಿಸುವ ಕಾಳಜಿಯನ್ನು ಶ್ಲಾಘಿಸಿದರು.

‘ಈಗ ನಾನು ಕೇವಲ ನಟನಾಗಿ ಮಾತ್ರವಲ್ಲದೆ, ತಂದೆಯಾಗಿ, ಪತಿಯಾಗಿ ಮತ್ತು ಮಗನಾಗಿ ಹಲವಾರು ಜವಾಬ್ದಾರಿಗಳನ್ನು ಹೊಂದಿದ್ದೇನೆ. ಕೆಲಸ ಮುಗಿಸಿ ಮನೆಗೆ ಬಂದ ತಕ್ಷಣ ನಾನು ಸೋಮಾರಿಯಾಗಲು ಸಾಧ್ಯವಿಲ್ಲ. ಮಕ್ಕಳ ಜೊತೆ ಆಟವಾಡಬೇಕು, ಹೆಂಡತಿಯ ಅಗತ್ಯಗಳನ್ನು ಗಮನಿಸಬೇಕು ಮತ್ತು ಅಭಿಮಾನಿಗಳ ಸಮಸ್ಯೆಗಳಿಗೂ ಸ್ಪಂದಿಸಬೇಕು. ಪ್ರತಿ ದಿನವೂ ನಾನು ಶೇ. 100 ರಷ್ಟು ಸಕ್ರಿಯನಾಗಿರಬೇಕು’ ಎಂದು ತಮ್ಮ ಜೀವನಶೈಲಿಯ ಬಗ್ಗೆ ವಿವರಿಸಿದ್ದಾರೆ.

ರಾಮ್ ಚರಣ್ ಪ್ರಸ್ತುತ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ. ಜಾನ್ಹವಿ ಕಪೂರ್ ಸಿನಿಮಾದ ನಾಯಕಿ. ಸಿನಿಮಾ ನಿರ್ದೇಶನ ಮಾಡಿರುವುದು ಬುಚ್ಚಿಬಾಬು ಸನಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರಿಗೆ ಸಂಕಷ್ಟ – Kannada News | Bagalkot By election: C.C. Patil’s Kuruba Remarks Spark Outrage, Pratap Simha Also Under Fire

ಬಾಗಲಕೋಟೆ, ಏಪ್ರಿಲ್​ 14: ಬಾಗಲಕೋಟೆ, ದಾವಣಗೆರೆ ಉಪಚುನಾವಣೆ (By-election) ಎಲ್ಲರ ಗಮನ ಸೆಳೆದಿವೆ. ಉಪಚುನಾವಣೆ ಪ್ರಯುಕ್ತ ಘಟಾನುಘಟಿ ನಾಯಕರು ಬಂದು ಮತಯಾಚನೆ ಮಾಡಿ ಹೋಗಿದ್ದಾರೆ. ಆದರೆ ಪ್ರಚಾರದ ಭರಾಟೆಯಲ್ಲಿ ನಾಯಕರು ಆಡಿದ ಮಾತುಗಳು ಇದೀಗ ವಿವಾದಕ್ಕೆ ಈಡಾಗಿವೆ. ಮಾಜಿ ಸಚಿವ ಸಿಸಿ ಪಾಟಿಲ್ ಕುರುಬ ಸಮಾಜದ ಬಗ್ಗೆ ಟುರ್ ಎಂದು ಬಳಸಿದ ಪದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಹೆಚ್​ವೈ ಮೇಟಿ ಅಕಾಲಿಕ ನಿಧನದಿಂದ ಬಾಗಲಕೋಟೆಗೆ ಉಪಚುನಾವಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಎರಡು ಪ್ರಮುಖ ಪಕ್ಷದ ಘಟಾನುಘಟಿ ನಾಯಕರು ಪ್ರಚಾರ ಮಾಡಿ ಹೋಗಿದ್ದಾರೆ. ಆದರೆ ಪ್ರಚಾರದ ಭರಾಟೆಯಲ್ಲಿ ಕೆಲ ನಾಯಕರು ನಾಲಿಗೆ ಹರಿಬಿಟ್ಟು ಸುದ್ದಿಯಾಗಿದ್ದರು.

ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ದೂರು 

ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ದ ನಾಲಿಗೆ ಹರಿಬಿಟ್ಟಿದ್ದರು. ಮಾಂಸನಾದ್ರೂ ತಿನ್ನು, ಸುನ್ನತ್​​ ಆದರೂ ಮಾಡಿಕೋ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಕಾಂಗ್ರೆಸ್ ಮುಖಂ ವಕೀಲ ರಮೇಶ್ ಬದ್ನೂರು ನವನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಸಿಸಿ ಪಾಟೀಲ್ ಕ್ಷಮೆ ಕೇಳಬೇಕು: ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಆಗ್ರಹ

ಇದೊಂದು ಕಡೆ ಆದರೆ ಪಂಚಮಸಾಲಿ ಸಮಾಜದ ಪ್ರಚಾರ ಸಭೆ ವೇಳೆ ಮಾಜಿ ಸಚಿವ ಸಿಸಿ ಪಾಟೀಲ್​ ಆಡಿದ ಮಾತಿಗೆ ಕುರುಬ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಟುರ್‌ ಎಂಬ ಪದ ಬಳಕೆ ಮಾಡಿರುವುದು ಕುರುಬ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಡಿಬಿ ಸಿದ್ದಾಪುರ ಸಿಸಿ ಪಾಟೀಲ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ 

ಸಿಸಿ ಪಾಟೀಲ್​ ಆಡಿದ ಮಾತಿಗೆ ಬಿಜೆಪಿ ಕುರುಬ ಸಮಾಜದ‌ ನಾಯಕರೂ ಕಿಡಿ ಕಾರುತ್ತಿದ್ದಾರೆ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ತಾಯಿ‌ ಮಗನ ರೀತಿ ಸಂಬಂಧ ಹೊಂದಿದವರು. ಆದರೆ ಸಿಸಿ ಪಾಟೀಲ್​ ಇಂತಹ ಮಾತುಗಳನ್ನಾಡಿ ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಒಂದು ವಾರದೊಳಗೆ ಸಿಸಿ ಪಾಟೀಲ್​ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನರಗುಂದದಲ್ಲಿರುವ ಅವರ ಮನೆಗೆ ಕುರಿ ಸಮೇತ​ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ

ಇನ್ನು ಪ್ರಚಾರದ ವೇಳೆ ಮತದಾರರನ್ನು ಸೆಳೆಯೋದಕ್ಕೆ ನಾಯಕರು ವಿವಿಧ ಟ್ರಿಕ್ ಬಳಸಿದ್ದರು. ಸಮಾಜದ ಸಭೆಗಳ ಮೂಲಕ ಆಯಾ ಸಮಾಜದ ಮತ ಸೆಳೆಯುವಲ್ಲಿ ಪ್ರಯತ್ನಿಸಿದ್ದರು. ಆದರೆ ಮಾತಿನ ಭರದಲ್ಲಿ‌ ನಾಲಿಗೆ ಹಿಡಿತ‌ ಕಳೆದುಕೊಂಡು ಆಕ್ರೋಶಕ್ಕೆ‌ ಕಾರಣರಾಗಿದ್ದಾರೆ. ಒಟ್ಟಿನಲ್ಲಿ ಪ್ರಚಾರದ ವೇಳೆ ಆಡಿದ ಮಾತುಗಳು ನಾಯಕರಿಗೆ ಮುಳುವಾಗುತ್ತಿವೆ. ಆಡಿದ‌ ಮಾತಿಗೆ ಸ್ವಪಕ್ಷದಿಂದಲೇ ಇದೀಗ ವಿರೋಧ ಎದುರಿಸುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

CSK vs KKR Playing XI: ಕಿಂಗ್ಸ್ vs ರೈಡರ್ಸ್​: ಹೀಗಿದೆ ಪ್ಲೇಯಿಂಗ್ 11 – Kannada News | CSK vs KKR Playing XI Chennai Super Kings vs Kolkata Knight Riders Today IPL 2026 match Confirmed playing 11 details with name in Kannada

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಮ್ಯಾಚ್​ನಲ್ಲಿ ಟಾಸ್ ಗೆದ್ದಿರುವ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಸಿಎಸ್​ಕೆ ಮೊದಲು ಬ್ಯಾಟ್ ಮಾಡಿದೆ.

ಇನ್ನು ಈ ಪಂದ್ಯಕ್ಕೂ ಮಹೇಂದ್ರ ಸಿಂಗ್ ಧೋನಿ ಅಲಭ್ಯರಾಗಿದ್ದು, ಅದರಂತೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಸರ್ಫರಾಝ್ ಖಾನ್, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಖಲೀಲ್ ಅಹ್ಮದ್.

ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೋನ್ ಗ್ರೀನ್, ಆಂಗ್​ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರೋವ್​ಮನ್ ಪೊವೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಮಣ್​ದೀಪ್ ಸಿಂಗ್, ಅನುಕುಲ್ ರಾಯ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.

ಉಭಯ ತಂಡಗಳ ಮುಖಾಮುಖಿ:

ಸಿಎಸ್​ಕೆ ಮತ್ತು ಕೆಕೆಆರ್ ತಂಡಗಳು ಐಪಿಎಲ್​ನಲ್ಲಿ ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದಿರುವುದು ಕೇವಲ 11 ಮ್ಯಾಚ್​ಗಳಲ್ಲಿ ಮಾತ್ರ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದ್ದವು. ಇದೀಗ ಬಲಿಷ್ಠತೆಯಲ್ಲಿ ಸಮಬಲ ಹೊಂದಿರುವುದರಿಂದ ಇಂದಿನ ಮ್ಯಾಚ್​ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ಅಂಗ್​ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್​ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮೆರೋನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್.

ಇದನ್ನೂ ಓದಿ: CSK vs KKR IPL 2026 Live Score: ಕಿಂಗ್ಸ್ ಮತ್ತು ರೈಡರ್ಸ್ ನಡುವಣ ಕದನ

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

Source link

Exit mobile version