Chanakya Niti: ಬುದ್ಧಿವಂತ ಮಹಿಳೆ ಮಾತ್ರ ಈ ವಿಶೇಷ ಗುಣಗಳನ್ನು ಹೊಂದಿರುವುದಂತೆ – Kannada News

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಜೀವನದ ಎಲ್ಲ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೌದು ಶ್ರೀಮಂತಿಕೆ, ಯಶಸ್ಸು, ಬಡತನ, ದಾಂಪತ್ಯ ಜೀವನ, ಹಿತಶತ್ರುಗಳು, ಸ್ನೇಹಿತರು ಹೀಗೆ ನಮ್ಮ ಜೀವನದ ಪ್ರತಿಯೊಂದು ವಿಚಾರದ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಅದೇ ರೀತಿ ಅವರು ಮಹಿಳೆಯರ ಜೀವನಕ್ಕೂ ಸಂಬಂಧಿಸಿದ ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಬುದ್ಧಿವಂತ ಮಹಿಳೆಯ ಲಕ್ಷಣಗಳೇನು, ಆಕೆ ಯಾವೆಲ್ಲಾ ಗುಣಗಳನ್ನು ಹೊಂದಿರುತ್ತಾಳೆ ಎಂಬುದನ್ನು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಬುದ್ಧಿವಂತ ಮಹಿಳೆಯ ಗುಣಗಳು ಯಾವುವು…

Read More

ಪದೇಪದೇ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಹೃದಯದ ಆರೋಗ್ಯ ಸರಿಯಾಗಿದ್ಯಾ ಪರೀಕ್ಷೆ ಮಾಡಿಸಿಕೊಳ್ಳಿ – Kannada News

ಇತ್ತೀಚಿನ ದಿನಗಳಲ್ಲಿ ಹಲವರಿಗೆ ಪದೇಪದೇ ಮೈಗ್ರೇನ್ (Migraine) ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯ ತಲೆನೋವು ಎಂದು ಇದನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಇದೀಗ ಹೊಸ ಅಧ್ಯಯನವೊಂದು ಮೈಗ್ರೇನ್ ಮತ್ತು ಹೃದಯದ ಆರೋಗ್ಯದ ನಡುವೆ ಸಂಬಂಧ ಇರಬಹುದೆಂಬ ಸೂಚನೆ ನೀಡಿದೆ. ಹೌದು, ಸಾಮಾನ್ಯವಾಗಿ ಮೈಗ್ರೇನ್ ಅನ್ನು ತಲೆನೋವಿನ ಸಮಸ್ಯೆಯಾಗಿ ಪರಿಗಣಿಸಲಾಗುತ್ತದೆ. ಆದರೆ ಇದರ ಪರಿಣಾಮ ಕೇವಲ ತಲೆನೋವಿನಲ್ಲೇ ಸೀಮಿತವಾಗಿರುವುದಿಲ್ಲ. ಮೈಗ್ರೇನ್ ಮತ್ತು ದೇಹದ ಇತರ ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧವನ್ನು ತಿಳಿಯಲು ಹಲವು ಅಧ್ಯಯನಗಳು ನಡೆದಿವೆ. ಸ್ಪ್ರಿಂಗರ್ ನೇಚರ್ ಪ್ರಕಟಿಸಿರುವ…

Read More

ಪಾಕ್ ವಿರುದ್ಧ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡ ಬೆಂಗಳೂರು ASI ಪುತ್ರ – Kannada News

ಬೆಂಗಳೂರು, (ಜೂನ್ 09): ಪ್ರತಿಷ್ಠಿತ ಮುಯ್ ಥಾಯ್ (Muay Thai)  ಕ್ರೀಡಾಕೂಟದಲ್ಲಿ ಬೆಂಗಳೂರಿನ (Bengaluru) ಬನಶಂಕರಿ ಪೊಲೀಸ್ ಠಾಣೆ ಎಎಸ್ಐ ಪುತ್ರ ಕಾಂತರಾಜು ಪುತ್ರ ಶ್ರೀಹರ್ಷ ಬಿ.ಕೆ. ವಿಶೇಷ ಸಾಧನೆ ಮಾಡಿದ್ದಾರೆ. ಹೌದು…ಶ್ರೀಲಂಕದ ನೆಗೊಂಬೋದಲ್ಲಿ ನಡೆದ ಮುಯ್ ಥಾಯ್ಸಮರ ಕಲೆಯ ಕ್ರೀಡಾಕೂಟದಲ್ಲಿ ಶ್ರೀಹರ್ಷ ಬಿ.ಕೆ ಅವರು ಪಾಕಿಸ್ತಾನದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಸ್ವಂತ ಪರಿಶ್ರಮದಿಂದ ಈ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿನಂದನೆ ತಿಳಿಸಿದ್ದು,…

Read More

ಜೂನ್ 12ರಿಂದ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ ಅಕ್ಷಯ್ ಕುಮಾರ್ ಸಿನಿಮಾ ‘ಭೂತ್ ಬಂಗ್ಲ’ – Kannada News

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಹಿರಿಯ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಷನ್‌ನ ಹಾರರ್ ಕಾಮಿಡಿ ಚಿತ್ರ ‘ಭೂತ್ ಬಂಗ್ಲಾ’ (Bhooth Bangla) ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಈಗ ಈ ಸಿನಿಮಾ ಒಟಿಟಿ (OTT) ಅಂಗಳಕ್ಕೆ ಬರಲು ಸಜ್ಜಾಗಿದೆ. ಥಿಯೇಟರ್​ನಲ್ಲಿ ಉತ್ತಮ ಕಲೆಕ್ಷನ್ ಮಾಡಿ ಯಶಸ್ಸು ಕಂಡ ಈ ಸಿನಿಮಾ, ಜೂನ್ 12ರಿಂದ ಪ್ರಮುಖ ಒಟಿಟಿ ಸಂಸ್ಥೆಯಾದ ನೆಟ್‌ಫ್ಲಿಕ್ಸ್‌ ಮೂಲಕ ಡಿಜಿಟಲ್ ಪ್ರಸಾರ ಆರಂಭಿಸಲಿದೆ. ಇದರಿಂದ ಅಕ್ಷಯ್ ಕುಮಾರ್ (Akshay Kumar) ಅಭಿಮಾನಿಗಳು ಖುಷಿ ಆಗಿದ್ದಾರೆ. ಏಪ್ರಿಲ್…

Read More

ಸುಕುಮಾರ್​ಗಾಗಿ ಇನ್ನಷ್ಟು ತಿಂಗಳು ಕಾಯಬೇಕು ರಾಮ್ ಚರಣ್

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾನಲ್ಲಿ ನಾಯಕಿ ಜಾನ್ಹವಿಯನ್ನು ಅತಿಯಾದ ಗ್ಲಾಮರೈಸ್ ಮಾಡಿ ತೋರಿಸಲಾಗಿದೆ ಎಂಬ ಟೀಕೆ ಕೇಳಿ ಬಂದ ಬೆನ್ನಲ್ಲೆ ಸಿನಿಮಾದ ಆ ದೃಶ್ಯಗಳಿಗೆ ನಿರ್ದೇಶಕರು ಕತ್ತರಿ ಹಾಕಿದ್ದು, ಹೊಸ ಆವೃತ್ತಿ ಇದೇ ವಾರಾಂತ್ಯಕ್ಕೆ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ‘ಪೆದ್ದಿ’ ಸಿನಿಮಾ ಮೂಲಕ ರಾಮ್ ಚರಣ್ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಂಡಿದ್ದಾರೆ. ಆದರೆ ಅವರ ಮುಂದಿನ ಸಿನಿಮಾ ಸಖತ್ ಕುತೂಹಲಕಾರಿಯಾಗಿದೆ….

Read More

Video: ಫಿಶ್ ಟ್ಯಾಂಕ್ ಒಳಗಿಳಿದು ಮೀನು ಹಿಡಿದ ಪುಟ್ಟ ಬಾಲಕ, ವೈರಲ್‌ ಆಯ್ತು ದೃಶ್ಯ – Kannada News

ಪುಟಾಣಿಗಳ (little kids) ಆಟ ತುಂಟಾಟಗಳನ್ನು ನೋಡುವ ಖುಷಿಯೇ ಬೇರೆ. ಕೀಟಲೆ ಮಾಡುವ ಮಕ್ಕಳನ್ನು ಕಂಡರೆ ಪಿತ್ತ ನೆತ್ತಿಗೇರುತ್ತದೆ. ಇಂತಹ ಮಕ್ಕಳನ್ನು ಹೆತ್ತವರು ಹೇಗೆ ಸಹಿಸಿಕೊಳ್ತಾರೆ ಎಂದು ಮನಸ್ಸಲ್ಲೇ ಅಂದುಕೊಳ್ಳುವುದಿದೆ. ಈ ದೃಶ್ಯ ನೋಡಿದ್ರೆ ನಿಮಗೆ ಹಾಗೆ ಅನಿಸಬಹುದು. ಪುಟ್ಟ ಹುಡುಗನೊಬ್ಬ ಫಿಶ್ ಟ್ಯಾಂಕ್ ಒಳಗಿಳಿದು ಮೀನು ಹಿಡಿಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಯಲ್ಯಾಂಗ್ ಅಕ್ವೇರಿಯಂ (Ylang Aquarium) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪುಟಾಣಿಯ ಖತರ್ನಾಕ್…

Read More

ಶಿವಮೊಗ್ಗ-ತುಮಕೂರು ಹೆದ್ದಾರಿ ಕಾಮಗಾರಿಯಲ್ಲಿ ಮಹಾ ಯಡವಟ್ಟು: ಕಿರಿದಾದ ಮಣ್ಣಿನ ರಸ್ತೆಯಲ್ಲಿ ಲಾಕ್ ಆಯ್ತು ಗ್ಯಾಸ್ ಟ್ಯಾಂಕರ್ – Kannada News

ಶಿವಮೊಗ್ಗ ಹೆದ್ದಾರಿImage Credit source: Tv9 kannada ಶಿವಮೊಗ್ಗ, ಜೂ.9: ಅಧಿಕಾರಿಗಳು ಮಾಡುವ ಯಡವಟ್ಟಿನಿಂದ ಜನರಿಗೆ ಭಾರೀ ತೊಂದರೆ ಆಗುತ್ತಿದೆ. ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿ 206ರ ಕಾಮಗಾರಿ ಸಾರ್ವಜನಿಕರಿಗೆ ನಿತ್ಯ ನರಕದರ್ಶನ ಮಾಡಿಸುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮಂದಗತಿಯ ಕೆಲಸಕ್ಕೆ ಇಂದು ಮತ್ತೊಂದು ಭೀಕರ ಅವಾಂತರ ಸೃಷ್ಟಿಯಾಗಿದೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಇರುವ ಕುವೆಂಪು ನಗರ ಗ್ರಾಮದ ಮುಂಭಾಗದ ಕಿರಿದಾದ ತಾತ್ಕಾಲಿಕ ಮಣ್ಣಿನ ರಸ್ತೆಯಲ್ಲಿ ಭಾರಿ ಪ್ರಮಾಣದ ಗ್ಯಾಸ್ ತುಂಬಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಸಿಲುಕಿಕೊಂಡಿದ್ದು,…

Read More

ಕಾಂಗ್ರೆಸ್​ಗೆ ಭಾರೀ ಮುಖಭಂಗ; ರಾಜ್ಯಸಭೆ ಚುನಾವಣೆಗೆ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ – Kannada News

ಭೋಪಾಲ್, ಜೂನ್ 9: ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರಿಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ (Rajya Sabha Elections) ಸ್ಪರ್ಧಿಸಲು ಅವರು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ. ಈ ಮೂಲಕ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ರದ್ದುಗೊಂಡಿದೆ. ಬಿಜೆಪಿ ಮೀನಾಕ್ಷಿ ನಟರಾಜನ್ ಅವರ ನಾಮನಿರ್ದೇಶನಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು….

Read More

ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ – Kannada News

ನವದೆಹಲಿ, ಜೂನ್ 9: ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆಪ್‌ಗಳು ಗ್ರಾಹಕರನ್ನು ಮರುಳು ಮಾಡಲು ಬಳಸುವ ಮೋಸದ ಜಾಲಗಳಿಗೆ (Dark Patterns) ಬಹಳಷ್ಟು ಭಾರತೀಯರು ಬಲಿಯಾಗುತ್ತಿದೆ ಎನ್ನುವ ಆತಂಕಕಾರಿ ವರದಿಯೊಂದು ಬಂದಿದೆ. ಡಾರ್ಕ್ ಪ್ಯಾಟರ್ನ್ ಮಾದರಿಯ ವಂಚನೆಗಳಿಂದಾಗಿ ಶೇ. 88ರಷ್ಟು ಆನ್​ಲೈನ್ ಗ್ರಾಹಕರು ಹಣ ಕಳೆದುಕೊಳ್ಳುತ್ತಿದ್ದಾರೆನ್ನಲಾಗಿದೆ. ಅಂದರೆ, ಭಾರತದ ಒಟ್ಟು 30.4 ಕೋಟಿ ಆನ್‌ಲೈನ್ ಗ್ರಾಹಕರಲ್ಲಿ 27 ಕೋಟಿಗೂ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಮೋಸದ ಜಾಲದಿಂದಾಗಿ ಭಾರತೀಯ ಗ್ರಾಹಕರು ವಾರ್ಷಿಕವಾಗಿ ಅಂದಾಜು 25,000 ದಿಂದ 28,000 ಕೋಟಿ…

Read More

ಹಳೆಯ ಟೂತ್‌ಬ್ರಷ್‌ ಎಸೆಯುವ ಬದಲು ಮನೆಯ ಈ ಎಲ್ಲಾ ಕೆಲಸಗಳನ್ನು ಮಾಡಲು ಉಪಯೋಗಿಸಿಕೊಳ್ಳಿ – Kannada News

ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ದೃಷ್ಟಿಯಿಂದ ನಾವೆಲ್ಲರೂ ಹಳೆಯದಾದ, ಮುರಿದ ವಸ್ತುಗಳನ್ನೆಲ್ಲಾ ಮನೆಯಿಂದ ಎಸೆದು ಬಿಡುತ್ತೇವೆ. ಆದರೆ ಏನು ಗೊತ್ತಾ, ಇದರಿಂದ ಉಪಯೋಗವೇ ಇಲ್ಲ ಎಂದು ಬಿಸಾಡುವ ವಸ್ತುಗಳನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳಬಹುದು. ಅಂತಹ ವಸ್ತುಗಳಲ್ಲಿ ಟೂತ್‌ಬ್ರಷ್‌ (toothbrush) ಕೂಡ ಒಂದು. ಸಾಮಾನ್ಯವಾಗಿ ಹಳೆಯ ಟೂತ್‌ಬ್ರಷ್‌ ಅನ್ನು ಎಸೆದು ಬಿಡುತ್ತೇವೆ. ಇದನ್ನು ಎಸೆಯುವ ಬದಲು ಅನೇಕ ಮನೆ ಕೆಲಸಗಳಿಗೆ ಉಪಯೋಗಿಸಬಹುದು, ಇದರ ಸಹಾಯದಿಂದ ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಹಾಗಿದ್ದರೆ ಹಳೆಯ ಟೂತ್‌ಬ್ರಷ್‌ ಸಹಾಯದಿಂದ ಯಾವೆಲ್ಲಾ ಮನೆ ಕೆಲಸಗಳನ್ನು…

Read More