ನಿಷೇಧವಾಗಿರುವ ‘ಸತ್ಲಜ್’ ಸಿನಿಮಾಕ್ಕೆ ದಿಲ್ಜೀತ್ ಪಡೆದ ಸಂಭಾವನೆ 1 ರೂಪಾಯಿ ಮಾತ್ರ – Kannada News | Diljit Dosanjh only took 1 rs for Satluj movie says director

ದಿಲ್ಜಿತ್ ದುಸ್ಸಾಂಜ್ (diljit dosanjh), ಬಾಲಿವುಡ್​ ಮತ್ತು ಪಂಜಾಬಿ ಚಿತ್ರರಂಗದ ಬಲು ಜನಪ್ರಿಯ ನಟ, ಜೊತೆಗೆ ವಿಶ್ವಮಟ್ಟದಲ್ಲಿ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಗಾಯಕ ಸಹ. ಅವರ ಲೈವ್ ಕಾನ್ಸರ್ಟ್​​ಗಳಿಗೆ ಲಕ್ಷಾಂತರ ರೂಪಾಯಿ ಟಿಕೆಟ್ ಕೊಟ್ಟು, ಲಕ್ಷಾಂತರ ಜನ ಭಾಗವಹಿಸುತ್ತಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ಸತ್ಲಜ್’ ಚಿತ್ರ ವಿವಾದಕ್ಕೆ ಸಿಲುಕಿಕೊಂಡಿದೆ. ಸಿನಿಮಾಕ್ಕೆ ಸಿಬಿಎಫ್​​ಸಿ, ಪ್ರಮಾಣ ಪತ್ರ ನೀಡುವುದನ್ನೇ ನಿರಾಕರಿಸಿದೆ. ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಯ್ತಾದರೂ ಕೇವಲ ಎರಡು ದಿನದ ಒಳಗೆ ಅಲ್ಲಿಂದಲೂ ಅದನ್ನು ತೆಗೆದು ಹಾಕಲಾಗಿದೆ. ಬಂಡವಾಳ ಹೂಡಿ, ವರ್ಷಗಟ್ಟಲೆ ಚಿತ್ರೀಕರಣ ಮಾಡಿದ ಸಿನಿಮಾ, ಈಗ ರಾಜಕೀಯ ಕಾರಣಗಳಿಂದಲ ಬಿಡುಗಡೆಯೇ ಆಗುತ್ತಿಲ್ಲ.

ದಿಲ್ಜಿತ್ ದೋಸಾಂಜ್ ಮೊದಲ ದಿನದಿಂದಲೇ ಈ ಚಿತ್ರಕ್ಕೆ ಸಂಪೂರ್ಣ ಬದ್ಧರಾಗಿದ್ದರು. ಸಿನಿಮಾ ಚೆನ್ನಾಗಿ ಮೂಡಿ ಬರಬೇಕು, ಎಲ್ಲರಿಗೂ ಸಿನಿಮಾದ ಮೂಲಕ ತಾವು ಹೇಳುತ್ತಿರುವ ಸತ್ಯ ತಿಳಿಯಬೇಕು ಎಂಬುದು ದಿಲ್ಜಿತ್ ದೊಸ್ಸಾಂಜ್ ಆಸೆ ಆಗಿತ್ತು. ಇತ್ತೀಚಿನ ಸಂವಾದವೊಂದರಲ್ಲಿ ಮಾತನಾಡಿರುವ ಚಿತ್ರದ ನಿರ್ದೇಶಕ ಹನಿ ತೆಹ್ರಾನ್, ನಟ ದಿಲ್ಜಿತ್ ಬದ್ಧತೆಯ ಬಗ್ಗೆ ಮಾತನಾಡುತ್ತಾ, ದಿಲ್ಜಿತ್ ಈ ಚಿತ್ರಕ್ಕಾಗಿ ಕೇವಲ 1 ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಅಂಶ ಬಹಿರಂಗಪಡಿಸಿದ್ದಾರೆ.

ದಿಲ್ಜಿತ್ ಅವರ ಬಗ್ಗೆ ಮಾತನಾಡುತ್ತಾ ನಿರ್ದೇಶಕ ತೆಹ್ರಾನ್, ‘ದಿಲ್ಜಿತ್ ಇಲ್ಲದೆ ಈ ಚಿತ್ರ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಆ ಜಗತ್ತನ್ನು ಅರ್ಥಮಾಡಿಕೊಂಡಿರುವ ನಟನ ಅಗತ್ಯವಿತ್ತು. ನಾನು ಸಿಖ್ ನಟನನ್ನೇ ಹಾಕಬೇಕೆಂದು ಬಯಸಿದ್ದೆ, ಏಕೆಂದರೆ ನಾನು ಬಾಲಿವುಡ್‌ನ ಬೇರೆ ನಟನನ್ನು ಈ ಪಾತ್ರಕ್ಕೆ ಹಾಕಿದ್ದರೆ, ಅದು ಈ ನಟ ಸಿಖ್ ವ್ಯಕ್ತಿಯಾಗಿ ನಟಿಸುತ್ತಿದ್ದಾರೆ ಎಂಬ ಚರ್ಚೆಗೆ ದಾರಿ ಮಾಡಿಕೊಡುತ್ತಿತ್ತು. ಅದು ಖಲ್ರಾ ಸಾಹೇಬರ ಪ್ರಯಾಣಕ್ಕೆ ಮತ್ತು ಈ ಕಥೆಯು ಹೊತ್ತಿರುವ ಜನರ ನೋವಿಗೆ ಮಾಡಿದ ಅನ್ಯಾಯವಾಗುತ್ತಿತ್ತು’ ಎಂದಿದ್ದಾರೆ.

‘ಸತ್ಲಜ್’ ಚಿತ್ರವು ಜಶ್ವಂತ್ ಸಿಂಗ್ ಖಲ್ರಾ ಅವರ ಜೀವನದ ಮೇಲೆ ಆಧಾರಿತವಾಗಿದೆ. ಅವರು 1990ರ ದಶಕದ ಮಧ್ಯಭಾಗದಲ್ಲಿ ಪಂಜಾಬ್‌ನಲ್ಲಿ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದರು, ಬ್ಯಾಂಕ್ ಕ್ಲರ್ಕ್ ಆಗಿದ್ದುಕೊಂಡು ಅವರು ಮಾನವಕ ಹಕ್ಕುಗಳ ಪರವಾಗಿ ಹೋರಾಡಿದ್ದರು. 1984 ಮತ್ತು 1994ರ ನಡುವೆ ಪಂಜಾಬ್‌ನಲ್ಲಿ 25,000 ಜನರ ಶವಸಂಸ್ಕಾರದ ಬಗ್ಗೆ ಅವರು ನಡೆಸಿದ ತನಿಖೆಯ ಬಗೆಗಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ನ್ಯಾಯಾಲಯದ ತೀರ್ಪಿನ ಪ್ರಕಾರ, 1995ರಲ್ಲಿ ಖಲ್ರಾ ಅವರನ್ನು ಅಪಹರಿಸಿ ಪೊಲೀಸ್ ಕಸ್ಟಡಿಯಲ್ಲಿಯೇ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ:26 ವರ್ಷಗಳ ಬಳಿಕ ದಕ್ಷಿಣಕ್ಕೆ ಬರುತ್ತಿದ್ದಾರೆ ಬಾಲಿವುಡ್​​ ಹಿರಿಯ ನಟ

ಖಲ್ರಾ ಅವರ ಪಾತ್ರದ ಬಗ್ಗೆ ಯೋಚಿಸಿದಾಗ ತಕ್ಷಣಕ್ಕೆ ದಿಲ್ಜಿತ್ ಅವರ ಮುಖವೇ ನೆನಪಿಗೆ ಬಂದಿತು ಎಂದು ತೆಹ್ರಾನ್ ಹಂಚಿಕೊಂಡಿದ್ದಾರೆ. 2021ರಲ್ಲಿ ಅವರು ದಿಲ್ಜಿತ್ ಅವರನ್ನು ಭೇಟಿಯಾಗಿ, 30 ನಿಮಿಷಗಳ ಕಾಲ ಸಿನಿಮಾದ ಬಗ್ಗೆ ಮಾತನಾಡಿದ್ದರಂತೆ ನಿರ್ದೇಶಕ, ಆಗ ಖಲ್ರಾ ಬಗ್ಗೆ ತಾವು ನಡೆಸಿರುವ ಅಧ್ಯಯನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರಂತೆ. ಜೊತೆಗೆ ಖಲ್ರಾ ಅವರ ಛಾಯಾಚಿತ್ರವನ್ನು ದಿಲ್ಜಿತ್ ತೋರಿಸಿದ್ದರಂತೆ. ಆ ಛಾಯಾಚಿತ್ರ ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದ ದಿಲ್ಜಿತ್, ಅಂದೇ ನಿರ್ಧರಿಸಿದರಂತೆ ಈ ಸಿನಿಮಾನಲ್ಲಿ ತಾವು ನಟಿಸಬೇಕು, ಹಾಗೂ ಈ ಸಿನಿಮಾ ಹೆಚ್ಚು ಜನರನ್ನು ತಲುಪಬೇಕು ಎಂದು. ‘ಅವರು ತಮ್ಮ ಕುರ್ಚಿಯಿಂದ ಎದ್ದು, ಸ್ಕ್ರಿಪ್ಟ್ ಅನ್ನು ತಮ್ಮ ಹಣೆಗೆ ಮುಟ್ಟಿ ‘ವಾಹೇಗುರು’ ಎಂದರು. ‘ಖಲ್ರಾ ಅವರಂತಹ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಲು ನಾನು ಹೇಗೆ ಹಣ ಪಡೆಯಲಿ? ಅದು ನಾಚಿಕೆಗೇಡಿನ ವಿಷಯ’ ಎಂದು ಹೇಳಿದರು.” ನಂತರ ನಿರ್ದೇಶಕರು ಒತ್ತಾಯಿಸಿದಾಗ, ಒಪ್ಪಂದಕ್ಕಾಗಿ ಏನಾದರೂ ಪಾವತಿಸಬೇಕೆಂದಿದ್ದರೆ ಕೇವಲ 1 ರೂಪಾಯಿ ಕೊಡಿ ಎಂದು ನಟ ಸರಳವಾಗಿ ಹೇಳಿದರು’ ಎಂದು ನಿರ್ದೇಶಕ ತೆಹ್ರಾನ್ ಈಗ ಹೇಳಿದ್ದಾರೆ.

‘ಸತ್ಲಜ್’ ಚಿತ್ರದ ಚಿತ್ರೀಕರಣದುದ್ದಕ್ಕೂ ದಿಲ್ಜಿತ್ ಅದ್ಭುತವಾಗಿ ಬೆಂಬಲ ನೀಡಿದರು ಎಂದು ತೆಹ್ರಾನ್ ಹಂಚಿಕೊಂಡಿದ್ದಾರೆ. “ಕೆಲವು ದಿನಗಳವರೆಗೆ ಅವರು ಬೆಳಿಗ್ಗೆ ಆರು ಗಂಟೆಗೆ ಬಂದು ಹಾಜರಾಗುತ್ತಿದ್ದರು, ಆದರೆ ವೇಳಾಪಟ್ಟಿ ಏರುಪೇರಾದ ಕಾರಣ ಸಂಜೆ ನಾಲ್ಕು ಗಂಟೆಯವರೆಗೆ ಅವರ ಮೊದಲ ಶಾಟ್ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಪದೇ ಪದೇ ಕ್ಷಮೆಯಾಚಿಸುತ್ತಿದ್ದೆ. ಆದರೆ ಪ್ರತಿ ಬಾರಿಯೂ ಅವರು, ‘ಪಾಜಿ, ತೊಂದರೆಯಿಲ್ಲ. ನೀವು ಏನೇ ಮಾಡುತ್ತಿದ್ದರೂ ಚಿತ್ರಕ್ಕಾಗಿ ಮಾಡುತ್ತಿದ್ದೀರಿ. ಚಿತ್ರವನ್ನು ಬೆಂಬಲಿಸಲು ನಾನು ಇಲ್ಲಿದ್ದೇನೆ’ ಎಂದು ಹೇಳುತ್ತಿದ್ದರು,” ಎಂದು ನಿರ್ದೇಶಕರು ನೆನಪಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಚಿನ್ನದ ಬೆಲೆಯಲ್ಲಿ ಇಳಿಕೆ; ಗ್ರಾಮ್​ಗೆ 25 ರೂ ಕಡಿಮೆ – Kannada News | Gold Price Today on 16th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 16: ಚಿನ್ನದ ಬೆಲೆ ಹೊಯ್ದಾಟದ ಹಂತಕ್ಕೆ ಬಂದಿರುವಂತಿದೆ. ಮೊನ್ನೆ 140 ರೂ ಕಡಿಮೆಗೊಂಡು, ನಿನ್ನೆ 70 ರೂ ಹೆಚ್ಚಿದ್ದ ಬಂಗಾರದ ದರ (Gold Price) ಇವತ್ತು 25 ರೂ ತಗ್ಗಿದೆ. ವಿದೇಶಗಳಲ್ಲೂ ಇದರ ಬೆಲೆಯ ತೂಗುಯ್ಯಾಲೆ ಮುಂದುವರಿದಿದೆ. ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಕಳೆದ ಕೆಲ ದಿನಗಳಿಂದ ಇರುವ 235 ರು ಬೆಲೆಯೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,43,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,31,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 16ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,329 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,135 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,747 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,329 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,135 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,135 ರೂ
  • ಚೆನ್ನೈ: 13,150 ರೂ
  • ಮುಂಬೈ: 13,135 ರೂ
  • ದೆಹಲಿ: 13,150 ರೂ
  • ಕೋಲ್ಕತಾ: 13,135 ರೂ
  • ಕೇರಳ: 13,135 ರೂ
  • ಅಹ್ಮದಾಬಾದ್: 13,140 ರೂ
  • ಜೈಪುರ್: 13,150 ರೂ
  • ಲಕ್ನೋ: 13,150 ರೂ
  • ಭುವನೇಶ್ವರ್: 13,135 ರೂ

ಇದನ್ನೂ ಓದಿ: ಹೊಸ ಐಆರ್​ಸಿಟಿಸಿ ವೆಬ್​ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 542 ರಿಂಗಿಟ್ (12,814 ರುಪಾಯಿ)
  • ದುಬೈ: 486 ಡಿರಾಮ್ (12,745 ರುಪಾಯಿ)
  • ಅಮೆರಿಕ: 133.50 ಡಾಲರ್ (12,857 ರುಪಾಯಿ)
  • ಸಿಂಗಾಪುರ: 177.40 ಸಿಂಗಾಪುರ್ ಡಾಲರ್ (13,259 ರುಪಾಯಿ)
  • ಕತಾರ್: 491.50 ಕತಾರಿ ರಿಯಾಲ್ (12,987 ರೂ)
  • ಸೌದಿ ಅರೇಬಿಯಾ: 504 ಸೌದಿ ರಿಯಾಲ್ (12,924 ರುಪಾಯಿ)
  • ಓಮನ್: 51.60 ಒಮಾನಿ ರಿಯಾಲ್ (12,907 ರುಪಾಯಿ)
  • ಕುವೇತ್: 40.93 ಕುವೇತಿ ದಿನಾರ್ (12,820 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 240 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 240 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಬೆದರಿಕೆ ವಿರುದ್ಧ ಗಲ್ಫ್​ ರಾಷ್ಟ್ರಗಳ ಮಾಸ್ಟರ್ ಪ್ಲ್ಯಾನ್, ಹಾರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಹೊಸ ಬಂದರು ನಿರ್ಮಾಣ – Kannada News | Gulf Nations Bypass Iran Threat: New Ports and Pipelines Alternative to Strait of Hormuz

ದುಬೈ, ಜುಲೈ 16: ಅಮೆರಿಕ ಮತ್ತು ಇರಾನ್(Iran) ನಡುವಿನ ಮಿಲಿಟರಿ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಬಿಡುವಿಲ್ಲದ ತೈಲ ಸಾರಿಗೆ ಮಾರ್ಗವಾದ ಹಾಮರ್ಮಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಾಗತಿಕ ತೈಲ ಪೂರೈಕೆಗೆ ಕಂಟಕ ಎದುರಾಗಿರುವ ಈ ಸಂದರ್ಭದಲ್ಲಿ ಯುಎಇ (UAE), ಸೌದಿ ಅರೇಬಿಯಾ ಮತ್ತು ಇರಾಕ್ ದೇಶಗಳು ಇರಾನ್‌ನ ಈ ಜಲಮಾರ್ಗದ ಮೇಲಿನ ತಮ್ಮ ಅವಲಂಬನೆಯನ್ನು ಶಾಶ್ವತವಾಗಿ ಕಡಿತಗೊಳಿಸಲು ಯುದ್ಧೋಪಾದಿಯಲ್ಲಿ ಸಜ್ಜಾಗುತ್ತಿವೆ.

ಯುದ್ಧಕ್ಕೂ ಮುನ್ನ ಜಗತ್ತಿನ ಒಟ್ಟು ಕಚ್ಚಾ ತೈಲದ ಶೇಕಡಾ 20 ರಷ್ಟು ಭಾಗ ಹಾಗೂ ಭಾರತದ ದ್ರವೀಕೃತ ನೈಸರ್ಗಿಕ ಅನಿಲದ ಬಹುದೊಡ್ಡ ಪಾಲು ಪ್ರತಿದಿನ ಇದೇ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತಿತ್ತು. ಈಗ ಈ ಮಾರ್ಗಕ್ಕೆ ಪರ್ಯಾಯವಾಗಿ ಗಲ್ಫ್ ರಾಷ್ಟ್ರಗಳು ಭೂಮಿಯ ಒಳಗಿನ ಬೃಹತ್ ಪೈಪ್‌ಲೈನ್‌ಗಳು ಮತ್ತು ಹೊಸ ಹೈಟೆಕ್ ಬಂದರುಗಳನ್ನು ನಿರ್ಮಿಸುತ್ತಿವೆ.

‘ವೆಸ್ಟ್-ಈಸ್ಟ್’ ಮೆಗಾ ಪೈಪ್‌ಲೈನ್

ಪ್ರಾದೇಶಿಕ ಅಸ್ಥಿರತೆ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಯುಎಇ, ಹಾರ್ಮುಜ್ ಜಲಸಂಧಿಯನ್ನು ಬಳಸದೆಯೇ ಕಚ್ಚಾ ತೈಲವನ್ನು ಸಾಗಿಸಬಲ್ಲ ತನ್ನ ಮಹತ್ವಾಕಾಂಕ್ಷೆಯ 252 ಮೈಲಿ ಉದ್ದದ ‘ಪಶ್ಚಿಮ-ಪೂರ್ವ’ ಪೈಪ್‌ಲೈನ್ ಯೋಜನೆಯನ್ನು ತೀವ್ರಗೊಳಿಸಿದೆ. ಈ ಯೋಜನೆಯ ಕೆಲಸ ಈಗಾಗಲೇ ಅರ್ಧದಷ್ಟು ಮುಗಿದಿದ್ದು, 2027 ರ ಕಟ್ಟುನಿಟ್ಟಿನ ಗಡುವಿನೊಳಗೆ ಇದನ್ನು ಪೂರ್ಣಗೊಳಿಸುವಂತೆ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮತ್ತಷ್ಟು ಓದಿ: ಮಹಾಯುದ್ಧದ ಭೀತಿ: ಇರಾನ್‌ನ ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಮೇಲೆ ಅಮೆರಿಕ ದಾಳಿ, MQ-9 ಡ್ರೋನ್ ಹೊಡೆದುರುಳಿಸಿದ ಇರಾನ್

ಅಸ್ತಿತ್ವದಲ್ಲಿರುವ ಫುಜೈರಾ ಜಾಲದೊಂದಿಗೆ ಈ ಹೊಸ ಪೈಪ್‌ಲೈನ್ ಸೇರಿದರೆ, ಯುಎಇ ದೇಶದ ಭೂ-ಆಧಾರಿತ ತೈಲ ರಫ್ತು ಸಾಮರ್ಥ್ಯವು ದಿನಕ್ಕೆ 3.6 ಮಿಲಿಯನ್ ಬ್ಯಾರೆಲ್‌ಗಳಿಗೆ ದ್ವಿಗುಣಗೊಳ್ಳಲಿದೆ. ವಿಶ್ವದ ಹೆಚ್ಚಿನ ಇಂಧನ ಕೆಲವೇ ಕೆಲವು ಚಾಕ್ ಪಾಯಿಂಟ್‌ಗಳ ಮೂಲಕ ಸಾಗುತ್ತಿರುವುದರಿಂದಲೇ ನಾವು ಒಂದು ದಶಕದ ಹಿಂದೆಯೇ ಈ ಸುರಕ್ಷಿತ ಹೂಡಿಕೆಯ ನಿರ್ಧಾರ ಕೈಗೊಂಡಿದ್ದೆವು ಎಂದು ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿಯ ಮುಖ್ಯಸ್ಥ ಸುಲ್ತಾನ್ ಅಲ್ ಜಾಬರ್ ತಿಳಿಸಿದ್ದಾರೆ.

ಇರಾಕ್ ಮತ್ತು ಸೌದಿಯಿಂದ ಜೋರ್ಡಾನ್, ಟರ್ಕಿ ಜಂಟಿ ನೆಟ್‌ವರ್ಕ್

ಮತ್ತೊಂದೆಡೆ ಇರಾಕ್ ಮತ್ತು ಸೌದಿ ಅರೇಬಿಯಾ ಕೂಡ ತಮ್ಮ ಆರ್ಥಿಕತೆಯ ರಕ್ಷಣೆಗಾಗಿ ಹೊಸ ಭೂ-ಸಾರಿಗೆ ಮಾರ್ಗಗಳನ್ನು ವಿಸ್ತರಿಸುತ್ತಿವೆ.

ಇರಾಕ್‌ನ 1.5 ಬಿಲಿಯನ್ ಡಾಲರ್ ಹೂಡಿಕೆ: ಇರಾಕ್ ಸರ್ಕಾರವು ತನ್ನ 435 ಮೈಲಿ ಉದ್ದದ ‘ಬಸ್ರಾ-ಹದಿತಾ’ ಪೈಪ್‌ಲೈನ್ ನಿರ್ಮಾಣಕ್ಕೆ ಚಾಲನೆ ನೀಡಿದೆ. ಇದು ದಿನಕ್ಕೆ 2.5 ಮಿಲಿಯನ್ ಬ್ಯಾರೆಲ್ ತೈಲವನ್ನು ನೇರವಾಗಿ ಜೋರ್ಡಾನ್, ಸಿರಿಯಾ ಮತ್ತು ಟರ್ಕಿ ದೇಶಗಳ ಟರ್ಮಿನಲ್ ನೆಟ್‌ವರ್ಕ್‌ಗಳಿಗೆ ಸಂಪರ್ಕಿಸಲಿದೆ. ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಈ ಯೋಜನೆಯನ್ನು ದೇಶದ ರಾಷ್ಟ್ರೀಯ ಭದ್ರತಾ ಗುರಾಣಿ ಎಂದು ಕರೆದಿದ್ದಾರೆ.

ಸೌದಿ ಅರೇಬಿಯಾದ ಬೃಹತ್ ಯೋಜನೆ: ಸೌದಿ ಅರೇಬಿಯಾವು ತನ್ನ ರೆಡ್​ ಸೀ ಕಚ್ಚಾ ತೈಲ ಪೈಪ್‌ಲೈನ್ ಸಾಮರ್ಥ್ಯವನ್ನು ದಿನಕ್ಕೆ ಬರೋಬ್ಬರಿ 9 ಮಿಲಿಯನ್ ಬ್ಯಾರೆಲ್‌ಗಳಿಗೆ ವಿಸ್ತರಿಸುವ ಬೃಹತ್ ಯೋಜನೆಯನ್ನು ಪರಿಶೀಲಿಸುತ್ತಿದೆ.

ಹಾರ್ಮುಜ್ ಬೈಪಾಸ್ ಮಾಡಲು ಯುಎಇಯಿಂದ ಹೊಚ್ಚ ಹೊಸ ಬಂದರು

ಪೈಪ್‌ಲೈನ್‌ಗಳ ಜೊತೆಗೆ, ಯುಎಇ ಅತ್ಯಂತ ಚಾಣಾಕ್ಷ ಹೆಜ್ಜೆಯನ್ನಿಟ್ಟಿದೆ. ಹಾರ್ಮುಜ್ ಜಲಸಂಧಿಯ ಅರಬ್ಬಿ ಸಮುದ್ರದ ಬದಿಯಲ್ಲಿ ಹೊಸದೊಂದು ದೈತ್ಯ ಬಂದರು ಮತ್ತು ಕಂಟೇನರ್ ಟರ್ಮಿನಲ್ ನಿರ್ಮಿಸಲು ಯೋಜನೆ ರೂಪಿಸಿದೆ.

ದುಬೈ ಮೂಲದ ವಿಶ್ವಪ್ರಸಿದ್ಧ ಬಂದರು ನಿರ್ವಾಹಕ ಸಂಸ್ಥೆ ‘ಡಿಪಿ ವರ್ಲ್ಡ್’ಯುಎಇಯ ಪೂರ್ವ ಕರಾವಳಿಯಲ್ಲಿ ಈ ಬಹುಪಯೋಗಿ ಬಂದರನ್ನು ಅಭಿವೃದ್ಧಿಪಡಿಸಲಿದೆ. ಈ ಮೂಲಕ ದುಬೈ ತನ್ನ ಪ್ರಮುಖ ‘ಜೆಬೆಲ್ ಅಲಿ’ ಬಂದರಿನ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಿ, ಅಸ್ಥಿರ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬೈಪಾಸ್ ಮಾಡುವ ಹೊಸ ಹಡಗು ಮಾರ್ಗವನ್ನು ಜಗತ್ತಿಗೆ ಪರಿಚಯಿಸಲಿದೆ.

2028 ರ ವೇಳೆಗೆ ಶೇ. 60 ರಷ್ಟು ತೈಲ ಸುರಕ್ಷಿತ

ಜಾಗತಿಕ ಹೂಡಿಕೆ ಬ್ಯಾಂಕ್ ಆದ ‘ಗೋಲ್ಡ್‌ಮನ್ ಸ್ಯಾಚ್ಸ್’ ನ ಪ್ರಮುಖ ವಿಶ್ಲೇಷಕಿ ಅಲೆಕ್ಸಾಂಡ್ರಾ ಪೌಲಸ್ ಅವರ ವರದಿಯ ಪ್ರಕಾರ, ಪ್ರಸ್ತುತ ಗಲ್ಫ್ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಏಳು ಪ್ರಮುಖ ಪೈಪ್‌ಲೈನ್ ಯೋಜನೆಗಳು ಯಶಸ್ವಿಯಾದರೆ, 2028 ರ ಅಂತ್ಯದ ವೇಳೆಗೆ ಗಲ್ಫ್ ರಾಷ್ಟ್ರಗಳ ಒಟ್ಟು ತೈಲ ರಫ್ತಿನ ಶೇಕಡಾ 60 ರಷ್ಟು (ದಿನಕ್ಕೆ 7.3 ಮಿಲಿಯನ್ ಬ್ಯಾರೆಲ್) ಭಾಗವು ಹಾರ್ಮುಜ್ ಜಲಸಂಧಿಯ ಅಪಾಯವಿಲ್ಲದೆಯೇ ಸುರಕ್ಷಿತವಾಗಿ ಜಗತ್ತನ್ನು ತಲುಪಲಿದೆ.

ಈ ಪರ್ಯಾಯ ಮಾರ್ಗಗಳಿಗಾಗಿ ಶತಕೋಟಿ ಡಾಲರ್ ಸುರಿಯಲಾಗುತ್ತಿದ್ದರೂ, ಭೌಗೋಳಿಕವಾಗಿ ಹಾರ್ಮುಜ್ ಜಲಸಂಧಿಯ ಪ್ರಾಮುಖ್ಯತೆಯನ್ನು ಸಂಪೂರ್ಣವಾಗಿ ಇಲ್ಲದೆಯಾಗಿಸಲು ಸಾಧ್ಯವಿಲ್ಲ ಎಂದು ಜಾಗತಿಕ ಇಂಧನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ಇರಾನ್‌ನ ಇತ್ತೀಚಿನ ಸರಣಿ ಬೆದರಿಕೆಗಳು ಮಧ್ಯಪ್ರಾಚ್ಯದ ಆರ್ಥಿಕ ಭೂಪಟವನ್ನು ಹೊಸದಾಗಿ ಮರುವಿನ್ಯಾಸಗೊಳಿಸುತ್ತಿರುವುದಂತೂ ಸತ್ಯ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉಪ್ಪಿನಂಗಡಿಯಲ್ಲಿ ಹೈಟೆಕ್ ನಕಲಿ ನೋಟು ದಂಧೆ ಪತ್ತೆ: ಅಡಿಂಜೆಯಲ್ಲಿ ಪ್ರಿಂಟಿಂಗ್ ಮೆಷಿನ್ ಜಪ್ತಿ – Kannada News | Major Counterfeit Currency Operation Unearthed in Dakshina Kannadas Uppinangady

ಉಪ್ಪಿನಂಗಡಿ, ಜು.16: ಸಾರ್ವಜನಿಕ ವಲಯ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ತಲೆನೋವಾಗಿದ್ದ ನಕಲಿ ನೋಟು ತಯಾರಿಸುವ ಬೃಹತ್ ಜಾಲವೊಂದನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಸುಧಾರಿತ ಮುದ್ರಣ ಯಂತ್ರಗಳನ್ನು ಜಪ್ತಿ ಮಾಡಿದ್ದಾರಲ್ಲದೆ, ಅಂತರರಾಜ್ಯ ಸಂಪರ್ಕ ಹೊಂದಿದ್ದ ಬರೋಬ್ಬರಿ 7 ಮಂದಿ ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡಿಂಜೆ ಎಂಬ ನಿರ್ಜನ ಹಾಗೂ ರಹಸ್ಯ ಪ್ರದೇಶದಲ್ಲಿ ಈ ನಕಲಿ ನೋಟು ತಯಾರಿಕೆಯ ಕಪ್ಪು ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಈ ಅಡ್ಡೆಯ ಕುರಿತು ಉಪ್ಪಿನಂಗಡಿ ಪೊಲೀಸರಿಗೆ ಖಚಿತ ಬಾತ್ಮೀದಾರರಿಂದ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡವು ಜಂಟಿಯಾಗಿ ಅಡಿಂಜೆಯ ಅಡ್ಡೆಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿದೆ.

ದಾಳಿಯ ವೇಳೆ ಸ್ಥಳದಲ್ಲೇ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸಲು ಬಳಸುತ್ತಿದ್ದ ಹೈಟೆಕ್ ಪ್ರಿಂಟಿಂಗ್ ಮತ್ತು ಮುದ್ರಣ ಯಂತ್ರಗಳು, ಸ್ಕ್ಯಾನರ್‌ಗಳು, ನಕಲಿ ನೋಟು ತಯಾರಿಕೆಗೆ ಬಳಸುವ ವಿಶೇಷ ಕಾಗದಗಳು ಹಾಗೂ ಬಣ್ಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಜಾಲವು ಕೇವಲ ಸ್ಥಳೀಯವಾಗಿ ಮಾತ್ರವಲ್ಲದೆ ಅಂತರರಾಜ್ಯ ಮಟ್ಟದಲ್ಲಿ ಹರಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ದಾಳಿಯ ವೇಳೆ ಪೊಲೀಸರು ಸ್ಥಳದಲ್ಲಿದ್ದ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ನೆರೆಯ ಕೇರಳ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ. ಇವರು ತಾವೇ ಮುದ್ರಿಸುತ್ತಿದ್ದ ನಕಲಿ ನೋಟುಗಳನ್ನು ದಕ್ಷಿಣ ಕನ್ನಡ ಹಾಗೂ ಕೇರಳದ ಗಡಿ ಭಾಗದ ಸಣ್ಣ ಪುಟ್ಟ ವ್ಯಾಪಾರ ಕೇಂದ್ರಗಳು, ಪೆಟ್ರೋಲ್ ಬಂಕ್ ಹಾಗೂ ಸಂತೆಗಳಲ್ಲಿ ಚಲಾವಣೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿಗಳು ಅಥವಾ ಜಾಗತಿಕ ಜಾಲಗಳು ಭಾಗಿಯಾಗಿವೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರವಾಸಿಗರ ಜೀವದ ಜೊತೆ ಚೆಲ್ಲಾಟ: ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ತಲುಪಿರುವ ಅಬ್ಬಿ ಫಾಲ್ಸ್‌ನ ವೀಕ್ಷಣಾ ಗೋಪುರ – Kannada News | Negligence at Abbey Falls: Rusted View Tower Puts Tourist Lives at Risk

ಕೊಡಗು, ಜುಲೈ 16: ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿರುವ ಪ್ರಸಿದ್ಧ ಅಬ್ಬಿ ಫಾಲ್ಸ್‌ನ ವೀಕ್ಷಣಾ ಗೋಪುರವು ಸಂಪೂರ್ಣ ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ತಲುಪಿದೆ. ಕಬ್ಬಿಣದ ತಡೆಬೇಲಿಗಳು ಕುಸಿದಿದ್ದು, ಕೆಲವೆಡೆ ಹಗ್ಗದಿಂದ ಕಟ್ಟಿರುವುದು ಕಂಡುಬಂದಿವೆ. ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳಲು ತಡೆಬೇಲಿಗೆ ಒರಗುವಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಬ್ಬಿ ಫಾಲ್ಸ್‌ನಿಂದ ವರ್ಷಕ್ಕೆ 2 ಕೋಟಿಗೂ ಅಧಿಕ ಆದಾಯ ಬರುತ್ತದೆ. ಆದರೂ, ಬರುವ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಪಂಚಾಯತಿ ಅಥವಾ ಪ್ರವಾಸೋದ್ಯಮ ಇಲಾಖೆ ಗಮನ ಹರಿಸುತ್ತಿಲ್ಲ. ಜಲಪಾತದ ಬಳಿ ಭದ್ರತಾ ಸಿಬ್ಬಂದಿ ಇಲ್ಲ, ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಿಲ್ಲ. ಈ ನಿರ್ಲಕ್ಷ್ಯದ ಬಗ್ಗೆ ಪ್ರವಾಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: CET ಕೌನ್ಸೆಲಿಂಗ್ ಅಪ್ಡೇಟ್; ಮೊದಲ ಸುತ್ತಿನ ಫಲಿತಾಂಶ ಮತ್ತು ಪ್ರವೇಶ ಪ್ರಕ್ರಿಯೆ ಬಗ್ಗೆ KEA ಸ್ಪಷ್ಟನೆ! – Kannada News | KEA Executive Director H. Prasanna Provides Crucial CET Counselling Updates

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2026ರ CET ಕೌನ್ಸೆಲಿಂಗ್‌ನ ಮೊದಲ ಸುತ್ತಿನ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಗಳನ್ನು ಅಂತಿಮಗೊಳಿಸಲು ಜುಲೈ 24 ಸಂಜೆ 5:30ರವರೆಗೆ ಸಮಯ ನೀಡಲಾಗಿದೆ. KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಫಲಿತಾಂಶದ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ನಾಲ್ಕು ಆಯ್ಕೆಗಳ (Choice 1, Choice 2, Choice 3, Choice 4) ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳು ತಾವು ಪಡೆದ ಸೀಟಿನ ಕುರಿತು ಸಂಪೂರ್ಣ ತೃಪ್ತರಾಗಿದ್ದರೆ ‘Choice 1’ ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿ ಪ್ರವೇಶ ಪಡೆಯಬಹುದು. ಉತ್ತಮ ಸೀಟಿಗಾಗಿ ಮುಂದಿನ ಸುತ್ತುಗಳಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ‘Choice 2’ ಆಯ್ಕೆ ಮಾಡಬಹುದು. ಈ ಆಯ್ಕೆಯಲ್ಲಿ ಈಗ ಸಿಕ್ಕಿರುವ ಸೀಟನ್ನು ಉಳಿಸಿಕೊಂಡು ಉತ್ತಮ ಅವಕಾಶಗಳಿಗಾಗಿ ಕಾಯಬಹುದು. ಹಂಚಿಕೆಯಾದ ಸೀಟು ಇಷ್ಟವಿಲ್ಲದಿದ್ದಲ್ಲಿ ‘Choice 3’ ಆಯ್ಕೆ ಮಾಡಿ, ಆ ಸೀಟನ್ನು ತಿರಸ್ಕರಿಸಿ ಮುಂದಿನ ಸುತ್ತುಗಳಲ್ಲಿ ಭಾಗವಹಿಸಬಹುದು. ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರಬರಲು ‘Choice 4’ ಅನ್ನು ಆಯ್ಕೆ ಮಾಡಬಹುದು. ವಿದ್ಯಾರ್ಥಿಗಳು ಅಂತಿಮ ದಿನಾಂಕದೊಳಗೆ ತಮ್ಮ ಆಯ್ಕೆಗಳನ್ನು ಬದಲಾಯಿಸುವ ಅವಕಾಶವನ್ನು KEA ಕಲ್ಪಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Source link

ಮಗಳ ಸರ್ಕಾರಿ ನೌಕರಿಗಾಗಿ ಸಾಹುಕಾರ್ ಅಕ್ರಮ ಎಸಗಿರೋದು ಅಕ್ಷಮ್ಯ ಅಪರಾಧ; ಕೆಪಿಎಸ್‌ಸಿ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಲು ಯತ್ನಾಳ್ ಆಗ್ರಹ – Kannada News | Karnataka KPSC Fraud: Chairman Sahukar Faces Nepotism Charges, HC Denies Stay

ಬೆಂಗಳೂರು, ಜು.16: ಲಕ್ಷಾಂತರ ಯುವಕರ ಭವಿಷ್ಯವನ್ನು ನಿರ್ಧರಿಸುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರು ತಮ್ಮ ಮಗಳಿಗೆ ಸರ್ಕಾರಿ ಹುದ್ದೆ ಕೊಡಿಸಲು ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿ ಅಕ್ರಮ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಕಾರಣಕ್ಕೆ ಕೆಪಿಎಸ್​​​ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿರುವ ರಾಜ್ಯಪಾಲರ ಆದೇಶದ ವಿರುದ್ಧ ಇದೀಗ ಕಾನೂನು ಹೋರಾಟ ನಡೆಯುತ್ತಿದೆ. ಇದರ ಹೊತ್ತಿನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್​​​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರವಾಗಿ ರಾಜಕೀಯವಾಗಿ ಭಾರೀ ಚರ್ಚೆಯಾಗುತ್ತಿದೆ. ರಾಜ್ಯಪಾಲರ ಅಮಾನತು ಆದೇಶವನ್ನು ಪ್ರಶ್ನಿಸಿ ಶಿವಶಂಕರಪ್ಪ ಅವರು ಕರ್ನಾಟಕ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು, ಆದರೆ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯತ್ನಾಳ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​​​ ಹಂಚಿಕೊಂಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪೋಸ್ಟ್​​​ನಲ್ಲಿ ಏನಿದೆ?

ರಾಜ್ಯದ ಅತ್ಯುನ್ನತ ನೇಮಕಾತಿ ಸಂಸ್ಥೆಯ ಮುಖ್ಯಸ್ಥರೇ ತಮ್ಮ ಮಗಳಿಗೆ ಸರ್ಕಾರಿ ಹುದ್ದೆ ಕೊಡಿಸಲು ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಿಎಸ್‌ಸಿ ಅಧ್ಯಕ್ಷರ ಮಾಸಿಕ ವೇತನ, ಸೌಲಭ್ಯ ಹಾಗೂ ಭತ್ಯೆಗಳು ಸೇರಿ ತಿಂಗಳಿಗೆ ಸುಮಾರು 2.25 ಲಕ್ಷ ರೂ. ಸಂದಾಯವಾಗುತ್ತದೆ. ಅಂದರೆ ಅವರ ವಾರ್ಷಿಕ ವೇತನವೇ ಅಂದಾಜು 27 ಲಕ್ಷ ರೂ. ಆಗುತ್ತದೆ.

ಇಷ್ಟೊಂದು ಭಾರಿ ಪ್ರಮಾಣದ ಆದಾಯ ಪಡೆಯುತ್ತಿದ್ದರೂ, ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಮಗಳಿಗೆ ಹಿಂದುಳಿದ ವರ್ಗಗಳ ಮೀಸಲಾತಿ ಅಥವಾ ಸೌಲಭ್ಯ ಸಿಗಲಿ ಎಂಬ ಕಾರಣಕ್ಕಾಗಿ ವಾರ್ಷಿಕ ಆದಾಯ ಕೇವಲ 40,000 ರೂ. ಎಂದು ಘೋಷಿಸಿ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದು ಸ್ಪಷ್ಟವಾದ ‘ಸ್ವಜನಪಕ್ಷಪಾತ’ ಮತ್ತು ಕಾನೂನು ಬಾಹಿರ ಕೃತ್ಯ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ.

ಇಲ್ಲಿದೆ ನೋಡಿ ಎಕ್ಸ್​​​ ಪೋಸ್ಟ್​:

ಸರ್ಕಾರಿ ಉದ್ಯೋಗ ಪಡೆಯಲು ರಾಜ್ಯದ ಲಕ್ಷಾಂತರ ಬಡ ಆಕಾಂಕ್ಷಿಗಳು ಹಗಲು ರಾತ್ರಿ ಕಷ್ಟಪಟ್ಟು ಓದುತ್ತಾರೆ. ಆರ್ಥಿಕವಾಗಿ ಹಿಂದುಳಿದವರು ಹಗಲಿನಲ್ಲಿ ತಮಗೊಂದು ಕೆಲಸ ಮಾಡಿಕೊಂಡು, ರಾತ್ರಿಯಿಡೀ ನಿದ್ದೆಗೆಟ್ಟು ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾರೆ. ತಮ್ಮ ಮಕ್ಕಳಿಗೆ ಒಂದು ಗೌರವಾನ್ವಿತ ಸರ್ಕಾರಿ ಹುದ್ದೆ ಸಿಗಲಿ ಎಂದು ಹೆತ್ತ ಪೋಷಕರು ಹಂಬಲಿಸುತ್ತಿರುತ್ತಾರೆ. ಆದರೆ, ನೇಮಕಾತಿ ಮಾಡುವ ಆಯೋಗದ ಮುಖ್ಯಸ್ಥರೇ ಇಂತಹ ಅಕ್ರಮವೆಸಗಿದರೆ, ವರ್ಷಗಟ್ಟಲೆ ಓದಿದ ಪ್ರತಿಭಾವಂತ, ಬುದ್ಧಿವಂತ ಹಾಗೂ ಅರ್ಹ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗುತ್ತದೆ. ಪತ್ರಿಕೆ ಸೋರಿಕೆ, ಲೋಪ ಹಾಗೂ ಸ್ವಜನಪಕ್ಷಪಾತದಿಂದಾಗಿ ಯೋಗ್ಯ ಆಡಳಿತಗಾರರು ವ್ಯವಸ್ಥೆಗೆ ಬರದಂತಾಗುತ್ತದೆ.

ಇದನ್ನೂ ಓದಿ: ಬಾಂಗ್ಲಾ ಅಕ್ರಮ ವಲಸಿಗನಿಗೆ 5 ವರ್ಷ ಜೈಲುಶಿಕ್ಷೆ, ದಂಡ ವಿಧಿಸಿದ ಸಿಂಧನೂರು ನ್ಯಾಯಾಲಯ

ಪ್ರಕರಣ ಸಿಬಿಐಗೆ ವಹಿಸಿ: ಯತ್ನಾಳ್ ಆಗ್ರಹ

ಶಿವಶಂಕರಪ್ಪ ಅವರ ವಿರುದ್ಧದ ಪ್ರಕರಣವು ಅತ್ಯಂತ ಗಂಭೀರವಾಗಿದ್ದು, ಯಾವುದೇ ಬಾಹ್ಯ ಅಥವಾ ರಾಜಕೀಯ ಒತ್ತಡಗಳಿಗೆ ಮಣಿಯದೆ ಮುಕ್ತವಾಗಿ ತನಿಖೆ ನಡೆಯಬೇಕಿದೆ ಎಂದು ಯತ್ನಾಳ್ ಆಗ್ರಹ
ಮಾಡಿದ್ದಾರೆ. ರಾಜ್ಯದ ಲಕ್ಷಾಂತರ ನಿಷ್ಠಾವಂತ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಈ ಪ್ರಕರಣವನ್ನು ತಕ್ಷಣವೇ ಕೇಂದ್ರ ತನಿಖಾ ದಳಕ್ಕೆ (CBI) ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರವು ಇಂತಹ ಪರೀಕ್ಷಾ ಮತ್ತು ನೇಮಕಾತಿ ಅಕ್ರಮಗಳಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಬೇಕು. ಅಕ್ರಮವೆಸಗಿದವರನ್ನು ಜೈಲಿಗಟ್ಟುವ ಮೂಲಕ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ರೆಕಾರ್ಡ್​ ಉಡೀಸ್: ವಿಶ್ವ ದಾಖಲೆಯ ಚೇಸಿಂಗ್! – Kannada News | Washington Freedom Creates New World Record in T20 Cricket

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಚೇಸ್ ಮಾಡಿದ ತಂಡ ಯಾವುದು? ಈ ಪ್ರಶ್ನೆಗೆ ಹೊಸ ಉತ್ತರ ವಾಷಿಂಗ್ಟನ್ ಫ್ರೀಡಂ. ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಬರೋಬ್ಬರಿ 267 ರನ್​ಗಳನ್ನು ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ.

ಒಕ್ಲಾಂಡ್​ನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್​ ಹಾಗೂ ವಾಷಿಂಗ್ಟನ್ ಫ್ರೀಡಂ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ವಾಷಿಂಗ್ಟನ್ ತಂಡದ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದರು.

ಪೂರನ್ ಸಿಡಿಲಬ್ಬರ:

ಮೊದಲು ಬ್ಯಾಟ್ ಮಾಡಿದ ಎಂಐ ನ್ಯೂಯಾರ್ಕ್ ಪರ ನಾಯಕ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂರನ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನಟ್ಟಿದರು. ಪರಿಣಾಮ ಕೇವಲ 31 ಎಸೆತಗಳಲ್ಲಿ ಶತಕ ಮೂಡಿಬಂತು.

  • 31 ಎಸೆತಗಳಲ್ಲಿ ಶತಕ ಪೂರೈಸಿ ಮೇಜರ್​ ಲೀಗ್ ಕ್ರಿಕೆಟ್​ ಟೂರ್ನಿಯಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಪೂರನ್ ತಮ್ಮದಾಗಿಸಿಕೊಂಡರು.

ಈ ಪಂದ್ಯದಲ್ಲಿ 33 ಎಸೆತಗಳನ್ನು ಎದುರಿಸಿದ ನಿಕೋಲಸ್ ಪೂರನ್ 13 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 106 ರನ್​ ಚಚ್ಚಿದರು. ಈ ಸ್ಫೋಟಕ ಶತಕದ ನೆರವಿನೊಂದಿಗೆ ಎಂಐ ನ್ಯೂಯಾರ್ಕ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 266 ರನ್ ಕಲೆಹಾಕಿತು.

ವಿಶ್ವ ದಾಖಲೆಯ ಚೇಸಿಂಗ್:

267 ರನ್​ಗಳ ಗುರಿ ಪಡೆದ ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ನಾಯಕ ಸ್ಟೀವ್ ಸ್ಮಿತ್ ಭರ್ಜರಿ ಆರಂಭ ಒದಗಿಸಿದ್ದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಸ್ಮಿತ್ ಆ ಬಳಿಕ ಸಿಡಿಲಬ್ಬರ ಶುರು ಮಾಡಿದ್ದರು.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಂಡ್ರಿಸ್ ಗೌಸ್ ವಿಸ್ಫೋಟಕ ಇನಿಂಗ್ಸ್ ಆಡಿದರು. ಪರಿಣಾಮ 16 ಓವರ್​ಗಳ ಮುಕ್ತಾಯದ ವೇಳೆಗೆ ವಾಷಿಂಗ್ಟನ್ ಫ್ರೀಡಂ ತಂಡದ ಸ್ಕೋರ್ 250ರ ಗಡಿದಾಟಿತು.

  • ಆಂಡ್ರಿಸ್ ಗೌಸ್: ಕೇವಲ 51 ಎಸೆತಗಳನ್ನು ಎದುರಿಸಿದ ಗೌಸ್ 12 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 132 ರನ್ ಚಚ್ಚಿದರು.
  • ಸ್ಟೀವ್ ಸ್ಮಿತ್: ನಾಯಕನ ಆಟವಾಡಿದ ಸ್ಮಿತ್ ಕೇವಲ 48 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 110 ರನ್ ಬಾರಿಸಿದರು.

ಈ ಇಬ್ಬರು ದಾಂಡಿಗರ ಶರವೇಗದ ಶತಕಗಳ ನೆರವಿನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡವು 18.4 ಓವರ್​ಗಳಲ್ಲಿ 270 ರನ್ ಬಾರಿಸಿ 6 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

ಐಪಿಎಲ್ ದಾಖಲೆ ಧೂಳೀಪಟ:

ಈ ಭರ್ಜರಿ ಚೇಸಿಂಗ್​ನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡವು ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಐಪಿಎಲ್​ನಲ್ಲಿ ನಿರ್ಮಾಣವಾಗಿದ್ದ ವಿಶ್ವ ದಾಖಲೆಯ ಚೇಸಿಂಗ್ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಚೇಸ್ ಮಾಡಿದ ವಿಶ್ವ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ಹೆಸರಿನಲ್ಲಿತ್ತು. ಈ ದಾಖಲೆಯನ್ನು 18.4 ಓವರ್​ಗಳಲ್ಲಿ ವಾಷಿಂಗ್ಟನ್ ಫ್ರೀಡಂ ಪಡೆ ಉಡೀಸ್ ಮಾಡಿದ್ದಾರೆ.

  • ಪಂಜಾಬ್ ಕಿಂಗ್ಸ್: ಐಪಿಎಲ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 262 ರನ್ ಚೇಸ್ ಮಾಡುವ ಮೂಲಕ ಪಂಜಾಬ್ ಕಿಂಗ್ಸ್ ತಂಡ ವಿಶ್ವ ದಾಖಲೆ ನಿರ್ಮಿಸಿದ್ದರು.
  • ವಾಷಿಂಗ್ಟನ್ ಫ್ರೀಡಂ: ಎಂಐ ನ್ಯೂಯಾರ್ಕ್ ವಿರುದ್ಧ 267 ರನ್​ಗಳನ್ನು ಚೇಸ್ ವಾಷಿಂಗ್ಟನ್ ಫ್ರೀಡಂ ತಂಡವು ಇದೀಗ ಟಿ20 ಇತಿಹಾಸದಲ್ಲೇ ಅತ್ಯಧಿಕ ಮೊತ್ತವನ್ನು ಬೆನ್ನತ್ತಿ ಗೆದ್ದ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ: ಭಾರತದ ಸಾರ್ವಕಾಲಿಕ ಏಕದಿನ ಇಲೆವೆನ್ ಹೆಸರಿಸಿದ ರಾಬಿನ್ ಉತ್ತಪ್ಪ!

​ ಇನ್ನು ಈ ವಿಶ್ವ ದಾಖಲೆಯ ಗೆಲುವಿನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡವು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಚಾಲೆಂಜರ್ ಸುತ್ತಿಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಗೆದ್ದರೆ ಸ್ಟೀವ್ ಸ್ಮಿತ್ ಪಡೆ ಫೈನಲ್​ಗೇರಲಿದೆ.

Source link

ಆಷಾಢ ಮಾಸ ಅಶುಭವೆಂದಾದರೆ ಪುರಿ ಜಗನ್ನಾಥ ರಥಯಾತ್ರೆ ಇದೇ ತಿಂಗಳಲ್ಲಿ ನಡೆಯುವುದೇಕೆ? ಇಲ್ಲಿದೆ ಅಸಲಿ ರಹಸ್ಯ! – Kannada News | Ashada Masa and Rath Yatra: Why Puri Jagannath Yatra Happens in ‘Shunya Masa’?

ಪುರಿ ಜಗನ್ನಾಥ ರಥಯಾತ್ರೆImage Credit source: Getty Images

ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸ ವಿವಾಹ, ಗೃಹಪ್ರವೇಶ, ಹೊಸ ಮನೆ ನಿರ್ಮಾಣ, ಉಪನಯನದಂತಹ ಶುಭ ಕಾರ್ಯಗಳಿಗೆ ಸೂಕ್ತವಲ್ಲದಿರುವುದರಿಂದ ಈ ಮಾಸವನ್ನು’ಶೂನ್ಯ ಮಾಸ’ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಲವರ ಮನದಲ್ಲಿ ಒಂದು ಕುತೂಹಲದ ಪ್ರಶ್ನೆ ಮೂಡುವುದು ಸಹಜ—”ಆಷಾಢ ಮಾಸವೇ ಅಶುಭ ಎಂದಾದರೆ, ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಇದೇ ತಿಂಗಳಲ್ಲಿ ಏಕೆ ವೈಭವದಿಂದ ಜರುಗುತ್ತದೆ?” ಎಂಬುದು. ಈ ದೈವಿಕ ಸಂಭ್ರಮ ಕೇವಲ ಒಡಿಶಾದ ಪುರಿಗೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಬೆಂಗಳೂರಿನ ಅಗರದಲ್ಲಿರುವ (Agara) ಶ್ರೀ ಜಗನ್ನಾಥ ದೇವಾಲಯದಲ್ಲೂ ಸಹ ಪುರಿಯಂತೆಯೇ ಭಕ್ತಿ ಮತ್ತು ಸಡಗರದ ರಥಯಾತ್ರೆಯನ್ನು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಮೇಲ್ನೋಟಕ್ಕೆ ಶೂನ್ಯ ಮಾಸವಾಗಿ ಕಂಡರೂ, ಆಷಾಢದಲ್ಲಿ ನಡೆಯುವ ಈ ಜಗನ್ನಾಥ ರಥೋತ್ಸವದ ಹಿಂದೆ ಅತ್ಯಂತ ಆಳವಾದ ಧಾರ್ಮಿಕ, ಪೌರಾಣಿಕ, ಆಧ್ಯಾತ್ಮಿಕ ಹಾಗೂ ಪ್ರಕೃತಿಗೆ ಹತ್ತಿರವಾದ ವೈಜ್ಞಾನಿಕ ಹಿನ್ನೆಲೆ ಅಡಗಿದೆ.

ಆಷಾಢ ಮಾಸದಲ್ಲಿ ರಥಯಾತ್ರೆ ನಡೆಯುವುದೇಕೆ?

ಒಡಿಶಾದ ಪುರಿಯ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ನಡೆಯುವ ಜಗನ್ನಾಥ ರಥಯಾತ್ರೆಯನ್ನು ಪ್ರತಿವರ್ಷ ಆಷಾಢ ಶುಕ್ಲ ದ್ವಿತೀಯ ದಿನದಂದು ಅತ್ಯಂತ ಭಕ್ತಿ-ವೈಭವದಿಂದ ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು ಶ್ರೀ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯರು ತಮ್ಮ ಭವ್ಯ ರಥಗಳಲ್ಲಿ ರಾಜಬೀದಿಗೆ ಬಂದು ಗುಂಡಿಚಾ ದೇವಸ್ಥಾನಕ್ಕೆ ತೆರಳುತ್ತಾರೆ. ಈ ಆಚರಣೆಯು ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಸ್ಕಂದ ಪುರಾಣ ಸೇರಿದಂತೆ ಹಲವು ಪ್ರಮುಖ ಪುರಾಣಗಳಲ್ಲಿ ಇದರ ಉಲ್ಲೇಖವಿದೆ.

ಹಾಗಾದರೆ ಆಷಾಢ ಮಾಸವನ್ನು ಶುಭವಲ್ಲ ಎನ್ನುವುದೇಕೆ?

ಆಷಾಢ ಮಾಸ ಶುಭವಲ್ಲ ಅಥವಾ ಅಶುಭ ಎನ್ನುವುದು ಸಂಪೂರ್ಣ ಸತ್ಯವಲ್ಲ. ಇದು ಮುಖ್ಯವಾಗಿ ಲೌಕಿಕ ಅಥವಾ ಮಾನವರ ಭೌತಿಕ ಸುಖದ ಕಾರ್ಯಗಳಿಗೆ ಸಂಬಂಧಿಸಿದ ನಂಬಿಕೆಯಾಗಿದೆ. ಈ ತಿಂಗಳಲ್ಲಿ ಬರುವ ದೇವಶಯನಿ ಏಕಾದಶಿಯ ದಿನದಿಂದ ಶ್ರೀಮಹಾವಿಷ್ಣುವು ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ಯೋಗನಿದ್ರೆಗೆ ಪ್ರವೇಶಿಸುತ್ತಾನೆ ಎಂದು ನಂಬಲಾಗುತ್ತದೆ. ಸೃಷ್ಟಿಕರ್ತನೇ ನಿದ್ರೆಗೆ ಜಾರುವ ಈ ಅವಧಿಯಲ್ಲಿ ಲೌಕಿಕ ಸಂಭ್ರಮದ ಮದುವೆ, ಗೃಹಪ್ರವೇಶ, ಹೊಸ ವ್ಯಾಪಾರ ಆರಂಭದಂತಹ ಕಾರ್ಯಕ್ರಮಗಳನ್ನು ಕೆಲವು ಸಂಪ್ರದಾಯಗಳಲ್ಲಿ ತಪ್ಪಿಸಲಾಗುತ್ತದೆ.

ಮಾನವರಿಗೆ ಶೂನ್ಯ ಮಾಸ, ದೇವತೆಗಳಿಗೆ ಉತ್ಸವ ಕಾಲ:

ಶಾಸ್ತ್ರಗಳ ಪ್ರಕಾರ, ಆಷಾಢ ಮಾಸವು ಲೌಕಿಕ ಕಾರ್ಯಗಳಿಗೆ ಸೂಕ್ತವಲ್ಲದಿದ್ದರೂ, ಆಧ್ಯಾತ್ಮಿಕ ಸಾಧನೆ, ಜಪ, ತಪ ಮತ್ತು ದೇವತಾರಾಧನೆಗೆ ಅತ್ಯಂತ ಶ್ರೇಷ್ಠವಾದ ತಿಂಗಳಾಗಿದೆ. ಭಗವಾನ್ ವಿಷ್ಣುವು ಯೋಗನಿದ್ರೆಗೆ ಜಾರುವ ಮುನ್ನ ಭಕ್ತರಿಗೆ ದರ್ಶನ ನೀಡಿ ಅನುಗ್ರಹಿಸಲು ರಥದ ಮೇಲೆ ಬರುತ್ತಾನೆ ಎಂಬುದು ಭಕ್ತರ ದೃಢ ನಂಬಿಕೆ. ಆದ್ದರಿಂದಲೇ ಈ ತಿಂಗಳಲ್ಲಿ ದೇವರ ಆರಾಧನೆ, ತೀರ್ಥಯಾತ್ರೆ, ವ್ರತಾಚರಣೆ ಹಾಗೂ ದಾನ-ಧರ್ಮಗಳಿಗೆ ವಿಶೇಷ ಪುಣ್ಯ ಲಭಿಸುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ರಥಯಾತ್ರೆಯ ಹಿಂದಿರುವ ಪೌರಾಣಿಕ ಹಿನ್ನೆಲೆ:

ಪುರಾಣಗಳ ಪ್ರಕಾರ, ಆಷಾಢ ಮಾಸದ ಈ ಪವಿತ್ರ ದಿನದಂದೇ ಶ್ರೀಕೃಷ್ಣನು (ಜಗನ್ನಾಥ) ಮಥುರೆಗೆ ಪ್ರಯಾಣ ಬೆಳೆಸಿದನು ಎನ್ನಲಾಗುತ್ತದೆ. ಭಗವಂತನು ತನ್ನ ಸೋದರ ಬಲಭದ್ರ ಮತ್ತು ತಂಗಿ ಸುಭದ್ರೆಯೊಂದಿಗೆ ತನ್ನ ಸೋದರತ್ತೆಯ ಮನೆಯಾದ ‘ಗುಂಡಿಚಾ ದೇವಸ್ಥಾನ’ಕ್ಕೆ ವಾರ್ಷಿಕ ಭೇಟಿ ನೀಡುವ ಸಮಯವಿದು. ಈ ದೈವಿಕ ಮತ್ತು ಪವಿತ್ರ ಯಾನವು ತಲೆಮಾರುಗಳಿಂದ ಆಷಾಢ ಮಾಸದಲ್ಲೇ ಅತ್ಯಂತ ನಿಷ್ಠೆಯಿಂದ ನಡೆದುಕೊಂಡು ಬಂದಿದೆ.

ಪ್ರಕೃತಿ ಮತ್ತು ಕೃಷಿಯ ದೈವಿಕ ಸಂಕೇತ:

ಆಷಾಢ ಮಾಸವು ಮುಂಗಾರು ಮಳೆ ತೀವ್ರಗೊಳ್ಳುವ ಮತ್ತು ಪ್ರಕೃತಿ ಹೊಸ ಚೈತನ್ಯ ಪಡೆಯುವ ಸಮಯವಾಗಿದೆ. ಭಾರತೀಯ ಕೃಷಿ ಸಂಸ್ಕೃತಿಯಲ್ಲಿ ಇದು ಭೂಮಿಯನ್ನು ಹದಗೊಳಿಸಿ ಬಿತ್ತನೆ ಮಾಡುವ ಕಾಲ. ಜಗನ್ನಾಥನನ್ನು ಕೇವಲ ಮಂದಿರದ ದೇವರೆಂದಷ್ಟೇ ಅಲ್ಲದೆ, ಭೂಮಿಯ ಒಡೆಯ ಮತ್ತು ಕೃಷಿಯ ದೇವರೆಂದೂ ಆರಾಧಿಸಲಾಗುತ್ತದೆ. ರೈತರು ಉತ್ತಮ ಮಳೆ ಮತ್ತು ಸಮೃದ್ಧ ಇಳುವರಿಗಾಗಿ ಪ್ರಾರ್ಥಿಸುವ ಈ ಅವಧಿಯಲ್ಲಿ ಜಗನ್ನಾಥನ ರಥಯಾತ್ರೆ ನಡೆಯುವುದು ಪ್ರಕೃತಿಯ ಆರಾಧನೆಯೂ ಹೌದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:40 pm, Thu, 16 July 26

Source link

ದೇವರ ದರ್ಶನಕ್ಕೆಂದು ಕರೆದೊಯ್ದು, ಪರ್ಸ್ ಬೀಳಿಸಿ ಗಂಡನನ್ನು ಹಂತಕರಿಗೆ ಒಪ್ಪಿಸಿದ ಪತ್ನಿ, ಮಗುವಿನೆದುರೇ ಭೀಕರ ಹತ್ಯೆ – Kannada News | Chittoor Temple: Family Visit Takes Shocking Turn Near Temple, Investigation Reveals New Details

ಚಿತ್ತೂರು, ಜುಲೈ 16: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮಹಿಳೆ ದೇವಸ್ಥಾನಕ್ಕೆ ಕರೆದೊಯ್ದು, ಪರ್ಸ್ ಬೀಳಿಸುವ ನಾಟಕವಾಡಿ ಹಂತಕರ ಕೈಗೆ ಒಪ್ಪಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಮಂಡಲದಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ತಮಿಳುನಾಡಿನ ಸುಳಗಿರಿ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರಮೇಶ್ ಪತ್ನಿ ಹಾಸಿನಿ, ಆಕೆಯ ಪ್ರಿಯಕರ ಯುಗಂಧರ್ ಸೇರಿದಂತೆ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲ್ಯದ ಗೆಳೆಯನ ಜೊತೆ ಮದುವೆಯ ನಂತರವೂ ಸಂಬಂಧ

ಶಾಂತಿಪುರಂ ಮಂಡಲದ ಬೋಯಿನಪಲ್ಲಿ ನಿವಾಸಿಯಾದ ಹಾಸಿನಿಗೆ ಎರಡು ವರ್ಷಗಳ ಹಿಂದೆ ತಮಿಳುನಾಡಿನ ರಮೇಶ್ ಜೊತೆ ವಿವಾಹವಾಗಿತ್ತು. ರಮೇಶ್ ಹೊಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ದಂಪತಿಗೆ ಒಂದು ವರ್ಷದ ಹೆಣ್ಣು ಮಗಳಿದ್ದಾಳೆ. ರಮೇಶ್ ತನ್ನ ಹೆಂಡತಿ ಮತ್ತು ಮಗುವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.

ಆದರೆ, ಹಾಸಿನಿ ಮದುವೆಯ ನಂತರವೂ ತನ್ನ ಬಾಲ್ಯದ ಗೆಳೆಯ ಯುಗಂಧರ್ ಎಂಬ ಯುವಕನೊಂದಿಗೆ ಸಂಬಂಧವನ್ನು ಮುಂದುವರೆಸಿದ್ದಳು. ಇತ್ತೀಚೆಗೆ ತನ್ನ ತಾಯಿಯ ಮನೆಗೆ ಬಂದಿದ್ದ ಹಾಸಿನಿ, ಗಂಡನ ಅಡಚಣೆಯನ್ನು ಶಾಶ್ವತವಾಗಿ ನಿವಾರಿಸಲು ಪ್ರಿಯಕರನೊಂದಿಗೆ ಸೇರಿ ಮಾಸ್ಟರ್ ಪ್ಲಾನ್ ರೂಪಿಸಿದ್ದಳು.

ಯೋಜನೆಯ ಪ್ರಕಾರ, ಹಾಸಿನಿ ತನ್ನ ಪತಿ ರಮೇಶ್‌ನನ್ನು ಮಲ್ಲಪ್ಪ ಬೆಟ್ಟದ ಮೇಲಿರುವ ‘ಮಲ್ಲೇಶ್ವರ ಸ್ವಾಮಿ’ ದರ್ಶನಕ್ಕೆ ಹೋಗೋಣ ಎಂದು ಬೈಕ್‌ನಲ್ಲಿ ಕರೆದೊಯ್ದಿದ್ದಾಳೆ. ಇವರೊಂದಿಗೆ ಒಂದು ವರ್ಷದ ಮಗುವೂ ಇತ್ತು.

ಮತ್ತಷ್ಟು ಓದಿ: ಪ್ರೇಮಿ ಜತೆ ಸೇರಿ ಗಂಡನ ಕೊಲೆಗೆ ಸುಪಾರಿ ಕೊಟ್ಟ ಪತ್ನಿ, ಚಲಿಸುವ ರೈಲಿನಲ್ಲೇ ಗುಂಡು ಹಾರಿಸಿ ಹತ್ಯೆ

ಲೈವ್ ಲೊಕೇಶನ್ ಅಪ್ಡೇಟ್: ಬೈಕ್‌ನಲ್ಲಿ ಹೋಗುವಾಗ ಹಾಸಿನಿ ಕಾಲಕಾಲಕ್ಕೆ ತನ್ನ ಪ್ರಿಯಕರ ಯುಗಂಧರ್‌ನಿಗೆ ಫೋನ್ ಮೂಲಕ ತಾವಿರುವ ಜಾಗದ ಮಾಹಿತಿ ನೀಡುತ್ತಿದ್ದಳು.

ನಾಲ್ವರ ಗ್ಯಾಂಗ್ ದಾಳಿ: ಮಲ್ಲಪ್ಪ ಬೆಟ್ಟವನ್ನು ಹತ್ತುವಾಗ ಮೂರನೇ ತಿರುವಿನಲ್ಲಿ ಹಾಸಿನಿ ತನ್ನ ಕೈಯಲ್ಲಿದ್ದ ಪರ್ಸ್ ಅನ್ನು ಉದ್ದೇಶಪೂರ್ವಕವಾಗಿ ಕೆಳಗೆ ಬೀಳಿಸಿದ್ದಾಳೆ. ಪರ್ಸ್ ಬಿದ್ದಿದ್ದನ್ನು ನೋಡಿ ರಮೇಶ್ ಬೈಕ್ ನಿಲ್ಲಿಸಿ ಅದನ್ನು ಎತ್ತಿಕೊಳ್ಳಲು ಹೋಗಿದ್ದಾನೆ. ಇದೇ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಯುಗಂಧರ್ ಮತ್ತು ಆತನ ನಾಲ್ವರು ಸಪ್ಲೈಯರ್ಸ್ ರಮೇಶ್‌ನನ್ನು ಬಲವಂತವಾಗಿ ಹಿಡಿದು ಪಕ್ಕದ ದಟ್ಟ ಅರಣ್ಯ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ.

ಮಗುವಿನೆದುರೇ ಕೊಲೆ: ಒಂದು ವರ್ಷದ ಮಗುವಿನ ಮುಂದೆಯೇ ಆ ಕ್ರೂರಿಗಳು ರಮೇಶ್‌ನನ್ನು ಭೀಕರವಾಗಿ ಹತ್ಯೆ ಮಾಡಿ ಶವವನ್ನು ಕಾಡಿನಲ್ಲೇ ಎಸೆದಿದ್ದಾರೆ. ತದನಂತರ, ಹಾಸಿನಿ ತನ್ನ ಮಗುವಿನೊಂದಿಗೆ ಗಂಡನ ಬೈಕ್‌ನಲ್ಲೇ ಪ್ರಿಯಕರ ಯುಗಂಧರ್ ಜೊತೆ ಕುಳಿತು ರೈಲ್ವೆ ನಿಲ್ದಾಣ ತಲುಪಿ ಅಲ್ಲಿಂದ ಪರಾರಿಯಾಗಿದ್ದಾಳೆ.

ಸಿಸಿಟಿವಿ ಮೂಲಕ ಸಿಕ್ಕಿಬಿದ್ದ ಕಿರಾತಕರು

ಮಲ್ಲೇಶ್ವರ ಸ್ವಾಮಿ ದರ್ಶನಕ್ಕೆ ಹೋದ ರಮೇಶ್ ಕುಟುಂಬ ಮರಳಿ ಬಾರದಿದ್ದಾಗ, ಹಾಸಿನಿಯ ತಾಯಿ ತನ್ನ ಮಗಳು ಮತ್ತೆ ಮೊಮ್ಮಗಳು ಕಾಣೆಯಾಗಿದ್ದಾರೆ ಎಂದು ರಲ್ಲಾ ಬೂದುಗುರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಬೆಟ್ಟದ ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಬಯಲಾಗಿದೆ.

ಮೊದಲಿಗೆ ಹಾಸಿನಿ ತನ್ನ ಗಂಡನೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವುದು, ನಂತರ ಆಕೆ ತನ್ನ ಗಂಡನನ್ನು ಬಿಟ್ಟು ಬೇರೆ ಇಬ್ಬರು ಯುವಕರೊಂದಿಗೆ ಅದೇ ಬೈಕ್‌ನಲ್ಲಿ ಮಗುವನ್ನು ಹಿಡಿದು ವಾಪಸ್ ಬರುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿವೆ. ತಕ್ಷಣವೇ ತಾಂತ್ರಿಕ ಪುರಾವೆಗಳ ಮೂಲಕ ತನಿಖೆ ನಡೆಸಿದ ಪೊಲೀಸರು ಕಾಡಿನಲ್ಲಿದ್ದ ರಮೇಶ್ ಶವವನ್ನು ವಶಪಡಿಸಿಕೊಂಡು, ಪಲಾಯನ ಮಾಡಿದ್ದ ಹಂತಕರನ್ನು ಬಂಧಿಸಿದ್ದಾರೆ.

ಡಿಜಿಟಲ್ ಕಣ್ಗಾವಲು, ಇಂತಹ ಅಪರಾಧಗಳನ್ನು ಮಾಡುವವರು ತಾವು ಅತ್ಯಂತ ಚಾಣಾಕ್ಷರು ಎಂದು ಭಾವಿಸುತ್ತಾರೆ. ಆದರೆ, ಇಂದಿನ ತಾಂತ್ರಿಕ ಜಗತ್ತಿನಲ್ಲಿ ಪೊಲೀಸರು ಬಳಸುವ ಮೊಬೈಲ್ ಟವರ್ ಲೊಕೇಶನ್ ಮತ್ತು ಹೆದ್ದಾರಿಗಳ ಸಿಸಿಟಿವಿ ಕ್ಯಾಮೆರಾಗಳು ಅಪರಾಧಿಗಳನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚುತ್ತವೆ. ಈ ಕೇಸ್‌ನಲ್ಲೂ ಹಾಸಿನಿ ಪ್ರಿಯಕರನಿಗೆ ನೀಡಿದ ನಿರಂತರ ಕಾಲ್ ಹಿಸ್ಟರಿಯೇ ಆಕೆಗೆ ಮುಳುವಾಗಿದೆ.

ಕುಪ್ಪಂ ಡಿಎಸ್ಪಿ ಪಾರ್ಥಸಾರಥಿ ಅವರ ಮೇಲ್ವಿಚಾರಣೆಯಲ್ಲಿ ರಲ್ಲಾ ಬೂದುಗುರು ಪೊಲೀಸರು ಆರೋಪಿಗಳ ವಿರುದ್ಧ ಕೊಲೆ (IPC 302) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ತನಗಾಗಿ ಜೀವ ಸವೆಯುತ್ತಿದ್ದ ಗಂಡನನ್ನು ಒಂದು ವರ್ಷದ ಮಗುವಿನ ಮುಂದೆಯೇ ಹತ್ಯೆ ಮಾಡಿಸಿದ ಈ ತಾಯಿಯ ಕ್ರೌರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version