ಹೊಳೆ ಹರಿವ ದಿಕ್ಕನ್ನೇ ಬದಲಾಯಿಸಿದ ಹೂಳು: ಪಿನಾಕಿನಿ ತೀರದ ನಿವಾಸಿಗಳಿಗೆ ತಪ್ಪದ ಗೋಳು! – Kannada News
ಉಡುಪಿ, ಜೂನ್ 04 : ಜಿಲ್ಲೆಯ ಕೋಟೆ ಮತ್ತು ಮಟ್ಟು ಭಾಗದ ಜನರಿಗೆ ಜೀವನಾಡಿಯಾಗಿದ್ದ ಪಿನಾಕಿನಿ ಹೊಳೆಯೇ ಈಗ ಇಲ್ಲಿನ ನಿವಾಸಿಗಳಿಗೆ ಜೀವಭಯ ಹುಟ್ಟಿಸಿದೆ. ಹೊಳೆಯ ಮಧ್ಯದಲ್ಲಿ ಹೂಳು ತುಂಬಿ ಹರಿವಿನ ದಿಕ್ಕೇ ಬದಲಾಗಿರುವ ಪರಿಣಾಮ ತೀರ ಪ್ರದೇಶಗಳಲ್ಲಿ ಭೂ ಕೊರೆತ ಉಂಟಾಗುತ್ತಿದ್ದು ಕೃಷಿ ಜಮೀನು ಹೊಳೆ ಪಾಲಾಗುತ್ತಿವೆ. ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈಗಲೇ ಹೀಗಾದರೆ ಮಳೆಗಾಲ ಎದುರಿಸೋದು ಹೇಗೆಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಹೆಚ್ಚಿದ ಭೂ ಕೊರೆತ ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಕೋಟೆ…