ಒಟಿಟಿಗಳ ಮೇಲೆ ಆಸೆ ಬಿಟ್ಟು ಬಿಡಿ: ಅಲ್ಲು ಅರ್ಜುನ್ ತಂದೆ ಸಲಹೆ – Kannada News

ಕೋವಿಡ್ (Covid) ಬಳಿಕ ಚಿತ್ರರಂಗದಲ್ಲಿ ಭಾರಿ ದೊಡ್ಡ ಬದಲಾವಣೆಗಳನ್ನು ಈ ಒಟಿಟಿಗಳು (OTT) ತಂದಿವೆ. ಸಿನಿಮಾ ನಿರ್ಮಾಪಕರಿಗೆ ಭಾರಿ ದೊಡ್ಡ ನಿರಾಳತೆಯನ್ನು ಒಟಿಟಿಗಳು ನೀಡಿದ್ದು, ಕೇವಲ ಬಾಕ್ಸ್ ಆಫೀಸ್, ಆಡಿಯೋ ರೈಟ್ಸ್ ಮತ್ತು ಟಿವಿ ರೈಟ್ಸ್ ಮೇಲೆ ನಿರ್ಭರವಾಗಿದ್ದ ನಿರ್ಮಾಪಕರಿಗೆ ಮತ್ತೊಂದು ದೊಡ್ಡ ಆದಾಯದ ದಾರಿಯನ್ನು ಈ ಒಟಿಟಿಗಳು ತೆರೆದು ಕೊಟ್ಟಿವೆ. ಈಗಂತೂ ಹಲವು ಸಿನಿಮಾಗಳು ಒಟಿಟಿ ಆದಾಯವೊಂದನ್ನೇ ನಂಬಿಕೊಂಡು ನಿರ್ಮಾಣ ಆಗುತ್ತಿವೆ. ಆದರೆ ಇದೀಗ ತೆಲುಗು ಚಿತ್ರರಂಗದ ಬಲು ಹಿರಿಯ ಮತ್ತು ಯಶಸ್ವಿ ನಿರ್ಮಾಪಕರಾಗಿರುವ ಅಲ್ಲು ಅರವಿಂದ್ ಅವರು, ಒಟಿಟಿಗಳ ಮೇಲಿನ ನಂಬಿಕೆಯನ್ನು ಬಿಟ್ಟುಬಿಡಿ ಎಂದು ಕರೆ ನೀಡಿದ್ದಾರೆ.

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ದಶಕಗಳಿಂದಲೂ ಚಿತ್ರರಂಗದಲ್ಲಿರುವವರು. ತೆಲುಗು ಚಿತ್ರರಂಗದ ವೃತ್ತಿಪರ ಸಿನಿಮಾ ನಿರ್ಮಾಪಕ ಎಂದು ಹೆಸರಾಗಿರುವವರು. ತೆಲುಗು ಮಾತ್ರವಲ್ಲದೆ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅಲ್ಲು ಅರವಿಂದ್ ನೀಡಿದ್ದಾರೆ. ಲೆಕ್ಕಾಚಾರದಲ್ಲಿ ಮಾಸ್ಟರ್ ಎನಿಸಿಕೊಂಡಿರುವ ಅಲ್ಲು ಅರವಿಂದ್ ಇದೀಗ ಒಟಿಟಿಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡಿರುವುದು ಗಮನ ಸೆಳೆದಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಲ್ಲು ಅರವಿಂದ್, ‘ಒಟಿಟಿಗಳಿಂದ ಸಿನಿಮಾ ನಿರ್ಮಾಣ ವೆಚ್ಚದ ಅರ್ಧ ಹಣ ಬಂದುಬಿಡುತ್ತದೆ ಎಂಬ ಆಸೆ ಇಟ್ಟುಕೊಳ್ಳುವುದು ಬೇಡ. ಈಗ ಕಾಲ ಬದಲಾಗಿದೆ. ಒಟಿಟಿಗಳ ಕಾಲ ಮುಗಿದಿದೆ. ಒಟಿಟಿಗಳು ಈಗ ಬಹಳ ಚ್ಯೂಸಿ ಆಗಿಬಿಟ್ಟಿವೆ. ನಿರ್ಮಾಪಕರು ಕೇಳಿದಷ್ಟು ಹಣ ಕೊಡಲು ಅವರು ತಯಾರಿಲ್ಲ. ಅವರು ಅಳೆದು ತೂಗಿ ಸಿನಿಮಾಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಹಾಗಾಗಿ ಒಟಿಟಿಗಳ ಮೇಲೆ ಆಸೆಯನ್ನು ಬಿಟ್ಟುಬಿಡುವುದು ಒಳ್ಳೆಯದು’ ಎಂದಿದ್ದಾರೆ ಅಲ್ಲು ಅರವಿಂದ್.

ಇದನ್ನೂ ಓದಿ:ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ತಪ್ಪದೇ ನೋಡಿ

‘ಯಾರೋ ಕೆಲವು ನಿರ್ದೇಶಕರು ಮತ್ತು ಕೆಲವು ನಟರ ಸಿನಿಮಾಗಳನ್ನಷ್ಟೆ ಒಟಿಟಿಗಳು ಹಿಂದೆ-ಮುಂದೆ ನೋಡದೆ ಖರೀದಿ ಮಾಡುತ್ತಿದೆ. ಆದರೆ ಮುಂಚಿನಂತೆ ಎಲ್ಲ ಸಿನಿಮಾಗಳಿಗೂ ಉತ್ತಮ ಮೌಲ್ಯವನ್ನು ಅವು ನೀಡುತ್ತಿಲ್ಲ. ಈಗ ಒಟಿಟಿಗಳು ಸಾಕಷ್ಟು ಬದಲಾಗಿವೆ. ನಾನು ಸಹ ಈಗ ನನ್ನ ನಿರ್ಮಾಣ ಸಂಸ್ಥೆಯ ಕ್ರಿಯೇಟಿವ್ ಹೆಡ್ ಹಾಗೂ ಇತರೆ ಎಕ್ಸಿಕ್ಯೂಟಿವ್​​ಗಳಿಗೆ ಈ ಬಗ್ಗೆ ಎಚ್ಚರಿಸಿಬಿಟ್ಟಿದ್ದೇನೆ. ಚಿತ್ರಮಂದಿರದಲ್ಲಿ ಹಿಟ್ ಆಗುವ ನಿರ್ದೇಶಕ-ನಟರ ಕಾಂಬಿನೇಷನ್​​ನ ಸಿನಿಮಾಗಳ ಮೇಲೆ ಮಾತ್ರವೇ ಬಂಡವಾಳ ಹೂಡುವಂತೆ ಹೇಳಿದ್ದೇನೆ’ ಎಂದಿದ್ದಾರೆ ಅಲ್ಲು ಅರವಿಂದ್.

‘ಚಿತ್ರಮಂದಿರಗಳಲ್ಲಿ ವರ್ಕೌಟ್ ಆಗದ ಸಿನಿಮಾಗಳು ಇನ್ಯಾವುದೇ ಫ್ಲ್ಯಾಟ್​​ಫಾರ್ಮ್​​ನಲ್ಲಿ ಸಹ ವರ್ಕೌಟ್ ಆಗುವುದಿಲ್ಲ. ಅದು ಖಾತ್ರಿ. ಚಿತ್ರಮಂದಿರದಲ್ಲಿ ಹಿಟ್ ಆದರೆ ಬೇರೆಲ್ಲ ಫ್ಲ್ಯಾಟ್​​ಫಾರ್ಮ್​​ನಲ್ಲೂ ಸಿನಿಮಾ ವರ್ಕೌಟ್ ಆಗುತ್ತದೆ. ಒಟಿಟಿ, ಟಿವಿ ಏನೇ ಇದ್ದರು, ಮೊದಲು ಚಿತ್ರಮಂದಿರದಲ್ಲಿ ಸಿನಿಮಾ ಹಿಟ್ ಆಗುವುದು ಕಡ್ಡಾಯ’ ಎಂದಿದ್ದಾರೆ ಅವರು.

ಅಂದಹಾಗೆ ಅಲ್ಲು ಅರವಿಂದ್ ಅವರು ಖುದ್ದು ಒಂದು ಒಟಿಟಿಯ ಮಾಲೀಕರಾಗಿದ್ದಾರೆ. ಅವರು ತೆಲುಗಿನ ‘ಆಹಾ’ ಒಟಿಟಿಯ ಮಾಲೀಕರಾಗಿದ್ದು, ಆಹಾ ಒಟಿಟಿಯಲ್ಲಿ ಕೆಲವು ಒಳ್ಳೆಯ ತೆಲುಗು ಶೋಗಳನ್ನು ನಡೆಸುತ್ತಾರೆ. ಆ ಒಟಿಟಿ ಕೇವಲ ತೆಲುಗು ಕಂಟೆಂಟ್ ಅನ್ನು ಮಾತ್ರವೇ ಪ್ರಮೋಟ್ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ರೀತಿ ವಾಶ್‌ ಮಾಡಿದ್ರೆ ಜೀನ್ಸ್‌ ಬಣ್ಣ ಮಾಸೋದೇ ಇಲ್ಲ – Kannada News

ಡೆನಿಮ್‌ ಜೀನ್ಸ್‌ (jeans) ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಇದು ಕಂಫರ್ಟ್‌ ಮಾತ್ರವಲ್ಲದೆ ಸ್ಟೈಲಿಶ್‌ ಲುಕ್‌ ಅನ್ನು ಸಹ ನೀಡುತ್ತದೆ. ಹಾಗಾಗಿ ಹೆಚ್ಚಿನವರು ಜೀನ್ಸ್‌ ಧರಿಸಲು ಇಷ್ಟಪಡುತ್ತಾರೆ. ಆದರೆ ಡೆನಿಮ್‌ ಜೀನ್ಸ್‌ಗಳ ಬಣ್ಣ ಬಹುಬೇಗನೆ ಮಾಸಿ ಹೋಗಿ ಹಳೆಯದರಂತೆ ಕಾಣಿಸುತ್ತದೆ. ಈ ರೀತಿ ಡೆನಿಮ್‌ ಬಣ್ಣ ಮಸುಕಾಗಲು ಅವುಗಳ ಗುಣಮಟ್ಟ ಮಾತ್ರವಲ್ಲ, ಅವುಗಳನ್ನು ತೊಳೆಯುವ ವಿಧಾನವೂ ಕಾರಣವಾಗುತ್ತದೆ. ಜೀನ್ಸ್‌ ಮಸುಕಾಗದೆ ದೀರ್ಘಕಾಲ ಹೊಸದರಂತೆ ಕಾಣಲು ಸರಿಯಾದ ಆರೈಕೆ ಅತ್ಯಗತ್ಯ. ಸಣ್ಣ ತಪ್ಪು ಸಹ ಅವುಗಳ ಗುಣಮಟ್ಟವನ್ನು ಹಾಳುಮಾಡಬಹುದು. ಹಾಗಾಗಿ ಯಾವಾಗಲೂ ನಿಮ್ಮ ಜೀನ್ಸ್‌ಗಳನ್ನು ಈ ವಿಧಾನಗಳ ಮೂಲಕವೇ ತೊಳೆಯಲು ಪ್ರಯತ್ನಿಸಿ. ಇದರಿಂದ ಎಷ್ಟೇ ಬಾರಿ ಒಗೆದರೂ ಜೀನ್ಸ್‌ ಬಣ್ಣ ಮಸುಕಾಗುವುದಿಲ್ಲ.

ಜೀನ್ಸ್‌ ವಾಶ್‌ ಮಾಡುವ ಸರಿಯಾದ ವಿಧಾನ ಯಾವುದು?

ಯಾವಾಗಲೂ ಒಳಭಾಗದಿಂದ ತೊಳೆಯಿರಿ: ಡೆನಿಮ್‌ಗಳನ್ನು ಯಾವಾಗಲೂ ಒಳ ಭಾಗದಿಂದ ವಾಶ್‌ ಮಾಡಬೇಕು. ಇದು ಜೀನ್ಸ್‌ನ ಹೊರಭಾಗದ ಬಣ್ಣ ಮಸುಕಾಗದಂತೆ ಮತ್ತು ಸವೆಯದಂತೆ ತಡೆಯುತ್ತದೆ. ಹಾಗಾಗಿ ಯಾವಾಗಲೂ ಜೀನ್ಸ್‌ನ ಒಳ ಭಾಗವನ್ನು ಹೊರಗೆ ತೆಗೆದೇ ಒಗೆಯಿರಿ.

ತಣ್ಣೀರು ಬಳಸಿ: ಕೆಲವರು ಬಿಸಿ ನೀರಿನಿಂದ ಬಟ್ಟೆಗಳನ್ನು ಒಗೆಯುತ್ತಾರೆ. ಆದರೆ ಈ ವಿಧಾನ ಡೆನಿಮ್‌ಗಳಿಗೆ ಸೂಕ್ತವಲ್ಲ. ಜೀನ್ಸ್ ತೊಳೆಯುವಾಗ ಬಿಸಿನೀರನ್ನು ಎಂದಿಗೂ ಬಳಸಬಾರದು. ನೀವು ಯಾವಾಗಲೂ ತಣ್ಣನೆಯ ನೀರಿನಿಂದ ಅವುಗಳನ್ನು ಒಗೆಯಬಹುದು. ಬಿಸಿನೀರಿನಿಂದ ಜೀನ್ಸ್‌ ಒಗೆದರೆ ಅದರ ಬಣ್ಣ ಬಹುಬೇಗನೆ ಮಾಸುತ್ತದೆ.

ಹೆಚ್ಚು ಉಜ್ಜುವುದನ್ನು ತಪ್ಪಿಸಿ: ಜೀನ್ಸ್‌ ಅನ್ನು ಹೆಚ್ಚು ಉಜ್ಜಬಾರದು ಅಥವಾ ಹಿಂಡಬಾರದು, ಈ ರೀತಿ ಮಾಡುವುದರಿಂದ ಜೀನ್ಸ್‌ ಹಳೆಯದರಂತೆ ಕಾಣಿಸಲು ಪ್ರಾರಂಭಿಸುತ್ತದೆ. ಅಲ್ಲದೆ ಇದರ ಬಣ್ಣವು ಬಹು ಬೇಗನೆ ಮಾಸಲು ಕಾರಣವಾಗುತ್ತದೆ. ಹಾಗಾಗಿ ಡೆನಿಮ್‌ಗಳನ್ನು ಸೌಮ್ಯವಾಗಿ ವಾಶ್‌ ಮಾಡಬೇಕಾಗುತ್ತದೆ.

ಸೌಮ್ಯವಾದ ಡಿಟೆರ್ಜಂಟ್‌ ಬಳಸಿ: ಜೀನ್ಸ್‌ ಒಗೆಯಲು ಸರಿಯಾದ ಡಿಟೆರ್ಜಂಟ್‌ ಬಳಸುವುದು ಅತ್ಯಗತ್ಯ. ಹಾಗಾಗಿ ಕಠಿಣ ರಾಸಾಯನಿಕಗಳನ್ನು ಹೊಂದಿರುವ ಡಿಟರ್ಜೆಂಟ್‌ಗಳಿಂದ ಜೀನ್ಸ್‌ ಒಗೆಯಬೇಡಿ, ಏಕೆಂದರೆ ಇವು ಬಟ್ಟೆಗೆ ಹಾನಿ ಉಂಟು ಮಾಡುತ್ತವೆ. ಇದಲ್ಲದೆ ಕಲೆಗಳಿರುವ ಜಾಗಕ್ಕೆ  ಮಾತ್ರ ಡಿಟರ್ಜೆಂಟ್ ಹಚ್ಚಿ. ಇಡೀ ಜೀನ್ಸ್‌ ಅನ್ನು ಡಿಟೆರ್ಜಂಟ್‌ನಿಂದ  ತೊಳೆಯುವುದನ್ನು ತಪ್ಪಿಸಿ.

ಇದನ್ನೂ ಓದಿ: ಕಿಚನ್‌ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ತೊಡೆದು ಹಾಕಲು ಸರಳ ಸಲಹೆಯನ್ನು ಅನುಸರಿಸಿ

ಒಣಗಿಸುವ ವಿಧಾನವೂ ಮುಖ್ಯ: ಜೀನ್ಸ್‌ಗಳನ್ನು ಸರಿಯಾಗಿ ಒಣಗಿಸುವುದು ಸಹ ಅಷ್ಟೇ ಮುಖ್ಯ. ಯಾವತ್ತೂ ಜೀನ್ಸ್‌ ಅನ್ನು ಸೂರ್ಯನ ನೇರ ಬೆಳಕಿನಡಿ ಒಣಗಿಸಬಾರದು. ಯಾವಾಗಲೂ ನೆರಳಿರುವ ಜಾಗದಲ್ಲಿ ಡೆನಿಮ್‌ಗಳನ್ನು ಒಣಗಿಸಿ. ಇದರಿಂದ ಡೆನಿಮ್‌ ಬಣ್ಣ ಮಾಸುವುದನ್ನು ತಡೆಯಬಹುದು.

ಪ್ರತಿ ಬಳಕೆಯ ನಂತರ ಜೀನ್ಸ್‌ ಒಗೆಯಬೇಕೆ?

ಫ್ಯಾಷನ್ ತಜ್ಞರ ಪ್ರಕಾರ, ಪ್ರತಿ ಬಳಕೆಯ ನಂತರ ಜೀನ್ಸ್ ಅನ್ನು ತೊಳೆಯುವುದು ಅನಿವಾರ್ಯವಲ್ಲ. ಪದೇ ಪದೇ ತೊಳೆಯುವುದರಿಂದ ಡೆನಿಮ್ ಬೇಗನೆ ಹಾಳಾಗಬಹುದು. ಜೀನ್ಸ್ ಅನ್ನು 4 ರಿಂದ 5 ಬಾರಿ ಧರಿಸಿದ ನಂತರ ತೊಳೆಯುವುದು ಉತ್ತಮ. ಅಲ್ಲದೆ, ಜೀನ್ಸ್ ಅನ್ನು ಧರಿಸಿದ ನಂತರ ಸ್ವಲ್ಪ ಸಮಯದವರೆಗೆ ಚೆನ್ನಾಗಿ ಗಾಳಿ ಬರುವ ಸ್ಥಳದಲ್ಲಿ ಇಡುವುದರಿಂದ ಅದರ ವಾಸನೆ ಹೋಗುತ್ತದೆ ಮತ್ತು ಪದೇ ಪದೇ ಒಗೆಯುವ ಅಗತ್ಯವೂ ಇರುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳ ಎತ್ತರ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ ಕಾಡುತ್ತಿದೆಯೇ? ಈ ಪೋಷಕಾಂಶಗಳ ಕೊರತೆ ಕಾರಣವಾಗಿರಬಹುದು – Kannada News

ಇತ್ತೀಚಿನ ದಿನಗಳಲ್ಲಿ ಹಲವಾರು ಪೋಷಕರು ಮಕ್ಕಳ ಎತ್ತರ (Childs Height) ಸರಿಯಾಗಿ ಹೆಚ್ಚಳವಾಗದಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ನಿಮ್ಮ ಮನೆಯಲ್ಲಿ ಮಕ್ಕಳಿದ್ದೂ ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿರಬಹುದು. ಸಾಮಾನ್ಯವಾಗಿ ಮಕ್ಕಳ ದೈಹಿಕ ಬೆಳವಣಿಗೆಗೆ ಕೇವಲ ಜನ್ಯಗುಣಗಳೇ ಅಲ್ಲ, ಸರಿಯಾದ ಪೋಷಣೆಯೂ ಬಹಳ ಮುಖ್ಯವಾಗುತ್ತದೆ ಎಂಬುದನ್ನು ಮರೆಯಬಾರದು. ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯಿಂದ ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳು ಯಾಕೆ ಮುಖ್ಯವಾಗುತ್ತದೆ, ಎತ್ತರ ಹೆಚ್ಚಳಕ್ಕೆ ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳು ಯಾಕೆ ಮುಖ್ಯ?

ಬಾಲ್ಯ ಮತ್ತು ಕೌಮಾರ್ಯ (Adolescence) ಮಾನವನ ಬೆಳವಣಿಗೆಯ ಎರಡು ಪ್ರಮುಖ ಮತ್ತು ನಿರ್ಣಾಯಕ ಹಂತಗಳಾಗಿರುತ್ತದೆ. ಈ ಸಮಯದಲ್ಲಿ ದೇಹ ವೇಗವಾಗಿ ಬೆಳೆಯುತ್ತದೆ. ಹಾಗಾಗಿ ಈ ಅವಧಿಯಲ್ಲಿ ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳು ದೊರೆಯಬೇಕು. ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ ಇದ್ದರೆ ಎಲುಬು, ಸ್ನಾಯು ಹಾಗೂ ದೇಹದ ಸಾಮಾನ್ಯ ಬೆಳವಣಿಗೆ ನಿಧಾನಗೊಳ್ಳಬಹುದು.

ಎತ್ತರ ಹೆಚ್ಚಳಕ್ಕೆ ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳು:

ಪ್ರೋಟೀನ್: ಇದು ದೇಹದ ಸ್ನಾಯು ಮತ್ತು ಟಿಷ್ಯೂಗಳ ಬೆಳವಣಿಗೆಗೆ ಸಹಕಾರಿ. ಹಾಲು, ಮೊಟ್ಟೆ, ಬೇಳೆ, ಸೋಯಾ ಹಾಗೂ ಕಾಳುಗಳಲ್ಲಿ ಇದು ಹೆಚ್ಚು ದೊರೆಯುತ್ತದೆ.

ಕ್ಯಾಲ್ಸಿಯಂ: ಎಲುಬುಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಅತ್ಯಗತ್ಯ. ಇದು ಹಾಲು, ಮೊಸರು, ಪನೀರ್ ಹಾಗೂ ಹಸಿರು ಸೊಪ್ಪುಗಳಲ್ಲಿ ಉತ್ತಮ ಪ್ರಮಾಣದಲ್ಲಿ ದೊರೆಯುತ್ತದೆ.

ವಿಟಮಿನ್ D: ಈ ಜೀವಸತ್ವ ದೇಹದಲ್ಲಿ ಕ್ಯಾಲ್ಸಿಯಂ ಪೋಷಣೆಗೆ ಸಹಾಯ ಮಾಡುತ್ತದೆ. ಬೆಳಗಿನ ಸೂರ್ಯರಶ್ಮಿ ಮತ್ತು ಕೆಲವು ಆಹಾರಗಳಿಂದ ಇದು ದೊರೆಯುತ್ತದೆ.

ಐರನ್: ಇದು ದೇಹಕ್ಕೆ ಆಮ್ಲಜನಕ ಪೂರೈಸಲು ನೆರವಾಗುತ್ತದೆ. ಇದರ ಕೊರತೆಯಿಂದ ಮಕ್ಕಳಲ್ಲಿ ದೌರ್ಬಲ್ಯ ಮತ್ತು ಬೆಳವಣಿಗೆಯ ಸಮಸ್ಯೆಗಳು ಕಾಣಿಸಬಹುದು.

ಜಿಂಕ್ ಮತ್ತು ಮ್ಯಾಗ್ನೀಷಿಯಂ: ಈ ಖನಿಜಾಂಶಗಳು ದೇಹದ ಸಾಮಾನ್ಯ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

ಇದನ್ನೂ ಓದಿ: ಬೆಳಗ್ಗಿನ ಈ ಅಭ್ಯಾಸಗಳು ನಿಮ್ಮ ಮಕ್ಕಳನ್ನು ಚುರುಕಾಗಿಸುತ್ತದೆ

ಮಕ್ಕಳ ಬೆಳವಣಿಗೆಗೆ ಉತ್ತಮ ಅಭ್ಯಾಸಗಳು:

  • ಪ್ರತಿದಿನ ಸರಿಯಾಗಿ ನಿದ್ರೆ ಮಾಡುವುದು
  • ನಿಯಮಿತ ವ್ಯಾಯಾಮ ಮತ್ತು ಆಟಗಳಲ್ಲಿ ಭಾಗವಹಿಸುವುದು
  • ಸಮತೋಲನಯುತ ಆಹಾರ ಸೇವಿಸುವುದು
  • ಸಾಕಷ್ಟು ನೀರು ಕುಡಿಯುವುದು
  • ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು

ಮಕ್ಕಳು ಯಾವುದರಿಂದ ದೂರವಿರಬೇಕು?

  • ಜಂಕ್ ಫುಡ್ ಮತ್ತು ಸಿಹಿ ಪಾನೀಯಗಳ ಅಧಿಕ ಸೇವನೆ
  • ಹೆಚ್ಚು ಸಮಯ ಮೊಬೈಲ್ ಅಥವಾ ಟಿವಿ ಮುಂದೆ ಕಳೆಯುವುದು
  • ಶಾರೀರಿಕ ಚಟುವಟಿಕೆಗಳ ಕೊರತೆ
  • ತಡರಾತ್ರಿ ಜಾಗರಣೆ

ಮಕ್ಕಳ ಎತ್ತರ ಮತ್ತು ದೈಹಿಕ ಬೆಳವಣಿಗೆಗೆ ಸಮತೋಲನಯುತ ಆಹಾರ, ಉತ್ತಮ ಜೀವನಶೈಲಿ ಮತ್ತು ಅಗತ್ಯ ಪೋಷಕಾಂಶಗಳು ಬಹಳ ಮುಖ್ಯ. ಮಕ್ಕಳ ಬೆಳವಣಿಗೆ ಬಗ್ಗೆ ಆತಂಕ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:25 pm, Wed, 3 June 26

Source link

ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್​​: ಅಷ್ಟಕ್ಕೂ ಯಾರು ಈ ಅಜ್ಜಯ್ಯ? – Kannada News

ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್Image Credit source: PTI

ಬೆಂಗಳೂರು, ಜೂನ್​​ 03: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​​ (DK Shivakumar) ಪ್ರಮಾಣವಚನ ಸ್ವೀಕರಿಸಿದ್ದಾರೆ.  ರಾಜ್ಯಪಾಲ ಥಾವರ್​​ಚಂದ್​​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧೀಸಿದ್ದು, ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಡಿಕೆಶಿ ಪ್ರಮಾಣ ಸ್ವೀಕರಿಸಿರೋದು ಗಮನ ಸೆಳೆದಿದೆ. ತಮ್ಮ ಜೀವನದ ಮಹತ್ವದ ಘಟ್ಟದ ವೇಳೆ ತಮ್ಮ ಆರಾಧ್ಯ ದೈವವಾದ ಅಜ್ಜಯ್ಯನನ್ನು ನೆನೆದಿರೋದು ಡಿ.ಕೆ. ಶಿವಕುಮಾರ್​​ಗೆ ಅವರ ಮೇಲಿರುವ ನಂಬಿಕೆ ಎಂತಹದ್ದು ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಪ್ರಮಾಣವಚನಕ್ಕೂ ಮುನ್ನ ಅಜ್ಜಯ್ಯನಿಗೆ ಪುಷ್ಪಾಚನೆ

ವೇದಿಕೆಯಲ್ಲಿ ಇಡಲಾಗಿದ್ದ ಅಜ್ಜಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರೆವೇರಸಿದ ಬಳಿಕೆಯೇ ಕರ್ನಾಟಕ ಸಿಎಂ ಆಗಿ ಡಿ.ಕೆ. ಶಿವಕುಮಾರ್​​ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಎಂದರೆ ಪದಗ್ರಹಣ ಸಮಾರಂಭ ಕೂಡ ಅಜ್ಜಯ್ಯನ ಮಠ ನೀಡಿರುವ ದಿನಾಂಕ ಮತ್ತು ಸಮಯದಂದೇ ನೆರವೇರಿದೆ. ಸಿಎಂ ಸ್ಥಾನ ಪಡೆಯುವ ಮೊದಲಿಗಿಂತ ಹಿಡಿದು ಪ್ರಮಾಣವಚನದವರೆಗೂ ಪ್ರತಿ ನಿರ್ಧಾರವನ್ನು ಅಜ್ಜಯ್ಯನ ಮಠದ ಈಗಿನ ಡಾ. ಕರಿವೃಷಭ ಶಿವಯೋಗಿಶ್ವರ ಶ್ರೀಗಳ ಮಾರ್ಗದರ್ಶನದನುಸಾರ ಡಿಕೆಶಿ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿಯೂ ಬೆಂಗಳೂರಿನ ನಾಗರಭಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದ ಶಿವಕುಮಾರ್, ತಡರಾತ್ರಿಯವರೆಗೂ ಅಲ್ಲಿಯೇ ಸಮಯ ಕಳೆದಿದ್ದರು.

ಇದನ್ನೂ ಓದಿ: ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್!

ಎಲ್ಲಿದೆ ಈ ಅಜ್ಜಯ್ಯನ ಮಠ?

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠ (ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠ) ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಈ ಮಠವನ್ನು ಸ್ಥಳೀಯವಾಗಿ ‘ಅಜ್ಜಯ್ಯನ ಮಠ’ ಎಂದೂ ಕರೆಯಲಾಗುತ್ತದೆ. ಈ ಮಠವು ಕರ್ನಾಟಕದ ಪ್ರಮುಖ ರಾಜಕಾರಣಿಗಳ ನೆಚ್ಚಿನ ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದು, ಕರ್ನಾಟಕದ ನೂತನ ಸಿಎಂ ಡಿಕೆ ಶಿವಕುಮಾರ್​​ ಸೇರಿ ಹಲವರು ಇಲ್ಲಿನ ಭಕ್ತರಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಆಪ್ತರು ಮತ್ತು ಕುಟುಂಬದವರು ಈ ಕ್ಷಣಕ್ಕೆ ಸಾಕ್ಷಿ ಆಗಿದ್ದಾರೆ. ಮಾಜಿ ಸಂಸದೆ, ನಟಿ ರಮ್ಯಾ ದಿವ್ಯ ಸ್ಪಂದನಾ ಕೂಡ ಬಂದು ಪ್ರಮಾಣವಚನ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಈ ವೇಳೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಡಿಕೆ ಶಿವಕುಮಾರ್ ಅವರು ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ಅವರಿಗೆ ಇರುವ ಸಾಮರ್ಥ್ಯಕ್ಕೆ ಖಂಡಿತವಾಗಿಯೂ ಅವರು ದೊಡ್ಡ ಮಟ್ಟದ ಬದಲಾವಣೆ ಮಾಡುತ್ತಾರೆ. ಕರ್ನಾಟಕಕ್ಕೆ ಅವರಿಂದ ಅನುಕೂಲ ಆಗಲಿದೆ. ಮತ್ತೆ ರಾಜಕೀಯಕ್ಕೆ ಮರಳುವ ಆಲೋಚನೆ ನನಗಿಲ್ಲ. ಇಂದು ನಾನು ಕೇವಲ ಅವರಿಗೆ ಶುಭ ಹಾರೈಸಿ, ಸಂಭ್ರಮಿಸಲು ಬಂದಿದ್ದೇನೆ’ ಎಂದು ರಮ್ಯಾ (Ramya) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇತ್ತ ಡಿಕೆಶಿ ಪದಗ್ರಹಣದ ಬೆನ್ನಲ್ಲೇ ಅತ್ತ ವಿಧಾನಸೌಧದಲ್ಲಿ ಬದಲಾಯ್ತು ಸಿಎಂ ಕಚೇರಿಯ ನಾಮಫಲಕ

ಬೆಂಗಳೂರು, ಜೂನ್​​ 03: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಬೆಂಗಳೂರಿನ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯ ನಾಮಫಲಕವನ್ನು ಬದಲಾಯಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಹೆಸರಿನ ನಾಮಫಲಕವನ್ನು ತೆಗೆದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರ ಹೆಸರಿನ ನಾಮಫಲಕವನ್ನು ಅಳವಡಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ – Kannada News

ನವದೆಹಲಿ, ಜೂನ್ 3: ಜಾಗತಿಕ ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯೊಂದು ಮೌನವಾಗಿ ಆದರೆ ಅತ್ಯಂತ ಶಕ್ತಿಯುತವಾಗಿ ನಡೆಯುತ್ತಿದೆ. ದಶಕಗಳಿಂದ ಚೀನಾವನ್ನು ತಮ್ಮ ಪ್ರಮುಖ ಹೂಡಿಕೆಯ ತಾಣವಾಗಿ ನೆಚ್ಚಿಕೊಂಡಿದ್ದ ಜಪಾನ್‌ನ ದೈತ್ಯ ಹೂಡಿಕೆದಾರರು (Japanese investors) ಮತ್ತು ಬ್ಯಾಂಕುಗಳು, ಈಗ ಚೀನಾದಿಂದ ಮುಖತಿರುಗಿಸಿ ಭಾರತದತ್ತ ಮುಖ ಮಾಡುತ್ತಿದ್ದಾರೆ. ಜಪಾನ್‌ನ ಈ ದಿಕ್ಕು ಬದಲಾವಣೆಯು (Pivot) ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಭಾರಿ ಪ್ರಮಾಣದ ಬಂಡವಾಳವನ್ನು ತಂದುಕೊಡಲಿದೆ ಎಂದು ಜಾಗತಿಕ ಹಣಕಾಸು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ದೀರ್ಘಕಾಲದವರೆಗೆ ಚೀನಾದ ಅಭಿವೃದ್ಧಿಯ ಭಾಗವಾಗಿದ್ದ ಜಪಾನ್‌ ಕಂಪನಿಗಳು ಈಗ ಅಲ್ಲಿಂದ ಹೊರಬರಲು ಪ್ರಮುಖ ಕಾರಣಳಿವೆ. ರಾಜಕೀಯ ಮತ್ತು ಭೌಗೋಳಿಕ ಉದ್ವಿಗ್ನತೆ (Geopolitical Tensions), ಚೀನಾದ ಆರ್ಥಿಕ ಮಂದಗತಿ ಮತ್ತು ಕಠಿಣ ನಿಯಮಗಳು ವಿದೇಶೀ ಹೂಡಿಕೆದಾರರಿಗೆ ಇರಿಸುಮುರಿಸು ತಂದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಅಮೆರಿಕ ಮತ್ತು ಚೀನಾ ನಡುವಿನ ಹೆಚ್ಚುತ್ತಿರುವ ವಾಣಿಜ್ಯ ಸಮರ ಹಾಗೂ ತೈವಾನ್ ವಿಷಯದಲ್ಲಿ ಸೃಷ್ಟಿಯಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಜಪಾನ್ ಕಂಪನಿಗಳಿಗೆ ಆತಂಕ ಮೂಡಿಸಿದೆ. ಚೀನಾದ ರಿಯಲ್ ಎಸ್ಟೇಟ್ ವಲಯದ ಕುಸಿತ ಮತ್ತು ಅಲ್ಲಿನ ಆರ್ಥಿಕ ಬೆಳವಣಿಗೆಯ ವೇಗ ತಗ್ಗಿರುವುದು ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸಿದೆ. ಚೀನಾ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಕಂಪನಿಗಳ ಮೇಲೆ ಹೇರುತ್ತಿರುವ ಕಟ್ಟುನಿಟ್ಟಿನ ನಿಯಂತ್ರಣಗಳು ಮತ್ತು ನಿಗಾ ವ್ಯವಸ್ಥೆಯು ಜಪಾನ್ ಬ್ಯಾಂಕುಗಳಿಗೆ ಅಲ್ಲಿ ಮುಕ್ತವಾಗಿ ವ್ಯವಹರಿಸಲು ಅಡ್ಡಿಯಾಗಿದೆ.

ಇದನ್ನೂ ಓದಿ: ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ

ಭಾರತದ ಕಡೆಗೆ ಜಪಾನಿ ಹೂಡಿಕೆದಾರರು ಆಕರ್ಷಿತರಾಗುತ್ತಿರುವುದೇಕೆ?

ಚೀನಾಕ್ಕೆ ಪರ್ಯಾಯವಾಗಿ ಜಪಾನ್ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ಆಯ್ದುಕೊಳ್ಳುತ್ತಿರುವುದರ ಹಿಂದೆಯೂ ಬಲವಾದ ಕಾರಣಗಳಿವೆ. ಭಾರತವು ಪ್ರಸ್ತುತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಜಾಗತಿಕ ಮಂದಗತಿಯ ನಡುವೆಯೂ ಭಾರತದ ಜಿಡಿಪಿ (GDP) ಪ್ರಗತಿ ಸ್ಥಿರವಾಗಿದೆ.

ಭಾರತದ ಬೃಹತ್ ಗ್ರಾಹಕ ಮಾರುಕಟ್ಟೆ ಮತ್ತು ದುಡಿಯುವ ವಯಸ್ಸಿನ ಯುವ ಜನಸಂಖ್ಯೆಯು ಜಪಾನ್‌ನ ಉತ್ಪಾದನಾ ಮತ್ತು ಸೇವಾ ವಲಯದ ಕಂಪನಿಗಳಿಗೆ ದೊಡ್ಡ ಅವಕಾಶಗಳನ್ನು ಸೃಷ್ಟಿಸಿದೆ.

ಜಪಾನ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಬಾಂಧವ್ಯವು ಐತಿಹಾಸಿಕವಾಗಿ ಅತ್ಯಂತ ಸುದೃಢವಾಗಿದೆ. ‘ಕ್ವಾಡ್’ (QUAD) ಒಕ್ಕೂಟದ ಮೂಲಕ ಉಭಯ ದೇಶಗಳ ಕಾರ್ಯತಂತ್ರದ ಪಾಲುದಾರಿಕೆ ಇನ್ನಷ್ಟು ಗಟ್ಟಿಯಾಗಿದೆ.

ಭಾರತ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆಯು ಜಪಾನ್ ಹೂಡಿಕೆದಾರರನ್ನು ಸೆಳೆಯುತ್ತಿದೆ.

ಇದನ್ನೂ ಓದಿ: ಫಾರೆಕ್ಸ್​ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ

ಭಾರತದ ಮೇಲಾಗುವ ಸಕಾರಾತ್ಮಕ ಪರಿಣಾಮಗಳು

ಜಪಾನ್‌ನ ಮುಂಚೂಣಿ ಬ್ಯಾಂಕುಗಳಾದ ಮುಫಾಗ್‌ (MUFG), ಮಿತ್ಸುಯಿ ಸುಮಿತೊಮೊ (SMBC) ಮತ್ತು ಮಿಜುಹೊ (Mizuho) ಈಗಾಗಲೇ ಭಾರತದಲ್ಲಿ ತಮ್ಮ ಶಾಖೆಗಳನ್ನು ವಿಸ್ತರಿಸುತ್ತಿದ್ದು, ಭಾರತೀಯ ಸ್ಟಾರ್ಟ್-ಅಪ್‌ಗಳು ಹಾಗೂ ಕಾರ್ಪೊರೇಟ್ ವಲಯಕ್ಕೆ ದೊಡ್ಡ ಮಟ್ಟದ ಸಾಲ ಮತ್ತು ಬಂಡವಾಳವನ್ನು ಒದಗಿಸುತ್ತಿವೆ.

ಜಪಾನ್‌ನ ಈ ‘ಮೌನ ಕ್ರಾಂತಿ’ಯು ಭಾರತದಲ್ಲಿ ಕೇವಲ ಕೈಗಾರಿಕಾ ರಂಗ ಮಾತ್ರವಲ್ಲದೆ, ಹಸಿರು ಇಂಧನ (Green Energy), ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯ ವಲಯಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಭಾರತವನ್ನು ಜಾಗತಿಕ ಉತ್ಪಾದನಾ ಹಬ್ ಆಗಿ ಪರಿವರ್ತಿಸಲು ಪ್ರಮುಖ ಪಾತ್ರ ವಹಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಅತ್ಯಧಿಕ ವೀಕ್ಷಣೆ ಕಂಡ 7 ಪಂದ್ಯಗಳಲ್ಲಿ ಆರ್​ಸಿಬಿಯದ್ದೇ 6 ಪಂದ್ಯಗಳು ..! – Kannada News

2026ರ ಐಪಿಎಲ್​ಗೆ (IPL 2026) ಅದ್ಧೂರಿ ತೆರೆಬಿದ್ದಿದೆ. ಕಳೆದ ಆವೃತ್ತಿಯಂತೆಯೇ ಈ ಆವೃತ್ತಿಯಲ್ಲೂ ಆರ್​ಸಿಬಿ (RCB) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರಲ್ಲಿ ಒಂದು ವ್ಯತ್ಯಾಸವೆಂದರೆ ಕಳೆದ ಆವೃತ್ತಿಯಲ್ಲಿ ಪಂಜಾಬ್ ತಂಡ ಆರ್​ಸಿಬಿಗೆ ಎದುರಾಳಿಯಾಗಿದ್ದರೆ, ಈ ಆವೃತ್ತಿಯಲ್ಲಿ ಆರ್​ಸಿಬಿಗೆ ಗುಜರಾತ್ ಎದುರಾಳಿಯಾಗಿತ್ತು. ಎದುರಾಳಿ ಬದಲಾದರೂ ಆರ್​ಸಿಬಿಯ ಪ್ರದರ್ಶನ ಮಾತ್ರ ಒಂದೇ ಆಗಿತ್ತು. ಫೈನಲ್ ಪಂದ್ಯದಲ್ಲಿ ಮಾತ್ರವಲ್ಲದೆ ಇಡೀ ಆವೃತ್ತಿಯಲ್ಲಿ ಆರ್​ಸಿಬಿ ಚಾಂಪಿಯನ್ ತಂಡದಂತೆಯೇ ಪ್ರದರ್ಶನ ನೀಡಿತ್ತು. ಹೀಗಾಗಿ ಆರ್​ಸಿಬಿ ತಂಡದ ಪಂದ್ಯಗಳಿಗೆ ಹೆಚ್ಚಿನ ಮನ್ನಣೆ ಇತ್ತು. ಇದಕ್ಕೆ ಪೂರಕವಾಗಿ ಇದೀಗ ಐಪಿಎಲ್​ನ ಅಧಿಕೃತ ಪ್ರಸಾರಕರಾದ ಜಿಯೋಹಾಟ್‌ಸ್ಟಾರ್‌ ಬಿಡುಗಡೆ ಮಾಡಿರುವ ಅತಿ ಹೆಚ್ಚು ವೀಕ್ಷಣೆ ಪಡೆದ 7 ಪಂದ್ಯಗಳ ಪೈಕಿ 6 ಪಂದ್ಯಗಳು ಆರ್​ಸಿಬಿ ತಂಡದ ಪಂದ್ಯಗಳೇ ಇರುವುದು ಆರ್​ಸಿಬಿ ತಂಡಕ್ಕಿರುವ ಜನಪ್ರಿಯತೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.

ಆರ್​ಸಿಬಿಯದ್ದೇ 6 ಪಂದ್ಯಗಳು ..!

ಜಿಯೋಹಾಟ್‌ಸ್ಟಾರ್‌ ಬಿಡುಗಡೆ ಮಾಡಿರುವ ಅತಿ ಹೆಚ್ಚು ವೀಕ್ಷಣೆ ಪಡೆದ 7 ಪಂದ್ಯಗಳಲ್ಲಿ ಆರ್​ಸಿಬಿ ಹಾಗೂ ಗುಜರಾತ್ ನಡುವೆ ನಡೆದ ಫೈನಲ್ ಪಂದ್ಯ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವಿದ್ದರೆ, ಮೂರನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವಿದೆ. ನಾಲ್ಕನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವಿದ್ದರೆ, ಐದನೇ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವಿದೆ.

ಉಳಿದಂತೆ 6ನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯವಿದ್ದರೆ, 7ನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 1 ಪಂದ್ಯವಿದೆ. ಇದರರ್ಥ ಅತಿ ಹೆಚ್ಚು ವೀಕ್ಷಣೆ ಪಡೆದ ಅಗ್ರ 7 ಪಂದ್ಯಗಳಲ್ಲಿ 5ನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯವನ್ನು ಹೊರತುಪಡಿಸಿದರೆ, ಉಳಿದ 6 ಪಂದ್ಯಗಳಲ್ಲಿ ಆರ್​ಸಿಬಿ ಆಡಿರುವ ಪಂದ್ಯಗಳೇ ಸೇರಿವೆ. ಇನ್ನು ಯಾವ ಪಂದ್ಯ ಎಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದೆ ಎಂಬುದನ್ನು ನೋಡುವುದಾದರೆ..

IPL 2026 Final: ಈ ಸಲನೂ ಕಪ್ ನಮ್ದು..! ಸತತ 2ನೇ ಬಾರಿಗೆ ಆರ್​ಸಿಬಿ ಮುಡಿಗೇರಿದ ಐಪಿಎಲ್ ಕಿರೀಟ

ಅತಿ ಹೆಚ್ಚು ವೀಕ್ಷಣೆ ಕಂಡ ಟಾಪ್ 7 ಪಂದ್ಯಗಳು

  • 1. ಆರ್‌ಸಿಬಿ vs ಗುಜರಾತ್ (ಫೈನಲ್) – 520 ಮಿಲಿಯನ್
  • 2. ಆರ್‌ಸಿಬಿ vs ಸನ್‌ರೈಸರ್ಸ್ – (ಲೀಗ್ ಪಂದ್ಯ) 426 ಮಿಲಿಯನ್
  • 3. ಆರ್‌ಸಿಬಿ vs ರಾಜಸ್ಥಾನ್ – (ಲೀಗ್ ಪಂದ್ಯ) 410 ಮಿಲಿಯನ್
  • 4. ಆರ್‌ಸಿಬಿ vs ಮುಂಬೈ ಇಂಡಿಯನ್ಸ್ – (ಲೀಗ್ ಪಂದ್ಯ) 406 ಮಿಲಿಯನ್
  • 5. ಗುಜರಾತ್ vs ರಾಜಸ್ಥಾನ್ (ಕ್ವಾಲಿಫೈಯರ್ 2 ಪಂದ್ಯ) – 366 ಮಿಲಿಯನ್
  • 6. ಆರ್‌ಸಿಬಿ vs ಸಿಎಸ್‌ಕೆ – (ಲೀಗ್ ಪಂದ್ಯ) 355 ಮಿಲಿಯನ್
  • 7. ಆರ್‌ಸಿಬಿ vs ಗುಜರಾತ್ (ಕ್ವಾಲಿಫೈಯರ್ 1 ಪಂದ್ಯ) – 355 ಮಿಲಿಯನ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಆಕಾಂಕ್ಷಿಯಾಗಿದ್ದ ಪರಮೇಶ್ವರ್ ಡಿಸಿಎಂ ಆಗಿ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ – Kannada News

ಬೆಂಗಳೂರು, (ಜೂನ್ 03): ಡಿಕೆ ಶಿವಕುಮಾರ್ (DK Shivakumar) ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಬಳಿಕ ಸಿದ್ದರಾಮಯ್ಯನವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಡಾ ಜಿ ಪರಮೇಶ್ವರ್ (Dr G Parameshwar) ಅವರು ಇದೀಗ ಡಿಕೆ ಶಿವಕುಮಾರ್ ಕ್ಯಾಬಿನೆಟ್​​​ನಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಪರಮೇಶ್ವರ್ ಅವರು ಡಾ, ಬಿಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣವನಚ ಸ್ವೀಕರಿಸಿದರು.

ಇನ್ನು ಒಟ್ಟು 5ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಡಾ.ಜಿ.ಪರಮೇಶ್ವರ್, 1989ರಲ್ಲಿ ಮಧುಗಿರಿಯಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ರು. 1993ರಲ್ಲಿ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಸೇವೆ ಸಲ್ಲಿಸಿದ್ರು. 1999 ಮತ್ತು 2004ರಲ್ಲಿ ಮಧುಗಿರಿಯಲ್ಲಿ ಮತ್ತೆ ಗೆಲುವು ಸಾಧಿಸಿದ್ರು. 2008ರಲ್ಲಿ ಕ್ಷೇತ್ರ ಬದಲಾಯಿಸಿ ಕೊರಟಗೆರೆಯಿಂದ ಸ್ಪರ್ಧಿಸಿದ್ದರು. 2010ರಿಂದ 2018ರವರೆಗೂ KPCC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪರಮೇಶ್ವರ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿದ್ರು. ಗೃಹ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ವಿಜ್ಞಾನತಂತ್ರಜ್ಞಾನ ಸಚಿವರಾಗಿ, ಬೆಂಗಳೂರು ಅಭಿವೃದ್ಧಿ ಸಚಿವರಾಗಿಯೂ ಪರಮೇಶ್ವರ್‌ ಸೇವೆ ಸಲ್ಲಿಸಿದ್ದಾರೆ.

Source link

ಧುರಂಧರ್ ಸೋತಿದ್ದರೆ ‘ಡಾನ್ 3’ ಸಿನಿಮಾ ಬಿಡುತ್ತಿರಲಿಲ್ಲ: ಕಡೆಗೂ ಒಪ್ಪಿಕೊಂಡ ರಣವೀರ್ ಸಿಂಗ್ – Kannada News

ಬಾಲಿವುಡ್‌ನ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರಬಂದಿರುವುದು ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ ಅವರೊಂದಿಗಿನ ವಿವಾದ ಸದ್ಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ನಡೆದ ಸರಣಿ ಸಂಧಾನ ಸಭೆಗಳಲ್ಲಿ ರಣವೀರ್ ಸಿಂಗ್ (Ranveer Singh) ಈ ಪ್ರಾಜೆಕ್ಟ್‌ನಿಂದ ಹೊರಬರಲು ತಮಗಿದ್ದ ಅಸಮಾಧಾನಗಳನ್ನು ಬಿಚ್ಚಿಟ್ಟಿದ್ದಾರೆ ಎಂದು ‘ವೆರೈಟಿ’ ವರದಿ ಮಾಡಿದೆ. ಚಿತ್ರರಂಗದ ಹಿರಿಯರ ಸಮ್ಮುಖದಲ್ಲಿ ನಡೆದ ಈ ರಹಸ್ಯ ಸಭೆ ಹಲವು ವಿಷಯಗಳು ಹೊರಬಂದಿವೆ.

‘ಡಾನ್ 3’ ಚಿತ್ರದ ಫೈನಲ್ ಸ್ಕ್ರಿಪ್ಟ್ ತಮಗೆ ಸಂಪೂರ್ಣ ತೃಪ್ತಿ ನೀಡಿರಲಿಲ್ಲ. ಸಿನಿಮಾ ಶೂಟಿಂಗ್‌ಗೆ ಹೋಗುವ ಹಂತಕ್ಕೆ ಸ್ಕ್ರಿಪ್ಟ್ ಸಿದ್ಧವಾಗಿರಲಿಲ್ಲ ಎಂದು ರಣವೀರ್ ಹೇಳಿದ್ದಾರೆ. ಫರ್ಹಾನ್ ಅಖ್ತರ್ ಅವರು ಬೇರೆ ಪ್ರಾಜೆಕ್ಟ್‌ಗಳು ಹಾಗೂ ಮ್ಯೂಸಿಕ್ ಕನ್ಸರ್ಟ್‌ಗಳಲ್ಲಿ ಬ್ಯುಸಿಯಾಗಿದ್ದರಿಂದ ಚಿತ್ರಕ್ಕೆ ಸರಿಯಾಗಿ ಸಮಯ ನೀಡುತ್ತಿರಲಿಲ್ಲ ಎಂದು ರಣವೀರ್ ಆರೋಪಿಸಿದ್ದಾರೆ.

ಆರಂಭದಲ್ಲಿ ಚಿತ್ರಕ್ಕೆ 300ರಿಂದ 350 ಕೋಟಿ ರೂ. ಬಜೆಟ್ ಎಂದು ಚರ್ಚಿಸಲಾಗಿತ್ತು. ಆದರೆ ನಂತರ ಅದನ್ನು ಕೇವಲ 150 ಕೋಟಿ ರೂ.ಗೆ ಇಳಿಸಲಾಯಿತು ಎಂಬುದು ರಣವೀರ್ ವಾದ. ಬಜೆಟ್ ಕಮ್ಮಿ ಮಾಡಿದ ಬೆನ್ನಲ್ಲೇ ತಮ್ಮ ಸಂಭಾವನೆಯನ್ನೂ ಕಡಿತಗೊಳಿಸಲಾಯಿತು ಮತ್ತು ತಮಗೆ ಯಾವುದೇ ಅಡ್ವಾನ್ಸ್ ಅಥವಾ ಸೈನಿಂಗ್ ಅಮೌಂಟ್ ಸಿಕ್ಕಿರಲಿಲ್ಲ ಎಂದು ನಟ ಹೇಳಿಕೊಂಡಿದ್ದಾರೆ.

ರಣವೀರ್ ಸಿಂಗ್ ಅವರ ಈ ಆರೋಪಗಳಿಗೆ ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ತಿರುಗೇಟು ನೀಡಿದ್ದಾರೆ. ರಣವೀರ್ ಸಿಂಗ್ ಈ ಹಿಂದೆ ಸ್ಕ್ರಿಪ್ಟ್ ಕೇಳಿ ಖುಷಿಪಟ್ಟಿದ್ದ ಹಳೆಯ ವಾಟ್ಸಾಪ್ ಚಾಟ್‌ಗಳನ್ನು ಸಭೆಯಲ್ಲಿ ನಿರ್ಮಾಪಕರು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೆ, ಒಪ್ಪಂದವಾದ ಮೇಲೆ ಸಂಭಾವನೆ ಕಡಿತ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌

ಸಭೆಯಲ್ಲಿ ನಿರ್ಮಾಪಕ ರಿತೇಶ್ ಸಿಧ್ವಾನಿ ಅವರು ರಣವೀರ್‌ಗೆ ನೇರ ಪ್ರಶ್ನೆಯೊಂದನ್ನು ಕೇಳಿದ್ದರು. ‘ಒಂದು ವೇಳೆ ನಿಮ್ಮ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗದೇ ಇದ್ದಿದ್ದರೆ ನೀವು ‘ಡಾನ್ 3’ ಬಿಟ್ಟು ಹೋಗುತ್ತಿದ್ದಿರಾ?’ ಎಂದು ಕೇಳಿದ್ದಕ್ಕೆ, ರಣವೀರ್ ಸಿಂಗ್ ‘ಇಲ್ಲ, ಆಗ ನಾನು ಸಿನಿಮಾ ಬಿಡುತ್ತಿರಲಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರೀ-ಪ್ರೊಡಕ್ಷನ್ ಹಂತದಲ್ಲಿ ತಮಗಾದ ನಷ್ಟಕ್ಕಾಗಿ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ರಣವೀರ್ ಸಿಂಗ್ ಅವರಿಂದ 45 ಕೋಟಿ ರೂ. ಪರಿಹಾರ ಕೇಳಿದೆ. ಆದರೆ ರಣವೀರ್ ಸಿಂಗ್ ತಕ್ಷಣವೇ 10 ಕೋಟಿ ರೂ. ನೀಡಿ ಸೆಟಲ್ ಮಾಡಲು ಮುಂದಾಗಿದ್ದಾರೆ. ಜೊತೆಗೆ ಮುಂದಿನ ಸಿನಿಮಾಗಳಿಗೆ ತಮ್ಮ ಸಂಭಾವನೆಯಲ್ಲಿ ಶೇಕಡ 25ರಷ್ಟು ರಿಯಾಯಿತಿ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ. ಆದರೆ ‘ಇನ್ಮುಂದೆ ನಿಮ್ಮ ಜೊತೆ ಸಿನಿಮಾ ಮಾಡುವ ಯೋಚನೆಯೇ ನಮಗಿಲ್ಲ. ಹಾಗಾಗಿ ನಿಮ್ಮ ಡಿಸ್ಕೌಂಟ್ ನಮಗೆ ಬೇಡ’ ಎಂದು ಫರ್ಹಾನ್ ಅಖ್ತರ್ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version