Headlines

ಕಿಲೋಮೀಟರ್‌ಗೆ ಕೇವಲ 50 ಪೈಸೆ ಖರ್ಚು! ಎಲ್‌ಪಿಜಿ ಬೆಲೆ ಏರಿಕೆ ನಡುವೆ ಗಮನ ಸೆಳೆಯುತ್ತಿದೆ ಎಲೆಕ್ಟ್ರಿಕ್ ಆಟೋಗಳ ಮ್ಯಾಜಿಕ್

ಬೆಂಗಳೂರು, ಏ.6: ದೇಶದಲ್ಲಿ ಗ್ಯಾಸ್​​ ಕೊರತೆಗಳು ಹೆಚ್ಚಾಗಿದೆ. ಇರಾನ್, ಇಸ್ರೇಲ್​​​, ಅಮೆರಿಕ ಯುದ್ದದಿಂದ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಇದರ ಪರಿಣಾಮ ಭಾರತದಲ್ಲೂ ಕಂಡು ಬಂದಿದೆ. ಇನ್ನು ಬೆಂಗಳೂರಿನಲ್ಲಿ ಈ ಸಮಸ್ಯೆಯ ಬಗ್ಗೆ ಕೇಳುವುದೇ ಬೇಡ. ಅದರಲ್ಲೂ ಆಟೋ ಚಾಲಕರು ಇದರಿಂದ ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದಿನ ಪೂರ್ತಿ, ಆಟೋಗೆ ಗ್ಯಾಸ್​​ ಹಾಕಲು ಕ್ಯೂ ನಿಲ್ಲಬೇಕು. ಅದು ಕೂಡ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಬೆಂಗಳೂರಿನ ಜೀವನನಾಡಿ ಎನಿಸಿರುವ ಆಟೋ ರಿಕ್ಷಾ ಚಾಲಕರು ಇದೀಗ ಭೀಕರ ಎಲ್‌ಪಿಜಿ ಅಭಾವದಿಂದ…

Read More

ಹುಬ್ಬಳ್ಳಿಯಲ್ಲಿ ಲವ್​​​ ಜಿಹಾದ್​ ಪ್ರಕರಣ: ಸಮೀರ್ ಲೀಲೆಗಳು ಒಂದೊಂದಾಗಿ ಬಯಲು: ಮತ್ತೊಂದು ವಿಡಿಯೋ ವೈರಲ್

ಹುಬ್ಬಳ್ಳಿ, ಏ.6: ಹುಬ್ಬಳ್ಳಿ ಲವ್​​​ ಜಿಹಾದ್​ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಮೀರ್ ಲೀಲೆಗಳು ಒಂದೊಂದಾಗಿ ಬಯಲು ಆಗುತ್ತಿದೆ. ಜಿಮ್​​​​ ಟ್ರೈನರ್​ ಮಾಡಿದ ಒಂದೊಂದು ಕಹಾನಿಯ ಬಗ್ಗೆ ದಿನಕ್ಕೊಂದು ಹುಡುಗಿಯರು ಬಂದು ದೂರು ನೀಡುತ್ತಿದ್ದಾರೆ. ಇದೀಗ ಮತ್ತೊಂದು ಹುಡುಗಿ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ನೋಡಿ. ಇದರ ಜತೆಗೆ ಈಗಾಗಲೇ ದೂರು ನೀಡಿರುವ ಸಂತ್ರಸ್ತ ಯುವತಿಯನ್ನು ತನ್ನ ಐಷಾರಾಮಿ ಜೀವನಕ್ಕಾಗಿ ‘ಎಟಿಎಂ’ ತರಹ ಬಳಸಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಆರೋಪಿ…

Read More

ಭವಿಷ್ಯದ ಕನಸು ಕಂಡಿದ್ದ 71 ಜನ ಸಮುದ್ರಪಾಲು: 32 ಜನರ ರಕ್ಷ ಣೆ

ರೋಮ್, ಏ.6: ಭವಿಷ್ಯದ ಕನಸು ಹೊತ್ತು ಸಮುದ್ರ ಮಾರ್ಗದ ಮೂಲಕ ಯುರೋಪ್ ತಲುಪಲು ಯತ್ನಿಸುತ್ತಿದ್ದ ವಲಸಿಗರಿಗೆ ಮಹಾಮೃತ್ಯು ಎದುರಾಗಿದೆ. ಇಟಲಿ ಕರಾವಳಿಯಲ್ಲಿ ಸಂಭವಿಸಿದ ಭೀಕರ ಬೋಟ್ ದುರಂತದಲ್ಲಿ 71 ವಲಸಿಗರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಆತಂಕ ಎದುರಾಗಿದೆ. ಲಿಬಿಯಾದಿಂದ ಯುರೋಪ್‌ಗೆ ಹೊರಟಿದ್ದ ಈ ಬೋಟ್‌ನಲ್ಲಿ ಒಟ್ಟು 105 ಜನರಿದ್ದರು ಎಂದು ಬದುಕುಳಿದವರು ತಿಳಿಸಿದ್ದಾರೆ. ಈಸ್ಟರ್ ರಜಾದಿನಗಳ ಸಂದರ್ಭದಲ್ಲಿ ಈ ಪ್ರಯಾಣವನ್ನು ಮಾಡಲಾತ್ತು. ಸಂತೋಷದಿಂದ ರಜೆ ದಿನವನ್ನು ಕಳೆಯುವ ಎಂದವರಿಗೆ ದೊಡ್ಡ ಅಘಾತವೇ ಕಾಯುತ್ತಿತ್ತು.ಆದರೆ,…

Read More

ದಿನ ಭವಿಷ್ಯ: ಇಂದು ಈ ರಾಶಿಯವರ ಜೊತೆ ಹೇಳಿಕೊಳ್ಳಬೇಕಾದುದನ್ನು ಮುಚ್ಚಿಡುವರು

ಮೇಷ ರಾಶಿ: ಕೆಲಸದಲ್ಲಿರುವ ಅಧಿಕಾರಿಗಳಿಗೆ ನಿಮ್ಮ ಸಲಹೆಯನ್ನು ಕೊಡಲು ಹೋಗಬೇಡಿ. ನೀವು ಸುಲಭವಾಗಿ ಜನರ ವಿಶ್ವಾಸವನ್ನು ಗಳಿಸುವಿರಿ. ನಿಮ್ಮ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ನೀವು ವಹಿಸಿಕೊಂಡ ಕಾಮಗಾರಿಯ ವೇಗ ಹೆಚ್ಚಳ. ಆದರೆ ಅದರ ಬಗ್ಗೆ ಸಾಕಷ್ಟು ಯೋಚಿಸಿ ಮುಂದುವರಿಯಿರಿ. ಸ್ವಭಾವವು ಬಹಳ ತೀವ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು.‌ ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ವೃಷಭ ರಾಶಿ: ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು…

Read More

RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 11ನೇ ಪಂದ್ಯದಲ್ಲಿ ಆರ್​ಸಿಬಿ ಅಭಿಮಾನಿಗಳು ಯಾವ ಫಲಿತಾಂಶವನ್ನು ನಿರೀಕ್ಷಿಸಿದ್ದರೋ ಅದೇ ಫಲಿತಾಂಶ ಹೊರಬಿದ್ದಿದೆ. ಹೈವೋಲ್ಟೇಜ್ ಕದನದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದ್ದ ಹಾಲಿ ಚಾಂಪಿಯನ್ ಆರ್​ಸಿಬಿ, 43 ರನ್​ಗಳ ಭಾರಿ ಅಂತರದ ಗೆಲುವು ದಾಖಲಿಸಿತು. ಪಂದ್ಯದ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಸಿಎಸ್​ಕೆ ಮೇಲುಗೈ ಸಾಧಿಸದಂತೆ ನೋಡಿಕೊಂಡ ಆರ್​ಸಿಬಿ, ಸಿಎಸ್​ಕೆ ತಂಡಕ್ಕೆ ಹ್ಯಾಟ್ರಿಕ್ ಸೋಲಿನ ಆಘಾತ ನೀಡಿತು. ಈ ಪಂದ್ಯದಲ್ಲಿ ಮೊದಲು…

Read More

IPL 2026: ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಭುವಿ; ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗಿ

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ ಇತಿಹಾಸಿಕ ಮೈಲಿಗಲ್ಲು ದಾಟಿದ್ದಾರೆ. ಐಪಿಎಲ್‌ನಲ್ಲಿ 200 ವಿಕೆಟ್‌ಗಳ ಗಡಿ ದಾಟಿರುವ ಭುವನೇಶ್ವರ್ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಅವರಿಗೂ ಮೊದಲು, ಐಪಿಎಲ್ ಇತಿಹಾಸದಲ್ಲಿ ಯಾವುದೇ ವೇಗದ ಬೌಲರ್ 200 ವಿಕೆಟ್‌ಗಳನ್ನು ಪಡೆದಿರಲಿಲ್ಲ. ಇದೀಗ ಆ ದಾಖಲೆ ಭುವಿ ಪಾಲಾಗಿದೆ. ಇದರ ಜೊತೆಗೆ ಐಪಿಎಲ್‌ನಲ್ಲಿ ವಿಕೆಟ್‌ಗಳ ದ್ವಿಶತಕ ಪೂರೈಸಿದ ಎರಡನೇ…

Read More

RCB vs CSK Turning Point: ಟಿಮ್ ಡೇವಿಡ್​ಗೆ ಜೀವದಾನ ನೀಡಿ ಕೆಟ್ಟ ಸಿಎಸ್​ಕೆ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಆರ್​ಸಿಬಿ ತಂಡದ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 70 ರನ್ ಬಾರಿಸಿದರು. ಇವರ ಈ ಅಬ್ಬರದ ಬ್ಯಾಟಿಂಗ್​ನಿಂದ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಬರೋಬ್ಬರಿ 250 ರನ್ ಕಲೆಹಾಕಿತು. ಮಾತ್ರವಲ್ಲದೆ ತಂಡ ಕೊನೆಯ 5 ಓವರ್​ಗಳಲ್ಲಿ 90 ಕ್ಕೂ ಅಧಿಕ ರನ್ ಪೇರಿಸಿತು. ವಾಸ್ತವವಾಗಿ ಟಿಮ್ ಡೇವಿಡ್ ಕೇವಲ…

Read More

ಬರ್ತ್​​ಡೇ ಗರ್ಲ್ ರಶ್ಮಿಕಾ ಮಂದಣ್ಣ ಕೈಯಲ್ಲಿರುವ ಸಿನಿಮಾಗಳೆಷ್ಟು?

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡದ ನಟಿಯಾದರೂ ಈಗ ಮಿಂಚುತ್ತಿರುವುದು ಪರಭಾಷೆ ಸಿನಿಮಾಗಳಲ್ಲಿಯೇ. ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮೆರೆದು, ತಮಿಳಿನಲ್ಲೂ ಬೇಡಿಕೆಯ ನಟಿ ಎನಿಸಿಕೊಂಡು ಬಳಿಕ ಬಾಲಿವುಡ್​​ಗೆ ಪದಾರ್ಪಣೆ ಮಾಡಿ, ಅಲ್ಲಿಯೂ ಸಹ ಸಾವಿರಾರು ಕೋಟಿ ಗಳಿಕೆಯ ಸಿನಿಮಾಗಳ ಭಾಗವಾಗಿ ಈಗ ಬಾಲಿವುಡ್​​ನ ಬ್ಯುಸಿ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ ರಶ್ಮಿಕಾ. ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಜೊತೆಗೆ ವಿವಾಹವಾದ ನಟಿ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬ ಇಂದು (ಏಪ್ರಿಲ್ 05). ಅಂದಹಾಗೆ ಈ ಬ್ಯುಸಿ ನಟಿ ರಶ್ಮಿಕಾ…

Read More

ಗೋಣಿ ಚೀಲದಲ್ಲಿ ವ್ಯಕ್ತಿ ಶವ ಪತ್ತೆ ಕೇಸ್: ಡಿಸಿಪಿ ಹೇಳಿದ್ದಿಷ್ಟು

ಆನೇಕಲ್, ಏಪ್ರಿಲ್​ 05: ಗೋಣಿ ಚೀಲದಲ್ಲಿ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣವನ್ನು ಹೆಬ್ಬಗೋಡಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಡಿಶಾ ಮೂಲದ ಬಸುದೇವ್ ಮಲ್ಲಿಕ್ ಎಂಬಾತನನ್ನು ಬಂಧಿಸಲಾಗಿದ್ದು, ತನ್ನ ಸ್ನೇಹಿತ ಸುನೀಲ್ ನನ್ನು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಸುನೀಲ್ ಕುಡಿದು ನಿತ್ಯ ತನ್ನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿದ್ದ. ಈ ವಿಷಯವನ್ನು ಸುನೀಲ್ ಪತ್ನಿ ಬಸುದೇವ್ ಮಲ್ಲಿಕ್​ಗೆ ತಿಳಿಸಿದ್ದಳು. ಸುನೀಲ್ ಪತ್ನಿಯ ಸಹಾನುಭೂತಿ ಗಳಿಸುವ ದುರುದ್ದೇಶದಿಂದ ಬಸುದೇವ್, ಸುನೀಲ್‌ನನ್ನು…

Read More

RCB vs CSK: ಟಿಮ್ ಡೇವಿಡ್ ಡೇವಿಲ್ ಬ್ಯಾಟಿಂಗ್​ಗೆ ಸಿಎಸ್​ಕೆ ಅಲ್ಲೋಲ ಕಲ್ಲೋಲ; ವಿಡಿಯೋ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಇಂದು ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗೆ ಸಾಕ್ಷಿಯಾಯಿತು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಸಿಎಸ್​ಕೆ ಬೌಲರ್​ಗಳು ಮೈದಾನದಲ್ಲೇ ಅಳುವಂತೆ ಮಾಡಿದರು. ಡೇವಿಡ್ ಸುನಾಮಿಗೆ ಸಿಲುಕಿದ ಸಿಎಸ್​ಕೆ ಬೌಲರ್​ಗಳು ದಿಕ್ಕೆ ತೋಚದವರಂತ್ತಾಗಿ ಡೇವಿಡ್ ಬಾರಿಸುವ ಸಿಕ್ಸರ್​ಗಳನ್ನು ಮೂಕ ವಿಸ್ಮಿತರಾಗಿ ನಿಂತು ನೋಡಬೇಕಾಯಿತು. ಈ ಪಂದ್ಯದಲ್ಲಿ ಆರ್​ಸಿಬಿ ಪರ ಎಲ್ಲಾ ಬ್ಯಾಟರ್​ಗಳು ಅಮೋಘ ಪ್ರದರ್ಶನ ನೀಡಿದರು. ಹೀಗಾಗಿ ವಿಕೆಟ್ ಪತನದ ಬಳಿಕವೂ ಆ ಬಳಿಕ ಬಂದ ಬ್ಯಾಟ್ಸ್‌ಮನ್​ಗಳು ಯಾವುದೇ…

Read More