Headlines

DK Shivakumar Oath Taking Ceremony Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಬೆಂಗಳೂರು, ಜೂನ್​ 03: ರಾಜ್ಯದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​​ ಪಟ್ಟಾಭಿಷೇಕ ನಡೆಯುತ್ತಿದೆ. ಇದಕ್ಕಾಗಿ ಲೋಕಭವನದ ಗಾಜಿನ ಮನೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್​ ಕಟೌಟ್​​, ಬ್ಯಾನರ್​ಗಳು ರಾರಾಜಿಸುತ್ತಿವೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕೂಡ ಆಗಮಿಸಿದ್ದಾರೆ. ವಿಶೇಷ ಅಂದರೆ ಬಂಡೆ ಪ್ರಮಾಣ ವಚನಕ್ಕೆ ವಾಸ್ತು ಟಚ್​ ಕೊಡಲಾಗಿದ್ದು, ಸರ್ವಧರ್ಮದ ಗುರುಗಳಿಗೂ ಭಾಗಿಯಾಗಿದ್ದಾರೆ. ಸಂಜೆ 4 ಗಂಟೆ 5 ನಿಮಿಷದ ಶುಭ ಮುಹೂರ್ತದಲ್ಲಿ ಡಿಕೆ ಶಿವಕುಮಾರ್​ ಪಟ್ಟಾಭಿಷೇಕ ನಡೆಯುತ್ತಿದೆ. ಈ ಹಿಂದೆ ಲೋಕಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳ ವೇದಿಕೆ…

Read More

ಸಿಎಂ ಆಗುವ ಮುನ್ನವೇ ಡಿಕೆಶಿ ತಂತ್ರಗಾರಿಕೆ: ರಾಜಕೀಯ ಬದ್ಧವೈರಿಗಳ ಭೇಟಿ ಹಿಂದಿನ ಲೆಕ್ಕಾಚಾರವೇನು? – Kannada News

ಬೆಂಗಳೂರು, (ಜೂನ್ 03): ಡಿಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ, ಅಧಿಕಾರ ಸ್ವೀಕಾರ ಮುನ್ನ ಡಿಕೆ ಶಿವಕುಮಾರ್ ಅವರು ರಾಜ್ಯದ ಇಬ್ಬರು ಪ್ರಭಾವಿ ಜಾತಿ ಸಮುದಾಯಗಳ ಪ್ರಶ್ನಾತೀತ ನಾಯಕರನ್ನು ಭೇಟಿ ಮಾಡಿದ್ದಾರೆ. ಹೌದು.. ರಾಜ್ಯದ ಇಬ್ಬರು ಧೀಮಂತ ಮುತ್ಸದ್ದಿ ನಾಯಕರಾದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದರೊಂದಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ.  ರಾಜಕೀಯ…

Read More

ಜೂನ್​ನಲ್ಲಿ ಬುಧ ಸಂಚಾರದಿಂದ ಅಪರೂಪದ ಸಂಯೋಜನೆ; 12 ರಾಶಿಗಳ ಮೇಲೆ ಪ್ರಭಾವ ಹೇಗಿರಲಿದೆ? – Kannada News

ಬುಧ ಸಂಚಾರದಿಂದ ಅಪರೂಪದ ಸಂಯೋಜನೆImage Credit source: Pinterest ಜೂನ್ ತಿಂಗಳಿನಲ್ಲಿ ಬುಧನು ಚಂದ್ರ ಮತ್ತು ಶುಕ್ರನ ತ್ರಿಂಶಾಂಶದಲ್ಲಿ ಇರುವುದರಿಂದ, ಈ ತಿಂಗಳು ತಾರ್ಕಿಕ ಆಲೋಚನೆಗಿಂತ ಭಾವನಾತ್ಮಕ ಬುದ್ಧಿವಂತಿಕೆ ಕಲ್ಪನಾ ಶಕ್ತಿ, ಮತ್ತು ಭೌತಿಕ ಸುಖ-ವಿಲಾಸಗಳ ಕಡೆಗೆ ಮನಸ್ಸು ಹೆಚ್ಚು ಹರಿಯುವುದು. ಅದರಲ್ಲಿಯೂ ಚಂದ್ರನ ಅಂಶದಲ್ಲಿಯೇ ಹೆಚ್ಚಿ ಸಮಯವಿರುವ ಕಾರಣ ಅನೇಕ ವೈಪರೀತ್ಯಗಳು ಆಗಲಿವೆ. ಅಪರೂಪದ ಸಂಯೋಜನೆ ಇದಾಗಿರಲಿದೆ. ​ಮೇಷ ರಾಶಿ: ​ಬುಧನ ಈ ಸ್ಥಿತಿಯು ನಿಮಗೆ ಮಿಶ್ರಫಲ ನೀಡಲಿದೆ. ಚಂದ್ರನ ವರ್ಗದ ಪ್ರಭಾವದಿಂದ ಮನಸ್ಸಿನಲ್ಲಿ ಅಸ್ಥಿರತೆ…

Read More

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​: ಯಾರಿಗೆಲ್ಲ ಧನ್ಯವಾದ ಹೇಳಿದ್ರು ನೋಡಿ – Kannada News

ಬೆಂಗಳೂರು, ಜೂನ್​​ 03: ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಡಾ. ಜಿ. ಪರಮೇಶ್ವರ್ ಅವರು, ತಮ್ಮನ್ನು ಈ ಮಹತ್ವದ ಹುದ್ದೆಗೆ ಆಯ್ಕೆ ಮಾಡಿದ ಪಕ್ಷದ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ. ವೇಣುಗೋಪಾಲ್ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದ್ದಾರೆ. ತನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ…

Read More

ಸೌರವ್ ಗಂಗೂಲಿಗೆ ಬಿಗ್ ಶಾಕ್ ನೀಡಿದ ಪಶ್ಚಿಮ ಬಂಗಾಳ ಸರ್ಕಾರ – Kannada News

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಹೀನಾಯವಾಗಿ ಸೋಲಿಸಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸುವೆಂದು ಅಧಿಕಾರಿ ನೇತೃತ್ವದ ಬಿಜೆಪಿ (BJP) ಸರ್ಕಾರ ತನ್ನ ಕ್ರಾಂತಿ ಕಾರಿ ನಿರ್ಧಾರಗಳ ಮೂಲಕ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಗಳನ್ನು ತರಲಾರಂಭಿಸಿದೆ. ಈಗಾಗಲೇ ಆ ರೀತಿಯ ಕಾರ್ಯಗಳು ಶುರುವಾಗಿವೆ. ಇದೀಗ ಮತ್ತೊಂದು ಕೆಲಸಕ್ಕೆ ಕೈಹಾಕಿರುವ ಸರ್ಕಾರ, ವಿಐಪಿಗಳಿಗೆ (VIP) ನೀಡುತ್ತಿದ್ದ ಭದ್ರತೆಗಳಲ್ಲೂ ಬದಲಾವಣೆಗಳನ್ನು ತಂದಿದೆ. ಆ ಪ್ರಕಾರ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರಿಗೆ ಇಷ್ಟು ದಿನ…

Read More

ಆನ್‌ಲೈನ್ ಜೂಜಿಗೆ ಬಿತ್ತು ಬ್ರೇಕ್: 127 ಹೋಸ್ಟಿಂಗ್ ಏಜೆನ್ಸಿಗಳ ಸಹಾಯ ಕೋರಿದ ಕರ್ನಾಟಕ ಸೈಬರ್ ಪೊಲೀಸರು! – Kannada News

ಬೆಂಗಳೂರು, ಜೂನ್ 03: ರಾಜ್ಯದಲ್ಲಿ ದಿನೇ ದಿನೇ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಅಕ್ರಮ ಆನ್‌ಲೈನ್ ಜೂಜು (Online Gambling) ಮತ್ತು ಬೆಟ್ಟಿಂಗ್ ದಂಧೆಯನ್ನು ಬೇರು ಸಮೇತ ಕಿತ್ತೆಸೆಯಲು ಕರ್ನಾಟಕ ಸೈಬರ್ ಕಮಾಂಡ್ ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ. ಇಂಟರ್ನೆಟ್‌ನಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ನೂರಾರು ಜೂಜಿನ ವೆಬ್‌ಸೈಟ್‌ಗಳು ಹಾಗೂ ಆ್ಯಪ್‌ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು (Block) ಮತ್ತು ಅವುಗಳ ಡಿಜಿಟಲ್ ಹೆಜ್ಜೆಗುರುತುಗಳನ್ನು ಅಳಿಸಿಹಾಕಲು ದೇಶ ಹಾಗೂ ವಿದೇಶಗಳ ಒಟ್ಟು 127 ಪ್ರಮುಖ ವೆಬ್ ಹೋಸ್ಟಿಂಗ್ ಏಜೆನ್ಸಿಗಳ ಅಧಿಕೃತ ನೆರವನ್ನು ಕರ್ನಾಟಕ…

Read More

Shiva Puja: ಶಿವಪೂಜೆಯಲ್ಲಿ ಶಂಖ ಏಕೆ ಬಳಸಬಾರದು? ಇದರ ಹಿಂದಿನ ಪೌರಾಣಿಕ ಮತ್ತು ಆಧ್ಯಾತ್ಮಿಕ ರಹಸ್ಯ ಇಲ್ಲಿ ತಿಳಿಯಿರಿ – Kannada News

ಹಿಂದೂ ಧರ್ಮದಲ್ಲಿ ಶಂಖದ ಧ್ವನಿಯನ್ನು ಅತ್ಯಂತ ಮಂಗಳಕರ ಮತ್ತು ಧನಾತ್ಮಕ ಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಆದರೆ, ಶ್ರಾವಣ ಮಾಸವಿರಲಿ ಅಥವಾ ಮಹಾಶಿವರಾತ್ರಿಯಿರಲಿ, ಶಿವನಿಗೆ ಜಲಾಭಿಷೇಕ ಮಾಡುವಾಗ ಅಥವಾ ಪೂಜಿಸುವಾಗ ಶಂಖವನ್ನು ಬಳಸಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಪೌರಾಣಿಕ ಕಾರಣ: ಶಿವಪುರಾಣದಲ್ಲಿ ಉಲ್ಲೇಖವಾಗಿರುವಂತೆ, ಹಿಂದೆ ‘ಶಂಖಚೂಡ’ ಎಂಬ ಪ್ರಬಲ ರಾಕ್ಷಸನಿದ್ದನು. ಆತನ ಕಾಟದಿಂದ ದೇವತೆಗಳೆಲ್ಲರೂ ತತ್ತರಿಸಿದಾಗ, ಭಗವಾನ್ ಶಿವನು ತನ್ನ ತ್ರಿಶೂಲದಿಂದ ಆತನನ್ನು ಸಂಹರಿಸುತ್ತಾನೆ. ಶಂಖಚೂಡನ ದೇಹವು ಭಸ್ಮವಾಗಿ ಸಮುದ್ರದಲ್ಲಿ ಬಿದ್ದಾಗ, ಅದರಿಂದ ‘ಶಂಖ’ ಉದ್ಭವವಾಯಿತು ಎಂದು…

Read More

‘ಪದ್ದಿಗೆ ಈ ಹೀರೋನೇ ನನ್ನ ಮೊದಲ ಆಯ್ಕೆ’; ಮೌನ ಮುರಿದ ನಿರ್ದೇಶಕ – Kannada News

ಜೂನಿಯರ್ ಎನ್​​ಟಿಆರ್​-ರಾಮ್ ಚರಣ್ ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ (Peddi Movie) ಜೂನ್ 4ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ತೆಲುಗು ಭಾಷೆಯ ಜೊತೆಗೆ ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ರಾಮ್ ಚರಣ್ ಹೀರೋ. ಆದರೆ, ಈ ಚಿತ್ರದ ಕಥೆಯನ್ನು ಮೊದಲು ಜೂನಿಯರ್ ಎನ್​​ಟಿಆರ್​​ಗಾಗಿ ಸಿದ್ಧಪಡಿಸಲಾಗಿತ್ತು ಎಂಬ ಮಾತಿದೆ. ಈ ವಿಷಯದ ಕುರಿತು ಬುಚ್ಚಿ ಬಾಬು ಸನಾ ಅವರು ಮಾತನಾಡಿದ್ದಾರೆ. ‘ಪೆದ್ದಿ’ ಸಿನಿಮಾ ಪಕ್ಕಾ ಕ್ರೀಡಾಧಾರಿತ ಚಿತ್ರ….

Read More

ಕರ್ನಾಟಕ ಹೈಕೋರ್ಟ್​​ಗೆ ಜಡ್ಜ್​​ಗಳಾಗಿ 6 ವಕೀಲರ ನೇಮಕಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು – Kannada News

ಕರ್ನಾಟಕ ಹೈಕೋರ್ಟ್​​Image Credit source: dinamalar.com ನವದೆಹಲಿ/ ಬೆಂಗಳೂರು, ಜೂನ್​​ 03: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಆರು ವಕೀಲರನ್ನು ನೇಮಕಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಜೂನ್ 2ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು,  ಶಿಫಾರಸ್ಸು ಮಾಡಿದ ಆರು ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ, ಕರ್ನಾಟಕ ಹೈಕೋರ್ಟ್‌ನ ಕಾರ್ಯನಿರ್ವಹಣಾ ನ್ಯಾಯಮೂರ್ತಿಗಳ ಸಂಖ್ಯೆ 54ಕ್ಕೆ ಏರಿಕೆಯಾಗಲಿದೆ. ಶಿಫಾರಸ್ಸಿನಲ್ಲಿ ಇರುವ ಹೆಸರುಗಳು ಯಾವವು? ರಾಘವೇಂದ್ರ ಸೀತಾರಾಂ ಶ್ರೀವತ್ಸ: ಭಾರತದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ…

Read More

ಅನ್ನ ನೀರಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರೊಳಗೆ ಲಾಕ್ ಆಗಿದ್ದ ಶ್ವಾನವನ್ನು ರಕ್ಷಿಸಿದ ಜನ – Kannada News

ಗುವಾಹಟಿ, ಜೂನ್ 03: ನಾಯಿ(Dog)ಯೊಂದು ಅನ್ನ, ನೀರಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಲಾಕ್​ ಮಾಡಿದ್ದ ಕಾರಿನೊಳಗೆ ಕುಳಿತು ಕಷ್ಟ ಎದುರಿಸಿರುವ ವಿಡಿಯೋ ವೈರಲ್ ಆಗಿದೆ. ಕಾರಿನೊಳಗೆ ನಾಯಿಯನ್ನು ಇರಿಸಿ ಮಾಲೀಕ ಲಾಕ್ ಮಾಡಿಕೊಂಡು ಮಾಡಿಕೊಂಡು ಹೋಗಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಅದು ಕಾರಿನಲ್ಲಿಯೇ ಇತ್ತು. ತಾಪಮಾನ ಏರಿಕೆಯಾಗುತ್ತಿದ್ದಂತೆ ಉಸಿರುಗಟ್ಟುವ ಸ್ಥಿತಿ ಉದ್ಭವವಾಗಿತ್ತು. ಕೂಡಲೇ ಸ್ಥಳೀಯರು ನಾಯಿಯನ್ನು ರಕ್ಷಿಸಿದ್ದಾರೆ. ಸ್ಥಳೀಯ ನಿವಾಸಿಗಳ ಪ್ರಕಾರ, ಬೆಳಗ್ಗೆಯಿಂದಲೇ ನಾಯಿ ಕಾರೊಳಗೆ ಇತ್ತು. ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗಿ ಕಾರಿನೊಳಗಿನ…

Read More