ಕಲಬುರಗಿಯಲ್ಲಿ ದೇಶವಿರೋಧಿ ಕೃತ್ಯ ಎಸಗುತ್ತಿದ್ದ ಮಹಮ್ಮದ್ ಸಮೀರ್ ಬಂಧನ: ತನಿಖೆ ವೇಳೆ ಬೆಚ್ಚಿಬಿದ್ದ ಪೊಲೀಸ್ ಅಧಿಕಾರಿಗಳು – Kannada News | Pakistan Terror Ties: Kalaburagi Police Nab Man for Anti National Digital Activities

ಕಲಬುರಗಿ, ಆ.14: ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಪೇಜ್‌ಗಳು ಹಾಗೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಮಹಮ್ಮದ್ ಸಮೀರ್ (23) ಎಂಬಾತನನ್ನು ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದರು. ಮೂಲತಃ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯವನಾದ ಈತ, ಕಳೆದ ಕೆಲವು ತಿಂಗಳುಗಳಿಂದ ಕಲಬುರಗಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿಯ ಮೊಬೈಲ್ ಫೋನ್ ಪರಿಶೀಲನೆ ನಡೆಸಿದ ವೇಳೆ ಬೆಚ್ಚಿಬೀಳಿಸುವ ರೋಚಕ ಹಾಗೂ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಆರೋಪಿ ಸಮೀರ್ ಭಾರತದಲ್ಲಿದ್ದುಕೊಂಡೇ ವಿದೇಶಿ ಮೂಲದ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ವಹಿಸುತ್ತಿದ್ದ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಿಗೆ ಸೇರಿದ ಅಬೀದ್ ಜಟ್ ಹಾಗೂ ಶಹಜಾದ್ ಭಟ್ಟಿ ಎಂಬ ಹ್ಯಾಂಡ್ಲರ್‌ಗಳ ಜೊತೆ ಈತ ನಿರಂತರ ಸಂಪರ್ಕದಲ್ಲಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈತ ‘ವೆಮನ್ ಮತ್ತು ಜಟ್ 333’ ಹಾಗೂ ‘ರಾಣಾ ಭಾಯ್ 333’ ಸೇರಿದಂತೆ ಹಲವು ದೇಶವಿರೋಧಿ ಮತ್ತು ಮತೀಯ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ವಾಟ್ಸಪ್ ಗ್ರೂಪ್‌ಗಳಲ್ಲಿ ಸಕ್ರಿಯ ಸದಸ್ಯನಾಗಿದ್ದ.

ಪೊಲೀಸರು ಸಮೀರ್‌ನ ಮೊಬೈಲ್ ವಶಪಡಿಸಿಕೊಂಡು ಡಿಜಿಟಲ್ ಫೋರೆನ್ಸಿಕ್ ತನಿಖೆಗೆ ಒಳಪಡಿಸಿದಾಗ, ಭಾರತ ವಿರೋಧಿ ಪ್ರಚೋದನಾತ್ಮಕ ವಿಡಿಯೋಗಳು ಪತ್ತೆಯಾಗಿವೆ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ನಕ್ಷೆಯಿಂದ ಹೊರಗಿಟ್ಟು, ಅದನ್ನು ಪಾಕಿಸ್ತಾನದ ಭೂಭಾಗಕ್ಕೆ ಜೋಡಿಸಿ ಚಿತ್ರಿಸಲಾಗಿರುವ ತಂಟೆಯುಕ್ತ ವಿಡಿಯೋಗಳು ಈತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ದೇಶದ ಅಖಂಡತೆಗೆ ಧಕ್ಕೆ ತರುವ ಮತ್ತು ಸಮಾಜದಲ್ಲಿ ಶಾಂತಿ ಕದಡುವಂತಹ ವಿಷಯಗಳನ್ನು ಈತ ಶೇರ್ ಮಾಡುತ್ತಿದ್ದ.

ಇದನ್ನೂ ಓದಿ: ಪಾಕಿಸ್ತಾನ, ಐಸಿಸ್ ಜತೆ ನಂಟು: ಕಲಬುರಗಿಯಲ್ಲಿ ಇಬ್ಬರು ಶಂಕಿತರು ಪೊಲೀಸ್​ ವಶಕ್ಕೆ

ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌ಡಿ ಅವರ ಮಾರ್ಗದರ್ಶನದಲ್ಲಿ ತಾಂತ್ರಿಕ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಮೂಲಕ ಈ ಜಾಲವನ್ನು ಪತ್ತೆಹಚ್ಚಲಾಗಿದೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 113(3) (ಭಯೋತ್ಪಾದನಾ ಕೃತ್ಯ) ಹಾಗೂ ಸೆಕ್ಷನ್ 197 (ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದ ಕೇಂದ್ರೀಯ ತನಿಖಾ ಸಂಸ್ಥೆಗಳಿಗೂ ಮಾಹಿತಿ ರವಾನಿಸಲಾಗಿದ್ದು, ಹೆಚ್ಚಿನ ವಿಚಾರಣೆ ಕಾಯ್ದಿರಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಮೆರಿಕಾ ಅಮೆರಿಕಾ 2’ ವೇದಿಕೆ ಮೇಲೆ ‘ಯಾವ ಮೋಹನ’ ಹಾಡಿನ ಬಗ್ಗೆ ನಾಗತಿಹಳ್ಳಿ ಮಾತು – Kannada News | America America 2 Press Meet: Director Nagathihalli Chandrashekhar Remembers Yava Mohana Song

‘ಅಮೆರಿಕಾ ಅಮೆರಿಕಾ 2’ ಚಿತ್ರ ಸಿದ್ಧವಾಗಿದೆ. ಅಮೆರಿಕಾ ಅಮೆರಿಕಾ ಹಿಟ್ ಆದ ಬಳಿಕ ತೆರೆಗೆ ಬರುತ್ತಿರುವ ಸಿನಿಮಾ ಇದು. ಈ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರೇ ನಿರ್ದೇಶನ ಮಾಡಿದ್ದಾರೆ. ಅವರು ಮೊದಲ ಚಿತ್ರದ ಹಾಡಿನ ಬಗ್ಗೆ ಮಾತನಾಡಿದ್ದಾರೆ. ‘ಯಾವ ಮೋಹನ ಹಾಡು ಬೇರೆ ಬೇರೆ ಅರ್ಥವನ್ನು ಕೊಡುವ ಗೀತೆ. ಅದನ್ನು ಗೋಪಾಲಕೃಷ್ಣ ಅಡಿಗರು ನನಗೆ ಬೇಕಾಗಬಹುದು ಎಂಬ ರೀತಿ ಬರೆದಿಟ್ಟು ಹೋದಂತೆ ಇದೆ. ನೂರು ಜನ್ಮಕೂ ಹಿಟ್ ಆದಷ್ಟೇ ಯಾವ ಮೋಹನ ಹಾಡು ಹಿಟ್ ಆಗಿತ್ತು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕುದುರೆಮುಖದಲ್ಲಿ ಸ್ವತಂತ್ರ ದಿನಾಚರಣೆ ವಿಶೇಷ ಆಫ್ ರೋಡ್ ಸಾಹಸಯಾತ್ರೆ: ಆಯೋಜಕರಿಗೆ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ – Kannada News | Kudremukh Off Road Drive: Karnataka Govt Warns Organizers Against I Day Adventure Event

ಚಿಕ್ಕಮಗಳೂರು, ಆಗಸ್ಟ್ 14: ಜಿಲ್ಲೆಯ ಕುದುರೆಮುಖದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಆಫ್-ರೋಡ್ ಅಡ್ವೆಂಚರ್ ಡ್ರೈವ್’ (Off-road Adventure Drive) ಸಾಹಸಯಾತ್ರೆಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಈವೆಂಟ್‌ನಿಂದಾಗಿ ಗ್ರಾಮೀಣ ರಸ್ತೆಗಳಿಗೆ ಹಾನಿಯಾದರೂ ಅಥವಾ ಜಲಮೂಲಗಳು ಕಲುಷಿತಗೊಂಡರೂ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈಶ್ವರ್ ಖಂಡ್ರೆ ಅವರು ಲಿಖಿತ ನಿರ್ದೇಶನ

ಬೆಂಗಳೂರು ಮೂಲದ ಸಾಹಸ ಹವ್ಯಾಸಿಗಳ ಗುಂಪೊಂದು ಕುದುರೆಮುಖ ಭಾಗದಲ್ಲಿ ಈ ಆಫ್-ರೋಡ್ ಚಾಲನಾ ಈವೆಂಟ್ ಅನ್ನು ಆಯೋಜಿಸಿದೆ ಎನ್ನಲಾಗಿದೆ. ಮಳೆಯಿಂದಾಗಿ ಈಗಾಗಲೇ ಕೆಸರಾಗಿರುವ ಕಡಿದಾದ ಗುಡ್ಡಗಾಡು ಪ್ರದೇಶಗಳು, ನದಿ ಮತ್ತು ತೊರೆಗಳನ್ನು ದಾಟುವಂತಹ ಸಾಹಸ ಕೃತ್ಯಗಳು ಇದರಲ್ಲಿ ಸೇರಿವೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (CEO) ಸಚಿವ ಈಶ್ವರ್ ಖಂಡ್ರೆ ಅವರು ಲಿಖಿತ ನಿರ್ದೇಶನ ನೀಡಿದ್ದಾರೆ. ಈ ಸಾಹಸ ಕೃತ್ಯವು ಯಾವುದೇ ಕಾರಣಕ್ಕೂ ಪರಿಸರಕ್ಕೆ ಮಾರಕವಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ಪ್ರಮುಖವಾಗಿ ಕುಡಿಯುವ ನೀರಿನ ಮೂಲಗಳಾಗಿರುವ ನದಿಗಳು, ತೊರೆಗಳು ಮತ್ತು ನಾಲೆಗಳಿಗೆ ಇಂತಹ ಆಫ್-ರೋಡ್ ವಾಹನಗಳು ಪ್ರವೇಶಿಸದಂತೆ ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.

ಪರಿಸರ ರಕ್ಷಣೆ ಬಗ್ಗೆ ಸಚಿವರ ಆದೇಶ

ಮಾರ್ಪಾಡು ಮಾಡಲಾದ (Modified) ಮತ್ತು ದೊಡ್ಡ ಆಫ್-ರೋಡ್ ಟೈರ್‌ಗಳನ್ನು ಹೊಂದಿರುವ ಇಂತಹ ವಾಹನಗಳನ್ನು ಮಳೆಯಿಂದ ತೇವಗೊಂಡಿರುವ ಗ್ರಾಮೀಣ ರಸ್ತೆಗಳಲ್ಲಿ ಅತಿ ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಚಲಾಯಿಸುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತವೆ. ಅಷ್ಟೇ ಅಲ್ಲದೆ, ಇದು ತೀವ್ರ ಮಣ್ಣಿನ ಸವೆತಕ್ಕೂ (Soil Erosion) ಕಾರಣವಾಗುತ್ತದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.

ಜೊತೆಗೆ, ಇಂತಹ ಚಟುವಟಿಕೆಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವು ಸ್ಥಳೀಯ ವನ್ಯಜೀವಿಗಳಿಗೆ ತೊಂದರೆ ಉಂಟುಮಾಡಲಿದೆ. ಸಂವಿಧಾನದ ವಿಧಿ 51A(g) ಅನ್ನು ಉಲ್ಲೇಖಿಸಿರುವ ಸಚಿವರು, ಅರಣ್ಯ, ನದಿ, ಸರೋವರ ಹಾಗೂ ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಎಂದು ನೆನಪಿಸಿದ್ದಾರೆ. ಈ ಹಿಂದೆ ಹಾಸನದ ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಇಂತಹ ಆಫ್-ರೋಡಿಂಗ್ ನಡೆಸುತ್ತಿದ್ದವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಜರುಗಿಸಿ, 40ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gemstones: ನೀವು ಧರಿಸಿದ ರತ್ನ ತನ್ನ ಪರಿಣಾಮವನ್ನು ತೋರಿಸಲು ಎಷ್ಟು ದಿನ ತೆಗೆದುಕೊಳ್ಳುತ್ತದೆ ಗೊತ್ತೇ? – Kannada News | Astrological Gemstones: How Long Before Navaratna Effects Start?

ವೈದಿಕ ಜ್ಯೋತಿಷ್ಯದಲ್ಲಿ ಮಾನವ ನಾಗರಿಕತೆಯ ಆರಂಭದಿಂದಲೂ ರತ್ನಗಳಿಗೆ ಅತ್ಯಂತ ಪ್ರಮುಖ ಹಾಗೂ ಪವಿತ್ರವಾದ ಸ್ಥಾನ ನೀಡಲಾಗಿದೆ. ರತ್ನಗಳು ಕೇವಲ ಆಭರಣಗಳಿಗಾಗಿ ಬಳಸುವ ಸುಂದರವಾದ, ಹೊಳೆಯುವ ಕಲ್ಲುಗಳಷ್ಟೇ ಅಲ್ಲ; ಅವು ಅಪಾರವಾದ ಬ್ರಹ್ಮಾಂಡದ ಶಕ್ತಿಯನ್ನು ಹೊಂದಿರುವ ಶಕ್ತಿ ಮೂಲಗಳು ಎಂದು ನಂಬಲಾಗಿದೆ. ನಮ್ಮ ಜೀವನದ ಮೇಲೆ ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಒಂಬತ್ತು ಗ್ರಹಗಳು ಆಳವಾದ ಪ್ರಭಾವ ಬೀರುತ್ತವೆ. ಈ ಒಂಬತ್ತು ಗ್ರಹಗಳನ್ನು ಪ್ರತಿನಿಧಿಸುವ ‘ನವರತ್ನಗಳು’ ಸರಿಯಾದ ಬೆರಳಿಗೆ ಧರಿಸಿದಾಗ, ಧರಿಸಿದವರನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಿ, ಅವರಲ್ಲಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತವೆ.

ಆದರೆ, ರತ್ನವನ್ನು ಧರಿಸಿದ ತಕ್ಷಣವೇ ಅದರ ಸಂಪೂರ್ಣ ಫಲಿತಾಂಶ ಸಿಗುತ್ತದೆಯೇ ಅಥವಾ ಪ್ರತಿಯೊಂದು ರತ್ನವೂ ತನ್ನ ಪ್ರಭಾವವನ್ನು ತೋರಿಸಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆಯೇ ಎಂಬ ಗೊಂದಲ ಹಲವರಲ್ಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರತ್ನ ತನ್ನ ಪರಿಣಾಮವನ್ನು ತೋರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಶನಿ, ಕೇತು ಮತ್ತು ಚಂದ್ರನ ರತ್ನಗಳು (ಕ್ಷಿಪ್ರ ಪರಿಣಾಮ):

ಕೆಲವು ರತ್ನಗಳು ಧರಿಸಿದ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ತಮ್ಮ ಪ್ರಭಾವವನ್ನು ತೋರಿಸಲು ಪ್ರಾರಂಭಿಸುತ್ತವೆ. ಶನಿ ಗ್ರಹಕ್ಕೆ ಸಂಬಂಧಿಸಿದ ನೀಲಮಣಿ ಅತ್ಯಂತ ವೇಗವಾಗಿ ಅಂದರೆ ಕೇವಲ 24 ರಿಂದ 72 ಗಂಟೆಗಳಲ್ಲಿ ತನ್ನ ಪರಿಣಾಮವನ್ನು ತೋರಿಸುತ್ತದೆ. ಅದೇ ರೀತಿ ಕೇತುವಿನ ರತ್ನವಾದ ಬೆಕ್ಕಿನ ಕಣ್ಣು (Cat’s Eye) 24 ರಿಂದ 48 ಗಂಟೆಗಳಲ್ಲಿ ತನ್ನ ಶಕ್ತಿಯನ್ನು ಅನುಭವಕ್ಕೆ ತರುತ್ತದೆ. ಇನ್ನು ಮನಸ್ಸಿನ ಕಾರಕನಾದ ಚಂದ್ರನಿಗೆ ಸಂಬಂಧಿಸಿದ ಮುತ್ತು ತನ್ನ ಪ್ರಭಾವ ಬೀರಿ ಫಲಿತಾಂಶ ನೀಡಲು 2 ರಿಂದ 3 ದಿನಗಳ ಕಾಲ ತೆಗೆದುಕೊಳ್ಳುತ್ತದೆ.

ಬುಧ ಮತ್ತು ಮಂಗಳನ ರತ್ನಗಳು (ಮಧ್ಯಮ ಸಮಯ):

ಬುಧ ಗ್ರಹದ ಪ್ರಭಾವ ಹೆಚ್ಚಿಸುವ ಪಚ್ಚೆ (Emerald) ರತ್ನವು ತನ್ನ ಕಾರ್ಯವನ್ನು ಪ್ರಾರಂಭಿಸಲು ಸಾಮಾನ್ಯವಾಗಿ 5 ರಿಂದ 7 ದಿನಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿ ಧೈರ್ಯ ಮತ್ತು ಶೌರ್ಯದ ಸಂಕೇತವಾದ ಮಂಗಳ ಗ್ರಹಕ್ಕೆ ಸಂಬಂಧಿಸಿದ ಹವಳ (Coral) ರತ್ನವು ಧರಿಸಿದ 7 ರಿಂದ 10 ದಿನಗಳ ಒಳಗೆ ತನ್ನ ಜ್ಯೋತಿಷ್ಯ ಪರಿಣಾಮಗಳನ್ನು ತೋರಿಸಲು ಪ್ರಾರಂಭಿಸುತ್ತದೆ.

ಗುರು, ಸೂರ್ಯ, ಶುಕ್ರ ಮತ್ತು ರಾಹುವಿನ ರತ್ನಗಳು (ದೀರ್ಘಾವಧಿ):

ಕೆಲವು ರತ್ನಗಳ ಸಕಾರಾತ್ಮಕ ಪರಿಣಾಮವನ್ನು ಸರಿಯಾಗಿ ಗ್ರಹಿಸಲು ಕನಿಷ್ಠ ಒಂದು ವಾರದಿಂದ ಹದಿನೈದು ದಿನಗಳ ಸಮಯ ಬೇಕಾಗುತ್ತದೆ. ಜ್ಞಾನ ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದ ಪುಷ್ಯರಾಗ (Sapphire) ಹಾಗೂ ಆತ್ಮಕಾರಕ ಸೂರ್ಯನ ರತ್ನವಾದ ಮಾಣಿಕ್ಯ (Ruby) ತಮ್ಮ ಪರಿಣಾಮ ತೋರಿಸಲು 7 ರಿಂದ 15 ದಿನಗಳನ್ನು ತೆಗೆದುಕೊಳ್ಳುತ್ತವೆ. ಶುಕ್ರ ಗ್ರಹದ ರತ್ನವಾದ ವಜ್ರ (Diamond) ಮತ್ತು ರಾಹು ಗ್ರಹಕ್ಕೆ ಸಂಬಂಧಿಸಿದ ಗೋಮೇಧಿಕ (Hessonite) ರತ್ನಗಳು ತಮ್ಮ ಪೂರ್ಣ ಪ್ರಮಾಣದ ಸಕಾರಾತ್ಮಕ ಪ್ರಭಾವವನ್ನು ತೋರಿಸಲು 10 ರಿಂದ 15 ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ರತ್ನವು ನಿಮ್ಮ ಮೇಲೆ ಕೆಲಸ ಮಾಡುತ್ತಿದೆ ಎಂದು ತಿಳಿಯುವುದು ಹೇಗೆ?

ನೀವು ಜ್ಯೋತಿಷಿಯ ಸರಿಯಾದ ಸಲಹೆಯ ಮೇರೆಗೆ ರತ್ನವನ್ನು ಧರಿಸಿದಾಗ, ಅದು ನಿಮ್ಮ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂಬುದನ್ನು ಕೆಲವು ಪ್ರತ್ಯಕ್ಷ ಚಿಹ್ನೆಗಳ ಮೂಲಕ ಗುರುತಿಸಬಹುದು. ಮೊದಲನೆಯದಾಗಿ, ನಿಮ್ಮ ಮನಸ್ಸು ಶಾಂತವಾಗಲು ಪ್ರಾರಂಭಿಸುತ್ತದೆ ಮತ್ತು ಅನಗತ್ಯ ಒತ್ತಡ ಹಾಗೂ ಆತಂಕಗಳು ಕಡಿಮೆಯಾಗುತ್ತವೆ. ಧನಾತ್ಮಕ ಶಕ್ತಿಯ ಪ್ರಭಾವದಿಂದಾಗಿ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ.

ಇದರ ಜೊತೆಗೆ, ಯಾವುದೇ ಕಷ್ಟಕರ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ಸುಲಭವೆನಿಸುತ್ತದೆ. ನಿಮ್ಮ ಯೋಚಿಸುವ, ಅರ್ಥಮಾಡಿಕೊಳ್ಳುವ ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯದಲ್ಲಿ ಗಮನಾರ್ಹವಾದ ಧನಾತ್ಮಕ ಬದಲಾವಣೆಗಳು ಕಂಡುಬಂದರೆ, ಆ ರತ್ನವು ತನ್ನ ಸಕಾರಾತ್ಮಕ ಶಕ್ತಿಯನ್ನು ನೀಡಲು ಪ್ರಾರಂಭಿಸಿದೆ ಎಂದರ್ಥ.

ಪ್ರಮುಖ ಸೂಚನೆ: ರತ್ನಗಳು ಅತ್ಯಂತ ಶಕ್ತಿಶಾಲಿಯಾಗಿರುವುದರಿಂದ, ಅರ್ಹ ಜ್ಯೋತಿಷಿಗಳ ಸಲಹೆ ಮತ್ತು ಜಾತಕ ವಿಶ್ಲೇಷಣೆ ಇಲ್ಲದೆ ಎಂದಿಗೂ ಯಾವುದೇ ರತ್ನವನ್ನು ಧರಿಸಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:00 am, Fri, 14 August 26

Source link

ನೀರಿನ ಹಕ್ಕು ಕಸಿದರೆ ಸುಮ್ಮನಿರಲ್ಲ: ಭಾರತದ ವಿರುದ್ಧ ಮತ್ತೆ ವಿಷ ಕಾರಿದ ಶೆಹಬಾಜ್ ಷರೀಫ್ – Kannada News | Indus Waters Treaty Dispute: Pakistan Threatens India Amidst IWT Status Row

ಇಸ್ಲಾಮಾಬಾದ್, ಆ.14: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ (Indus Waters Treaty) ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾರತಕ್ಕೆ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. “ಪಾಕಿಸ್ತಾನಕ್ಕೆ ಸೇರಬೇಕಾದ ನೀರಿನ ಪ್ರತಿಯೊಂದು ಹನಿಯೂ ನಮಗೆ ‘ರೆಡ್ ಲೈನ್’ಿದ್ದಂತೆ. ನಮ್ಮ ನೀರಿನ ಹಕ್ಕನ್ನು ಕಸಿಯಲು ಯತ್ನಿಸಿದರೆ ನೇರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.

ಗುರುವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷರೀಫ್, ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ. ಆದರೆ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನ ನಡೆದರೂ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದಾರೆ. 2025ರ ಮೇ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿದ್ದ ಸೀಜ್‌ಫೈರ್ (ಯುದ್ಧವಿರಾಮ) ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶೆಹಬಾಜ್ ಷರೀಫ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಜತಾಂತ್ರಿಕ ಮಾತುಕತೆಗಳ ನಂತರ ಭಾರತ ಹಾಗೂ ಪಾಕಿಸ್ತಾನ ತಕ್ಷಣದ ಯುದ್ಧವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮೇ 2025ರಲ್ಲಿ ಟ್ರಂಪ್ ಘೋಷಿಸಿದ್ದರು. ಅಮೆರಿಕದ ನಾಯಕತ್ವ ಮತ್ತು ಸಕ್ರಿಯ ಪಾತ್ರಕ್ಕೆ ಷರೀಫ್ ಧನ್ಯವಾದ ಅರ್ಪಿಸಿದ್ದರು. ಆದರೆ ಭಾರತವು ಮೂರನೇ ವ್ಯಕ್ತಿ ಅಥವಾ ದೇಶದ ಮಧ್ಯಸ್ಥಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಎರಡೂ ದೇಶಗಳ ಮಿಲಿಟರಿ ಸೇನೆಗಳ ನಡುವಿನ ನೇರ ಮಾತುಕತೆಯ ಮೂಲಕವೇ ಯುದ್ಧವಿರಾಮ ತೀರ್ಮಾನಕ್ಕೆ ಬರಲಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಜೈಲಿನಲ್ಲಿದ್ದ ಇಮ್ರಾನ್ ಖಾನ್ ನಿಜವಾಗಿಯೂ ಸತ್ತಿದ್ದಾರಾ? ಕೊನೆಗೂ ಮೌನ ಮುರಿದ ಪಾಕಿಸ್ತಾನ

ಕಾಶ್ಮೀರ ವಿಷಯ ಹಾಗೂ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಷರೀಫ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು 2025ರ ಏಪ್ರಿಲ್‌ನಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ತಡೆಹಿಡಿಯಲಾಗಿದೆ (in abeyance) ಎಂದು ಅಧಿಕೃತವಾಗಿ ಪ್ರಕಟಿಸಿತ್ತು. ಆದರೆ ಪಾಕಿಸ್ತಾನವು ಈ ಒಪ್ಪಂದವು ಕಾನೂನುಬದ್ಧವಾಗಿ ಇಂದಿಗೂ ಜಾರಿಯಲ್ಲಿದೆ ಎಂದು ವಾದಿಸುತ್ತಿದ್ದು, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯವನ್ನು ಎತ್ತುತ್ತಲೇ ಬಂದಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Jupiter’s Full Power: ಗುರುವಿನ ಪೂರ್ಣಬಲ, ಈ ಐದು ರಾಶಿಗಳಿಗೆ ಅನೇಕ ಶುಭಗಳ ಸಮ್ಮಿಲನ… – Kannada News | Jupiter’s Full Power: 5 Zodiac Signs Experience Auspicious Blessings and Good Fortune

ಗುರುವು ನವಗ್ರಹರುಗಳಲ್ಲಿ ಅತ್ಯಂತ ಶ್ರೇಷ್ಠ ಗ್ರಹ. ಶುಭ ಗ್ರಹವೆಂದು ಪ್ರಸಿದ್ಧಿ ಪಡೆದಿದೆ. ಗುರುವಿನ ದೃಷ್ಟಿ ಅಥವಾ ಯೋಗ ಬಂದರೆ ಅಶುಭವು ನಾಶವಾಗಿ ಶುಭವಾಗಲಿದೆ. ಅಂತಹ ಶುಭಗ್ರಹ ಸದ್ಯ ಉಚ್ಚಸ್ಥಾನದಲ್ಲಿದ್ದು ಪೂರ್ಣ ಬಲವುಳ್ಳವನಾಗಿದ್ದಾನೆ. ಹೀಗಿರುವಾಗ ಶುಭಫಲಗಳೇ ಈ ತಿಂಗಳಲ್ಲಿ ಇರಲಿದೆ.

​ಉಚ್ಚ ಗುರುವಿನ ಸ್ಥಾನ:

ಧನು ಲಗ್ನಕ್ಕೆ ಅಧಿಪತಿಯೇ ಬೃಹಸ್ಪತಿ ಲಗ್ನಾಧಿಪತಿಯು ಧರ್ಮ, ಜ್ಞಾನ, ವ್ಯಕ್ತಿತ್ವ, ಆರೋಗ್ಯ ಮತ್ತು ಆತ್ಮವಿಶ್ವಾಸದ ಸಂಕೇತ. ಕರ್ಕಾಟಕ, ವೃಶ್ಚಿಕ, ಧನು, ಮಕರ, ಮೀನ ಈ ರಾಶಿಯವರಿಗೆ ಶುಭದಾಯಕವಾಗಲಿದೆ…

​ಗುರುವು ಕರ್ಕಾಟಕ ರಾಶಿಯಲ್ಲಿ ಉಚ್ಚನಾಗಿದ್ದಾನೆ. ೮ನೇ ರಾಶಿಯಲ್ಲಿ ಆಯುಷ್ಯ, ಗೂಢ ವಿದ್ಯೆ, ಸಂಶೋಧನೆ, ಹಠಾತ್ ಲಾಭ ಅಥವಾ ಹಠಾತ್ ಪರಿವರ್ತನೆಯ ಸ್ಥಾನ. ೮ನೇ ಮನೆಯು ಸಾಧಾರಣವಾಗಿ ದುಃಸ್ಥಾನವೆಂದು ಪರಿಗಣಿತವಾದರೂ, ಲಗ್ನಾಧಿಪತಿಯೇ ಅಲ್ಲಿ ಉಚ್ಛನಾಗಿರುವುದರಿಂದ ಕೆಟ್ಟ ಫಲಗಳಿಗಿಂತ ಶುಭ ಫಲಗಳೇ ಹೆಚ್ಚಿರುತ್ತವೆ. ಜಾತಕರಿಗೆ ಅದ್ಭುತವಾದ ಸಹಜ ಜ್ಞಾನ, ರಹಸ್ಯ ಶಾಸ್ತ್ರಗಳಲ್ಲಿ ಜ್ಯೋತಿಷ್ಯ, ವೇದ, ಮಂತ್ರ ಶಾಸ್ತ್ರ, ಸಂಶೋಧನೆ ಅಪಾರ ಆಸಕ್ತಿ ಮತ್ತು ಪಾಂಡಿತ್ಯ ಸಿದ್ಧಿಸುತ್ತದೆ. ಹಠಾತ್ ಧನಲಾಭ ಅಥವಾ ಪಿತ್ರಾರ್ಜಿತ ಆಸ್ತಿ ಲಭಿಸುವ ಯೋಗವೂ ಉಂಟಾಗುತ್ತದೆ.

​ಗುರುವು ಕರ್ಕಾಟಕದಿಂದ ಮೂರು ಪ್ರಮುಖ ಭಾವಗಳ ಮೇಲೆ ತನ್ನ ಶುಭ ದೃಷ್ಟಿಯನ್ನು ಬೀರುತ್ತಿದ್ದಾನೆ. ೧೨ನೇ ಮನೆ ಮೋಕ್ಷ ಮತ್ತು ವಿದೇಶಿ ಪ್ರಯಾಣದ ಮನೆ. ಗುರುವಿನ ಶುಭ ದೃಷ್ಟಿಯಿಂದಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ, ದೇವತಾ ಕಾರ್ಯಗಳಿಗೆ ಮತ್ತು ದಾನ-ಧರ್ಮಗಳಿಗೆ ಹಣ ವಿನಿಯೋಗವಾಗುತ್ತದೆ. ಉದ್ಯೋಗ, ಶಿಕ್ಷಣ ಅಥವಾ ತೀರ್ಥಯಾತ್ರೆಗಾಗಿ ದೂರದ ಊರುಗಳಿಗೆ ಅಥವಾ ವಿದೇಶಕ್ಕೆ ಪ್ರಯಾಣಿಸುವ ಅವಕಾಶ ಒದಗಿಬರುತ್ತದೆ.

​೨ನೇ ಭಾವಕ್ಕೆ ಗುರುವಿನ ನೇರ ದೃಷ್ಟಿ ಇರುವುದರಿಂದ ಆರ್ಥಿಕ ಮುಗ್ಗಟ್ಟುಗಳು ನಿವಾರಣೆಯಾಗುತ್ತವೆ. ಹಣ ಉಳಿತಾಯ ಮಾಡುವ ಯೋಜನೆಗಳು ಯಶಸ್ವಿಯಾಗುತ್ತವೆ. ಜಾತಕರ ಮಾತಿನಲ್ಲಿ ಗಾಂಭೀರ್ಯ, ಸತ್ಯಸಂಧತೆ ಮತ್ತು ಗೌರವ ಹೆಚ್ಚಾಗುತ್ತದೆ. ನಿಮ್ಮ ಸಲಹೆಗಳಿಗೆ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಕುಟುಂಬದಲ್ಲಿ ಇದ್ದ ಮನಸ್ತಾಪಗಳು ದೂರವಾಗಿ ಶಾಂತಿ ನೆಲೆಸುತ್ತದೆ.

​ಗುರುವಿನ ಶುಭ ದೃಷ್ಟಿ ಚಂದ್ರನ ಮೇಲೆ ಬೀಳುವುದರಿಂದ ಮಾನಸಿಕ ಒತ್ತಡ, ಆತಂಕಗಳು ನಿವಾರಣೆಯಾಗಿ ಮನಸ್ಸಿಗೆ ಶಾಂತಿ ಲಭಿಸುತ್ತದೆ. ತಾಯಿಯ ಆರೋಗ್ಯ ಸುಧಾರಿಸುತ್ತದೆ. ಶನಿ-ಗುರುಗಳ ಈ ಸಂಬಂಧವು ವೃತ್ತಿಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ. ಆಸ್ತಿ, ಜಮೀನು ಅಥವಾ ಹೊಸ ವಾಹನ/ಮನೆ ಖರೀದಿ ಮಾಡುವ ಕನಸು ನನಸಾಗುತ್ತದೆ. ಕಠಿಣ ಪರಿಶ್ರಮಕ್ಕೆ ಸೂಕ್ತ ಫಲ ಮತ್ತು ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ.

ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ

​​ಮಂಗಳನು ೫ನೇ ಮತ್ತು ೧೨ನೇ ಭಾವಾಧಿಪತಿಯಾಗಿದ್ದು, ಜ್ಞಾನ ಮತ್ತು ಶಕ್ತಿಯ ಕಾರಕ. ಈ ಸಪ್ತಮ ದೃಷ್ಟಿ ಸಂಬಂಧವು ಜಾತಕರಿಗೆ ಅಸಾಧಾರಣ ನಾಯಕತ್ವ ಗುಣ, ಧೈರ್ಯ ಮತ್ತು ತಾಂತ್ರಿಕ/ಆಡಳಿತಾತ್ಮಕ ಕ್ಷೇತ್ರದಲ್ಲಿ ಯಶಸ್ಸನ್ನು ನೀಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರುವವರಿಗೆ ಅಥವಾ ಉನ್ನತ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಇದು ಅತ್ಯಂತ ಅನುಕೂಲಕರ ಸಮಯ.

ನಾಯಕತ್ವದ ಜವಾಬ್ದಾರಿಗಳು ಸಿಗಲಿವೆ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಮತ್ತು ಸಹೋದ್ಯೋಗಿಗಳ ಸಂಪೂರ್ಣ ಸಹಕಾರ ದೊರೆಯುತ್ತದೆ. ಬಡ್ತಿ ಹಾಗೂ ಆದಾಯ ಹೆಚ್ಚಳ ಸಾಧ್ಯ. ಉನ್ನತ ಶಿಕ್ಷಣ, ಪರೀಕ್ಷೆಗಳು ಹಾಗೂ ಸಂಶೋಧನಾ ಕ್ಷೇತ್ರದಲ್ಲಿದ್ದವರಿಗೆ ಅತ್ಯುತ್ತಮ ಫಲಿತಾಂಶ ಸಿಗಲಿದೆ.

ಲಗ್ನಾಧಿಪತಿ ಉಚ್ಛನಾಗಿರುವುದರಿಂದ ದೈಹಿಕ ಬಲ ಹೆಚ್ಚುತ್ತದೆ. ಆದರೆ ೮ನೇ ಮನೆಯಲ್ಲಿ ಗುರು ಇರುವುದರಿಂದ ಜೀರ್ಣಾಂಗ ವ್ಯೂಹ ಅಥವಾ ಯಕೃತ್ತಿಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸುವುದು ಒಳಿತು.

​ಪರಿಹಾರ :

​ಗುರುದಶೆಯ ಗರಿಷ್ಠ ಶುಭ ಫಲಗಳನ್ನು ಪಡೆಯಲು ಈ ಕೆಳಗಿನ ಸರಳ ದೈವಿಕ ಕ್ರಮಗಳು ಸಹಕಾರಿ. ಪ್ರತಿದಿನ ಅಥವಾ ಪ್ರತಿ ಗುರುವಾರ ವಿಷ್ಣು ಸಹಸ್ರನಾಮ ಅಥವಾ ದತ್ತಾತ್ರೇಯ ಸ್ತೋತ್ರವನ್ನು ಜಪಿಸುವುದು. ಗುರುವಾರದಂದು ಹಳದಿ ಬಣ್ಣದ ಕಡಲೆ ಬೇಳೆ, ಬಾಳೆಹಣ್ಣು ಅಥವಾ ಹಳದಿ ವಸ್ತ್ರವನ್ನು ಬ್ರಾಹ್ಮಣರಿಗೆ/ದೇವಸ್ಥಾನಕ್ಕೆ ದಾನ ಮಾಡುವುದು. ಹಸುಗಳಿಗೆ ಹಸಿರು ಹುಲ್ಲು ಅಥವಾ ಬೆಲ್ಲ-ಅನ್ನ ನೀಡುವುದು ಶುಭ ತರುತ್ತದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಖ್ಯಾತಿಯ ಸೂರಜ್ ‘ಪವಿತ್ರ ಬಂಧನ’ ಧಾರಾವಾಹಿ ಪ್ರಸಾರದ ಸಮಯ ಬದಲಾವಣೆ – Kannada News | Big Boss Fame Suraj Starrer Pavitra Bandhana Serial Gets New Time Slot On Colors Kannada!  

ಕುಟುಂಬದ ಬಾಂಧವ್ಯ, ಪ್ರೀತಿ ಹಾಗೂ ತ್ಯಾಗದ ಭಾವನಾತ್ಮಕ ಕಥಾಹಂದರ ಹೊಂದಿರುವ ಕಲರ್ಸ್ ಕನ್ನಡ ವಾಹಿನಿಯ ‘ಪವಿತ್ರ ಬಂಧನ’ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಬಿಗ್ ಬಾಸ್ ಸ್ಪರ್ಧಿ ಸೂರಜ್ ನಾಯಕನಾಗಿ ನಟಿಸುತ್ತಿರುವ ಈ ಜನಪ್ರಿಯ ಧಾರಾವಾಹಿ ಇನ್ಮುಂದೆ ಹೊಸ ಸಮಯದಲ್ಲಿ ಪ್ರಸಾರ ಕಾಣಲಿದೆ. ಬರುವ ಸೋಮವಾರದಿಂದ ‘ಪವಿತ್ರ ಬಂಧನ’ ಧಾರಾವಾಹಿಯು ಪ್ರತಿದಿನ ಸಂಜೆ 6:30ಕ್ಕೆ ಪ್ರಸಾರವಾಗಲಿದೆ ಎಂದು ವಾಹಿನಿ ಬಳಗ ಅಧಿಕೃತವಾಗಿ ತಿಳಿಸಿದೆ.

ಬಂಧದಲ್ಲಿ ಹೊಸ ತಿರುವು:

ಪವಿತ್ರಾಳ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಆಕೆಯ ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ. ಪ್ರೀತಿಯ ಸುಂದರ ಕನಸು ಕಾಣುತ್ತಿದ್ದ ಆಕೆ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ದೇವದತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಅನಿವಾರ್ಯತೆ ಎದುರಾಗುತ್ತದೆ. ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮುನ್ನವೇ ಮದುವೆಯಾಗುವ ಈ ಜೋಡಿಯ ಜೀವನ ಮುಂದಕ್ಕೆ ಯಾವ ತಿರುವು ಪಡೆಯಲಿದೆ ಎನ್ನುವುದೇ ಧಾರಾವಾಹಿಯ ಮುಖ್ಯ ಕಥಾವಸ್ತು.

ಈ ಅನಿರೀಕ್ಷಿತ ಪವಿತ್ರ ಬಂಧನ ಪ್ರೀತಿಯಾಗಿ ಬದಲಾಗುತ್ತದೆಯೇ ಅಥವಾ ಹಳೆಯ ಗೊಂದಲಗಳು ಇವರ ನಡುವೆ ಮತ್ತೆ ಬಿರುಕು ಮೂಡಿಸುತ್ತವೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ. ಸೂರಜ್ ನಟನೆಯ ಈ ಧಾರಾವಾಹಿ ಹೊಸ ಸಮಯಕ್ಕೆ ಕಾಲಿಡುತ್ತಿದ್ದು, ಕಿರುತೆರೆ ವೀಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ: ‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್ 

ಕಥಾ ನಾಯಕ ಹಾಗೂ ನಾಯಕಿ ನಡುವಿನ ಪ್ರೀತಿ, ಪ್ರೇಮ ಹಾಗೂ ರೊಮ್ಯಾನ್ಸ್ ಧಾರಾವಾಹಿಯ ಹೈಲೈಟ್ ಆಗಿದೆ. ‘ಬಿಗ್ ಬಾಸ್​’ನಲ್ಲಿ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಸೂರಜ್ ಅವರು ಸಾಕಷ್ಟು ಹವಾ ಸೃಷ್ಟಿ ಮಾಡಿದರು. ಅವರ ಖ್ಯಾತಿ ನೋಡಿ ಈ ರೊಮ್ಯಾಂಟಿಕ್ ಧಾರಾವಾಹಿಯ ನಾಯಕನ ಪಟ್ಟವನ್ನು ಅವರಿಗೆ ನೀಡಲಾಯಿತು. ಬಿಗ್ ಬಾಸ್ ಆಗಮನದ ಹಿನ್ನೆಲೆಯಲ್ಲಿ ಈಗ ಹೊಸ ಸಮಯದೊಂದಿಗೆ ಧಾರಾವಾಹಿ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಾನಿ ಕೃಷ್ಣ ಬೈಕ್ ಟ್ಯಾಕ್ಸಿ ಅಪಘಾತ: ಯುವತಿಯ ವೈದ್ಯಕೀಯ ವೆಚ್ಚ ಭರಿಸಲು ಮುಂದಾದ ರ‍್ಯಾಪಿಡೋ! – Kannada News | Bengaluru Rapido Accident: Company Agrees to Pay Full Medical Expenses of Rs 20 Lakh to Bedridden Customer

ಬೆಂಗಳೂರು, ಆಗಸ್ಟ್ 14: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಪ್ರಯಾಣದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಿಂದಾಗಿ ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರಿನ 32 ವರ್ಷದ ಇಂಟೀರಿಯರ್ ಡಿಸೈನರ್ ಸಾನಿ ಕೃಷ್ಣ ಅವರ ಹೋರಾಟಕ್ಕೆ ಕೊನೆಗೂ ಭಾಗಶಃ ಯಶಸ್ಸು ಸಿಕ್ಕಿದೆ. ಖಾಸಗಿ ಸಾರಿಗೆ ಆಪ್ ರ‍್ಯಾಪಿಡೋ (Rapido), ಸಾನಿ ಅವರ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ತನ್ನ ವಿಮಾ ಪಾಲುದಾರರ ಮೂಲಕ ಪಾವತಿಸಲು ಒಪ್ಪಿಕೊಂಡಿದೆ.

ನಡೆದಿದ್ದೇನು?

ಜೂನ್ 17 ರಂದು ಸಾನಿ ಕೃಷ್ಣ ಅವರು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಮೂಲಕ ಬೈರಸಂದ್ರದಿಂದ ಡೊಮ್ಲೂರ್‌ನಲ್ಲಿರುವ ತಮ್ಮ ಕಚೇರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ವೇಳೆ ಅವರ ಮೇಲೆ ಟ್ರ್ಯಾಕ್ಟರ್ ಹರಿದ ಪರಿಣಾಮ ಮುಖದ ಮೂಳೆಗಳು ಮುರಿದು, ಹಲ್ಲುಗಳು ಉದುರಿದ್ದವು ಮತ್ತು 7 ಪಕ್ಕೆಲುಬುಗಳಿಗೆ ತೀವ್ರ ಪೆಟ್ಟಾಗಿತ್ತು. ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದ ಸಾನಿ ಅವರ ಚಿಕಿತ್ಸಾ ವೆಚ್ಚ ಬರೋಬ್ಬರಿ 20 ಲಕ್ಷ ರೂಪಾಯಿ ದಾಟಿತ್ತು.

ಸಾಮಾನ್ಯವಾಗಿ ರ‍್ಯಾಪಿಡೋ ಕಂಪನಿಯ ಗ್ರಾಹಕರ ವಿಮಾ ಪಾಲಿಸಿಯ ಗರಿಷ್ಠ ಮಿತಿ ಕೇವಲ 1 ಲಕ್ಷ ರೂಪಾಯಿ ಆಗಿರುತ್ತದೆ. ಹೀಗಾಗಿ ಆರಂಭದಲ್ಲಿ ಕಂಪನಿಯು ಸಂಪೂರ್ಣ ವೆಚ್ಚ ಭರಿಸಲು ನಿರಾಕರಿಸಿತ್ತು. ಆದರೆ, ಆಗಸ್ಟ್ 6 ರಂದು ಸಾನಿ ಅವರ ಪರ ವಕೀಲರು ರ‍್ಯಾಪಿಡೋ ಸಂಸ್ಥೆಗೆ ಕಾನೂನು ನೋಟಿಸ್ ಕಳುಹಿಸಿ, ಬೇಷರತ್ ಕ್ಷಮೆಯಾಚನೆ ಹಾಗೂ ಸಂಪೂರ್ಣ ಪರಿಹಾರಕ್ಕೆ ಒತ್ತಾಯಿಸಿದ್ದರು.

ವೈದ್ಯಕೀಯ ವೆಚ್ಚ ಭರಿಸಲು ಒಪ್ಪಿದ ರ‍್ಯಾಪಿಡೋ

ಪ್ರಕರಣದ ತೀವ್ರತೆಯನ್ನು ಅರಿತ ರ‍್ಯಾಪಿಡೋ, ಇದೊಂದು ಅಸಾಮಾನ್ಯ ಮತ್ತು ಅತಿ ಕಠಿಣ ಪರಿಸ್ಥಿತಿಯಾದ್ದರಿಂದ ತನ್ನ ನಿಯಮಿತ ವಿಮಾ ಮಿತಿಯನ್ನು (ಕ್ಯಾಪ್) ಬದಿಗಿಟ್ಟು, ಅಗತ್ಯ ದಾಖಲೆಗಳ ಪರಿಶೀಲನೆಯ ನಂತರ ಸಾನಿ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ ಇದು ನ್ಯಾಯನಾ? ನಮ್ಮ ಜೀವಕ್ಕೆ ಬೆಲೆ ಅನ್ನೋದೆ ಇಲ್ವಾ?: ರ್ಯಾಪಿಡೋ ಅಪಘಾತದಿಂದ ಆದ ನರಕಯಾತನೆ ಬಿಚ್ಚಿಟ್ಟ ಸಾನಿ ಕೃಷ್ಣ!

ಈ ನಿರ್ಧಾರದಿಂದ ಸಾನಿ ಕುಟುಂಬಕ್ಕೆ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ಸಿಕ್ಕಂತಾಗಿದೆ. ಆದಾಗ್ಯೂ, “ರ‍್ಯಾಪಿಡೋ ಸಂಸ್ಥೆಯು ಅಧಿಕೃತವಾಗಿ ಈ ನಿರ್ಧಾರವನ್ನು ನನಗೆ ಇನ್ನು ಲಿಖಿತ ರೂಪದಲ್ಲಿ ತಿಳಿಸಿಲ್ಲ ಹಾಗೂ ಅಪಘಾತದ ಜವಾಬ್ದಾರಿ ಹೊತ್ತು ಈವರೆಗೆ ಕ್ಷಮೆಯಾಚಿಸಿಲ್ಲ. ಅಲ್ಲಿಯವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ” ಎಂದು ಸಾನಿ ಕೃಷ್ಣ ಹೇಳಿದ್ದಾರೆ. ಸದ್ಯ ಬೈಕ್ ಚಾಲಕನ ಪರವಾನಗಿ ಮತ್ತು ಆತನ ನಡವಳಿಕೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ರ‍್ಯಾಪಿಡೋ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತ್ರಿಷಾ ಕೃಷ್ಣನ್ ಮದುವೆ ಮುರಿದುಬಿದ್ದಿದ್ದೇಕೆ? ವರುಣ್ ಮಣಿಯನ್ ಜೊತೆಗಿನ ಸಂಬಂಧಕ್ಕೆ ಏನಾಯಿತು? – Kannada News | Why Did Trisha Krishnan Call Off Her Engagement With Varun Manian?

ತಮಿಳು ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿರುತ್ತದೆ. ಪ್ರಸ್ತುತ ಅವರು ದಳಪತಿ ವಿಜಯ್ ಜೊತೆ ಸುದ್ದಿಯಲ್ಲಿದ್ದಾರೆ. ಆದರೆ ವರ್ಷಗಳ ಹಿಂದೆ ಅವರ ಮದುವೆ ನಿಶ್ಚಿತಾರ್ಥದ ಹಂತಕ್ಕೆ ತಲುಪಿ ನಿಂತುಹೋಗಿತ್ತು. ಪ್ರಸಿದ್ದ ಉದ್ಯಮಿ ವರುಣ್ ಮಣಿಯನ್ ಜೊತೆಗಿನ ಅವರ ಸಂಬಂಧ ಮುರಿದುಬಿದ್ದ ಘಟನೆ ಅಭಿಮಾನಿಗಳಲ್ಲಿ ಇಂದಿಗೂ ಕುತೂಹಲ ಮೂಡಿಸಿದೆ.

ಚೆನ್ನೈ ಮೂಲದ ಉದ್ಯಮಿ ವರುಣ್ ಮಣಿಯನ್ ಮತ್ತು ತ್ರಿಷಾ ನಡುವೆ ಪ್ರೀತಿ ಚಿಗುರಿತ್ತು. ರಿಯಲ್ ಎಸ್ಟೇಟ್ ಹಾಗೂ ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ವರುಣ್ ಸಕ್ರಿಯರಾಗಿದ್ದರು. ಇಬ್ಬರ ಗೆಳೆತನ ಶೀಘ್ರದಲ್ಲೇ ಪ್ರೇಮಕ್ಕೆ ತಿರುಗಿತ್ತು. 2014 ರ ಕೊನೆಯಲ್ಲಿ ಈ ವಿಷಯ ಮಾಧ್ಯಮಗಳಲ್ಲಿ ಸದ್ದು ಮಾಡತೊಡಗಿತು.

ಜನವರಿ 9, 2015 ರಂದು ತ್ರಿಷಾ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಸ್ವತಃ ಪ್ರಕಟಿಸಿದರು. ಜನವರಿ 23 ರಂದು ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ನಡೆಯಿತು. ಮದುವೆಯ ನಂತರವೂ ನಟನೆ ಮುಂದುವರಿಸುವುದಾಗಿ ತ್ರಿಷಾ ಸ್ಪಷ್ಟಪಡಿಸಿದ್ದರು. ಹೊಸ ಸಿನಿಮಾಗಳಿಗೆ ಸಹಿ ಹಾಕಲು ಅವರು ಉತ್ಸುಕರಾಗಿದ್ದರು.

ಆದರೆ ಈ ಬಂಧ ಹೆಚ್ಚು ಕಾಲ ಉಳಿಯಲಿಲ್ಲ. ನಿಶ್ಚಿತಾರ್ಥವಾದ ಕೆಲವೇ ತಿಂಗಳುಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದವು. ಮದುವೆ ರದ್ದಾಗುವ ಬಗ್ಗೆ ಅನೇಕ ವದಂತಿಗಳು ಹರಡಿದವು.

ಇದನ್ನೂ ಓದಿ: ಕುಟುಂಬದ ಜೊತೆ ‘ಜನ ನಾಯಗನ್’ ಸಿನಿಮಾ ನೋಡಿ ಎಂಜಾಯ್ ಮಾಡಿದ ತ್ರಿಷಾ ಕೃಷ್ಣನ್

ಮೇ 2015 ರಲ್ಲಿ ತ್ರಿಷಾ ತಮ್ಮ ಬ್ರೇಕಪ್ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದರು. ಸೋಶಿಯಲ್ ಮೀಡಿಯಾದಲ್ಲಿ ತಾವು ಸಿಂಗಲ್ ಆಗಿ ಸಂತೋಷವಾಗಿದ್ದೇನೆ ಎಂದು ಬರೆದುಕೊಂಡರು. ಈ ಮೂಲಕ ವರುಣ್ ಜೊತೆಗಿನ ಸಂಬಂಧಕ್ಕೆ ಸಂಪೂರ್ಣ ತೆರೆಬಿದ್ದಿತು. ಈಗ ಅವರು ವಿಜಯ್ ಜೊತೆ ರಿಲೇಶನ್​ಶಿಪ್​ನಲ್ಲಿ ಇದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:02 am, Fri, 14 August 26

Source link

ರಾಕಿಂಗ್ ಸ್ಟಾರ್ ಯಶ್ ‘ಆಪ್​ ಕಿ ಅದಾಲತ್’ ಪ್ರೋಮೋ ರಿಲೀಸ್; ಶಾರುಖ್ ಬಗ್ಗೆ ನೇರ ಮಾತು – Kannada News | Yash On Aap Ki Adalat: KGF vs Shah Rukh Khan Zero Clash, Fans Selfies, and Toxic Movie Updates

ರಾಕಿಂಗ್ ಸ್ಟಾರ್ ಯಶ್ (Yash) ‘ಆಪ್​ ಕಿ ಅದಾಲತ್ ಶೋನಲ್ಲಿ ಭಾಗಿ ಆಗಿದ್ದಾರೆ. ರಜತ್ ಶರ್ಮ ಅವರು ನಡೆಸಿಕೊಡೋ ಈ ಶೋಗೆ ಭಾರೀ ಬೇಡಿಕೆ ಇದೆ. ಈ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯದವರೇ ಆಗಮಿಸಿದರೂ ಕೆಲವೊಮ್ಮೆ ಸಿನಿಮಾ ರಂಗದವರು ಕೂಡ ಆಗಮಿಸಿದ್ದು ಇದೆ. ಈಗ ಯಶ್ ಅವರನ್ನು ಇಲ್ಲಿಗೆ ಆಹ್ವಾನಿಸಲಾಗಿದೆ. ಕರ್ನಾಟಕದಿಂದ ವೇದಿಕೆ ಏರಿದ ಮೊದಲಿಗರು ಯಶ್. ಹಲವು ವಿಷಯಗಳನ್ನು ಅವರು ಈ ವೇದಿಕೆ ಮೇಲೆ ಚರ್ಚಿಸಿದ್ದಾರೆ. ಇದರ ಪ್ರೋಮೋ ಗಮನ ಸೆಳೆದಿದೆ.

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಆಗಸ್ಟ್ 26ರಂದು ಸಿನಿಮಾ ತೆರೆಮೇಲೆ ಬರುತ್ತಿದೆ. ಈ ಚಿತ್ರದ ಪ್ರಚಾರದ ಭಾಗವಾಗಿ ಯಶ್ ಅವರು ಆಪ್​ ಕಿ ಅದಾಲತ್ ಶೋಗೆ ತೆರಳಿದ್ದಾರೆ. ಅಲ್ಲಿ ಅವರು ಶಾರುಖ್ ಖಾನ್ ಜೊತೆಗಿನ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. 2018ರಲ್ಲಿ ಯಶ್ ನಟನೆಯ ‘ಕೆಜಿಎಫ್’ ಹಾಗೂ ಶಾರುಖ್ ಖಾನ್ ನಟನೆಯ ‘ಜೀರೋ’ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿದ್ದವು. ‘ನಾನು ಅಂದು ಶಾರುಖ್ ಖಾನ್ ಅವರಿಗೆ ಅಭಿಮಾನಿಯಾಗಿದ್ದೆ, ಈಗಲೂ ಅಭಿಮಾನಿ. ಅಂದು ಎರಡು ಸಿನಿಮಾಗಳು ಒಟ್ಟಿಗೆ ಬಂದವು. ಅವರದ್ದು ದೊಡ್ಡ ಸಿನಿಮಾ ಆಗಿತ್ತು, ನಮ್ಮದು ಚಿಕ್ಕ ಸಿನಿಮಾ ಆಗಿತ್ತು’ ಎಂದ ಯಶ್ ಹೇಳಿದ್ದಾರೆ. ಆಗ ರಜತ್ ಶರ್ಮ ಅವರು ‘ಕೆಜಿಎಫ್’ ಸಿನಿಮಾ ಹೆಚ್ಚಿನ ಗಳಿಕೆ ಮಾಡಿತ್ತು ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ. ‘ನನ್ನ ಸೀನಿಯರ್​ಗಿಂತ ನಾನು ಯಾವಾಗ ದೊಡ್ಡವನು ಎನಿಸುತ್ತದೆಯೋ ಅಂದು ನನ್ನ ಅಂಗಡಿ ಬಂದ್’ ಎಂದಿದ್ದಾರೆ.

ಅಭಿಮಾನಿಗಳಿಗೆ ಸೆಲ್ಫಿ ಕೊಡೋ ವಿಷಯದ ಬಗ್ಗೆ ಮಾತನಾಡಿದ್ದ ಯಶ್, ‘ಸೆಲ್ಫಿ ತೆಗೆದುಕೊಂಡರೆ ಅಥವಾ ಫೋಟೋ ತೆಗೆದುಕೊಂಡರೆ ಅದು ಅಭಿಮಾನಿಗಳಿಗೆ ಜೀವನಪೂರ್ತಿ ಇರುವ ನೆನಪಾಗುತ್ತದೆ. ಹೀಗಾಗಿ, ನನಗೆ ಸಮಯ ಇದ್ದರೆ ನಾನು ಸೆಲ್ಫಿ ಕೊಟ್ಟೇ ಕೊಡುತ್ತೇನೆ’ ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ: ಮದುವೆಗೆ ಬರುವಂತೆ ಯಶ್-ರಾಧಿಕಾ ದಂಪತಿಗೆ ಆಹ್ವಾನ ನೀಡಿದ ಚಿಕ್ಕಣ್ಣ

‘ಆಪ್​ ಕಿ ಅದಾಲತ್’ ಶೋ ಇಂಡಿಯಾ ಟಿವಿನಲ್ಲಿ ಶನಿವಾರ ರಾತ್ರಿ 10 ಗಂಟೆಗೆ ಪ್ರಸಾರ ಕಾಣಲಿದೆ. ಈ ಶೋನಲ್ಲಿ ಯಶ್ ಅವರು ಆಡಿದ ಮಾತುಗಳು ಗಮನ ಸೆಳೆದಿವೆ. ಅವರು ಮುಂಬರುವ ರಾಮಾಯಣ ಸಿನಿಮಾ ಬಗ್ಗೆಯೂ ಮಾತನಾಡುವ ಸಾಧ್ಯತೆ ಇದೆ. ಸದ್ಯ ಅವರ ಗಮನ ಸಂಪೂರ್ಣವಾಗಿ ‘ಟಾಕ್ಸಿಕ್’ ಚಿತ್ರದ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:43 am, Fri, 14 August 26

Source link

Exit mobile version